ಒಟ್ಟು 4449 ಕಡೆಗಳಲ್ಲಿ , 130 ದಾಸರು , 3245 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೋಯನ್ನ ರಕ್ಷಿಸೋ ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು ಘೋರದೈತ್ಯನ ಕೊಂದು ಇನ್ನು ಚಾರು ಚರಿತ ವಿಸ್ತಾರ ಶೃತಿಗಳನು ವಾರಿಜಾಸನಗಿತ್ತ ವರದ ಜಗನ್ನಾಥ 1 ವರಕೂರ್ಮನಾಗಿ ಮಂದರಗಿರಿ ಪೊತ್ತು ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ ಕರುಣಿಸೋಯಂದರೆ ಕಠಿಣತ್ವ ವಹಿಸುವರೇ ಪರಮ ಪುರುಷ ನೀನು ಭಜಕರ ಕಾಮಧೇನು 2 ಧರೆಯ ಕದ್ದು ಒಯ್ದವನ ಕೋಪದಿ ಘನತರ ಕೋರೆಯಲಿ ಸೆಳದೆ ದನುಜಹರ ವರಾಹನಾದ ಶ್ರೀ ವತ್ಸಲಾಂಛನ ದೇವ ಶರಣಜನ ಮಂದಾರ ಶರನಿಧಿ ಗಂಭೀರ 3 ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ ತರುಳನ ತಂದೆಯ ತಾಮಸದಿ ಪರಿಪರಿಹಿಂಸೆಯ ಪಡಿಸುತಿರಲು ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4 ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು ಅಳೆದು ಮೂರು ಪಾದದೊಳಗೆ ಮಾಡಿ ತುಳಿದವನ ಪಾತಾಳಕಿಳಿಯಲು ವಾಮನ ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5 ಪರಶುರಾಮ ಬಾಹು ಬಲದಿ ಸಕಲ ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ ಧುರದಿಂದ ಭೂಮಿ ಭೂಸುರರಿಗೇ ಧಾರೆಯ ನೆರೆದ ಶ್ರೀಮದನಂತ ನಿರತದಿ ಭಗವಂತ 6 ಅನಿಮಿಷರೊಡೆಯ ಶರಣು ಶರಣೆನುತ ರಾವಣನನು ಜನು ವಿಭೀಷಣನು ಬರಲು ಘನದಿ ಪಂಕ್ತಿ ಕಂಧರನ ಜಯಿಸಿ ಲಂ- ಇನಕುಲ ಪಾವನ 7 ಬಲದು:ಶಾಸನ ಸೀರಿಸೆಳಿಯೇ ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ ಮಾನವ ರಕ್ಷಿಸೆಂದು ಸ್ತುತಿಸಲು ಪೊರೆದೆ ಹಲಧರಾನುಜ ಮುದದಿ 8 ಅಂಗಜ ಪಿತ ತ್ರಿಪುರಾಂಗನೆಯರ ವ್ರತ ಭಂಗಮಾಡಿದೆ ಹಿಂಗದಲೇ ಮಂಗಳಮಹಿಮ ಕೃಪಾಂಗ ಗಂಗೆಯನು ಪಾದ 9 ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು ಖಂಡೆಯ ಪಿಡಿದು ಝಳಪಿಸುತ ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10 ಪಾವನಚರಿತ ಕೃಪಾವನ ರಾಶಿ ಶ್ರೀ ದೇವಕೀಸುತ `ಹೆನ್ನೆಪುರೀಶ’ ದೀನ ದೇವೋತ್ತಮ ದೀನ ಬಾಂಧವ ವೃಂದಾವನ ನಿಲಯಾನಂದ ಸುಂದರಕಾಯಾ 11
--------------
ಹೆನ್ನೆರಂಗದಾಸರು
ರಕ್ಷೆಸೆನ್ನ ಈ ಕ್ಷಣದಲುಪೇಕ್ಷೆ ಮಾಡದೆ ಪಕ್ಷಿವಾಹನ ಪರಮಪುರುಷ ಲಕ್ಷ್ಮಿನಾಯಕ ಪ ಅಂದಂದಿಂದ ಕೈಯಹಿಡಿದು ಚಂದದಿಂದ ಎನ್ನಬಿಡದೆ ಇಂದು ನಿನ್ನ ದ್ವಂದ್ವ ಚರಣಕ್ಹೊಂದಿದ ದಾಸನು ಎಂದು 1 ಕಷ್ಟಿ ಇವನು ಎಂದು ಕರುಣ ದೃಷ್ಟಿಯನೆ ತೋರುಬೇಗ ಸೃಷ್ಟಿಗೊಡೆಯ ನಾದ ಶ್ರೀ ಕೃಷ್ಣಮೂರುತಿ ನೀನೆ ಗತಿ 2 ಇಂದು ಮಾಡಿದಂಥದೆಂಥಾ ದೋಷವೊ ಹರಿಯೆ ಇಂದು ಎನ್ನ ಬಾಧಿಸುವುದು ಏನು ಕಾರಣವೊ ಕೃಷ್ಣಾ 3 ಸಜ್ಜನರ ರಕ್ಷಕ ದೇವ ಸರ್ವಜನರ ಪೋಷಕ ನೀನೆ ದುರ್ಜನರ ಖಂಡಿಸಿದ ಮೂಜ್ಜಗ ಪಾಲಕ ನೀನೇ ಎಂದೂ 4 ಪುಂಡರೀಕವರದ ಭೂಮಂಡಲಾಧಿಪತಿಯೆನಿಸಿ ಮಹಿಮವುಳ್ಳದೇವ 5 ಭಾವಜನಯ್ಯ ಭವ ಸ್ತೋತ್ರ ಪ್ರೀಯಾ ಪೊರೆಯದಲಿರುವದು ದೇವಾ 6 ಗಂಗೆ ಜನಕ ಮಂಗಳಾಂಗ ಕರುಣಾಸಾಗರ ಘನಗಂಭೀರಾ ರಂಗ `ಹೆನ್ನವಿಠಲ' ಕೃಪಾಂಗ ದೇವೋತ್ತುಂಗ ಹರಿಯೆ7
--------------
ಹೆನ್ನೆರಂಗದಾಸರು
ರಂಗ ಕರುಣಿಸೊ ಚರಣಾ ಶ್ರೀ ಪ ರಂಗಗರುಡತುರಂಗಸಿರಿಮನ ತುಂಗಭವಗಜ ಸಿಂಗರಿಪುಕುಲ ಭಂಗ ಮಹಿಮತರಂಗ ದೇವೋತ್ತುಂಗನಿಜನಿಸ್ಸಂಗ ನರಹರಿ ಅ.ಪ ದೇವಸಕಲ ಸೃಷ್ಠಿಯಗೈವ ಸುಸ್ವಭಾವ ದೇವ ತ್ರಿಭುವನ ಜೀವಭಕ್ತರ ಕಾವಶೃತಿತತಿ ಭಾವ ದೋಷಾಭಾವನಿಜಸುಖ ವೀವ ಬ್ರಾಹ್ಮಿಯ ಮಾವ ತರಿತರಿ ನೋವ ಪರಿಮರ 1 ಛೇಧಖಳಜನ ಖೇದ ಸಜ್ಜನ ಮೋದನಿರ್ಗತ ಭೇದ ಸಿರಿನುತ ಪಾದವ್ಯಾಹೃತಿ ನಾದಸಿರಿಜಗ ಭೇದ ಸುಖಮಯ ಸಾಧು ಶಿರಶ್ರೀ2 ಶ್ರೀಶ ನಿಜದಾಸ ಜನರ ಮನ ಉಲ್ಲಾಸಾ ಶ್ರೀಶ ತರಿತರಿ ಪಾಶ ಕೊಡುಕೊಡು ಲೇಸ ನಿಖಿಳರ ಭಾಸ ಸಿರಿಮನೆ ವಾಸ ವಿಶ್ವನು ಪೋಷ ಬ್ರಹ್ಮಸುಕೋಶ ನಿರ್ಗತ ನಾಶ 3 ಸತ್ಯ ನಿತ್ಯಾನಿತ್ಯ ಜಗರೂಪ ಸ್ವತಂತ್ರ ಕಳತ್ರ ಪರಮಪ ವಿತ್ರ ಚಿನ್ಮಯ ಭೃತ್ಯವತ್ಸಲ ನಿತ್ಯನೂತನ ಸತ್ಯವತಿಸುತ ಚಿತ್ತಮಂದಿರ 4 ವಿಶ್ವತೈಜಸ ಪ್ರಾಜ್ಞತುರಿಯ ಶರಣು ಅಶ್ವತ್ಥ ವಿಶ್ವವಿಶ್ವಗ ವಿಷ್ಣುಜಗ ಬಲ ವಿಶ್ವಪ್ರೇರಕ ಜಿಷ್ಣುಸಾರಥಿ ಕೃಷ್ಣವರಸ್ಥಿತ “ಕೃಷ್ಣವಿಠಲ” ಶಿಷ್ಟದೋಷಸಹಿಷ್ಣುವಂದಿಪೆ 5
--------------
ಕೃಷ್ಣವಿಠಲದಾಸರು
ರಂಗ ಕೊಳಲನೂದುತ ಬಂದಯಶೋದೆಯ ಕಂದ ಪ ಕೊಳಲ ಧ್ವನಿಗೆ ವಿರಹವು ನಾರಿಯರಿಗೆಕಳಕಳÀವಾಗಲು ಕಳಕಳಿಸುತ ಅ.ಪ. ಶೃಂಗಾರ ಕೊಳಲ ಗಾಯನ ಮಾಡೆಸ್ತ್ರೀಯರು ನೋಡೆ ರಂಗನ ಪಾದದಲಿ ಮನ ಹೂಡೆಭೃಂಗಾಮೃತ ತೈಲದಿಅಂಗನೆಯರು ಝಳಕವ ಮಾಡೆದೇವರ್ಕಳು ನೋಡೆತುಂಗವಿಹಂಗ ಭುಜಂಗ ನವಿಲು ಸಾ -ರಂಗ ಗಿಣಿಯು ಮಾತಂಗ ಮರಿಯು ಕು-ರಂಗ ಮಧ್ಯೆ ಚರಣಂಗಳೆಡೆಗೆ ವೇ-ದಂಗಳೆರಗೆ ಕಾಮಂಗಳಲುಗೆ ನೇ-ತ್ರಂಗಳಿಗತಿ ಚಿತ್ರಂಗಳಾಗೆ ಆರಂಗನೂದ್ವ ಸಾರಂಗ ಕೇಳಿ ಋಷಿಪುಂಗಸಹಿತ ತಾವುಗಳು ಬರೆ ನರ-ಸಿಂಗನೂದಿದ ಜಗಂಗಳ ಮೋಹಿಸಿ1 ಬಂಗಾರ ಬಟ್ಟಲೊಳಗೆ ಅಂದುಕ್ಷೀರವ ತಂದು ರಂಗಗರ್ಪಿಸುವೆವು ನಾವೆಂದುಹರುಷದೊಳಂದು ಅಂಗನೆಯರು ಮೈಮರೆತು ನಿಂದುಒಲಿಯಬೇಕೆಂದು ಮಂಗಳ ಮಹಿಮನು ನೀನೆಂದುಅತಿಭಕುತಿಯೊಳಂದುತುಂಗ ವಿಕ್ರಮನ ಪದಂಗಳಿಗೆರಗಲುರಂಗ ನೆಗಹಿ ಕರಂಗಳ್ಹಿಡಿಯ ಮೋ-ಹಂಗಳಿಂದ ವಿರಹಗಳ್ಹೆಚ್ಚಿ ರವಿಕೆಂಗಳುಡೆಯ ಕುಚಂಗಳು ಬಿಟ್ಟಾ-ಲಿಂಗಿಸುತಿರೆ ಶ್ರೀ ಮಂಗಳಾಂಗಗೆ ಪು-ಷ್ಪಂಗಳಿಂದ ವರುಷಂಗಳು ಮೇಲ್ ಸುರ-ರಂಗಳು ಸುರಿಯೆ ಉತ್ತುಂಗ ಮಹಿಮ ಹರುಷಂಗಳ ಬೀರುತ ಅಂಗನೆಯರಿಗೆ 2 ಮಂದಿರ ಮಾನಿನಿಯರು ಬಿಟ್ಟುಮನದಲಿ ಕಂಗೆಟ್ಟುಮಂದರೋದ್ಧರನಲ್ಲೆ ಮನವಿಟ್ಟುಕರೆಕರೆಯ ಬಿಟ್ಟುಚಂದದಿ ಕರ್ಪೂರ ವೀಳ್ಯವನಿಟ್ಟುಸಡಗರವ ತೊಟ್ಟುಒಂದಾಗಿ ಚೆದರುತ ತೋಷವ ತೊಟ್ಟುತ್ವರೆ ಬರುವರು ಅಷ್ಟುಅಂದದಿಂದಲಾನಂದವೇರಿ ಮು -ಕುಂದನಂಘ್ರಿ ಮುದದಿಂದ ಸ್ಮರಿಸಿ ಬರು-ವಂದ ನೋಡಿ ಗೋವಿಂದ ಕೊಳಲ ಬಹುಅಂದದೊಳಿಡೆ ಈ ಇಂದುವದನೆಯರುಚಂದ್ರನುದಯವಾದಂತೆ ಆಯ್ತು ಮನಗಂಧ ಕಸ್ತೂರಿ ತಂದು ಆಗ ಹರಿಕಂದರದೊಳಗಿಡೆ ರಂಗವಿಠಲ ದಯದಿಂದ ನೋಡ್ದ ಪುರಂಧ್ರಿಯರನ್ನು3
--------------
ಶ್ರೀಪಾದರಾಜರು
ರಂಗ ಬಾರೈಯ್ಯ ದೇವೋತ್ತುಂಗ ದಯಾಂತರಂಗ | ಅಂಗಜನಯ್ಯ ನರಶಿಂಗಾ ಸಾರಸಾಪಾಂಗ || ಮಂಗಳ ಮಹಿಮಾ ವಿಹಂಗ ಘೋರ ಭವಭಂಗರಹಿತ ರಣರಂಗ ವಿಜಯ || ಸನ್ನುತ ಶೃಂಗಾರಾಂಗ ರಮಾಂಗನಾಸಂಗ ಪ ಶತಕೋಟಿ ಭಾಸ್ಕರ ಯುತತೇಜ ಮರುತಾಂತರ್ಗತ | ಹರಿಮೃದು ಭಾಷಣ | ಕೌಸ್ತು ಭಾಭರಣ | ಜಿತದಿತಿಸುತಬಾಲ | ಶ್ರಿತಭಕ್ತ ಮಂದಾರ | ಪತಿತ ಪಾವನ ಶ್ರೀರಾಮ ಪಟ್ಟಾಭಿರಾಮ | ಅತುಲಿತ ಚರಿತ ಕಾಮಿತ ಫಲದಾಯಕ | ಶತ ಧೃತಿ ಜನಕಾಚ್ಯುತ ಸರ್ವೋತ್ತಮ | ಸತತವು ನೀನೇ ಗತಿಯೆಂದೆನುತಲಿ | ಹಿತದಿ ನಾನು ನಿಮ್ಮ ಸ್ತುತಿಸುತಲಿರುವೆನು 1 ನಂದನಂದನ ವೇಣುನಾದ ವಿನೋದ ಜಗದ್ವಂದ್ಯ ಶ್ರೀವತ್ಸಲಾಂಛನ ವಾಸುಕಿಶಯನ | ಮಂದಹಾಸ ಮುಚುಕುಂದವರದ ರಾಕೇಂದುವದನ | ಗೋವಿಂದ ಇಂದಿರಾನಂದ ಸಿಂಧು ಗಂಭೀರಾ | ಮುಕುಂದ ಧರಣೀಧರ ಕುಂದರದನ ಕಾಳಿಂದಿರಮಣ ಗಜೇಂದ್ರನ ಸಲಹಿದ ಛೆಂದದೆನ್ನ ಮೊರೆಯಿಂದಿಗೆ ಲಾಲಿಸೊ ಪರಮಾತ್ಮ ಸರಸಿಚೋದರ ಸಕಲಾಣುರೇಣು ಪರಿಪೂರ್ಣ 2 ನಿರುಪಮಧೀರ ಶರಣಾಗತ ರಕ್ಷಣ ಮಧುಸೂದನ ಸುರವರ ಪೂಜಿತ ಚರಣಾಂಭೋರುಹ ಕೃಪಾಕಾರ ಹರುಷದಲಿ 3
--------------
ಹೆನ್ನೆರಂಗದಾಸರು
ರಂಗ ಬಾರೊ ನರಸಿಂಗ ಬಾರೊ ಪ. ಸಾಸಿರ ಮೂರುತಿ ವಾಸವವಂದ್ಯನೆಸಾಸಿರನಾಮದೊಡೆಯನೆಸಾಸಿರನಾಮದೊಡೆಯನೆ ನರಹರಿಕೇಶವ ನಮ್ಮ ಮನೆದೈವ 1 ವಾರಣವಂದ್ಯನೆ ಕಾರುಣ್ಯರೂಪನೆಪುರಾಣಗಳಲ್ಲಿ ಪೊಗಳುವಪುರಾಣಗಳಲ್ಲಿ ಪೊಗಳುವ ನರಹರಿನಾರಾಯಣ ನಮ್ಮ ಮನೆದೈವ2 ಯಾದವಕುಲದಲ್ಲಿ ಸಾಧುಗಳರಸನೆಭೇದಿಸಿ ದನುಜರ ಗೆಲಿದನೆಭೇದಿಸಿ ದನುಜರ ಗೆಲಿದನೆ ನರಹರಿಮಾಧವ ನಮ್ಮ ಮನೆದೈವ 3 ದೇವೆಂದ್ರ ಮಳೆಗರೆಯೆ ಗೋವರ್ಧನ ಗಿರಿಯೆತ್ತಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ ಕಾಯಿದನೆಗೋವಿಂದ ನಮ್ಮ ಮನೆದೈವ 4 ಸೃಷ್ಟಿಗೆ ಕರ್ತನೆ ದುಷ್ಟಕಂಸನ ಗೆಲಿದುಶಿಷ್ಟಪರಿಪಾಲನೆನಿಸಿದಶಿಷ್ಟಪರಿಪಾಲನೆನಿಸಿದ ನರಹರಿವಿಷ್ಣುವೆ ನಮ್ಮ ಮನೆದೈವ5 ಮಧುವೆಂಬೊ ದೈತ್ಯನ ಮುದದಿಂದ ಗೆಲಿದನೆವಿದುರನ ಮನೆಯಲಿ ನಲಿದುಂಡವಿದುರನ ಮನೆಯಲಿ ನಲಿದುಂಡ ನರಹರಿಮಧುಸೂದನ ನಮ್ಮ ಮನೆದೈವ 6 ಚಕ್ರವ ಪಿಡಿದನೆ ಭೂಚಕ್ರವ ಗೆಲಿದನೆಅಕ್ರೂರನೊಡನೆ ಮಧುರೆಗೆಅಕ್ರೂರನೊಡನೆ ಮಧುರೆಗೆ ಪೋದ ತ್ರಿ-ವಿಕ್ರಮ ನಮ್ಮ ಮನೆದೈವ7 ಸಾಮವನೋದುತ್ತ ದಾನವ ಬೇಡುತ್ತನಾಮದ ಮಹಿಮೆ ಪೊಗಳುತ್ತನಾಮದ ಮಹಿಮೆ ಪೊಗಳುತ್ತ ನರಹರಿವಾಮನ ನಮ್ಮ ಮನೆದೈವ8 ಶ್ರೀಧರ ಎಸಿಸಿದ ಶ್ರೀವತ್ಸ ಲಾಂಛನಶ್ರೀಧರ ಗೋಪೀತನಯನೆ ಶ್ರೀಧರ ಗೋಪೀತನಯನೆ ನರಹರಿಶ್ರೀಧರ ನಮ್ಮ ಮನೆದೈವ 9 ಋಷಿಜನ ವಂದ್ಯನೆ ಬಿಸಜನಾಭನೆ ದೇವಋಷಿಜನರಿಗೆಲ್ಲ ಅಭಯವಋಷಿಜನರಿಗೆಲ್ಲ ಅಭಯವ ಕೊಡುವೋನೆಹೃಷಿಕೇಶನೆ ನಮ್ಮ ಮನೆದೈವ10 ಪದುಮಸಂಭವಪಿತ ಪದುಮದಾಮೋದರ[ಪದುಮ]ದಿಂದಭಯವ ಕೊಡುವೋನೆ[ಪದುಮ]ದಿಂದಭಯವ ಕೊಡುವೋನೆ ನರಹರಿಪದುಮನಾಭನೆ ನಮ್ಮ ಮನೆದೈವ 11 ನಾಮದ ಮಹಿಮೆಯ ಪ್ರೇಮದಿ ಪೊಗಳಲುಕಾಮಿತಾರ್ಥಗಳ ಕೊಡುವೋನೆಕಾಮಿತಾರ್ಥಗಳ ಕೊಡುವೋನೆ ನರಹರಿದಾಮೋದರ ನಮ್ಮ ಮನೆದೈವ 12 ಸಂಕಟಗಳ ತರಿವೋನೆ ಪಂಕಜನಾಭನೆಶಂಕೆಯಿಲ್ಲದೆ ಅಸುರರಶಂಕೆಯಿಲ್ಲದೆ ಅಸುರರ ಸಂಹರಿಸಿದಸಂಕರ್ಷಣ ನಮ್ಮ ಮನೆದೈವ 13 ವಸುದೇವತನಯನೆ ಶಿಶುಪಾಲನ ಗೆಲಿದನೆವಶವ ಮಾಡಿದೆಯೊ ತ್ರಿಪುರರವಶವ ಮಾಡಿದೆಯೊ ತ್ರಿಪುರರ ನರಹರಿವಾಸುದೇವ ನಮ್ಮ ಮನೆದೈವ14 ಶುದ್ಧಸ್ವರೂಪನೆ ಶುದ್ಧ ಭಕ್ತರನು ಸಲಹಯ್ಯಹದ್ದುವಾಹನನಾದ ದೇವನೆಹದ್ದುವಾಹನನಾದ ದೇವನೆ ನರಹರಿಪ್ರದ್ಯುಮ್ನ ನಮ್ಮ ಮನೆದೈವ 15 ವನಜಲೋಚನ ಹರಿ ವಿನಯ ಉಳ್ಳವನೆಧ್ವನಿಕೇಳಿ ಬಂದ ಕುಬುಜೆಯ ಧ್ವನಿಕೇಳಿ ಬಂದ ಕುಬುಜೆಯ ನರಹರಿಅನಿರುದ್ಧ ನಮ್ಮ ಮನೆದೈವ 16 ಪಾರಿಜಾತದ ಹೂವ ನಾರಿಗೆ ಇತ್ತನೆವೀರ ದಾನವರ ಗೆಲಿದನೆವೀರ ದಾನವರ ಗೆಲಿದನೆ ನರಹರಿಪುರುಷೋತ್ತಮ ನಮ್ಮ ಮನೆದೈವ 17 ಅಕ್ಷಯಪದವೀವ ಪಕ್ಷಿವಾಹನಸ್ವಾಮಿಕುಕ್ಷಿಯೊಳೀರೇಳು ಭುವನವಕುಕ್ಷಿಯೊಳೀರೇಳು [ಭುವನವನಾಳಿದ] ನರಹರಿ ಅ-ಧೋಕ್ಷಜ ನಮ್ಮ ಮನೆದೈವ18 ನರಕಾಸುರನ ಕೊಂದು ಹಿರಣ್ಯನ ಮರ್ದಿಸಿಕರುಳ ಬಗೆದು ವನಮಾಲೆ ಹಾಕಿಕರುಳ ಬಗೆದು ವನಮಾಲೆ ಹಾಕಿದ ಹರಿನರಸಿಂಹನೆ ನಮ್ಮ ಮನೆದೈವ19 ಅಚ್ಚ್ಚುತಾನಂತನೆ ಸಚ್ಚಿದಾನಂದನೆ[ಮಚ್ಚಾವತಾರದಿ] ನಲಿದನೆ[ಮಚ್ಚಾವತಾರದಿ] ನಲಿದನೆ ನರಹರಿಅಚ್ಚುತ ನಮ್ಮ ಮನೆದೈವ 20 ಜಾನಕಿರಮಣನೆ ದಾನವಾಂತಕನೆದೀನರಕ್ಷಕನೆ ಸಲಹಯ್ಯದೀನರಕ್ಷಕನೆ ಸಲಹಯ್ಯ ನರಹರಿಜನಾರ್ದನ ನಮ್ಮ ಮನೆದೈವ 21 ಅಪರಿಮಿತಮಹಿಮನೆ ವಿಪರೀತ ಚರಿತನೆ[ಗುಪಿತವೇಷಗಳ] ತಾಳಿದನೆ[ಗುಪಿತವೇಷಗಳ] ತಾಳಿದ ನರಹರಿಉಪೇಂದ್ರ ನಮ್ಮ ಮನೆದೈವ 22 ಹರನ ಭಸ್ಮಾಸುರನು ಮರಳಿ ಬೆನ್ನ್ಹತ್ತಲುತರುಣಿರೂಪವನು ತಾಳಿದÀನೆತರುಣಿರೂಪವನು ತಾಳಿದ ನರಹರಿ ಶ್ರೀ-ಹರಿಯೆ ನಮ್ಮ ಮನೆದೈವ 23 ಕೃಷ್ಣಾವತಾರದಲಿ ದುಷ್ಟರ ಗೆಲಿದನೆವೃಷ್ಣಿಯರ [ಕುಲತಿಲಕನೆ]ವೃಷ್ಣಿಯರ [ಕುಲತಿಲಕನೆ] ನರಹರಿ ಶ್ರೀ-ಕೃಷ್ಣನೆ ನಮ್ಮ ಮನೆದೈವ 24 ಇಪ್ಪತ್ತು ನಾಲ್ಕು ನಾಮಂಗಳ ಪಾಡುವೆನುಅಪ್ಪ ಕೇಶವನ ಚರಿತೆಯನುಅಪ್ಪ ಕೇಶವನ ಚರಿತೆಯನು ಪಾಡಲುಒಪ್ಪಿಸಿಕೊಳ್ಳುವ ಹಯವದನ25
--------------
ವಾದಿರಾಜ
ರಂಗ ಮಂಗಳಂ ಸದಾ ಬೃಂದಾವನ ವಿಹಾರಿ ಪ ಕುಂದ ದಂದದಂತಿಹ ದಂತ ಭಾಸಿತ 1 ತುಳಸಿ ರೂಪದ ಅಲಕಭಾಸಿತಾಮಲಕ ಸನ್ನಿಭ ತಿಲಕ ಭಾಸುರ 2 ಕುಂಡಲೋಜ್ವಲಾ ಖಂಡಸೋದರ ಜಂಡರಾಕ್ಷಸ ಖಂಡನಶೀಲ 3 ಧೇನುನಾಮಕ ನಗರನಾಯಕ ಮಾನಿನೀ ಪ್ರಿಯ ಶ್ರೀನರಹರೆ 4
--------------
ಬೇಟೆರಾಯ ದೀಕ್ಷಿತರು
ರಂಗ ರಂಗನಾಥ ಬೇಗ ಬಾರೋ ಪ ತುಂಗಮಹಿಮ ಬಂದು ಭವಭಂಗ ಮಾಡೋ ಅ.ಪ ಇಂದು ಬಂದೆ ಕುಂದುಎಲ್ಲಹಿಂದುದೂಡೋ ಮುಂದುಮಾಡಿ ಛಂದಭಕ್ತಿ ಕಂದನೆಂದು ಕೈಯ ಪಿಡಿಯೋ 1 ಬಂಧುವಲ್ಲೆ ನೀನೇ ಜಗಕೆ ನಂದಶಯಸ ಬಂಧಮೋಚಕಾ ಕಾವೆ ಪೇಳುಗೋವಿಂದಾ 2 ಬಿಂಬನೀನು ಹೌದು ಪ್ರತಿಬಿಂಬ ನಾನು ನನ್ನ ವ್ಯಾಪಾರ ಅಂಬೋದೇಕೋ ದೋಷಿಯೆಂತೆನ್ನಾ 3 ಹಂಬಲವ ಬಿಟ್ಟುಸಕಲ ನಂಬಿದೆನೋ ಸ್ವಾಮಿಯೆಂತೆಂದು ತುಂಬಿಶುಧ್ದ ಜ್ಞಾನ ಭಕುತಿ ಅಂಬುಜಾಕ್ಷಯಿಂಬು ನೀಡೈಯ್ಯಾ4 ಭುಕ್ತಿ ನೀನೇ ಪ್ರಾಣ ನೀನೆಸರ್ವಸ್ವ ಏನು ಇನ್ನು ಮಾಡಲಾಪೆ ನೀನೆವಲಿದು ಕಾಯಬೇಕೈಯ್ಯ5 ವಾಸುದೇವ ಪೂರ್ಣ ಸುದ್ಗುಣಾ ತೋಷಕಾಯ ಶ್ರೀಶನಿನ್ನ ದಾಸನೆಂದು ಒಪ್ಪಿಕೊಳ್ಳಯ್ಯ 6 ಏಕಾನೇಕರೂಪ ಸಕಲ ಲೋಕ ಸೃಜಿಸಿ ಅಳಿವೆ ಅನೀಕಾ ಬೇಕು ಎನಿಪೆ ಭಕ್ತರಲ್ಲಿ ಸಾಕಬೇಕು ಶ್ರೀಗೆ ನಾಯಕ 7 ಮೋದ ಪೂರ್ಣ ಬಾದರಾಯಣಾ ಆದಿಮಧ್ಯ ಅಂತ್ಯದೂರ ಸಾಧುಪ್ರಾಪ್ಯನೇಮ ವರ್ಜಿತಾ 8 ಶರಣು ಶರಣು ಮಧ್ವಸದನ ಶರಣು ಶರಣು ಬೃಹತಿಪ್ರತಿಪಾದ್ಯ ಶರಣು ಶರಣು “ಕೃಷ್ಣವಿಠಲ” ಶರಣು ರಂಗ ಕರುಣಾ ಸಾಗರ9
--------------
ಕೃಷ್ಣವಿಠಲದಾಸರು
ರಂಗಧಾಮ ಭುಜಂಗ ಶಯನ ಮಂಗಳಾತ್ಮಕನೆ ಶ್ರೀಶನೆ ಪ ಗಂಗಾಜನಕ ಉತ್ತುಂಗ ಮಹಿಮನೆ ಸಂಗರಹಿತನೆ ಭಂಗಹರಿಪನೆ ಅ.ಪ ಶ್ರೀಶ ನಿನ್ನನು ಪ್ರಾರ್ಥಿಪರಘ ಶೋಧಿಸೆನುತ ಶ್ರೀ ಸಮೇತರಾಗಿ ಭಕ್ತರ ಪೋಷಿಸೆನ್ನುತ ವಾಸುದೇವ ಅನಂತಮಹಿಮ ಶ್ರೀಶನೆನ್ನುತ ದಾಸರೆಲ್ಲರು ಘೋಷಿಸುವರು ಶೇಷಶಯನ ರಕ್ಷಿಸೆನುತ 1 ಸಾಧುಜನ ಹೃದಯವಾಸನೆನ್ನುತ ಪೇಳ್ವರೊ ಸಾಧನ ಜೀವರಿಗೆ ಪರಮಪ್ರಿಯನೆಂಬರೊ ಮೋದತೀರ್ಥ ಸುಧಾರಸ ಸೇವಿಸಿರೆಂಬರೋ ಆದಿ ಪುರುಷ ಅನಾದಿ ಅನಂತ ಮಹಿಮನೆಂಬರೊ2 ಅಕ್ಷಯಗುಣ ಪೂರ್ಣಸರ್ವರ ರಕ್ಷಿಸೆನ್ನುತಲಿ ಲಕ್ಷ್ಮಿಪತಿಯೆ ಪ್ರಾರ್ಥಿಸುವೆನು ಈಕ್ಷಿಸೆನುತಲಿ ಪಕ್ಷಿವಾಹನವೇರಿ ಮೆರೆವ ಅದೋಕ್ಷಜನೆನುತಲಿ ನಿತ್ಯ ನಿತ್ಯದಲಿ 3 ಶೋಭಿಪ ನಿನ್ನ ರೂಪ ಹೃದಯದಲಿ ಕಾಣಲು ಶೋಭಕೃತು ಸಂವತ್ಸರದಲಿ ನಿನ್ನ ಪಾಡಲು ಶೋಭನಂಗಳನ್ನೆ ಕೊಡುವ ಸ್ವಾಮಿ ಎನ್ನಲು 4 ಕಡಲಶಯನ ಮೃಡನ ಸಖನೆ ಬಿಡದೆ ರಕ್ಷಿಸು ತಡೆಯದೆ ನಿನ್ನ ಚರಣ ಸ್ಮರಣೆ ಬಿಡದೆ ಕರುಣಿಸು ಬಿಡದಲೇ ಬಹಮನದ ತಾಪವೆಲ್ಲ ನೀಗಿಸುಕಡಲೊಡೆಯನೆ ಕಮಲನಾಭ ವಿಠ್ಠಲ ಪಾಲಿಸು 5
--------------
ನಿಡಗುರುಕಿ ಜೀವೂಬಾಯಿ
ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಪ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಲೀಲಾ ವಿನೋದ ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ 1 ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಬಂದ ಪರಮಾ-ನಂದ ಹೋ ಹೋ 2 ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ ಪೂಜೆಗೊಂಬ ಸರ್ವರ-ಬಿಂಬ ಹೋ ಹೋ 3 ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ ಮಾಡಿಸಿಕೊಂಡ -ಬಲು ಪ್ರಚಂಡ ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ ಕರುಣಾ-ಸಿಂಧು ಹೋ ಹೋ 4 ಮೂಜಗದ್ದಪ್ಪ ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ ಅಪ್ರಾಕೃತ ಶರೀರ-ಧೃತ ಮಂದಾರ ವಾಹನ ರಾಜಾಧಿರಾಜ ಹೋ ಹೋ 5
--------------
ವಿಜಯದಾಸ
ರಂಗನಂಗದ ಸಂಗ ಸುಖ ನೋಡ ಅಂಗನೆಲಕುಮಿಯ ಸಂಗದುರ್ಲಭವೆಈಅಂಗನೆಯರು ಮಾಡಿದ ಸುಕೃತವಂತೆ ಪ. ಗುಂಗುರಗೂದಲ ಮ್ಯಾಲೆ ಭೃಂಗದ ಮರಿಗಳು ರಂಗನ ಮುಖದ ರಸವನೆರಂಗನ ಮುಖದ ರಸವನೆ ಸÀವಿದುತಮ್ಮಂಗವ ಮರೆತು ಕುಳಿತಾರೆ ಬ್ರಹ್ಮಾದಿ ವಂದ್ಯ1 ಪಂಕಜನಾಭಗೆ ವಂಕಿ ಬಾಪುರಿ ಇಟ್ಟುಕಂಕಣ ಕಡಗ ಮೊದಲಾಗಿಕಂಕಣ ಕಡಗ ಮೊದಲಾಗಿ ರಂಗಗೆಅಲಂಕಾರ ಮಾಡಿ ಕೆಲದೆಯರು2 ಪಂಚಬೆರಳಿಗೆ ತಕ್ಕ ಮಿಂಚು ಮುದ್ರೆಗಳಿಟ್ಟುಪಂಚರತ್ನದಲಿ ರಚಿಸಿದಪಂಚರತ್ನದಲಿ ರಚಿಸಿದ ವಡ್ಯಾಣಕೆಂಚೆಯರು ಇಟ್ಟು ನಡುವಿಗೆ 3 ಶ್ರೀದೇವಿ ಅರಸಗೆ ಕ್ಯಾದಿಗೆ ಮುಡಿಸುತಊದಿನ ಕಡ್ಡಿಪರಿಮಳಊದಿನ ಕಡ್ಡಿಪರಿಮಳ ಮೂಸುತಮೋದ ಬಡುವವರು ಕಡೆಯಿಲ್ಲ4 ನೀಲವರ್ಣನ ಮುಂದೆ ಸಾಲು ದೀವಿಗೆಯಿಟ್ಟುಮ್ಯಾಲೆ ಚಾಮರವ ಸುಳಿಸುತಮ್ಯಾಲೆ ಚಾಮರವ ಸುಳಿಸುತಶಿರಮ್ಯಾಲೆ ಪೂಮಳೆಯ ಗರೆದಾರು 5 ಚಲ್ವ ರಂಗನ ಮುಂದೆ ಜಲಪಾತ್ರೆಯನ್ನಿಟ್ಟುಎಲೆಅಡಕಿ ತಬಕ ಫಲಗಳು ಎಲೆಅಡಕಿ ತಬಕ ಫಲಗಳ ತಂದಿಟ್ಟುಕೆಲದೆಯರು ಕೈಯ ಮುಗಿದಾರು 6 ಅಪಾರ ಮಹಿಮಗೆ ಧೂಪಾರತಿಯನೆತ್ತಿಭೂಪರಾಮೇಶ ಸಲುಹೆಂದುಭೂಪರಾಮೇಶ ಸಲುಹೆಂದುಗೋಪಾಲಕೃಷ್ಣಯ್ಯನ ಎದುರಲಿ ನಿಂತಾರು 7
--------------
ಗಲಗಲಿಅವ್ವನವರು
ರಂಗನಾಥ ಪಾಲಿಸೆನ್ನ ಮಂಗಳಾಂಗ ಶ್ರೀಶ ಬೇಗ ಪ ನಿನ್ನ ಭಜನೆಯನ್ನು ಗೈವೆ ಪನ್ನಗಾರಿವಾಹ ಹರೆ ಸ್ವರ್ಣವಸನ ಭೂಷಿತಾಂಗ ಸನ್ನುತಾಂಗ ಧೀರಶೂರ 1 ದುಷ್ಟರನ್ನು ಶಿಕ್ಷಿಸುತ್ತ ಸೃಷ್ಟಿಗೊಡೆಯನೆನಿಸಿ ನೀನು ಇಷ್ಟ ವರಗಳನ್ನು ಕೊಟ್ಟು ಶ್ರೇಷ್ಟನೆನಿಸು ನಂಬಿದೆನು 2 ಕಾಮಿತಾರ್ಥ ಫಲಗಳೀವ ಕಾಮ ಜನಕ ದೇವನೆ ಧೇನುನಗರದಲ್ಲಿ ನೆಲಸಿ ನೇಮದಿಂದ ಪೂಜೆಗೊಂಬೆ 3
--------------
ಬೇಟೆರಾಯ ದೀಕ್ಷಿತರು
ರಂಗನಾಯಕ----ತ್ತುಂಗನಾದ ಧೊರಿಯೆ ಪ ಮೂರುತಿ ಮಹಾಮಹಿಮನಾದ ಅಂಗಜ ಜನಕ ಕೃಪಾಂಗ ದೇವೋತ್ತುಂಗ ಅ.ಪ ಸಿಂಧು ಶಯನ ದೇವ ಭಕುತರ ಬಂಧು ಮಹಾನುಭಾವ ಇಂದಿರಾ ಹೃದಯ ಧೀರಾ ಈ ಜನರಿಗಾನಂದನಾಗಿ ತೋರಾ ಮಂದರಧರ ಮುಕುಂದ ಮಾಧವ ಸುಜನ ಪೋಷಕ ಕಂದನ ಸಲಹಿದ ಕರುಣಸಾಗರ ಇಂದು ನಿಮ್ಮ ಚರಣ ದ್ವಂದ್ವಗಳ ತೋರು 1 ವೆಂಕಟಗಿರಿವಾಸ--- ಕಿಂಕರ ನಾ ಅಣುದಾಸ ಶಂಕೆಯಿಲ್ಲದ ದೋಷಾ ಮಾಡಿದಂಥ---- ಸಂಕಟಗಳೆಂಬೀ---- ಕರಗಳೆನ್ನ ಇರಲೂ ಕೊಂಕುಗಳ ಪರಿಹರಿಸ ----ದರ ಪರಮಪಾವನಾ 2 ವೇಣುಗಾನ ವಿನೋದಾ ನೀಹಿತ--ಮೂಲನಾದ ಶ್ರೀನಿವಾಸ ಗೋವಿಂದಾ ಶ್ರೀತಜನ ರಕ್ಷಣಾನಂದ ನಿಲಯನಾದ ಭಾನುಕೋಟಿ ಪ್ರಕಾಶದೇವ---- ಸೂಸುತಿರುವ ದಾನವಾಂತಕ 'ಹೆನ್ನೆ ವಿಠ್ಠಲ’ ಧೇನುರಕ್ಷಕ ದೀನಪೋಷಕ 3
--------------
ಹೆನ್ನೆರಂಗದಾಸರು
ರಂಗನೆ ಬಾ ಮನಮಂದಿರಕೆ ಶೃಂಗಾರದ ಶ್ರೀ ಹರಿ ಶೌರೇ ಪ ನಗುತ ನಗುತ ಬಾ ಖಗವಾಹನ ಹರಿ ಬಗೆ ಬಗೆ ಕ್ರೀಡೆಗಳ ತೋರುತಲಿ ಝಗ ಝಗಿಸುವ ಪೀತಾಂಬರಧಾರಿಯೆ ಅಗಣಿತ ಗುಣನಿಧಿ ಬಾ ಹರಿಯೆ 1 ಪಕ್ಷಿವಾಹನ ಪುರುಷೋತ್ತಮ ಶ್ರೀಹರಿ ರಕ್ಷಿಸಿ ಕಾಪಾಡುವ ಜಗವ ಕುಕ್ಷಿಯೊಳಡಗಿಸಿ ಸಲಹುವ ಸುಜನರ ರಕ್ಷಿಸಿ ಪೊರೆಯಲು ಬಾ ಹರಿಯೆ 2 ಪೊಂಗೊಳಲೂದುತ ಮಂಗಳ ಚರಿತ ಹೃ- ದಂಗಳದೊಳು ನಲಿದಾಡುತಲಿ ಅಂಗಜಜನಕ ಗೋಪಾಂಗನೆ ಲೋಲ ಶ್ರೀ- ಮಂಗಳ ಮೂರುತಿ ಬಾ ಹರಿಯೆ 3 ಗಂಗಾಜನಕಗೆ ಭೃಂಗಕುಂತಳೆಯರು ರಂಗು ಮಾಣಿಕದಾರತಿ ಬೆಳಗೆ ಪೈಂಗಳನಾಮ ಸಂವತ್ಸರದಲಿ ಭವ ಭಂಗವ ಮಾಡಲು ಬಾ ಹರಿಯೆ 4 ಭ್ರಮರ ಕುಂತಳೆಯರು ಘಮಘಮಿಸುವ ಸುಮಮಾಲೆಗಳ ಕಮಲನಾಭ ವಿಠ್ಠಲಗರ್ಪಿಸುವರು ಶ್ರಮ ಪರಿಹರಿಸಲು ಬಾ ಹರಿಯೆ 5
--------------
ನಿಡಗುರುಕಿ ಜೀವೂಬಾಯಿ
ರಂಗನ್ಯಾಕೆ ಮಮತೆಕೊಟ್ಟು ದಣಿಸುವಿಕೃಷ್ಣ ನೀ ಕರುಣದಿ ಪಾಲಿಸೊ ಪ. ತನುವು ತನ್ನದು ಅಲ್ಲ ....ತನುವಿನ ಸಂಬಂಧಿಗಳೆಂಬೊ ಅವರ್ಯಾರೊನಾನ್ಯಾರೊ ಅವರಿಗೆ ಧನ ಮೊದಲಾದ ವಿಷಯಂಗಳಅನುಭವ ಹಿಂದಿನ ದೇಹದಂತರ ಅರಿಯೆವೊ 1 ನಿನ್ನ ಹಂಬಲಿಸದೆ ಅನ್ಯ ವಿಷಯಗಳಿಗೆನ್ನನೊಪ್ಪಿಸುವದು ನೀತವೆಮನ್ನಿಸಿ ದಯದಿ ನೀ ಯನ್ನ ಪಾಲಿಸಲು ನಾನಿನ್ನ ನೇಮಕೆ ಪ್ರತಿಕೂಲನೆ 2 ಇಂದ್ರಿಯಂಗಳು ವಿಷಯಂಗಳಿಗೆಳೆಯೆ ಗೋ-ವಿಂದಯೆನ್ನ ವಶಕೆ ಬಾರದುಇಂದಿರೆಯರಸ ಬ್ರಹ್ಮೇಂದ್ರವಂದಿತ ಸುಖಸಾಂದ್ರ ಭವಮೋಚಕ ನಮೋ ನಮೋ 3 ಅರಿತು ಅರಿತು ಯನಗರೆಲವವಾದರುವಿರಕುತಿ ವಿಷಯದಿ ಬಾರದುಕರುಣಾಸಾಗರ ನಿಮ್ಮ ದರುಶನವಲ್ಲದೆಮರಳು ನೀಗುವ ಬಗೆ ಕಾಣೆನೊ 4 ಭವ ಮೋಚಕ ನಮೋ ನಮೋ 5
--------------
ಗೋಪಾಲದಾಸರು