ಒಟ್ಟು 4117 ಕಡೆಗಳಲ್ಲಿ , 123 ದಾಸರು , 2899 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೀಣಾಪಾಣಿಯ ಪ್ರಿಯ ಜಾಣನಾರದರೀಶ ಕಾಣಿಸದಂತಿರುವ ಸರ್ವರಲ್ಲಾವಾಸ ಕ್ಷೀಣವಾಗೋದು ನಿನ್ನ ನಂಬಿದವರ ದೋಷ ಕ್ಷೋಣೀಪತಿಯ ಪಾದಪದ್ಮಕ್ಕೆ ನಿಜದಾಸ ಎ- ನ್ನಾಣೆ ನಿನ್ನಾಣೆ ಭೀಮೇಶಕೃಷ್ಣ(ನ) ಪಾದ-
--------------
ಹರಪನಹಳ್ಳಿಭೀಮವ್ವ
ವೀರಮಂಡಿ ಹೂಡಿರುವುದು | ಕಾರಣೇನು ವೀರ ಹನುಮ ಪೇಳು ನೀನಿದ ಪ. ರಾಮ ಹೆಗಲ ಏರಲೆನ್ನುತಾ | ಕುಳಿತಿಯೇನೊ ನೇಮದಿಂದ ದಾಸನಾಗುತ ಕಾಮಿನಿಯ ಚೋರನನ್ನು ಧೂಮಕೆಡಹಲೆಂದು ರಾಮ ಆ ಮಹಾರಣರಂಗದಲ್ಲಿ ಸ್ವಾಮಿಗೆ ಜಯವಿತ್ತು ಮೆರೆದೆ 1 ದ್ರೌಪದಿಯ ಮುಡಿಯನೆಳೆದನ | ಎದೆಯ ಮೇಲೆ ಕೋಪದಿಂದ ಕುಳಿತು ಕರುಳಿನ ಪಾಪಿ ಉರವ ಬಗೆದು ಘೋರ ರೂಪ ತೋರಿ ಶತ್ರುಗಳಿಗೆ ಶ್ರೀಪತಿಗೆ ಅರ್ಪಿಸಿದ್ದು ಈ ಪರಿಯೆ ಪೇಳು ಹನುಮ 2 ಅಭಯಹಸ್ತ ತೋರುತಿರುವುದು | ಭಕ್ತರಿಗೆ ಉಭಯ ತತ್ವಜ್ಞಾನ ಕೊಡುವುದು ಇಭವರದ ಗೋಪಾಲ ಕೃ- ಷ್ಣವಿಠಲನಂಘ್ರಿ ಕಮಲ ದೃಢದ ಬುದ್ಧಿ ಕೊಡುವ ತೆರವೊ 3
--------------
ಅಂಬಾಬಾಯಿ
ವೃಂದಾವನದ ಸೇವೆಯ ಪ. ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ. ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1 ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2 ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3 ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4 ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5
--------------
ವಾದಿರಾಜ
ವೃಂದಾವನದಲಿ ನಿಂದಿಹನ್ಯಾರೆ ಪೇಳಮ್ಮಯ್ಯ ಪ ಕುಂದು ರಹಿತ ಬಹು ಸುಂದರ ಹರಿಪದದ್ವಂದ್ವ ಭಜಕ ಯತಿ ಪುಂಗ ಕಾಣಮ್ಮ ಅ.ಪ. ಮಂಗಳ ಪಂಪಾ ಕ್ಷೇತ್ರ ಸನಿಯ ಮುನಿಪುಂಗರು ಯಾರೇ ಪೇಳಮ್ಮಯ್ಯ |ಅಂಗಜನನು ಬಲು ಹಿಂಗಳೆಧರಿ ಪದಭೃಂಗರೇನಿಪರ್ಯಾರೇ ಪೇಳಮ್ಮಯ್ಯ |ತುಂಗಭದ್ರ ಸುತರಂಗಿಣಿ ಮಧ್ಯಗಮಂಗಳಾಂಗ ವ್ಯಾಸೇಂದ್ರ ಕಾಣಮ್ಮ 1 ಮಾಯಾಮತ ವಿಧ್ವಂಸಕರೆನಿಸುವನ್ಯಾಯಾಮೃತ ರಚಕರ ನೋಡಮ್ಮಮ್ಮ |ಸಾಯಣಾದಿ ಕುಭಾಷ್ಯದಲಿಹ ಅನ್ಯಾಯವ ಜರಿದ ನೋಡಮ್ಮಮ್ಮ |ಕಾಯಜ ಪಿತನನ ಹೇಯನೆಂದು ಬಹುಗಾಯನ ಮಾಡ್ದ ಮಹಾತ್ಮ ಕಾಣಮ್ಮ 2 ಪದುಮನಾಭ ಕವೀಂದ್ರ ವಾಗೀಶರಮಧ್ಯದಲಿಹರ ನೀ ನೋಡಮ್ಮಯ್ಯ |ಸುಧೀಂದ್ರ ಶ್ರೀನಿವಾಸರು ರಾಮತೀರ್ಥರಮಧ್ಯದಲಿಹರ ನೀ ನೋಡಮ್ಮಯ್ಯ |ಯದುರಿಲಿ ಪ್ರಾಣ ಸುಪಾಶ್ರ್ವದಿ ರಘುವರ್ಯಗೋವಿಂದ ತೀರ್ಥರ ನೋಡಮ್ಮಮ್ಮ 3 ಆರು ಕೋಣೆಗಳ ಮೇಲಾಕಾರ್ವೊಲಯದಿ ಧೀರ ವಾನರರಾ ನೋಡಮ್ಮಯ್ಯಮೂರು ಕೋಟಿ ಜಪದಾಧಾರದಿ ಸಮೀರ ನಿಂದಿಹ ನೋಡಮ್ಮಯ್ಯ |ಧೀರ ನಿಲಿಸಿದಾಧಾರ ಭಕ್ತಿ ಯಂತ್ರೋದ್ಧಾರರ ನೀ ನೋಡಮ್ಮಮ್ಮ 4 ಬೋಧ ಗುರು ಗೋವಿಂದ ವಿಠಲನಪಾದ ಸೇವಕ ವ್ಯಾಸಾರ್ಯ ಕಾಣಮ್ಮ 5
--------------
ಗುರುಗೋವಿಂದವಿಠಲರು
ವೆಂಕಟಗಿರಿನಿಲಯ ಜೀಯ ಪ ಪಂಕಜಾಕ್ಷ ಅಕಳಂಕ ಜನಾರ್ದನ ಚಕ್ರಧರ ಲೋಕಮೋಹನ ಅ.ಪ ವೇದಶಾಸ್ತ್ರ ಸಕಲಾಗಮ ವಿನುತ ನಾದರೂಪ ಶ್ರೀ ಭೂಮಿದೇವಿ ಸಮೇತ ಮಾಧವ ಮಧುಹರ ನಾರದ ಸನ್ನುತ ಪಾದವ ತೋರೋ ಮಾಂಗಿರಿನಾಥ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೆಂಕಟರಮಣ ಶ್ರೀ ಲಕ್ಷ್ಮೀರಮಣ ಪಂಕಜದಳ ನೇತ್ರ ಮುಗುಳ್ನಗೆ ವದನ ಪ ಧರೆಯ ಈರಡಿಯ ಮಾಡಿದ ಚಾರುಚರಣ ದುರಿತ ಸಂಹರಣ 1 ಉಟ್ಟ ಪೊಂಬಟ್ಟೆ ಪೀತಾಂಬರಾವರಣ ಇಟ್ಟ ಶ್ರೀಗಂಧ ಕಸ್ತೂರಿಸಿರಿವದನ 2 ಅರಿಗದೆ ಶಂಖಾಬ್ಜವರ ಚತುರ್ಭುಜನ ಕೊರಳ ತುಳಸಿಯ ಮಾಲೆ ವನಮಾಲಾಭರಣ 3 ರತ್ನ ಕಿರೀಟಿ ವಿಚಿತ್ರದಾಭರಣ ಗು ಗಮನ ದುಷ್ಟ ಧೈತ್ಯ ಸಂಹರಣ 4 ದುರ್ಗ ಮೂಡಲ ಗಿರಿಯಲಿ ವಾಸವಿಹನ ಹೆಗ್ಗಾಳೆ ಮೌನಿ ವೆಂಕನ ಮೇಲೆ ಕರುಣ 5
--------------
ಕವಿ ಪರಮದೇವದಾಸರು
ವೆಂಕಟರಮಣ ಶ್ರೀ ವೆಂಕಟರಮಣ ಶ್ರೀವೆಂಕಟರಮಣನೇ ||ಅ|| ಪಂಕಜೋದ್ಭವ ಪಿತ ಪಿಳ್ಳಂಕೇರಿಯ ವಾಸವೆಂಕಟರಮಣನೇ ಅ.ಪ. ಭದ್ರ ಮೂರುತಿ ಸಣ್ಣ | ಆದ್ರಿಯಾಶ್ರಯಿಸಿ ನಿಂತಿದ್ದಿ ಕಾರಣವೇನೋ |ಶುದ್ಧ ಜನರು ಮಾಳ್ಪ | ಶುದ್ಧ ಸೇವೆಯ ಗೊಂಡುದ್ಧರಿಸಲು ಯೋನೋ 1 ನೀರೊಳು ಮುಳು ಮುಳಿಗಿ | ಭಾರಿ ಗಿರಿಯ ಪೊತ್ತುಕೋರೆಹಲ್ಲನು ತೋರೇನೋ |ಧೀರ ಕಂದನ ಕಾಯ್ದ | ನಾರಸಿಂಹನೆ ಬಲಿಯದ್ವಾರ ಕಾಯ್ದಿಹದೇನೋ 2 ನೃಪರ ಸವರಿ | ನಾರಿ ಚೋರನ ಕೊಂದುಚಾರ ಗೋಪೆರ ಕೂಡೇನೊ |ಸಾರಿ ತ್ರಿಪ್ಪುರವನ | ನಾರೇರ ವ್ರತ ಕೆಡಿಸಿವೀರ ರಾವುತನಾದದ್ದೇನೋ 3 ಪಂಚ ರೂಪದಿ ಪ್ರ | ಪಂಚವ ವ್ಯಾಪಿಸಿಪಂಚಾತ್ಮಕ ನಾದದ್ದೇನೋ |ಅಂಚೆ ಗಮನನಾದಿ | ಪಂಚ ಪಂಚರಲ್ಲಿಸಂಚು ಗೊಳಿಪುದೇನೋ | 4 ಇಂದ್ರಾ ವರಜ ದೇ | ವೇಂದ್ರ ಗಭೀಷ್ಟದಬಂದಲ್ಲಿ ನಿಂದಿರ್ಪುದೇನೋಇಂದು ಕುಲಜ ರಾ | ಜೇಂದ್ರ ಜನಮೇಜಯಗಂದು ಒಲಿದು ನಿಂತಿಲ್ಲೇನೋ 5 ತೊಂಡ ಮಾನಾನಂದಅಂಡಜವಾಹ ವಿಖ್ಯಾತಾ6 ಭಾವ ಶುದ್ಧೀಲಿ ಸ್ತವನ | ದೇವ ಶರ್ಮನು ಮಾಡೆಭಾವಕ್ಕೊಲಿದು ಮೋಕ್ಷವಿತ್ಯೋ |ಗೋವ ಕಾವ ಗುರು | ಗೋವಿಂದ ವಿಠಲ ಭಕ್ತಿಭಾವ ನಿನ್ನಯ ಪದದಲ್ಲಿಯೋ7
--------------
ಗುರುಗೋವಿಂದವಿಠಲರು
ವೆಂಕಟಾಚಲ ನಿವಾಸಾ-ಜಗದೀಶ ಸಂಕಟ ಹರಿಸೋ ಶ್ರೀಶಾ ಪ ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ ಅಕಳಂಕಮಹಿಮ ಖಗಾಂಕ ಚಕ್ರಗದಾ ಶಂಖಶ್ರೀಕರಕಂಜಧರಪಾಣೀ ಅ.ಪ ಲೋಕನಾಥ ಲೋಕಬಂಧು-ದಯಾಸಿಂಧು ಭಕುತರನಿಮಿತ್ತಬಂಧು-ಎಂದೆಂದೂ ಭಕುತರ ಬೆಂಬಲನು ಎಂದೂ-ಇಂತೆಂದೂ ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ ಏಕಮೇವ ನೀ ಕೈಬಿಡದೆ ಕರ್ಮ- ಪಾಕಮಾಡಿಸೋ-ಕಾಲನಾಮಕ1 ಬಂಧಕಗಳ ತಂದೊಡ್ಡೀ-ಭಕುತರ ಮನ ಪರಿ ಧೃಢಮಾಡಿ-ಪರಿಯುನೋಡಿ ಬಂದ ಬಂಧವ ಹರಿಸಿ-ಹೃದ್ವಾಸೀ ಹಿಂದುಮುಂದೂಕಾಣದ ಮಹ- ಅಂಧಕಾರಣ್ಯದಲಿ ಸಲಹಿದೆ ಬಂಧ ಮೋಚಕನಹುದೋ ಅನಾಥ ಬಂಧು ನೀನೆಂದು ನಂಬಿದೇ 2 ಕರುಣಾಸಾಗರನೇ ನಿನ್ನಾ-ನಾ ನಂಬಿದೆ ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ ಪರಮಸಾಧನ ಕಾಣದೇ-ಪರಿತಪಿಸುವೇ ನಿರುತ ಭವಸಂಕೋಲೆಯಾ ಕಡಿದು ಪೊರೆಯುವುದೋ ಶ್ರೀ ವೆಂಕಟೇಶನೆ ಸ್ಮರಿಪರಘ ಪರಿಹರಿಪ ಶ್ರೀ- ಉರಗಾದ್ರಿವಾಸವಿಠಲ ಪ್ರಭೋ 3
--------------
ಉರಗಾದ್ರಿವಾಸವಿಠಲದಾಸರು
ವೆಂಕಟಾಚಲನಿಲಯಾ ಎನ್ನ ಒಡೆಯ ಪ ವೆಂಕಟಾಚಲನಿಲಯಾ ವಿಧಾತೃಸಂತರೊಡೆಯಾ | ಪಂಕಜಮುಖಿ ರಮಣ ಪಾವನಚರಣಾಅ.ಪ. ಉದಯವಾಗದ ಮುನ್ನ ಉದರ ಪೋಷಣೆ ಚಿಂತೆ | ಅದರ ಮೇಲೆ ಧಾನ್ಯ ಧನದ ಚಿಂತೆ || ಮದನ ಯೌವನದ ಚಿಂತೆ ಮತ್ತೆ ಸತ್ವದ ಚಿಂತೆ | ಹೃದಯದಲಿ ನಿಮ್ಮ ಚಿಂತೆಯನು ಮಾಡದಲೆ ಕೆಟ್ಟೆ1 ಮೇದಿನಿ ಆಳುವ ಆಶೆ | ನಂದನರ ಆಶೆ ನಾನಾ ಆಶೆಯು || ಬಂಧುಬಳಗದ ಆಶೆ ಭಾಗ್ಯವುಳ್ಳವನಾಶೆ | ಒಂದು ದಿನ ನಿಮ್ಮಾಶೆಯನು ಮಾಡದಲೆ ಕೆಟ್ಟಿ 2 ಎದುರುಯಿಲ್ಲವೆಂಬೊ ಗರ್ವ ಎದೆಯ ಬಿಗುವಿನ ಗರ್ವ | ವದನನಿಷ್ಠುರ ಗರ್ವ ವಿದ್ಯ ಗರ್ವವು || ಉದಧಿಶಯನ ನಮ್ಮ ವಿಜಯವಿಠ್ಠಲರೇಯಾ | ಮದ ಗರ್ವದಿಂದ ನಿನ್ನ ನೆನಹು ಮಾಡದೆ ಕೆಟ್ಟೆ 3
--------------
ವಿಜಯದಾಸ
ವೆಂಕಟಾಚಲನಿವಾಸ ಸಲಹಯ್ಯ ಪಂಕಜಾಕ್ಷನೆ ಶ್ರೀನಿವಾಸ ಪ ವಾರಿಯೊಳು ಮುಳುಗಾಡಿದೆ, ಮಂದರದ ಮೇರು ಬೆನ್ನೊಳು ತಾಳಿದೆ ಕಾರಡವಿಯೊಳು ಚರಿಸಿದೆ, ಕಂಬದೊಳು ಘೋರ ರೂಪವ ತೋರಿದೆ 1 ವಟುವಾಗಿ ಧರೆಯನಳೆದೆ, ಕೊಡಲಿಯೊಳು ನೃಪರ ಗೆಲಿದೆ ವಾಸವ ಮಾಡಿದೆ, ರಣದೊಳಗೆ ಚಟುಳ ವಾಜಿಯ ನಡೆಸಿದೆ 2 ಅಂಗದಂಬರವ ಮರೆದೆ, ಕಡೆಯೊಳು, ತು ರಂಗವನು ಏರಿ ನಲಿದೆ ಬಂಗಾರದದ್ರಿಯೊಳು ಮೆರೆದೆ, ವರಾಹ ರಂಗ ತಿಮ್ಮಪ್ಪ ಒಲಿದೆ 3
--------------
ವರಹತಿಮ್ಮಪ್ಪ
ವೆಂಕಟೇಶ ಎನ್ನ ಮುಂದೆ ನಿಂತಿದಂತಿದೆ ಪ ದೆಸೆಗೆ ಪ್ರಜ್ವಲಿಸುವ ಎಸೆವ ಕಿರೀಟ ನೊಸಲೊಳು ತಿದ್ದಿದ ನಾಮದ ಮಾಟ ಅಸಮ ನೇತ್ರಗಳಿಂದ ನೋಡುವ ನೋಟ ಬಿಸಜಭವನ ಪರಿಚರಿಯದ ಆಟ1 ತಿಲಪುಷ್ಟದಂದದಿ ಚಲುವನಾಸಗಳು ಬಿಳಿಯ ಮುಗುಳ್ನಗೆ ಸಾಲು ದಂತಗಳು ಗಳದಿ ಮೂರೇಖೆಯು ವೈಜಯಂತಿಗಳು ಹೊಳೆವ ಮೌಕ್ತಿಕದಂತೆ ಕಿರು ಬೆವರುಗಳು 2 ಕೌಸ್ತುಭ ಎಡಗೈಯ ಶಂಖ ಕಿರು ನೇಸರಂದದಿ ಚಕ್ರದ ಬಿಂಕ ಕರದೊಳು ಜಗವನು ತೋರುವ ವೆಂಕ ಮುರುಕ ಕಟಿಯೊಳು ಇರಿಸಿದ ನಿಃಶಂಕ 3 ತೋರ ಮುತ್ತಿನ ಸರ ಮಕರಕುಂಡಲವು ತೋರುವ ಭುಜಕೀರ್ತಿ ಚಕ್ರದ ಸರವು ಹಾರ ಹೀರಾವಳಿ ಬೆರಳುಂಗುರವು ಚಾರು ಭಾಪುರಿ ಘಂಟೆ ಸರಪಣಿಯಿರವು 4 ಕಿರುಡೊಳ್ಳಿಗೊಪ್ಪುವ ನಾಭಿಯ ಸಿರಿಯು ಸರಸಿಜಮಿತ್ರನ ತೇಜದ ಪರಿಯು ಮರುಗು ಮಲ್ಲಿಗೆ ಜಾಜಿ ಸಂಪಿಗೆ ಸರಿಯು ಪರಿಮಳಿಸುವ ಮೈಯ ಪುಳಕದ ಸಿರಿಯು 5 ಉಡಿಯ ಪೀತಾಂಬರ ಮೇಲುಡುದಾg À ಕಡಹದಂದದಿ ಚಲ್ವ ಕಾಲ್ಗಳ ತೋರ ಅಡಿಯಿಟ್ಟು ನಿಂದಿಹ ಬೆಡಗಿನ ವೀರ ಮಡದಿ ಮಹಾಲಕ್ಷ್ಮೀ ಪುಡುಮಿಯುದಾರ 6 ಸ್ವಾಮಿ ಪುಷ್ಕರಣಿಯ ತೀರ ನಿವಾಸ ಭೂಮಿ ವರಾಹತಿಮ್ಮಪ್ಪನ ದಾಸ ಪ್ರೇಮದಿ ರಚಿಸಿದನಿದರೊಳು ಪ್ರಾಸ ತಾಮಸವಿದ್ದರು ತಿದ್ದಲು ಲೇಸ 7
--------------
ವರಹತಿಮ್ಮಪ್ಪ
ವೆಂಕಟೇಶ ಕಲ್ಯಾಣ ಶ್ರೀವೆಂಕಟ ದೊರೆಯೆ ಪ ವಿಶ್ವಸೃಷ್ಟಿಯಗೈದಂಥ ತಾನಿನ್ನು ಅರಿಯೆನು ಎಂತೆನಲು ಅ.ಪ ಸುರವರ ನಾರೆಂದು ಅರಿಯೆಭೃಗುವು ತಾನು ಪತಿ ಹರ ವಿಧಿಗಳೆನೆಲ್ಲ ಬರುವ ಬಗೆಯ ಕಂಡು ಸುರತ ಕೇಳಿಯಸೋಗು ಧರಿಸಿ ಮಲಗಿರಲಂದು ಜರಿದುವದಿಯಲು ವಕ್ಷ ಹರಿಸಿ ದುಗುಡವ ಮುನಿಗೆ ವರಸಿ ಚರಣದ ಕಣ್ಣು ತರಿದು ಸಾಧನೆ ಅಧಿಕ ಸಿರಿಗೆ ಪ್ರೇರಿಸಿ ಕೋಪ ತೊರೆದು ಧಾಮವ ಬೇಗ ಧರೆಗೆ ಇಳಿಯುತ ಬಂದು ಗಿರಿಯ ಹುತ್ತವ ಸೇರಿ ಸುರಿಸೆ ವಿಧಿಯು ಪಾಲು ಕರುಣದಿಂದಲಿ ಕೊಂಡು ದೊರೆಯ ಸೇವಕ ಗೋವ ಹರಿಸೆ ಕೊಡಲಿಯ ನೆತ್ತೆ ಶಿರವನೊಡ್ಡುತ ರಕ್ತ ಧಾರೆ ಚಿಮ್ಮಿಸಿನಭದಿ ಬರಲು ಚೋಳನು ದೊರೆಗೆ ಕ್ರೂರ ಶಾಪವನಿತ್ತು ಕರೆಸಿಗುರುಗಳಮದ್ದು ತರಲು ಹೊರಟದೇವ ನಿರುತ ಚಿನ್ಮಯಗಾತ್ರ ಉರು ವೈದ್ಯ ಧನ್ವಂತ್ರಿ ನಿರುಪಮ ನಾಟಕದೆ 1 ಸಾಮ ವಿಶ್ವದ ಸಾರ್ವಬೌಮ ಬೇಡಿದೆ ರಚಿಸೆ ಧಾಮ ಕ್ರೋಢನ ಕಂಡು ಪ್ರೇಮದಿಂದಲಿ ಬಕುಳೆ ವಾಮ ಕಂದನು ಆಗಿ ಭಾಮೆ ಪಾಕವನುಂಡು ಕಾಮ ವರ್ಜಿತ ಪೂರ್ಣ ಕಾಮ ಕುದುರೆಯನೇರಿ ಕಾಮ ಬೇಟೆಯೋಳ್ ನಿಜ ಕಾಮಿನಿಯನು ಕಂಡು ದ್ಧಾಮ ಮೋಹವ ತೋರಿ ಭೂಮಿಜಾತೆಯ ಘಟಿಸೆ ಭಾಮೆ ಬಕುಳೆಯ ಕಳಿಸಿ ಧರ್ಮದೇವತೆಯೆನಿಸಿ ಜಾಮಾತ ಸನ್ನಾಹ ಜಾಣ್ಮಿಯಿಂದಲಿನಡೆಸಿ ಕಾಮಿತಾರ್ಥವ ಕೊಂಡು ಧಾಮ ಸೇರಲು ಬಕುಳೆ ಹೇಮಮಯ ದಾರಿದ್ರ ನೇಮದಾಟವ ತೋರಿ ಹೇಮಗರ್ಭನ ಕರಿಸೆ ಸೋಮಶೇಖರ ಕೊಡಿಸೆ ಹೇಮರಾಶಿಯ ತಂದು ಭೀಮರುಜೆಗಳ ನಟಿಸೆ ಸೋಮಸೋದರಿಕರಿಸಿ ಮಾಮನೋಹರಗೈದ ಸೀಮೆಇಲ್ಲದಂಥ 2 ಮದುವೆ ಹಬ್ಬಿಸಿ ಭಕ್ತ ಹೃದಯ ತುಂಬುವ ನಂದ ಮುದದಿ ಬೆಳೆಸೆ ಪಯಣ ವದಗೆ ಶುಕರಾತಿಥ್ಯ ಸದಯಗೊಳ್ಳುತ ತೃಪ್ತಿ ಬದಿಗರೆಲ್ಲರಿಗಿತ್ತು ಮದನಮೋಹನ ತೇಜ ಮದುವೆ ಊರನು ಸೇರಿ ಕುದಿವ ಕುತೂಹಲದಿ ಅದ್ಭುತ ಸ್ವಾಗತವ ಪದುಮಾವತಿಯ ತಂದೆ ಹೃದಯ ಪೂರ್ವಕ ನೀಡೆ ಆದರದಿ ಸ್ವೀಕರಿಸಿ ಪಾದದ್ವಂಧ್ವವ ನೀಡಿ ವೇಧಾದಿ ನಿಜವೃಂದ ಮೇದಿನೀ ಸುರವೃಂದ ಮೋದ ಮೆಲ್ಲಲು ಕೂಡಿ ವೇದ ಘೋಷವುಗೈಯೆ ವಾದ್ಯದುಂದುಭಿ ಮೊಳಗೆ ವೇದವೇದ್ಯನು ಮದುವೆ ವೇದಿಕೆಯನು ಏರಿ ಕಾದುಕೊಂಡಿಹ ಜನಕೆ ಸಾಧಿಸುತಲಭೀಷ್ಠ ಕರ ಸಾದರ ಪಿಡಿದಂಥ ಖೇದ ತರಿಯುತ ನಿಜ ಮೋದದಾನವ ಗೈವ 3 ತಿರುಪತಿ ತಿಮ್ಮಪ್ಪ ಸುರಗಣ ಜಗದಪ್ಪ ವರಸಮರಿಲ್ಲಪ್ಪ ಭರದಿ ಕಸಿವಕಪ್ಪ ಅರಿತವರಿಲ್ಲಪ್ಪ ಧರಿಸಿಹ ಸಿರಿಯಪ್ಪ ಕರುಣ ಸುರಿಸುವನಪ್ಪ ಉರುಗಗಿರಿಯಲ್ಲಿಪ್ಪ ಸುರತರು ಇವನಪ್ಪ ಗಿರಿಸಪ್ತ ದೊರೆಯಪ್ಪ ಹರಿಕೆ ಕೊಳ್ಳುವನಪ್ಪ ಅರಿಮಾರಿ ಸರಿಯಪ್ಪ ಶರಣರ ಪೊರೆಯಪ್ಪ ಕರೆಕರೆ ಬೇಡಪ್ಪ ಸ್ವರತ ಸುಖಮಯನಪ್ಪ ಅರವಿದೂರನಪ್ಪ ಮರೆವ ಶರಣರ ತಪ್ಪ ಸರ್ವಹೃದಯಗನಪ್ಪ ಪರಿಪೂರ್ಣಗುಣನಪ್ಪ ಅರಿಶಂಖುಧರನಪ್ಪ ಉರಿವ ರವಿಯಲ್ಲಿಪ್ಪ ಸರ್ವಮುಕ್ತರಿಗಪ್ಪ ಬಿರಿವ ಖಳರೆದೆಯಪ್ಪ ಮರುತ ಮಂದಿರನಪ್ಪ ಪರಿಮರ ಹೌದಪ್ಪ ಪೊರೆದೆ ಮಾಧವನಪ್ಪ ವರಲೀಲಾ ಮಯನಪ್ಪ ಪರಮ ಅದ್ಭುತನಪ್ಪ ಪರಮಾತ್ಮಹೌದಪ್ಪ ಕರಣ ಚೋದಿಪನಪ್ಪ ಕರಣಕ್ಕೆಸಿಗನಪ್ಪ ದುರಿತ ಪಾವಕನಪ್ಪ ಪರಮ ಪಾವನನಪ್ಪ ಹರನ ಅಪ್ಪನಿಗಪ್ಪ ಪರಮೋಚ್ಚಹೌದಪ್ಪ 4 ಬಾದರಾಯಣ ಪೂರ್ಣ ಭೋಧ ತೀರ್ಥರ ದೈವ ಮೋದ ಚಿನ್ಮಯಗಾತ್ರ ವೇದ ವಿಭಜಿಸಿ ನಿಂದ ಖೇದವಿದ್ಯೆಯ ಕೊಂದ ವಾದಿವಾರಿಣಿ ಸಿಂಹ ವಾದಿರಾಜರ ಹೃದಯ ಮೋದ ಹಯಮುಖ ಶುದ್ಧ ವೇದರಾಶಿಯತಂದ ವೇಧಗರುಹಿದ ಕರುಣಿ ಖೇದ ನೀಡುತಲಿದ್ದ ಆದಿದೈತ್ಯರ ಕೊಂದು ಮೇದಿನಿಯನು ಎಯ್ದೆ ಶ್ರೀಧರ ನರಸಿಂಹ ಗೋಧರಮಹಿದಾಸ ಕಾದುಕೊ ಶ್ರೀ ವಿಷ್ಣು ಭೇದ ವಿದ್ಯೆಯಮನಕೆ ಭೋಧಿಸು ವರ ಕಪಿಲ ಸಾಧು ಋಷಭದತ್ತ ಯಾದವ ಕುಲರನ್ನ ಕಾಯ್ದೆ ಗೋಪಿಯ ರನ್ನ ಸೀಳ್ದೆ ಕೌರವರನ್ನ ಪೇಳ್ದೆ ಪಾರ್ಥಗೆ ಗೀತೆ ಶುದ್ಧ ಜಯಮುನಿಹೃಸ್ಥ ಮಧ್ವ ಇಂದಿರೆನಾಥ ಮುದ್ದು ಕೃಷ್ಣವಿಠಲ ಬಿದ್ದೆ ಪಾದದಿ ಶರಣು 5
--------------
ಕೃಷ್ಣವಿಠಲದಾಸರು
ವೆಂಕಟೇಶ ವಿಠ್ಠಲನೆ ಉದ್ಧರಿಸೊ ಇವಳಾಪಂಕಜಾಸನ ವಂದ್ಯ ಪಂಕೇರು ಹಾಕ್ಷ ಪ ಪತಿ ವಿಯೋಗದ ದುಃಖ | ಅತಿಯಾಗಿ ತವಪಾದಗತಿಗಾಗಿ ಗಿರಿಯೇರಿ | ತುತಿಸುತಿರೆ ನಿನ್ನಾಗತಿಗೋತ್ರ ತೈಜಸನೆ ಪತಿರೂಪ ನಿನ್ನನುಪತಿಕರಿಸ ನಿನ್ನ ಮೃತ ಹಸ್ತ ನೆತ್ತಿಲಿ ಇಟ್ಟೇ 1 ಇಂದಿವಳ ಪ್ರಾರ್ಥನೆಯ ಛಂದದಲಿ ಮನ್ನಿಸುತಅಂದು ನೀನಾಗಿತ್ತ | ನಂದದಂಕಿತವಾಇಂದು ಊರ್ಜಿತ ಪಡಿಸಿ | ವಂದಿಸಿಹೆ ತವಪಾದವೃಂದಾರ ಕೇಂದ್ರ ಗುರು ನಂದ ಮುನಿ ವಂದ್ಯಾ 2 ಪಕ್ಷಿವಾಹನ ದೇವ | ದಕ್ಷಾರಿ ಪ್ರಿಯ ಸಖನೆದೀಕ್ಷಿತಳ ದಾಸಪಥ | ಲಕ್ಷಿಸುತಲಿದನಾಈಕ್ಷಿಪುದು ಕರುಣಾಕ | ಟಾಕ್ಷದಲೆಂದನುತಅಕ್ಷಾರಿ ವಂದ್ಯ ಹರಿ ಪಾರ್ಥಿಸುವೆ ನಿನ್ನಾ 3 ದೇಶ ದೇಶದ ಜನರ | ಆಶೆಗಳ ಪೂರೈಪ ಕೇಶವನೆ ಶ್ರೀ ವೆಂಕಟೇಶಾಖ್ಯ ಹರಿಯೇ |ದಾಸಿಯಳ ಹೃದಯಾ | ಕಾಶದೊಳು ತೋರೆಂದುಲೇಸು ಭಿನ್ನಪ ಸಲಿಸೊ | ಮೇಶ ಮಧ್ವೇಶಾ4 ಊರ್ವಿಯೊಳು ನಿನ್ಹೊರತು ಕಾವರನು ನಾಕಾಣೇಸರ್ವೋತ್ತಮೋತ್ತಮನೆ | ಶರ್ವ ವಂದ್ಯಾದರ್ವಿ ಜೀವಿಯ ಕಾವ | ಹವಣೆ ನಿನ್ನದಲ್ಲೇನೊ ಗುರ್ವಂತರಾತ್ಮ ಗುರು | ಗೋವಿಂದಾ ವಿಠಲಾ 5
--------------
ಗುರುಗೋವಿಂದವಿಠಲರು
ವೆಂಕಟೇಶನೆ ಬಲ್ಲ ಪರಮ ಪಾತಕೀಯಾ | ಕಿನ್ನೇಶ ಮುನಿದು ಬಂದೇನು ಮಾಡುವನು ಪ ಚಿತ್ತದೊಲ್ಲಭನ ಸಮ್ಮತದಲ್ಲಿ ನಾರಿಯು | ಅತ್ತವಿತ್ತ ಊರು ಸುತ್ತುತಿರಲು | ಸುತ್ತಯಿದ್ದ ಬಂಧು ಬಳಗದವರು ಕೂಡಿ | ಮುತ್ತಿಕೊಂಡು ಅವಳನೇನು ಮಾಡುವರು 1 ಕದ್ದು ತಂದಾ ಒಡವೆ ರಾಜ್ಯವಾಳುವನಿಗೆ | ತಿದ್ದುವಾ ಸರಿಪಾಲು ಲಂಚಕೊಟ್ಟು | ಇದ್ದವನು ಹಗಲಿರಳು ಕದ್ದರೆ ಆ ಊರು | ಎದ್ದು ಹಿಡಿದವರೆಲ್ಲ ಏನು ಮಾಡುವರು2 ತೊತ್ತಿನ ಮೇಲೆ ಒಡೆಯನ ದಯವಿರೆ | ತೊತ್ತು ಗರ್ತಿಗೆ ಅಂಜಿ ನಡಕೊಂಬಳೆ | ಕರ್ತು ಶ್ರೀ ವಿಜಯವಿಠ್ಠಲ ವೆಂಕಟೇಶನ | ಚಿತ್ತದಿ ನೀನಿರೆಯನೆವುಂಟೆ3
--------------
ವಿಜಯದಾಸ
ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ | ಪಶುಪತಿ ಗುರು ನಮಿತ ಪಾದಾ | ಪಂಕಜವ ಪೊಗುಳವೆನು ಪರಿಪಾಲಿಸೆನ್ನ | ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಪ ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ | ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು | ಧೈರ್ಯವಂತನು ನೀನಾಗಿ | ಧೈರ್ಯವಾಗಿದ್ದಾಗ ಜಡಜೀವ ಜಂತುಗಳು | ವೀರ್ಯದಲಿ ಪೊಕ್ಕು ದುಃಖಾತಿಶಯದಲಿ | ದುರ್ಯೋನಿ ಮುಖದಿಂದ ಜನನ ಜನಿತನಾದೆ | ಮರ್ಯಾದೆಗಳು ಇಲ್ಲದೆ ಹರಿಯೇ 1 ಕ್ಷಿತಿಯೊಳಗೆ ಬಂದು ಕಾಮ ಕ್ರೋಧ ಸಂಮೋಹ ಶ್ರುತಿ ವಿಭ್ರಮ ಬುಧ್ಧಿನಾಶ ರಾಗದ್ವೇಷ | ಪಥದಲಿ ವಿಷಯೇಂದ್ರಿಗಳು ಆತ್ಮವಶವಾಗಿ ಹಿತದ ಪ್ರಸಾದದಿಂದ | ಗತಿ ಅದರಿಂದ ಈ ಸಂಖ್ಯೆಯಿಂದಲಿ | ಹತವಾಗಿ ಪೋಗಿ ಮರಳೆ ದೇಹವನು | ತೆತ್ತು ಗತಿ ಪುಣ್ಯವಂತನೈದೆ 2 ಇಂದಿಗಾ ಇವನ ಮನೆ ತಂದೆ ತಾಯಿಯ ದಿವಸ | ಇಂದಿಗಾ ಇವನ ಮನೆ ಹತ್ತ ಹತ್ತನೆ ದಿವಸ | ಹವ್ಯ ಕವ್ಯ ಜಾವಳ | ಇಂದಿಗಾ ಮದುವೆ ಮುಂಜಿ | ಇಂದು ನಿಮ್ಮನೆ ಪ್ರಸ್ತವೆಂದು ಕೇಳುತಾ ಪೋಗಿ | ಬಂದವರನನ್ನುಸರಿಸೆ ಬಾಗಿಲಾ ಮುಂದೆ ಕುಳಿತು | ನೊಂದೆ | ಬಂದೆನೊ ಕೊನೆಯಲಿ 3 ಆರಾದರೂ ಬಂದು ಕಾಸು ಕೊಡದಿದ್ದರೆ | ದೂರುವೆನೊ ನೂರಾರು ಕೇರಿ ಕೇರಿಯ ತಿರಗಿ | ಸಾರೆ ಅವರಲ್ಲಿದ್ದ ಅವಗುಣಂಗಳ ಎತ್ತೆ | ಬೀರುವೆನು ಬೀದಿಯೊಳಗೆ | ವಾರಣದಿಂದಲಿ ಕರೆದು ಆವನಾದರು ಬಂದು | ಶಾರೆ ಭತ್ತವ ಕೊಡಲು ಕೊಂಡಾಡುವೆ ಕುಲ ಉ | ಪೋರ ಬುದ್ಧಿಗಳ ಬಿಡದೆ4 ಪರವಣಿ ಪುಣ್ಯಕಾಲಾ ದಿವಸ ಬಂದರೆ ತಿಳಿದು | ಪರಮಾರ್ಥವೆಂದರಿದು ಉತ್ತಮರ ಬಾ ಎಂದು | ಕರೆದು ತುತ್ತನ್ನ ಮೇಲೊಂದು ದಕ್ಷಿಣೆ ಕಾಸು | ಹರುಷದಿಂದಲಿ ಕೊಡದಲೆ ಪರರ ಹಳಿಯುತ್ತ ಏನೇನು | ಇಟ್ಟುಕೊಂಡು ಮನಿಗೆ ಬಂದು | ಪರರರಿಯದಂತೆ ಮಂಚದ ಕೆಳಗೆ ಹೂಳಿ ಈ | ಪರಿಯಿಂದ ದಿನ ಹಾಕಿದೆ5 ತೊತ್ತು ಓರ್ವೆಯಲ್ಲಿ ಈ ಹೊತ್ತು ಪೋಗಾಡಿಸಿದೆ | ಉತ್ತಮರ ಬಳಿಯಲಿ ಕುಳಿತು ಸತ್ಕಥೆಗೆ ಕಿವಿ ಇತ್ತು ಕೇಳದಲೆ ಕೆಲಸಾರೆ ಬೇಸರಿಕೆಯಲಿ | ಅತ್ತಲಿತ್ತಲು ವ್ಯರ್ಥ ಸುತ್ತಿ ಸುಮ್ಮನೆ ಸುದ್ದಿ ಬರಿಗಂಟುಸಟೆ | ಮಾತು ಎತ್ತುವನೊ ಅನ್ನಿಗರನ ನ | ಎಣಿಕೆ ಮಾಡದಲೆ | ಉನ್ಮತ್ತದಲಿ ಕೆಟ್ಟೆನಯ್ಯಾ6 ಪರಿಯಂತ | ವೇದೆನೆ ಬಟ್ಟೆನೊ ದುಷ್ಟ ಹಾದಿಯಲಿ ಸಿಗಬಿದ್ದು | ಈ ದುರಾಚಾರಗಳ ಗಣನೆ ಮಾಡದೆ ಇನ್ನು | ಕಾದುಕೊ ಕಮಲನಾಭಾ | ಹೋದಪರಾಧಗಳ ನೋಡದಲೆ ದಯದಿಂದ | ಆದರಿಸಿ ನಿನ್ನ ದಾಸರ ಸಂಗತಿಯನಿತ್ತು | ಪಾದವನು ಕಾಣಿಸಯ್ಯಾ7
--------------
ವಿಜಯದಾಸ