ಒಟ್ಟು 646 ಕಡೆಗಳಲ್ಲಿ , 82 ದಾಸರು , 509 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆರೆನಂಬಿ ಬೇಡುವೆನೊ ಶ್ರೀಹರಿಯೆ ನಿನ್ನ ಪರಮ ಪರತರ ತವಬಿರುದುಗಳರಿದು ಪ ಪುರನಾಶಗೈದು ನೀ ಪುರಸತಿಯರ್ವ್ರತ ಕೆಡಿಸಿ ಪುರದೊಳಗೆ ತೋರಿದೆಲೋ ಪರಿಪರಿಯ ಲೀಲೆ ಕರುಣಿಸದ್ಯಸಮಸುಖ ಪರಮ ದಯಾನಿಧಿಯೆ 1 ಸತಿ ಅಹಲ್ಯಾದೇವಿಗೆ ಪತಿಯಿತ್ತ ಶಾಪವನು ಅತಿಹಿತದಿ ಪರಿಹರಿಸಿ ಗತಿಯಿತ್ತಿ ದೇವ ಕ್ಷಿತಿಜಾತೆಪತಿ ನಿನ್ನ ಪತಿತಪಾವನಪಾದ ನುತಿಪ ಭಕ್ತರಿಗೆ ಜವಮೃತ್ಯುಭಯತರಿವಿ 2 ಮೃಡಸಖ ಶ್ರೀರಾಮ ದೃಢದಿ ಭಜಿಪರ ಬೆಂ ಬಿಡದಿರ್ದು ಕಾಯ್ವಂಥ ಕಡುದಯದ ದೇವ ದೃಢದಿಂದ, ನಂಬಿದೆ ಒಡಲಾಸೆ ಪೂರೈಸು ಜಡಜಾಕ್ಷ ಕಡುದಯದಿ ಪಿಡಿಯೆನ್ನ ಕೈಯ 3
--------------
ರಾಮದಾಸರು
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ನೋಡಯ್ಯ ನಿನ್ನ ದಾಸರ ಮೇಲೆ ಕೃಪೆಗಳನುಮಾಡಯ್ಯ ಮನ್ಮನಕೆ ಸಂತಸವನುತೀಡಯ್ಯ ಭವಭಯದ ಪಾತಕಂಗಳ ದಾನವಾಡ ಗುಡ್ಡದ ತಿರುಮಲೇಶ ಸರ್ವೇಶ ಪ ಆದಿಯಲಿ ವೇದಗಳ ಕದ್ದುಕೊಂಡೊಯ್ದವನಸಾಧನಂಗೆಯ್ವೆನೆಂದಾಕ್ಷಣದೊಳುಪೋದನೆಲ್ಲೆನುತ ಶರನಿಧಿಯೊಳಗೆ ಪೊಕ್ಕ ಮ-ತ್ತಾ ದಿತ್ಯನಂ ಕೊಂದು ತಿಕ್ಕಿಮುಕ್ಕೆನೀ ದಯಾ ಪಾತ್ರನೆಂಬುದ ಕೇಳಿ ನಾನರಿತೆಭೂ ಧರೆಯ ಸುರರ ನೀ ಸಲುಹಲಾಗಪೋದ ನಿಗಮಂಗಳನು ತಂದು ಸಲೆ ರಕ್ಷಿಸಿದೆಆದಿ ಮತ್ಸ್ಯವತಾರ ಶರಣೆಂಬೆನು 1 ಮೂರ್ತಿ ನೀನಂದು ಬೇರೆಸುಮತವನು ಬೆನ್ನಲ್ಲಿ ಸಲೆ ಆತು ರಕ್ಷಿಸಿದೆಕಮಠಮೂರುತಿ ನಿನಗೆ ಶರಣೆಂಬೆನು 2 ಚಿನ್ನಗಣ್ಣವನೆಂಬನೊರ್ವ ಖಳ ಭೂದೇವಿಕನ್ನಿಕೆಯನೊಯ್ಯುತಿರೆ ಕನಲಿ ಮನದಿಇನ್ನು ಅವನನು ಸೆಣಸಿ ಜಯಿಸುವವರನು ಕಾಣೆನೆನ್ನುತಲಿ ರೋಮಗಳನುಬ್ಬೆತ್ತುತತನ್ನ ಮುಂಗೋರೆಗಳ ಮಸೆದೊಡನೆ ರಕ್ಕಸನಬೆನ್ನಟ್ಟಿ ಬರಸೆಳೆದು ಸದೆದೊರಗಿಸಿಚೆನ್ನಾಗಿ ಧರಣಿಯನು ತಂದು ಸಲೆ ರಕ್ಷಿಸಿದೆಹನ್ನೆರಡು ಪೆಸರವನೆ ಶರಣೆಂಬೆನು3 ಹೇಮಕಶ್ಯಪನೆಂಬ ನಾಮಜನ ಸುತನೊರ್ವನಾ ಮಹಾಘನವೆಂದು ನೆನೆಯುತಿರಲುತಾಮಸದ ಖಳ ತನ್ನ ತನುಜನನು ಮಥಿಸುತಿರೆರಾಮನನು ತೋರೆಂದು ಬಾಧಿಸುತಿರೆಧೂಮಜ್ವಾಲೆಗಳೊಡನೆ ಭುಗುಭುಗಿಲು ಛಿಟಿಲೆನುತಆ ಮಹಾ ರಕ್ಕಸನ ಪೊಡೆಯ ಸೀಳಿಪ್ರೇಮದಲಿ ಪ್ರಹ್ಲಾದಗೊಲಿದು ಪಟ್ಟವನಿತ್ತೆಸಾಮಜಾರಿಯ ವದನ ಶರಣೆಂಬೆನು 4 ಬಲಿಯಧ್ವರದ ಸಾಲೆಗೊಂದು ವೇಷವನಾಂತುಸಲೆ ಬಂದು ಧರೆಯ ಮೂರಡಿಯ ಬೇಡೆಒಲಿದು ಇತ್ತಪೆನೆನಲು ಧಾರೆಯನೆರೆಯಲಸುರಕುಲಗುರುವು ಜುಳಿಗೆಯೊಳು ತಡೆದು ನಿಲಲುಸಲಿಲ ವರ್ಜಿತ ನಯನನನು ಮಾಡಿ ಆಕಾಶನೆಲವೆರಡು ಪಾದವನ್ನಳೆದ ಬಳಿಕತಲೆ ಮೇಲೆ ಇರಿಸೆನಲು ತಳಕಿಳಿಸಿ ಅವನ ಬಾ-ಗಿಲ ಕಾಯ್ದ ವಾಮನನೆ ಶರಣೆಂಬೆನು 5 ರೇಣುಕೆಯ ಬಸುರಿನಲಿ ಜನಿಸಿ ಪಿತನಾಜ್ಞೆಯನುಮಾಣಬಾರದು ಎಂಬ ಮತವ ಪಿಡಿದುಕ್ಷೂಣವಿಲ್ಲದೆ ತಾಯ ಶಿರವರಿದು ತಂದೆಯನುಪ್ರಾಣಹತ್ಯವ ಮಾಡಿದರ ಕುಲವನುಕ್ಷೋಣಿಗೆರಗಿಸಿ ಕಾರ್ತವೀರ್ಯಾರ್ಜುನನ ಮಡುಹಿಜಾಣತನದಲ್ಲಿ ಭೂದಾನಗಳ ಭೂಸುರರಕಾಣುತಲೆ ಕರೆಕರೆದು ಕೊಟ್ಟೆಯೈ ನೀನು ಪೂಬಾಣಜನಕನೆ ರಾಮ ಶರಣೆಂಬೆನು 6 ಸೀತೆಯನು ಕದ್ದು ಒಯ್ದವನ ಕೊಲ್ಲುವ ಭರದಿಭೂತಳದ ಕಪಿಗಳನು ಕೂಡಿಕೊಂಡುಸೇತುವೆಯ ಕಟ್ಟಿ ಶರನಿಧಿ ದಾಟಿ ಬರಲಾಗಭೂತಗಣ ಸಂತತಿಯು ನಡುನಡುಗುತಿರಲುಚೇತನದ ರಾವಣೇಶ್ವರ ಕುಂಭಕರ್ಣ ಸ-ತ್ತ್ವಾತಿಶಯ ರಕ್ಕಸರ ಇರಿದೊರಗಿಸಿಮಾತು ಲಾಲಿಸಿ ವಿಭೀಷಣಗೆ ಪಟ್ಟವನಿತ್ತದಾತ ರಘುನಾಥನೇ ಶರಣೆಂಬೆನು 7 ಶಕಟ ಕುಕ್ಕುಟ ಧೇನುಕಾಸುರರ ಪೂತನಿಯಬಕ ವತ್ಸಹಕ ವೃಷಾಸುರ ಮುಖ್ಯರಪ್ರಕಟದಿಂದರಿದು ಕರಿಯನು ಸೀಳಿ ತನಗೆ ಸಂ-ಮುಖರಾದ ಮಲ್ಲರನು ಇರಿದೊರಗಿಸಿಮುಕುರ ದಂತ್ಯದ ಹಮ್ರ್ಯದೊಳಗಿಂದ ಕಂಸನಪುಕಪುಕನೆ ತಿವಿದವನನಿರಿದೊರಗಿಸಿಸಕಲವೆಸೆದಿರ್ದ ಮಧುರಾಪುರವ ಉಗ್ರಸೇನಕಗಿತ್ತ ಕೃಷ್ಣನೇ ಶರಣೆಂಬೆನು 8 ಮೂರು ಪುರದಬಲೆಯರ ವ್ರತಗಳನೆ ಕೆಡಿಸಲಿಕೆಬೇರೊಂದು ಅಶ್ವತ್ಥ ವೃಕ್ಷವಾಗಿನಾರಿಯರ ವ್ರತಭಂಗಗೆಯ್ಯಲಾ ದೆಸೆಯಿಂದಊರುತ್ರಯವದು ತಿರುಗುವುದು ನಿಲ್ಲಲಾಗನೀರ ಮಸ್ತಕದಲ್ಲಿ ಧರಿಸಿದನ ಕರವಿಲ್ಲನಾರಿಯೊಳು ನಾರಾಯಣಾಸ್ತ್ರವಾಗಿಘೋರತನವೆತ್ತ ತ್ರಿಪುರದ ಕೀಲ ಪರಿದ ಮದನಾರಿ ಸಖ ಬುದ್ಧನೇ ಶರಣೆಂಬೆನು 9 ಮದವೆತ್ತ ರಕ್ಕಸರು ಮಹಿಯೊಳಗೆ ಹೆಚ್ಚಲುತ್ರಿದಶಾಂತ ನಡನಡನೆ ನಡುಗುತಿರಲುಬೆದರಬೇಡೆನುತ ಅಭಯವನಿತ್ತು ಮುದದಿಂದಸುಧೆಯೊಳಗೆ ಬಂದು ಜನಿಸಿಕುದುರೆವಾಹನನಾಗಿ ಕುಂಭಿನಿಯ ಮೇಲೆ ತನಗಿದಿರಾದ ರಾವುತರನಿರಿದೊರಗಿಸಿಮೊದಲ ಭಾಷೆಯನು ದಿವಜರಿಗಿತ್ತೆ ಬೇಗದಲಿಚದುರ ಕಲ್ಕ್ಯವತಾರ ಶರಣೆಂಬೆನು10 ಇಂತು ದಶ ಅವತಾರಗಳನೆತ್ತಿ ರಕ್ಕಸರಸಂತತಿಯನೊರಸಿ ಭೂಭಾರವಿಳುಹಿಕಂತುಪಿತ ತಿರುವೆಂಗಳೇಶ ತಿರುಮಲೆಯೊಳಗೆಚಿಂತಿಸುವ ಭಕ್ತರನು ಪಾಲಿಸುತಲಿದಂತಿರಾಜನ ಪೊರೆದು ದಾನವಾಡಿಗೆ ಬಂದುನಿಂತಾದಿಕೇಶವನೆ ಶರಣೆಂಬೆನು 11
--------------
ಕನಕದಾಸ
ನೋಡಿದೆ ಗುರುಗಳ ನೋಡಿದೆ ಪ ನೋಡಿದೆನು ಗುರುರಾಘವೇಂದ್ರರ ಮಾಡಿದೆನು ಭಕುತಿಯಲಿ ವಂದನೆ ಬೇಡಿದೆನು ಕೊಂಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳಅ.ಪ ಗಾಂಗೇಯ ಶಯ್ಯಜನು ಈ ನದಿಯ ತೀರದಲ್ಲಿ ಯಾಗವ ಮುದದಿ ರಚಿಸಿ ಪೂರೈಸಿ ಪೋಗಿರ ಲದನು ತಮ್ಮೊಳು ತಿಳಿದು ತವಕದಿ ಹೃದಯ ನಿರ್ಮಲರಾಗಿ ರಾಗದಿ ಬುಧಜನರ ಸಮ್ಮೆಳದಲಿ ಸಿರಿ ವದನನಂಘ್ರಿಯ ತಿಳಿದು ನೆನೆವರ ಉದಿತ ಭಾಸ್ಕರನಂತೆ ಪೊಳೆವರ 1 ಆಲವಬೋಧ ಮಿಕ್ಕಾದ ಮಹಮುನಿ ಗಳು ಸಅಂಶರು ಒಂದು ರೂಪದಿ ನೆಲೆಯಾಗಿ ನಿತ್ಯದಲಿ ಇಪ್ಪರು ಒಲಿಸಿಕೊಳುತಲಿ ಹರಿಯ ಗುಣಗಳ ತಿಳಿದು ತಿಳಿಸುತ ತಮ್ಮ ತಮಗಿಂ ರಧಿಕರಿಂದುಪದೇಶ ಮಾರ್ಗದಿ ಕಲಿಯುಗದೊಳು ಕೇವಲ ಕ ತ್ತಲೆಯ ಹರಿಸುವ ಸೊಬಗ ಸಂತತ 2 ರಾಮ ನರಹರಿ ಕೃಷ್ಣ ಕೃಷ್ಣರ ನೇಮದಿಂದೀ ಮೂರ್ತಿಗಳ ಪದ- ತಾಮರಸ ಭಜನೆಯನು ಮಾಳ್ಪರು ಕೋಮಲಾಂಗರು ಕಠಿನಪರವಾದಿ ಸ್ತೋಮಗಳ ಮಹಮಸ್ತಕಾದ್ರಿಗೆ ಭೂಮಿಯೊಳು ಪವಿಯೆನಿಸಿದ ಯತಿ ಯಾಮ ಯಾಮಕೆ ಎಲ್ಲರಿಗೆ ಶುಭ ಕಮಿತಾರ್ಥವ ಕರೆವ ಗುರುಗಳ 3 ನೂರು ಪರ್ವತ ವರುಷ ಬಿಡದಲೆ ಚಾರು ವೃಂದಾವನದಲಿ ವಿ ಸ್ತಾರ ಆರಾಧನೆಯು ತೊಲಗದೆ ವಾರವಾರಕೆ ಆಗುತ್ತಿಪ್ಪುದು ಸಾರೆ ಕಾರುಣ್ಯದಲಿ ಲಕುಮೀ ನಾರಾಯಣ ತಾ ಚಕ್ರರೂಪದಿ ಸಾರಿದವರಘವ ಕಳೆದು ಇವರಿಗೆ ಕೀರುತಿಯ ತಂದಿಪ್ಪುದನುದಿನ4 ಮಿತವು ಎನದಿರಿ ಇಲ್ಲಿ ದಿನ ದಿನ- ಕತಿಶಯದೆ ಆಗುವುದು ಭೂಸುರ ತತಿಗೆ ಭೋಜನ ಕಥಾಶ್ರವಣ ಭಾ- ರತ ಪುರಾಣಗಳಿಂದಲೊಪ್ಪುತ ಕ್ಷಿತಿಯೊಳಗೆ ಮಂಚಾಲೆ ಗ್ರಾಮಕೆ ವ್ರತಿಯ ಇಲ್ಲವೆಂದೆನಿಸಿಕೊಂಬುದು ಪತಿತಪಾವನ ವಿಜಯವಿಠಲನ ತುತಿಸಿಕೊಳ್ಳುತ ಮೆರೆವ ಗುರುಗಳ 5
--------------
ವಿಜಯದಾಸ
ನೋಡಿದೆನು ಕೃಷ್ಣನ್ನ | ದಣಿಯ ನೋಡಿದೆನು ಕೃಷ್ಣನ್ನ | ಮನದಣಿಯ ಪ. ಪಾಡಿದೆನು ವದನದಲಿ ಗುಣಗಳ ಮಾಡುತಲಿ ಸಾಷ್ಟಾಂಗ ಕಡು ಕೃಪೆ ಬೇಡಿದೆನು ಹರಿಯ ಅ.ಪ. ಅರುಣ ಉದಯದ ಮುನ್ನ ಯತಿಗಳೂ ಶರಣವತ್ಸಲನನ್ನು ಪೂಜಿಸಿ ಕರದಿ ಕಡಗೋಲನ್ನು ಪಿಡಿದಿಹ ಬಾಲರೂಪನಿಗೆ ತರತರದ ನೇವೇದ್ಯವರ್ಪಿಸಿ ತುರುಕರುಗಳಾರತಿ ಗೈಯ್ಯುತ ಪರಮಪುರುಷಗೆ ವಂದಿಸಲು ಈ ಚರಿತ ಮತ್ಸ್ಯನ್ನಾ 1 ಮಧ್ವರಾಯರ ಹೃದಯವಾಸಗೆ ಮುದ್ದು ಯತಿ ಪಂಚಾಮೃತಂಗಳ ಶುದ್ಧ ಗಂಗೋದಕದ ಸ್ನಾನವಗೈಸಿ ಸಡಗರದಿ ಮಧ್ಯೆ ಮಧ್ಯೆ ನೈವೇದ್ಯವರ್ಪಿಸಿ ಮುದ್ದು ತರಳರಿಗ್ಹೆಜ್ಜೆ ಪಂಕ್ತಿಯು ಅಗಣಿತ ಕೂರ್ಮರೂಪನ್ನಾ2 ಉದಯಕಾಲದಿ ಸರ್ವ ಜನಗಳು ಮುದದಿ ಮಧ್ವ ಸರೋವರದೊಳು ವಿಧಿಯಪೂರ್ವಕ ಸ್ನಾನ ಜಪ ತಪವಗೈದು ಮಾಧವನಾ ಉದಯದಾಲಂಕಾರ ದರ್ಶನ ಪದುಮನಾಭಗೆ ನಮನಗೈವರು ವಿಧಿಕುಲಕೆ ಉದ್ಧಾರಕರ್ತನು ವರಹನೆಂದಿವನಾ 3 ಪಾಲಿಸಲು ಬಾಲನ ಶ್ರೀ ಗೋ ಪಾಲಕೃಷ್ಣನು ಕಂಭದಲಿ ಲೀಲೆಯಿಂದಲಿ ಉದಿಸಿ ಖೂಳನ ಸೀಳೀ ತೊಡೆಯಲ್ಲಿ ಬಾಲೆಯನು ಕುಳ್ಳಿರಿಸಿಕೊಂಡಘ ಜಾಲಗಳ ಸುಡುವಂಥ ದೇವನು ಬಾಲರೂಪವ ಧರಿಸಿ ನಿಂತಿಹ ಲೋಲ ನರಹರಿಯ 4 ಅದಿತಿ ದ್ವಾದಶವರ್ಷ ತಪಸಿಗೆ ವಿಧಿ ಜನಕ ತಾ ಕುವರನಾದನು ಅದರ ತೆರದಲಿ ವ್ರತವ ಗೈದ ವೇದವತಿಗಿನ್ನು ಚದುರ ತನಯನ ವರವನಿತ್ತನು ಯದುಕುಲಾಗ್ರಣಿ ಅವರ ಭಕ್ತಿಗೆ ಒದಗಿ ಬಂದ ಮೂರ್ತಿವಾಮನನೆಂಬ ವಟುವರನ5 ದುಷ್ಟ ಕ್ಷತ್ರಿಯರನ್ನೆ ಕೊಲ್ಲುತ ಅಷ್ಟು ಭೂಮಿಯ ದಾನಗೈಯುತ ದಿಟ್ಟ ತಾನೆಲ್ಲಿರಲಿ ಎಂಬುವ ಯೋಚನೆಯ ತಳೆದು ಅಟ್ಟಿ ಅಬ್ಧಿಯ ಪುರವ ನಿರ್ಮಿಸಿ ಪುಟ್ಟ ರೂಪವ ತಾಳಿ ಬರುತಲಿ ಮೆಟ್ಟಿ ನಿಂತಿಹ ರಜತ ಪೀಠದಿ ಶ್ರೇಷ್ಠ ಭಾರ್ಗವನ 6 ಪಿತನ ಆಜ್ಞೆಯ ಪೊತ್ತು ಶಿರದಲಿ ಸತಿ ಅನುಜ ಸಹಿತದಿ ಜತನದಲಿ ವನವಾಸ ಮುಗಿಸುತ ದಶಶಿರನ ಕೊಂದ ಅತಿ ಸಹಾಯವ ಗೈದ ಶರಧಿಗೆ ಪ್ರತಿಯುಪಕಾರವನು ಕಾಣದೆ ಜತನದಲಿ ತಾ ನಿಲ್ಲೆ ನೆಲಸಿದ ಜಾನಕೀಪತಿಯ7 ಗೋಪಿಯರ ಉಪಟಳಕೆ ಸಹಿಸದೆ ಗೋಪನಂದನರೊಡನೆ ಕಾದುತ ತಾಪಪಡಿಸುವ ಕಂಸರನುಚರರಿಂದ ಕಳದೋಡಿ ಗೋಪಿ ಮೊಲೆ ಕೊಡುತರ್ದದಲಿ ಬಿಡೆ ಈ ಪರಿಯ ತಾಪಗಳ ಸಹಿಸದೆ ತಾಪಸರ ಪೂಜೆಗಳ ಬಯಸುತ ಬಂದ ಗೋಪತಿಯ 8 ವೇದ ಬಾಹಿರರಾದ ದುರುಳರು ವೇದ ಮಾರ್ಗವ ಪಿಡಿಯೆ ಸುರತತಿ ನೀ ದಯದಿ ಸಲಹೆಂದು ಪ್ರಾರ್ಥಿಸೆ ಜಿನ ವಿಮೋಹಕನೂ ವೇದರ್ಥವ ಗುಪ್ತದಲಿ ತಾ ಬೋಧಿಸುತ ಮೋಹಕವ ಕಲ್ಪಸಿ ಬುದ್ಧ ಪ್ರಮೋದನೆಂಬುವನಾ 9 ಚತುರ ಪಾದವು ಕಳದು ಧರ್ಮವು ಅತಿಮಲಿನವಾಗುತಲಿ ಕಲಿಜನ ಚತುರ ಜಾತಿಯ ಕಲೆತು ಕಂಗೆಡೆ ಭಕ್ತವರ್ಗಗಳು ಗತಿಯು ನೀನೆ ಪೊರೆಯೊ ಎಂದೆನೆ ಸತಿಯ ಹೆಗಲೇರುತಲಿ ಖಡ್ಗದಿ ಹತವಗೈಯ್ಯುತ ಖಳರ ಸುಜನರ ಪೊರೆದ ಕಲ್ಕಿಯನು10 ನೋಡಿದೆನು ವರ ಮಚ್ಛ ಕೂರ್ಮನ ನೋಡಿದೆನು ಧರಣೀಶ ನೃಹರಿಯ ನೋಡಿದೆನು ವಾಮನನ ಭಾರ್ಗವ ರಾಮಚಂದ್ರನನೂ ನೋಡಿದೆನು ಕಡಗೋಲ ಕೃಷ್ಣನ ಬುದ್ಧ ಕಲ್ಕಿಯ ನೋಡಿದೆನು ಗುರು ವರದ ಗೋಪಾಲಕೃಷ್ಣವಿಠ್ಠಲನ 11
--------------
ಅಂಬಾಬಾಯಿ
ಪಂಕಜನಯನ ಪಾವನ್ನ ಸುಖ ಸಂಕೂಲ ಮೂರುತಿ ಲಾಲಿಸು ಚಿನ್ನಾ ವೆಂಕಟ ನಿಲಯಾ ಹಸೆಗೇಳು ಪ ಕಮಲ ಸಂಭವಗಿತ್ತ ಕಮನೀಯ ಕಾಯ ಸುಮನಸ ಜನತೆ ಸುಧೆಯನುಣಿಸಿ ಭೂಮಿ ಚೋರನ ಕೊಂದ ಮುನಿಗಳೊಡೆಯ ವಿಮಲ ಮೂರುತಿ ಹಸೆಗೇಳೋ 1 ನರಹರಿ ರೂಪದಿ ಬಂದು ದೈತ್ಯ ನುರವ ಬಗೆದು ವಟು ರೂಪದಿ ನಿಂದ್ಯೋ ದುರುಳ ರಾಯರನೆಲ್ಲ ಕೊಂದು ಲಂಕಾ ಪುರದಾಧಿಪತಿಯ ಸದೆದ ದಯಸಿಂಧೋ ಕರುಣಾಸಾಗರನೆ ಹಸೆಗೇಳೋ 2 ಯದುಜನೆನಿಸಿ ಎಲ್ಲಾ ಖಳರ ಜಯಿಸಿ ಸುದತೇರ ವ್ರತವ ಕೆಡಿಸಿದತಿ ಧೀರ ಕುದುರೆನೇರಿದ ಮಾಧಾರಾ ನಿನ್ನ ಅದುಭೂತ ಬಲ್ಲಿದಕ್ಕೆಣೆಗಾಣೆನುದಾರಾ ಉದಧಿ ಶಯನನೆ ಹಸೆಗೇಳು 3 ಅಪ್ರತಿಮಲ್ಲ ಅನಂತಾ ಸುಹಜ ನ ಪ್ರೀಯಾ ಸುರಪತಿ ಸಿರಿದೇವಿ ಕಾಂತಾ ಸ್ವ ಪ್ರಕಾಶಿತನೆ ಧೀಮಂತಾ ಅತಿ ಕ್ಷಿಪ್ರದಿ ಭಕ್ತರ ಪೊರೆವತಿ ಶಾಂತಾ ಸುಪ್ರದಾಯಕನೆ ಹಸೆಗೇಳೋ 4 ಪರಮ ಪುರುಷ ಪುಣ್ಯನಾಮಾ ಪರ ಪುರಷೋತ್ತಮ ಪರಿಪೂರ್ಣ ಕಾಮಾ ಶರಣರ ಭವವನ ಧೂಮಾ ಕೇತು ಕರಿಯ ಬಲ್ಲೆನೆ ಕಾಮಿತರ ಕಲ್ಪದ್ರುಮಾ ಕರಿರಾಜವರದಾ ಹಸೆಗೇಳೋ 5 ನಿತ್ಯ ಅತ್ಯಂತ ಮಹಿಮನೆ ಆಪ್ತ ಜನರ ಕ್ಲೇಶ ಕಳೆವ ಸುಕೀರ್ತೀ ಚಿತ್ತಜ ಜನಕ ಹಸೆಗೇಳೋ 6 ಕ್ಷೀರಾಬ್ಧಿವಾಸಾ ಚಿನ್ಮಯನೆ ನಿನ್ನ ಪಾರ ಮಹಿಮೆ ತಿಳಿವವನಿಹನೆ ಮೂರು ಗುಣ ರಹಿತನೆ ದೋಷ ದೂರ ವಿದೂರ ಶಿರಿದೇವಿಯೊಡನೆ ಬಾರಯ್ಯ ಹಸೆಯ ಜಗುಲಿಗೆ7 ವ್ಯಾಳಮರ್ದನನೆ ವಿಗಮನಾ ತ್ರಿ ಶೂಲ ಪಾಣಿಯ ಓಡಿಸಿದ ಖಳನಾ ಸೋಲಿಸಿದಪ್ರತಿಸುಗುಣ ಹೇಮ ಲಲಿತಾಂಗ ಹಸೆಗೇಳೋ 8 ಅಗಣಿತ ಜೌದಾರ್ಯ ಸಾರಾ ನಿನ್ನ ಪೊಗಳ ಬಲ್ಲೆನೆ ಪಾತಕದೂರಾ ನಗರಾಜನುತ ನಿರಾಧಾರ ಭವಾದಿಗಳಿಂದ ವಂದ್ಯನೆ ನವನೀತ ಚೋರ ಜಗನ್ನಾಥ ವಿಠಲ ಹಾಸೆಗೇಳೋ9
--------------
ಜಗನ್ನಾಥದಾಸರು
ಪಡಿ ಪಡಿ ಜೀವನ್ಮುಕ್ತಿ ಪ ಗುರುವರನು ತಾ ಪರಶಿವನೆಂದು | ಅರಿದು ಪೂಜಿಸು ಮನದೊಳಗಿಂದು 1 ವ್ರತನೇಮಗಳೊಳು ಫಲವಿಲ್ಲಾ | ಸದ್ಗತಿ ನಿನಗದರೊಳಗಾಗುವದಿಲ್ಲ 2 ಭವತಾರಕನ ಭಜಕರ ನೋಡು | ಕಂಡರೆ ಕರೆದರ್ಚನೆಯನು ಮಾಡು 3
--------------
ಭಾವತರಕರು
ಪತಿಯೆ ಪರದೇವತೆಯು ಸತಿಯರಿಗೆ ಜಗದಿ ಮತಿಯರಿತು ಭಜಿಸಿ ಪರಗತಿಯ ಸಾರುವುದು ಪ. ಉದಯಕಾಲದೊಳೆದ್ದು ಸದಮಲ ಶುಧ್ಧಿಯಲಿ ಪಾದ ಮನದಿ ಸ್ಮರಿಸುತಲಿ ಪತಿ ಹೃದಯದಲಿರುವನು ಎಂದು ಪತಿ ಪದಕರ್ಪಿಸುವುದು 1 ಆದರದಲಿ ಪತಿಯ ಪಾದವನೆ ತೊಳೆದು ಆ ಸ್ವಾದೋದಕವ ಪಾನಗೈದು ಸುಖಿಸುವುದು ವೇದಗೋಚರ ಹರಿಯೆ ನೀ ದಯವ ಮಾಡೆಂದು ಆದರದಿ ಪತಿಯ ಮನವರಿತು ನುಡಿಯುವುದು 2 ಸ್ವಚ್ಛದಲ್ಲಿ ಮನದ ತುಚ್ಛ ವಿಷಯವ ತೊರೆದು ಇಚ್ಛೆಯಿಂದಲಿ ಹರಿಯ ನಾಮಗಳ ಭಜಿಸಿ ಅಚ್ಯುತಾನಂತ ಗೋವಿಂದನೆನ್ನುತ ಸತತ ಮಚ್ಚಾದ್ಯನೇಕ ಅವತಾರ ನೆನೆಯುವುದು 3 ಪತಿಯೆ ಹರಿಯೆಂದರಿತು ಪತಿಯೆ ಗುರುವೆಂದರಿತು ಪತಿಯ ಪೂಜೆಯನು ಅತಿ ಹಿತದಿ ಗೈಯ್ಯುವುದು ಪತಿಯಂತರ್ಗತನೆ ಎನ್ನತಿಶಯದಿ ಪೊರೆಯೆಂದು ಪತಿವ್ರತವ ನಡೆಸುತಲಿ ಹಿತದಿ ಬಾಳುವುದು 4 ಪತಿಯ ನಿಂದಕಳಿಗೆ ಗತಿಯಿಲ್ಲ ಪರದಲ್ಲಿ ಅತಿ ಬಾಧೆಪಡಿಸುವನು ಯಮನು ನಿರ್ದಯದಿ ಪತಿವ್ರತವ ಸಾಧಿಸುವ ಸತಿಯರಿಗೆ ಅನವರತ ಚ್ಯುತರಹಿತ ಪದವೀವ ಗೋಪಾಲಕೃಷ್ಣವಿಠಲ5
--------------
ಅಂಬಾಬಾಯಿ
ಪತಿವ್ರತೆ ಹ್ಯಾಂಗಿರಬೇಕು ನಿಜವಾಗಿ ಪ ರತಿಪತಿಪಿತನನ್ನು ಪತಿಯಲ್ಲಿ ನೆನೆಯುತ್ತ ಅ.ಪ. ಹೊತ್ತಾರೆ ಏಳಬೇಕು ಪತಿಗೆ ವಂದಿಸಬೇಕು ನಿತ್ಯತುಳಸಿಗೆರಗಿಕೃತ್ಯಮಾಡಲಿಬೇಕು ಅತ್ತೆಮೆಚ್ಚಿಸಬೇಕು ತೊತ್ತಿನಂತಿರಬೇಕು ರತಿಯ ನೀಡುತ ಪತಿಗೆ ಹಿತದಿಂದ ಬಾಳಬೇಕು 1 ಮಿತಮಾತು ಇರಬೇಕು ಸುತರ ಪಾಲಿಸಬೇಕು ಮತಿಮತದಿ ನಡಿಬೇಕು ಅತಿಥಿ ಪೂಜಿಸಬೇಕು ವ್ರತನೇಮ ವಿರಬೇಕು ಗತಿ ಹರಿಯೆ ತಿಳಿಬೇಕು ಮಾತ್ಸರ್ಯಬಿಡಬೇಕು ತೃಪ್ತಿಯಿರಲಿಬೇಕು 2 ನೆರೆಹೊರೆ ಗಂಜಬೇಕು ತಿರುಗೋದು ಬಿಡಬೇಕು ತಿರಿ ತಿಂಡಿ ಬಿಡಬೇಕು ಹರಟೆಗಳ ಬಿಡಬೇಕು ಹರಿಕಥೆ ಕೇಳಬೇಕು ಹರಿದಿನ ಮಾಡಬೇಕು ಹರಿಯ ಪಾಡಲಿಬೇಕು 3 ನೆಟ್ಟಕುಂಕುಮ ಬೇಕು ಕೆಟ್ಟವರ ಬಿಡಬೇಕು ಕಟ್ಟಿ ಆಶೆಯ ಬಿಟ್ಟು ತೃಪ್ತಿಯಿಂದಿರಬೇಕು ಕಷ್ಟಬಂದರು ಬಹು ಗುಟ್ಟಿನಿಂದಿರಬೇಕು ನೆಂಟರೊಡನೆ ಕಠಿಣ ನಿಷ್ಟೂರ ಬಿಡಬೇಕು 4 ಚುಚ್ಚಬಾರದು ಚಾಡಿ ಬಿಚ್ಚಬಾರದು ಗಾಡಿ ಹಚ್ಚಬಾರದು ವಿಷಯ ಕೊಚ್ಚಬಾರದು ಜಂಭ ಹುಚ್ಚಳಂತಿರದ್ಹಾಂಗೆ ಸ್ವಚ್ಚನಡತೆಯು ಬೇಕು 5 ಪಾಪವ ತೊರಿಬೇಕು ಲೇಪನವ ಬಿಡಬೇಕು ಕೋಪವ ಬಿಡಬೇಕು ಕಪಟತ್ವ ಬಿಡಬೇಕು ರೂಪ ಮದವ ಬಿಟ್ಟು ಚಪಲತ್ವ ತೊರಿಬೇಕು ವಿಪರಿತ ಮಡಿಬಿಟ್ಟು ಶ್ರೀ ಪತಿಯ ನೆನಿಬೇಕು 6 ಅಂಗ ಶುದ್ಧಿಯು ಬೇಕು ಶೃಂಗಾರ ರಸಬೇಕು ನಗೆಮೊಗವಿರಬೆಕು ಸವಿಮಾತು ಗುಣಬೇಕು ಭಂಗಾರ ವಿಡಬೇಕು ರಂಗಗೆನ್ನಲಿ ಬೇಕು ಮಂಗಳಾಂಗ ನಮ್ಮ “ಶ್ರಿ ಕೃಷ್ಣವಿಠಲ” ನ್ನ ಹಿಂಗದೆ ನೆನೆಬೇಕು ಅಂಗಿನೀಗಲಿ ಬೇಕು 7
--------------
ಕೃಷ್ಣವಿಠಲದಾಸರು
ಪದ್ಯ ಅಥಃ ಪ್ರಥÀಮೋಧ್ಯಾಯ ಪಾದ ವಾರಿಜಕೆರಗುತ ನೀರಜ ಮುಖಿ ಸರಸ್ವತಿಯಾ || ಸಾರ ಭಕ್ತಿಲಿ ಸ್ತುತಿಸಿ ಪೇಳುವೆ ಸತ್ಯ ಚಾರು ಕಥೆಯಾ ಪ ಸುರಮುಖಿವಂದಿತ ಸರಸಿಜ ಭವಪಿತ ಶರಧಿ ಕರಿವರದಾ | ಹರುಷದಿಂದಲಿ ನಿನ್ನ ಚರಿತೆ ಕೊಂಡಾಡಲು ವರವ ಪಾಲಿಸು ದಯದಿಂದ 1 ಶರನಿಧಿ ಸಂಭೂತೆ ಸುರಜೇಷ್ಟ ಸ್ಮರಮಾತೆ ಪುರಹರ ವಂದಿತೆ ಖ್ಯಾತೆ || ಸ್ಮರಿಸಿ ಬೇಡುವೆ ನಿನ್ನ ಧೊರಿಯ ವರ್ಣಿಸಲೀಗ ಗರಿಯೆ ವರವ ಸುಖದಾತೆ 2 ಹರಿಕುಲೋತ್ತುಮ ನಿನ್ನ ಸರಸಿಜ ಪದಯುಗ ನೆರೆನಂಬಿದೆನು ಮುದಿಂದ || ಹರಿಸುಚರಿತ್ರವು ಅರುಹಲು ಎನ್ನಗೆ ಸ್ಥಿರ ಬುದ್ಧಿಕೊಡು ವಾಯುಕಂದ 3 ಗಿರಿಜೇಶ ಶಚಿಪತಿ ಸುರತತಿಗೆರಗುವೆ ಪರಮ ಸುಭಕ್ತಿ ಪೂರ್ವಕದಿ || ಹರಿದಾಸ ವರ್ಗಕೆ ಶುಭನೀಡಲೆನಗೆಂದು ಶಿರಬಾಗಿ ಬೇಡುವೆ ಮನದಿ 4 ಘನತರ ನೈಮಿಷವನದೊಳು ವಾಸಿಪ ಮುನಿ ಸೂತನಲ್ಲಿಗೆ ಬಂದು | ವಿನಯದಲಿ ವಿಜ್ಞಾಪನ ಮಾಡಿಕೊಂಡರು ಶೌನಕಾದಿಗಳೆಲ್ಲ ನಿಂದು 5 ಕ್ಷಿತಿಯೊಳು ಮನದಾಸೆ ಹಿತದಿಂದ ನೀಡುವ | ವ್ರತದಾವದ್ಹೇಳಿರೆನುತ || ಅತಿ ಭಕ್ತಿಯಿಂದ ಕೇಳುವ ಮುನಿಗಳ ಕಂಡು ಕಥಿಸಿದನಾಗೆತಿ ಸೂತಾ 6 ಛಂದದಿ ಕೇಳಿರಿ ಒಂದೆ ಮನದಿ ಈಗಾ | ನಂದದಿ ನಾರದ ತಾನೂ || ಹಿಂದಕ್ಕೆ ಈತೆರ ನಂದನ ಗೋ ವಿಂದನ ಪ್ರಶ್ನೆ ಮಾಡಿದನೂ 7 ಕಾರುಣ್ಯದಿಂದಲಿ ಸಾರಸೋದ್ಭವಕು | ಮಾರ ನಾರದ ಮುನಿವರಗೆ || ಶೌರಿ ಪೇಳಿದ ಕಥೆ ಸಾಧುವೆ ಮೋದದಿ ನಿಮಗೆ 8 ವರಸುರ ಲೋಕಾದಿ ಚರಿಸುತ್ತನಾರದ | ಹರುಷದಿ ಭೂಮಿಗೆ ಬರಲು || ನರರತಿ ಕಷ್ಟದಿ ಮರುಗುವದಂ ನೋಡಿ | ಪೊರೆಟರು ಹರಿಗ್ಹೇಳಿ ಕೊಳಲು 9 ಪದುಮಜ ಸುತ ನಾರದ ಮುನಿ ವೇಗದಿ | ವಿದುಧರ ವಂದಿತನಾದ || ಯದುಪನಲ್ಲಿಗೆ ಬಂದು ಮುದಮನದಿಂದಲಿ | ವಿಧ ವಿಧದಲಿ ಸ್ತುತಿಗೈದಾ 10 ಅಗಣಿತ ಮಹಿಮನೆ ತ್ರಿಗೂಣ ವರ್ಜಿತ ತ್ರಿವಿಕ್ರಮನೆ || ಪೊಗಳುವ ತವ ಪದಯುಗಕೆರಗುತ ನಾನು ಜಗದುತ್ವತ್ತಿ ಕಾರಣನೆ 11 ಮಗಳಲ್ಲಿ ಪುಟ್ಟದಿ ಮಗನನ್ನು ಕುಟ್ಟದಿ | ಮಗನ ಮಗಳ ಮದುವ್ಯಾದಿ || ಮಗನ ಮಗನ ವರಪಡೆದಾತನ ಜೈಸಿ ಮಗನ ಮಗನ ನೀನು ತಂದಿ 12 ಸಿಂಧುಜರಿಪ್ರಸಖ ನಂದನ ಕೊಂದನ | ತಂದೆಯ ತಂದೆಯಾ ಸುತೆಯಾ || ನಂದಿನಿಯಳಿಗಾಗಿ ನೊಂದಿದಿ ನೀ ನರ ರಂದದಿ ಕವಿಗಣಗೇಯಾ 13 ಘನ್ನ ಮಹಿಮ ನಿನ್ನ ಅನಂತ ಚರಿಯವ ಬಣ್ಣಿಸ ಬಲ್ಲೆನೆ ದೇವಾ || ಪನ್ನಗರಾಜಗಾಗಣ್ಯವಾಗಿಪ್ಪುದು ಮನ್ನಿಸು ಎನ್ನ ಬಿನ್ನಪವಾ 14 ಬಾ ಮುದ್ದು ನಾರದನೆ ಬಾ ಮುನಿವರ್ಯನೆ ಬಾ ಮೂರು ಭುವನ ಸಂಚಾರಿ ನೇಮದಿಂದಲಿ ನಿನ್ನ ಕಾಮಿತ ಪೇಳೀಗ ಪ್ರೇಂದಿಂದಲಿ ವೀಣಾಧಾರಿ 15 ಮುರಹರ ನಿನ್ನಗೆ ಅರಿಯದ ವಾರ್ತೆಯು | ಧರಣಿ ತ್ರಯದಿ ಉಂಟೇನೋ || ನರರತಿ ಕಷ್ಟದಿ ಮರುಗುತಲಿಪ್ಪರು ಹರಿಪೇಳಿದಕುಪಾಯವನು 16 ಸತ್ಯಲೋಕೇಶನ ಪುತ್ರನೆ ನಿನ್ನಯ | ಉತ್ತಮ ಪ್ರಶ್ನೆಗೆ ನಾನು || ಚಿತ್ತೈಸು ಮುನಿವರ ನೀನು 17 ನಾರದ ಶ್ರೀ ಸತ್ಯನಾರಾಯಣ ವ್ರತ ಧಾರುಣಿಯೊಳಗಿನ ಜನರು ಆರು ತಮ್ಮ ಪರಿವಾರದಿಂದಲಿ ಗೈಯ್ಯೆ ಭೂರಿ ಸೌಖ್ಯದಿ ಮೆರೆವರೋ 18 ದೇವನೆ ಈ ನಿನ್ನ ಸೇವಕನಿಗೆ ಸತ್ಯ || ದೇವನೆ ವ್ರತದ ವಿಧಾನ || ಸಾವಧಾನದಿ ಪೇಳು ಭಾವ ಜಪಿತ ಏಕೋ ಭಾವದಿ ಕೇಳುವೆ ಮುನ್ನ 19 ಬುಧನುತ ನಾರದ ಘೃತಕ್ಷೀರ ಶರ್ಕರ | ಕದಳಿ ಗೋಧೂ ಮಾದಿಗಳನು || ಪದುಳದಿಂದಲಿ ಸುಪಾಕಗೈದು ಮೇಣ್ ವಿಧ ವಿಧ ಪಕ್ವಾದಿಗಳನು 20 ಪರಮ ಭಕ್ತಿಯಲಿಂದ ಪರಿವಾರ ಸಹಿತದಿ ಧರುಣಿಸುರನ ಪರಿಮುಖದಿ ತುರಧೂಳಿಕಾಲದಿ ಪರಿಪರಿ ಪೂಜಿಸಿ ಹರಿಗರ್ಪಿಸಲಿ ಬೇಕು ಮುದದಿ 21 ಈರೀತಿಗೈವರ ಕೋರಿಕೆಯನು ದಯ | ವಾರಿಧಿ ಶಾಮಸುಂದರನೂ || ನಿತ್ಯ ವಾರಿಜಸಹಿತದಿ ಸೇರಿ ತಾ ನಲಿದಾಡುತಿಹನೂ 22 ಇತಿ ಪ್ರಥಮೋಧ್ಯಾಯ ಸಂಪೂರ್ಣಂ ಅಥಃ ದ್ವಿತೀಯೋಧ್ಯಾಯಃ ಅತಿ ಮೋದದಿಂದಲಿ ಮತಿಯುತರೆ ಈಗ ಪೃಥವಿಯೊಳಗೆ | ಪೂರ್ವದಲಿ || ವ್ರತಗೈದ ಸುಗುಣರ ಇತಿಹಾಸ ನಿಮ್ಮಗೆ ಕಥಿಸುವೆ ಹಿತದಿಂದ ಕೇಳಿ 1 ಕಾಶಿಯೊಳಗೆ ಒಬ್ಬ ಭೂಸುರ ಬಡತನ ಕ್ಲೇಶದಿ ವಾಸಿಸುವದನು || ಶ್ರೀಶ ಅವನ ನೋಡಿ ಪೋಷಿಸಲು ವೃದ್ಧ ವೇಷದಿ ಮಾತನಾಡಿಸಿದನು 2 ಭೂತವಕದಿ ವಿಪ್ರನಾಥನೆ ತವ ಮುಖ ಪಾಥೋಜ ಬಾಡಿದ ಬಗೆಯಾ ಈ ತೆರ ದುಃಖದಿ ನೀ ತಿರಗುವಂಥ ಮಾತು ಪ್ರೀತಿಲಿ ಪೇಳಯ್ಯಾ 3 ಕಥಿಸುವೆ ಹೇವಿಪ್ರ ಹಿತದಿಂದ ನೀಯನ್ನ | ಸ್ಥಿತಿಯಾ ಲಾಲಿಸು ಮನದಿಂದಾ || ಗತಿಗೆಟ್ಟು ಚರಿಸುವೆ ಪೃಥಿವಿಯೊಳಗೆ ಈಗ ಅತಿ ಬಡತನ ದೆಶೆಯಿಂದಾ 4 ಶ್ರೇಷ್ಟನೆ ದಾರಿದ್ರ್ಯ ಕಷ್ಟ ತೊಲಗುವಂಥ | ಥಟ್ಟನೆ ನೀ ಪೇಳುಪಾಯಾ || ಘಟ್ಪ್ಯಾಗಿ ನಿನ್ನ ಉತ್ಕøಷ್ಟ ಪಾದಾಂಬುಜ ಮುಟ್ಟಿ ಸೇವಿಪೆ ಮಹರಾಯಾ 5 ಮಿಡುಕುತ್ತ ವಿಪ್ರನು ನುಡಿದ ಮಾತನುಕೇಳಿ | ಕಡಲಜಪತಿ ಕವಿಗೇಯಾ || ಕಡುದಯದಲಿ ಪೇಳ್ದ ಬಡತನ ಕಳೆಯುವ ಪೊಡೆವಿಯೊಳಿದ್ದ ಉಪಾಯಾ 6 ಸಾರುವೆ ಕೇಳಯ್ಯ ಮಾರಜನಕ ನಿಜ | ನಾರಾಯಣನ ಸು ವ್ರತವಾ ಆರು ಜಗದಿ ಭಕ್ತಿ ಪೂರ್ವಕ ಮಾಳ್ವರು ದಾರಿದ್ರ್ಯ ಹರಿ ದೂರಗೈವಾ 7 ಮುದುಕನ ನುಡಿಕೇಳಿ ಮುದಮನದಿಂದಲಿ ಸದನಕ್ಕೆ ದ್ವಿಜ ಬಂದು ತಾನೂ ಸುದತಿ ಸಹಿತನಾಗಿ ಸತ್ಯನಾಥಾನ ಪೂಜೆ ವಿಧ ವಿಧದಲಿ ಮಾಡಿದನೂ 8 ಹರುಷದಿ ಈ ರೀತಿ ಧರಣಿ ದೇವನು ಮಾಡೆ | ಶಿರಿಸತಿ ಸುತರಿಂದ ತಾನೂ || ಧರೆಯೊಳು ಸುಖಬಿಟ್ಟು ಪರಮ ದುರ್ಲಭವಾದ ಪಥ ಹಿಡಿದನೂ 9 ಸೂತರೆ ಅತ್ಯಂತ ಕೌತುಕವಾಗಿಹ ಧಾತ ಪಿತನ ಈ ವ್ರತವು ಭೂತಳದೊಳಗೆಂತು ಖ್ಯಾತಿಯ ಪೊಂದಿತು ಪ್ರೀತಿಲಿ ಪೇಳಿರಿ ನೀವು 10 ಸತಿಸುತ ಪರಿವಾರ ಸಹಿತಾ ಅತಿ ಹಿತದಲಿ ಮನೋರಥ ಪೂರೈಸುವ ಈ ವ್ರತ ಮಾಡುತಿರಲಾಗತ್ವರಿತಾ 11 ಚರಣನೋರ್ವನು ಶಿರದಿ ಕಾಷ್ಟಭಾರವ ಧರಿಸಿ ಮಾರಲು ಬೀದಿಗಳಲಿ ಬರುತಿರೆ ಮಾರ್ಗದಿ ಧರಣಿದೇವನೆ ಮಂ ದಿರ ಕಂಡ ಪರಮ ಮೋದದಲಿ 12 ಶ್ರೀನಿವಾಸನ ಘನಧ್ಯಾನದಿಂರ್ಚಿಪ ಕ್ಷೋಣಿ ಸುರನ ನೋಡಿ ಜವದಿ ಮಾನವ ಕೇಳಿದ ಏನಿದೆಂದೆನು ತಲಾಕ್ಷಣದಿ 13 ಶೂದ್ರನ ನುಡಿ ಕೇಳಿ ಆ ದ್ವಿಜ ಪೇಳ್ದನು ಶುದ್ಧ ಮನದಿ ಚರಣೋಧ್ಭವ ಗೈದನಿ ಶುದ್ಧನ ಪಾದಾರ್ಚನವಾ 14 ಹರುಷದಿಂದಲಿ ಸತ್ಯ ಹರಿ ಪೂಜಿಸಿದ ಶೂದ್ರ ಪರಮ ಸೌಜನ್ಯದಿ ಇದ್ದು ಕೊನೆಗೆ ಪರಿವಾರಯುತನಾಗಿ ತೆರಳಿದ ಸ್ಥಿರ ಉಳ್ಳ ಶಿರಿಶಾಮಸುಂದರನ ಪುರಿಗೆ 15 ಇತಿ ದ್ವಿತೀಯೋಧ್ಯಾಯ ಸಂಪೂರ್ಣಂ ಅಥಾಃತೃತೀಯೋಧ್ಯಾಯ ಋಷಿ ಜನಗಳೆ ಕೇಳಿ ವಸುಧಿ ತ್ರಯದಿ ಘನ ಪೆಸರಾದ ಇನ್ನೊಂದು ಕಥೆಯಾ ಉಸುರುವೆ ಕೇಳ್ವರ ವ್ಯಸನವು ಪರಿಹಾರ ಪುಸಿಯಲ್ಲಿ ಈ ನುಡಿ ಖರಿಯಾ 1 ವರ ಉಲ್ಕಮುಖನೆಂಬ ಧರಣೀಶನೋರ್ವನು ಹರುಚದಿಂದಲಿ ತನ್ನ ಹಿತದಾ ಶರಧಿ ತೀರದಿ ನಿಜ ಹರಿಯನ್ನು ಪೂಜಿಸುತಿರ್ದ 2 ಕ್ಷೋಣಿಪಾಲಕನಿದ್ದ ಆ ನದಿತೀರದಿ | ವಾಣಿಜ್ಯ ಮಧುನಾಯಕನೂ || ಸಾನುರಾಗದಿ ಬಂದು ಶ್ರೀನಿಧಿ ವ್ರತದ ವಿ ಧಾನವೇನೆಂದು ಕೇಳಿದ 3 ಭೂಮಿಪಾಲಕ ಮಧುನಾಮಕ ವೈಶ್ಯನ ಆ ಮೃದು ನುಡಿಕೇಳಿ ಜವದಿ ಕಾಮಿತದ ಸತ್ಯ ಸ್ವಾಮಿಯ ವ್ರತ್ತದಾ ನೇಮವ ಪೇಳ್ವ ಸಮ್ಮುದದಿ 4 ರಕ್ಕಸಾರಿಯ ಕಥಾ ಭಕ್ತಿಲಿ ಕೇಳುತ ಲಕ್ಕುಮಿಯುತ ಮುದದಿಂದ ಮಕ್ಕಳೆನಗಾಗಲು ಚಕ್ರಿಯ ಸುವೃತ ಅಕ್ಕರದಲಿ ಮಾಳ್ಪೆನೆಂದ 5 ಈ ರೀತಿ ಧೃಡ ಬ್ಯಾಪಾರಿಯು ತಾಗೈದು ಶೌರಿ ಪ್ರಸಾದ ಸ್ವೀಕರಿಸಿ || ಸಾರಿ ಪೇಳಿದ ತನ್ನಾಗಾರಕ್ಕೆ ಬಂದು ತಾ ನಾರಿಯ ಮುಂದೆ ವಿಸ್ತರಿಸಿ 6 ಸತಿ ಶಿರೋಮಣಿ ಲೀಲಾ ವತಿಯು ತನ್ನ ಮಂದಿರದಿ || ಪತಿ ಕರುಣದಿ ಗರ್ಭ ವತಿ ತಾನಾದಳಾಕ್ಷಣದಿ 7 ಹತ್ತನೆ ಮಾಸದ ಉತ್ತಮ ಪುತ್ರಿಯ ಪೆತ್ತಳು ಆ ನಾರಿ ತಾನೂ || ಅತ್ಯಂತ ಸನ್ಮುದ ಚಿತ್ತನಾಗಿ ಸಾಧು ಮರ್ತನು ಹರಿವ್ರತವನ್ನು 8 ಸತಿ ಲೀಲಾವತಿ ತನ್ನ ಪತಿಗಭಿವಂದಿಸಿ ನಿಂದು || ಅತಿ ಭಕ್ತಿಯಿಂದಲಿ ಕಥಿಸಿಕೊಂಡಳಲ ಯದು ಪತಿ ವ್ರತ ಮಾಡಬೇಕೆಂದು 9 ಸುದತಿಯ ನುಡಿಕೇಳಿ ಮಧುನಾಮಕ ಸಾಧು ವಿಧಿಸಿದ ಸುತೆ ಕಲಾವತಿಯಾ || ಮದುವೆಯ ಕಾಲದಿ ಉದುಪನರ್ಚಿಪೆನೆಂದು ಮುದದಿಂದ ಪೇಳ್ದನುಪಾಯಾ 10 ಪರಿಪರಿ ಸೌಖ್ಯದಿಂದಿರುತಿರೆ ವೈಶನ ತರುಳೆಗೆ ಪೂರ್ಣಯೌವನವು | ಬರಲು ಮಾಡಿದ ತಕ್ಕವರ ತಂದು ಲಗ್ನವ ಮರೆತು ಬಿಟ್ಟನು ಹರಿವ್ರತವಾ 11 ಶ್ರೀಮಂತವೈಶ್ಯನು ಪ್ರೇಮದಿಂದಲಿ ತನ್ನ ಜಾಮಾತನೊಡನೆ ವ್ಯಾಪಾರಾ ನೇಮದಿ ಗೈಯಲು ಗ್ರಾಮ ತ್ಯಜಿಸಿ ಪೋದಾ ಆ ಮಹಾಪುರ ರತ್ನಸಾರಾ&ಟಿbs
--------------
ಶಾಮಸುಂದರ ವಿಠಲ
ಪರಮ ಪುರುಷ ಹರಿ ಗೋವಿಂದ - ಸಿರಿವರ ನಾರಾಯಣ ಗೋವಿಂದ ಪ ನಿಶೆವೆಸರಸುರನ ಉಸಿರ ತೊಲಗಿಸಿದೆಕುಸುಮ ಶರನ ಪಿತ ಗೋವಿಂದವಸು ಪೂರಿತ ಶ್ರುತಿ ಮಸುಳಿಸದೆ ತಂದೆಬಿಸಜ ಸಂಭವನಯ್ಯ ಗೋವಿಂದ 1 ಮಂದರ ಸಿರಿ ಗತವಾಗದ ಮುನ್ನಕ್ಷಿತಿ ಪೆತ್ತನಯ್ಯ ಗೋವಿಂದ 2 ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ ಗೋವಿಂದಆತನೊಡನೆ ಕಾದಾತನ ಗೆಲಿದು ಮ-ಹೀತಳವನು ತಂದೆ ಗೋವಿಂದ 3 ದುರುಳಾಸುರನ ನಡುಗರುಳ ಮಾಲೆ ಮುಂ-ಗೊರಳೊಳು ಧರಿಸಿದೆ ಗೋವಿಂದಗರಳ ಕೊರಳನು ಬೆರಳೆತ್ತಿ ಪೊಗಳಲುತರಳಗೊಲಿದೆ ನೀ ಗೋವಿಂದ4 ವಾಮನನಾಗಿ ನಿಸ್ಸೀಮ ಬಲಿಯ ಕೈಯಭೂಮಿಯನಳೆಕೊಂಡೆ ಗೋವಿಂದತಾಮರಸ ಪದದಿ ಕನಕ ಗರ್ಭಯೋಗವ್ಯೋಮ ಗಂಗೆಯ ತಂದೆ ಗೋವಿಂದ 5 ಸುರ ಪಶುವಿಗೆ ಋಷಿಯನು ಕೊಂದನ ಬಹುಕರ ಬಲ ಮುರಿದೆಯೊ ಗೋವಿಂದತರ ಹರಿಸದೆ ವಸುಧೆಯ ಒಡೆತನ ಭೂಸುರರಿಗೆ ನೀಡಿದೆ ಗೋವಿಂದ 6 ತ್ರಿಣಯನ ತಾತ್ಪರ್ಯ ರಾವಣನ ಶಿರರಣದೊಳುರುಳಿಸಿದೆ ಗೋವಿಂದಕ್ಷಣಮೆಣಿಸದೆ ಸದ್ಗುಣವಂತ ವಿಭೀ-ಷಣಗಭಯವಿತ್ತೆ ಗೋವಿಂದ 7 ಕ್ರತು ಸಿರಿ ಭೂಭಾರೋತ್ತಾರಣ ಬಲಯುತ ಗೋವಿಂದ 8 ಕಥೆಯನು ನಿರ್ಮಿಸಿ ಪತಿವ್ರತೆಯರ ಘನವ್ರತಗಳ ಕೆಡಿಸಿದೆ ಗೋವಿಂದಜತೆಯಗಲದ ಪುರ ತ್ರಿತಯ ಗೆಲಿದು ದೇ-ವತೆಗಳ ಸಲಹಿದೆ ಗೋವಿಂದ 9 ಜಾಜಿಯ ಮರಕತ ತೇಜಿಯನೇರಿ ವಿ-ರಾಜಿಪ ರಾವುತ ಗೋವಿಂದಸೂಜಿಯ ಬೆನ್ನೊಳು ರಾಜಿಪ ತೆರದಿ ಸ-ಹಜರೊಳಡಗಿರ್ಪ ಗೋವಿಂದ 10 ಮೇದಿನಿಗೋಸುಗ ಕಾದಿ ಕಲಹದಿ ವಿ-ರೋಧಿಗಳ ಕೊಂದೆ ಗೋವಿಂದಸಾಧುಗಳಿಗೆ ಸುಖವೀಯುವ ಬಾಡದಶ್ರೀಧರ ಕೇಶವ ಗೋವಿಂದ 11
--------------
ಕನಕದಾಸ
ಪರಾಕು ಸಜ್ಜನಪ್ರೇಮಿ ಪ. ಕರುಣಾಕರ ಕೋಟಿದಿವಾಕರ ಪೂರ್ಣ ಸುಧಾ- ಕರ ಮಕುಟಲಲಾಮ ಅ.ಪ. ಭೋಗೀಂದ್ರ ಫಣಾಮಣಿಮಂಡನ ಸ- ದ್ಯೋಗೀಂದ್ರ ಮನೋವಿಶ್ರಾಮಿ ಭಾಗೀರಥಿ ಸುತರಂಗೊತ್ತುಂಗ ಮಹಾ ಸಾಗರ ತೇ ನೌಮಿ 1 ಕೇವಲ ಪಾಪಿ ಸದಾವ್ರತಹೀನನ ಕಾವುದು ಗೋಪತಿಗಾಮಿ ನೀನೊಲಿದರೆ ಮತ್ತಾವುದು ಭಯ ಮಹಾ- ದೇವ ವಶೀಕೃತಕಾಮಿ 2 ಲಕ್ಷ್ಮೀನಾರಾಯಣದಾಸಾರ್ಯ ಮ- ಹೋಕ್ಷಧ್ವಜ ಸುರಸುಕ್ಷೇಮಿ ದಕ್ಷಾಧ್ವರಹರ ವರಪರಮೇಶ ಮು- ಮುಕ್ಷುಜನಾಂತರ್ಯಾಮಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪರಿಭವ ತಾಪಹರಣ ಪ ದಯದಿ ಯುವತಿಯಕುಲ ಉದ್ಧಾರಣ ಜವದಿ ಕರಿಧ್ರುವಬಂಧಮೋಚನ ಯುವತಿಗಕ್ಷಯವಿತ್ತು ಒಲಿದು ಹಯವ ಪಿಡಿದು ರಥವ ನಡೆಸಿದ ಭುವನ ಬ್ರಹ್ಮಾಂಡ ಸೂತ್ರಧಾರಕ ಶಿವಸುರಾರ್ಚಿತ ಪೊರೆ ಸುಹೃದಯ ಅ.ಪ ಪತಿತಪಾವನ ಶ್ರೀಶಕೇಶವ ಸಹಸ್ರಾಕ್ಷಶಯನ ಮಾಧವ ಭೋಗ ಗರುಡಗಮನ ಪತಿತಪಾವನೆ ಇಂದಿರೆಂiÀi ಜೀವ ಜಗದಾದಿದೇವ ಯತಿತತಿನುತ ಪವಿತ್ರನಾಮ ಕ್ಷಿತಿಸುತೆಪತಿ ಪವಿತ್ರ ಮಹಿಮ ಸತಿಯರವ್ರತಹರ ಜಿತಮಹಮುಪ್ಪುರ ಕೃತ್ರಿಮ ಮುರಹರ ಮಥನಸಾಗರ ನುತಿಪರ್ಹಿತಕರ ಸುಪಥರಾಧಾರ ಹಿತದಿ ಪೊರೆಯೆನ್ನ ಕರುಣಾನಿಕರ 1 ನಿರುತ ಜನರ ಕಲ್ಪತರು ನೀನು ಭಯಭಕ್ತಿಯಿಂದ ಸ್ಮರಿಸಿ ಬೇಡ್ವರ ಪರಮಸುರಧೇನು ಸುರಗಂಗಾಜನಕ ಶರಣು ಸಜ್ಜನರಮಿತ ದಯಾ ಪರನು ವಿಶ್ವರಕ್ಷಕನು ಮರಣರಹಿತ ಮದನತಾತ ಶುಭ ಸಚ್ಚರಿತ ದುರುಳ ಸಂಹರ ಶರಣುಮಂದಾರ ಸುಗುಣರೋದ್ಧಾರ ಶರಣಭಜಕರ ವರಸುಖಕರ ಕರಣಿಸಭವನೆ ತ್ವರಿತ ಸುವರ 2 ಕುಸುಮನಯನ ಸ್ವತಂತ್ರ ಮಹಲೀಲ ದಿವಕೋಟಿ ಪ್ರಭಾಕರ ಕುಸುಮಗಾತ್ರ ಮಹತಂತ್ರ ಮಾಯಜಾಲ ಗೋವರ್ಧನೋದ್ಧಾರ ಕುಸುಮಧರ ಕುರುಕುಜನಕುಲಕಾಲ ಗೋಪಾಲಬಾಲ ಕುಸುಮನಾಭ ಕೌಸ್ತುಭಾಂಬರ ಅಸಮ ತುಲಸಿಮಾಲಾಲಂಕಾರ ಒಸೆದು ದಾಸನ ಪುಸಿಯೆಂದೆನಿಸದೆ ಹಸನುಮತಿಯಿತ್ತು ಪೋಷಿಸನುದಿನ ಎಸೆವ ತವಪಾದ ನಂಬಿ ಮರೆಬಿದ್ದ ಅಸಮದಯಾನಿಧಿ ಮಮ ಶ್ರೀರಾಮ 3
--------------
ರಾಮದಾಸರು
ಪಾತಕ ಪರಿಹಾರ ದನುಜರಕರುಣಕ್ಕೆ ಕಾರಣ ನಂಬೆಲೊ ಮನುಜ ಪ ಗಂಗೆ ಮೊದಲಾದ ತೀರ್ಥಂಗಳೆಣೆಯ ಶ್ರೀ-ರಂಗ ಮೊದಲಾದ ಕ್ಷೇತ್ರವು ಸರಿಯೆ ಉ-ತ್ತುಂಗ ಜಪತಪÀ ಹೋಮಂಗಳೆದುರೆ ಶ್ರೀ-ರಂಗನಾಥನ ದಿನದೊಂದುಪವಾಸಕೆ 1 ಸುಕೃತ ಬೆಳಸುಮುಂದಣ ಮುಕುತಿಗೆ ಕಲ್ಪ ಲತಾಂಕುರಇಂದಿರೇಶನ ದಿನದೊಂದುಪವಾಸಕೆ 2 ರುಕುಮಾಂಗದ ಮೊದಲಾದ ಭಕುತರೆಲ್ಲಸಕಲವ ಬಿಟ್ಟು ಏಕಾದಶಿ ವ್ರತವಭಕುತಿಯಿಂ ಕೂಡಿ ಶ್ರೀಕೃಷ್ಣನ ಮೆಚ್ಚಿಸಿಮುಕುತಿ ಸೂರೆಯಗೊಂಡರೆಂಬುದನರಿಯ 3
--------------
ವ್ಯಾಸರಾಯರು
ಪಾತಕಗೆ ಪರತರದ ಗುರುಬೋಧವ್ಯಾಕೆ ಸೂತಕವ ಬಿಡದವಗೆ ಪರತತ್ವವ್ಯಾಕೆ ಪ ಮಾತುತಪ್ಪಿ ನಡೆಯುವಗೆ ನೀತಿ ವಚನಗಳ್ಯಾಕೆ ಜಾತಿಲ್ಲದವನಿಗೆ ಜ್ಯೋತಿಷ್ಯವ್ಯಾಕೆ ಭೂತಬಡಿದವನಿಗೆ ಭೀತಿಯು ಯಾತಕ್ಕೆ ಆತುರಗೆ ಯಾತಕ್ಕೆ ಕೀರ್ತಿ ಅಪಕೀರ್ತಿ 1 ಮಂಗನಿಗೆ ಮಾಲ್ಯಾಕೆ ಅಂಗನೆಗಧಿಕವ್ಯಾಕೆ ಮುಂಗಾಲಿಲ್ಲದವಳಿಗೆ ಶೃಂಗಾರವ್ಯಾಕೆ ಬಂಗಾರದೊಡವ್ಯಾಕೆ ಕಾಡಡವಿನಿವಾಸಗೆ ಕಂಗಳಿಲ್ಲದವನಿಗೆ ಕರಕನ್ನಡ್ಯಾಕೆ 2 ಪತಿಗಂಜದವಳಿಗೆ ವ್ರತನೇಮಗಳು ಯಾಕೆ ಸತಿಗಂಜಿ ನಡೆಯುವಗೆ ಶಸ್ತ್ರಾಯುಧ್ಯಾಕೆ ಸುತರಿಲ್ಲದವನಿಗೆ ಅತಿಭಾಗ್ಯ ಯಾತಕ್ಕೆ ಮತಿಯಿಲ್ಲದವಗ್ಹರಿಕಥೆಕೀರ್ತನ್ಯಾಕೆ 3 ಮಾನಹೀನನಿಗೆ ಬೇರೆ ಮರಣಬರಲೇಕೆ ಅ ಜ್ಞಾನಿಗ್ಯಾತಕ್ಕೆ ಜಾಣಜನಸಂಗ ಗೋಣೆಹೊರುವವಗ್ಯಾಕೆ ವಾಹನದ ಗೋಷ್ಠಿಯು ಬಾಣ ಬತ್ತಳಿಕ್ಯಾಕೆ ಕರವಿಲ್ಲದವಗೆ 4 ಪರನಿಂದೆ ಮಾಳ್ಪನಿಗೆ ಶರಣತ್ವ ಯಾತಕ್ಕೆ ಕರುಣವಿಲ್ಲದವನಿಗೆ ಗುರುಸೇವೆ ಯಾಕೆ ಧರೆಗಧಿಕ ಶ್ರೀರಾಮಚರಣಸ್ಮರಣಿಲ್ಲದ ಪರಮಪಾಪಿಗೆ ಶಿಷ್ಟನರಜನ್ಮವ್ಯಾಕೆ 5
--------------
ರಾಮದಾಸರು