ಒಟ್ಟು 203 ಕಡೆಗಳಲ್ಲಿ , 69 ದಾಸರು , 192 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ವಮತಕಿನ್ನು ಸರಿಯುಂಟೆ - ಪ್ರ - |ಸಿದ್ಧ ವೈಕುಂಠಕಿಂತಧಿಕ ಮತ್ತುಂಟೆ ? ಪ.ವೃಕ್ಷದೊಳಗೆ ತುಳಸಿ ವೃಕ್ಷಕಧಿಕವಿಲ್ಲ |ಪಕ್ಷಿಯೊಳಗೆ ಗರುಡ ಪಕ್ಷಿಗಿಂತ ಮಿಗಿಲಿಲ್ಲ ||ದಕ್ಷ ಹನುಮಂತನಂತೆ ಲೋಕದೊಳು ಬಂಟರಿಲ್ಲ |ಲಕ್ಷ್ಮಿಗೆ ಸರಿಯಾದ ಸ್ತ್ರೀಯರಿಲ್ಲ - ನೀ ಕೇಳೊ |ಪಕ್ಷಿವಾಹನನೆನಿಪ ದೇವ ತಾ ಬಲ್ಲ 1ಸಕಲ ಮಣಿಗಳಲಿ ಚಿಂತಾಮಣಿಗೆ ಸರಿಯಿಲ್ಲ |ಮಿಕ್ಕ ರತ್ನಮೊಳಗೆ ಮಾಣಿಕತೆ ಮಿಗಿಲಿಲ್ಲ ||ಭಕುತರೊಳಗೆಲ್ಲ ಚಂದ್ರಶೇಖರಗೆ ಸರಿಯಿಲ್ಲ |ಮುಕುತಿ ಸುಖಗಳಿಗೆಣೆಯಿಲ್ಲ - ನೀ ಕೇಳೊ |ಅಖಿಳಬ್ರಹ್ಮಾಂಡನಾಯಕ ತಾ ಬಲ್ಲ2ಪ್ರಥಮಯುಗದಲಿ ಹನುಮ , ದ್ವಿತಿಯ ಯುಗದಲಿ ಭೀಮ |ತೃತಿಯ ಯುಗದಲಿ ಮಧ್ವಾಚಾರ್ಯರೆಂದೆನಿಸಿ ||ಸತುಶಾಸ್ತ್ರ ಕಿದಿರಿಲ್ಲಅಮೃತಕಿಂತಧಿಕವಿಲ್ಲ |ರತಿಪತಿಗಿಂತ ಚೆಲುವರಿಲ್ಲ - ನೀ ಕೇಳೊ |ಕಥೆಯನು ಪುರಂದರವಿಠಲ ತಾ ಬಲ್ಲ 3
--------------
ಪುರಂದರದಾಸರು
ಮಹಾಲಕ್ಷುಮಿಗೆನಿತ್ಯಮಂಗಳಶುಭಮಂಗಳಮಹಾವಿಷ್ಣುವಿನ ರಾಣಿಗೆ ಮಹಾ ಮಂಗಳ ಪ.ಪೂರ್ಣಚಂದ್ರಾರ್ಣವ ಪೂರ್ಣಗುಣಾರ್ಣವಪೂರ್ಣಮನೋರಥದಾಯಕಿಗೆ ಸುಪರ್ಣೇಂದ್ರವಾಹನನರ್ಧಾಂಗಿ ದೇವಿಗೆ ವಿಶ್ವ ನಾಯಕಳಾದ ಜಗನ್ಮಾತೆಗೆ 1ಕರವೀರಪುರದಲ್ಲಿ ನೆರಹಿದ ಭಕ್ತರಕರಕರದಭೀಷ್ಠೆಯ ಕೊಡುವಂದಿಗೆಕರಕಮಲಗಳಲ್ಲಿ ಅಕ್ಷಯಾಮೃತಕುಂಭಧರಿಸಿದ ಜಾಣೆ ಕಲ್ಯಾಣಿಗೆ ನೀಲವೇಣಿಗೆ 2ಶ್ರೀಮದನಂತಾಸನ ವೈಕುಂಠಶ್ರೀ ಮತ್ಯ್ವೇತದ್ವೀಪನಿವಾಸಿನಿಸ್ವಾಮಿ ಪ್ರಸನ್ನವೆಂಕಟನ ಪಟ್ಟದರಾಣಿಕಾಮಿತಾರ್ಥದಾಯಿ ಕಲ್ಯಾಣಿಗೆ 3
--------------
ಪ್ರಸನ್ನವೆಂಕಟದಾಸರು
ಮಾಯೆಯ ಮಹಾ ಸರೋವರದೊಳಗೆ ಕಡೆಹಾಯ್ವರೊಬ್ಬರನು ಕಾಣೆಪಹರಿತಾ ಮುಳುಗಿದ ಹರ ತಾ ಮುಳುಗಿದಹಂಸವಾಹನನು ಮುಳುಗಿದನುಸುರಪತಿಮುಳುಗಿದಶಿಖಿತಾ ಮುಳುಗಿದಸುರಾಸುರರು ತಾ ಮುಳುಗಿದರು1ಸೂರ್ಯನು ಸುಧಾಂಶುಮುಳುಗಿದ ನವಗ್ರಹರೆಲ್ಲ ಮುಳುಗಿದರುಶೂರನು ಮುಳುಗಿದ ಶುಂಠನು ಮುಳುಗಿದ ಸ-ಚರಾಚರರೆಲ್ಲ ಮುಳುಗಿದರು2ಭಾಗ್ಯನು ಮುಳುಗಿದ ಬಡವನು ಮುಳುಗಿದಬಹುದರಿದ್ರನೂ ಮುಳುಗಿದನುಯೋಗ್ಯರು ಚಿದಾನಂದ ಭಕ್ತರುತಾವು ಕಂಡು ಮಾತ್ರ ಮುಳಗಲಿಲ್ಲ3
--------------
ಚಿದಾನಂದ ಅವಧೂತರು
ಯಾದವ ನೀ ಬಾ ಯದುಕುಲನಂದನಮಾಧವಮಧುಸೂದನ ಬಾರೋಪಸೋದರ ಮಾವನ ಮಥುರಿಲಿ ಮಡುಹಿದ ಯಶೋದೆಯ ನಂದನ ನೀ ಬಾರೋ ಅ.ಪಕಣಕಾಲಂದುಗೆ ಗಣಗಣಕೆನುತಲಿತನನನವೇಣುನಾದದಲಿ ||ಚಿಣಿಕೋಲು ಚಂಡು ಬುಗುರಿಯನಾಡುತಸಣ್ಣ ಸಣ್ಣ ಗೋವಳರೊಡಗೂಡಿ 1ಶಂಖ ಚಕ್ರವು ತೋಳಲಿ ಹೊಳೆಯುತಬಿಂಕದ ಗೋವಳ ನೀ ಬಾರೋ ಅಕ- ||ಳಂಕ ಮಹಿಮನೆ ಆದಿನಾರಾಯಣಬೇಕೆಂಬ ಭಕ್ತರಿಗೊಲಿಬಾರೋ 2ಖಗವಾಹನನೆ ಬಗೆ ಬಗೆ ರೂಪನೆ |ನಗೆ ಮೊಗದರಸನೆ ನೀ ಬಾರೋ ||ಜಗದೊಳು ನಿನ್ನಯ ಮಹಿಮೆಯ ಪೊಗಳುವೆ |ಪುರಂದರವಿಠಲ ನೀ ಬಾರೋ3
--------------
ಪುರಂದರದಾಸರು
ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ ಪಪಕ್ಷಿವಾಹನನ ವಕ್ಷಸ್ಥಳದಿರಕ್ಷಿತಳಾದೆ ಸುಲಕ್ಷಣದೇವಿ ಅ.ಪನಿಗಮವೇದ್ಯನ ಗುಣಗಳ ಪೊಗಳುತಲಿಮಿಗೆ ಸಂತೋಷದಲಿಅಗಣಿತಾಶ್ಚರ್ಯನ ಕೊಂಡಾಡುತಲಿಬಗೆ ಬಗೆ ರೂಪದಲಿಖಗವರವಾಹನನಗಧರನಿಗೆ ಪ-ನ್ನಗ ವೇಣಿಯು ಬಗೆ ಬಗೆಯಿಂದರ್ಚಿಸಿಹಗಲಿರುಳೆಡೆ ಬಿಡದಲೆ ಹರಿಯನು ಬಹುಬಗೆಯಲಿ ಸೇವಿಪಭಾಗ್ಯದ ನಿಧಿಯೆ 1ಇಂದಿರೆಶ್ರೀ ಭೂದುರ್ಗಾಂಬ್ರಣಿಯೇ ಸು-ಗಂಧ ಸುಂದರಿಯೆಇಂದುಶೇಖರ ಮೋಹಿಪ ಮೋಹಿನಿಯಸುಂದರವನೆ ಕಂಡುಚಂದಿರಮುಖ ಮುದದಿಂದಲಿ ಶ್ರೀಗೋ-ವಿಂದನು ತಾಳಿದ ಮೋಹಿನಿ ರೂಪವನೆಂದು ಮನದಿ ಆನಂದ ಪಡಲು ಸುರವೃಂದವ ಸ್ತುತಿಸೆ ಮುಕುಂದನ ರಮಣಿಯೆ 2ಕಮಲಾನನೆಕಮಲಾಲಯೆಕಮಲಾಕ್ಷಿಕಮಲೋದ್ಭವೆ ಕಮಲೆಕಮಲಾಸನಪಿತನ ಸತಿಯೆ ಭಾರ್ಗವಿಯೆಕಮಲಾಂಬಿಕೆ ಪಿಡಿದಿಹಕಮಲಪುಷ್ಪಮಾಲೆಯು ಹರುಷದಿ ಶ್ರೀ-ಕಮಲನಾಭ ವಿಠ್ಠಲಗರ್ಪಿಸುತಲಿಕಮಲಪತ್ರದಳಾಕ್ಷಗೆ ನಮಿಸಿ ಸ್ವ-ರಮಣನ ಕರುಣಕೆ ಪಾತ್ರಳೆ ಸುಂದರಿ 3
--------------
ನಿಡಗುರುಕಿ ಜೀವೂಬಾಯಿ
ಲೋಕಪಾಲಕರು96-1ಪೂರ್ಣ ಸುಗುಣಾಂಬೋಧಿಅನಘಲಕ್ಷ್ಮೀರಮಣಜ್ಞಾನಾದಿನಿಖಿಳಸೌಭಾಗ್ಯದನೆ ಸ್ವಾಮಿಅನವರತಸರ್ವ ದಿಕ್ಪಾಲಕರೊಳಿದ್ದು ನೀಎನ್ನ ರಕ್ಷಿಪ ವಿಭುವೆ ಶರಣು ಮಾಂಪಾಹಿಪಇಂದ್ರಾಗ್ನಿ ಯಮ ನಿಯಯತಿ ವರುಣ ವಾಯುಚಂದ್ರ ನಿಧಿಪತಿ ಈಶಾನಫಣಿಬ್ರಹ್ಮಇಂದಿರಾಪತಿ ಸದಾ ನಿಮ್ಮೊಳು ನಿಂತು ಆನಂದ ಸರ್ವೇಷ್ಟಗಳಈವಸ್ಮರಿಪರಿಗೆ1ವಾಮ ಹಸ್ತದಿ ವಜ್ರಬಲ ಕರವು ಅಭಯದವುಹೇಮವರ್ಣನೆ ಸಹಸ್ರಾಕ್ಷಸುರರಾಜಕಾಮಿತಾರ್ಥವನೀವೆ ಐರಾವತಾರೂಢನಮೋ ಶಚೀಪತಿ ಇಂದ್ರ ಶ್ರೀಶಪ್ರಿಯತರನೆ 2ಹೇಮವರ್ಣಾಂಗನೆ ಸಪ್ತಕರ ಸಪ್ತಾರ್ಚಿನಮೋ ಸ್ವಾಹಾಪತಿ ಅಗ್ನಿ ಮೇಷವಾಹನನೆಕಾಮದನೆ ದುರಿತಹನೆ ಹರಿಣೀಶಪ್ರಿಯಕರನೆನಮೋ ಶ್ರುವಾಶಕ್ತ್ಯಾದಿಧರ ಅಭಯಹಸ್ತ 3ಜ್ಞಾನಸುಖಮಯ ವಿಷ್ಣುಯಜÕನಿಗೆ ಪ್ರಿಯತರನೆಕೃಷ್ಣವರ್ಣನೆ ಲೋಕಕರ್ಮಫಲಪ್ರದನೆದಂಡಧರ ಅಭಯದನೆ ಮಹಿಷವಾಹನ ಯಮನೆಎನ್ನ ಮನ್ನಿಸಿಪೊರೆಇಲಾಪತಿಯೆ ಶರಣು4ಅಸುರರಿಗೆ ಭೀಕರ ಕರಾಲ ವಿರೂಪಾಕ್ಷನೆಅಸಿಧರನೆ ಅಭಯದನೆ ಶರಣು ಮಾಂಪಾಹಿನೃಸಿಂಹಪ್ರಿಯತರನೆ ಕಾಳಿಕಾಪತಿ ಊಧ್ರ್ವಕೇಶ ನಿಋಋತಿನೀಲನರವಾಹ ನಮಸ್ತೆ5ಮೀನ ವಡವಕಮಠಕ್ರೋಡನಿಗೆ ಪ್ರಿಯತರನೆಸ್ವರ್ಣವರ್ಣನೆ ವರುಣ ಪದ್ಮಿನೀರಮಣವನಪತಿಯೆ ಮಕರವಾಹನ ಹವಳಭೂಷಣನೆನಿನಗೆ ನಮೋ ಪಾಶಧರ ಅಭಯದನೆಪಾಹಿ6ನಿಯಮನ ಸುಕರ್ತಾ ಶ್ರೀ ಪುಂಡರೀಕಾಕ್ಷನಿಗೆಪ್ರಿಯತರನೆ ಹರಿಣವಾಹನ ಮೋಹಿನೀಶಶ್ಯಾಮವರ್ಣನೆ ವಾಯು ಜಗತ್ ಪ್ರಾಣರೂಪನೆಕಾಯೆನ್ನ ದಯದಿ ಗದಾಪಾಣಿ ಅಭಯದನೆ 7ಸಾರಾತ್ಮ ಹಯಮುಖ ಧನ್ವಂತರಿ ಪ್ರಿಯತರನೆಸೂರಿಜನ ಚಿಂತ್ಯ ನೀ ಸಿತಕಾಂತಿಕಾಯಪೊರೆಎನ್ನ ಅಭಯದನೆ ರೋಹಿಣೀಪತಿಸೋಮಪುರುಟಭೂಷಣ ಸುಖದ ಕುಮುದಸದ್ಮಸ್ಥ 8ಸೌಭಾಗ್ಯ ಸಾರಾತ್ಮ ಶ್ರೀಯಃಪತಿಗೆ ಪ್ರಿಯತರನೆವಿಪರತ್ನನಿಭ ಯಕ್ಷವೈಶ್ರವಣಪಾಹಿಕುಬೇರ ನಿಧಿಪತಿ ಧನಧಾನ್ಯಾಧಿಪತೇ ನಮೊಸೌಭಾಗ್ಯ ಧನ ಧಾನ್ಯ ಸಮೃದ್ಧಿ ಎನಗೀಯೊ 9ಮನುಜವಾಹ್ಯವು ವರವಿಮಾನದಿ ಕುಳಿತಿಹೆಅನಲಾಕ್ಷಶಂಖಗದಾಧರ ನಮೋಕಿರೀಟಿಎನ್ನ ತಪ್ಪುಗಳನ್ನು ಮನ್ನಿಸಿ ಹರಿಭಕ್ತಿಧನಧಾನ್ಯ ಆರೋಗ್ಯ ಸೌಂದರ್ಯವೀಯೊ 10ನಿರ್ದೋಷಸುಖಮಯ ಜಯೇಶನಿಗೆ ಪ್ರಿಯತರನೆನೀ ದಯದಿ ಸಲಹೆನ್ನ ಈಶಾನಶೂಲಿಸದಾಶಿವನೆ ಭಕ್ತರಿಂ ಅಚ್ಛಿನ್ನ ಸೇವ್ಯನೆಸದಾಅಭಯಎನಗಿತ್ತು ಪೊರೆಯೊ ಗೌರೀಶ11ಆನಂದರೂಪ ಸಂಕರ್ಷಣ ಅನಂತನಿಗೆಅನಂತ ನೀ ಪ್ರಿಯತರನು ಶುಕ್ಲವರ್ಣನಿನ್ನಸತಿವಾರುಣೀಸಮೇತ ಅಭಯದನಾಗಿಎನ್ನಪೊರೆಕೃಷ್ಟಿಧರ ನಮೋ ನೀಲವಾಸ12ಜಗದೀಶ ಭೂರಮಣ ಕೇಶವ ಸುಪ್ರಿಯತಮನೆಜಗದಾದ್ಯ ಬ್ರಹ್ಮ ಸರಸ್ವತೀಸಮೇತಖಡ್ಗಧರ ಅಭಯದನೆ ನಮೋ ರಕ್ತವರ್ಣನೆಮುಗಿದುಕರಶರಣಾದೆಪೊರೆಪಿತಾಮಹನೆ13ಐಶ್ವರ್ಯ ಆಯುಷ್ಯ ನೀತಿ ಜಯ ಅಪಿಪಾಸಪಾವಿತ್ರ್ಯ ಸುಖವಿತ್ತಜ್ಞಾನವಿಜ್ಞಾನಈವೋರು ಇವು ಸರ್ವ ಶ್ರವಣ ಪಠಣವ ಮಾಡೆವಿಶ್ರವ ಕಾಶ್ಯಪ ಲೋಕಪಾಲಕರು ದಯದಿ 14ಇಂದ್ರಾಗ್ನಿ ಯಮ ನಿಋಋತಿ ವರುಣ ಪ್ರವಹಸ್ಥಚಂದ್ರ ವೈಶ್ರವಣ ಈಶಾನ ಅನಂತಸ್ಥಮಂದಜಾಸನಪಿತ ಪ್ರಸನ್ನ ಶ್ರೀನಿವಾಸನುಕುಂದದ ಸೌಭಾಗ್ಯವನುಈವಕರುಣಾಳು15
--------------
ಪ್ರಸನ್ನ ಶ್ರೀನಿವಾಸದಾಸರು
ವನದೊಳಗತ್ರಿಯ ಮುನಿವರತರುಣಿಘನಪತಿವ್ರತೆಯೆಂದೆನಿಸಿದಳಾ ರಮಣಿಮನವ ಶೋಧಿಸೆ ಬಂದ ತ್ರಿಮೂರ್ತಿಗಳ ಕಂಡುಅನಸೂಯೆ ತನಯರೆಂದೆನಿಸಿ ತೂಗಿದಳೂ ಜೋ ಜೋ1ಜೋಜೋ ಸತ್ಯಲೋಕೇಶ ಬ್ರಹ್ಮನಿಗೆಜೋಜೋ ಹತ್ತಾವತಾರ ವಿಷ್ಣುವಿಗೆಜೋಜೋಮೃತ್ಯುಂಜಯಮೂರ್ತಿಶಂಕರಗೆಜೋ ಎಂದು ಸ್ತನಪಾನ ಗೈಸಿ ತೂಗಿದಳೂ ಜೋಜೋ2ಸೃಷ್ಟಿಕರ್ತನೆ ಜೋಜೋ ಹಂಸವಾಹನನೆಸೃಷ್ಟಿಪಾಲನೆ ಗರುಡವಾಹನನೆನಿಟಿಲನೇತ್ರನೆ ಜೋಜೋ ನಂದಿವಾಹನನೆಂದುರನ್ನ ತೊಟ್ಟಿಲೊಳಿಟ್ಟು ಪಾಡಿ ತೂಗಿದಳೂ ಜೋಜೋ3ವಾರಿಜಾಸನೆ ಜೋಜೋ ವಾಣೀಶ ಜೋಜೋಸಾರಸಾಕ್ಷನೆ ಜೋಜೋ ಸಿರಿಯರಸ ಜೋಜೋಮಾರವೈರಿಯೆ ಜೋಜೋ ಗೌರೀಶ ಜೋಜೋಮೂರು ಮೂರ್ತಿಯೆ ಜೋಯೆಂದೆನುತತೂಗಿದಳೂ ಜೋಜೋ4ಸುಂದರಮೂರ್ತಿಚತುರಾನನಜೋಜೋಸಿಂಧುಪುರೀಶ ಗೋವಿಂದನೆ ಜೋಜೋಚಂದಿರಧರನೀಲಕಂಧರಜೋಯೆಂದುಚಂದದಿಂದನುಸೂಂiÉು ಪಾಡಿ ತೂಗಿದಳೂ ಜೋಜೋ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ವಾಸವನೆ ಮಾಡಿರೋ ಕಾಶಿಯಲಿ ಪವಾಸವನೆ ಮಾಡಿ ಕಾಶಿಯಲಿ ವಸುಧೆಯ ಜನರು |ಏಸುಜನ್ಮದ ಪಾಪವನೆ ಕಳೆದು ಯಮಪುರಿಯ ||ಹೇಸಿಕೆಯ ರಾಶಿಗಳ ಒದೆದು ಹೆಚ್ಚಳವಾದ |ಮೀಸಲಳಿಯದಪದವಿಸಾರಿರಯ್ಯಅಪಶ್ರೀ ವಿಷ್ಣು ಸಿರಿಸಹಿತ ಗರುಡ ವಾಹನನಾಗಿ |ಜೀವಿಗಳ ಸ್ಥಿತಿಯ ನೋಡುತ ಬರಲು ಮರುಗಿ ಆ |ದೇವಿ ಬಿನ್ನಹ ಮಾಡಲಾಗ ಕರುಣಾಕರನು |ಭಾವಿಸಿದನೀ ಕೃತಿಯನು |ದೇವತ್ರಿಧಾಮನವ ದಿವ್ಯ ವೈಕುಂಠದೊಳು |ಪಾವನಸ್ಥಳವಿದೆಂದೊರೆದ ಧರೆಯೊಳು ಕಾಶಿ |ಶ್ರೀ ವಾರಣಾಸಿ ಪಂಚಕ್ರೋಶಮಿತಿಯಲ್ಲಿಆ ವಿಪುಳ ಮಣಿಕರಣಿಕೆ 1ಬಲಿಯ ಬಳಿ ಮೂರಡಿಯ ಭೂದಾನವನೆ ಬೇಡಿ |ನೆಲನಳೆಯ ಈರಡಿಗೆ ಸಾಲದಿರೆ ಬ್ರಹ್ಮಾಂಡ |ಬಲಪದದ ನಖದಿ ಸೀಳಲ್ಕೆ ಬಹಿರಾವರಣ |ಜಲಸುರಿಯೆ ಅಂಗುಟದಲಿ ||ಸಲೆ ತೀರ್ಥವೆಂದಜ ಕಮಂಡಲದೊಳಗೆ ಧರಿಸಿ |ತೊಳೆದನಾ ಚರಣಗಳ ಬಲು ಗಂಗೆ ಬರಲು ಜಡೆ - |ತಲೆಯೊಳಿಟ್ಟಾ ಶಿವ ಭಗೀರಥನ ಯತ್ನದಿಂ |ದಿಳಿದಿಹಳು ಕಾಶಿಯಲ್ಲಿ 2ಪರಮನಿರ್ಮಲ ಶುಭ್ರತರದ ಭಾಗೀರಥಿಯನಿರಜೆ ನೀಲಾಭೆ ಯಮುನೆಯ ಮಧ್ಯದಲಿ ಕಾರ್ತ |ಸ್ವರವರ್ಣದಿಂದಲ್ಲಿ ಗುಪ್ತಗಾಮಿನಿಯಾದ |ಸರಸತಿಯ ಸಂಗಮದಲಿ ||ಮೆರೆಯುವ ತ್ರಿವೇಣಿಯೆನಿಸುವ ತೀರದಲ್ಲಿ ವಟ - |ತರುಛಾಯೆಯಲ್ಲಿಹುದು ದೇವ ಋಷಿ - ಮೌನೀಗಣ 3
--------------
ಪುರಂದರದಾಸರು
ಶರಣು ಶರಣು ನಿನಗೆಂಬೆನೊ ವಿಠಲಎರವುಮಾಡದೆಯೆನ್ನ ಕಾಯೊ ವಿಠಲಪಅರಸಿ ರುಕ್ಮಿಣಿಗೆ ನೀನೇನೆಂದೆಯೊ ವಿಠಲಸರಸಿಜಸಂಭವಸನ್ನುತವಿಠಲ ||ಬಿರುದಿನ ಶಂಖವ ಪಿಡಿದೆಯೊ ವಿಠಲಅರಿತು ಇಟ್ಟಿಗೆಯ ಮೇಲೆ ನಿಂತೆಯೊ ವಿಠಲ 1ಶಶಿಮುಖಿಗೋಪಿಯರ ರಾಜನೆ ವಿಠಲಕುಶಲದಿ ಗಜುಗವನಾಡಿದೆ ವಿಠಲ ||ದಶರಥನಂದನ ರಾಮನೆ ವಿಠಲಕುಸುಮಬಾಣನಯ್ಯ ಕಾಯೊ ನೀ ವಿಠಲ2ಕಂಡೆ ಗೋಪುರದ ವೆಂಕಟನೆ ವಿಠಲಅಂಡಜಾಧಿಪ ವಾಹನನೆ ವಿಠಲ ||ಪಂಡರಿಕ್ಷೇತ್ರದ ಪಾಲನೆ ವಿಠಲಪುಂಡರೀಕವರದಪುರಂದರವಿಠಲ3
--------------
ಪುರಂದರದಾಸರು
ಶರಣು ಶರಣು ವಿನಾಯಕಬಟ್ಟ ಮುತ್ತಿನ ಪದಕ ಹಾರನೆ ದಿವ್ಯಬಾಹು ಚತುಷ್ಕನೆಪಕ್ಷಿ ವಾಹನನಾದಪುರಂದರವಿಠಲನ ನಿಜದಾಸನೆ3
--------------
ಪುರಂದರದಾಸರು
ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ ಶಿವನಿಂದ್ಯ ಗೈವಿರಿಪಬ್ರಹ್ಮ ಸುಜ್ಞಾನದಿ ಹರಿಹರರಾರೆಂಬಮರ್ಮವರಿತು ಧರ್ಮಾಧರ್ಮ ಯೋಚಿಸದೀಗಾಅ.ಪಗರುಡವಾಹನನು ಶ್ರೀವರನು ನೋಡಿಉರಗಭೂಷಣನು ಗೌರೀಶ್ವರಗೂಗರುಡೋರಗರ ದ್ವೇಷ ಹರಿಹರರೊಳಗುಂಟೆಎರಡು ಮೂರ್ತಿಗಳೇಕ ರೂಪವೆಂದರಿಯಾದೆ1ಸ್ಮರನ ತಾತನು ನಾರಾಯಣನುಕೇಳಿಸ್ಮರನ ವೈರಿಯು ತ್ರಿಗಣೇಶ್ವರನುಹರಿನಿಂದನೆ ಶಿವ ಶಿರದಿ ತಾನ್ ಧರಿಸಿದಹರನ ಲಿಂಗವನಿತ್ಯಪೂಜಿಸಿ ನಮಿಸುವಾ2ಕ್ಷೀರಾಬ್ಧಿ ವಿಷ್ಣುಗೆಸತಿಗೃಹವೊ ಶಿವನನಾರೀ ಮಂದಿರ ಹಿಮಾಲಯವೂನಾರೀ ರಮೆಯ ಹೃದಯದಿ ಧರಿಸಿದವಿಷ್ಣುಮಾರನಂತಕ ಉಮೆಗಿತ್ತನರ್ಧಾಂಗವ3ಬಲಿಯೊಳ್ ಬಾಗಿಲ ಕಾಯ್ದ ಹರಿಯೂ ಬಾಣಗೊಲಿದು ದ್ವಾರದಿ ನಿಂತ ಹರನೂಗೆಲಿದು ತಾ ಅಜಾಮಿಳನ ಸಲಹಿದ ವಿಷ್ಣುಒಲಿದು ಮಾರ್ಕಾಂಡೆಗಂತಕನ ಮರ್ದಿಸೆ ಶಿವ4ಚೋರನೆನ್ನುವಿರಿ ಕೇಶವನ ಬಲೋ-ತ್ಕಾರಿ ಎಂಬಿರಿ ಪರಮೇಶ್ವರನಾನಿರ್ವಾಣಿಬೌದ್ಧನುಶರ್ವದಿಗಂಬರಹರಿಯು ಜಾರನು ಜಗಪೀಠ ಶಂಕರಗೆಂದು5ರುದ್ರಾಕ್ಷಿ ಭಸ್ಮಲೇಪನವು ಶಿವಗೆಮುದ್ರೆಯು ತುಳಸಿಮಣಿ ಸರವುಊಧ್ರ್ವ ಪೌಂಡ್ರಕಗೋಪಿಕೃಷ್ಣಾಜಿನಾಸನರುದ್ರ ಜಡೆಯ ಪಠಿಸು ವ್ಯಾಘ್ರ ಚರ್ಮದಿ ಕುಳಿತು6ಸ್ಮಾರ್ತರ್ ವೈಷ್ಣವರು ಮತ್ಸರದೆ ದ್ವಯಮೂರ್ತಿಯೊಳ್ ಸಮದೆ ಯೋಚಿಸದೇವ್ಯರ್ಥ ಕೆಡುವಿರಿ ಗೋವಿಂದನ ದಾಸರುಸ್ವಾರ್ಥವಾಗದು ಕಾರ್ಯ ಹರನ ಭಕ್ತರುಕೇಳಿ7
--------------
ಗೋವಿಂದದಾಸ
ಹರಿಹರಿಧ್ಯಾನಿಸೊ ಲಕ್ಷ್ಮೀವರನ ಧ್ಯಾನಿಸೊಪಉರಗಶಯನನಾಗಿಘೋರಶರಧಿಯನ್ನು ಮಧಿಸಿರುವಸುರರಿಗಮೃತವೆರೆದ ನಮ್ಮ ಗರುಡಗಮನ ತಾನುಅ.ಪದಂಡಧರಗೆ ಸಿಲುಕಿ ನರಕ ಕೊಂಡದಲ್ಲಿ ಮುಳುಗಲ್ಯಾಕೆಪುಂಡರೀಕನಯನ ಪಾಂಡುರಂಗನೆನ್ನದೇಶುಂಡಲಾಪುರಾದಿ ಪಾಲ ಪಾಂಡುಪುತ್ರ ಧರ್ಮರಾಯಕಂಡು ನಮಿಸಿ ಪೂಜೆಗೈದ ಅಂಡಜವಾಹನನೆಂದು1ಬಾಯಬಡಿಕನಾಗಿ ಸರ್ವ ನ್ಯಾಯ ತಪ್ಪಿ ಮಾತನಾಡಿಕಾಯಬೆಳೆಸಿ ತಿರುಗಿ ಬಂದೆ ಸಾಯಲಾ ಕಥೆವಾಯುತನಯ ವಂದ್ಯಚರಣಕಾಯಜಛೆಂದೆರಗಿದವಗೆಆಯುಧವರೇಣ್ಯ ಸರ್ವಸಹಾಯವ ಮಾಡುವಾ2ಕಂದ ಅಬಲ ವೃದ್ಧರೆಂದು ಬಂಧು ಜನರು ಭಾಗ ಕಿರಿದುಕಂದುಕುಂದುರೋಗಿ ಸ್ತ್ರೀಯರೆಂದು ಭೇದವೊಇಂದಿರೇಶಗಿಲ್ಲ ನರರು ಒಂದೇ ಮನದಿ ಧ್ಯಾನಿಸಿದರೆಸುಂದರಾಂಗಮೂರ್ತಿಗೋವಿಂದ ಪೊರೆಯುವಾ3
--------------
ಗೋವಿಂದದಾಸ