ಒಟ್ಟು 297 ಕಡೆಗಳಲ್ಲಿ , 67 ದಾಸರು , 273 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸುದೇವ ನಿನ್ನ ಮರ್ಮಕರ್ಮಂಗಳದೇಶದೇಶದಲ್ಲಿ ಪ್ರಕಟಿಸಲೊ ಪ ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದೀಯೊ ಅ.ಪ. ತರಳತನದಲಿದ್ದು ದುರುಳನಾಗಿ ಬಂದುಒರಳಿಗೆ ಕಟ್ಟಿಸಿಕೊಂಡುದನುತುರುವ ಕಾಯಲಿ ಹೋಗಿ ಕಲ್ಲಿಯೋಗರವನುಗೊಲ್ಲರ ಕೂಡೆ ನೀ ಉಂಡುದನುನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯಅರಿಯದಂತೆ ಕದ್ದು ಮೆದ್ದುದನುಕೇಳಿಸಿದೆಯಾದರೆ ಒದರುವೆ ಎಲೊ ನರ -ಹರಿ ಎನ್ನ ಬಾಯಿಗೆ ಬಂದುದನು 1 ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿಬೆಟ್ಟವ ಪೊತ್ತದ್ದು ಹೇಳಲೊಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿಹೊಟ್ಟೆಯ ಹೊರೆದದ್ದು ಹೇಳಲೊದುಷ್ಟ ಹಾವಿನ ಹೆಡೆಯನು ತುಳಿದಾಡಿದದುಷ್ಟತನವನು ಹೇಳಲೊನೆಟ್ಟುನೆ ಅಂಬರಕೆತ್ತಿದನ ಹೊಯ್ದುಹಿಟ್ಟುಕಟ್ಟಿಟ್ಟುದ ಹೇಳಲೊ 2 ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟಬೆಡಗತನವನಿಲ್ಲಿ ಹೇಳಲೊಹಿಡಿಯ ಬಂದ ಕಾಲಯವನಿಗಂಜಿ ಕಲ್ಲಪಡೆಯ ಹೊದ್ದುದ ಹೇಳಲೊಮಡಿದ ಮಗನ ಗುರುವಿಗೆ ಕೊಡಬೇಕೆಂಬಸಡಗರತನವಿಲ್ಲಿ ಹೇಳೆಲೊಮಡದಿ ಮಾತಿಗೆ ಪೋಗಿ ನೀ ಪಾರಿಜಾತವತಡೆಯದೆ ತಂದದ್ದು ಹೇಳಲೊ 3 ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲಮಾನವ ಕೊಂಡದ್ದು ಹೇಳಲೊತಾನಾಗಿ ಮೊಲೆಯನೂಡಿಸ ಬಂದವಳನ್ನುಪ್ರಾಣವ ಕೊಂಡದ್ದು ಹೇಳಲೊಕಾನನದೊಳು ತುರುವಿಂಡುಗಳನು ಕಾಯ್ದಹೀನತನವನಿಲ್ಲಿ ಹೇಳಲೊಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯಹಾನಿಯ ಮಾಡಿದ್ದು ಹೇಳಲೊ 4 ಧರಣಿಮಗನ ಕೊಂದು ತರುಣಿಯರನುದುರುಳತನವನಿಲ್ಲಿ ಹೇಳಲೊಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿಶರಧಿಯ ಪೊಕ್ಕದ್ದು ಹೇಳಲೊಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿಸ್ಥಿರವಾಗಿ ನಿಂತದ್ದು ಹೇಳಲೊಶರಣಾಗತರ ಕಾವ ರಂಗವಿಠಲನ್ನಪರಮ ದಯಾಳೆಂದು ಹೇಳಲೊ 5
--------------
ಶ್ರೀಪಾದರಾಜರು
ವಿಷ್ಣುಶತಕ ಶಿರಿದೇವಿ ಹೃತ್ಕುಮುದ ಚಂದ್ರಮನೆ ಕರುಣಾರ್ಣವಾಗಣಿತ ಸದ್ಗುಣನೇ ಭಂಜನ ಮುರಾಂತಕನೇ ಪರಮಾತ್ಮ ಪಾಲಿಸು ಪರಾತ್ಪರನೇ 1 ಕಮಲಾಸನಾದ್ರಿಜೆ ಮನೋಹರ ಮು ಖ್ಯಮರಾಳಿಯಂ ಭಕುತಿಯಿಂ ಬಲಗೊಂಡು ಮ- ಹಾತ್ಮರಾದ ಗುರುಪಾದಕೆ ನಾಂ ನಮಿಸೀ ಪ್ರಬಂಧವನು ಹೇಳುತಿಹೇಂ2 ನೂರಾದ ಪದ್ಯಗಳೊಳಾಂ ಸಕಲಂ ಧಾರಾಳವಾಗಿ ತವ ಸನ್ನಿದಿಯೋಳ್ ಸಾರಂಗಳಂ ಗ್ರಹಿಸಿ ಬಿನ್ನಯಿಪೇಂ ಶ್ರಿರಾಮನೀಂ ದಯದಿ ಲಾಲಿಸಿ ಕೇಳ್ 3 ಕವಿತಾ ಧುರೀಣತೆಯು ಬಂದುದು ನಿ_ ನವ ಯುಕ್ತಿ ಚತುರತೆಗಳೊಂದರಿಯೇಂ 4 ಜೀವಕ್ಕೆ ನೀನು ಮಿಗೆ ಚಿತ್ತದಿ ಶ್ರೀ ದೇವೀ ಮನೀಷದೊಳು ಬ್ರಹ್ಮನಿಹಂ ಯಾ ವಿಶ್ವನಾಥ ಸಹ ರುದ್ರ ಮನೋ ಭಾವಂಗಳಿಂಗೊಡೆಯನಾಗಿರುವಂ 5 ಸಲೆ ಹಮ್ಮಿಗಾ ತ್ರಿಪುರ ಸಂಹರನೇ ಉಳಿದಿಂದ್ರಿಯಗಳಿಗೆ ಜಿಷ್ಣುಮುಖರ್ ಒಳಗಿದ್ದು ಒಳ್ಳಿದನು ಕೆಟ್ಟುದನೂ ಬಲವಿತ್ತು ಮಾಡಿಸುವರೈ ಹರಿಯೆ 6 ಜಲಜಾತ್ಮಜಾಭಿಮತ ಬಂಧು ಪಥಂ ಗಳು ಮೂರು ಬಗೆಯು ನೋಡಿದರೆ 7 ಮಿಗೆ ಕರ್ಮಕರ್ಮವು ವಿಕರ್ಮಗಳೂ ಜಗದಲ್ಲಿ ಎಲ್ಲರಿಗು ಮೂಲವಿದೂ ತ್ರಿಗುಣ ಪ್ರಬದ್ಧರಹ ಜೀವಗಣಾ ಖಗರಾಜ ವಾಹನನೆ ಸಾಕ್ಷಿಯು ನೀಂ 8 ಸದಸದ್ವಿವೇಕಾವನು ಕಾಣದೆ ಸ ಚಿದಚಿದ್ವಿಲಕ್ಷಣನು ನೀನೆನದೇ ಮದಗರ್ವದಿಂದ ಮೆರೆದಾಂ ಕೆಡುವೇಂ 9 ಕುಹುಕಾತ್ಮರಾದವರ ಸಂಗದಿ ಬಂ- ದಿಹ ನೋವು ನಾನಕಟ ಬಣ್ಣಿಸೇಂ10 ಅಂತವರ್ಗವಾರ್ವರು ಶರೀರದೊಳಿ ದುರ್‍ವೃತ್ತಿ ಪುಟ್ಟಿಸುತ ಕೊಲ್ಲುತಿಹರ್ ಪರಮಾತ್ಮ ನಿನ್ನವರ ಸೇರಿರುವೇಂ 11 ಮಲಮೂತ್ರ ಕೂಪವಹ ದೇಹವಿದು ಜಲಗುಳ್ಳೆ ಎಂದರಿತಡಂ ಬರಿದೇ ಕಲುಷಾತ್ಮನಾದೆ ಕರಿರಾಜವರದಾ 12 ಹಸನಾಗಿ ತೋರುತಿಹ ದುರ್ವಿಷಯಂ ಬಿಸಿನೀರು ತುಂಬಿರುವ ಬಾವಿಯಿದುಂ ಕುಸುಮಾಸ್ತ್ರನೆಂಬ ಕಡುಗಳ್ಳನು ತಾ ನೆಸಗೀ ಪ್ರವಾಹದಲಿ ನೂಕುತಿಹಂ13 ಪಾದ ಪದ್ಮಂಗಳ ನಂಬಿದೆ ವೆಂ- ಮ್ಮವಮಾನ ಮಾನಗಳು ನಿನ್ನದುದೆಂ- ದ್ವ್ಯವಸಾಯವಂತರೆ ಮಹಾತ್ಮಕರೂ 14 ಜನುಮಗಳನೆತ್ತುತಲಿ ಜೀವರು ನಿಂ ನನು ಕಾಂಬ ಯೋಚನೆ ತಿರಸ್ಕರಿಸೀ ಘನ ಕಾಮಭೋಗಗಳಪೇಕ್ಷಿಸಿತಾಂ ಧನಕಾಗಿ ದುರ್ಜನರ ಸೇವಿಸುವರು 15 ಹಿತದಿಂದ ಎಲ್ಲರಿಗೆ ನೀನೆ ಇದಂ ಮತಿಹೀನರಾದವರು ಬಾಹ್ಯರ ನಂ- ಬುತ ದುಃಖದಿಂದಲವಿವೇಕರಹರ್ 16 ಗುಣಶೂನ್ಯ ನೀನೆನುತ ಕೊಂಚ ಜನಂ ಗಣಿಸಲ್ಕಸಾಧ್ಯವಹ ವಾದಗಳಿಂ ಘನ ತರ್ಕದಿಂದ ಅನುವಾದಿಸಿ ದುರ್ ಜನ ಮುಖ್ಯರೆನಿಸುತಿಹರ್ ಭುವಿಯೊಳ್ 17 ಅನುಮಾನವೇ ತಮಗೆ ಮುಖ್ಯವೆನು- ತನುಸಾರಿ ರಾಜಸದಿ ತಾಂ ಮುಳುಗೀ ವನಜಾಕ್ಷ ಕೋರಿಕೆಗಳಿಂ ಭಜಿಪರ್ 18 ಉದರ ಪ್ರಯುಕ್ತ ಪರರಾಶ್ರಯಿಸಿ ಪದ್ಯ ಪದ್ಯ ಪೇಳಿ ಬಹುನೀಚನು ನಾ- ನುದಯಾಸಮುದ್ರರೆಲೆ ನೀವೆನುತೇ ಸುದುರಾತ್ಮರಂ ಪೊಗಳಿ ಕೆಟ್ಟೆನು 19 ಹಿತತತ್ವ ಭಾವದಲಿ ದುರ್ಜನರು ಮತಿವಂತರಂತೆ ಬಹಿಯೋಳ್ ನಟಿಸಿ ಸತಿ ಪುತ್ರ ವಿತ್ತಗಳ ಮೋಹದಲೀ ವ್ಯಥೆಪಟ್ಟು ಬಾಯ್ಬಿಡುತ ನೋಯುತಿಹರ್20 ಮೊದಲಾಗಿ ಎಲ್ಲರನು ಮಾಯದಿ ನಿ- ನ್ನುದ ರಾಖ್ಯ ವಾರಿನಿಧಿಯಿಂದಲಿ ತಾವ್ ಉದಿಸಿರ್ಪರೆಂದುಸುರುಗುಂ ಶ್ರುತಿಗಳ್ 21 ಅನುಮಾನವುಳ್ಳ ಜನಕೆಂದಿಗು ಪಾ- ಮೂರ್ತಿ ನಿನ್ನ ಘನ ಜ್ಞಾನ ಸುಖಂ ತೃಣ ಮಾತ್ರವೂ ಬರದು ಸ್ವಪ್ನದೊಳು ಜನದಲ್ಲಿ ಕೀರ್ತಿ ಬಹಿಯೊಳ್ ಬರಿದೆ 22 ಗುರುಸೇವೆಯಿಂದ ತನುದಂಡಿಸಿ ತಾ ನಿರುತಂ ಸುಶಾಸ್ತ್ರಗಳ ನೋಡುತಲಿ ಸ್ಥಿರ ಚಿತ್ತನಾಗಿ ಶ್ರವಣಾದಿಗಳಿಂ ಹರಿಭಕ್ತರಿಂದ ಕಡೆಸೇರುತಿಹಂ 23 ಕವಿಯಾದವರ್ ನಿರುತವುಂ ಮಿಗೆ ಭಾ- ಗವತಾದಿ ಗ್ರಂಥಗಳ ಸಜ್ಜನರಿಂ ಕಿವಿಯಿಂದ ಕೇಳುವುದಕಂ ಬಹು ಜ- ನ್ಮವು ಪಕ್ವವಾಗಿ ಸಲೆ ಪ್ರಾಪ್ತಿಸುಗುಂ 24 ಹರಿಕೃಷ್ಣ ಕೇಶವ ಮುಕುಂದ ನೃಕೇ- ಸರಿ ವಿಷ್ಣುವಾಮನ ತ್ರಿವಿಕ್ರಮ ಶ್ರೀ ಪದ್ಮನಾಭ ಮಧುಸೂದನ ಹೇ ಪುರಷೋತ್ತಮೌಚ್ಯುತ ಜನಾರ್ದನನೇ 25 ವಸುದೇವ ನಂದನ ಮುರಾಂತಕನೇ ಹೃಷಿಕೇಶ ನಾರೇಯಣ ಮಾಧವನೇ ಪರಿ ಪಾ- ಲಿಸುಪೇಂದ್ರ ಭಕ್ತರ ಅಧೋಕ್ಷಜನೇ 26 ಪರಮಾತ್ಮ ನೀನೆಮಗೆ ಎನ್ನುತನಂ- ಬರು ನಿನ್ನ ತಾಮಸರು ಸತ್ಯವಿದು ನೆರೆ ನೋವಿನಿಂಬಳಲಿ ತಾವ್ ಮಿಗೆ ಸಂ- ಸರಣ ಪ್ರವಾಹದೊಳು ಬೀಳುತಿಹರ್ 27 ದ್ಗುಣದಲ್ಲಿ ದುರ್ಗುಣಗಳೇ ಗಣಿಸಿ ಘನ ಮೋಹ ದುಃಖದೊಳು ಸತತ ನಿ- ನ್ನನು ಕಾಂಬ ಯೋಚನೆಯ ಬಿಟ್ಟಿರುವರ್ 28 ನ್ನನು ನಂಬಿ ನಂಬಿದಲೆ ತಾವ್ ನಿರತಂ- ಘನ ಕಾಮ ಕ್ರೋಧ ಮದ ಮತ್ಸರದಿಂ ಜನದಿಂದ ಯತ್ನವನು ಮಾಡುತಿಹರ್ 29 ದೇವಾದಿದೇವ ದಿವಿ ಭೂಮಿಗಳೋಳ್ ಭಾವ ಪ್ರಭೇದದಲಿ ಧ್ಯಾನಿಪರಿಂ- ಗೀ ವೇಷ್ಟಸಿದ್ಧಿಗಳ ನೀನೆ ಸದಾ 30 ಯೋಗಿ ಜನವಂದಿತ ಸ- ಜ್ಜನಕಲ್ಪವೃಕ್ಷ ಜಗದೇಕ ವಿಭೋ ವನಜಾಕ್ಷ ಇಂದಿರೆಯ ವಲ್ಲಭ ಬ್ರಾ- ಹ್ಮಣ ಪ್ರೀಯ ಭಕ್ತಸುಖದಾಯಕನೇ 31 ರವಿಕೋಟಿತೇಜ ರಮಣೀಯ ಕಥಾ- ತವನಾಮ ಕೀರ್ತನೆಯ ಮಾಳ್ಪರ ಪಾ- ಪವ ನೀನೆ ಓಡಿಸುವುದೇನರಿದೈ 32 ವರಾಹ ನೃಕೇ- ಸರಿ ವಾಮನಾವನಿ ಸುರೋತ್ತಮ ಭಾ- ಸ್ಕರ ವಂಶ ಚಂದ್ರವಸುದೇವಜ ಭಾ ಬುದ್ಧ ಕಲ್ಕ ವಪುಷೇ ನಮಃ 33 ಮುನಿಕರ್ದಮಂಗುದಿಸಿ ತಾಯಿಗೆ ಪಾ ವನ ರಾಜಯೋಗವನು ಬೋಧಿಸಿದೈ ಘನಯೋಗಿವರ್ಯ ಕಪಿಲಾಖ್ಯನೆನಿ- ನ್ನನು ನಂಬಿ ಪ್ರಾರ್ಥಿಸುವೆನಾನನಿಶಂ 34 ರ್ಜುನ ಕಾರ್ತವೀರ್ಯಗುಪದೇಶಿಸಿದೇ ಘನಯೋಗ ಬೋಧೆಯನು ಹೈಹಯರ್ ತಾ ವನುವಾದ ಶಿಷ್ಯರೆಲೆದತ್ತವಿಭೋ 35 ಋಷಭಾಖ್ಯನಾಗಿ ಸುತರಿಂಗೆ ಮಹಾ ಋಷಿಚರ್ಯ ಬೋಧಿಸಲವರ್ ತಿಳಿದು ದಶಯೋಗಿವಂದಧಿಕ ಎಂಬತ್ತು ಭೂ- ಮಿಸುರಕ್ರಿವೃತ್ತಿಯಲಿ ಶೋಭಿಸಿದರ್ 36 ಜಂಭ್ವಾಖ್ಯ ದ್ವೀಪದೊಳು ಖಂಡಗಳಿಂ ಅಂಭೋಜನಾಭ ತವನೇಮದಲೀ 37 ಹರಿ ನೀನೆ ಪುಟ್ಟಿಯದು ಸ್ಥಾಪಿಸಿ ದು ರ್ನರರನ್ನು ಕೊಂದು ಶರಣಾಗತರಂ ಪರಿಪಾಲಿಸುತ್ತಿರುವೆ ಸಂತತವುಂ 38 ಕಲಿಕಾಲವೀಗ ಖಳರೆಲ್ಲರು ಸ- ತ್ಕುಲದಲೆ ಪುಟ್ಟಿ ನೆರೆ ಸಾಧುಗಳಂ ಬಲುಬಾಧಿಸುತ್ತ ದುರಿತಂ ಘಳಿಸೇ ನರಕಂಗಳಲ್ಲಿ ನೆರೆಯಾಗುತಿಹರ್ 39 ಪರಮಾತ್ಮ ತತ್ವದಲಿಯೇ ಮರವು ದುರ್ವಿದ್ಯವಭ್ಯಸಿಪುದಕೆ ಮನವು 40 ಪರರನ್ನು ನೋಡಿಯವರಂತೆ ತಾ ವಿರಬೇಕೆನ್ನುತ್ತಲನಿಶಂ ಬಳಲೀ ಗುರುಯತ್ನಮಾಡಿ ವಿಫಲಾಗಲು ಶ್ರೀ ಹರಿ ನಿನ್ನದೂರುತಿರುವರ್ ದುರುಳರ್41 ಕರ್ಣ ಮುಖರಿಂದಲಿ ಸಂ ಗರದಲ್ಲಿ ಕಾದಿ ಮಡಿದಂ ಬರಿದೇ42 ಜಮದಗ್ನಿ ಪುತ್ರನಿಗೆ ಶಿಷ್ಯನು ಭೀ ಷ್ಮಮಹಾ ಪರಾಕ್ರಮಿಯು ದ್ರೋಣನುತಾಂ ಕಮಲಾಪ್ತಪುತ್ರ ಕಲಿ ಶಲ್ಯ ಮುಖ್ಯರ್ ಭ್ರಮೆಯಿಂದಲನ್ನಕಸುಗಳ್ ತೊರೆದರ್ 43 ಯಮಜಂ ವೃಕೋದರನು ಫಲ್ಗುಣನೂ ಯಮಳರ್ ತವಾಂಫ್ರಿಸ್ಮøತಿಯೇ ಬಲವಾ- ಗಿ ಮಹಾಪದಂಗಳನು ದಾಂಟಿದರೈ ಸುಮಬಾಣನಯ್ಯನೆ ಮಹಾತ್ಮರವರ್ 44 ಹರಿ ನಿನ್ನ ಡಿಂಗರಿಗರಿಗಾಶ್ರಯವೇ ವರಭಾಗ್ಯ ನಿತ್ಯಸುಖವೆನ್ನುತಲೀ ಅರಿದುತ್ತಮರ್ ಬಯಸರೆಂದಿಗು ಪಾ- ಮರರಂತೆ ತುಚ್ಛಗಳ ಸ್ವಪ್ನದೊಳು 45 ಸಲೆ ಚಿನ್ನ ಬೆಳ್ಳಿ ಬೆಲೆ ಹೆಚ್ಚು ಪಟ ಗಳ ಗೃಹಕ್ಷೇತ್ರ ಸುತದಾರ ಧನ- ಗಳ ನಿತ್ಯವೆಂದರಿದು ಲೆಕ್ಕಿಸದೇ ಜಲಜಾಕ್ಷ ನಿನ್ನ ಭಜಿಪರ್ ಸುಜನರ್ 46 ಸುಜನಾಬ್ಧಿ ಚಂದ್ರ ಸುಗುಣಾರ್ಣವ ನೀ ನಿತ್ಯ ನಿರವದ್ಯ ಸ್ವಭಾ ವಜ ಕರ್ಮದಿಂ ಸಕಲ ಪ್ರಾಣಿಗಳೂ ನಿಜಯೋಗ್ಯತೆಯಂತೆ ವರ್ತಿಪುದು 47 ಕರುಣಾನಿಧೇ ಕಮಲಲೋಚನನೆ ಸು- ರರಾಜ ಸೋದರನೆ ಭಾವಜನೈ ಯರಮಾಧಿನಾಥ ಯದುವಂಶ ಭೂ ರಥಾಂಗ ಪಾಣಿಯೆ ಜನಾರ್ದನನೇ 48 ರಘುವಂಶಕೇತು ರವಿಮಂಡಲದೋಳ್ ಭಗವನ್ನಿರಂತರದಿ ನೀನಿರುತೆ ಜಗಕೆಲ್ಲ ಕಾಲದನುಸಾರದಿ ನೀ ನಘನಾಳಿಯಿಂದ ಮಳೆಯಂ ಕೊಡುವೇ 49 ವಿಭುದಾಗ್ರಗಣ್ಯರಹ ಜ್ಞಾನಿಗಳೂ ಶುಭವನ್ನು ಲೋಕಕೆ ಸದಾಚರಿಸಿ ನಭ ಭೂಮಿ ಮಧ್ಯದಲಿ ಕೀರ್ತಿ ಸೌ- ರಭವಾಗಿ ಸ್ಥಾಪಿಸಿ ವಿಮುಕ್ತರಹರ್ 50 ಯೋಗ ಪ್ರವರ್ತನೆಯಲೇ ಸುಖಿಸಿ ರೋಗಾದ್ಯುಪದ್ರಗಳು ಇಲ್ಲದಲೇ ರಾಗಾದಿ ದೋಷಗಳ ಸುಟ್ಟಿರುವರ್ 51 ಮನವಾಕ್ಕು ಕಾಯಗಳೊಳೊಂದೆ ವಿಧಂ ಋಣಮುಖ್ಯ ಸೂತಕಗಳಿಲ್ಲದೆಲೇ ಗುಣವಂತರೆನ್ನಿಸಿಯೇ ಶೋಭಿಸುತಾ ಜನದಲ್ಲಿ ಮೌನದಲಿ ವರ್ತಿಸುವರ್ 52 ನರರೊಳ್ ದಿವೌಕಸರು ಪುಟ್ಟುತಲೀ ಹರಿಭಕ್ತಿಯುಕ್ತರೆನಿಸುತ್ತಲಿಸ- ತ್ವರದಿಂದ ಸಾಧನವ ಮಾಡುತಲೀ<
--------------
ಗುರುರಾಮವಿಠಲ
ವೃಂದಾವನಕೈತಂದನು ಆ-ನಂದದಿಂ ಕ್ಷೀರಾಬ್ಧಿಯಿಂದ ಶ್ರೀಕೃಷ್ಣನು ಪ ತೆತ್ತೀಸರೂಪಿ ದೇವತೆಗಳೋಲೈಸಲುಮುತ್ತಿನ ಚಾಮರಗಳನಿಕ್ಕಲುಮುತ್ತೈದೆಯರೆಲ್ಲಾ ಧವಳವ ಪಾಡಲುಅರ್ಥಿಯಿಂದಿಂದಿರೆ ಸಹಿತ ಶ್ರೀಕೃಷ್ಣನು 1 ದ್ವಾರಾವತಿಯಿದ್ದು ಕ್ಷೀರಸಾಗರವಿದ್ದುಸಾರತರ ಶ್ವೇತದ್ವೀಪವಿರ್ದುಶ್ರೀ ವೃಂದಾವನ ಸುಖಮಂದಿರವೆನುತಲಿಕ್ಷೀರಸಾಗರವಾಸಿಯಾದ ಶ್ರೀಕೃಷ್ಣನು 2 ನಂದಗೋಕುಲವಿದ್ದು ಮಂದರಗಿರಿಯಿದ್ದುಚಂದವಾದ ವೈಕುಂಠಲೋಕವಿದ್ದುವೃಂದಾವನಪತಿಸುಖ ಗೃಹವೆನುತಲಿಇಂದಿರಾದೇವಿಯಿಂ ಸಹಿತ ಶ್ರೀಕೃಷ್ಣನು3 ಸುರದುಂದುಭಿ ದಂಧಣರೆಂದು ಮೊಳಗಲುಸುರರು ಹೂವಿನ ಮಳೆಯನು ಕರೆಯತರುಣ ತುಲಸಿಮಾಲೆಯಲುಗಲಿಂದಿರೆ ಸಹಗರುಡನ ಹೆಗಲಿನಿಂದಿಳಿದು ಶ್ರೀಕೃಷ್ಣನು4 ಉರದ ಕೌಸ್ತುಭರತ್ನ ಥಳಥಳಥಳಿಸಲುಕೊರಳ ವೈಜಯಂತಿಯ ಸರವಲುಗೆಸರಸಿಜ ಭವಮುಖ್ಯ ಸುರರೋಲೈಸಲುಪರಮ ಸಂಭ್ರಮದಿಂದ ಶ್ರೀಕೃಷ್ಣರಾಯನು5
--------------
ಕೆಳದಿ ವೆಂಕಣ್ಣ ಕವಿ
ವೆಂಕಟಾಚಲವಾಸ ಪಂಕಜಪ್ರಿಯಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ ಕಿಂಕರಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿಪರರನನುಸರಿಸುವೆನೆ ಸಿರಿರಮಣನೆ ನಿನ್ನ ಕರುಣೆಯುಳ್ಳೆ ಪರಸಿರಿಯ ಬಯಸುವೆನೆ 1 ಧರಣಿಯನಾಳುವ ದೊರೆಯ ಕುಮಾರನು ತಿರಿಕೆಯ ಬೇಡುವನೆ ಸುರತರುವಿನ ತಂಪುನೆರಳೊಳು ಕುಳಿತು ತಾ ಗರಿಕೆಯನರಸುವನೆ 2 ಸಾರನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪಧೀರನುಕೊಳಚೆಯನೀರಿಗೆಜರಿಯುವನೆ 3 ಕ್ಷೀರಾಬ್ಧಿ ಮಥಿಸಿದ ಶೂರನಿನ್ನವನಿಗೆ ನೀರು ಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದರವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವ ನರನಿಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲು ತಾ ಮಳೆಯೊಳು ನೆನೆಯುವದೆ ಇಳೆಯೊಳು ಪುಲಿಗಿರಿನಿಲಯನ ದಾಸರ ಬಲುಹು ಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶ ನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗಮಗೋಚರ ಕೇಳು ಜಗವ ತೂಗುವನಿಗೆ ಮಗುವತಿ ಘನವಹುದೆ ಜಗದಘಹರಣ ಎನ್ನಘವ ನೀಗಲು ನಿನ್ನ ಬಗೆಗೆ ದುರ್ಘಟವಹುದೆ 8 ಪರಮಾತ್ಮ ಪರಿಪೂರ್ಣ ಪರವಸ್ತು ನೀನೆಂದು ಮರೆಹೊಕ್ಕೆ ಕಾಯೊ ಎನ್ನ ವರಸುಗುಣಾಕರವರದವಿಠಲಪುಲಿಗಿರಿದೊರೆಸುಪ್ರಸನ್ನಾ 9
--------------
ವೆಂಕಟವರದಾರ್ಯರು
ವೆಂಕಟಾಚಲವಾಸ-ಪಂಕಜಪ್ರಿಯ ಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ-ಕಿಂಕರ ಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿ ಪರರನುಸರಿಸುವನೆ ಪರ ಸಿರಿಯ ಬಯಸುವನೆ 1 ತಿರುಕೆಯಬೇಡುವನೆ ಸುರತರುವಿನತಂಪು ನೆರಳೊಳು ಕುಳಿತುತಾ ಗರಿಕೆಯನರಸುವನೆ 2 ನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪ ಧೀರನು ಕೊಳಚೆಯ ನೀರಿಗೆ ಜರಿಯುವನೆ 3 ಕ್ಷೀರಾಬ್ಧಿಮಥಿಸಿದ ಶೂರನಿನ್ನವನಿಗೆ ನೀರುಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣನಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವನರಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲುತಾಮಳೆ ಯೊಳುನೆನೆಯುವುದೆ ಬಲುಹುಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗೆಮಗುವತಿ ಘನವಹುದೆ ದುರ್ಘಟವಹುದೆ 8 ಮೊರೆಹೊಕ್ಕೆ ಕಾಯೊ ಯನ್ನ ವರಸುಗಣಾಕರ ವರದವಿಠಲ ಪುಲಿಗಿರಿ ದೊರೆ ಸುಪ್ರಸನ್ನಾ 9
--------------
ಸರಗೂರು ವೆಂಕಟವರದಾರ್ಯರು
ವೆಂಕಟೇಶ ನಿನ್ನ ನಂಬಿದೆ ಎನ್ನ ಸಂಕಟವನು ಪರಿಹರಿಸಯ್ಯ ನೀನು ಪ ಒಡಲೆಂಬ ಕಡಲೆಡೆಗೊಂಡಿಹ ಹಡಗು ಕಡೆಯ ಕಾಣ ಬಹು ಜಡದಿಂದ ಗುಡುಗು ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು ದಡವ ಸೇರಿಸೊ ಎನ್ನ ಒಡೆಯ ನೀ ಕಡೆಗು 1 ಅಣುರೇಣು ತೃಣಕಾಷ್ಠದೊಳಗಿದ್ದು ನೀನು ಕ್ಷಣ ಕ್ಷಣ ಆರೈವ ಗುಣ ನಿನ್ನದೇನು ಪ್ರಣವ ರೂಪನೇ ನಿನ್ನ ಚರಣಕ್ಕೆ ನಾನು ಮಣಿವೆನು ಮನ್ನಿಸು ವರ ಕಾಮಧೇನು 2 ನಾರಾಯಣ ನರಹರಿ ಜಗನ್ನಾಥ ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ ಸಾರಿದವರ ಸಂಸಾರದ ದಾತ ಮಾರಿದ ಮನವಕೊಂಬರೆ ನೀನೆ ಪ್ರೀತ 3 ಉತ್ತಮವಾದ ಶ್ರೀಶೈಲ ನಿವಾಸ ಭಕ್ತರ ಸಲಹುವ ಬಿರುದುಳ್ಳ ಈಶ ಚಿತ್ತವು ತಿಳಿದೆನ್ನ ಕಾಯೊ ಸರ್ವೇಶ ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ 4 ವರಾಹತಿಮ್ಮಪ್ಪನು ಒಲಿದೆನ್ನ ಕರೆದು ಆರಿದ ಬÁಯೊಳು ಅಮೃತವನೆರೆದು ದೂರವಾಗದೆ ಅಡಿಗಡಿಗೆನ್ನ ಹೊರೆದು ಏರುಗಂಡಪರಾಧ ಎಲ್ಲವ ಮರೆದು 5
--------------
ವರಹತಿಮ್ಮಪ್ಪ
ಶರಣು ಶ್ರೀ ಪಾರ್ವತಿದೇವಿಗೆ ಶರಣು ಶಾಂಭವಿಗೌರಿಗೆ | ನಮ್ಮ ಶರ್ವಾಣಿಗೆ ಪ ಲಂಬ ಕರ್ಣನ ಬಿಂಬಛಿದ್ರನ ಸಂಭ್ರಮದಿ ಪಡೆದಮ್ಮಗೆ ಶಂಬರಾರಿಯ ಅಂಬಿಗಾಹರ ನಂಬಿದಾ ಪಟ್ಟದರಸಿಗೆ 1 ಅಮಿತ ಮಹಿಮಳೆ ಜ್ಯೋತಿ ಆದಿಶಕ್ತಿ ದುರ್ಗಾಂಬೆಗೆ ಹೇಮವರ್ಣ ಭವಾನಿಗೆ 2 ಹೊಡೆವ ಮೃಡಾಣಿಗೆ ಸ್ಮರಿಸದವರನ ಕಾಯ್ವಳೆ 3
--------------
ಹೆನ್ನೆರಂಗದಾಸರು
ಶುಭ ಯೋಗಿ ಪುಂಗಗೆ | ಮಂಗಳಂ ಪಾಪೌಘ ಭಂಗಗೆ | ಮಂಗಳಂ ಯಾಳಗಿಯ ದೊರೆ ರಾಮಲಿಂಗನಿಗೆ ಪ ಮೋದದಲಿ ದತ್ತಾವಧೂತನು ಪೇಳಿದನು ಶ್ರೀಕಪಿಲ ಮುನಿವರ |ಗಾಧಿಯಂ ಮಣಿಚೂಲ ಶೈಲದ ಗುಹದಿ ತಪಮಾಡಿ ||ಮೇದಿನಿಯ ಜನರಿಂಗೆ ಸಹಜದಿ ವೇದ ವೇದಾರ್ಥವನು ಬೋಧಿಸಿ |ಭೇದ ಬುದ್ಧಿಯ ಬಿಡಿಸಿ ಕೃಪೆಯನು ಮಾಡಿ ಪೊರೆ ಎಂದು 1 ಕಪಿಲಮುನಿ ಲಿಂಗಾಂಬಿಕೆಗೆ ತಾ ಸ್ವಪ್ನದಲಿ ಪೇಳಿದನು ನಿಶ್ಚಯ |ಅಪರಿಮಿತ ವರ ಕೊಡುವ ಬೆಟ್ಟದ ರಾಮಲಿಂಗೇಶ ||ತಪವು ಮಾಡಲು ಕೊಡುವ ನೀ ತಪವು ಮಾಡೆಂದು ಪೇಳಿದ |ಗುಪಿತ ಮೂಲವ ತೋರಿ ಬೋಧಿಸಿ ಸುಖವ ಪಡೆ ಎಂದ 2 ಮೊದಲು ಲಿಂಗಾಂಬಿಕೆಯು ಮನದಲಿ ನೆನೆದು ಬೆಟ್ಟದ ರಾಮಲಿಂಗನ | ಪದುಳದಿಂ ಸೇವಾ ಪ್ರದಕ್ಷಿಣೆ ಭಕ್ತಿಭಾವದಲಿ |ಮುದದಿ ಪ್ರಾರ್ಥಿಸೆಗೈದು ಎನ್ನಗೆ ಸುತನ ಕೊಡಬೇಕೆಂದು ಪ್ರಾರ್ಥಿಸೆ | ಸದಮಲಾತ್ಮರಾಮಲಿಂಗನು ಜನಿಸುತಿಹನೆಂದ 3 ಸತಿ ಲಿಂಗಾಂಬೆ ಗರ್ಭದೊಳುಪಾವನಾತ್ಮಕ ಜನಿಸಿ ಬೆಳೆದುದ್ದಾಮ ಆನಂದಾಭ್ಧಿಯೊಳು ಸ- |ದ್ಭಾವದಿಂ ಮಣಿಚೂಲ ಶೈಲದಿ ತಪವನೆಸಗಿದಗೆ 4 ಕೆಲವು ದಿನ ಮಣಿಚೂಲ ಶೈಲದ ಗುಹೆಯೊಳಗೆ ತಪಗೈಯುತಿರೆ ಶ್ರೀಮಲಹರಿಯು ಪ್ರತ್ಯಕ್ಷರೂಪದಿ ಮಂತ್ರ ಬೋಧಿಸಿದ ||ಚೆಲುವ ರಾಮಪ್ಪಯ್ಯ ಮನದಲಿ ಹರುಷವಂ ಕೈಕೊಂಡು ಸಿದ್ಧಿಯಫಲವ ಪಡೆದನು ಮಂತ್ರ ಮಹಯೋಗಾದಿ ಸಿದ್ಧಿಗಳ 5 ಗೌತಮಾನ್ವಯದಲ್ಲಿ ಜನಿಸಿ ಸುಕೀರ್ತಿ-ಪಡೆದಪ್ಪಯ್ಯ ಗುರುವರ |ಮಾತು ಮಾತಿಗೆ ರಾಮಲಿಂಗನ ನೆನೆ ನೆನೆದು ಮನದಿ ||ಸಾತಿಶಯ ಮಣಿಚೂಲ ಶೈಲವ ಸೇರಿ ಕಂಡಿಹ ರಾಮಲಿಂಗನ |ಮಾತು ತಿಳುಹಿಸಿ ಗ್ರಹಕೆ ಕರಕೊಂಡು ಬಂದಿಹಗೆ 6 ಪರಮ ತಾರಕ ಮಂತ್ರ ಕರ್ಣದೊಳೊರೆದ ಗುರು ಅಪ್ಪಯ್ಯ ಮೂರ್ತಿಯ | ಚರಣವನು ಧ್ಯಾನಿಸುತೆ ಮಹಾ ವಾಕ್ಯಾರ್ಥ ಶೋಧಿಸಿದ | ಪರಿಪರಿಯ ವೇದಾರ್ಥವನು ಬಹು ಹರುಷದಿಂ ಶಿಷ್ಯರಿಗೆ ಬೋಧಿಸಿ | ನಿರುತ ಬ್ರಹ್ಮಾಕಾರ ವೃತ್ತಿಯೊಳಿರುವ ಶರಣಂಗೆ 7 ಪಂಚಲಿಂಗವು ಪಂಚ ತೀರ್ಥಗಳುಳ್ಳ ಯಾಳಗಿ ಕ್ಷೇತ್ರದಲಿ ಪ್ರ- |ಪಂಚವನು ಪರಮಾರ್ಥ ಬುದ್ಧಿಯಲಿಂದ ನೆರೆಗೈದು ||ವಂಚನಿಲ್ಲದ ರಾಮಲಿಂಗ ವಿರಂಚಿ ಭಾವದೊಳಿರ್ದು ಜನರಿಗೆಹಂಚಿಕೆಯ ಪೇಳಿದನು ಇಲ್ಲಿಗೆ ಗಂಗೆ ಬರುತಿಹಳು 8 ಇಂದು ವೇದ ರಸೈಕ ಶಕದ ವಿಕಾರಿವತ್ಸರ ದಕ್ಷಿಣಾಯನ |ಛಂದದಾಶ್ವೀನ ಶುದ್ದ ಸಪ್ತಮಿ ಸೌಮ್ಯ ವಾಸರದಿ ||ಸುಂದರದ ಜ್ಯೇಷ್ಠರ್ಕ ವೃಶ್ಚಿಕ ರಾಶಿ ಶುಭದಿನ ತೃತಿಯ ಪ್ರಹರದಿಹೊಂದಿದನು ಸುಸಮಾಧಿ ಸುಖವನು ರಾಮಗುರುವರನು 9 ಸುರರು ಅಂಬರಕೇರಿ ಪುಷ್ಪದ ಮಳೆಯ ಸುರಿದರು ಹರುಷದಿಂದಲಿಪರಮ ವಿಸ್ಮಯವಾಗೆ ಸುರದುಂದುಭಿಯ ಧ್ವನಿಕೇಳಿ || ಹರುಷ ದಿಂದಲಿ ಶಿರವ ನಲಿಯುತ ದೇವ ಗಣಿಕೆಯರು ನೃತ್ಯ ಮಾಡುತ ತರ ತರದಿ ಜಯ ಘೋಷ ಮಾಡುತ ಜನ ಸಹಿತವಾಗಿ 10|| ಜಯ ಜಯತು ಜಯ ನಿರ್ವಿಕಾರಗೆ ಜಯ ಜಯತು ಜಯ ನಿರ್ವಿಶೇಷಗೆ | ಜಯ ಜಯತು ನಿಃಸೀಮ ಪರಮಾನಂದ ರೂಪನಿಗೆ || ಜಯ ಜಯತು ಭಕ್ತಾಭಿಮಾನಿಗೆ ಜಯ ಜಯತು ಮಹ ಸಿದ್ಧ ವರದಗೆ | ಜಯ ಜಯತು ಸಿಂಧಾಪುರದ ಸಖರಾಮ ಗುರುವರಗೆ 11
--------------
ಗುರುರಾಮಲಿಂಗ
ಶ್ರೀ ಗಣಪತಿ ಗಿರಿಜೆ ಪುರಾಂತಕ ಬಾಗಿನಮಿಸುವೆ ಲಕ್ಷುಮಿಗೆ ನಾರಾಯಣಗನು- ರಾಗದಲಿ ವಂದಿಸಿ ಪೇಳುವೆನು 1 ನವರತ್ನಖಚಿತ ಮಂಟಪದಲಿ ನವನವ ಚಿತ್ರಗಳನು ಬರೆಯಿಸಿ ಭವನರಸಿ ಮುಖ್ಯಾ ಮುತ್ತೈದೆಯರು ಹರುಷದಿ ಲಕ್ಷ್ಮೀ ಧವನಡಿಗಳ ಬೇಡಿ ಪ್ರಾರ್ಥಿಸುವರು 2 ಮುತ್ತು ಮಾಣಿದ ಹಸೆಗಳ ಹಾಕಿಸಿ ಪಚ್ಚೆಯ ಮಣಿಗಳ ತಂದಿರಿಸಿ ಮಿತ್ರೇ ಮಹಲಕ್ಷ್ಮಿಯ ರಮಣೆಗೆ ಅಕ್ಷತೆಯನು ತಳಿದು ವತ್ತೀದಾರೆಣ್ಣೆ ವಧೂವರರಿಗೆ 3 ಅಂಕಿತವಾಗಳವಡಿಸಿ ಪಣೆಗೆ ಪಂಕಜಾನನೆಯರು ವೀಳ್ಯವನು ಕರದಲಿಕೊಟ್ಟು ವೆಂಕಟಾಗೆಣ್ಣೆ ವತ್ತೀದಾರು 4 ನಲ್ಲೆಯರೊತ್ತಲು ನಸುನಗುತಲಿ ಚಲ್ವಾಗುರುರಾಮವಿಠಲಗೆ ಹರಸಿದರು ಸುರ ರೆಲ್ಲ ಪೂಮಳೆಯ ಕರೆದಾರು 5
--------------
ಗುರುರಾಮವಿಠಲ
ಶ್ರೀ ಗುರು ಮೂರ್ತಿಯನು ನಂಬಿ ಧ್ಯಾನಿಸಿ ಜನರು | ನೀಗಿ ಚಂಚಲ ಚಿತ್ತದಾ ಭಾಗವತ ಧರ್ಮದಿಂದರ್ಚಿಸಲು ಕರುಣ ಮಳೆ | ಭವ ಪಾಶದೆಶೆಯಿಂದ ಪ ಎಳೆಯ ಮಾದಳಿರ ಸೋಲಿಸುವ ಮೃದುತರ ಬೆರಳ ನಖ ಚಲುವ ಪಾದಾ | ನಳ ನಳಿಪ ಪವಳ ಮಣಿಯಂತೆ ಹರಡಿನ ಸೊ.... ವಿಲಸಿತದ ಜಂಘೆದ್ವಯದಾ | ನಿಚ್ಚಳದ ಜಾನೂರದ ಸ್ಪುರದಾ | ವಲುಮೆಮಿಗೆ ತನು ಮಧ್ಯ ಸಂಪಿಗೆಯ ಗಂಭೀರನಾಭಿ ಕಿರು ಡೊಳ್ಳು ತ್ರಿವಳಿ ವಾಸನೆಯ ಛಂದಾ 1 ಪುತ್ಥಳಿಯ ಹಲಗಿ ಕಾಂತಿಯ ಲೊಪ್ಪುತಿಹ ಉರದ | ವತ್ತಿಡದ ಕೊರಳ ಮಾಟಾ| ಮಣಿ ಬಂಧ | ಮತ್ತ ಊರ್ಪರಿಯಕಟಾ | ಮೊತ್ತದೋರ್ವಂಡ ಭುಜ ಶ್ರವಣ ನುಣ್ಗದಪುಗಳು | ಹೆತ್ತ ಪಲ್ವಧರ ನೀಟಾ | ಸೂರ್ಯ ಪರಿನಯನ | ವೆತ್ತ ಭ್ರೂಲತೆ ಪೆರ್ನೊಸಲ ಸುಕೇಶಿಯ ಜೂಟಾ 2 ಮಣಿ ತೇಜದೊಳೆ ಯುಗ್ಮ ಕುಂಡಲಗಳು | ನವರತ್ನ ಹಾರ ಮಂಡಿತ ಪದಕ ವಡ್ಯಾಣ | ಠವ ಠವಿಸುತಿಹ ಸರಳು | ಬವರದೊಳು ಚಿತ್ತ ತೆತ್ತೀಸ ತಾಯಿತ ಕಡ ವಜ್ರ ದುಂಗುರಗಳು | ತವಕದೊಳ್ ನಿರೆ ಹಾಕಿ ದಂಬರವ ಮೌಲಿಕದ | ಕಾಲ ಕಡಗ ಅಂದುಗೆಗಳು 3 ದ್ವಿನಯನ ಮಧ್ಯ ರಾಜಿಸುವ ಮಂಟಪದೊಳಗ ಧ್ಯಾನ ಸಿಂಹಾಸನದಲಿ | ಸಾನು ರಾಗದಲಿ ಕುಳ್ಳಿರಿಸಿ ಚರಣ ದ್ವಯವ ಜ್ಞಾನ ಗಂಗೋದಕದಲಿ | ಮಾನಸದಿ ಅಭಿಷೇಕವನೆ ಮಾಡಿ ಸಲೆ ಪೂಸಿ ಆನಂದ ವಸ್ತ್ರ ಗುಣಲಿ | ಮೌನದಲಿ ಲಯಲಕ್ಷಿ ಗಂಧಾಕ್ಷತೆಯ ಸುಮನ ತಾನಿಟ್ಟು ಬೆಳಗಿ ಧೂಪದಿ ಏಕಾರತಿಗಳಲಿ 4 ಬಳಿಕ ಕಸ್ತೂರಿಯ ಕೇಶರದ ಚಂದನ ಪೂಸಿ | ಕಳೇವರಕ ವಪ್ಪಿಲಿಂದಾ | ಥಳ ಥಳನೆ ರಂಜಿಸುವ ಬಟ್ಟ ಮುತ್ತಿಶಾಶೆ ಗಳನಿಟ್ಟು ಬೇಗ ಛಂದಾ | ಚಲುವ ಮಲ್ಲಿಗೆ ಕುಂದರ್ಕೆ ಜಾಜಿ ಕೇತಕಿಯು ನಳಿನ ಮೊದಲಾದರಿಂದಾ | .....ರ ಮಾಲೆಯಾ ಹಾಕಿ ಪರಿಮಳದಿ ಧೂಪವನು | .....ಸಂಚಿತ ದಶಾಂಗದಿ ಚಕ್ಷು ಜ್ಯೋತಿಯಿಂದಾ 5 ವರಶಾಂತಿ ಶಕ್ತಿ ಯರ್ಚಿಸಿ ಕುಳ್ಳಿರಿಸಿ ಪುರುಷಾರ್ಥ ದೀಪಂಗಳು | ಮೆರೆಯುತ ಪ್ರಜ್ವಲಿಸಿ ತರುವಾಯ ಕನಕಮಯ | ಹರಿವಾಣ ಬಟ್ಟಲುಗಳು | ಪರಮಾನ್ನ ಪಂಚಭಕ್ಷಗಳನ್ನ ಸೂಪಘೃತ ಪರಿ ಪರಿಯ ಶಾಖಂಗಳು | ಸುರಸ ಪಾಲು ಮೊಸರು ತನಿವಣ್ಣಲುವಗಾಯಿಕೇಸರ | ಧರಿಯೊಳಗ ಲೇಹ ಪೇಹ ಮೊದಲಾದ ಭೋಜ್ಯಂಗಳು 6 ಇನಿತು ಅರ್ಪಿಸಿ ಸ್ವಾದುದಕ ಕೈದೊಳೆದು | ಗುಣದಿತ್ತು ತಾಂಬೂಲವಾ | ಅನುಭವದಾರತಿಯು ಪುಷ್ಪಾಂಜುಳಿ ನಮನ ಪ್ರದ ಕ್ಷಿಣ ಗೀತ ನೃತ್ಯ ಮುದವಾ | ಘನ ತೀರ್ಥಸು ಪ್ರಸಾದವ ಕೊಂಡು ಸೂರ್ಯಾಡಿ ಅನುವಾಗಿ ಸಖ್ಯದನುವಾ | ಮನುಜ ಜನ್ಮಕ ಬಂದು ಗುರು ಮಹಿಪತಿ ಸ್ವಾಮಿ | ಘನದಯವ ಪಡಕೊಂಡು ಪಡೆಯೋ ಮುಕ್ತಿಯ ಸ್ಥಳವಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಮಹಾದೇವದೇವಗೆಸೋಮಶೇಖರನಿಗೆವಾಮಾಂಕದೊಳು ಪಾರ್ವತಿಯಪ್ರೇಮದಿಂದ ತಾಳ್ದವಗೆಹೇಮದಾರತಿಯ ಬೆಳಗಿರೆ 1 ಮಾರಮರ್ದನಗೆ ತ್ರಿಪು-ರಾರಿಗೆ ಶ್ರೀಕರನಿಗೆಶಾರದೆ ಲಕ್ಷ್ಮಿಯರು ವೈ-ಯಾರದಿಂದ ಪಾಡುತಮೇರುವೆಯಾರತಿಯ ಬೆಳಗಿರೆ 2 ಕರುಣಾಸಾಗರಗೆ ಶ್ರೀ-ಕರಗೆ ಸರ್ವೇಶಗೆಪರಮ ಪಾವನಗೆಪಾರ್ವತಿಗೆ ವನಿತೆಯರುಕುರುಜಿನಾರತಿಯ ಬೆಳಗಿರೆ 3 ದೇವದುಂದುಭಿ ಮೊಳಗೆದೇವತೆಗಳೆಲ್ಲಾ ನೆರೆದುಹೂವಿನ ಮಳೆಗರೆಯೆಭಾವಕಿಯರು ಮಾದೇವಗೆಹೂವಿನಾರತಿಯ ಬೆಳಗಿರೆ 4 ಪಂಕಜಾಕ್ಷಿಯರು ಕೂಡಿಭೋಂಕನೆ ಗಾನವ ಪಾಡಿಕಂಕಣ ಕಡಗ ಝಣ ಝಣರೆನೆ ಶ್ರೀರಾಮೇಶಗೆಕುಂಕುಮದಾರತಿಯ ಬೆಳಗಿರೆ5
--------------
ಕೆಳದಿ ವೆಂಕಣ್ಣ ಕವಿ
ಶ್ರೀ ರಮಾದೇವಿ ಅಂಬೋನಿಧಿ ಹೃದಂಬರ ವಾಸಿನಿ ಅಂಬಾ ಬಾ ಬಾ ಅಂಬುಧಿಜಾ ನಮೋ ಪ ಅಂಬುಜನಾಭನ ನಿಜಸತಿ ಶ್ರೀ ಭೂ ರಥಾಂಗ ಪೂ ಕಂಬು ಮಾಲಾದಿ ಸುರೂಪದಿ ಹರಿಗೆ ನೀ ಸಮ್ಮುದದಿಂದೆ ಸುಸೇವೆಯ ಮಾಳ್ಪಳೆ ಅ ಪ ಮಂದರಗಿರಿಯಿಂದ ಸಿಂಧುವ ಮಥಿಸಲು ನಿಂದು ಪ್ರಕಟವಾದೆ ಇಂದಿರಾದೇವಿಯೆ ಕುಂದೇನಿಲ್ಲದ ಸುಂದರಗುಣನಿಧಿ ಬಂಧಮೋಚಕ ಆನಂದಸುಪೂರ್ಣ ಗೋ ವಿಂದ ಶ್ರೀ ಅಜಿತಭೂಮನನ್ನೆ ವರಿಸಿದೆ ಮಂದಜಭವ ಶಿವ ವೃಂದಾರಕನುತ 1 ಹರನ ಚಾಪವ ಶ್ರೀರಾಮನು ಮುರಿಯಲು ವರ ವನಮಾಲೆಯ ಅರ್ಪಿಸಿ ನಿಂದೆ ಸುರಮುನಿರಾಜರು ಪುರಜನರೆಲ್ಲರು ಸುರಿಯಲು ಪೂಮಳೆ ಸಂಭ್ರಮದಿಂದಲಿ ಸರಿಪರರಿಲ್ಲದ ಶ್ರೀ ರಘುರಾಮನು ಸಿರಿಜನಕಜೆ ನಿನ್ನ ಕರವನು ಗ್ರಹಿಸಿದ 2 ಭೈಷ್ಮಿ ರುಕ್ಮಿಣಿ ಸತ್ಯಭಾಮಾ ಶ್ರೀ ಭೂದೇವಿ ವಾಮಚಿನ್ಮಯೆ ಶ್ರೀ ಸ್ವಾಮಿ ಕೃಷ್ಣನ ರಾಣಿ ಹೇಮಗರ್ಭಾದಿ ಸಮಸ್ತ ಸುಜನರಿಗೆ ರಮೆ ನಿನ್ನಯ ಸುಮಂದ ಕಟಾಕ್ಷವು ಕಾಮಿತ ಫಲದವು ಮೋಕ್ಷಹೇತುವೆ ದೇವಿ ಸತಿ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರುಧಿರೋದ್ಗಾರಿ ಸಂವತ್ಸರ ಸ್ವಾಮಿ ಧನ್ವಂತರಿ ಸ್ತೋತ್ರ 155 ಆನಂದ ಚಿನ್ಮಾತ್ರ ವಪುಷ ಸರ್ವಾಧಾರ ಅನಘ ಕೂರ್ಮಹÀಯ ಶೀಷ್ರ್ಯ ಸ್ತ್ರೀರೂಪ ಅಜಿತ ಆನಮೋ ರುಧಿರೋದ್ಗ್ಗ್ಗಾರಿ ಸಂವತ್ಸರ ಸ್ವಾಮಿ ಅನುತ್ತಮ ಸರ್ವೋತ್ತಮ ಧನ್ವಂತರಿ ರಮೇಶ ಪ ರಾಜಗುರು ಮಂತ್ರಿಗುರು ಸÉೀನಾಧಿಪತಿ ಬುಧನು ರಾಜಿಸುವರು ಸೂರ್ಯೇಂದು ಕವಿ ಭೂಮ ರವಿಜ ಪ್ರಜ್ವಲಿಸಿ ನೀ ಇವರೊಳ್ ಕೃತಿಯ ನಡೆಸಿ ಲೋಕ ಪ್ರಜೆಗಳಿಗೆ ಮಳೆ ಬೆಳೆ ಸೌಖ್ಯವಿತ್ತು ಪÉೂೀಷಿಸುವಿ 1 ದೇಶದೇಶ ರಾಜ್ಯಾಧಿಪರ್ಗಳ ಪರಸ್ಪರ ಸಂಶಯ ದುರ್ಮನವ ಆಗಾಗ ಶಾಂತ ಮಾಡುವುದು ಮೋಸಗಾರ ಕುಜನರು ಚೋರ ಕ್ರೂರರು ಮಾಳ್ಪ ಹೊಸ ಹೊಸ ಚಟುವಟಿಕೆ ಪರಿಹರಿಸಿ ಕಾಯೋ ಲೋಕವನು 2 ವೇದವ್ಯಾಸವಿರಚಿತ ಸಾತ್ವಿಕ ಪುರಾಣಗಳ ಯಥಾರ್ಥ ಪೇಳಿದೆ ದುಷ್ಟಾರ್ಥ ಪೇಳಿ ಜನರ ಮೋಹಿಸಿ ಸಾಧು ಸ್ತ್ರೀಪುರುಷರ ಪ್ರೌಢಕನ್ಯೆ ಬಾಲರ ವಂಚಿಪ ಧೂರ್ತರನು ಅಡಗಿಸಿ ಸತ್ಯಧರ್ಮ ಸಂತಾನ ಬೆಳೆಸೋ 3 ರಾಜ ಸಚಿವನು ಬೃಹಸ್ಪತಿಯಂತರ್ಗತನಾದ ರಾಜರಾಜೇಶ್ವರನೆ ನೀ ಅಂದು ಮಾನವಿಗೆ ಮದುವೆ ಉಜ್ವಲ ತಪಸ್ವಿಗೆ ಪುತ್ರರ ಒದಗಿಸಿದಿ ಇಂದು ನಿಜ ಭಕ್ತಸುತ ಕಾಮ ಪರಕಾಮ ಜನರಿಗೆ ಒಲಿಯೋ 4 ಹಿಂದಿನ ಇಂದಿನ ಸ್ವಕರ್ಮ ಪರಕರ್ಮ ಲಬ್ಧ ಮಾಂದ್ಯ ನರತ್ವಕೆ ಚರ್ಮ ಸೂತಕ ಗರ್ಭಿ ವ್ಯಾಧಿಪೀಡಿತ ಸಜ್ಜನರಿಗೆ ಸುಖವೀಯೋ ವೇಧಪ ಪ್ರಸನ್ನ ಶ್ರೀನಿವಾಸ ರುಧಿರೋಧ್ಗಾರಿ ಸ್ವಾಮಿ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಷ್ಣು ಮೋಹಿನಿ ರೂಪ ತಾಳಿದನು ಸುಕಲಾಲಾಪ ಪ ದುರುಳ ರಕ್ಕಸರು ಸುಧೆಯನು ಬಯಸೆ ಮಿಂಚಿನ ಥರ ಥರ ರಾಶಿ 1 ನಳಿದೋಳ್ಗಳ ಕಂಕಣ ರವಮಿಳ್ಳೆ ಬಂದಳು ಸುಂದರಿಯು 2 ದೊಳೊಪ್ಪಿದ ಕದಳೀಸಾರ ಸಂಕರ್ಷಣ ಶ್ರೀಹರಿಯ ವಿಲಾಸ 3 ಶಿರದೊಳ್ಮೆರೆಯುವ ರತ್ನಾಭರಣ ವರ ಕಂಧರದೊಳ್ಮುಕ್ತಾಭರಣ ಸುರುಚಿರ ಹಸ್ತದಿ ಕಂಕಣ ಧಾಟಿ4 ಚಾಮರ ಬೆರಳಿನೊಳೊಪ್ಪುತ ಕರೆದಳು ಮನ್ಮಥ ಮೋಹದ ಮಳೆಯಂ 5 ಮೋಹವÀ ಪೊಂದಲು ಬೇಗ ಕಂಗಳ ಢಾಳವು ಪೊಳೆಯೆ 6 ಕುಂದ ಸುಮಾಳಿಯ ಗುಂಪುಗಳೊರೆಯೆ ಓಹೋ ಮೋಹ ವರ್ಷಾದಕಾಲ ಅಹವದೊಳ್ಮಾರನ ಕಡುಬಿಂಕ ನೊಂದರು ಮನದೊಳಗೆ 7 ಭಂಗಿತರಾದರು ನೀಚರು ಭರದಿಂ ಬೆಡಗಿನ ಸೈವರಿಯೆ 8 ನಿರ್ಜರ ಜೀವವನೆಲ್ಲ ರಕ್ಷಿಸು ಎಂದೆನಲು9 ಪತಿ ನೀ ದೇವತೆಗಳಿಗೆ ಮಾನವಗೈದನು ನಿರ್ಜರರ್ಗೆಲ್ಲ 10
--------------
ಬೇಟೆರಾಯ ದೀಕ್ಷಿತರು
ಶ್ರೀಗುರುರಾಯ ನಿಮ್ಮ ಕರುಣಲೆನ್ನ ಹೊರೆವುದು ಧ್ರುವ ಒಂದು ಅರಸಿ ದ್ವಂದ್ವಹರಿಸಿ ಮೂರು ಹುರಿಸಿ ಮೀರಿ ನಿಲಿಸಿ ನಾಲ್ಕು ಮರೆಸಿ ಐದು ಜರೆಸಿ ಆರು ತೋರಿಸಿ ಎನ್ನಹೊರೆವುದು 1 ಏಳು ಅರಸಿ ಎಂಟು ಜರಿಸಿ ಒಂಬತ್ತು ಬಲಿಸಿ ಹತ್ತು ಹರಿಸಿ ಅರಿಸಿ ಬೆರಿಸಿ ಇರಿಸಿ ನಿಮ್ಮ ಕರುಣಕೃಪೆಯಲೆನ್ನ ಹೊರೆವುದು 2 ಐದು ಅರಿಸಿ ಐದು ಬೆರಿಸಿ ಐದು ನಿಮ್ಮ ಚರಣಲಿರಿಸಿ ಸುರಿಸಿ ಕರುಣ ಮಳೆಯಗರಿಸಿ ಮಹಿಪತಿ ಜನ್ಮಹರಿಸಿ ಹೊರೆವುದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು