ಒಟ್ಟು 1498 ಕಡೆಗಳಲ್ಲಿ , 99 ದಾಸರು , 1001 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಕೊಂಡ - ನೃಹರಿ ಕೈಕೊಂಡ ಪ ಕೈಕೊಂಡ ಪೂಜೆಯ ನೃಹರಿ | ತ್ರೈಲೋಕ್ಯಕನಾಥನು ಅಸುರಾರಿ | ಆಹತೋಕನ ಸಲಹಲು | ಏಕಮೇವನ ಲೀಲೆಕೈಕೊಂಡ ಅವತಾರ | ಆ ಕಂಬೋದ್ಭವನಾಗಿಅ.ಪ. ಭಕ್ತಿ ಭಾವದಿ ಪರಾಶರ | ಬಹುತಪ್ತ ಭಾವದಿ ಕೃಷ್ಣೇ ತೀರ | ದಲ್ಲಿಸಕ್ತನಿರೆ ಧ್ಯಾನ ಗೋಚರ | ನಾಗಿವ್ಯಕ್ತನು ಷೋಡಶಕರ | ಆಹದೃಪ್ತ ದಾನವ ಧ್ವಂಸಿ | ದೀಪ್ತಾನಂತ ತೇಜಮೂರ್ತಿ ಕಾಣಿಸಿದನ | ವ್ಯಕ್ತನಾಗಿದ್ದಂಥ 1 ಕಟಿಸೂತ್ರ ಸ್ಮರ ಕೋಟಿ ಲಾವಣ್ಯಕರ ಪಾಶ ಅಸಿಕುಂತ | ವರದಾ ಭಯವು ಹಸ್ತ 2 ಕಂಬು ಚಕ್ರ ಚರ್ಮಕರ | ಮತ್ತೆಅಂಬುಜ ಶಾಂಙÁ್ರ್ಞದಿಧರ | ಗದಸಂಭೃತ ತುಳಸಿಯ ಹಾರ | ಮತ್ತೆಇಂಬಿನ್ವ್ಯೊ ಜಯಂತಿ ಹಾರ | ಆಹಅಂಬುಜದಳ ನೇತ್ರ | ಇಂಬಾಗಿ ಕರಪಾತ್ರತುಂಬ ಪೀಯುಷಧಿ | ಪೊಂಬಸಿರ ವಂದ್ಯನು 3 ಶ್ರೀವತ್ಸ ಲಾಂಛನ ಭೂಷ | ತನ್ನಭ್ರೂವಿಲಾಸದಿ ಬ್ರಹ್ಮ ಈಶ | ರಿಗೆತಾವೊಲಿದೀವ ಆವಾಸ | ಯೆನುತವ ವೇದಂಗಳು ಅನಿಶ | ಆಹಮಾವಿನೋದಿಯ ಗುಣ | ಸಾವಕಾಶಿಲ್ಲದೆಸಾರ್ವದ ಪೊಗಳುತ್ತ | ಭಾವದೊಳ್ಹಿಗ್ಗುವವು 4 ಪೊತ್ತು ರೂಪವ ಬಲಪಾದ | ಚಾಚುತ್ತ ರಕ್ಕಸನೊಡಲಗಾಧ | ಇಟ್ಟುವತ್ತುತ ತೊಡೆಯಲ್ವಿನೋದ | ದ್ವಯಹಸ್ತ ನಖದಿ ಉದರ ಬಗೆದ | ಆಹಕಿತ್ತುತ ಕರುಳನ್ನ | ಕತ್ತಿನೊಳ್ಹಾಕುತಭಕ್ತನ ಸಂಬಂಧ | ಎತ್ತಿ ತೋರ್ದ ಜಗಕೆ 4 ಪಂಚ ಮೋಕ್ಷಪ್ರದ ಹರಿ | ಆಯ್ತುಪಂಚಾಮೃತಭಿಷೇಕ ಅವಗೆ | ಮತ್ತೆಪಂಚಕಲಶಾರ್ಚನವು ಆವಗೆ | ಆಯ್ತುಪಂಚ ಕುಂಭಾಭಿಷೇಕವಗೆ | ಆಹಸಂಚಿಂತಿಸುತ ಹೃ | ತ್ಪಂಕಜದೊಳು ನೋಡೆಸಂಚಿಂತಾಗಮ ನಾಶ | ಕೊಂಚವು ಪ್ರಾರಬ್ಧ 6 ಶಾಲಿಗ್ರಾಮದ ಶಿಲ ಏಕ | ಪೊತ್ತುಪೋದಕ ಬಾಹು ಅಲೀಕ | ಶತಶಾಲೀವಾಹನವೆಂಬ ಶಕ | ದೊಳುಜ್ವಾಲಾ ನರಹರಿ ನಾಮಕ | ಆಹಯೇಳು ಐದೊರ್ಷದ | ಭಾಳ ತಪಕೆ ಮೆಚ್ಚಿಶೀಲ ದ್ವಿಜ ದಂಪತಿ | ಗೊಲಿದು ಪೇಳಿದ ಹೀಗೆ 7 ಭೀಮಕ ರಾಜಗೆ ಪೇಳು | ತೃಣಜಾಲವ ಹಾಕೆ ನೀರೊಳು | ಅಲ್ಲಿಜ್ವಾಲೆ ಉದ್ಭವಿಸಲು ಬಲು | ನೀರಮೇಲಕ್ಕೆ ಒಳಗಿಂದ ಬರಲು | ಆಹತೋಳೆರಡಲಿ ರಾಜ | ಮೇಲೆತ್ತೆ ಬರುವನುತಾಳ ಮೇಳ್ವೈಭವ | ದೊಳಗೆ ಸ್ಥಾಪಿಸಲೆಂದು 8 ಅಂಗಹೀನರೆ ಕೇಳಿ ಆವ | ನಿಮ್ಮಭಂಗಿಪ ಮೂಕಾಂಧ ಭಾವ | ನೀಗಿಶೃಂಗಾರ ರೂಪ ಸ್ವಭಾವ | ನರಸಿಂಗ ಕೊಡುವೆನು ಸೇವ | ಆಹ ಹಿಂಗದೆ ಕೊಡುವೆನು | ಅಂಗಜ ಪಿತ ನರಸಿಂಗಪುರವೆಂದು | ಸಂಗೀತವಾಗಲಿ 9 ವತ್ಸರ ಸೌಮ್ಯವು ಪುಷ್ಯ | ದಿನದರ್ಶ ವ್ಯಾಸತೀರ್ಥ ಶಿಷ್ಯ | ಆದರ್ಶ ದಾಸರ ದಿನ ಭವ್ಯ | ಭಕ್ತವತ್ಸಲ ಸ್ವೀಕಾರ ಆಲ್ಪ್ಯ | ಆಹಉತ್ಸವ ಕೊಳ್ಳುತ | ಉತ್ಸಾಹವೆನಗಿತ್ತುಮತ್ಸ್ಯಾದಿ ದಶರೂಪಿ | ಕೃತ್ಸ್ನ ಕಾರುಣ್ಯನು 10 ಪರಾಶರಗೊಲಿದ ಸುಶೀಲ | ಖಗವರನು ಭೂದೇವಿಯು ಬಲ | ಎಡವರಲಕ್ಷ್ಮೀ ಪ್ರಹ್ಲಾದ ಬಾಲ | ಸುರವರರಿಂದ ಸ್ತುತ್ಯ ವಿಶಾಲ | ಆಹಗುರು ಗೋವಿಂದ ವಿಠ್ಠಲ | ಗುರು ಬಿಂಬ ನರಸಿಂಗಶರಣರ ಅಪಮೃತ್ಯು | ಹರಿಸಿ ಸಂತತ ಕಾಯ್ವ11
--------------
ಗುರುಗೋವಿಂದವಿಠಲರು
ಕೈಹಿಡಿದೆನ್ನನು ನಡೆಸೋ ರಂಗ ಚೋಹವ ಬಿಡಿಸಿ ನಿನ್ನಡಿಗಳ ಹಿಡಿಸೊ ಪ ಮೋಹ ಮಾತ್ಸರ್ಯದ ದಾಹವ ಬಿಡಿಸೋ ಶ್ರೀಹರಿ ನಿನ್ನ ನಾಮಂಗಳ ನುಡಿಸೋ ಅ.ಪ ಇಂದಿರೆಯರಸ ಮುಕುಂದ ನಿನ್ನ | ಕಂದನ ಮರೆವರೆ ತಂದೆ ಗೋವಿಂದಾ | ಮಂದಮತಿಯು ನಾನೆ ಗೋಪೀ ಕಂದ | ಮಂದರಧರ ಕಾಯೋ ನಿತ್ಯಾನಂದ1 ಮಂಗಳಕರ ಶುಭನಾಮ | ಹಿಂಗದೆ ಭಜಿಪೆನು ಅರಿಕುಲಭೀಮ ಭಂಗಿಸು ದುರಿತವ ಮಾಂಗಿರಿಧಾಮ 2 ದಾಸರದಾಸ ನಾನೆಂಬುದನುಳಿಸೋ ವಾಸುದೇವ ನಿನ್ನ ಬೇಡುವುದೆನಿಸೊ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೊಕೊಕೋ ಎನ್ನಿರೊ ಕುಂಭಿನಿಯವರೆಲ್ಲಕೊಕೊಕೋ ಎನ್ನಿರೊ - ನಮ್ಮ ಪ ಗೋಕುಲದೊಳಗೊಬ್ಬ ಕಳ್ಳ ಬರುತಾನೆಂದುಕೊಕೊಕೋ ಎನ್ನಿರೊ ಅ ಹೊದ್ದಿ ಮೊಲೆಯನುಂಡವಳಸುವನೆ ಕೊಂದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊಕದ್ದುಕೊಂಡೊಯ್ವ ರಕ್ಕಸರನೆಲ್ಲರ ಕಾಲಲೊದ್ದೊರಸಿದ ಕಳ್ಳ ಕೊಕೊಕೋ ಎನ್ನಿರೊಹದ್ದು ಹಗೆಯ ಹಾಸಿಗೆಯ ಮೇಲೊರಗಿದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊಅರ್ಧದೇಹನ ಕೈಯ ತಲೆಯ ಕಪಟದಿಂದಕದ್ದು ಬಿಸುಟ ಕಳ್ಳ ಕೊಕೊಕೋ ಎನ್ನಿರೊ 1 ಮಣಿ ಮಲ್ಲಿಗೆ ದಂಡೆಯರಂಜೆ ಕದ್ದ ಕಳ್ಳ ಕೊಕೊಕೋ ಎನ್ನಿರೊಗುಂಜಿಯ ದಂಡೆಯ ಕಲ್ಲಿಯ ಚೀಲದಮಂಜು ಮೈಯ್ಯ ಕಳ್ಳ ಕೊಕೊಕೋ ಎನ್ನಿರೊಅಂಜದೆ ಗೊಲ್ಲರ ಹಳ್ಳಿಯೊಳಗೆ ಹಾಲನೆಂಜಲಿಸಿದ ಕಳ್ಳ ಕೊಕೊಕೋ ಎನ್ನಿರೊಸಂಜೆ ಬೈಗಿನಲ್ಲಿ ಕರೆಯುವ ಸತಿಯರಅಂಜಿಸಿದ ಕಳ್ಳ ಕೊಕೊಕೋ ಎನ್ನಿರೊ 2 ಕೇಸರಿ ಎಂಬ ರಕ್ಕಸರನೆಲ್ಲರ ಕೊಂದವೇಷಧಾರಿ ಕಳ್ಳ ಕೊಕೊಕೋ ಎನ್ನಿರೊಮೋಸದಿ ಬಲಿಯ ದಾನವ ಬೇಡಿ ಅನುದಿನಬೇಸರಿಸಿದ ಕಳ್ಳ ಕೊಕೊಕೋ ಎನ್ನಿರೊಮೀಸಲ ಅನ್ನವ ಕೂಸಾಗಿ ಸವಿದುಂಡವೇಷಧಾರಿ ಕಳ್ಳ ಕೊಕೊಕೋ ಎನ್ನಿರೊಸಾಸಿರ ನಾಮಕ್ಕೆ ಹೆಸರಾದ ಚಪ್ಪನ್ನದೇಶದ ದಾರಿಗಳ್ಳ ಕೊಕೊಕೋ ಎನ್ನಿರೊ 3 ಆಕಳೊಳಾಡಿ ಪರಲೋಕಕೆ ನಡೆದಂಥಆಕೆವಾಳ ಕಳ್ಳ ಕೊಕೊಕೋ ಎನ್ನಿರೊಭೂಕಾಂತೆಯ ಸೊಸೆಯರನೆತ್ತೆ ಬಲುಹಿಂದನೂಕಿ ತಂದ ಕಳ್ಳ ಕೊಕೊಕೋ ಎನ್ನಿರೊಗೋಕುಲದೊಳು ಪುಟ್ಟಿ ಗೊಲ್ಲರೆಲ್ಲರ ಕೈಲಿಸಾಕಿಸಿಕೊಂಡ ಕಳ್ಳ ಕೊಕೊಕೋ ಎನ್ನಿರೊಸಾಕಾರನಾಗಿ ಈ ಲೋಕವನೆಲ್ಲವಆಕ್ರಮಿಸಿದ ಕಳ್ಳ ಕೊಕೊಕೋ ಎನ್ನಿರೊ4 ಕ್ಷೀರವಾರಿಧಿ ವೈಕುಂಠನಗರಿಯನುಸೇರಿಸಿದ ಕಳ್ಳ ಕೊಕೊಕೋ ಎನ್ನಿರೊದ್ವಾರಾವತಿಯನು ನೀರೊಳು ಬಚ್ಚಿಟ್ಟಊರುಗಳ್ಳ ಬಂದ ಕೊಕೊಕೋ ಎನ್ನಿರೊದ್ವಾರಕೆಯಾಳುವ ಉಭಯದಾಸರ ತನ್ನಊರಿಗೊಯ್ದ ಕಳ್ಳ ಕೊಕೊಕೋ ಎನ್ನಿರೊಕಾರಣಾತ್ಮಕ ಕಾಗಿನೆಲೆಯಾದಿಕೇಶವಕ್ಷೀರ ಬೆಣ್ಣೆಯ ಕಳ್ಳ ಕೊಕೊಕೋ ಎನ್ನಿರೊ 5
--------------
ಕನಕದಾಸ
ಕೊಟ್ಟಿಗೋತ್ಸವ ಗೀತೆ ಕೊಟ್ಟೊಗೋತ್ಸವ ನೋಡಿ ಸೃಷ್ಟಿಗೀಶ್ವರನ ಪ. ವಾಸುದೇವನ ಸಹಸ್ರಸ್ತಂಭಮಂಟಪವ ದಾಸರು ಬಂದು ಶೃಂಗಾರವ ಮಾಡಿ ದೇಶದ ಮೇಲುಳ್ಳ ಬೊಂಬೆಗಳನು ರಚಿಸಿ ಲೇಸಾದ ಮೇಲುಕಟ್ಟುಗಳ ಕಟ್ಟಿದರು 1 ಸೃಷ್ಟಿಗೀಶ್ವರನಾದ ರಂಗನಾಥನಿಗೆ ಕೊಟ್ಟಿಗೋತ್ಸವವನ್ನು ನಡೆಸಬೇಕೆನುತ ಕಟ್ಟಿ ಕಂಕಣವನ್ನು ನಾಲ್ಕುವೇದಗಳಿಂದ ಭಟ್ಟರು ಓದಿ ಪೇಳಿದರು ಸಂಭ್ರಮದಿ 2 ವಜ್ರದ ಕಿರೀಟವಿಟ್ಟು ರತ್ನದಂಗಿಯ ತೊಟ್ಟು ಅರ್ಜುನಸಖ ಸಂಭ್ರಮದಲಿ ಪೊರಟು ಸ್ವರ್ಗದ ಬಾಗಿಲೊಳಗೆ ತಾ ನಿಂದು ಮೂರ್ಜಗವೆಲ್ಲ ಮೋಹಿಸುತಲೆ ಬಂದು 3 ಮಂದಹಾಸದಲಿ ನಿಂದು ಮಂಟಪದಲಿ ಬಂದ ಆಳ್ವಾರರಿಗಾಸ್ಥಾನವಿತ್ತು ಚಂದದಿಂದ ದಿವ್ಯ ಪ್ರಬಂಧವ ಕೇಳಿ ಒಂದುಅಂಕಣ ಬಿಡದೆ ಬಂದ ಶ್ರೀರಂಗ 4 ಸಂಕ್ರಾಂತಿಯಲಿ ಶಂಕರನ ಪ್ರಿಯನು ಶಂಕೆ ಇಲ್ಲದೆ ಆಭರಣವನು ಧರಿಸಿ ಪಂಕಜಮುಖಿಯರೊಡಗೊಂಡು ಹರುಷದ ಲಂಕಾರವಾಗಿ ಬಂದನು ಮಂಟಪಕೆ 5 ಮತ್ತೆ ಮರುದಿನದಲ್ಲಿ ಭಕ್ತವತ್ಸಲನು ಮುತ್ತಿನಅಂಗಿ ಮುಂಡಾಸನಳವಡಿಸಿ ಮುತ್ತಿನಛತ್ರಿ ಚಾಮರ ಸೂರೆಪಾನದಿ ಮುತ್ತರಸಿಯ ಮಂಟಪಕೆ ನಡೆತಂದ 6 ಅರ್ಥಿಯಿಂಬಂದು ತಾ ಅಶ್ವವನೇರಿ ಮತ್ತೆ ಬೇಟೆಯಮೃಗವನೆ ಕೊಂದು ಸಂ ಕ್ರಾಂತಿಯ ಪಾರ್ವೇಟೆಯನಾಡಿ ಸಂತೋಷದಿ ಬಂದ 7 ನಾರಿವೇಷವ ಆಳ್ವಾರರಿಗೆ ಧರಿಸಿ ಪೇರಿಯ ತಾ ಬಿಟ್ಟು ತೇಜಿಯನೇರಿ ಚೋರತನವ ಮಾಡಿದ ಭಕ್ತರಿಗೆ ಮೂಲಮಂತ್ರವ ಪೇಳಿ ಮುಕ್ತಿಯನಿತ್ತ 8 ಮಿಂದು ಮಡಿಯನುಟ್ಟು ಅಂದು ರಾತ್ರಿಯಲಿ ಹ ನ್ನೊಂದು ವಿಧ ಭಕ್ಷ್ಯಗಳನು ತಾ ಗ್ರಹಿಸಿ ಬಂದ ಆಳ್ವಾರರಿಗೆ ಮುಕ್ತಿಯನಿತ್ತು ಬಂದು ಆಸ್ಥಾನದಿ ನಿಂದ ಶ್ರೀರಂಗ 9 ಭಕ್ತರು ಮಾಡಿದ ಪ್ರಬಂಧವನೆಲ್ಲ ಭಕ್ತಿಯಿಂದಲೆ ಪೇಳಿದ ಆಚಾರ್ಯರಿಗೆ ಯುಕ್ತಿ ತೋರಿದ ಪರಾಶರವ್ಯಾಸರಿಗೆ ಬ್ರಹ್ಮ ರಥವನಿತ್ತ ಬ್ರಹ್ಮಾಂಡರೂಪ 10 [ಶೌ]ರಿಯು ತಾನಿರಲು ಮೇಘಮಂಡಲದಂತೆ ತೋರುವುದು ತಾರಕೆಯಂತೆ ಮೈಯುಡುಗೆ ವಾರಿಜನಾಭನ ಮುತ್ತಿನಂಗಿಯ ನೋಡು ವವರಿಗೆ ತಾ ಆನಂದವಾಗಿಹುದು 11 ಕ್ಷೀರಸಾಗರದಲ್ಲಿ ಪವಡಿಸಿಹ ಹರಿಗೆ ಕ್ಷೀರಬಿಂದುಗಳು ಮೈಯೊಳಗೆ ಬಿದ್ದಂತೆ ವಾರಿಜನೇತ್ರಗೆ ವಜ್ರದನಾಮವು ಧರಿಸಿದರು ಹೇಮದ ಪಾದಹಸ್ತಗಳ 12 ಮುತ್ತಿನಂಗಿಸೇವೆ ನೋಡಬೇಕೆನುತ ಹತ್ತುಸಾವಿರ ಪ್ರಜೆ ಬಂದು ನಿಂತಿರಲು ಇತ್ತು ಕಾಣಿಕೆಯನು ನೋಡಿ ವೆಂಕಟರಂಗನ ಮುಕ್ತರಾದೆವೆಂದು ಭಕ್ತರು ನುಡಿದರು 13
--------------
ಯದುಗಿರಿಯಮ್ಮ
ಕೊಡು ಸುಖವ ಜಗಪಾಲಯ ಒಡೆಯ ವೈಕುಂಠದಾಲಯ ಪ ಕೊಡು ಸುಖ ನಿಮ್ಮಯ ಅಡಿಯದಾಸರ ಸೇವೆ ಸಡಗರ ಸಂಪದ ಎಡೆಬಿಡದೆ ಅ.ಪ ಜಡಮತಿಯನು ಕೆಡಿಸಿ ಜಡದೇಹಮೋಹ ಬಿಡಿಸಿ ಜಡಭವತೊಡರನು ಕಡೆಹಾಯ್ಸಿ ಅಡಿಗಡಿಗೆ ನಿನ್ನಡಿದೃಢ ಭಕುತಿ 1 ಸಾಗರಸಂಸಾರಭೋಗದ ಬಲುಘೋರ ನೀಗಿಸಿ ನಿಜಜ್ಞಾನ ಪಾಲಿಸಿ ಬೇಗನೆ ನೀಡು ತವದರುಶನವ 2 ಮನಸಿನ ಹರಿದಾಟ ಘನಘನ ದುಶ್ಚಟ ವನು ಪರಿಹರಿಸಿ ದಯಮಾಡು ಮನಶಾಂತಿ ಸದುಗುಣವ 3 ತನುತ್ರಯದಲಿ ನಿನ್ನ ನೆನಹನು ನಿಲಿಸೆನ್ನ ಬಿನುಗು ತ್ರಿದೋಷ ದೂರಮಾಡಿ ಜನನ ಮರಣಂಗಳ ಗೆಲಿಸಭವ 4 ಭೂಮಿಯೊಳಧಿಕೆನಿಪ ಸ್ವಾಮಿ ಶ್ರೀರಾಮಭೂಪ ನೇಮದಿ ಬೇಡುವೆ ವರ ನೀಡು ಆ ಮಹಕೈವಲ್ಯ ಪದವಿಯ 5
--------------
ರಾಮದಾಸರು
ಕೊಡು ಹರಿಯೇ ದಾಸರ ಸಂಗವನು ಪ ತವ ಮಂಗಳ ಚರಿತಾಮೃತ ದಡಿಯಾ | ಶ್ರವಣದಿ ಸವಿಸವಿದುಂಬುವಿ ರಂಗಾ 1 ಪೊಡವಿಲಿ ಭಜನಿಯ ದಾರಿಯ ದೋರೀ | ಬಿಡಿಸುವರು ಮುನ್ನಿನ ಮನದಂಗಾ 2 ಗುರುಮಹಿಪತಿ ಪ್ರಭು ಧನ್ಯನಾಗುವೆನು | ಪರಿ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೊಡುವುದಿಲ್ಲದೆ ಪೋದ ಕಣ್ಣು ನಾಲಗೆಯಾ ಎ- ನ್ನೊಡೆಯನಲ್ಲಾನು ಊಳಿಗನಲ್ಲವೆ ಚನ್ನಾ ಪ ಕೊಂದು ಬಳಲಿಸುತಿರುವುದಿದು ಧರ್ಮವೇ ಮುಂದೆ ನಂಬುವರಿಗೆ ಅದೃಢವಾಗದಿರು ದೇವ ಕಂದರ್ಪಪಿತನೆ ಕಮನೀಯಮೂರುತಿಯೆ 1 ನೋಡುವುದೆಂತೊ ಕಣ್ಣಿಲ್ಲದಿರೆ ನಿನ್ನ ತುತಿ ಮಾಡುವುದೆಂತೊ ನಾಲಿಗೆಯುಡುಗಲು ಬೇಡುವುದೆಂತೊ ಕೈವಲ್ಯಂಗನೆಯನು ದಯ ಮಾಡೆನ್ನ ನಲ್ಲ ದಾಸರೊಳುತ್ತಮೊತ್ತಮ ನೇ 2 ಕಮಲ ಮಧ್ಯದೊಳಾವಾಗ ವಾಸವಾಗಿಪ್ಪ ಸರ್ವೇಶ್ವರನೇ ಘಾಸಿಬಡಿಸಲು ಅವರ ನೋವು ನಿನಗಲ್ಲವೇ ಕೇಶವ ಮುರಾರಿ ಅಚ್ಚುತದಾಸನಿಗೆ ಬೇಗ3 ಕೇಳಿದನೆ ನಿನ್ನಿತರ ಹಲವು ಚಿಂತೆಯಲಿ ತೊಳಲಿ ನೆಲೆಯರಿಯದಜ್ಞಾನಿಯಾಗಿ ಬಳಲುವತಿಚಂಚಲಗೀ ಮಾರ್ಗವಿರಿಸಿದೇಕೋ ನಳಿನಾಕ್ಷ ಭಕ್ತವತ್ಸಲ ಕೃಪಾಸಿಂಧೂ 4 ಶರಣರಕ್ಷಕನೆಂಬ ಬಿರುದಾರದೆಲೆ ದೇವ ಇರಿಸು ಎಂದಿನವೋಲಚ್ಚುತದಾಸನಾ ಹರಿಯದಿದ್ದರೆನ್ನ ಕಣ್ಣು ನಾಲಿಗೆಯ ಕಿ ತ್ತಿರಿಸುವೆನು ಮುಂದೆ ವೈಕುಂಠವಿಠಲ ಚನ್ನಿಗರಮಣ5
--------------
ಬೇಲೂರು ವೈಕುಂಠದಾಸರು
ಕೊಳಲೂದೋ ರಂಗಯ್ಯ ರಂಗ ನೀ ಕೊಳಲೂದೋ ಕೃಷ್ಣಯ್ಯ ಪ ಕೊಳಲೂದೋ ಗೋವಳರೊಡಗೂಡಿ ಚೆಲುವ ಶ್ರೀ ವೇಣುಗೋಪಾಲ ಕೃಷ್ಣ ನೀ 1 ಕಡಲೊಳಗಿದ್ದು ಬಂದ್ಹಡಗದಿಂದಲಿ ಕಡಗೋಲ ಪಿಡಿದ ಉಡುಪಿಯ ಕೃಷ್ಣ ನೀ 2 ಎಂಟು ಮಂದ್ಯತಿವರ್ಯರು ನಿನ್ನ ಸೇವೆಗೆ ಬಂಟರಾಗಿಹರ್ವೈಕುಂಠಪತಿ ಕೃಷ್ಣ ನೀ 3 ನಿಜಭಕ್ತರು ಕೈಬೀಸಿ ಕರೆಯಲು ರಜತಪೀಠದ ಪುರವಾಸ ಕೃಷ್ಣ ನೀ 4 ಸತ್ಯವಾದ ಜ್ಞಾನ ಪೂರ್ಣಾನಂದ- ತೀರ್ಥರ ಕರವಶವಾದ ಕೃಷ್ಣ ನೀ 5 ಅಂದಿಗೆ ಕಿರುಗೆಜ್ಜೆ ಘಲ್ಲು ಘಲ್ಲೆನುತ ಕಾ- ಳಿಂಗನ್ನ್ಹೆಡೆಯಲಿ ಕುಣಿದಾಡೊ ಕೃಷ್ಣ ನೀ 6 ದಾಸರ ಮನದಭಿಲಾಷೆ ಪೊರೈಸಿ ಭೀ- ಮೇಶಕೃಷ್ಣನೆ ದಯ ಮಾಡೊ ರಂಗ ನೀ 7
--------------
ಹರಪನಹಳ್ಳಿಭೀಮವ್ವ
ಕೋಪಿಸದಿರು ಸ್ವಾಮಿ ಶ್ರೀ ನರಸಿಂಹ ಪ. ಕೋಪಿಸದಿರು ಕರುಣಾಪಯೋನಿಧಿಯೆ ಮ- ಹಾಪರಾಧಗಳನು ಲೇಪಗೊಳಿಸದಿರು ಅ.ಪ. ಮಧ್ವ ವಲ್ಲಭ ನಿನ್ನ ಸೇವೆಯ ನಡಸುವ ಮಧ್ಯ ಮಧ್ಯದೊಳೆದ್ದು ಹೋದ ತಪ್ಪು ಶುದ್ಧಿಯಿಲ್ಲದ ತಪ್ಪು ಸೂಕ್ತಿ ಪಾಠಗಳೊಳಾ- ಬದ್ಧ ಬರುವ ತಪ್ಪೆನಿದ್ದರು ಕ್ಷಮಿಸಿನ್ನು 1 ಸಂಸಾರ ಲಂಪಟನಾಗಿ ಬಳಲುವೆನು ಕಂಸಾರಿ ನಿನಗಿನ್ನು ಪೇಳ್ವದೇನು ಹಂಸವಾಹನ ಪೀಠ ಹಲಧರನನುಜನೆ ಸಂಶಯಿಸದೆ ಎನ್ನ ಕಾಯೊ ಕಮಲನಾಭ 2 ಪತಿತಜನರಿಗಧಿಪತಿಯಾಗಿರುವೆ ನಾನು ಮತಿಹೀನನೆಂಬುದ ಬಲ್ಲಿ ನೀನು ಪಾದ ಪದ್ಮವೆ ಇನ್ನು ಗತಿ ಎಂದು ನಂಬಿದನ ಮೇಲೆ ಮುನಿಸಿನ್ನೇನು 3 ಪಾತಕ ಕಡಲೊಳು ಪೊರಳುತ ನೆರಳುತ ಯಾತರಿಂದಲು ಏಳಲಾರದಿನ್ನು ಶ್ರೀ ತರುಣಿಯವರ ನಿನ್ನ ಸೇರಿದ ಜಗ ನ್ನಾಥ ದಾಸರ ಪಾದದವಲಂಬಗೊಂಡೆನು 4 ಶ್ರೀಶ ಶೇಷಗಿರೀಂದ್ರ ವಾಸ ನಿನ್ನನೆ ನಂಬಿ ದಾಸ ಕೂಟದಿ ಸೇರಿಕೊಂಡಿಹೆನು ಣಾ ಸಮುದ್ರನೆ ಎನ್ನ ಕಾವದುಚಿತವಿನ್ನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಕೋಲನಾಡುತ ಬಂದ ಬಾಲೆಯರು ಕೈಮುಗಿದುನಿಂದು ಮೇಲುಗಿರಿ ವಾಸ ಗೆಲಿಸೆಂದು ಕೋಲ ಪ. ದರ ಕೋಲ1 ಹರಿಯೆ ಸರ್ವೋತ್ತಮ ಹರಿಯೆ ಪರದೈವಹರಿದಾಸರೆಂಬೊ ಬಿರುದಿನ ಕೋಲಹರಿದಾಸರೆಂಬೊ ಬಿರುದಿ£ ಹೆಗ್ಗಾಳೆ ಹೆಬ್ಬಾಗಿಲಲ್ಲೆ ಹೊಯಿಸುತ ಕೋಲ 2 ವಿಷ್ಣು ಸರ್ವೋತ್ತಮ ವಿಷ್ಣುಪರದೈವ ವಿಷ್ಣು ದಾಸರೆಂಬೊ ಬಿರುದಿನ ಕೋಲವಿಷ್ಣು ದಾಸರೆಂಬೊ ಬಿರುದಿನ ಢಕ್ಕಿಯಘಟ್ಯಾಗಿ ತಾವು ಹೊಯಿಸುತ ಕೋಲ 3 ಒಬ್ಬನೆ ವಿಷ್ಣು ಇನ್ನೊಬ್ಬನಿಲ್ಲವೆಂದು ಅಬ್ಬರದಿಂದನಾಗಸ್ವರ ಹೆಗ್ಗಾಳೆ ಕೋಲಅಬ್ಬರದಿಂದ ನಾಗಸ್ವರ ಹೆಗ್ಗಾಳೆಹೆಬ್ಬಾಗಿಲಲ್ಲೆ ಹೊಯಿಸುತ ಕೋಲ4 ಭಾಗವತ ಭಾಗವತ ವೆನ್ನಿ ರಾಮೇಶನಅತಿಭಕ್ತರ ನಡುವೆ ಪಥವೆನ್ನಿ ಕೋಲ 5
--------------
ಗಲಗಲಿಅವ್ವನವರು
ಕೌಸಲ್ಯಾಗರ್ಭಾಬ್ಧಿಸೋಮಾ ಸ್ವಾ'ು ಕೌಶಿಕ ಮಖಪಾಲ ರಾಮ ಪಆಶಯೇಶಯ ಜನಕ ಪಾಪ'ನಾಶ ತಾಪಸಹೃದಯ ಕಮಲಾವಾಸ ಭದ್ರ ಗರೀಶ ರಘುಕುಲಭೂಷ ದಶ'ಧ ವೇಷಧಾರಿ 1ತೃತಿಯರಾಮಕೋಟಿ ಕೂಡು ಭಕ್ತತತಿಗೆ ಲಭಿಸುವಂತೆಮಾಡುಪತಿತಪಾವನ ಪದ್ಮನಯನ ಶತಧೃತಿ ಶಿವಸೇವ್ಯಚರಣಾಸತತವೂ ತವಸೇವೆಗೆ ಮನ 'ತವತೋರಿಸಿ ಸಲಹೋ ಶೌರಿ 2ಭರತಪೂರ್ವಜ ದೀನಪ್ರೇಮಾ ದನುಜಹರಣಧುರೀಣ ನಿಸ್ಸೀಮಕರಿಧ್ರುವ ಪ್ರಹ್ಲಾದ ಶಬರೀ ನರಸತಿಪರಮಾರ್ಥದಾಯಕನಿರುಪಮಾನದ ರಾಮಕೋಟಿಯಾಚರಣ ಕೀರ್ತಿಯ ನಿಲಿಸು ಧೊರೆಯೆ 3ಧಾರುಣೀ ಚನ್ನಪಟ್ಣೇಶಾ ಲಕ್ಷ್ಮೀನಾರಾಯಣ ಕಾಯೊ ಶ್ರೀಶಾಮಾರಸುಂದರ ರಾಮನಾಮವ ಹಾರವಾಯಾಗಿ ಸಮರ್ಪಿಸಿದೆವುಕೋರಿಕೆ ಸಪ್ತೋತ್ಸವಂಗಳು ಪೂರ್ತಿಮಾಡುವರೆಂದು ನಂಬಿದೆ 4ಗುರುತುಲಸೀರಾಮಸ್ವರೂಪ ನಿಮ್ಮಕರುಣದಿಂದಲಿಸಾರಿಭೂಪಾಜರುಗಿಸಿದಿರೀ ಜಪಾಧ್ವರವನು ಮುರಹರೀಮದ್ದುರಿತ ಹರಣನೆನಿರತಭಕ್ತಿಯ ಕೊಟ್ಟು ಪ್ರಜಗಳುನುದ್ಧರಿಸುವ ಕರ್ತವ್ಯ ನಿನದೇ 5ಭೂ'ುಜನರ ಗರುಡುತುರಗಾ ರಂಗಸ್ವಾ'ುದಾಸೊಲ್ಲಾಸಾ ಈಗಪ್ರೇಮ ತೋರಿಸಬೇಕು ಬೇಡುವೆ ಕಾ'ುತಾರ್ಥದ ಕಲ್ಪಭೂಜಸೋಮಜಿತಮುಖ ಸಕಲ ಸುಗುಣಸ್ತೋಮ ತುಲಸೀದಾಮ ಧರಣಾ * 6* 20-8-1933 ಎಂದು ದಿನಾಂಕ ಇದೆ.(ಈ) ರಂಗಸ್ವಾ'ುದಾಸರನ್ನು ಕುರಿತ ಕೆಲವು ಕೃತಿಗಳು
--------------
ಮಳಿಗೆ ರಂಗಸ್ವಾಮಿದಾಸರು
ಕ್ಷೀರಶರಧಿಶಯನ ನಾರಾಯಣ ಪ ತೋರೊ ಎನ್ನಲಿ ಕರುಣ ನಾರಾಯಣ ಅ.ಪ ಕ್ಷಿತಿಯೊಳೆನಗೆ ಸ್ಥಿತಿ ಗತಿಯು ಬೇರಿಲ್ಲವೊ ಶ್ರಿತಜನ ಕಲ್ಪತರು ಶ್ರೀರಮಣ 1 ಅರಿಷಡ್ಪರ್ಗವ ಮುರಿದು ಎನಗೆ ನಿನ್ನ ವರ ಸೇವೆಯ ನೀಡೊ ಶ್ರೀ ನರಹರಿ 2 ಪಾಮರ ಭಕುತರ ಕ್ಷೇಮವಹಿಸಿ ಅವರ ಕಾಮಿತಗಳ ನೀಡೊ ಕಾಮಧೇನು 3 ಸಂತತ ಹೃದಯದಿ ನೆಲೆಸಿ ಎನಗೆ ಮನ ಶಾಂತಿಯ ದಯಮಾಡೊ ಚಿಂತಾಮಣಿ 4 ನಿನ್ನ ದಾಸರದಾಸನೆನ್ನಲಿ ದಯದಿ ಪ್ರ ಸನ್ನ ನಾಗೊ ಶ್ರೀಶ ಲಕ್ಷ್ಮೀಶ5
--------------
ವಿದ್ಯಾಪ್ರಸನ್ನತೀರ್ಥರು
ಕ್ಷೇತ್ರ ಮೇಲುಕೋಟೆ ಹರಿಯ ಕಂಡೆನು ಗಿರಿಯದೊರೆಯ ಕಂಡೆನು ಪ. ತರಳನನ್ನು ಪೊರೆಯಲೋಸುಗ ನರಮೃಗಾವತಾರನಾದಅ.ಪ. ತಿರುನಾರಾಯಣಪುರದ ಗಿರಿಯ ಶಿಖರದಿ ಚರಣತಲದಿ ತಿರುಕಲ್ಯಾಣಿ ಮೆರೆಯುತಿರಲು ಹರುಷದಿಂದ ಹರಿಯ 1 ದಾಸರಾದರ ಹೃದಯಾ ವಾಸನೆನಿಸುವ ವಿನುತ ಚರಣ ಭಾಸುರಾಂಗ ದೋಷಹರಣ ಹರಿಯ 2 ನಾಗವೈರಿಯ ರೂಪನಾಗೆ ಮೆರೆಯುವ ಯೋಗಪಟ್ಟಿಯಾಂತು ಪರಮ ಯೋಗನಿಷ್ಟೆಯಲ್ಲಿ ಕುಳಿತ ಹರಿಯ 3 ದುಷ್ಟದೈತ್ಯರಂ ಕುಟ್ಟಿ ಕೆಡಹಿದ ಮುಟ್ಟಿಭಜಿಪ ಭಕ್ತರೆಲ್ಲರ ಕಷ್ಟಕಳೆದು ಇಷ್ಟವೀವ ಹರಿಯ 4 ಶೇಷಗಿರಿಯೊಳು ಮತ್ತಾ ಮೇಲುಕೋಟೆಯೊಳ್ ಶೇಷಭೂತರಾಶೇಷ ಭಕ್ತರ ಪೋಷಿಸುತ್ತಿಹ ಸರ್ವೇಶನೀತನೆ ಹರಿಯ 5
--------------
ನಂಜನಗೂಡು ತಿರುಮಲಾಂಬಾ
ಖುಲ್ಲ ಮಾತುಗಳು ನಿಲ್ಲದಾಯುಷ್ಕೀರ್ತಿ ಎಲ್ಲರೊಳು ಕೇಳಿ ಪ ಅರಸು ಸಣ್ಣವನೆಂದು ಸರಸವಾಡಲು ಸಲ್ಲ ಕರೆಸಿ ಕೇಳದ ಮಾತು ಆಡಸಲ್ಲ ಪರಸಖರ ಮನೆಯೊಳಗೆ ಇರಿಸಿಕೊಂಡಿರ ಸಲ್ಲ ಬೆರೆಸಿ ಬಹ ಪಾತಕರ ಅರಸುವರೆ ಸಲ್ಲ 1 ಹಗಲು ಕಳ್ಳನ ಕೈಯ ಜಗಳವಾಡಲು ಸಲ್ಲ ಹಗೆಯೊಡನೆ ಸ್ನೇಹವನು ಮಾಡಸಲ್ಲ ಜಗಳಗಂಟಿಕ್ಕುವನ ಮೊಗದೊಳಗೆ ನಗೆಯಿಲ್ಲ ಅಗಲಿ ಪೋಗುವೆನೆಂಬ ಮಗ(ನು) ಸೊಗ(ಸ)ಲ್ಲ 2 ಒಡೆಯನಿಲ್ಲದ ಊರು ಬಡವರಿಗೆ ಅಳವಲ್ಲ ಕಡು ಚೆಲ್ವೆ ಕುರುಡನಿಗೆ ಮಡದಿಯಹ ಸಲ್ಲ ನುಡಿಯ ತಿಳಿಯದೆ ಇಹನ ಸಾಕ್ಷಿಯನು ಇಡ ಸಲ್ಲ ದೃಢವಾದ ಮೂರ್ಖನೊಳು ಕದನ ಮಾತಿಲ್ಲ 3 ಹರಿದಾಸರೆನಿಸಿದರೆ ಪರಗತಿಯೊಳೆರವಿಲ್ಲ ಗುರುಹಿರಿಯರಾದವರ ಜರೆಯ ಸಲ್ಲ ಕರಕರೆಯ ಬದುಕಿನೊಳು ಬರುವ ಉಡುಗೊರೆಯಿಲ್ಲ ಪರಿ ಸಲ್ಲ 4 ಹರಿಯು ಮುನಿದರೆ ಮರೆಯೊಳಿರಿಸಿ ಕೊಂಬುವರಿಲ್ಲ ಹರಿಯೊಲಿದ ನರನೊಳಗೆ ಗೆಲುವ ಪರಿಯಿಲ್ಲ ವರಾಹ ತಿಮ್ಮಪ್ಪನಿರಲು ಬಲ್ಲ ನರನು ಹರಿದೂಷಕರ ಸರಿಯೊಳಗೆ ನಿಲ್ಲ 5
--------------
ವರಹತಿಮ್ಮಪ್ಪ
ಗಣಪತಿ ಸ್ತುತಿ ಗಜವದನ ನಿನ್ನ ಚರಣಕೆ ನಮಿಸುವೆ ಅಜನ ಐತನ ನಾನು ಮರೆಯದೆ ನುಡಿಸೈ ಪ. ವೇದವ್ಯಾಸರಿಗೆ ದಾಸನೆಂದೆನಿಸಿ ವೇದಗಳೆಲ್ಲಾ ಅತಿಮೋದದಿ ಬರೆದೇ 1 ಜಗನ್ನಾಥ ದಾಸರಿಗೆ ಗುರುವು ನೀನೆಂದೆನಿಸಿ ಜಗದೊಳಗೆ ಹರಿಕಥಾಮೃತ ಸುರಿಸಿದೆ 2 ವಿಶ್ವಂಭರನೇ ಎನ್ನ ವಜ್ಞೆಗಳ ಪÀರಿಹರಿಸಿ ಯಜ್ಞವ್ಯಾಪಕನ ನಾಮವ ನುಡಿಸೈ 3 ಅನುಗಾಲ ನುಡಿವಂಥ ವರಗಳ ನೀಡೈ 5
--------------
ಸರಸಾಬಾಯಿ