ಒಟ್ಟು 279 ಕಡೆಗಳಲ್ಲಿ , 15 ದಾಸರು , 230 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತಿನಂತಲ್ಲನುಭವ ಜ್ಞಾನ ಮರುಳಜನ ಬಲ್ಲವೇನ ಯತಿಮುನಿಗಳು ಸಾಧಿಸುವ ಖೂನ ಮನೋನ್ಮನದ ಸಾಧನ ಧ್ರುವ ನುಡಿಜ್ಞಾನಾಡಿ ತೋರಬಹುದು ನಾಡ ಲೋಕದೊಳೆಲ್ಲ ನಡಿಜ್ಞಾನದೆ ದುರ್ಲಭವದು ಆಡಿ ದೋರಲಿಕ್ಕಿಲ್ಲ ಗುಹ್ಯ ನಿಜಬೋಧಿದು ಒಡೆದ್ಹೇಳುವದಲ್ಲ ಒಡನೆ ಸದ್ಗುರು ಘನ ದಯದಲಿದು ಪಡೆದವನೆ ತಾಂ ಬಲ್ಲ 1 ಕಲಿತಾಡುವ ಮಾತಿಗೆ ಸಿಲುಕದ ಮೂಲವಸ್ತುದ ಖೂನ ನೆಲೆನಿಭವೆ ತಾ ಅಗಮ್ಯಿದು ಬಲು ಸೂಕ್ಷ್ಮಸ್ಥಾನ ಬಲಿಯದೆ ರೇಚಕ ಪೂರ್ವಿದು ನೆಲೆಗೊಳ್ಳುದು ಸಾಧನ ನಿಲಕಡ್ಯಾಗದೆ ಕುಂಭಕಲಿದು ಬಲಿಯದು ಗುರುಙÁ್ಞನ 2 ಸ್ವಾನುಭವ ಸುಖ ಸಾಧಿಸಿ ಅನುದಿನದಿ ನೋಡಿ ಮನಗೆದ್ದು ಜನಕೆ ಮೋಹಿಸುವ ಅನುಭವ ಹೇಳಬ್ಯಾಡಿ ಭಾನುಕೋಟಿತೇಜನೊಲಿದು ತಾ ಖೂನಾಗುವ್ಹಾಂಗ ಮಾಡಿ ದೀನ ಮಹಿಪತಿ ಸ್ವಾಮಿ ಮನಗಂಡು ಮನೋಹರ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾನವ ಜನುಮ ನಾನು ಯಾರೆಂಬ ಖೂನವಿಲ್ಲದೆ ಪ ಕಾಲನಾಜ್ಞೆಯನ್ನು ಪಡೆದು ಸೂಳ ಎಣಿಸಿ ಜಗಕಿಳಿದು ಜಾಲಹಾಕಿ ಜವನಗೊಲಿದು ಶೂಲಕ್ಹಾಕುವ ಮಾರಿಗೊಲಿದು 1 ತಂದ ಪುಣ್ಯವನ್ನು ಕೆಡಿಸಿ ಮಂದಿಮಕ್ಕಳನ್ನು ಬಿಡಿಸಿ ಮಂದನೆನಿಸಿ ಕುಂದುಹೊರೆಗೆ ಬಂಧಕ್ಕೆಳೆವ ರಂಡೆನ್ಹೊರೆಸಿ2 ಜನನಿಜನಕರನ್ನು ಜರೆದಿ ಮನೆಯ ಹೆಂಡಿರ ಮಾನ ಕಳೆದಿ ಬಿನುಗು ಸೂಳೆಗೆ ವಶನಾದಿ ಬಿನುಗರೊಳಗೆ ಬಿನುಗನಾದಿ 3 ನೀಗಿದಿ ಕುಲಶೀಲತೆ ಮುದಿ ಗೂಗೆಯಂದದಿ ದಿನಗಳೆದಿ ಭಾಗವತದ ಭಾಗ್ಯ ಮರೆದಿ ಕಾಗೆನುಂಗಿದ ಹೊಲೆಯನಾದಿ 4 ಸಾಧು ಸುಜನಬೋಧ ಜರೆದಿ ವೇದವಾಕ್ಯ ಮೀರಿ ನಡೆದಿ ಶೋಧಿಸಿ ಸಮಯ ತಿಳಿಯದ್ಹೋದಿ ಆದಿ ಶ್ರೀರಾಮಗ್ಹೊರತಾದಿ 5
--------------
ರಾಮದಾಸರು
ಮಾನವಜನುಮ ಖೂನವರಿಯದೇನು ಏನುಕೆಡುವಿಯೋ ಏನುಕೆಡುವಿಯೋ ಜ್ಞಾನವಿಲ್ಲದೆ ಪ ನಾನಾವಿಧದಿ ಅನ್ಯರನ್ನು ಏನುಕಾರಣ ಜರೆದು ಸುಳ್ಳೆ ಹಾನಿಯಾಗಿ ಪೋಗುವಿಯೋ ಅ.ಪ ಅವನ ಸಂಪದ ನಿನಗೇನು ನಿನ್ನಪದವಿ ಅವನಿಗೇನೋ ಅವನ ಇವನ ಭವನ ಸುದ್ದಿ ನೆವನಗೈದು ದಿವನಿಶಿಯು ಸವೆಯದಾಡಿ ಭುವನಸುಖವ ಸವಿಯದೆ ಜವನ ಭವನ ಕಾಣುವಿ 1 ಶೀಲಜನರ ಸಂಗಡಾಡೋ ಮೂಲತತ್ವವಿಚಾರಮಾಡೋ ಕೀಳನಾಗಿ ಹಾಳು ಭ್ರಮೆಯೊಳು ಬಿದ್ದು ಮೂಳನಾಗಿ ಕಾಲನಾಳಿನ ದಾಳಿಗೆ ಸಿಲ್ಕಿ ಗೋಳಿನೊಳು ಬೀಳುವಿಯೊ 2 ಪಾಮರನಾಗಬೇಡೆಲವೋ ಪಾಮರ ಮನದ ಮಲವತೊಳೆಯೋ ಪ್ರೇಮ ಮೋಹಗಳನು ತುಳಿದು ಕಾಮಜನಕ ಸ್ವಾಮಿಶ್ರೀರಾಮಮಂತ್ರ ಪಠಣಮಾಡಿ ಆ ಮಹಾ ಮುಕ್ತಿ ಪಡೆದು ಬಾಳೊ 3
--------------
ರಾಮದಾಸರು
ಮಾನವನ್ಯಾಕದ್ಯೋ ಎಲೊ ಎಲೋ ಮಾನವನ್ಯಾಕದ್ಯೋ ಪ ಮಾನವನ್ಯಾಕದ್ಯೋ ಹೀನನೆ ಥೂಥೂ ಮಾನವಜನುಮದ ಖೂನವ ತಿಳಿಯದೆ ಅ.ಪ ನರನಾಗವತರಿಸಿಬಂದಿಹ್ಯ ಪರಿಯನು ಶೋಧಿಸಿ ಅರುಹುಗೂಡಿ ಸಿರಿವರನ ಕಥಾಮೃತ ಪರಮಭಕ್ತಿಯಿಂದ ಶ್ರವಣಮಾಡದ 1 ತನುನಿಜವಲ್ಲೆನಿಸಿ ಸತತದಿ ತನುಧನರ್ಪಿಸಿ ಘನತರಭಕುತಿಲಿ ವನಜನಾಭನ ಘನಸತ್ವಚರಿತವನು ಮನನ ಮಾಡದ 2 ಮಂದಮತಿಯ ಹರಿದು ಜಗಕೆ ಬಂದ ಕುರುಹು ತಿಳಿದು ಸಿಂಧುಶಯನ ಮಮತಂದೆ ಶ್ರೀರಾಮನ ಬಂಧುರಂಘ್ರಿ ನಿಜಧ್ಯಾಸವ ರುಚಿಸದ 3
--------------
ರಾಮದಾಸರು
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು
ಮುಖ್ಯಬೇಕು ಗುರುಭಕ್ತಿಗೆ ತಾ ಸದ್ಭಾವನೆ ಸಪ್ರೇಮ ಸಿಕ್ಕಿ ಬಾಹ್ವ ಸಾಧಿಸಿ ತನ್ನೊಳು ಶ್ರೀಗುರುಸರ್ವೋತ್ತಮ ಧ್ರುವ ಸೋಹ್ಯ ತಿಳಿದರೆ ಸಾಧಿಸಿಬಾಹುದು ಶ್ರೀಗುರುವಿನ ಶ್ರೀಪಾದ ದೇಹ ನಾನಲ್ಲೆಂಬು ಭಾವನಿ ಬಲಿವುದು ತಾ ಸರ್ವದಾ ಗುಹ್ಯಮಾತು ಗುರುತಕೆ ಬಾಹುದು ಸದ್ಗುರು ಸುಪ್ರಸಾದ ಬೋಧ 1 ಕೀಲು ತಿಳಿದರೆ ಕಿವಿ ಸಂದಿಲ್ಯಾದೆ ಮೂಲಮಂತರದ ಖೂನ ಕೂಲವಾದರೆ ಗುರುದಯದಿಂದಲಿ ಕೇಳಿಸುವದು ಪೂರ್ಣ ಮ್ಯಾಲೆ ಮಂದಿರದೊಳು ತಾ ತುಂಬೇದ ಥಳಥಳಿಸುವ ವಿಧಾನ ಶೀಲ ಸುಪಥ ಸಾಧಿಸಿ ಸದ್ಗತಿ ಸಾಧನ 2 ಟೂಕಿ ಬ್ಯಾರ್ಯಾದೆ ಏಕೋಭಾವದಿ ಕೇಳಿರೊ ನೀವೆಲ್ಲ ಹೋಕು ಹೋಗಿ ಹುಡುಕಿದರೆ ತಾ ಎಂದಿಗೆ ತೋರುವದಲ್ಲ ಶೂನ್ಯ ಜೋಕೆಯಿಂದ ಜಾಗಿಸಿಕೊಡುವಾ ಮಹಿಪತಿಗುರು ಮಹಾಮಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಥಾದೇವೊ ತಥಾ ಗುರೌ ಶ್ರುತಿ ಹೇಳಿದ ಸನ್ಮತಲಿರ್ಯೊ ಧ್ರುವ ವೃಥಾ ಅಭಾವ ನೀ ಹಿಡುವರೆ ಸ್ವತ:ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚಿತ್ಸುಖ ಹೊಳೆವರು ಕಣ್ಣಾರೆ 1 ಮುಗಿಲಿಗೆ ಮತ್ತೆ ಮುಗಿಲುಂಟೆ ಹಗಲಿಗೆ ಹಗಲಾಗುದುಂಟೆ ಜಗ ಇಹುದಕೆ ಜಗಮುಂಟೆ ಹೀಗಾದ ಮ್ಯಾಲೆ ವಸ್ತು ಎರಡುಂಟೆ 2 ಅನುಭವಕಿದರಿಟ್ಟು ಬಾಹುದು ಖೂನ ಹೇಳವ್ಯಾವು ನೋಡು ವೇದ ದೀನ ಮಹಿಪತಿಗಿದೆ ಬೋಧ ಭಾನುಕೋಟಿತೇಜನೊಂದೇ ತಾನಾದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾಕೆ ನಿನಗೆ ಲೋಕದುಸಾಬರಿ ಜಗ ದೇಕನಾಥನಿಗೆ ಬೀಳು ಮೊರೆ ಪ ಸಾಕುಯೆಂದು ಲೋಕೈಕನ ಬೇಡಿ ನಡಿ ಏಕಚಿತ್ತದಿ ವೈಕುಂಠದಾರಿ ಅ.ಪ ಸತ್ಯಸಂಗವೆಂಬ ಛತ್ತರ್ಹಿಡಿ ಪಥ ಚಿತ್ತ ಶುದ್ಧಿಯಿಂದ ಗುರ್ತುಮಾಡಿ ಭಕ್ತವತ್ಸಲನ ಸತ್ಯ ಬಿರುದುಗಳ ಭಕ್ತಿಯಿಂ ಕೂಗುತ್ತ ನಿರ್ತ ತುರ್ತುನಡಿ 1 ವನಜನಾಭನ ಕಥೆ ಶ್ರವಣಮಾಡಿ ಬಿಡ ದನುಭವದೊಳು ನಿಜಮರ್ಮ ಹುಡುಕಾಡಿ ಮನಸಿಜ ಜನಕನ ಚರಣದಾಸರ ಕೂಡಿ ಪಡಿ 2 ಮಾನ ಅಭಿಮಾನವೆಲ್ಲ ಸಮ ನೋಡಿ ನಿನ್ನ ನಾನಾ ಕಲ್ಪನೆಗಳ ಕಡೆಮಾಡಿ ಜ್ಞಾನಜ್ಯೋತಿ ಹಚ್ಚಿ ಧ್ಯಾನದೃಷ್ಟಿ ಚಾಚಿ ಜಾಣ ಶ್ರೀರಾಮನ ಖೂನ ಹಿಡಿ 3
--------------
ರಾಮದಾಸರು
ಯಾಕೆ ಸುಮ್ಮನೆ ಪೇರಿ ಹೊಡೆಯುವಿ ಕಾಕು ದುರ್ಭವ ಚಕ್ರದಿ ಪ ಲೋಕದಿರುವು ನಿನಗೇನು ಸ್ಥಿರವೆಲೋ ಕಾಕುಜೀವ ವಿಚಾರ ಮಾಡದೆ ಅ.ಪ ಕಾಕುಸಿರಿಗೆ ಕೈಹಾಕಿ ಬಲು ಬಲು ಶೋಕದಬ್ಧಿಲಿ ಮುಳುಗಿದ್ಯೊ ನೂಕಿ ಯಮನರೊದೆದು ಎಳೆವಾಗ ಲೋಕಸಂಪದ ನಿನ್ನ್ಹಿಂದೆ ಬರುವುದೆ 1 ನಾನು ಯಾರೆಂದೆಂಬ ಖೂನ ಸು ಜ್ಞಾನ ವಿಡಿದು ತಿಳಿಯದೆ ಶ್ವಾನಸೂಕನಂದದಿ ಮಹ ಹೀನ ಬವಣೆಯೊಳ್ಬೀಳುತ 2 ಗೋತಗೋಜಲಕುಣಿ ಈ ಸಂಸಾರ ರೋತಿ ಹೊಲಸಿಕ್ಕಿ ನಾರುವ ನೀತಿಗೆಟ್ಟದರೊಳಗೆ ಬಿದ್ದೆಮ ಭೀತಿಯಿಂ ಬಳಲುವುದೇನೆಲೊ 3 ಪೂರ್ವಪುಣ್ಯದಿಂ ಸಿಕ್ಕ ಈ ಮಹ ಪರ್ವಕಾಲ ಸಮಯರಿಯದೆ ದುರ್ವಿಕಾರದಿಂ ಸರ್ವ ಕಳೆಯಲು ದೊರೆವುದೇ ಪುನ:ಬಯಸಲು 4 ತೋರಿ ಇಂದ್ರಜಾಲದಂದದಿ ಹಾರಿಹೋಗುವ ಮಾಯ ನೆಚ್ಚಿ ಸಾರತರ ಮೋಕ್ಷವನು ಕರುಣಿಪ ಶ್ರೀರಾಮನ ನಂಬದೆ 5
--------------
ರಾಮದಾಸರು
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ಧ್ರುವ ಧ್ಯಾನ ಮೌನ ಸ್ನಾನ ಸಂಧ್ಯಾಖೂನ ಗುರುತು ಅರಿಯೆ ನಾ ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ 1 ಹೀನ ದೀನ ಜ್ಞಾನಶೂನ್ಯ ದಾನ ಧರ್ಮ ಅರಿಯೆ ನಾ ನೀನೆ ಕಾಯಬೇಕು ಎನ್ನ ಕರುಣಾ ಕೃಪಾನಿಧೆ 2 ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ ತರಣೋಪಾಯ ದೋರಿಸೆನ್ನ ಹೊರಿಯೊ ದಯಾನಿಧೆ 3 ಅರುಹು ಕುರುಹು ನರಿಯ ದೀಹ್ಯ ಮರುಳಮಂಕ ತರಳನಾ ಕರವ ಪಿಡಿಯ ಧರೆಯೊಳಿನ್ನು ತಾರಿಸೊ ದಯಾನಿಧೆ 4 ಆಶಾಪಾಶದೊಳು ವಾಸವಾದ ದೋಷ ರಾಶಿ ನಾ ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ 5 ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ ದಾಸರೊಡನೆ ಕೂಡಿಸೊ ಭಾಸ್ಕರ ದಯಾನಿಧೆ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೇದದ ಮೂಲ ಆದಿ ಅನುಕೂಲ ಸಾಧು ಜನರ ಸದ್ಛನ ಲೋಲ ಧ್ರುವ ಕೀಲ ಬುಧರಕನುಕೂಲ ಇದೇ ನಿಜ ನೋಡಿರೊ ಸಾಧಿಸಿ ಘನಸುಖಗೂಡಿರೊ 1 ಜ್ಞಾನದಾಸರ ಧ್ಯಾನದಂತರ ಖೂನದಾ ವಿವರ ಅನುಭವಾಧಾರ ಕಣ್ಣಾರ ಎನ್ನ ಮನೋಹರ 2 ಗುಹ್ಯ ಗೌಪ್ಯಸ್ಥ ಮಹಾಪ್ರಶಸ್ತ ಈಹ್ಯ ಸೌಭ್ಯಸ್ಥ ಮಹಿಮರ ತಸ್ತ ಸುವಸ್ತ ಶ್ರೀಗುರು ಸಮರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶುದ್ಧ ಸನ್ಮಾರ್ಗ ಸರ್ವರಿಗಿದು ಒಂದೆ ಬುದ್ಧಿವಂತರು ತಿಳಿದರು ಇದರಿಂದೆ 1 ಇದರಿಂದೇವೆಂಬುದು ನಿರ್ವಾಣ ಒದರುತಲಿಹುದು ವೇದಪುರಾಣ 2 ಪುರಾಣ ಪುಣ್ಯದ ಹಾದಿಯು ನಿಜ ಸುರಮುನಿಗಳಿಗಿದು ಹೊಳೆವದು ಸಹಜ 3 ಸಹಜಾನಂದದ ಸುಖಸಾಗರ ಬಾಹ್ಯಾಂತ್ರ ಸದೋತಿತ ಸಹಕಾರ 4 ಸಹಕಾರವು ಚಿನ್ಮಯ ಚಿದ್ರೂಪ ಸೋಹ್ಯದೋರುವ ಶ್ರೀ ಗುರುಸ್ವರೂಪ 5 ಸ್ವರೂಪವೆ ಸದ್ಗೈಸುವ ಹಾದಿ ಪರಮ ವೈಷ್ಣವರ ಮೂಲಾಗ್ರದ ಆದಿ 6 ಅಧಿವೆಂಬುದು ನಿಜನಿರ್ಧಾರ ಸಾಧಿಸುದವರಿಗೆ ಸಾಕ್ಷಾತಾರ 7 ಸಾಕ್ಷಾತ್ಕಾರವೆ ಮೋಕ್ಷದಮನೆಯು ಅಕ್ಷಯ ಪದ ಅದ್ವೈತದ ಖಣಿಯ 8 ಅದ್ವೈತವೆ ಆಧ್ಮಾತ್ಮ ಸುವಿದ್ಯ ಸಿದ್ದಸಾಧಕರಿಗೆ ಆಗುವ ಸಾಧ್ಯ 9 ಸಾಧ್ಯವೆಂಬುದು ನಿಜಸಿದ್ಧಾಂತ ಭೇದಿಸಿದವರಿಗೆ ಇದು ಸನ್ಮತ 10 ಸನ್ಮತವೆ ಮತ ಸರ್ವರಿಗೆಲ್ಲ ಉನ್ಮನಲೀಹ ಮಹಾಯೋಗಿಯು ಬಲ್ಲ 11 ಬಲ್ಲೆವೆಂಬುದು ಬಲು ಅಗಾಧ ಸೊಲ್ಲಿಗೆ ಸಿಲುಕದು ಗುರುನಿಜಭೋದ 12 ಬೋಧವೆ ಸದ್ಗುರುವಿನ ದಯಕರುಣ ಸದ್ಗತಿಸುಖ ಸಾಧನದ ಸ್ಫುರಣ 13 ಸ್ಫುರಣವೆ ಬ್ರಹ್ಮಾನಂದದ ಹರುಷ ತರಣೋಪಾಯದ ಮಹಾ ಉಪದೇಶ 14 ಉಪದೇಶವೆ ನಿಜ ಉಪನಿಷದ್ವಾಕ್ಯ ಒಪ್ಪಿಡುವದು ಭೂಸ್ವರ್ಗತ್ರೈಲೋಕ್ಯ 15 ತ್ರೈಲೋಕ್ಯಕೆ ಇದು ನಿಜನಿಧಾನ ಭಯವಿಲ್ಲದ ಮಹಾಸುಖಸಾಧನ 16 ಸಾಧನದಿಂದ ಸದ್ಗತಿ ಸಂಪೂರ್ಣ ಸಾಧು ಸಜ್ಜನರಿಗೆ ಸಕಲಾಭರಣ 17 ಸಕಲಾಭರಣ ಸದ್ಗುರು ನಿಜ ಅಭಯವು ಶುಕಾದಿ ಮುನಿಗು ಕೂಡಿದ ಪ್ರಭೆಯು 18 ಪ್ರಭೆಗಾಣಲು ತೋರದು ನೆಲೆನಿಭವು ನಿಭವೆ ಮಹಾಮಂಗಳಕರ ಶುಭವು 19 ಶುಭದೋರುದು ಸದ್ಗುರು ಕೃಪೆಯಿಂದ ಭ್ರಮೆಹಾರಿತು ಮಾಯೆ ಇದರಿಂದ 20 ಇದರಿಂದೆ ಇದರಿಟ್ಟಿತು ಪುಣ್ಯ ಒದಗಿ ಕೈಗೂಡಿತು ಬಂತು ತಾರ್ಕಣ್ಯ 21 ತಾರ್ಕಣ್ಯವು ಬಂತೆನ್ನೊಳು ಪೂರ್ಣ ಸರ್ಕನೆ ದೊರೆಯಿತು ಸದ್ಗುರುಖೂನ 22 ಖೂನವೆ ಎನ್ನೊಳಗಾಯಿತು ಧ್ಯಾನ ಘನಸುಖದೋರುವ ಅನುಸಂಧಾನ 23 ಅನುಕೂಲಾದ ನಮ್ಮಯ್ಯ ಪ್ರಸಿದ್ಧ 24 ಪ್ರಸಿದ್ಧವೆ ಪ್ರತ್ಯಕ್ಷ ಪ್ರಮಾಣ ಭಾಸುತಿಹುದು ಶ್ರೀಗುರು ಶ್ರೀಚರಣ 25 ಶ್ರೀಚರಣಕೆ ಎರಗಿಹ ಮಹಿಪತಿಯು ಸೂಚನೆ ಮಾತ್ರ ಕೊಂಡಾಡಿದ ಸ್ತುತಿಯು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶೋಧಿಸದೆ ನಿಜ ಬೋಧಿಪೆನೆಂಬ ಈ ಹಾದಿಯೆಲ್ಲಿ ಕಲಿತಿರೆಲೊ ಎಲೋ ಆಧರವರಿಯದ ವಾದಿಮೂರ್ಖರಿಗೆ ಬೋಧ ಸಿದ್ಧಿಪುದೇನೆಲೋ ಎಲೋ ಪ ಋತುಯಿಲ್ಲದವಳಲ್ಲಿ ರತಿಕಲಹ ಬೆಳೆಸಲು ಸುತರ ಪಡೆವಳೇನೆಲೋ ಎಲೋ ಅತಿಮಂದಮತಿಗಳಿಗಹಿತವ ಬೋಧಿಸೆ ಸು ಗತಿಗೆ ಬಾಹರೇನೆಲೋ ಎಲೋ ಕತ್ತೆಗೆ ಮುತ್ತಿನ ಕಂಟಲಿ ಹೇರಲು ಅರ್ತೀತೆ ಬೆಲೆಯನು ಎಲೋ ಎಲೋ ಕೃತ್ರಿಮರಿಗಾತ್ಮದ ಸ್ಮøತಿಯ ಬೋಧಿಸೆ ದು ರ್ಗತಿಯು ತಪ್ಪೀತೇನೆಲೋ ಎಲೋ 1 ಕೋಣನ ಮುಂದೆ ವೇಣುಬಾರಿಸಲು ಅನಂದತಾಳೀತೇನೆಲೋ ಎಲೋ ಶ್ವಾನನ ಮುಂದೆ ಸುಗಾನ ಮಾಡಲದು ಧ್ಯಾನಕ್ಕೆ ತಂದೀತೇನೆಲೋ ಎಲೋ ಹೀನಸಂಸಾರಿಗೆ ದಾನಿಗಾಂಭೀರ್ಯದ ಖೂನ ತಿಳಿದೀತೇನೆಲೋ ಎಲೋ ಜ್ಞಾನಬೋಧಾಮೃತ ಅಜ್ಞಾನಿಗೆ ಉಸುರಲು ಹೀನಭವ ಬಿಟ್ಟೇತೇನೆಲೋ ಎಲೋ 2 ಆಸೆಗಾರಗೆ ಮಹ ಶಾಶ್ವತ ಪೇಳಲು ಲೇಸಾಗಿ ತೋರೀತೇನಲೋ ಎಲೋ ದಾಸರ ದೂಷಿಪ ನಾಶಮತಿಗೆ ಯಮ ಪಾಶವು ತೊಲಗೀತೇನೆಲೋ ಎಲೋ ಈಶನೊಲಿಮಿಲ್ಲದೆ ನಿಜಬೋಧಲಂಬಿಸಿ ಮುಕ್ತಿ ಅಸನ ಸಿಕ್ಕೀತೇನೆಲೋ ಎಲೋ ಹೇಸಿಜನರಿಗೆಲ್ಲ ಶ್ರೀಶ ಶ್ರೀರಾಮನ ದಾಸತ್ವ ದೊರಕಿತೇನೆಲೋ ಎಲೋ 3
--------------
ರಾಮದಾಸರು
ಶ್ರೀಶನ ಚರಣದಾಸನಾಗಿರ್ದರೆ ಆಶಾಪಾಶ ನೀಗಿರಬೇಕು ಪ ಈಶನರಿತ ಗುರು ಶಿಷ್ಯನಾಗಿರ್ದರೆ ದೂಷಣ ಭೂಷಣ್ಹೋಗಿರಬೇಕು ಅ.ಪ ಹರಿಸರ್ಮಣಾಮೃತ ಸುರಿವನಾಗಿರ್ದರೆ ಧರೆಯ ಭೋಗ ಮೀರಿರಬೇಕು ಪರತತ್ತ್ವದ ಮೂಲರಿತವನಾದರೆ ಮರವೆ ಮಾಯ ಹಾರಿರಬೇಕು 1 ವೇದ ವೇದಾಂತವ ಸಾಧಕನಾದರೆ ವಾದ ವಾಂಛಲ್ಯವ ತೊಡೆದಿರಬೇಕು ಬೋಧ ಪಡೆದು ನಿಜ ಸಾಧುವಾದರೆ ನಾದಶಬ್ದವಡಗಿರಬೇಕು 2 ಮಾನಸಪೂಜೆಯ ಖೂನ ಬಲ್ಲ್ಯಾದರೆ ತಾನು ತನ್ನನು ಅರಿತಿರಬೇಕು ಧ್ಯಾನವಿಡಿದು ನಿಜಜ್ಞಾನಿಯಾದರೆ ಮಾನಭಿಮಾನಕ್ಹೊರತಿರಬೇಕು 3 ಬೋಗದ್ವಾಸನ್ಹಿಂಗಿ ಭಾಗವತನಾದರೆ ಕೂಗಿನ ನೆಲೆ ತಿಳಿದಿರಬೇಕು ಯೋಗ ಬಲಿಸಿ ಮಹಯೋಗಿಯಾದರೆ ರಾಗರಹಿತನಾಗಿರಬೇಕು 4 ಲಿಂಗವ ಧರಿಸಿ ಜಂಗಮನಾದರೆ ಸಂಗರಹಿತನಾಗಿರಬೇಕು ಅಂಗ ಮೂರು ನೀಗಿ ಲಿಂಗ ತಾನಾದರೆ ಲಿಂಗಾಂಗ ಸಮರಸ ತೋರಬೇಕು 5 ಸತ್ಯವರಿತು ಸತ್ಪುರುಷನಾದರೆ ಸತ್ತಂತೆ ಜಗದೊಳಿರಬೇಕು ಮೃತ್ಯುಗೆಲಿದು ಪರಮಾರ್ಥಿಕನಾದರೆ ಮತ್ರ್ಯರ ಗುಣ ಮರ್ತಿರಬೇಕು 6 ಘೋರ ಭವಾಂಬುಧಿ ಪಾರುಗಂಡಿರ್ದರೆ ಪಾರ ಹಾರೈಕೆ ಅಳೆದಿರಬೇಕು ಸಾರಮೋಕ್ಷ ತನ್ನ ಸೇರಬೇಕಾದರೆ ಧೀರ ಶ್ರೀರಾಮನೊಲಿಸಿರಬೇಕು 7
--------------
ರಾಮದಾಸರು
ಸಕಲಾರ್ಥಕಿದೆ ಸುಖ ಸಾಧಿಸಿನ್ನು ನೋಡಿ ಭಕುತಿ ಭಾವದಿಂದ ಸದ್ಗುರು ಸೇವೆಯ ಪೂರ್ಣಮಾಡಿ ಧ್ರುವ ಭಾವವಿಟ್ಟು ನೋಡಿ ಖೂನ ದೇವದೇವೇಶನ ಕಾವ ಕರುಣನೇ ತೋರುತಿಹ್ಯ ತಾ ನಿಧಾನ 1 ನೋಟ ನಿಜಮಾಡಿ ನೋಡಿ ನೀಟ ನಿಜ ಧ್ಯಾನ ಘಾಟ ತಿಳಿದವರಿಗಿದೆ ಗುರುಕೃಪೆಙÁ್ಞನ 2 ಸವಿದುಣ್ಣಬೇಕು ಇದೇ ಸವಿ ಸವಿಯಿಂದ ಆವಾಗ ಮಹಿಪತಿಗಿದೆ ನೋಡಿ ಬ್ರಹ್ಮಾನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು