ಒಟ್ಟು 782 ಕಡೆಗಳಲ್ಲಿ , 82 ದಾಸರು , 674 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿರಂಜೀವಿಯಾಗಿರೆಲೊ ಚಿಣ್ಣ ನೀನು ಪ ಪರಮ ಭಾಗವತರ ಪದಧೂಳಿ ಧರಿಸುತಲಿಅ.ಪ ಜರಿಯಬೇಡ ಹರಿಯ ಮರೆಯಬೇಡೆಂದೆಂದು ತಿರಿಯಬೇಡ ಖಳರ ಮನೆಗೆ ಪೋಗಿ ಬೆರೆಯಬೇಡ ಪರರ ಸತಿಯ ಸ್ವಪ್ನದಲೂ 1 ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ ಶ್ರೀ ಕಾಂತ ಚರಿತೆಯನು ಕೇಳದಿರಬೇಡ ಪಾಕವನು ಮಾಡಿ ಏಕಾಂಗಿಯಾಗುಣಬೇಡ ಭೂಕಾಂತರನುಸರಿಸಿ ಬೆಸಗೊಳ್ಳಬೇಡ 2 ಸಾಲ ಮಾಡಲಿ ಬೇಡ ಸಾಲದೆಂದೆನಬೇಡ ನಾಳೆಗೆ ಹ್ಯಾಗೆಂಬ ಚಿಂತೆ ಬೇಡ ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ ಬಾಳುವರ ಸಂಗದಲಿ ಬಾಳೆಲವೊ ಬಾಲ 3 ಕಂಡವರಿಗೆಲ್ಲ ಕೌತುಕ ತೋರಲಿ ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ 4 ಮಂದಮತಿಗಳ ಕೂಡೆ ಮಾತಾಡಲಿ ಬೇಡ ನಿಂದಕರ ಕಣ್ಣೆತ್ತಿ ನೋಡಬೇಡ ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ ದ್ವಂದ್ವದಲಿ ಮಸ್ತಕವ ನೀಡದಿರಬೇಡ5
--------------
ವಿಜಯದಾಸ
ಜಗದಾದಿ ನಮಿತ ಆಗಮಾತೀತ ಖಗವರಗಮಿತ ಭಾಗವತಪ್ರೀತ ಸುಚರಿತ ಪ ಭವ ಬಾಧ್ಹರಣ ಜನನಮರಣ ಭಯನಿವಾರಣ ದಯಸುಸದನ ಭುವಿಜಾರಮಣ ಭಕ್ತೋದ್ಧಾರಣ ವಿಮಲಜ್ಞಾನ ಕರುಣಿಸು 1 ಅಮಿತಲೀಲ ಕುಜನಕಾಲ ರಮೆಯಲೋಲ ಶರಣುಶೀಲ ಕೌಸ್ತುಭಮಾಲ ಸುಮನಪಾಲ ಎನ್ನ ಭ್ರಮಜಾಲ ಛೇದಿಸು 2 ಭೃತ್ಯಲಲಾಮ ಶಕ್ತರಕಾಮ ಪೂರ್ತಿನಿಸ್ಸೀಮ ಕರ್ತುಶ್ರೀಭೌಮ ನಿತ್ಯನಿರಾಮ ಜಗದೋದ್ದಾಮ ಮುಕ್ತಿಪದ ಸೋಮ ಶ್ರೀರಾಮ 3
--------------
ರಾಮದಾಸರು
ಜಗದ್ಗುರೋ ರಾಮ ತ್ರಾಹಿ ಶ್ರೀ ರಾಮಚಂದ್ರಜಗದ್ಗುರೋ ರಾಮ ತ್ರಾಹಿ ಪದಶರಥನಂದನ ದನುಜ ವಿಮರ್ದನಪಶುಪತಿನುತ ಗುಣ ರವಿನಯನ 1ಕೌಸಲ್ಯಾತ್ಮಜ ಕಮನೀಯಾನನಕೋಮಲ ಕುವಲಯ ದಳ ವರ್ಣ 2ವನಚರ ಪೋಷಕ ಸೇತು ವಿಧಾಯಕಘನ ಧನುಃಶರಧರ ಧೃತಲೋಕ 3ಜಯಜಯ ರಾಘವ ಜಾನಕೀವಲ್ಲಭಭಯಗಣ ನಾಶನ ಭಾನು ನಿಭ 4ದಶಮುಖ ನಂದನ ಮಾನ ವಿಭಂಜನಬಿಸಜಜ ಪೂಜಿತ ಪದನಳಿನ 5ಮುನಿಮಖಪಾಲಕ ತಾಟಕೀಶಿಕ್ಷಕಮುನಿಸತಿದಾಯಕ ಮುನಿತಿಲಕ 6ತರಣಿ ಕುಲೋದ್ಭವ ತಿರುಪತಿ ಗಿರಿವರಸ್ಥಿರಸ್ಥಿತ ವೆಂಕಟ ಸುಖಸಾರ 7ಓಂ ಮ್ಟುಕಾಸುರ ಚಾಣೂರ ಮಲ್ಲಯುದ್ಧವಿಶಾರದಾಯ ನಮಃಕಂ||ಸ್ಥಿರವಾರದರ್ಚನೆಯು ಸುಸ್ಥಿರ ಸಂಪದ್ಭಕ್ತಿ ವಿಜ್ಞಾನಪ್ರದವೆಂದೇಸ್ಥಿರಚಿತ್ತನಾಗಿ ಮಾಡ್ದೆನುಸ್ಥಿರವಾಗಿರು ಮನದಿ ನೀನೆ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಜನಕರಾಜನ ಸುತೆ ಜಾನಕಿ ಜೋ ಜೋ ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ ಕುಂದಣ ಕೆತ್ತಿದ ಚಂದದ ತೊಟ್ಟಿಲ ಮಂದಗಮನೆಯರು ತಂದಿರಿಸಿದರು ಸುಂದರಾಂಗಿ ವೈದೇಹಿಯನೆತ್ತುವ ಆ- ನಂದದಿ ಜೋಗುಳ ಪಾಡ್ವರು ಜೋ ಜೋ 1 ರತ್ನ ಮುತ್ತುಗಳ ಕಿರೀಟವು ಹೊಳೆಯಲು ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ ಉತ್ತಮ ಸತಿಯರು ತೊಟ್ಟಿಲ ಪಿಡಿಯುತ ಅರ್ಥಿಯ ಜೋಗುಳ ಪಾಡ್ವರು ಜೋ ಜೋ2 ಕೌಸಲ್ಯದೇವಿಯ ಕಂದನ ರಮಣಿಯೆ ಕೌಶಿಕಯಜ್ಞದ ಪಾಲನಅರಸಿಯೆ ಹಂಸವಾಹನನ ಪಿತನ ಸತಿಯೆ ಖಳ ಧ್ವಂಸ ಮಾಡಿದ ರಘುರಾಮನರಸಿಯೆ 3 ಅಂಬುಜನಯನೆ ಪೀತಾಂಬರ ಶೋಭಿತ ಕಂಬುಕಂಠಿ ಕೋಕಿಲವಾಣಿ ಜೋ ಜೋ ತುಂಬುಗುರುಳ ಮುಖ ಕಮಲೆಯೆ ಜೋ ಜೋ ನಂಬಿದವರ ಕಾಯ್ವ ಕರುಣಿಯೆ ಜೋ ಜೋ4 ಕಮಲನಯನೆ ಕಮಲಾಲಯೆ ಜೋ ಜೋ ಕಮಲಗಂಧಿಯೆ ಕಮಲೋದ್ಭವೆ ಜೋ ಜೋ ಸತಿ ಜೋ ಜೋ ಕಮಲೆ ಹೃತ್ಕಮಲದಿ ವಾಸಿಸÀು ಜೋ ಜೋ5
--------------
ನಿಡಗುರುಕಿ ಜೀವೂಬಾಯಿ
ಜನ್ಮ ಸಫಲವಾಯಿತು ಪ. ಆದಿ ಅನಂತ ಜನಾರ್ದನನ ಕಂಡುಎನ್ನ ಜನ್ಮ ಸಫಲವಾಯಿತು ಅ.ಪ. ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ-ಗಮ್ಯಗೋಚರನೆಂದು ಸ್ತುತಿಸುತಿರೆಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳುನಿರ್ಮಲಮೂರುತಿ ನಿಮ್ಮ ನಿಜವ ತೋರಿದಮ್ಯಾಲೆ 1 ಒಡ್ಡಿ ನಿಂತದ್ದು ಕಂಡು 2 ಮಕರಕುಂಡಲ ಕೌಸ್ತುಭ ಕೊರಳವೈಜಯಂತೀ ಮಾಲಿಕೆಗಳ ಕಂಡು ಎನ್ನ 3 ನಡುವಿನ [ಬಾಗಿಲಲಿ]ನಾಭಿಕಮಲ ಕಂಡೆಉದ್ಭವಿಸಿ ಮೆರೆವ ವಿರಿಂಚಿಯ ಕಂಡೆಜಡಿವೊ ಪೀತಾಂಬರ ನಡುವಿನೊಡ್ಯಾಣವಉಡಿಗೆಜ್ಜೆ ಮೇಲಿನ ಕಿರುಗೆಜ್ಜೆಗಳ ಕಂಡು 4 ಮೂರನೆ ಬಾಗಿಲಲಿ ಮುದ್ದು ಶ್ರೀಚರಣವುಶ್ರೀದೇವಿ ಭೂದೇವಿ ಸೇವೆಮಾಳ್ಪುದ ಕಂಡೆಸುರರು ಮಾನವರ ಕಂಡೆ ಸ್ತೋತ್ರಮಾಳ್ಪುದ ಕಂಡೆಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ 5
--------------
ವಾದಿರಾಜ
ಜಯ ಜಯ ದ್ವಾರಕಾವಾಸ ಜಯ ಮುನಿಮಾನಸಹಂಸ ಪ. ಜಯ ಕಂಸಾಸುರವಿಧ್ವಂಸ ಯದುಕುಲಾವತಂಸ ಅ.ಪ. ಜಯಗೋಪೀಜನಜಾರ ಜಯ ಕೌಸ್ತುಭಮಣಿ ಹಾರ 1 ಜಯಜಯ ಸನ್ನುತಕಾಯ ಜಯಸುರಮುನಿಗೇಯ ಜಯ ಸಾಗರನಿಲಯ ಜಯ ಶುಭಗುಣವಲಯ 2 ಜಯಜಯ ದೈತ್ಯವಿನಾಶ ಜಯ ನುತಶೇಷಗಿರೀಶ ಜಯಜಯ ಮಂಜುಳಭಾಷ ಜಯ ಪಾಂಡವಪರಿತೋಷ3
--------------
ನಂಜನಗೂಡು ತಿರುಮಲಾಂಬಾ
ಜಯ ಜಯ ಪೂರ್ಣಾನಂದ ಜಯ ಜಯ ಗೋಪಿಯ ಕಂದ ಜಯ ಜಯ ವೆಂಕಟ ರಮಣ ರಕ್ಷಿಸು ಕೃಪೆಯಿಂದ ಪ. ಕೃಷ್ಣ ಕೈವಲ್ಯದ ಕರುಣಾ ದೃಷ್ಟಿಯಿಂದಲಿ ನೋಡು ಶರಣಾ ಅಷ್ಟಮದೈಶ್ವರ್ಯ ಕಾರಣ ಕೌಸ್ತುಭಾಭರಣ 1 ನಿತ್ಯ ಮಂಗಳರೂಪ ನಿರ್ಮಲ ಚಿತ್ತ ಚಿದಾನಂದ ಮೂರ್ತಿ ಭೃತ್ಯ ವರ್ಗದೊಳೆನ್ನ ಗ್ರಹಿಸೆ ನಿನಗೆ ಬಹು ಕೀರ್ತಿ 2 ಇನ್ನೊಂದು ದೈವವನರಿಯೆ ನಿನ್ನ ಚರಣ ಪದ್ಮ ಮರೆಯೆ ಪನ್ನಗಾಚಲವಾಸ ಪರಿಪಾಲಿಸು ಬೇಗ ದೊರೆಯೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯ ಮಂಗಳಜಯ ಮಂಗಳ ಶುದ್ಧಾದೈತನಿಗೆ ಪ ಅಗಣಿತ ಮಹಿಮಗೆ ಅಕ್ಷಯರೂಪಗೆಅಖಂಡ ಸಹಜಾನಂದನಿಗೆಝಗಿ ಝಗಿತಾತ್ಮಗೆ ಝಳುಕಿಸಿ ಕರ್ಣದಿಝಣನಾದವ ಕೇಳ್ವನಿಗೆಸೊಗಯಿಸಿ ಚಂದ್ರನ ಶತಕೋಟಿಯಪ್ರಭೆ ಸಾರವ ಸವಿಸವಿದುಣ್ಣುವಗೆಬಗೆ ಆನಂದದಿ ಸುಖಿಸುವ ದೇವಗೆಭಾಸ್ಕರ ತೇಜಃಪುಂಜನಿಗೆ1 ನಿತ್ಯಾನಂದಗೆ ನಿರ್ಮಲರೂಪಗೆನಿಶ್ಚಲ ಪರಬ್ರಹ್ಮಾತ್ಮನಿಗೆನಿತ್ಯಶುದ್ಧಗೆ ನಿಜನಿರ್ಮಾಯಗೆನಿಜಬೋಧ ಜ್ಞಾನೈಕ್ಯನಿಗೆಪ್ರತ್ಯಗಾತ್ಮಗೆ ಪೂರ್ಣಬ್ರಹ್ಮನಿಗೆಪರಮ ಪರತರ ಪಂಡಿತಗೆನಿತ್ಯತೃಪ್ತಗೆ ನಿಗಮಾಗಮನಿಗೆನಿಶ್ಚಿಂತಾತ್ಮ ನಿಸ್ಪøಹಗೆ 2 ಕೈಯಲಿ ಪಿಡಿದಿಹ ಜಪಮಾಲೆಯಸರ ಕರ್ಣಕುಂಡಲವಿಟ್ಟಿಹಗೆಮೈಯೊಳು ಪೊದ್ಹಿಹ ಕಾಷಾಯಂಬರಮಿರುಪಿನ ಕೌಪೀನವುಟ್ಟಿಹಗೆಮೈಯೊಲೆದಾಡುವ ಸ್ವಾತ್ಮಾನಂದದಿನಲಿವ ಸದ್ಗುಣ ಶಾಂತನಿಗೆಮೈಯನೆ ಸದ್ಗತಿ ಭಕ್ತರಿಗೀಯುವವ್ಯಾಪಿತ ಜೀವನ್ಮುಕ್ತನಿಗೆ3 ಆರವಸ್ಥೆಯ ಧರಿಸಿಯೆ ಜಗದಲಿಅನಂತರೂಪ ತಾನಾಗಿಹಗೆಮೀರಿಯೆ ಸದ್ಗುಣ ನಿರ್ಗುಣ ರೂಪವಮೆರೆದಿಹ ಮುಮುಕ್ಷಾಂಗನಿಗೆತೋರುವ ತ್ವಂಪದ ತತ್ತ್ವಮಸಿಪದತೋರಿ ವಿರಾಜಿಪ ತುಷ್ಟನಿಗೆಧೀರೋದ್ಧಾರಗೆ ದೀನರನಾಥಗೆದೃಶ್ಯಾದೃಶ್ಯ ವಿದೂರನಿಗೆ 4 ನಿರುಪಮ ನಿರಮಯ ನಿಜ ನಿರ್ಲಿಪ್ತಗೆನಿರ್ಭಯ ನಿರ್ವಿಕಲ್ಪನಿಗೆಪರಮಪುರುಷಗೆ ನಿಗಮೋದರನಿಗೆಪರಮಾರೂಢಾ ಮಾರ್ಗನಿಗೆಗುರುಚಿದಾನಂದ ಅವಧೂತಾತ್ಮಗೆಗುಣನಿಧಿ ತುರಿಯಾತೀತನಿಗೆಸ್ಥಿರಸಿದ್ಧ ಪರ್ವತದಾಸ ಶ್ರೀಪುರುಷಗೆಬಗಳಾ ಶ್ರೀಗುರು ರೂಪನಿಗೆ 5
--------------
ಚಿದಾನಂದ ಅವಧೂತರು
ಜಯ ಜಯರಾಘವೇಂದ್ರ ಸಜ್ಜನಪಯೋನಿಧಿಚಂದ್ರ ಜಯದೇವ ಭೂಸುರವೃಂದ ಸುಗುಣಸಾಂದ್ರ ಪ. ದಶಕಂಠ ಕುಲಕಾಲ ದಾನಶೀಲ ಶಶಿಮೌಳಿಧನುರ್ಭಂಗ ಭುವಿಜಾ ಮನೋಹರಾಂಗ [ಋಷಿ] ಮನೋಂಬುಜಭೃಂಗ ಕರುಣಾಂತರಂಗ 1 ಶ್ರೀಕಾಮಿನೀಸದನ ಭೂವೈಕುಂಠ [ಕಾರಣ] ಶ್ರೀ ಕೌಸ್ತುಭಾ ಭರಣ ಶೇಷಗಿರಿರಮಣ 2
--------------
ನಂಜನಗೂಡು ತಿರುಮಲಾಂಬಾ
ಜಯ ಪದ್ಮಜಾರಮಣ ಜಯ ಭಕ್ತಜನಕರುಣ ಜಯ ಕೌಸ್ತುಭಾಭರಣ ಜಯ ಪದ್ಮಚರಣ ಪ ಜಯ ಭವಾಂಬುಧಿ ತರಣ ಜಯ ಪಾಪಭಯಹರಣ ಜಯತು ಸತ್ವಾವರಣ ಜಯ ದೀನಶರಣ ಅ.ಪ ಜಯತು ಗಾನವಿಲೋಲ ಜಯ ಗೋಕುಲಬಾಲ ಜಯತು ತುಳಸೀಮಾಲ ಜಯತು ಜಗಮಾಲ 1 ಜಯತು ದಾನವಕಾಲ ಜಯತು ಸತ್ವದುಕೂ¯ ಜಯತು ಸುರಮುನಿಪಾಲ ಜಯತು ಮಾಲೋಲ 2 ಜಯತು ಜಯ ರಿಪುಭಂಗ ಕಮಲಜಾ ಅಂಗ ಜಯತು ಘನನೀಲಾಂಗ ಜಯತು ಗರುಡತುರಂಗ ಜಯತು ಮಾಂಗಿರಿರಂಗ ಕರುಣಾಂತರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ವಾಯು ಹನುಮಂತ ಜಯ ಭೀಮ ಬಲವಂತ ಪ ಜಯಪೂರ್ಣ ಮತಿವಂತ ಜಯ ಸಲಹೊ ಸಂತ ಅ.ಪ. ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆನಂದದಿಂದಲಿ ಮಾಡಿ ಕಪಿ ಬಲವ ಕೂಡಿಸಿಂದು ಲಂಘಿಸಿ ಖಳರ ವನ ಭಂಗಿಸಿ ಸೀತೆ-ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ 1 ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಅರಿಬಲವ ಕುಟ್ಟಿಉರಗ ಬಂಧನದಿಂದ ಕಪಿವರರು ಮೈಮರೆಯೆಗಿರಿಯ ಸಂಜೀವನವ ತಂದು ಬದುಕಿಸಿದೆ 2 ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿಶ್ರೀ ಪಾರ್ಥಸಾರಥಿಯ ಭಜಕ ನೀನಾದೆಪಾಪಿ ಮಾಗಧ ಬಕ ಕೀಚಕ ಹಿಡಿಂಬಕರಕೋಪದಿಂದಲಿ ತರಿದೆ ಮೂಜ್ಜಗದಿ ಮೆರೆದೆ 3 ಧsÀುರದಲಿ ದುರ್ಯೋಧನನ ಬಲವನು ತರಿದೆಅರಿತು ದುಶ್ಶಾಸನನ ಒಡಲನ್ನು ಬಗೆದೆಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆಹರಿಯ ಕಿಂಕರ ಧುರಂಧರಗಾರು ಸರಿಯೆ ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನುಬಲಿಸಿ ಶ್ರೀಹರಿಯ ಗುಣಗಳನು ಮರೆಸಿಕಲಿಯನನುಸರಿಸಲು ಗುರುವಾಗಿ ಅವತರಿಸಿಖಳರ ದುರ್ಮತ ಮುರಿದೆ ಶ್ರೀಕೃಷ್ಣಪರನೆಂದೆ
--------------
ವ್ಯಾಸರಾಯರು
ಜಯಜಾನಕೀರಮಣ ಜಯಕೌಸ್ತುಭಾಭರಣ ಪ ಜಯ ಪಾವನಚರಣ ಜಯ ಕೌಸಲ್ಯಾನಂದವರ್ಧನ ಜಯ ಭಕ್ತಾಭರಣ ಅ.ಪ. ಜಗದೋದ್ಧರಣ ಅಪಾರಕರುಣಾ ಅಗಜರ್ಚಿತ ಚರಣ ಖಗೇಶಗಮನ ಜಲನಿಧಿಶಯನ ಸುರರಿಪು ಸಂಹನನ 1 ಸೂನೃತಪಾಲ ಜಾನಕೀಲೋಲ ದೀನಜನಾವಾಲ ದಾನವಕಾಲಾ ಶ್ರೀವನಮಾಲಾ ಮಾನಿತ ಗುಣಶೀಲಾ 2 ವಾಸವ ಪರಿತೋಷ ದೋಷವಿನಾಶ ದಶಶಿರಧ್ವಂಸ ಮುನಿಜನ ಮಾನಸಹಂಸ 3
--------------
ನಂಜನಗೂಡು ತಿರುಮಲಾಂಬಾ
ಜಯದೇವ ಜಯದೇವ ಜಯ ರಾಘವ ರಾಮಾ ದಯದಲಿಯಚ್ಚರನೀವದು ಸ್ಮರಿಸಲುತವನಾಮಾ ಪ ಹಭವ ಭವಮುಖರಮೊರೆಯನು ಕೇಳುತಲಿ ದಶರಥ ಕೌಲಸ್ಯರಾ ಬಸಿರಿಂದುದಿಸುತಲಿ ರುಷಿ ಮುಕರಕ್ಷಿಸಿ ತಾಟಕಿ ದೇಹದಿಬಿಡಿಸುತಲಿ ವಸುಧಿಲಿ ಶಿಲೆಯನು ಪಾದದದಿಮೆಟ್ಯುದ್ಧರಿಸುತಲಿ 1 ಹರುಷದಿ ಕೌಶಿಕನೊಡನೆ ಮಿಥಿಲೆಗೆ ಪೋಗುತಲಿ ಹರದು ಮುರಿದು ಜನಕಜೆ ಮಾಲೆಯ ಧರಿಸುತಲಿ ಬರಲಾನಂದದಿ ಭೃಗುಪತಿ ದಶರಥ ದರಶನ ಪಾಡುತಲಿ ಅರಸುತನಕ ಕೈಕೆಯು ಬ್ಯಾಡೆನೆ ನಡೆದೈತ್ವರಿಲಿ 2 ವನದಲಿ ಭಂಗಿಸಿಶೂರ್ಪನಖಿಖರ ದೂಶಣರಾ ಅನುವರ ಕಾಂಚನ ಮೃಗವಾ ಬೆಂಬೆತ್ತಲು ದೂರಾ ಜನಕಜೆಯಾಕೃತಿ ವೈಯ್ಯಲು ಕಪಟದಿದಶಶಿರಾ ಅನುಭಜಟಾಯುವಿನಿಂದಲಿ ಕೆಳಿ ನಡದೆ ಧೀರಾ 3 ಪಥದಲಿ ಮುರಿದುಕಬಂಧವ ಶಬರಿಗೆ ಗತಿನೀಡಿ ಪ್ರಥಮದಿ ಹನುಮನ ಕಂಡು ವಾಲಿಯ ಹತಮಾಡಿ ರತಿಯಲಿ ಸುಗ್ರೀವಜಾಂಭವ ಸೈನ್ಯದ ಲೋಡಗೂಡಿ ಕ್ಷಿತಿಜೆಯಾ ಸುದ್ದಿಯತರಿಸಿ ನಡೆದೈನಲಿದಾಡಿ 4 ಸೇತುವೆ ಗಟ್ಟಿಸಿ ಶರಣವ ಬರಲು ವಿಭೀಷಣನು ಭೀತಿಯ ಹಾರಿಸಿಸೈನ್ಯದಿ ದಾಟಿದೆ ಶರಧಿಯನು ನೀತಿಯ ತಪ್ಪಿದ ರಾವಣ ಕುಂಭಶ್ರವಣರನು ಖ್ಯಾತಿಲಿ ಮಡಹಿದೆ ಅವರಾಸಂತತಿ ಸಂಪದನು 5 ಶರಣಗಸ್ಥಿತಪರಪದವಿತ್ತು ದೇವರ ಶೆರೆಬಿಡಿಸಿ ಮರಳಿದಯೋಧ್ಯಕಪುಷ್ಪಕದಿಂ ಸೀತೆಯವರೆಸೀ ಮೆರೆವತ್ಸಜರಜನನಿಯರ ಸಕಲರಸುಖಬಡಿಸಿ ಸುರಮುನಿಜನರನುಸಲಹಿದೈ ಸಾಮ್ರಾಜ್ಯವನು 6 ನಾಮದಮಹಿಮೆ ಹೊಗಳಲು ಶೃತಿಗಳಿಗಳವಲ್ಲಾ ಪ್ರೇಮದಿಸವಿಸದುಂಬುವ ಶಿವ ಸೀತಾಬಲ್ಲಾ ನೇಮದಿಸುರನಂದಾನ್ನರ ಬವ ತರಿಸಿದರಲ್ಲಾ ಕಾಮಿತ ದಾಯಕ ಗುರುಮಹಿಪತಿ ಪ್ರಭುಶಿರಿನಲ್ಲಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಮಂಗಳಂ ಶುಭೋದಯ ಮಂಗಳಂ ಭಯಹರಗೆ ತಿರುಪತಿಯ ವೆಂಕಟೇಶ್ವರಗೆ ಪ ಸುರಲೋಕವನು ಪಡೆದ ಶಿರದಮಕುಟದ ಪ್ರಭೆಗೆ ಸ್ಮರಚಾಪವನು ಪೋಲ್ವ ಪುರ್ಬುಗಳ ಚೆಲುವಿಕೆಗೆ ತುಂಬಿ ತುಳುಕುವ ನಯನಗಳಿಗೆ 1 ಕನಕಕುಂಡಲಗಳಿಗೆ ಘನ ನಾಸಿಕದ ಮಣಿಗೆ ಮಿನುಗುತಿಹ ಮುಗುಳುನಗೆಯೊಗುವ ಮುಖಕೆ ಇನಕೋಟಿಪ್ರಭೆಗೆ ಮಿಗಿಲೆನಿಪ ಕೌಸ್ತುಭಮಣಿಗೆ ವನಮಾಲೆಯನು ಧರಿಸಿ ಶೋಭಿಸುವ ಕಂಠಕೆ 2 ಭುಜವೆರಡರಲಿ ಶಂಖಚಕ್ರಗಳನುರೆ ಧರಿಸಿ ಅಜಸುರಾದ್ಯರು ಬಿಡದೆ ಭಜಿಪ ಪದವ ಭಜಿಪರಿಗೆ ಭವಶರಧಿ ಕಟಿಪ್ರಮಾಣವಿದೆಂದು ಅಜಪಿತನು ತೋರುತಿಹ ಕರಚತುಷ್ಟಯಕೆ 3 ಹದಿನಾಲ್ಕು ಲೋಕಕಾಶ್ರಯವಾಗಿ ತೋರುತಿಹ ಪದುಮಭವನನು ಪಡೆದ ನಾಭಿಸಹಿತ ಉದರಮಂಡಲಕೆ ಮತ್ತದರಡಿಯ ಶೋಭಿಸುವ ಹದಿನಾರು ಬಣ್ಣದಪರಂಜಿ ಕಟಿಸೂತ್ರಕೆ 4 ಕಿರಿಘಂಟೆಸರದೊಡನೆ ಹೊಳೆವ ಪೀತಾಂಬರಕೆ ಗರುಡನಂಸದಿ ಮೆರೆವ ಊರುಗಳಿಗೆ ಸುರನದಿಯ ನೆರೆ ಪಡೆದ ಚರಣದುಂಗುಟಗಳಿಗೆತಿರುಪತಿಯ ವೆಂಕಟನ ದಿವ್ಯ ಮೂರುತಿಗೆ 5
--------------
ತಿಮ್ಮಪ್ಪದಾಸರು
ಜಯರಘುರಾಮಾ | ಸದ್ಗುಣ ಧಾಮಾ | ದಯದಾಗರ ಘನಶಾಮಾ ಪ ಜಯರಘರುರಾಮಾ | ಸದ್ಗುಣ ಧಾಮಾ ದಯದಾಗರ ಘನ ಶಾಮಾ | ಭಯಹರನೇಮಾ ರಣನಿಸ್ಸೀಮಾ | ತ್ರಯಂಬಕ ವಿಶ್ರಾಮಾ | ಪ್ರಿಯಕರ ನಾಮಾ ಪೂರಿತ ಕಾಮಾ | ಶ್ರಯಸುದಾಯಕ ಮಹಿಮಾ 1 ಸುರಸಹಕಾರ ಇನಕುಲೋದ್ದಾರಾ | ಧರಣೀಸುತೆ ಮನೋಹಾರಾ | ಶರಯುತೀರಾಯೋಧ್ಯ ವಿಹಾರಾ | ಚರಿತಪಾರಾ ವಾರಾ | ಪರಮೋದಾರಾ ಸರ್ವಾಧಾರಾ | ದುರತಾವಳಿವಿದಾರಾ 2 ವನರುಹಾಸನ ವಂದಿತಚರಣಾ | ಜನನಿ ಕೌಶಲ್ಯಾ ನಿಧಾನಾ | ಅಣುರೇಣು ಜೀವನಾ ವ್ಯಾಪಕಪೂರ್ಣ | ಕನಕಾಂಬರ ಭೂಷಣ | ಮುನಿಜನ ರಂಜನಾ ದೈತ್ಯವಿಭಂಜನಾ | ಮಹಿಪತಿ ನಂದನ ಪ್ರಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು