ಒಟ್ಟು 2782 ಕಡೆಗಳಲ್ಲಿ , 117 ದಾಸರು , 2136 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಪ್ಪುಗಳನೆಲ್ಲ ನೀನೊಪ್ಪಿಕೊಳ್ಳೊ - ನ-|ಮ್ಮಪ್ಪ ಕಾಯಬೇಕುತಿಮ್ಮಪ್ಪನೀನೆಪಸತಿ-ಸುತ ಸಂಸಾರಗಳಿಗೆ |ಮತಿ ಹೀನನಾದೆನು ವ್ಯರ್ಥ ||ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ |ಗತಿಯದಾವುದು ಪೇಳೊ ಮುಂದೆನಗೆ 1ಬಿಸಿಲು ಬಿರುಮಳೆ ಗಾಳಿಯೊಳಗೆ-ಬಲು-|ದೆಸೆಗೆಟ್ಟು ದೇವ ತಿರುಗಿದೆ ||ಹಸಿವು-ತೃಷೆಗಳು ಬಹು ಬಾಧಿಸಲು |ಹುಸಿಯಾಡಿದೆನಯ್ಯ ಹುಟ್ಟು ಮೊದಲು 2ಸ್ನಾನ-ಸಂಧ್ಯಾವಂದನವರಿಯೆ-ನಾನಾ-|ದಾನ-ಧರ್ಮದ ಗುರುತುಗಳಿಯೆ ||ಹೀನಜನರ ಸಂಗವ ಮರೆಯೆ-ಸು-|ಙ್ಞÕನಿಗಳನು ಬಾಯೆಂದು ಕರೆಯೆ 3ಗಂಗೆ ಅಗ್ರೋದಕಗಳ ತಂದು - ನಾ-|ಮಂಗಳಮಜ್ಜನಮಾಡಲಿಲ್ಲವೆಂದೂ ||ಹೊಂಗೇದಗೆ ಪುಷ್ಪವನೊಂದು ಶ್ರೀ-|ರಂಗಗರ್ಪಿಸಲಿಲ್ಲ ಕಾಯೊ ಬಂದು 4ಪೀತಾಂಬರದಿ ವಸ್ತ್ರಗಳಿಂದ -ದಿವ್ಯ-|ನೂತನವಾದ ಆಭರಣದಿಂದ ||ಪ್ರೀತಿಪಡಿಸಲಿಲ್ಲಾದರದಿಂದ-ಹೇ-|ಸೀತಾಪತೆ ಕೃಷ್ಣ ಹರಿಮುಕುಂದ 5ಗಂಧಾಕ್ಷತೆ ಪುಷ್ಪಗಳಿಂದ -ಬರಿ-|ಒಂದುದಳಶ್ರೀ ತುಳಸಿಯಿಂದ ||ಇಂದಿರೇಶನ ಅರ್ಚಿಸದರಿಂದ -ಬಹು-|ನೊಂದು ದೂರಾದೆ ಸದ್ಗತಿಯಿಂದ 6ಏಕಾರತಿ ದೂಪಾರತಿಯ -ಎಂದು-|ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ||ವ್ಯಾಕುಲದಲಿ ಹೋಯಿತು ಹೊತ್ತು -ಬಂದು-|ನೀ ಕರುಣಿಸು ಲಕ್ಷ್ಮೀರಮಣ 7ಪಾಯಸ ಪಂಚಭಕ್ಷ್ಯಗಳಿಂದ -ಬಲು-|ಆಯತವಾದ ಶಾಕಗಳಿಂದ ||ತೋಯೆ ಶಾಲ್ಯನ್ನ ಸದ್ಘøತದಿಂದ -ಶ್ರೀ-|ಮಾಯಾಪತಿಗೆ ಅರ್ಪಿಸಲಿಲ್ಲ 8ಮಂಗಳಾರತಿಯ ನಾ ಮಾಡಲಿಲ್ಲ-ಜಯ-|ಮಂಗಳವೆನ್ನುತ ಪಾಡಲಿಲ್ಲ ||ಕಂಗಳ ನೋಟದಿ ನೋಡಲಿಲ್ಲ -ನರ-|ಸಿಂಗನೀ ಬಾಯೆಂದು ಕರೆಯಲಿಲ್ಲ9ಹರಿಯ ಪಾದಕೆ ಬಿದ್ದವನಲ್ಲ -ನರ-|ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ ||ಹರಿದಿನದುಪವಾಸ ವ್ರತವು ಇಲ್ಲ -ಬಲು-|ಹರಿಯ ದಾಸರ ಸಂಗ ಎನಗಿಲ್ಲ 10ಹೋಮಾರ್ಚನೆ ಔಪಾಸನವೆಲ್ಲ |ನೇಮದಿಂದಲಿ ನಾ ಮಾಡಲಿಲ್ಲ ||ಕಾಮಾತುರನಾಗಿ ಕಂಡಕಂಡ ಕಡೆ |ಸ್ವಾಮಿಯ ಕಾಣದೆ ತಿರುಗಿದೆನೊ 11ಅತಿಥಿಗಳ್ ಬಂದರೆ ಮನೆಗೆ -ಅಂದೆ-|ಗತಿಯಿಲ್ಲವಯ್ಯ ಕೊಡುವುದಕೆ ||ಯತಿಯ ಕಂಡರೆ ನಿಂದಿಸಿದೆ-ಶ್ರೀ-|ರತಿಪತಿ ಪಿತ ನೀ ದಯ ಮಾಡೊ 12ಎಷ್ಟು ಹೇಳಲಿ ಎನ್ನವಗುಣವ -ಅವು-|ಅಷ್ಟು ಇಷ್ಟೆಂದು ಎಣಿಕೆಯಿಲ್ಲ ||ದೃಷ್ಟಿಯಿಂದ ನೋಡಿ ದಯ ಮಾಡೊ -ಶ್ರೀ-|ಬೆಟ್ಟದ ವೆಂಕಟ ಪುರಂದರವಿಠಲ 13
--------------
ಪುರಂದರದಾಸರು
ತೊರವೆಪುರನಿವಾಸ ನರಸಿಂಹ ನೀಹೊರೆಯೊ ಭಕ್ತರ ಭಯಗಜಸಿಂಹಅರಿವರಾರಯ್ಯ ನಿನ್ನ ಮಹಿಮೆಯಸರಸಿಜಭವಭವಸುರವರಅಹಿಕಿನ್ನರವರಮುನಿವರ ನರವರವಂದ್ಯಪ.ಹಿರಣ್ಯಕನೆಂಬ ದೈತ್ಯ ಮಹೀತಳದಿವಿಧಿಹರವರದಲಿ ಬಲುಸೊಕ್ಕಿ ಅಂದುಪರಮಭಾಗವತಪ್ರಹ್ಲಾದನಿಗೆಪರಿಪರಿದುರಿತವ ಮರಳಿ ಮರಳಿ ಭಯಂಕರವನು ಚರಿಸಲು ನೆರೆಮೊರೆಯಿಡಲು 1ತರಳಗಂಜಿಸಿ ನಿನ್ನ ದೊರೆಯ ತೋರೊ ಎನಲುಸರವಭೂತ ಭರಿತಾನಂತನೀಗಅರಸಿದರೀ ಕಂಬದೊಳಿಹನೆನಲುಮೊರೆ ಮೊರೆದೇಳುತ ಸರಸರನೊದೆಯಲುಬೆರಬೆರ ದೋಷದಿ ವರನರಹರಿಯೆ 2ಚಿಟಿಲು ಚಿಟಿಲು ಭುಗಿಭುಗಿಲೆನುತ ಪ್ರಕಟಿಸಿ ದೈತ್ಯನುದರವನು ಸೀಳಿತ್ರುಟಿಯೊಳು ಕರುಳಮಾಲೆಯ ಧರಿಸಿಶಠನ ವಧಿಸಿ ನಿಜಭಟನ ಪೊರೆದ ಜಗಜಠರಪ್ರಸನ್ನವೆಂಕಟ ನರಸಿಂಹ3
--------------
ಪ್ರಸನ್ನವೆಂಕಟದಾಸರು
ದಾಟುವೆನೆಂದರೆ ದಾಟು ಹೊಳೆಯುಕೈಟಭಾಂತಕ ಭಟರಿಗೆ ಭವಜಲವು ಪ.ಪೂರ್ವಯಾಮದಿ ಹರಿಗುಣಕರ್ಮನಾಮನಿರ್ವಚನದಿ ಕೀರ್ತನೆ ಮಾಡುವ ಮಹಿಮಉರ್ವಿಯ ಮೇಲಿದ್ದು ಒಲಿಸಿಕೊಂಡನು ಸುರಸಾರ್ವಭೌಮನ ಸೀತಾರಾಮನ 1ಜಲದಲಿ ಮಿಂದೂಧ್ರ್ವ ತಿಲಕಿಟ್ಟು ನಲಿದುತುಲಸಿಕುಸುಮಗಂಧ ಅಗ್ರದ ಜಲದಿನಳಿನೇಶನಂಘ್ರಿಗರ್ಪಿಸಿ ಸಹಸ್ರನಾಮಾವಳಿಯಿಂದ ಧೂಪದೀಪಾರತಿ ಬೆಳಗಿ 2ಪರಮಾನು ಯೋಗಾವಾಹನೆ ವಿಸರ್ಜನೆಯುಸ್ಮರಣೆ ವಂದನೆ ಪ್ರದಕ್ಷಿಣೆ ನರ್ತನವುವರಗೀತಪಠಣೆ ಭಾಗವತಾ ಶ್ರವಣವುತ್ವರಿಯದಿ ಭೂತಕೃಪೆಯಲ್ಲಿ ಮನವು 3ಗುರುಪಾದಪದ್ಮದಿ ಬಲಿದು ವಿಶ್ವಾಸಗುರುಕೃಪೆಯಿಲ್ಲದ ಪುಣ್ಯ ನಿಶ್ಯೇಷಗುರುಬೆನ್ನಟ್ಟಿದ ಕರಿಗಡ್ಡಹಾಸ ಹಾಸಗುರುಗಳ ಮರೆದು ಕಳೆಯನೊಂದುಶ್ವಾಸ4ಈಪರಿಹರಿಪುರ ದಾರಿಯ ತೊಲಗಿಕಾಪುರುಷರುಭವಮಡುವಲಿ ಮುಳುಗಿಆಪತ್ತು ಪಡುವರ ನೋಡಿ ಬೆರಗಾಗಿಶ್ರೀ ಪ್ರಸನ್ವೆಂಕಟಪತಿ ನಕ್ಕನಾಗಿ 5
--------------
ಪ್ರಸನ್ನವೆಂಕಟದಾಸರು
ದಾರಿಯ ತೋರೊ ಮುರಾರಿ ಮುಂದಣದಾರಿಯ ತೋರೊ ಮುರಾರಿ ಪ.ದಾರಿತೋರುಕಂಸಾರಿಭವಾಂಜನಪಾರಾವಾರಉತ್ತಾರಣಗೈಯುವಅ.ಪ.ಮಾಯಾಶ್ರಿತನಾಗಿಹೆನಲ್ಲೊ ಮೋಕ್ಷೋ-ಪಾಯಭೇದಂಗಳ ಮರತೆನಲ್ಲೊಕಾಯಜಪಿತ ಕಮಲಾಯತಲೋಚನಕಾಯದೊಳಗೆ ಸನ್ನಾಯದಿ ನೋಡುವ 1ದುಃಖವಿಲ್ಲದೆ ಸುಖವಿಲ್ಲ ಇದಒಕ್ಕಣಿಪರೆ ತುದಿಬುಡವಿಲ್ಲಸೊಕ್ಕಿ ನಡೆದು ಭವಯಿಕ್ಕುಳ ಬಾಯೊಳುಸಿಕ್ಕಿದೆನಲ್ಲವೊ ರಕ್ಕಸವೈರಿಯೆ 2ಬಲ್ಲೆನೆಂಬರೆ ಬಲವಿಲ್ಲಭವಬಲ್ಲೆಯೊಳಗೆ ಸಿಲುಕಿದೆನಲ್ಲಕಲ್ಲೊಳಗ್ನಿ ಕಲಕಿರುವಂದದಿ ಮನದಲ್ಲಿ ನಿನ್ನ ಪದಪಲ್ಲವ ಭಜಿಸುವ 3ಸಾರರಹಿತ ಸಂಸಾರದಿಮಾಯಾನಾರಿ ಗೈದ ಮಮಕಾರದಿಘೋರದುರಿತವಪಹಾರಗೈವ ಲಕ್ಷ್ಮೀನಾರಾಯಣನು ಸೇರಿ ಸೇವಿಸುವಂಥ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದಾಸನೆಂತಾಗುವೆನು ಧರೆಯೊಳಗೆ ನಾನು |ವಾಸುದೇವನಲಿ ಲೇಸ ಭಕುತಿಯ ಕಾಣೆ ಪ.ಗೂಟನಾಮವ ಹೊಡೆದು ಗುಂಡು ತಂಬಿಗೆ ಹಿಡಿದು |ಗೋಟಂಚುಧೋತರ ಮುಡಿಯನುಟ್ಟು ||ದಾಟುಗಾಲಿಡುತ ನಾಧರೆಯೊಳಗೆ ಬರಲೆನ್ನ |ಬೂಟಕತನ ನೋಡಿ ಭ್ರಮಿಸದಿರಿ ಜನರೆ 1ಅರ್ಥದಲ್ಲಿಯ ಮನಸು ಆಸಕ್ತವಾಗಿದ್ದು |ವ್ಯರ್ಥವಾಯಿತು ಜನ್ಮ ವಸುಧೆಯೊಳು ||ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ |ಸತ್ಯ - ಶೌಚಗಳರಿಯೆ ಸಜ್ಜನರುಕೇಳಿ2ಇಂದಿರೇಶನ ಪೂಜೆ ಬಂದು ಮಾಡಿದ್ದಿಲ್ಲ |ಸಂಧ್ಯಾನ - ಜಪ - ತಪವೊಂದನರಿಯೆ||ಒಂದು ಸಾಧನ ಕಾಣೆ ಪುರಂದರವಿಠಲನ |ದ್ವಂದ್ವಪಾದವ ನಂಬಿ ಅರಿತು ಭಜಿಸಿದರೆ 3
--------------
ಪುರಂದರದಾಸರು
ದಾಸರ ನಿಂದಿಸಬೇಡಲೊ ಪ್ರಾಣಿ -ಹರಿ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ದಾಸರ ನಿಂದಿಸಬೇಡ ಪ.ಮೋಸವಾಯಿತೊ ಮನದೊಳು ಗಾಢ |ಲೇಸಾಗಿ ಇದ ತಿಳಕೊ ಮೂಢ ಅಪರಾಮನ ನಿಂದಿಸಿ ರಾವಣ ಕೆಟ್ಟ |ತಮ್ಮಗಾಯಿತು ಸ್ಥಿರಪಟ್ಟ ||ತಾಮಸದಿಂದಲಿ ಕೌರವ ಕೆಟ್ಟ |ಧರ್ಮಗೆ ರಾಜ್ಯವ ಬಿಟ್ಟ 1ಮನದೊಳಗಿನ ವಿಷಯದ ವಿಷ ಬಿಟ್ಟು |ಅನುದಿನ ಹರಿಯ ನೆನೆಯಿರಣ್ಣ ||ಸನಕಾದಿವಂದ್ಯನ ಪೂಜಿಸಿದರೆ ನೀವ್ |ಘನಪದವಿಯ ಕಾಣುವಿರಣ್ಣ2ಕನಕದಾಸನು ಕಬ್ಬಲಿಗನು ಎಂದು |ಅಣಕಿಸಿ ನುಡಿಬೇಡಿರಣ್ಣ |ಜನರಂತೆ ನರನಲ್ಲ ತುಂಬುರನೀತನು |ಜನಕಜೆರಮಣನ ಪಾದಸೇವಕನು 3ಉಡಿಯ ಒಳಗೆ ಕಿಡಿ ಬಿದ್ದರೆ ಅದು ತಾ |ಸುಡದನಕಾ ಬಿಡದಣ್ಣ ||ಬಡವನಾಗಿ ಕೆಡುಬುದ್ದಿಯ ಬಿಟ್ಟು |ನಡೆಯ ಕಂಡು ಪಡೆದುಕೊಳ್ಳಣ್ಣ 4ದೇವಕಿ ಸೆರೆಯನು ಬಿಡಿಸಿದ ದೇವನ |ಸೇವಕರು ನರರೆ ನಿಮಗವರು ||ಭಾವಜನಯ್ಯನ ಪದವ ನೆನೆದರೆ |ಪಾವನ ಮಾಡುವ ಪುರಂದರವಿಠಲ 5
--------------
ಪುರಂದರದಾಸರು
ದೂತೆ ಕೇಳ ದ್ರೌಪತಿಯ ಖ್ಯಾತಿ ಕೇಳಿದ ಮನುಜರಿಗೆಪಾತಕದೂರಾಗೊದೆಂಬೋ ಮಾತು ನಿಜವಮ್ಮಪ.ಉಮಾಶಚಿ ಶಾಮಲಾ ಉಷೆ ತಮ್ಮ ಪತಿಗಳ ಬೆರೆದು ರಮಿಸೆಬೊಮ್ಮಕಂಡುಕೋಪಿಸಿ ಶಾಪ ಝಮ್ಮನೆ ಕೊಟ್ಟಾನು1ಪರಮಮದದ ಬಾಲೆಯರಿವರುಪರಪುರುಷನ ಬೆರೆಯಲ್ಯಾ ್ಹಂಗೆನರದೇಹ ಬರಲೆಂದು ಬೊಮ್ಮಗೆ ನಾಲ್ವರು ನುಡಿದರು 2ಚಂದಾಗಿ ನಾಲ್ವರ ದೇಹ ಒಂದೇ ಮಾಡಿ ತೋರೆ ಬೊಮ್ಮಗಬಂದವು ಮೂರು ನರದೇಹಗಳ ಲೊಂದಾಗಿರಲೆಂದು 3ತಪ್ಪು ನಮ್ಮದೆಂದು ಶಾಪ ಒಪ್ಪಿಕೊಂಡು ನಾಲ್ವರುಜಪಿಸಿ ಸಾವಿರ ವರುಷ ಗೌಪ್ಯದಿ ಭಾರತಿಯ 4ಬಂದು ಮೊರೆಯ ಪೊಕ್ಕವರ ಚಂದಾಗಿ ದೇಹದಲ್ಲಿಟ್ಟುಅನಂದದಿಂದ ವಿಪ್ರಕನ್ಯೆ ಎಂದು ಜನಿಸಿದಳು 5ಎಲ್ಲರಕರ್ಮಒಂದಾಗಿ ಎಲ್ಲೆಲ್ಲೆ ಭಿನ್ನ ತೋರದ್ಹಾಂಗೆಫುಲ್ಲನಾಭನ ದಯವ ಪಡೆದಳು ಅಲ್ಲೆ ಆ ಬಾಲೆ 6ಮುದ್ಗಲ ನೆಂತೆಂಬೊ ಋಷಿಯು ಬಿದ್ದು ನಕ್ಕ ಬ್ರಹ್ಮನ ಕಂಡುಮುದ್ದು ಮಗಳ ರಮಿಸಿದಾತಗೆ ಬುದ್ಧಿಯಿಲ್ಲವೆಂದು 7ತ್ವರೆಯಿಂದಬೊಮ್ಮಮುನಿಗೆ ಬೆರಿಯೆ ಭಾರತಿಯ ಕಂಡುಕರವಮುಗಿದು ಎರಗಿ ಮುನಿಯು ಮೊರೆಯ ಹೊಕ್ಕಾನು8ಮಾರುತನ ದೇಹದಲ್ಲೆ ಭಾರತಿಯು ರಮಿಸುವಾಗಹಾರಿತಯ್ಯ ಸ್ಮøತಿಯು ಸುಖವು ತೋರದು ನಮಗಿನ್ನು 9ಮಂದಗಮನೆಯರಿಂದಭಾರತಿಇಂದ್ರ ಸೇನಳಾಗಿ ಜನಿಸೆಬಂದ ಮರುತ ದೇಹದ ಮುನಿಯು ಚಂದದಿ ಮದುವ್ಯಾದ 10ಮರುತ ಅಕೆÉಯಿಂದ ರಮಿಸ ಮಾರುತದೇಹದ ಮುನಿಯು ಏನುಗುರುತು ಇಲ್ಲಧಾಂಗೆ ಆತ ಇರುತಲಿದ್ದನು 11ಬಾಲೆಯ ಸಂತೋಷ ಪಡಿಸಿ ಮೂಲರೂಪಕಂಡುವಾಯುಮ್ಯಾಲ ವನಕೆ ನಡೆದ ಮುನಿಯು ಆ ಕಾಲದಲೆಚ್ಚತ್ತು12ಇಂದ್ರಸೇನ ಬಂದು ಆಗ ಇಂದಿರೇಶನದಯವ ಪಡೆಯೆನಂದಿವಾಹನ ನಮ್ಮ ಪತಿಯ ವಂದಿಸೆಂದಾರು 13ಪತಿಯ ಬಯಸಿದ ಬಾಲೆಯರಿಗೆ ಚತುರ್ವಾಹ ನುಡಿದನು ಶಿವನುಅತಿಶಯ ರೋದನವ ಮಾಡೆ ಮಿತಿ ಇಲ್ಲದಲೆ ಅಂಜಿ 14ಮಂದಗಮನೆಯ ಧ್ವನಿಯಕೇಳಿ ಬಂದ ಇಂದ್ರ ಬಹಳದಯದಿಬಂದಿತೆನಗೆ ಇಂಥಕ್ಲೇಶಎಂದು ನುಡಿದಳು15ಬಂದು ವರವ ಬೇಡಿ ಪತಿಗಳ ಹೊಂದಿರೆಂದು ನಾಲ್ಕುಬಾರಿಬಂದಿತೆಮಗೆ ಇಂಥಕ್ಲೇಶಎಂದು ನುಡಿದಳು16ಇಂಥ ಅನ್ಯಾಯ ಯಾಕೆಂದು ನಿಂತ ಒಟುಗೆ ನುಡಿದ ಇಂದ್ರಭ್ರಾಂತ ನರನ ನಿಂದೆ ಶಚಿಯ ಕಾಂತೆಗೆ ಶಿವನು 17ನಾನು ಸೃಷ್ಟಿ ಮಾಡಿದವನು ನೀನು ಏನು ನುಡಿದ ಶಿವನುಮಾನವನಾಗೊ ಬೊಮ್ಮಗ ತಾನು ಆತಗೆ 18ಉಮಾ ಮೊದಲಾದವರಿಗೆಲ್ಲ ತಮ್ಮ ಪತಿಗಳ ಹೊಂದಿರೆಂದಉಮಾ ನಿಮ್ಮ ಬೆರಿಯ ಬ್ಯಾಡ ಸುಮ್ಮನೆ ಹೋಗೆಂದ 19ಎತ್ತು ಗಿರಿಯ ಕೆಳಗ ಇದ್ದ ಮತ್ತÀ ನಾಲ್ವರ ನೋಡೆಸತ್ತ ಎಂದು ತಿಳಿಯೋ ನಿನ್ನ ಚಿತ್ತಕತಾ ಎಂದು 20ಕೇಳಿದ ಬೊಮ್ಮನ ನುಡಿಯು ತಾಳಿದ ಬಾಲಿಯರು ಬೆರೆದುಬಹಳ ಪ್ರೇಮದಿಂದಭಾರತಿಇಳಿದಳು ಬಂದು21ರಾಮೇಶನಕ್ಲುಪ್ತತಿಳಿದು ಭೀಮಸೇನನಾದ ವಾಯುಕಾಮಿನಿಯರ ಸಹಿತ ದ್ರೌಪತಿ ಪ್ರೇಮದಿ ಜನಿಸಿದಳು 22
--------------
ಗಲಗಲಿಅವ್ವನವರು
ದೇವ -ದೇವತಾ ಸ್ತುತಿಬ್ರಹ್ಮದೇವರು352ವಂದಿಸುವೆ ಜಗದ್ಗುರುವೆಮಂದಜಾಸನಬ್ರಹ್ಮನಂದಿವಾಹನಶೇಷಗರುಡರ ತಂದೆ ಸುಗುಣೋದ್ದಾಮ ಪ.ಚತುರವದನ ಶ್ರೀಹರಿಯ ಪ್ರಥಮ ಪುತ್ರ ವಿಧಾತ್ರಸತತ ಭಕ್ತಿಯೋಗೀಶಿರೋರತುನ ವಾಣೀಕಳತ್ರನೂರುಕಲ್ಪ ತಪವಗೈದ ಸಾರಋಜುಗಣೇಶಪಾರಮಾರ್ಥಜ್ಞಾನನಿಧಿ ಗಂಭೀರ ಸತ್ತ್ವವಿಲಾಸ 2ಶ್ರೀ ಲಕ್ಷ್ಮೀನಾರಾಯಣನ ದಾಸಜನವರೇಣ್ಯವಾಸವಾದಿ ನಿರ್ಜರೌಘಪೋಷಕಾಗ್ರಗಣ್ಯ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದೇವ ದೇವೇಶ ವೆಂಕಟೇಶಶ್ರೀವಿಧಾತ ವಂದ್ಯ ಭೂವೈಕುಂಠೇಶ ಪ.ಸಾಮಜಾರ್ಚಾರಿ ಶಿಕ್ಷ ಸ್ವಾಮಿಸಾಮಗಾನಪ್ರಿಯ ಸತ್ಪಕ್ಷಶ್ರೀ ಮಾವಧೂ ಮನೋರಮ ತ್ರಿಧಾಮ ಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ 1ರಾಕೇಂದುರವಿಕೋಟಿತೇಜ ಸ್ವಾಮಿನಾಕಪಾರ್ಚಿತ ಪದಾಂಬೋಜವ್ಯಾಕೀರ್ಣಾನೇಕಾಜಾಂಡಾಂಕಿತಾವ್ಯಾಕೃತಶ್ರೀಕಾರ ಸಾಕಾರ ಲೋಕೇಶ ಪೂಜ್ಯ 2ಅನಂತಗುಣ ಪರಿಪೂರ್ಣ ಸ್ವಾಮಿಆನತಜನ ಬುಧಭರ್ಣಧೇನುಗಿರಿನಾಥÀ ದಾನಿ ಪ್ರಸನ್ವೆಂಕಟಜ್ಞಾನಾನಂದ ನಿತ್ಯತೇ ನಮೋ ಕರುಣಿ 3
--------------
ಪ್ರಸನ್ನವೆಂಕಟದಾಸರು
ದೇವಕಿಯುದರ ಸಂಜಾತನೆ ತ್ರುವಿಕಾವನ ಪಿತ ಕಮಲಾಕ್ಷನೆ ತ್ರುವಿಶ್ರೀ ವೈಭವಸಚ್ಚಿದಾನಂದ ತ್ರುವಿಭಾವಕಿಗೋಪಿಯ ಕಂದನೆ ತ್ರುವಿ......... ತ್ರುವಿ1ಮಧುರೆಯೊಳುದಿಸಿದ ಮಹಿಮನೆ ಜೋ ಜೋಯದುಕುಲ ತಿಲಕ ಯಾದವರಾಯ ಜೋ ಜೋ ||ಮಧುಕೈಟಭ ಮುರಮರ್ದನ ಜೋ ಜೋಚದುರನಾಗಿ ತುರುಗಳ ಕಾಯ್ದೆ ಜೋ ಜೋ 2ಗೋಕುಲಪಾಲಕ ಗೋವಿಂದ ತ್ರುವಿಶ್ರೀ ಕುಚಕುಂಕುಮಾಂಕಿತ ಕೃಷ್ಣ ತ್ರುವಿ ||ಪಾಕ ಶಾಸನ ಮುಖ್ಯ ಸುರವಂದ್ಯ ತ್ರುವಿಲೋಕವೀರೇಳ ಪೆತ್ತಾತನೆ ತ್ರುವಿ ........... ತ್ರುವಿ 3ಶ್ರುತಿಚೋರ ಸಂಹಾರಕ ದೇವ ಜೋ ಜೋಜತನದಿ ಸುರರಿಗಮೃತವಿತ್ತೆ ಜೋ ಜೋ ||ಕ್ಷಿತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋಮತಿಯುತ ಬಾಲಕನತಿ ರಕ್ಷ ಜೋ ಜೋ 4ಕ್ಷಿತಿಯ ಈರಡಿಗೆಯ್ದ ವಾಮನ ತ್ರುವಿಯತಿವಂಶ ಜನನಭಾರ್ಗವರೂಪ ತ್ರುವಿ ||ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವಿರತಿಪತಿಪಿತಸುರನುತ ಕೃಷ್ಣ ತ್ರುವಿ ......... ತ್ರುವಿ5ಗೋಪಿಕಾನಂದ ಮುಕುಂದನೆ ಜೋ ಜೋಭೂಪರೊಳ್ಕಾದಿ ಬಳಲಿದನೆ ಜೋ ಜೋಶ್ರೀ ಪುರುಷೋತ್ತಮ ನರಸಿಂಹ ಜೋ ಜೋಅಪಾರ ಮಹಿಮಾರ್ಣವ ದೇವ ಜೋ ಜೋ........ಜೋ ಜೋ 6ಮಣ್ಣೊಳಗಾಡಿ ನೀ ಬಂದೆಯ ತ್ರುವಿಬೆಣ್ಣೆಯ ಬೇಡೆ ಬಯ್ದೆನೆ ಕಂದ ತ್ರುವಿಕಣ್ಣ ದೃಷ್ಟಿಗೆ ಕರಗದ ಕಂದ ತ್ರುವಿಚಿಣ್ಣಸುಮ್ಮನೆ ಇರು ಶ್ರೀ ಕೃಷ್ಣ ತ್ರುವಿ ............ ತ್ರುವಿ7ತಾರಕ ಸತಿವ್ರತಹಾರಕ ಜೋ ಜೋವಾರಣ ಹಯವೇರಿ ಮೆರೆದನೆ ಜೋ ಜೋ ||ಸಾರಿದವರ ಸಂತೈಸುವ ಜೋ ಜೋಶ್ರೀ ರಮಾಕಾಂತ ಶ್ರೀ ಕೃಷ್ಣನೆ ಜೋ ಜೋ.......ಜೋ ಜೋ 8ಶರಣಾಗತ ವಜ್ರಪಂಜರ ತ್ರುವಿಕರುಣಾಕರ ಕಮಲಾಕ್ಷನೆ ತ್ರುವಿ ||ಧರಣಿಧರಶಾಯಿ ಶ್ರೀವರ ತ್ರುವಿ ||ವರದ ಶ್ರೀ ಪುರಂದರವಿಠಲನೆ ತ್ರುವಿ ........... ತ್ರುವಿ 9
--------------
ಪುರಂದರದಾಸರು
ದೇವಿ ಅಂಬುಜವಲ್ಲಿ ರಮಣನೆ ಭೂವರಾಹ ದಯಾನಿಧೆಪವಮಾನನ ದಿವ್ಯ ಕರದಲಿ ಸೇವೆ ಸಂತತಗೊಳ್ಳುವಿಅವನಿಯೊಳು ಶ್ರೀಮುಷ್ಣಕ್ಷೇತ್ರದಿ ನೀ ವಿಹಾರವ ಮಾಡುವಿಅತ್ಯಗಾಧ ಸುಶೀಲಜಾಹ್ನವಿಸುತ್ತು ಷೋಡಶತೀರ್ಥದಿಮತ್ತು ವರ್ಣಿಪೆ ತೀರ್ಥ ತಟದಲಿ ಉತ್ತಮಾಗ್ನೇಯಭಾಗದಿಕರಗಳೆರಡು ಕಟಿಯಲಿಟ್ಟು ಕೋರೆಹಲ್ಲನೆ ತೋರುತಘನ್ನಶ್ವೇತವರಾಹಮೂರುತಿ ಎನ್ನ ಪೂರ್ವದ ಪುಣ್ಯದಿಸುಂದರಾನನ ಕಂಜಮಧುಪನಇಂದುನೋಡಿದ ಕಾರಣಮಲ್ಲಮರ್ದನವೈಕುಂಠದಿಂದ ಮೆಲ್ಲಮೆಲ್ಲನೆ ಬಂದೆಯಸೂಕರಾಸ್ಯನೆ ನಿನ್ನ ಪಾದಕನೇಕ ವಂದನೆ ಮಾಡುವೆ
--------------
ಗೋಪಾಲದಾಸರು
ದ್ರೌಪದಿ ಕೃಷ್ಣಾ ಪಾಂಚಾಲಿ | ದೇವಿ |ಗೋಪತಿಧ್ವಜವಂದ್ಯೆಕಾಳಿ | ಆಹಾ |ಪಾಪಗಳೆಣಿಸದೆಲೇ ಪುನೀತನ | ಮಾಡೆ |ಶ್ರೀ ಪವನನ ಕರುಣಾಪಾತ್ರೆ ಸುಚರಿತ್ರೆ ಪವಾಣಿ ಭಕ್ತಿಗೆ ಅಭಿಮಾನಿ | ತಾಯಿನೀನೆ ಗತಿಯೆಲೆ ಸುಶ್ರೋಣಿ | ಶ್ರೀಶಧ್ಯಾನವ ಮಾಡಲು ಮನ ಪೋಣಿಸುವ |ದೇನನೊಲ್ಲೆನು ಪೂರ್ಣಜ್ಞಾನಿ| ಆಹಾ ||ದೀನ ರಕ್ಷಕೆ ಮಿಕ್ಕ ಹೀನ ದೇವರಪಾದ|ಕ್ಕೆ ನಮಿಸುವ ಮತಿಯನೆಂದು ಕೊಡದಿರೆ 1ಶಾರದೆ ಹರಿಯ ಕುಮಾರಿ | ನಿನ್ನ |ಸಾರಿದೆ ಕುಜನ ಕುಠಾರಿ | ದಯಾ |ವಾರಿಧೆ ಸುಜನೋಪಕಾರಿ | ತೋರೆ |ಸಾರೆಗರಿದು ಮುಕ್ತಿ ದಾರಿ | ಆಹಾ ||ಶ್ರೀ ರಮಣ್ಯುಳಿದೆಲ್ಲ ನಾರೀ ಶಿರೋಮಣಿ |ಆರಾಧಿಸುವೆ ಯೆನ್ನ ದೂರ ನೋಡಲು ಬೇಡ 2ಹಲವರಿಗೆಲ್ಲ ಬಾಯ್ದೆರೆದು | ಬೇಡಿ |ಕೊಳುವದೇನದೆ ದಿನ ಬರಿದು | ಸಾಧು |ನೆಲೆಯದೋರರು ಹತ್ಯಾಗರೆದು | ಬುದ್ಧಿ |ಕಲಿಸೆ ಭಾರತಿಯೆನ್ನ ಮರೆದು | ಆಹಾ |ಇಳೆಯೊಳು ಶ್ರಮಪಡಿಸಲು ಸಲ್ಲ ದಿತಿಜರ |ನಳಿದ ಪ್ರಾಣೇಶ ವಿಠಲಗಚ್ಛಿನ್ನ ಭಕ್ತಳೆ 3
--------------
ಪ್ರಾಣೇಶದಾಸರು
ದ್ವಂದ್ವವೆ ವಸಂತದ ಹಬ್ಬದ್ವಂದ್ವವೆ ಇಹಪರದಲ್ಲಿ ಹಬ್ಬ ಪ.ದ್ವಂದ್ವಾಮೃತ ಕ್ಷೇಮಅಭಯವಸಂತದ್ವಂದ್ವ ಜೀವೇಶರ ತಿಳಿದವ ಶಾಂತದ್ವಂದ್ವದ ನಡೆನುಡಿ ಬಲ್ಲವ ಸಂತದ್ವಂದ್ವವರಿಯದನ ಗತಿಯೆ ವಸಂತ 1ದ್ವಂದ್ವ ಶೀತೋಷ್ಣ ಸಮಾನವ ಕಂಡುದ್ವಂದ್ವ ನಿಂದಾಸ್ತುತಿ ಸರಿಯಿಟ್ಟುಕೊಂಡುದ್ವಂದ್ವವಮಾನವಹಿಡಿದರೆ ಭಂಡುದ್ವಂದ್ವ ಪಕ್ಷಿಗಳ ಬಗೆಯ ಕೇಳಿಕೊಂಡು 2ಫಾಲ್ಗುಣ ಪೌರ್ಣಿಮೆ ಬಂದಿತಿಳೆಗೆಬಾಲಕರೆಲ್ಲ ನೆರೆವುದೊಂದು ‌ಘಳಿಗೆಹೋಳಿಯನಾಡುವ ಸಂಭ್ರಮದೊಳಗೆಕಾಳಗಬೇಡಿರೊ ನಿಮ್ಮ ನಿಮ್ಮೊಳಗೆ3ಅಜೆÕೈಕ್ಯ ಪ್ರತಿಪದ ಹಿಂದಾದರಿಂದಸುಜ್ಞಾನ ದ್ವಿತಿಯಕ್ಕೆ ತೋರುವ ಚಂದ್ರಒಗ್ಗೂಡಿ ಗೆಳೆಯರೊಮ್ಮತದಿಂದಲಗ್ಗೆಕಾರರು ಮುಂದೆ ನಡೆವುದೆ ಚಂದ 4ಭಕ್ತೆಂಬೊ ಪುರದಲ್ಲಿ ಒಂಬತ್ತು ಬೀದಿ ವಿರಕ್ತಿರಂಹಸ ಬ್ರಹ್ಮದ್ಹಾದಿಯ ಐದಿವ್ಯಕ್ತವಾಗುವ ವಸ್ತು ಓದಿಕೆ ಓದಿರಿಕ್ತದ ನುಡಿಗಳು ತಮಸಿನ ಹಾದಿ 5ದಿನಪತಿ ಅಡಗಿರೆ ಮಲಗದೆ ಎದ್ದುಮನೆಯವರನು ಎಚ್ಚರಿಸಬ್ಯಾಡಿ ಸದ್ದುನೆನೆವ ವಿಷಯಗೋಡೆ ಏರುತ್ತ ಬಿದ್ದುಮನೆ ಮನೋವಾರ್ತೆಯ ಕುರುಳನೆ ಕದ್ದು 6ಹಾರುವರ ಕೇರಿಯ ಹೊಗಬ್ಯಾಡಿಕೇಳಿಬೇರೂರವರ ಬಿಟ್ಟು ಬಿಡಿ ದೂರದಲ್ಲಿದೂರುವರೊಡನಾಟ ದುರ್ದೆಶೆಫಲವು ವಸ್ತುದೋರುವ ಮನೆಯೇವೆ ಸರಸ ವೆಗ್ಗಳವು 7ಧೂಳಿ ನೀರುರಿಗಾಳಿ ಬಯಲೊಳಗಾಡಿಮ್ಯಾಲೆ ಮೂರುರಿಯೊಳು ಮತಿಗುಂದಬ್ಯಾಡಿಹಾಳು ತುರುಕರ ಕೇರಿಯೊಳು ನಿಷ್ಫಲವುಜಾಲಗಾರರ ಕೇರಿ ಹೊಕ್ಕರೆ ಫಲವು 8ಹಿಂಚಾದ ಹಿರಿಯರ ಮಾತಲೆ ನಡೆದುವಂಚಕ ಮೂವರ ಸಂಗವ ಕಡಿದುಮಿಂಚುವ ಮಾನ್ಯರ ಪ್ರೀತಿಯ ಪಡೆದುಸಂಚಿತಪ್ರಾರಬ್ಧಾಗಾಮಿಯ ಒಡೆದು9ಮುಚ್ಚಿದ ಕದವೆರಡನು ಮುರಿಹೊಯ್ದುಇಚ್ಛೆ ಮೂರೆಂಬ ನಾಯಿಗಳಜಿಹ್ವೆಕೊಯ್ದುಬೆಚ್ಚದೆ ಮನೆ ಮೆಲ್ಲನೆ ಹೊಗಿರಣ್ಣಸಚ್ಚಿದ ಗೋರಸ ಸೂರ್ಯಾಡಿರಣ್ಣ 10ಏಕಾಧಿಪತಿಯಾಜÕ ಅಭಯವು ಬೇಕುನಾಕು ಝಾವಿನ ರಾತ್ರಿ ನಲವಿರಬೇಕುಪೋಕಕಳ್ಳಾರ್ವರ ಮೆಟ್ಟ್ಯಾಳಬೇಕುಭೂಕಾಂತಗೆ ಸೇವೆಯೊಪ್ಪಿಸಬೇಕು 11ರಮಣನೊಲ್ಲದ ಆರ್ವರ ಸಂಗವಿಡಿದುರಮಿಸುವ ಬುದ್ಧಿಜಾರಿಯ ಗಟ್ಟಿವಿಡಿದುಅಮಿತ ವೈರಾಗ್ಯಹಗ್ಗದಿ ಕೈಯಕಟ್ಟಿಶ್ರೀರಮಣನಂಘ್ರಿಗೆ ಒಪ್ಪಿಸಲು ಕಾರ್ಯ ಗಟ್ಟಿ 12ಎಲ್ಲೆಲ್ಲ್ಯಜ್ಞಾನಾಹಿ ವಿಷಯ ತೇಳುಗಳುಎಲ್ಲೆಲ್ಲಿ ನಿರ್ಜಲಸೃತಿಯ ಬಾವಿಗಳುಎಲ್ಲೆಲ್ಲಿನಿರಯಕಮ್ಮರಿ ಮಿಟ್ಟೆಗಳುಎಲ್ಲ ತಪ್ಪಿಸಿ ಜ್ಞಾನ ಬೆಳದಿಂಗಳೊಳು 13ವ್ಯಾಳ್ಯವರಿತು ತತ್ವಸಂಧಿಯ ಒಲಿದುಸೂಳಿ ಮದೆಂಟರ ಕೈಸೆರೆವಿಡಿದುಕಾಲಾಖ್ಯ ತಳವಾರನಾಳಿಗೆ ಕೊಟ್ಟುಮ್ಯಾಳದ ಗೆಳೆಯರು ಸಂತೋಷಪಟ್ಟು 14ಎಂಬತ್ತು ನಾಲ್ಕು ಲಕ್ಷಾಗಾರ ಹೊಗುತಡೊಂಬಿಯಿಲ್ಲದೆ ಬಂದ ಬನ್ನವಬಡುತಕುಂಭಿಣಿಸುರ ಕುಲ ಭೂಮಿಗೆ ಬಂದುದಂಭ ಮಾಡದಲೆ ಕುರುಳ ಒಯ್ಯಿರೆಂದು 15ರಾಗ ಮತ್ಸರಗೂಡಿದರ ಕುರುಳನೊಟ್ಟಿಭೂಗಗನ ಹೊಗುವ ಕಾಮವಕಟ್ಟಿಯೋಗವಾಗಿರುವ ಹುಬ್ಬಿನ ಕ್ಷೇತ್ರದಲಿಮ್ಯಾಗ ವಿಜ್ಞಾನಗ್ನಿ ಹಾಕಬೇಕಲ್ಲಿ 16ಲೋಭ ಹೋಳಿಕೆಯ ಹೋಳಿಗೆ ತುಪ್ಪ ಸವಿದುಲಾಭಕ್ಕೆ ಕುಣಿಯಲು ವೇತ್ರರು ಹೊಯ್ದುಶೋಭನ ರಸ ಬೊಬ್ಬೆಯ ಸಾಧುಹಿಂಡುತ್ರಿಭುವನಪತಿಕಾಮನಯ್ಯನ ದಂಡು17ಸ್ವರ್ಧುನಿಜನಕನ ಗುಣಗಣಕೀರ್ತಿಊಧ್ರ್ವಸ್ವರದಿ ಹಾಡಿ ಹೊಗಳುವಅರ್ಥಿನಿರ್ಧೂಮಜ್ವಾಲೆಯ ಬೆಳಗಲಿ ಸುತ್ತಿದುರ್ದೇಹಿಗಳ ಕಿವಿಧಾರೆಯ ಕಿತ್ತಿ 18ಅವಿದ್ಯ ಕಾಮ್ಯಕರ್ಮದ ಹೋಳಿ ಸುಟ್ಟುಹ್ಯಾವಿನ ಮೈಯ ಬೂದಿಯ ಮಾಡಿಬಿಟ್ಟುಕೋವಿದರ ಚಾತುರ್ಯಕೆ ಒಡಂಬಟ್ಟು ಚಿದ್ಭಾವ ಮಂದಿರದ ಬ್ರಹ್ಮಕೆ ಲಕ್ಷ್ಯವಿಟ್ಟು 19ಹಂಗಿಲೆ ಬೆಳೆದ ವೃಕ್ಷದ ಮೂಲ ಮುರಿದೂಧ್ರ್ವಾಂಗಕ್ಕೆ ಸುತ್ತುವ ಜಾಣರ ಬಿರಿದುರಂಗು ಮುತ್ತಿನ ಮೂಗುತಿ ಹೆಣ್ಣವಿಡಿದುಶೃಂಗಾರ ಚೇಷ್ಟೆಯ ಮಾಡಿರೊಜಡಿದು20ಬೆಳಗಿನ ಝಾವದಿ ಬೂದಿ ಚಲ್ಲ್ಯಾಡಿಗೆಳೆಯರು ನೆರೆವುದೊಂದೆ ತಾಣ ನೋಡಿಜಲಜಾಕ್ಷನುದ್ಯಮದಂಗಡಿಯಲ್ಲಿನಲಿವ ಸ್ವಾನಂದದೂಟವ ಬೇಡಿಕೊಳ್ಳಿ 21ತಿರುತಿರುಗಿ ಬಂದು ದಣಿದು ನೀವಿಂದುಹರಿಯ ಮೈ ಬೆವರಿನ ಹೊಳೆಯಲ್ಲಿ ಮಿಂದುಥರ ಥರದ್ಹದಿನಾರು ವರ್ಣಗಳಿಂದತರುಣ ತರಣಿಯಂತೆ ಹೊಳೆವುದು ಚಂದ 22ಆನಂದಮಯವಾಸುದೇವನ ಕಂಡುಆನಂದಪುರದಿ ಭಕ್ತಿಯ ನೆರೆಗೊಂಡುಆನಂದ ತೀರ್ಥಗುರು ಕೃಪೆಯಿಂದಸ್ವಾನಂದದೋಕುಳಿಯಾಡುವ ಚಂದ 23ಈ ವಿಧ ಅಧ್ಯಾತ್ಮ ಹೋಳಿಯ ಭೇದಭಾವುಕ ಜನರಿಗೆ ಪರಮಾಹ್ಲಾದದೇವ ಋಷಿಕುಲದೈವ ಮುಕುಂದಕಾವನು ಕರುಣಾಬ್ಧಿಕೇಳಿಗೋವಿಂದ24ವೇದನ ತಂದ ಹಯಾಸ್ಯನ ಹೋಳಿಭೂಧರಧರಿಸಿದಮರ ಕಾರ್ಯಕೇಳಿಮೇದಿನ ತರಲಡ್ಡಾದವನೊಮ್ಮೆ ಹೋಳಿ ಪ್ರಹ್ಲಾದನಿಷ್ಠೆಗೆಹರಿಉದಿಸಿದಕೇಳಿ25ನಾನೆಂಬೊ ದಾನವೇಂದ್ರನ ಮದ ಹೋಳಿಹೀನರಿಗಾಗಿ ಕೊಡಲಿ ಹೊತ್ತಕೇಳಿಜಾನಕಿ ತಂದ ದಶಾಸ್ಯನ ಹೋಳಿಮಾನಿನಿಯರಾಳ್ದ ವಿಡಂಬನಕೇಳಿ26ಸನ್ಮಾರ್ಗ ಬಿಟ್ಟ ಖಳರ ಮತಿ ಹೋಳಿಉನ್ಮತ್ತಕಲಿಯನರಸಿ ಕೊಂದಕೇಳಿಚಿನ್ಮಯಮೂರ್ತಿ ಭೂಭಾರವ ಹೋಳಿಜನ್ಮಿಸಿಬಹುದೆಲ್ಲ ಮೋಹನಕೇಳಿ27ಅನಂತದುರಿತರಾಶಿಗಳನ್ನು ಹೋಳಿಆನಂದ ಸುಖವೀವ ನೆನೆದರೆಕೇಳಿಅನಂತ ಅನವದ್ಯಗುಣ ಪರಿಪೂರ್ಣಅನಂತಾದ್ಭುತಕರ್ಮದೀನ ದಯಾರ್ಣ28ಈಪರಿವಿಜ್ಞಾನವಸಂತದಾಟಚೌಪದಿ ರತ್ನಮಾಲಿಕೆ ಮಾಡಿ ಪಾಠಶ್ರೀಪ್ರಸನ್ವೆಂಕಟ ಕಿಟಿರೂಪಿ ಕೃಷ್ಣತಾ ಪರಿಪಾಲಿಪ ಪುರುಷವರಿಷ್ಠ 29
--------------
ಪ್ರಸನ್ನವೆಂಕಟದಾಸರು
ಧರ್ಮ ದೊರಕುವದೇ | ದುಷ್ಕರ್ಮಿಸತ್ತಿಯೊಳುಪುರುಷಾಧಮನಿಗೆ ಧರ್ಮ ದೊರಕುವದೆ ಪ.ಧನವಿದ್ದರೇನಯ್ಯ ಮನವಿಲ್ಲವು | ಮನವಿದ್ದರೇನಯ್ಯ ಧನವಿಲ್ಲವು |ಧನವು ಮನವು ಯರಡುಂಡ್ಯಾದ ಮನುಜಗೆಅನುಕೂಲವಾದಂಥ ಸತಿಯಿಲ್ಲವಯ್ಯ 1ಧರ್ಮಯಾಗ ಮಾಡವ ಧರ್ಮ ನಾಳೆಯಾದೆನಬ್ಯಾಡನಾಳ್ಯಾರೊ ನಾವ್ಯಾರೊ ಯಲೊ ಮಾನವಾ | ಊಳಿಗದವ ಬಂದುಬಾಬಾರೆಂದೆಳವಾಗ ಆಗ ಮಾಡುವೆನೆಂದರೆ ದೊರಕುವುದೇ ಧರ್ಮ2ಬಾಡಿಗೆ ಮನೆಯಂತೆಯೊ ದೇಹವ ನಚ್ಚಿ ಮಾಡುವೆಪರಿಪರಿಯಾಗವನು | ಈ ಬೀಡಬಿಟ್ಟು ಆ ಬೀಡ ಹೋದ ಮೇಲೆಆಗ ಮಾಡುವೆನೆಂದರೆ ದೊರಕುವದೆ 3ತನ್ನ ಕಣ್ಣ ಮುಂದೆ ಹೋಹ ಜೀವವ ಕಂಡುಇನ್ನು ನಾಚಿಕೆಯಿಲ್ಲವೆ ತನಗೆ | ನನ್ನದು ನನ್ನದುವಂದಾನೊಂದು ಪರಿಯಲ್ಲಿ ತೊಳಲಿ ಬಳಲಿ ಜೀವಮುಂದನ ಜನ್ಮಕೆ ಸಾಧನವು ತಂದೆ ಶ್ರೀಪುರಂದರವಿಠಲರಾಯನನ ಸಂದೇಹವಿಲ್ಲದೆ ನೆನೆ ಕಂಡ್ಯಾ ಮನುಜ 5
--------------
ಪುರಂದರದಾಸರು
ಧರ್ಮವೇ ಜಯವೆಂಬ ದಿವ್ಯ ಮಂತ್ರ |ಮರ್ಮಗಳನೆತ್ತಿದರೆ ಒಳಿತಲಾಕೇಳಿಪ.ವಿಷವನುಣಿಸಿದಗೆ ಷಡುರಸವನುಣಿಸಲುಬೇಕು |ದ್ವೇಷಮಾಡುವನ ಪೋಷಿಸಲು ಬೇಕು ||ಹಸಿದು ಮನೆ ಕೊಂಬವನ ಹಾಡಿಹರಸಲುಬೇಕು |ಅಸುಹೀರಿದನ ಹೆಸರ ಮಗನಿಗಿಡಬೇಕು1ಹಿಂದೆ ನಿಂದಿಸುವರನು ವಂದಿಸುತಲಿರಬೇಕು |ಬಂಧಿಸಿದವನ ಕೂಡ ಬೆರೆಯಬೇಕು ||ನಿಂದ ನಿಲುವಿಗೆ ಸೇರದವನ ಪೊಗಳಲುಬೇಕು |ಕೊಂದವನ ಗೆಳತನವ ಮಾಡಬೇಕಯ್ಯ 2ಕೊಂಡೊಯ್ದು ಕೆಡಿಸುವನ ಕೊಂಡಾಡುತಿರಬೇಕು |ಕಂಡರಾಗದವರ ತಾ ಕರಿಯಬೇಕು ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಅ - |ಖಂಡ ಮಹಿಮೆಯನರಿತು ನೆನೆಯಬೇಕಯ್ಯ 3
--------------
ಪುರಂದರದಾಸರು