ಒಟ್ಟು 3033 ಕಡೆಗಳಲ್ಲಿ , 125 ದಾಸರು , 1948 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಮಝ ಭಾಪುರೆ ಭಳಿರೆ ಹನುಮಂತರಾಮಪದ ಸೇವಿಪ ವೀರ ಹನುಮಂತ ಪಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನಪಟ್ಟಕನುವಾದ ಸಿರಿವಂತ ಹನುಮಂತ 1ಅಂಬರಕೆ ಪುಟನೆಗೆದು ಅಂಬುಧಿಯನೆರೆದಾಟಿಕುಂಭಿನಿಯ ಮಗಳಿಗುಂಗುರವನಿತ್ತು |ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆಗಂಭೀರ ವೀರಾಧಿವೀರ ಹನುಮಂತ 2ಅತಿದುರಳ ರಕ್ಕಸನು ರಥದ ಮೇಲಿರಲು ರಘು-ಪತಿಯು ಪದಚರಿಯಾಗಿ ನಿಂತಿರಲು ನೋಡಿ ||ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆಅತಿ ಭಯಂಕರ ಸತ್ತ್ವವಂತ ಹನುಮಂತ 3ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದುದೃಢಭಕ್ತಿಯಿಂದ ಮೌನದಿ ಕುಳಿತು ||ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆಕೊಡುತ ಸವಿದುಂಡ ಗುಣವಂತ ಹನುಮಂತ 4ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮತೃತೀಯದಲಿಗುರುಮಧ್ವಮುನಿಯೆನಿಸೀ ||ಪ್ರತಿಯಿಲ್ಲದಲೆ ಮೆರೆದೆಪುರಂದರವಿಠಲನಸುತ್ತ ನಿನಗಾರು ಸರಿ -ವಿಜಯಹನುಮಂತ5
--------------
ಪುರಂದರದಾಸರು
ಮಾರಿತೋರೆ ನೀರೆ ಕರೆಯ ಬಾರೆ ಪ.ನಾಗವೇಣಿಯರು ನಿನ್ನ ಬಾಗಿಲಿಗೆ ಬಂದರೆಹ್ಯಾಂಗ ಮಾಡಲಿಯೆಂದುಹೋಗಿ ಕೋಣಿಯನ್ಹೊಕ್ಕೆ 1ಚದುರೆ ನಮ್ಮನೆಗೆ ಬಂದು ಒದರಿ ಆಣಿಯನಿಟ್ಟೆಒದರಿ ಆಣಿಯನಿಟ್ಟೆಕದನತೆಗೆದ್ಹೋಗಿ ಗದಗದ ನಡಗುವಿ2ವಾಸುದೇವರ ತಂಗಿ ಸೋಸಿಲಾಣಿಯನಿಟ್ಟುಸೋಸಿಲಾಣಿಯನಿಟ್ಟ ಶ್ರೀಶನಸತಿಯರು ದಾಸಿ ಎನಿಸುವರೇನ 3ಸರ್ಪಶಯನನ ತಂಗಿ ಒಪ್ಪಾಗಿ ಆಣಿಯನಿಟ್ಟುಒಪ್ಪಾಗಿ ಆಣಿಯನಿಟ್ಟು ಗಪ್ಪಾಗಿ ಕುಳಿತಿಯಾಕತಪ್ಪು ತಪ್ಪೆನ ಬಾರ 4ಉಲ್ಲಾಸದಿಂದ ಆಣೆಗುಲ್ಲು ಮಾಡುತ ಇಟ್ಟೆಗುಲ್ಲುಮಾಡುತಲಿಟ್ಟೆ ನಲ್ಲೆಯರು ಬರಲುಎದೆ ಝಲ್ಲು ಝಲ್ಲೆನುತಿರೆ 5ಚಿಕ್ಕ ಬುದ್ದಿಂದ ಆಣೆ ಇಕ್ಕಿ ಇಲ್ಲಿಗೆ ಬಂದೆಇಲ್ಲಿಗೆಬಂದ ಪುಟ್ಟ ಸುಭದ್ರಾಒಳಗೆ ಹೊಕ್ಕು ಹೊರಗೆ ಹೊರಡಲೊಲ್ಲೆ 6ಪೋರಬುದ್ದಿಯಿಂದ ಸಾರಿ ಆಣೆಯನಿಟ್ಟೆಸಾರಿ ಆಣಿಯನಿಟ್ಟೆನಾರಿರುಕ್ಮಿಣಿ ಬರಲು ಹಾರುತಿದೆ ಎದೆ 7ನಕ್ಕರೆಂಬೋ ಭೀತಿ ಇಕ್ಕಿ ಮೂಲೆಗೆ ಬಂದೆಇಕ್ಕಿ ಮೂಲೆಗೆ ಅಕ್ಕ ರುಕ್ಮಿಣಿಗೆಆಣಿಸೊಕ್ಕಿನಿಂದÀಲೆ ಇಟ್ಟೆ 8ರಮಿ ಅರಸನ ತಂಗಿ ಹೆಮ್ಮಿಲಾಣಿಯನಿಟ್ಟೆಆಣಿಯನಿಟ್ಟೆ ನಮ್ಮ ಕಾಣುತಒಳಗೆ ಗುಮ್ಮನಂತಡಗಿದಿ 9
--------------
ಗಲಗಲಿಅವ್ವನವರು
ಮಾರಿಯನು ತೋರುತಿಹೆನು ಅದನೀಗನಾರಿ ಎಂದೆಂಬರಯ್ಯಪಸೀರೆ ಕುಪ್ಪಸವನುಟ್ಟುಸಿಂಗರದಿ ತೋರ ಕಂಕಣವನಿಟ್ಟು ಅಯ್ಯಮೂರಳೆಯಕಟ್ಟಾಣಿಕಟ್ಟಿಯೇಮೋರೆ ಮುರಕಿಸುತಿಹುದು ಅಯ್ಯ1ಚಳ್ಳತುಂಬುಗಳಿಂದಚವುರಿ ಬೆಳ್ಳಿಯ ಬಳೆಗಳಿಂದ ಅಯ್ಯಮುಳ್ಳು ಗಜ್ಜೆಗಳ ಧರಿಸಿ ಮನೆಯೊಳಗೆಹಲ್ಲು ಕಡಿಯುತಲಿಹುದು ಅಯ್ಯ2ಓಲೆ ಮಾಡಿಸು ಎಂಬುದುವರಹಕೆ ಬಾಳುವೆ ನೋಡಿರಿ ಎಂಬುದಯ್ಯಹೇಳುವುದು ಕಿವಿಯೊಳಗೆ ಲೋಭಕಾಲು ಕೈ ತಿರುಹುವುದು ಅಯ್ಯ3ಕರೆಕರೆಯ ಮಾಡುತಿಹುದು ತಾಯಿಯಹೊರಡಿಸು ಮನೆಯಿಂದಲೆಂಬುದಯ್ಯಹರನ ಚಿಂತೆಗೆ ಹಾನಿಯು ಇದರಿಂದನರಕ ಬಹಳವ ತಿರುಗುವೆ ಅಯ್ಯ4ನಾರಿಯೆನಿಸಿಹುದೆ ಮೃತ್ಯುಇದನೀಗ ದೂರ ಮಾಡಿದನಾದರೆ ಅಯ್ಯಸೇರುವುದು ಸರ್ವಮುಕ್ತಿಚಿದಾನಂದನಿರೆ ತಾನೆಯಹುದು ಅಯ್ಯ5
--------------
ಚಿದಾನಂದ ಅವಧೂತರು
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮುಟ್ಟು ಮುಟ್ಟೆನ್ನುತ ಮೂರ್ನಾರು ಹೊರಲೆಮುಟ್ಟಲಿ ಬಂತೆ ಬಿಕನಾಶಿಪಮುಟ್ಟೋ ನೀನೇ ಮಡಿಯೂ ನೀನೇಕೆಟ್ಟಿತು ನಿನಮಡಿ ಮೊದಲೇ ಜಲದಲಿ ನೀ ಮುಳುಗೆಕಡೆಯಲಿ ಆ ಉದಕವನೇ ತರುವೆದೇವರಿಗಿಂದಭಿಷೇಕವ ಮಾಡುತಅಹಂನ ಬಿಡು ನಿನ ಬಿಕನಾಶಿ1ಎಲುಬು ಚರ್ಮದಿ ಮಲಮೂತ್ರದ ಗೂಡಲಿನಲಿಯುತಲಿದ್ದೆ ಬಿಕನಾಶಿನೆಲೆಗೊಂಡಾ ನವ ದ್ವಾರದ ಜಲದೊಳುತೊಳಲುತ ಬಿಕನಾಶಿ2ಹುಟ್ಟುತಸೂತಕಹೊಂದುತಸೂತಕನಟ್ಟ ನಡುವೆ ಬಿಕನಾಶಿಪಟ್ಟಣದಾ ಕಾವೇರಿ ಮುಳುಗಲುಮುಟ್ಟು ತೇಲಿಯಿತೆ ಬಿಕನಾಶಿ3ಉತ್ತಮ ಹತ್ತಿ ಬತ್ತಿರಲಾಂಜನವೃಕ್ಷದಿ ಬೆಳೆವುದೆ ಬಿಕನಾಶಿಉತ್ತಮ ರೋಧನ ಭಾರವ ಕೆಡಿಸಲುಕೆಟ್ಟಿತು ನಿನ ಮಡಿ ಬಿಕನಾಶಿ4ನಾನಾ ಶಾಸ್ತ್ರವನೋದಿ ನಾ ನಿನ್ನ ಮರೆವೆನುಹೀನವ ಬಿಡು ನಿನ್ನ ಬಿಕನಾಶಿನಾನಾ ಶಾಖದಲಿ ಇರಲಾದರೂರ್ವಿಅದುರುಚಿತಿಳಿವುದೆ ಬಿಕನಾಶಿ5ಚರ್ಮವು ತೊಳೆದರೆ ಕರ್ಮವು ಹೋಯಿತೆಕರ್ಮವು ಬಿಡದು ನಿನ್ನ ಬಿಕನಾಶಿಒಮ್ಮೆ ಚಿದಾನಂದ ಪಾದವ ಸ್ಮರಿಸಲುನಿರ್ಮಲವಾದೆಯ ಬಿಕನಾಶಿ6
--------------
ಚಿದಾನಂದ ಅವಧೂತರು
ಮೇರೆಯಿಲ್ಲದೆ ಮಾತನಾಡುತಲಿರಲೊಮ್ಮೆ ಕೃಷ್ಣಾ ಎನಬಾರದೆದಾರಿಯ ನಡೆಯುತ ಭಾರವ ಹೊರುವಾಗ ಕೃಷ್ಣಾ ಎನಬಾರದೆ ಪ.ತಿರುಗಾಡುತ ಮನೆಯೊಳಗಾದರು ಒಮ್ಮೆ - ಕೃಷ್ಣಾಪರಿಪರಿ ಕೆಲಸದೊಳಿದುವೊಂದು ಕೆಲಸವು - ಕೃಷ್ಣಾ 1ಮಲಗಿಯೆದ್ದು ಮೈಮುರಿದೇಳುತಲೊಮ್ಮೆ - ಕೃಷ್ಣಾಹಲವು ಯೋಚಿಸುತಲಿ ಮಂದಿರದಲಿ ಒಮ್ಮೆ - ಕೃಷ್ಣಾ 2ಚೆಂದುಳ್ಳ ಹಾಸಿಗೆ ಮೇಲೆ ಕುಳಿತು ಒಮ್ಮೆ ಕೃಷ್ಣಾಕಂದನ ಬಿಗಿದಪ್ಪಿ ಮುದ್ಧಾಡುತಲೊಮ್ಮೆ - ಕೃಷ್ಣಾ 3ಗಂಧವ ಪೂಸಿ ತಾಂಬೂಲ ಮೆಲ್ಲುತಲೊಮ್ಮೆ - ಕೃಷ್ಣಾಮಂದಗಮನೆಯೊಳು ಸರಸವಾಡುತಲೊಮ್ಮೆ - ಕೃಷ್ಣಾ 4ಕ್ಷೀರಸಾಗರ ಶಯನ ನೀನೇ ಗತಿಯೆಂದು ಕೃಷ್ಣಾದ್ವಾರಕಾ ಪುರವಾಸಪುರಂದರವಿಠಲ ಕೃಷ್ಣಾ5
--------------
ಪುರಂದರದಾಸರು
ಮೋಸ ಹೋದೆನಲ್ಲ - ಸಕಲವು-|ವಾಸುದೇವಬಲ್ಲಪಭಾಸುರಂಗ ಶ್ರೀ ವಾಸುಕಿಶಯನನ |ಸಾಸಿರ ನಾಮವ ಲೇಸಾಗಿ ಪಠಿಸದೆ ಅ.ಪದುಷ್ಟಜನರ ಕೂಡಿ - ನಾನತಿ-|ಭ್ರಷ್ಟನಾದೆ ನೋಡಿ ||ಸೃಷ್ಟಿಗೊಡೆಯ ಮುರ-ಮುಷ್ಟಿಕ ವೈರಿಯ |ದೃಷ್ಠಿಯಿಂದ ನಾ ನಿಟ್ಟಿಸಿ ನೋಡದೆ 1ಕಾಯವು ಸ್ಥಿರವಲ್ಲ-ಎನ್ನೊಳು-|ಮಾಯೆತುಂಬಿತಲ್ಲ ||ಪ್ರಾಯ ಮದದಿ ಪರಸ್ತ್ರೀಯರ ಕೂಡುತೆ |ಕಾಯಜಜನಕನ ಧ್ಯಾನವ ಮಾಡದೆ2ಕಂಗಳಿಂದಲಿ ನೋಡೊ-ದೇವಾನಿ-|ನ್ನಂಗ ಸಂಗವ ನೀಡೋ ||ಮಂಗಳ ಮಹಿಮ ಶ್ರೀ ಪುರಂದರವಿಠಲ ನಿ-|ನ್ನಂಗದೊಳಿರುವಂತೆ ದಯವನು ಮಾಡೊ 3
--------------
ಪುರಂದರದಾಸರು
ಯದುನಂದನನ ನೋಡುವ - ಬಾರೆ ಲತಾಂಗಿ |ಹದಿನಾಲ್ಕು ಜಗವನ್ನು ಪೊರೆವ - ನೀಲಘನಾಂಗನ ಪಬಿಗಿದುಟ್ಟ ಕನಕಾಂಬರ - ಕಾಂಚಿಯದಾಮ|ನಗೆಯರಳ ಧರಿಸಿದವನ |ಅಗಣಿತಗುಣನಿಧಿ ಜಗವ ಮೋಹಿಪ ಕೃಷ್ಣನ1ಸಣ್ಣ ಪೊಂಗಳಲೂದುತ - ವನ್ಯದಳಾಕ್ಷ |ಕಣ್ಣ ಸನ್ನೆಯ ಮಾಡುತ ||ಚಿಣ್ಣರ ಒಡಗೂಡಿ ಚಿಗಿದುಬಾಹಕೃಷ್ಣನ2ಮಂದಹಾಸ ಮುಖಾಂಬುಜ - ಪೊಂದಿದಂಥ |ಗಂಧ-ಕಸ್ತೂರಿ ತಿಲಕಾ |ಬಂದ ನಮ್ಮ ಪುರಂದರವಿಠಲ ಇಂದಿರೆಯರಸನ 3
--------------
ಪುರಂದರದಾಸರು
ಯಮದೂತರು ನರನನು ಎಳೆದೊಯ್ದುದನುಎಲ್ಲರಿಗೆ ಹೇಳುವೆನುಕುಮತಿಯಲಿ ಸದ್ಗುರು ಚರಣವ ಹೊಂದದಕೇಡಿಗಾಗುವ ಫಲಗಳನುಪಮುರಿದ ಮೀಸೆಯಲಿ ಮಸಿದೇಹದಲಿಉರಿಹೊಗೆ ಹೊರಡುವ ಉಸುರಿನಲಿಕರುಳು ಮಾಲೆಯಲಿ ಕೋರೆದಾಡೆಯಲಿಜರೆಮೈ ಹಸಿದೊಗಲುಡುಗೆಯಲಿ1ಝಡಿವ ಖಡುಗದಲಿ ಹೂಂಕಾರದಲಿಕಡಿದವಡೆಯಲಿ ಹುರಿಮೀಸೆಯಲಿಬಿಡಿಗೂದಲಲಿ ಕರದ ಪಾಶದಲಿಸಿಡಿಲ ತೆರೆದ ಬಿಡುಗಣ್ಣಿನಲಿ2ಮಿಡುಕುತ ಸತಿಸುತರನು ಆಪ್ತರನುಹಿಡಿದೊಪ್ಪಿಸುತಿಹ ವೇಳೆಯಲಿಕಡಿಯಿರಿ ಹೊಡಿಯಿರಿ ತಿನ್ನಿರಿ ಎನುತಲಿ ಧುಮುಕಲುಬಿಡುವನು ಪ್ರಾಣವ ಕಾಣುತಲಿ3ಯಾತನೆ ದೇಹವ ನಿರ್ಮಿಸಿ ಅದರೊಳುಪಾತಕಮನುಜನ ಹೊಗಿಸುತಲಿಘಾತಿಸುವ ನಾನಾಬಗೆ ಕೊಲೆಯಲಿಘನನುಚ್ಚು ಕಲ್ಲೊಳಗೆ ಎಳೆಯುತಲಿ4ಈ ತೆರವೈ ಈ ಧರ್ಮ ಶಾಸ್ತ್ರವನೀತಿಯ ತೆರದಲಿ ಮಾಡುತಲಿಪಾತಕವನು ಬಹುಪರಿ ಶಿಕ್ಷಿಪರುದಾತಚಿದಾನಂದನಾಜೆÕಯಲಿ5
--------------
ಚಿದಾನಂದ ಅವಧೂತರು
ಯಾಕಿಂತು ಮನಸೋತೆ ಏ ರುಕ್ಮಿಣೀದೇವಿಲೇಖನವ ಬರೆದು ನೀನಾ ಕೃಷ್ಣಗೆಪಲೋಕಮಾನ್ಯಳೆ ನೀನು ಬೇಕಾಗಿ ಮರುಳಾದೆಈ ಕೃಷ್ಣ ಯಾದವರ ಕುಲಕೆ ತಿಲಕಅ.ಪಜನಿಸಿದನು ಮಧುರೆಯೊಳು ದೇವಕಿಯ ಜಠರದಲಿತನಯನೆನಿಸಿದ ಗೋಪಿಗಿವನು ಗೋಕುಲದಿದನುಜೆ ಪೂತನಿಯಳ ಮೊಲೆಯುಂಡು ತೇಗಿದನುಮನೆ ಮನೆಯ ಪಾಲ್ಮೊಸರು ಕದ್ದು ಮೆದ್ದಾ1ತುರುವ ಕಾಯ್ದನ ವನದಿ ತಿರಿಯ ಬುತ್ತಿಯನುಂಡಶಿರಕೊರಳಿಗಾಭರಣ ನವಿಲ್ಗರಿಯ ತುಂಡುತರಳತನದಲಿ ಹಲವು ತರುಣಿಯರ ವ್ರತವಳಿದಕರಿಯನಿವ ಸ್ತ್ರೀಯರುಡುವ ಸೀರೆ ಕದ್ದೊಯ್ದ2ನಂದಗೋಕುಲದಿ ಸಾಕಿದ ಸ್ತ್ರೀಯರನು ಬಿಟ್ಟುಬಂದು ಮಧುರೆಯೊಳು ಮಾತುಳನ ಮರ್ದಿಸಿದಾಚಂದವೆ ಆ ಕುಬುಜೆ ಡೊಂಕ ತಿದ್ದಿಯೆ ನೆರೆದಸಿಂಧುಮಧ್ಯದಿಂzÀಗೋವಿಂದ ಮಾಗದಗಂಜಿ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಯಾದವ ನೀ ಬಾ ಯದುಕುಲನಂದನಮಾಧವಮಧುಸೂದನ ಬಾರೋಪಸೋದರ ಮಾವನ ಮಥುರಿಲಿ ಮಡುಹಿದ ಯಶೋದೆಯ ನಂದನ ನೀ ಬಾರೋ ಅ.ಪಕಣಕಾಲಂದುಗೆ ಗಣಗಣಕೆನುತಲಿತನನನವೇಣುನಾದದಲಿ ||ಚಿಣಿಕೋಲು ಚಂಡು ಬುಗುರಿಯನಾಡುತಸಣ್ಣ ಸಣ್ಣ ಗೋವಳರೊಡಗೂಡಿ 1ಶಂಖ ಚಕ್ರವು ತೋಳಲಿ ಹೊಳೆಯುತಬಿಂಕದ ಗೋವಳ ನೀ ಬಾರೋ ಅಕ- ||ಳಂಕ ಮಹಿಮನೆ ಆದಿನಾರಾಯಣಬೇಕೆಂಬ ಭಕ್ತರಿಗೊಲಿಬಾರೋ 2ಖಗವಾಹನನೆ ಬಗೆ ಬಗೆ ರೂಪನೆ |ನಗೆ ಮೊಗದರಸನೆ ನೀ ಬಾರೋ ||ಜಗದೊಳು ನಿನ್ನಯ ಮಹಿಮೆಯ ಪೊಗಳುವೆ |ಪುರಂದರವಿಠಲ ನೀ ಬಾರೋ3
--------------
ಪುರಂದರದಾಸರು
ಯಾರಲಿ ದೂರುವೆನೋ ಗಿರಿಯ ರಾಯಾಯಾರೆನ್ನ ಸಲಹುವರೋ ಪಸಾರಿದ ಭಕ್ತ ಸಂಸಾರಿ ನಿನ್ನಯ ಪದವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳುದುಷ್ಟರಿಂದಲಿ ನೊಂದೆನೋ ||ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1ಹಿಂದೆ ಮಾಡಿದ ಕರ್ಮವು ಈ ಭವದೊಳುಮುಂದಾಗಿ ತೋರುತಿದೆ ||ಇಂದೇನುಗತಿಅದರಿಂದ ನೊಂದೆನು ನಾನುಮಂದರಧರಗೋವಿಂದ ನೀನಲ್ಲದೆ2ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತಹಗೆಗಳ ನಗಿಸುತಿದೆ ||ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3ಬಾಡಿದರಳಿಸಸಿಯ ಕಲ್ಲಿನ ಮೇಲೆಈಡಾಗಿ ನಾಟಿದರೆ ||ಬೇಡಿಕೊಂಡರೆತಳಿರುಮೂಡಿ ಬರುವುದುಂಟೆರೂಢಿಗೊಡೆಯ ನೀನು ನೋಡದಿದ್ದ ಮೇಲೆ 4ಹಲವು ಪರಿಯ ಕಷ್ಟವ ನಿನ್ನಯಪಾದಜಲಜದ ಕರುಣದಲಿ ||ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲಒಲವಾಗು ಎನ್ನೊಳು ಪುರಂದರವಿಠಲ 5
--------------
ಪುರಂದರದಾಸರು
ಯೋಗಿಬಿಟ್ಟರೆ ಬಿಡದು ನಾದವುಯೋಗಿಬಿಟ್ಟರೆ ಬಿಡದು ನಾದವುಕೂಗುತಿಹುದು ಸರ್ವಕಾಲದಿಜಾಗಟೆ ಕೊಳಲು, ತಮ್ಮಟೆಚಂಗು ಕೊಂಬು ತಾಳರವಗಳಿಂದಪಮಲಗೆ ಕುಳಿತರೆ ಕೂಗುತಿಹುದುನಿಲಲು ನಡೆಯೆ ಕೂಗುತಿಹುದುಒಲಿದು ಮಾತುಗಳಿರಲಿಕೆಬಲಿದು ಧುಂಧುಂ ಎಂದು ಭೇರಿಯ ಶಬ್ದರವಗಳಿಂದನಿಲದೆ ಮುರಿದು ಮದವಸುಲಭ ಸುಖವ ಸುರಿಸುತ1ಕಣ್ಣು ಮುಚ್ಚಲು ಕೂಗುತಿಹುದುಕಣ್ಣು ತೆರೆಯೆ ಕೂಗುತಿಹುದುಉಣ್ಣುತಲಿ ತಾನು ಇರಲಿಕೆಘಣ್ಣ ಘಣ್ಣ ಘಣ್ಣಲು ಎಂದು ಘಂಟೆ ಶಬ್ದದ ರವಗಳಿಂದಮಣ್ಣಗೂಡಿಸಿಶೋಕಮೋಹವಪುಣ್ಯರವವ ಬೀರುತ2ಸುಮ್ಮನಿರಲು ಕೂಗುತಿಹುದು ಸುಳಿದಾಡೆ ಕೂಗುತಿಹುದುಬಮ್ಮನೊಮ್ಮೆ ಮರೆತು ಇರಲಿಕೆಘಮ್ಮ ಘಮ್ಮ ಘಮ್ಮ ಎಂದು ಶಂಖ ಶಬ್ದದ ರವಗಳಿಂದಹಮ್ಮುವಾಸನ ಕ್ಷಯವಮಾಡಿನಿರ್ಮಲತ್ವವ ತೋರುತ3ಅರುಣಕಾಲದಿ ಅಸ್ತಕಾಲದಿ ಅವಸ್ಥಾತ್ರಯ ಕಾಲದಿಅರಗಳಿಗೆ ಕ್ಷಣ ಮೂಹೂರ್ತದಿಸರಿಗರಿ ಗಮಪ ಎಂದು ಸ್ವರಮಂಡಲರವಗಳಿಂದತರಿದು ಜನನ ಮರಣವನ್ನುತೇಜಬಿಂದು ಸುರಿವುತ4ಇಂತುನಿತ್ಯಕಾಲದಿ ಬಿಡದೆಸಂತತದಲಿ ಹಾಡಿಪಾಡಿನಿಂತು ಚಾಕರಿಯನೆ ಮಾಡುತಚಿಂತಕರನುತಾ ಚಿದಾನಂದನಾಗಿ ತೋರ್ಪ ಯೋಗಿಯನ್ನುಅಂತ್ಯವಿಲ್ಲದಾನಂದಪಡಿಸಿ ಆಶೀರ್ವಾದವ ಪಡೆಯುತ5
--------------
ಚಿದಾನಂದ ಅವಧೂತರು
ಯೋಗಿಯ ನಡತೆ ಲೋಕಕ್ಕೆ ವಿರುದ್ಧಆಗಲೆಂದೇ ಮೂಡುತಿರಲವನೇ ಗೆದ್ದಪಸ್ನಾನವೆಂಬುದು ಇಲ್ಲ ಸಂಧ್ಯಾದಿ ಮೊದಲಿಲ್ಲಹೀನ ಶೀಲತ್ವವದು ಇರುತಿಹುದುಏನೇನು ಶುಚಿಯಿಲ್ಲ ಜಾತಿ ಸಂಕರವೆಲ್ಲತಾನು ಪಿಶಾಚಿಯಂತಿಹನುಯೋಗಿ1ಕಂಡಲ್ಲಿಯೆ ಉಂಬ ಕಂಡ ಕಡೆಯೆತ್ತಿಂಬಹೆಂಟೆ ಹುಡಿಯನ್ನದಲೆ ಮಲಗಿಕೊಂಬಭಂಡ ನಡತೆಯ ನಡೆದು ಭ್ರಷ್ಟನಾಗಿ ಕಾಣಿಸುತಉಂಡ ಬಾಯಿಯ ತಾನು ತೊಳೆಯದಿಹಯೋಗಿ2ದೇಹಸ್ಥಿತಿಯನು ನೋಡೆ ಮಣ್ಣಿಹುದು ಗೇಣುದ್ದಊಹಿಸಲು ತಲೆಯಲ್ಲ ಜಡೆಗಟ್ಟಿ ಬಿದ್ದಿಹುದುದೇಹಪರವಶನಾಗಿಉನ್ಮತ್ತಸ್ಥಿತಿಯಾಗಿದೇಹಿ ಚಿದಾನಂದಗುರುತಾನಾದಯೋಗಿ3
--------------
ಚಿದಾನಂದ ಅವಧೂತರು
ಯೋಗಿಯ ನೋಡಿರೋ ಸದ್ಗುರು ಯೋಗಿಯ ನೋಡಿರೋಯೋಗಿಚಿದಾನಂದಾವಧೂತ ಗುರುದೊರೆಯ ಸದ್ಗುಣ ಚರಿತನಪಆಶಾಪಾಶಗಳೆಂಬುವನೆಲ್ಲವಜರಿದುವಾಸನೆತರಿದುದೋಷದುರ್ಗ ಜನನಾದಿಗಳನು ಬಳಿದು ಸಂಶಯ ತುಳಿದುಕ್ಲೇಶಪಂಚಕ ಕಾಮಕ್ರೋಧವ ಕಡಿದು ಮುಂದಕೆ ನಡೆದುಭಾಸುರತೇಜದಿ ತೋರುವ ಪ್ರಭೆಯನುಕೂಡುವ ತಲೆಯೊಲಿದಾಡುವ1ಬಲಿದಾಧಾರವ ಕುಂಭಕದಿಂದಲಿ ಬಲಿಸಿ ವಾಯುವ ನಿಲಿಸಿನೆಲೆಯನೆ ಹತ್ತಿ ಆ ನೆಲೆಯನೆ ನಿಲುಕುತ ಮತ್ತಾನೆಲೆಯ ಹೊಲಬಲಿ ತೋರುವಭಾಸ್ಕರಕೋಟಿಯ ಮೀರಿಕಳೆಗಳ ತೋರಿ ಥಳಥಳ ಥಳಿಸಿಯೆ ಮೆರೆವಾ ಆತ್ಮನ ನೋಡುವ ಸಂತಸಪಡುವ2ಆರು ಚಕ್ರಗಳಲಿ ತೋರುವ ದಳಗಳನರಿದು ಅದರೊಳು ಬೆರೆತುಭೋರಿಡುತಿಹ ದಶನಾದದ ಬೊಬ್ಬೆಯಕೇಳಿಹರುಷವ ತಾಳಿ ಚಾತುರದಿ ಮೆರೆಯುತಲಿಹ ಜ್ಯೋತಿಯಸಾರಸೇವಿಪ ಶೂರಧಿರ ಚಿದಾನಂದಾವಧೂತಾತ್ಮ ಗುರುವಾ ಎನ್ನನು ಪೊರೆವಾ3
--------------
ಚಿದಾನಂದ ಅವಧೂತರು