ಒಟ್ಟು 56123 ಕಡೆಗಳಲ್ಲಿ , 139 ದಾಸರು , 12212 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನುಂಟೇನಿಲ್ಲ ಗುರುಕೃಪೆಯಿಂದ ತನುಮನಿಟ್ಟದೇ ಪಡಕೊಂಬುದು ಚಂದ ಧ್ರುವ ಸುಖ ಸುರುತದೆ ನೋಡಿ ಬಲುಬ್ರಹ್ಮಾನಂದ ಪ್ರಕಟಸಲಿಕ್ಕೆ ಬಾರದು ಮುಖದಿಂದ ಸಕಲವೆಲ್ಲಕೆ ಮೇಲು ತಿಳಿಯಬೇಕಿದೊಂದೆ ಶುಕಾದಿ ಮುನಿಗಳದಾರಿದರಿಂದೆ 1 ಸಿದ್ಧ ಬುದ್ಧ್ದರಿಗೆ ಸಾದ್ಯವದೆ ಸಿದ್ಧ ನೋಡಿ ಬುದ್ಧಿವಂತರಿಗೆ ಒಲಿದುಬಾಹುದು ಕೈಗೂಡಿ ಸನ್ಮಾರ್ಗ ಸುಪಥವಿದೆ ಸದ್ಗುರು ಸೇವೆಮಾಡಿ ಸದ್ಭ್ಬಾವದಿಂದಲಿ ಸ್ವಸುಖವೆ ಸೂರ್ಯಾಡಿ 2 ಭಾಸ್ಕರ ಗುರುದಯದವಗಿನ್ನೇನು ಭಾಸುತೀಹ್ಯದಾವಗಿನ್ನು ನಿಜಕಾಮಧೇನು ವಿಶ್ವದೊಳಗವನೊಬ್ಬ ಸಿದ್ಧತಾನು ದಾಸಮಹಿಪತಿಗಿದೇ ಅಭಿನವಧೇನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನುತ್ತೀರ್ಣಾಗುವೆನು | ಗುರುವಿಗೆ ಪ ಜನಿತು ಪನಿತನು ವಿದ್ಯದಾಯಕನು | ಉಣಲುಡಲೀವನು ಭಯವ ನಿವಾರಿಪನು 1 ತನ್ನ ತಾನೊಲಿದಾ ಕರುಣವಗರದಾ | ಚಿನುಮಯ ಸುಖದಾ ದಾರಿಯ ದೋರಿಸಿದಾ 2 ತಂದೆ ಮಹಿಪತಿ ಸ್ವಾನಂದ ಮೂರ್ತಿಕಂದನ ಸಾರ್ಥಿ ಆಗಿಹ ಘನಕೀರ್ತಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನುಧನ್ಯನೊ ಇವನು ಎಂಥ ಪುಣ್ಯನೊ ದೀನದಯಾಳು ಜಾನಕೀಶನ ಧ್ಯಾನ ಮಾಳ್ಪ ಮಾನವನು ಪ ಜ್ಞಾನದಿಂದ ತಿಳಿದು ಜಗ ಶೂನ್ಯವೆಂದು ಊಹಿಸಿ ಮನದಿ ದಾನವಾಂತಕನಾದ ಹರಿಯ ಧ್ಯಾನವೊಂದೇ ಕಾರಣೆಂದು ಜ್ಞಾನಬೆಳಗಿನೊಳಗೆ ನೋಡಿ ಆನಂದಿಸುತಲ್ಹಿಗ್ಗುವವ 1 ಆಶಪಾಶಗಳನು ನೀಗಿ ಈ ಮೋಸಮಯ ಸಂಸಾರದೊಳು ವಾಸನಾರಹಿತನಾಗಿ ಸದಾ ದಾಸಸಂಗಸುಖಪಡೆದು ಈಶ ಭಜನೆಯೊಳ್ಮನವಿಟ್ಟು ಈಸಿಭವಾಂಬುಧಿ ಪಾರಾಗುವವ 2 ನಂಬಿಗಿಲ್ಲದ ದೇಹವಿದನು ನಂಬಿನೆಚ್ಚಿ ಸಂಭ್ರಮಿಸದೆ ಕಂಬುಕಂಧರ ಶಂಭುವಿನುತ ಅಂಬುಜಾಕ್ಷ ಶ್ರೀರಾಮನ ನಂಬಿ ಗಂಭೀರಸುಖದೊಳಿರುವವ 3
--------------
ರಾಮದಾಸರು
ಏನೂ ತೋಚದೋ ಮುಂದೇನು ಗತಿಯೋ ದೇವಾ ಅಪ್ರಮೇಯ ಸದಾ ಪ ನಾನು ನನ್ನದು ಎಂಬಭಿಮಾನದಿಂದನುದಿನ ಹೀನಕರ್ಮದ ಸುಳಿಯೊಳು ನಾ ನೊಂದು ನಿಂದೆನೊ ಅ.ಪ ಬೋಧೆ ಇಲ್ಲದೆ ನಾನು ಬಾಧೆಪಡುವೆ ಪೂರ್ಣ ಬೋಧರ ಮತತತ್ತ್ವ ಸಾಧಿಸಲಿಲ್ಲವೋ ಸಾಧುಸಜ್ಜನರೆಂದು ಆದರಿಸಲರಿಯೆನೋ ಆಧಾರನಾಗೋ ನಿರಾಧಾರನಾಗಿಹೆ ಬಾಧಿಪರೋ ಬಂಧುಗಳು ಪ್ರತಿದಿನ ನಿಂದಿಪರೋ ಮನಬಂದ ತೆರದಲಿ ಊರೊಳಿತರಜನ ಉದಯಾಸ್ತ ಪರಿಯಂತರದಿ ಎನಗೆ ಉದರದ ಯೋಚನೆ ಆದುದೀಪರಿ ಎನ್ನ ಜೀವನ ಇದಕೆ ಸಾಧನಮಾಡಿ ಮೋಹದ ಮುದದಿ ಮೈಮರೆದೆನನುದಿನ ಪದುಮನಾಭನೆ ಮೊರೆಯಿಡುವೆ ಮುಂದೇನು ಗತಿ ಪಥವಾವುದೋ ದೇವಾ 1 ಯುಕುತಿಯಿಂದಲಿ ಕರ್ಮಮಾಡಿ ಬೆಂಡಾದೆ ಭಕುತಿಮಾತ್ರವು ಏನ್ನೊಳಿನಿತಿಲ್ಲವೋ ಶಕುತಿಯುಕುತಿಗಳೊಳು ನೀನಿದ್ದು ನಡೆಸುವೆ ಭಕುತಿ ಕೊಡದಿರುವೆಯಾ ಮುಕುತರೊಡೆಯಾ ಮಾಕಳತ್ರನೆ ನಿನ್ನ ದಯವೊಂದನವರತ ಇರಲಿ ಅಕುಟಿಲಾಂತಃಕರಣ ಭಕ್ತರ ಸಂಗವೆನಗಿರಲಿ ನಿಖಿಲಗುಣಗಣಪೂರ್ಣ ನಿನ್ನಯ ಸ್ಮರಣೆಯೊಂದಿರಲಿ ಸಾಕು ಇದಕಾನೇನು ಮಾಡಲಿ ವಾಕುಮನಸಿಗೆ ಸಿ- ಲುಕದವ ನಿನ್ನ ಕಾಕುಮನುಜ ನಾನೆಂತು ತಿಳಿಯಲಿ ನೀ ಕರುಣಿಸದಲಿರೆ ಇನ್ನು ಅವಿ- ವೇಕಿ ನಾನಿನ್ನೆಂತುಗೈಯಲಿ 2 ನರಜನುಮದಿ ಬಂದು ಬರಿದೆ ಆಯುವ ಕಳೆದೆ ಹರಿಯೆ ನಿನ್ನಯ ಕರುಣ ದೊರೆಯಲಿಲ್ಲಾ ಕರೆಕರೆಪಡುತಲಿ ಜರೆಯೊಳಾಡುತಿಹೆ ದುರಿತ ಹರೇ ದಾರಿ ಎನಗೇನಿಹುದೋ ಇನ್ನು ಮುಂದೆ ಕ್ಲೇಶ ಕೊಡದಲೆ ಪಾರುಗಾಣಿಸೋ ತಂದೆ ಶರಣಜನರಿಗನವರತ ಸುರಧೇನು ನೀನೆಂದೇ ಅರಿಯದವ ನಾ ನೀ ಪೊರೆಯಲರಿದೇ ಕರುಣಾಶರಧಿಯೇ ನಿನ್ನ ಕೃಪೆಯೊಂದಿರಲು ಉರುತರ ಸಾಧನವು ಅದು ತರವರಿತು ಧೃಢಭಕ್ತಿ ಪಾಲಿಸೊ ಉರಗಗಿರಿ ಶ್ರೀ ವೇಂಕಟೇಶನೆ3
--------------
ಉರಗಾದ್ರಿವಾಸವಿಠಲದಾಸರು
ಏನೂ ಸಾರ್ಥಕವಿಲ್ಲವೋ ಪ ಏನೂ ಸಾರ್ಥಕವಿಲ್ಲ ಜ್ಞಾನಮಾರ್ಗಗಳಿಲ್ಲ ಮಾನಸ ಸ್ಥಿರವಿಲ್ಲ ಶ್ರೀನಾಥನಿದಬಲ್ಲ ಅ.ಪ ಎರಡುಕಂಬದ ಮೇಲೆ ಇರುವ ಪಂಜರವಿದು ಬರಿಯಡಂಭದ ಜಗವು ಸ್ಥಿರವೆಂಬ ತನುವಿನೊಳು 1 ತೈಲವಿಲ್ಲದ ದೀಪ ಮಲಿನವಾಗುವ ತೆರದಿ ಸುಲಭದೊಳಿಹ ಪ್ರಾಣ ತೊಲಗಿದ ಬಳಿಕಿನ್ನು 2 ಸಂತೆಗೈದಿದ ಜನದಂತೆ ಪಂಚೇಂದ್ರಿಯವ ನಾಂತ ದೇಹವು ವ್ಯರ್ಥ ಅಂತರಾತ್ಮನು ಹೋಗೆ 3 ರಸನೆ ತೊದಲುವ ಮೊದಲು ಅಸುವು ಪೋಗುವ ಮೊದಲು ಅಸುರಾರಿ ಎಂಬ ಮಧುವ ರಸನೆಯೊಳಿಡೋ ಮನುಜ4 ದಿನದಿನ ಹರಿಕೃಷ್ಣ ವನಮಾಲಿಯ ನುತಿಸೋ ತನುವ ಪ್ರಾಣವ ಬಿಡುವ ದಿನವನರಿಯೆ ನೀನು 5 ದೇವದೇವನೆ ನಿನ್ನ ಸೇವಕನೆಂದೆನ್ನ ಭಾವಿಸೋ ಮದನಾಂಗ ಮಾವಿನಕೆರೆರಂಗ6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನೆ ನಾರಿ ಕನಸುತೋರಿ ಹಾರಿತಲ್ಲೆ ಪ ಫೋರ ಪಾತಕವ ಕೊಂದೂ ಒಳ್ಳೆ ತಾರೆಬೆಳಕಿನ ಚಂದಾ ಅ.ಪ ಇಂದಿರಾಪತಿ ತಾ ಮಂದಹಾಸದೊಳು ಕುಂದರದನೆಯ ಕೂಡಿ ನನ್ನ ನಿಂದೆ ತಂದ ಸರಿಮಾಡಿ ಕಳ್ಳ ಬಂದು ಪೋದ ಕರತಂದು ತೋರೆಮತ್ತೆ ನಿಂದು ಭಜನೆಯ ಮಾಡಿ 1 ಬಾರೊ ಧೀರ ಅಂದ್ರೆ ನೀರ ಆಟದೊಳು ತೋರಿ ಮಾಡಿದನು ಮೋಸಾ ಭವ ದೂರನಾದ ವೆಂಕಟೇಶಾ ರಂಗ ದಾರಿಕಾಣೆ ಕಂಡು ತೋರೋ ನಿನ್ನ ಪಾದ ಗುರುವು ತುಲಸಿ ರಾಮದಾಸ 2
--------------
ಚನ್ನಪಟ್ಟಣದ ಅಹೋಬಲದಾಸರು
ಏನೆಂದರಿಬೇಕೀ ಆಟಾ ಘನಗುರು ಮಾಡಿದ ಮಾಟ ಅನುಮಾನಳಿಸಿದ ನೋಟ ಅನುಭವಕಾಯಿತು ನೀಟ ಧ್ರುವ ರಂಜಕ ಬಲುಕೊಂಡಿತು ನೋಡಿ ಅಂಜಿಕಿ ಭವಭಯ ಈಡ್ಯಾಡಿ ಪ್ರಾಂಜಲ ಸದ್ಗುರು ದಯಮಾಡಿ ಅಂಜನ ಹಚ್ಚಿದ ದುವುಡಿ 1 ಕಾಣದ ಕಂಡೆವು ಕಣ್ಣಿಲಿ ಖೂನಕ ಬಾರದು ಘನಲೀಲೆ ಜಾಣರು ಬಲ್ಲರು ಮನದಲಿ ನೆನದರು ತಾಂ ವರಿಕಿಲೆ 2 ಆಶ್ವರ್ಯವು ತಾನಾಗ್ಯದೆ ನಿಶ್ಚಯದೋರುತಲ್ಯದೆ ಪಶ್ಚಿಮಕೆ ಭಾಸುತದೆ ಸ್ವಚ್ಛವು ನೋಡಿದರದೆ 3 ರಚ್ಚಿಗೆ ತಾಂ ಬಾಹುದೆಲ್ಲ ಮುಚ್ಚಿಟ್ಟಡೆÉ ಬಾಳು ಸವಿಬೆಲ್ಲ ಅಚ್ಚಳಿಯದ ಭಕ್ತನೆ ಬಲ್ಲ ನೆಚ್ಚಿದ ಮಹಿಪತಿ ಸೊಲ್ಲ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದರು ಸರಿ ಬೀಳ್ವದು ನಮ್ಮ ಶ್ರೀನಿವಾಸನ ಮಹಿಮಾನುಸಂಧಾನದಿಂ ಪ. ಶಯ್ಯದಿಂದೇಳುತ ಶಾರೀರದಾಲಸ್ಯದಿಂ- ದಯ್ಯ ಅಪ್ಪ ಅಮ್ಮನೆಂಬುವರಾ- ಜೀಯನ ಗುಣನಾಮಕನುವಾಗಿ ತಿಳಿದರೆ ಕಯ್ಯ ಪಿಡಿದು ಕಾವ ಕರುಣಾಳು ರಾಜಗೆ 1 ಅಪತತ್ವದಲಿ ನಿಂತು ಅಪ್ಯಾಯನ ಮಾಳ್ಪ ತಪ್ಪನೆಂಬುದಕಿದು ಕಾರಣವು ಮುಪ್ಪುರಹರನಯ್ಯನು ಪೆತ್ತ ದೊರೆಯನು ಒಪ್ಪಲಾರದೆ ಅಮ್ಮ ಅಯ್ಯನೆಂಬುವ ನಾಮ 2 ಕುರಿಯೊ ಮರಿಯೊ ಎಂಬ ದಾತಗೆ ಭಿನ್ನ ಹ- ವರವುದು ಹರಿಗೆ ಮೂಜನವೆಲ್ಲವು ಕುರಿಯಂತೆ ವಶ್ಯವಾಗಿರುವುದು ಭವಬಂಧ ಹರಿದ ಜ್ಞಾನದ ಮುಳ್ಳಮುರಿಯೆಂಬ ಭಾವದಿಂ 3 ಮೂರಾರು ಪುರಾಣ ಮೂಲ ರಾಮಾಯಣ ಭಾರತ ಪಂಚರಾತ್ರಾದಿಗಳು ಸೇರಿ ಪೇಳುವುದೆಲ್ಲ ಸಿರಿಯರಸನ ನಾಮ ವಾರಿಧಿಯೊಳಗಿನ ತೆರೆಗಳಂದದಿ ತೋರ್ಪ 4 ನಾದ ಬಿಂದು ವರ್ಣದಾತನುದಾತ್ತ ಸ್ವ ರಾದಿ ಸಕಲ ಶಬ್ದ ವಾಚ್ಯ- ನಾದ ಶ್ರೀದೇವಿಯರಸ ವೆಂಕಟರಾಜನರಿವಂಥ ಹಾದಿಯ ತಿಳಿದರಗಾಧ ಮಹಿಮಾ ನಿನ್ನ 5
--------------
ತುಪಾಕಿ ವೆಂಕಟರಮಣಾಚಾರ್ಯ
ಏನೆಂದಳೇನೆಂದಳೋ ಪ ನಿನ್ನೊಳು ಸೀತೆ ಹನುಮಯ್ಯ ಅ ಜನಕನರಮನೆಯಲ್ಲಿ ಜನಿಸಿ ಸುಖದಲ್ಲಿರಲುಧನು ಮುರಿದು ಕೈಹಿಡಿದು ತನ್ನಘನ ಪದವಿಯನು ಬಿಟ್ಟು ವನವ ಸೇರಿದನೆಂದುವನಿತೆ ತಪಿಸುತೆ ಮನದಿ ನೊಂದು 1 ಕುರುಹಿನುಂಗುರವನು ತರಳಾಕ್ಷಿಗಿತ್ತಾಗತಿರುಳಿಗಿಂತಧಿಕವೇ ಕರಟವೆಂದುಬೆರಳಿಂದ ಚಿಮ್ಮಿದಳೆ ಅಶೋಕವನದಾಚೆಗೆನಿರುತ ಸಂತಾಪದಲಿ ಮನದಿ ನೊಂದು 2 ಸೇತುವೆಯ ಕಟ್ಟಿ ಸಿಂಧುಗೆ ವಿಭೀಷಣಾಗ್ರಜಾತ ಲಂಕಾಧಿಪನ ವಧಿಸಿಸೀತೆಯನು ಸೆರೆಯಿಂದ ಬಿಡಿಸಿದ್ದೆ ಆದರೆನಾಥಾದಿಕೇಶವಗೆ ಬಲು ಬಿರುದು ಎಂದು3
--------------
ಕನಕದಾಸ
ಏನೆಂದೀದೇಹ್ಯವನು ನಂಬಿದಿ ಮನವೆ ನೀ ಏನೆಂದೀ ದೇಹ್ಯವನು ನಂಬಿದಿ ಪ ಏನೆಂದು ನಂಬಿದ್ಯೋ ಆನಂದದ್ಹಿಗ್ಗುತ ಕ್ಷೀಣವಾಗೊಂದುದಿನ ಮಣ್ಣು ಗೂಡುವುದರಿತು ಅ.ಪ ತಳಕ್ಹಾಕಿ ಜೋಡಿಸಿ ಹಲವು ನರಗಳಿಂದ ಬಲವಾಗಿಬಿಗಿದ ಈ ಎಲುವಿನ ಹಂದರ 1 ರೋಗಕ್ಕೆ ಇದು ತವರಾಗಿ ಒಂದಿನ ನಾಶ ವಾಗಿ ತಾ ಕೈಬಿಟ್ಟು ಪೋಗುವ ಮಂಟಪ 2 ಹಲವು ವಿಧದಿ ಮಜ್ಜ ಮಲ ಮೂತ್ರ ಬಲುಹೇಯ ಕುಂಡಲ 3 ಬಿಲದ್ವಾರ ಒಂಬತ್ತು ತುಳುಕಿತುಂಬ್ಹರಿಯುತ ತೊಳೆಯದಿರಲು ನಿಮಿಷ ಹೊಲಸಿಕ್ಕಿ ನಾರುವುದು 4 ತಂದೆ ಶ್ರೀರಾಮನಂ ಹೊಂದಿ ಭಜಿಸದೆ ಗಾಢ ಅಂಧಕಾರದಿ ಬಿದ್ದು ನಂದಿಪೋಗುವ ತನು 5
--------------
ರಾಮದಾಸರು
ಏನೆಂದು ಕರೆದರೆ ಬರುವಿ ನಿನ್ನ ಧ್ಯಾನಿಸಿ ಕರೆದರೆ ಬಾರದೆ ಇರುವಿ ಪ ದೀನದಯಾಳು ಶ್ರೀ ಅನಂತ ಮಹಿಮೆಂದು ಗಾನದಿಂ ಪಾಡಲು ಕೇಳದೆ ಇರುವಿಅ.ಪ ಸೊಪ್ಪಮೆದ್ದವನೆಂದೆನಲೆ ನಿನ್ನ ತಿಪ್ಪೆತಿರುಕನೆಂದು ಗೌಪ್ಯದಿಂ ಕರಿಲೇ ಕಪ್ಪುಮೈಯವನೆನ್ನಲೊಪ್ಪಿಕೊಂಡು ಬಂದು ಅಪ್ಪಿಕೊಂಡ್ವರವೀವ್ಯೋ ಮುಪ್ಪುರಾಂತಕನೆ 1 ಏಸುಕಾಲದ ಮುದುಕನೆನಲೇ ನಿನ್ನ ಆಸೆಕಾರನೆಂದು ಆಶಿಸಿ ಕರಿಲೇ ಹಾಸಿಕೆ ಕಾಣದೆ ಶೇಷನಮೇಲೇರಿ ವಾಸಿಸುವಿಯೆನಲು ಪೋಷಿಸುವೆಯೋ ಬಂದು 2 ಬಲುಬಲು ಕಪಟಿಯೆಂದೆನಲೇ ನೀ ಕಳವಿನೋಳ್ ಪ್ರವೀಣನೆಂದು ಕೂಗಲೇ ಕುಲಗೆಟ್ಟು ಭಕ್ತರ ಕಲೆಸಿ ಗುಪ್ತದಿಂದ ಕುಲದಿ ಬಿದ್ದವನೆನಲು ಒಲಿದು ಕಾಯುವೆಯೋ 3 ಆಲಯ ಕಾಣದೆ ಹೋಗಿ ನೀನು ಪಾಲಸಾಗರವಾಸನೆಂದು ಕರಿಲೇ ಬಾಲೆಯರುಡವ ದುಕೂಲ ಚೋರನೆಂದು ಮೇಲಾಕೂಗಲು ಪಾಲಿಸುವೆಯೋ ಒದಗಿ 4 ಅರಣ್ಯವಾಸಿಯೆಂದೆನಲೇ ನೀನು ನಾರಿಯಳ ಕಳಕೊಂಡನೆಂದು ಸಾರಲ್ಯೋ ಕೋರಿದವರ ಮನಸಾರ ವರನ ನೀಡ್ವ ಧೀರ ಶ್ರೀರಾಮನೆಂದ್ಹಾರೈಸಿ ಕರೆಯುವೆ 5
--------------
ರಾಮದಾಸರು
ಏನೆಂದು ಕೊಂಡಾಡಲಿ ಮಾರುತಿರಾಯ ಪಹುಟ್ಟಿದಾಕ್ಷಣ ಕೆಂಪು ಕಿತ್ತಳೆ ಹಣ್ಣೆಂದುಸೂರ್ಯಮಂಡಲಿಕೆ ನೀ ಹಾರಿ 'ಡಿದ 'ೀರಾ 1ಶರಧಿಯ ಜಿಗಿದು ಸೀತೆಗೆ ಮುದ್ರಿಕೆ ಕೊಟ್ಟುಲಂಕಾ ಪಟ್ಟಣ ಸುಟ್ಟು ಜೀವೋತ್ತಮನು ನೀನು 2ಕಪಿವೇಷದಿಂದ ಮೆರೆದ ಗದೆಪಿಡಿದ ಸನ್ಯಾಸಿಭೂಪತಿ'ಠ್ಠಲನ ದಾಸಾಗ್ರೇಸರನು ನೀನು 3ಗಲಗಲಿಯ ಪ್ರಾಣದೇವರು
--------------
ಭೂಪತಿ ವಿಠಲರು
ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ. ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ 1 ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ 2 ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ 3 ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು 4 ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | 5 ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ 6 ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ 7 ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ 8 ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ 9 ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ 10 ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ 11
--------------
ಗುರುಗೋವಿಂದವಿಠಲರು
ಏನೆಂದು ನುಡಿವೆ ನಿನ್ನವರಂತೆ ಕೇಡು ಬುದ್ಧಿ ಎನ್ನೊಳಗಿಲ್ಲ - ಗುಣಹೀನರಲ್ಲದ ಈ ನರರ ಪಾಲಿಪ ಬುದ್ಧಿ ನಿನ್ನೊಳಗಿಲ್ಲ ಪ ತರಳ ಪ್ರಹ್ಲಾದನಂದದಿ ನಿನ್ನ ರೂಪನು ಕೆಡಿಸಲಿಲ್ಲನರನಂತೆ ಬಂಡಿಬೋವನ ಮಾಡಿ ನಿನ್ನ ದುಡಿಸಲಿಲ್ಲಪರಾಶರನಂತೆ ನದಿಯೊಳಿದ್ದ ಹೆಣ್ಣ ಕೂಡಲಿಲ್ಲಗರುಡನಂದದಿ ನಿನ್ನ ಪೊತ್ತು ತಿರುಗಲಿಲ್ಲ 1 ಅನುದಿನ ಚರಿಸಲಿಲ್ಲಬಿನಗು ಬೇಡತಿಯಂತೆ ಸವಿದುಂಡ ಹಣ್ಣ ತಿನಿಸಲಿಲ್ಲಇನಕುಲ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲಘನ ಪಾತಕದಜಮಿಳನಂತೆ ನಾರಗ ಎನ್ನಲಿಲ್ಲ2 ಕದನದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲವಿದುರನ ತೆರನಂತೆ ಸದನವ ಮುರಿದು ನಿನ್ನ ಬೆರೆಯಲಿಲ್ಲಮದಗಜದಂತೆ ಮಕರಿಗೆ ಸಿಲ್ಕಿ ಒರಲಲಿಲ್ಲಗದರಿ ಶಿಶುಪಾಲನಂದದಿ ನಿನ್ನನುಪೇಕ್ಷಿಸಿ ಜರೆಯಲಿಲ್ಲ3 ಬುವಿಯೊಳು ಬಲಿಯಂತೆ ದಾನವ ನೀಡಲಿಲ್ಲಭವನಂತೆ ಶ್ಮಶಾನದಿ ಮನೆಮಾಡಿ ಸ್ಮರಿಸಲಿಲ್ಲತವ ಪುಂಡರೀಕನಂತೆ ಹಲಗೆಯಿಟ್ಟಿಗೆ ಮೇಲೆ ನಿಲಿಸಲಿಲ್ಲಭುವನದೊಡೆಯ ನೆಲೆಯಾದಿಕೇಶವನ ಮರೆಯಲಿಲ್ಲ4
--------------
ಕನಕದಾಸ
ಏನೆಂದು ಪೇಳಲಿ ಹರಿಶರಣರ ನಿಜ ಆನಂದ ಸೌಭಾಗ್ಯದಲಂಕಾರ ಪ ಆನಂದ ಪರಮ ಆನಂದ ಹರಿಧ್ಯಾ ನಾನಂದ ಸಂಪದ ಶೃಂಗಾರ ಅ.ಪ ಮಾಧವನ ನಾಮಮಕುಟಿಟ್ಟಹ್ಯರು ಮಧು ಸೂದನನ ಭಕ್ತಿ ಕವಚ ತೊಟ್ಟಿಹ್ಯರು ಯಾದವನ ಜಪಮಾಲ್ಯ್ಹಾಕಿಹ್ಯರು ಯ ಶೋದ ಬಾಲನ ದಯ ಪಡೆದಿಹ್ಯರು 1 ಶ್ರೀಶನ ಧ್ಯಾಸಶಸ್ತ್ರ ಧರಿಸಿಹ್ಯರು ದೋಷ ರಾಶಿಪರ್ವತ ತರಿದೊಟ್ಟಿಹ್ಯರು ಪಾಶ ಜೈಸಿ ನಿರ್ಭೀತಾಗಿಹ್ಯರು 2 ಸರಕು ತುಂಬಿಹ್ಯರು ನರ ಹರಿ ಪ್ರೇಮ ನೌಕೆ ಏರಿಹ್ಯರು ವರದ ಶ್ರೀರಾಮಮಂತ್ರ ಪಠಿಸುವರು ಭವ ಶರಧಿ ಸುಲಭದಿಂದ ದಾಂಟುವರು 3
--------------
ರಾಮದಾಸರು