ಒಟ್ಟು 7653 ಕಡೆಗಳಲ್ಲಿ , 131 ದಾಸರು , 4746 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯಾನಮಿಪೆ ನಿಮ್ಮುತ್ತಮ ಪದಕೆ ಶ್ರೀ ಸತ್ಯಾಬೋಧ ಗುರುವೆ ಪ. ಚಿತ್ತದಲ್ಲಿ ಶ್ರೀ ವತ್ಸಾಂಕಿತನ ಪದ ನಿತ್ಯಾ ಸ್ಮರಿಪ ಮುನಿಯೆ ಅ.ಪ. ಚಿದಾತ್ಮವಾದ ನಿಮ್ಮುದಾರ ಕೀರ್ತಿಗೆ ಸದಾ ಉದಯವಹುದು ಇದನರಿಯದ ಅಧಮರಿಂದಲಿ ಒದಗುವುದೆ ಕುಂದು ವಿಧವಿಧಾನ್ನವ ಬುಧರಿಗಿತ್ತಂಥ ನಿಧಾನಿ ನೀನೆಂದು ಇದೆ ವಾರ್ತೆ ಕೇಳೆದೂರಿಗೆ ಬಂ ದದಾನರಿತೆನಿಂದು 1 ವೃಂದಾವನಸ್ಥನೆ ಮಂದರಿಗರಿದೆ ನಿ ಮ್ಮಂದಿನ ಕೀರುತಿಯು ಒಂದನರಿಯದ ಮಂದಮತಿಯು ನಾ ಬಂದೆ ನಿಮ್ಮ ಬಳಿಯು ಕುಂದುಗಳನೆಣಿಸದೆ ಸಂದೇಹ ಮಾಡದೆ ಇಂದು ಪೊರೆದು ಆಯು ಮುಂದೆ ಕೊಟ್ಟು ಗೋಪಿಕಂದನ ಪಾದ ದ್ವಂದ ತೋರಿ ಕಾಯೋ 2 ಕೃಪಾಳು ನಿಮ್ಮಂಥ ತಪಸಿಗಳು ಉಂಟೆ ತಪಾನ ನಿಶಿ ತೋರ್ದೆ ಪತಿ ರಾಮನ ಆಪಾದಮಸ್ತಕ ರೂಪ ನೋಡಿ ದಣಿದೆ ಭೂಪತಿಯಿಂದಲಿ ಈ ಪರಿಭವನವ ನೀ ಪ್ರೀತಿಯಿಂ ಪಡೆದೆ ಗೋಪಾಲಕೃಷ್ಣವಿಠ್ಠಲನ ಧ್ಯಾನಿಸುತ ಸ್ವ ರೂಪಾನಂದ ಪಡೆದೆ 3
--------------
ಅಂಬಾಬಾಯಿ
ನಿಂದಾಸ್ತುತಿಗಳು ಎನ್ನ ಕೈಬಿಡುವೆಯೇನೋ ಪ ನಿನ್ನ ನಂಬಿದೆನಯ್ಯ ಭಕ್ತವತ್ಸಲನೆಂದು ಭಾರ ನಿನಗಿರೆ ಅ.ಪ ತಾಪಸಿಯಂತೆ ನಿನ್ನ ವಕ್ಷವನೊದ್ದು ತಾಪವನು ತೋರ್ಪಿದೆನೇನೋ ಗೋಪಿಯಂದದೆ ನಿನ್ನ ಒರಳಿಗೆ ಬಿಗಿದೆನೇ ಭೂಪ ಶಿಶುಪಾಲನಂದದೆ ಬೈದೆನೇ [ಚಾಪವಿಟ್ಟು] ಭೀಷ್ಮನಂದದೆ ಕಾದಿಪೆನೇನೋ ಶ್ರೀಪತಿ ನೀನೆನ್ನ ದೂರ ಮಾಡುವೆಯಲ್ಲ 1 ಜಾರಚೋರನು ನೀನೆಂದು ಯಶೋದಗೆ ದೂರು ಹೇಳದೆನೇ ಕೌರವನಂತೆ ಕಂಬಕೆ ಕಟ್ಟಿರೆಂದೆನೆ ಸಾರಿದೆನೇನೋ ಸತ್ರಾಜಿತನಂತೆ ಚಾರುರತ್ನವ ಕದ್ದ ಅಪರಾಧಿ ನೀನೆಂದು ಆ ರುಕ್ಮನಂತೆ ನಾರಿಚೋರನೆಂದೆನೆ 2 ಪುರುಹೂತನಂತೆ ನಾನು ಮಳೆಯಕರೆದು ಗಿರಿಯನ್ನು ಹೊರಿಸಿದೆನೇ ಧರಣಿಯ ಬಲಿ[ಯಿಂದ ಬೇಡುತಲಿರುವಾಗ ವರಮುನಿಯಂತೆ ಕಿಂಡಿಯ ಮುಚ್ಚಿದೆನೆ] ನರನಂತೆ ರಥವ ನಡಸೆಂದು ಹೇಳಿದೆನೇನೋ ಉರಗನಂತೆ ಕಟ್ಟಿದೆನೇ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ ಕಂದರ್ಪಜನಕ ದೇವ ಪ. ನಂದಕಂದನೆ ನಿನ್ನ ಮಂದಮತಿ ನಾನೆಂತು ವಂದಿಸಿ ಸ್ತುತಿಪೆನಯ್ಯ | ಜೀಯ ಅ.ಪ. ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ ಉತ್ತಮ ಪಥವ ತೋರೋ ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ ಭೃತ್ಯಸಂಗದಲಾಡಿಸೊ | ಸತತ 1 ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ ವಿಶ್ವೇಶ ದೇಹದೊಳಗೆ ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ ವಿಶ್ವಮಯ ಜೀವಕೀವೆ | ಕಾವೆ 2 ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ ಮತ್ತೆಲ್ಲ ಕಾರ್ಯ ಮಾಳ್ಪೆ ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ ವ್ಯಾಪ್ತನಾಗಿರುವೆ ಜಗದಿ | ಮುದದಿ 3 ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ ಇದ್ದೆನೆಗೆ ರೂಪ ತೋರೋ ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು ಒದ್ದು ತಾಪತ್ರಯವನು | ನೀನು 4 ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ ಮಾನಸದಲೆನಗೆ ನೀಡೋ ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ ಸಾನುರಾಗದಲಿ ಸಲಹೋ ಎಲವೋ 5
--------------
ಅಂಬಾಬಾಯಿ
ನಿದ್ರೆಮಾಡಿದ ರಂಗ ನಿದ್ರೆಮಾಡಿದ ಭದ್ರಹಾಸಿಗೆ ಮೇಲೆ ಸಮುದ್ರರಾಜನ ಮಗಳ ಸಹಿತ ಪ. ವೇದಕದ್ದ ಅಸುರನಿಗಾಗಿ ಆ ಮತ್ಸ್ಯರೂಪವ ಧರಿಸಿ ಸಾಧಿಸಿ ಅಸುರನ ಕೊಂದ ವಾರಿಜಾಕ್ಷ ಬಳಲಿ ಬಂದು 1 ತರಳ ಹಿರಣ್ಯಕಶ್ಯಪನ ಕರುಳ ಬಗೆದು ಕೊರಳೊಳಿಟ್ಟು ನರಮೃಗ ರೂಪವ ತಾಳಿ ನರಸಿಂಹ ಬಳಲಿ ಬಂದು 2 ಬಲಿಯ ದಾನವನ್ನೆ ಬೇಡಿ ನೆಲನ ಮೂರಡಿ ಮಾಡಿ ಒಲಿದು ಬಾಗಿಲನ್ನೆ ಕಾಯ್ದ ವಾಮನನಾದ ಬಳಲಿ ಬಂದು 3 ತÀಂದೆಯ ಮಾತನ್ನೆ ಕೇಳಿ ತಾಯಿ ಶಿರವನ್ನೆ ಅಳಿದು ಏಳುಮೂರು ಬಾರಿ ನೀನು ಭೂಮಿಯ ಪ್ರದಕ್ಷಣೆಮಾಡಿ 4 ಸೀತೆಗಾಗಿ ಪಡೆಯ ಸವರಿ ಸೇತುಬಂಧನವ ಮಾಡಿ ದೂತರಾವಣನ್ನ ಕೊಂದು ಸೀತಾರಾಮ ಬಳಲಿ ಬಂದು 5 ಗೋಕುಲದಲ್ಲಿ ಹುಟ್ಟಿ ಗೋವುಗಳನ್ನೆಲ್ಲ ಕಾಯ್ದು ಗೋಪಸ್ತ್ರೀಯರ ಸೀರೆ ಸೆಳೆದು ಗೋಪಾಲಕೃಷ್ಣ ಬಳಲಿ ಬಂದು 6 ಬತ್ತಲೆ ಕುದುರೆಯನೇರಿ ಮತ್ತೆ ತೇಜಿಯನ್ನೆ ನಡೆಸಿ ಹತ್ತಾವತಾರವ ತಾಳಿ ಮತ್ತೆ ಕಲ್ಕಿರೂಪನಾÀಗಿ 7 ಧರೆಯೊಳತ್ಯಧಿಕವಾದ ಶ್ರೀರಂಗಪಟ್ಟಣದಿ ನೆಲೆಸಿ ಕರುಣದಿಂದ ಭಕ್ತರನ್ನು ಸಲಹಬೇಕು ಹಯವದನನೆ 8
--------------
ವಾದಿರಾಜ
ನಿಧಾನವೆ ಕೇಳಿ ಸಜ್ಜನವೇ ಇಂದು ಜಿನ ಶಕ್ತಿಯಾನಂದದಾರಾಧನ ಪ ಒಂದು ಮನದಲಿ ವದಗಿನ್ನು ಒಂದು ಮನದಲಿ ವದಗಿನ್ನು ನೀವೆಲ್ಲಾ ವಂದದಾರುತಿಯಾ ಬೆಳಗುವಾ 1 ಒಂದು ಮಾರ್ಗವಿಡಿದು ಬಂದು ಗುರುಮುಖದಿಂದ ಒಂದನೆ ಭಕ್ತಿ ತಿಳಿದಿನ್ನು ಒಂದನೆ ಭಕ್ತಿ ತಿಳಿದು ಪರೀಕ್ಷಿತಿಯಂತೆ ವಂದನಾರುತಿಯಾ ಬೆಳಗುವಾ 2 ಎರಡಕ ಮೀರದಾ ಎರಡಕ್ಷರದಿಂದ ಎರಡನೆ ಭಕ್ತಿ ತಿಳಿದಿನ್ನು ಎರಡನೇ ಭಕ್ತಿ ತಿಳಿದು ನಾರದರಂತೆ ಎರಡನಾರತಿಯಾ ಬೆಳಗೀರೇ 3 ಮೂರು ಬಲಿಯನೆದಾಟಿ ಮೂರು ರತ್ನವಗಂಡು ಮೂರನೇ ಭಕ್ತಿ ತಿಳಿದಿನ್ನು ಮೂರನೇ ಭಕ್ತಿ ತಿಳಿದು ಪ್ರಲ್ಲಾದನಂತೆ ಮೂರನಾರತಿಯಾ ಬೆಳಗೀರೇ 4 ನಾಕುಸ್ಥಾನವ ಮುಟ್ಟಿ ನಾಕರಂತವ ನೋಡಿ ನಾಕನೇ ಭಕ್ತಿ ತಿಳಿದಿನ್ನು ನಾಕನೇ ಭಕ್ತಿ ತಿಳಿದು ಜನಕನಂತೆ ನಾಕನಾರತಿಯಾ ಬೆಳಗೀರೇ 5 ಐದುಕ್ಲೇಶಗಳ್ಹಿಂಗಿ ಐದರೊಂದನೆ ಮಾಡಿ ಐದನೇ ಭಕ್ತಿ ತಿಳಿದಿನ್ನು ಐದನೇ ಭಕ್ತಿ ತಿಳಿದು ಗರುಡನಂತೆ ಐದನಾರತೀಯ ಬೆಳಗೀರೆ 6 ಆರನೇ ಭಕ್ತಿ ಆರು ಸಂಗವ ಮೀರಿ ಆರು ಪರಿಯಾಗದೇ ಆರನೇ ಭಕ್ತಿ ತಿಳಿದಿನ್ನು ಆರನೇ ಭಕ್ತಿ ತಿಳಿದು ಪುಂಡಲೀಕನಂತೆ ಆರನಾರತಿಯಾ ಬೆಳಗೀರೆ 7 ಏಳು ವ್ಯಸನವ ಬಿಟ್ಟು ಏಳು ಧಾತುವ ಕಂಡು ಏಳನೇ ಭಕ್ತಿ ತಿಳಿದಿನ್ನು ಏಳನೇ ಭಕ್ತಿ ತಿಳಿದು ಹನುಮಂತನಂತೆ ಏಳನಾರತಿಯಾ ಬೆಳಗೀರೆ 8 ಎಂಟು ಮದಗಳ ಜರಿದು ಎಂಟು ಸಿದ್ಧಿಯ ತೊರೆದು ಎಂಟನೆ ಭಕ್ತಿ ತಿಳಿದಿನ್ನು ಎಂಟನೇ ಭಕ್ತಿ ತಿಳಿದು ಅರ್ಜುನ ನಂತೆ ಎಂಟನೇ ಭಕ್ತಿ ಯಾರತಿಯಾ ಬೆಳಗೀರೆ 9 ಒಂಭತ್ತರನೇ ಬಲಿದು ಒಂಭತ್ತರ ನೆಗೆಲಿದು ಒಂಭತ್ತರನೇ ಭಕ್ತಿ ತಿಳಿದಿನ್ನು ಒಂಭತ್ತರನೇ ಭಕ್ತಿ ತಿಳಿದು ಬಲಿಯಂದದಿ ಒಂಭತ್ತನಾರತಿಯಾ ಬೆಳಗೀರೆ 10 ಗುರು ಮಹಿಪತಿ ಸುತಬ ಹೊರವ ದೇವಿಗೆ ಧರಿಯೊಳೀಪರಿಯಲಿ ನೀವು ಧರಿಯೊಳೀಪರಿ ನೀವು ಮಾಡಲಿಕೀಗ ಪರಮ ಆನಂದಾದೋರುವದು 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಧಿಯು ದೊರಕಿತು ಎನಗೆ ನಿಧಿಯು ದೊರಕಿತು. ವಿಧಿ ಭವಾದಿ ದೇವರೆಲ್ಲ ಒದಗಿ ಮಾನದಿಂದ ಕಾಯ್ವ ಪ. ನಿತ್ಯ ಮಂಗಳೆಯನು ತನ್ನುರ ಸ್ಥಳದಲಿ ಧರಿಸಿರುವದು ಎತ್ತ ನೋಡಲಲ್ಲಿ ನಲಿವ ಭೃತ್ಯಪೂರ್ಣಾರ್ಥ ಕೊಡುವ 1 ಕಷ್ಟ ಕಲುಷವೆಂಬ ದೊಡ್ಡ ಬೆಟ್ಟವೆಲ್ಲ ಭೇದಿಸುವುದು ಇಷ್ಟ ಲಾಭ ಪುಷ್ಪ ಜ್ಞಾನ ದೃಷ್ಟಿಸಹಿತ ಕೊಟ್ಟು ಕಾವ 2 ಹಲವು ಭವದ ತಾಪವನ್ನು ಕಳೆದು ಕೃಪಾರಸವ ಸೂಸಿ ಮಧ್ಯಪೊಳೆವಪೂರ್ವ 3 ಸೋತು ಸಕಲ ಜನರ ಮುಂದನಾಥನಾಗೆ ಕರುಣಿ ಜಗ- ನ್ನಾಥದಾಸರೊಲಿದು ಪರಮ ಪ್ರೀತಿಯಿಂದ ತೋರಿದಂಥ 4 ಇಹ ಪರತ್ರ ಸುಖವನೀವ ಮಹದುಪಾಸ್ಯ ಪಾದಪದ್ಮ ವಹಿಸಿದವರ ಸಕಲಭಾಗ್ಯ ನಿವಹಿ ವೆಂಕಟೇಶನೆಂಬ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಿನಗಿನಿತು ಮಮಕಾರವಿರಲೆನಗೆ ಭಯವೇನು ಚಿನುಮಯನೆ ಧನ್ಯ ನಾನು ಪಜನಕ ನೀನೆನಗಾದೆ ತನುಜ ನಾ ನಿನಗಾದೆ ಘನಮಹಿಮ ಕಾಮಧೇನು ನೀನು ಅ.ಪಜನ್ಮಕೋಟಿಗಳಲ್ಲಿ ಪುಣ್ಯಕರ್ಮಗಳನ್ನು ಮುನ್ನ ಮಾಡಿಸಿದೆ ನೀನುಮುನ್ನಿನಾ ದೇಹಗಳು ಭಿನ್ನವಾಗಲು ಕರ್ಮವಿನ್ನುಳಿವ ಬಗೆಯದೇನುಚಿನ್ಮಯನೆ ತನುಕರಣ ಭಿನ್ನವಾದರು ಸಾಕ್ಷಿ ನಿನ್ನೊಳಿಂಬಿಟ್ಟೆಯವನುಸನ್ನುತನೆ ಬಾಲಕನಿಗುಣ್ಣ ಕಲಿಸುವ ತೆರದಿ ನಿನ್ನನಿತ್ತುದೇನೆಂಬೆನು ನಾನು 1ದುಷ್ಟಸಂಗವ ಬಿಡಿಸಿ ದುರ್ಬುದ್ದಿಯನು ಕೆಡಿಸಿ ಶಿಷ್ಟರೊಳು ತಂದು ನಿಲಿಸಿಕಷ್ಟಸಾಧನಗಳನು ಮುಟ್ಟಲೀಸದೆ ಸುಲಭ ನಿಷ್ಠೆಯಲಿ ಚಿತ್ತವಿರಿಸಿಹುಟ್ಟುಹೊಂದುಗಳನ್ನು ಕೊಟ್ಟು ಮೋಹಿಸುತಿರುವ ಪುಟ್ಟ ಫಲಗಳ ತೇಲಿಸಿಮುಟ್ಟಿ ನಿನ್ನಯ ಪದವನಿಟ್ಟು ಹೃದಯಾಂಬುಜದಲಿಷ್ಟಮೋಕ್ಷವ ತೋರಿಸಿ ನಿಲಿಸಿ 2ವಿದ್ಯವಿಸ್ತರವಾದರದ್ದುವದು ಗರ್ವದಲಿ ಬುದ್ಧಿ ನಿಲ್ಲದು ನಿನ್ನಲಿಇದ್ದು ವೃದ್ಧರ ಪಥದಿ ಹೊದ್ದಿ ಶುದ್ಧತ್ವವನು ಶ್ರದ್ಧೆ ಸೇರದು ನಿನ್ನಲಿಉದ್ದುರುಟುತನದಿಂದ ಬಿದ್ದು ವಾದದ ಮಡುಹವದ್ದು ಸುಕೃತವ ಕಾಲಲಿಇದ್ದ ನಿಜಸ್ಥಿತಿುವಗೆ ಸಿದ್ಧವಾಗದುಯೆಂದು ನಿರ್ಧರಿಸಿ ನೀನೆ ದಯದಿ ಇಲ್ಲಿ 3ಅನಿಮಿತ್ತ ಬಂಧು ನೀನೆಂಬುದನು ಫಲುಗುಣನು ಮನದೊಳೆಣಿಸಿದುದಿಲ್ಲವೆಅಣುಮಾತ್ರದುಪಕಾರ ಜನರಿಂದ ನಿನಗುಂಟೆ ಮನಕೆ ದೂರ ನೀನಲ್ಲವೆವನಜಭವ ದಿಕ್ಪಾಲ ಮನುಗಳೈಶ್ವರ್ಯಗಳು ನಿನಗೆ ಗಣನೆಗೆ ಬರುವವೆಇನಿತು ಬ್ರಹ್ಮಾಂಡಗಳ ನೆನದು ನಿರ್ಮಿಸಿ ಬಳಿಕ ಕ್ಷಣದೊಳಳಿಸುವದಿಲ್ಲವೆ ನಿಜವೆ 4ನಿನ್ನ ಭಜಿಸುವ ಭಾವವಿನ್ನುಂಟೆ ಜಡಮತಿಗೆ ಅನ್ಯವಿಷಯದಿ ಮೋಹಿಸೆತನ್ನ ಮರೆದತಿದುಃಖದುನ್ನ ತದ ಸಂಸಾರ ವೆನ್ನದೆನ್ನುತ ದುಃಖಿಸೆನಿನ್ನ ನೆನಯದೆ ಬಹಳ ಜನ್ಮವೇಗದ ನದಿಯಲುನ್ನಿಸುವ ಕರ್ಮ ಹೊದಿಸೆಭಿನ್ನ ಬುದ್ಧಿಯಲೊಂದಿ ತನ್ನ ತಾನರಿಯದಿರೆ ನಿನ್ನಿಂದ ಮುಕ್ತನೆನಿಸೆ ನಿಲಿಸೆ 5ಚಲಿಸದಂದದಿ ಮನವ ನಿಲಿಸಿ ನಿನ್ನೊಳು ಬಾಹ್ಯವಳಿವ ಬಗೆುಲ್ಲವಲ್ಲನಳಿನನಾಭನೆ ನೀನು ಸುಲಭನೇ ಯೋಗಿಗಳು ಬಳಲುವರು ಕಾಣರಲ್ಲನಿಲುವೆ ಮನದಲಿ ನೀನೆ ಸಲಹೆಂದು ಭಜಿಸಿದರೆ ಗೆಲರೆ ಸಂಸೃತಿಯನೆಲ್ಲತಿಳುಹಿ ಸುಲಭದ ದಾರಿಯೊಳಗೆನ್ನ ನೀನಿರಲು ಬಳಲುವಿಕೆುಲ್ಲವಲ್ಲಾ ಲಲ್ಲಾ 6ಬಿನುಗು ಭೋಗವನುಂಡು ಜುಣುಗಿ ಮತ್ತದರಲ್ಲಿ ಮನವೆರಗಿ ಮುಳುಗುತಿಹುದುತನುವಿನಭಿಮಾನದಲಿ ನೆನಹು ತಗ್ಗದು ಮತ್ತೆ ಕನಲಿ ಮುರಿದೇಳುತಿಹುದುಅನುವರಿಯದಂಧತಮದಲಿ ತಾನು ನೆರೆಹೊಕ್ಕು ಘನದುಃಖಬಡುತಲಿಹುದುಇನಿತವಸ್ಥೆಯಲಿರುವ ಮನಕೆ ಸಿಕ್ಕಿರಲೆನ್ನ ದಿನಕರನೆ ಕೈವಿಡಿವುದು ಸೆಳೆದು 7ಧ್ಯಾನ ಧಾರಣೆುಂದ ನಿನ್ನ ಮೂರ್ತಿಯ ನಿತ್ಯ ಮಾನಸದಿ ನಿಲಿಸಬೇಕುಧ್ಯಾನಾಂಗ ನಿಯಮಗಳನಭ್ಯಾಸವಂ ಮಾಡಿ ತಾನು ತಾನಾಗಬೇಕುಏನೊಂದ ಕಂಡರೂ ನಾಮರೂಪವ ಬಿಟ್ಟು ನೀನೆಂದು ನಿಲ್ಲಬೇಕುಏನೆಂಬೆನಿವನೆಲ್ಲ ನೀನೆ ಸಾಧಿಸಿಕೊಟ್ಟು ದೀನನನು ಸಲಹಬೇಕು ಸಾಕು 8ಪರಮ ಕರುಣಾನಿಧಿಯೆ ಪರಿಪೂರ್ಣ ಪರಮೇಶ ಪರಮಸಂವಿದ್ರೂಪನೇಶರಣಜನಸುರಧೇನು ದುರಿತಭೂಧರಕುಲಿಶ ಕರಿವರನ ರಕ್ಷಿಸಿದನೇಮರೆಯೊಕ್ಕೆ ನಿನ್ನಡಿಯ ಮರವೆಯನು ಪರಿಹರಿಸು ಅರಿವಿನೊಳು ಪೊಗಿಸು ನೀನೆತಿರುಪತಿಯ ನೆಲೆವಾಸ ವರದ ವೆಂಕಟರಮಣ ಅರವಿಂದದಳನೇತ್ರನೆ ಅಜನೆ 9ಓಂ ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರ ಕಾಯ ನಮಃ
--------------
ತಿಮ್ಮಪ್ಪದಾಸರು
ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ ಪ ಹಿಂದೆ ನಿನ್ನ ಅಜ್ಞಾ ನಾ ಒಂದು ಮೀರಿದಕೆ ನೀ ಇಂದು ಭವಭವಣೆ ಬಹುಪರಿಯಿಂದಲೀ ತಂದು ನೋಯಿಸಿ ಮನಸುನಿಂದದಲೆ ಪರರಿಗೆ ಇಂದು ಮೊರೆಯನು ಹೋಗಿಸುವುದು ಥರವೇ ಹರಿಯೇ 1 ಒಂದು ತಿಳಿಯದಲೆ ನಾನು ಅಂದ ಮಾತಿಗೆ ಮನಸು ನೊಂದು ಈ ತೆರದಿ ಮಾಡುವುದು ರೀತೇ ಕಂದನಪರಾಧಗಳ ಒಂದು ನೋಡದ ಜನನಿ ಯಂದದಲಿ ನೀ ಪಾಲಿಸುವುದು ಸ್ವಾಮೀ ಪ್ರೇಮೀ 2 ಜಾತಮಗನನು ನಿಜತಾತ ಪರರಿಗೆ ತಾನು ಆತುರಾದಿಂದಲಿ ಮಾರಿದಂತೆ ದೂತರನು ಜಗದೇಕÀನಾಥ ನೀ ಪರಿಪರಿ ಫಾತಿಸಲು ಇನ್ನಾರು ಪೊರೆªರೈಯ್ಯಾ ಜೀಯಾ 3 ನಂಬಿದವರನ್ನು ನೀ ಅಂಬಿನಲಿ ಹೊಡೆವರೆ ಅರಿ ಪದುಮ ಗದಧರಪಾಣಿಯೆ ತುಂಬಿದ್ಹರಿಗೋಲಲ್ಲಿ ಇಂಬುಗೊಂಡಿರುವಾಗ ಅಂಬುಧಿಮುಣುಗಿಸುವದು ಥರವೇನೋ 4 ಯಾತಕೀಸೊ ಮಾತು ಸೋತೆ ನಾ ನಿನಗೀಗ ವಾತದೇವನ ತಾತ ಸೀತಾನಾಥಾ ನೀತ ಶ್ರೀಗುರುಜಗನ್ನಾಥ ವಿಠ್ಠಲರೇಯ ಮಾತು ಲಾಲಿಸಿ ಪಾಲಿಸುವದು ಇನ್ನಾ ಚೆನ್ನಾ 5
--------------
ಗುರುಜಗನ್ನಾಥದಾಸರು
ನಿನಗೆ ನಾ ಬ್ಯಾಡಾದನೆ ಘನಕೃಷ್ಣ ಮಾನಿನಿಯ ಕಿಂತ ಕೊನೆಯೆ ಪ ಎನ್ನ ಕಣ್ಣಿಗೆ ತೋರದೆ ಬೆನ್ನಲ್ಲಿ ಮಾನಿನಿಗೆ ನೀ ತೋರಿದ್ಯಾ ಮನ್ನಿಸುವ ನಿತ್ಯದಲಿ ಮುನ್ನ ನಿನಗೆ ನಾ ದ್ವೇಷಿಯಲ್ಲವೋ 1 ಒಳಗೆ ನೀನಿರುವಿ ಎಂದೂ ತಿಳಿದು ಬಲು ತೊಳಲಿ ಶರಣು ಬಂದರೆ ಪೊಳೆಯದಲೆ ಮನಸಿನೊಳಗೆ ಕೊಳಲು ಕರೆ ಬಾಲೇಗೆ ನೀ ತೋರಿದ್ಯಾ 2 ಸುಳ್ಳು ಇದು ಎಂದ್ಹೇಳಲು ಸಲ್ಲದೆಲೊ ಕಳ್ಳ ನೀನೆಂದು ಬಂದೆ ಪುಲ್ಲನಾಭನೆ ತೋರೆಲೊ ಮಲ್ಲನೆ ಗಲ್ಲ ಪಿಡಿದು ಮುದ್ದಿಪೆ 3 ನೀರದಸಮ ಕಾಂತಿಯ ನಾರಿಮಣಿ ಬೀರಿದಳೊ ಶ್ರೀಕೃಷ್ಣನೆ ಕರುಣಸಾಗರನೆಂಬೊದು ಮರೆತು ನೀ ದೂರ್ಹೋಗಿ ನಿಲ್ವರೇನೊ 4 ಮೂರು ವಯಸೆಂದ್ಹೇಳರೊ ಚಾರುತರಾಭರಣ ಇಟ್ಟಿಹನೆಂಬುರೊ ಈ ರೀತಿ ಅಬಲೆಯರು ನಿರುತದಲಿ ಧರೆಯೊಳಗೆ ಪೇಳ್ವುದರಿಯಾ5 ಎಂದಿಗಾದರು ನಿನ್ನನು ಪೊಂದದೆಲೆ ಇಂದಿರಾಧವ ಬಿಡುವನೆ ತಂದೆ ಶ್ರೀ ಮಧ್ವರಾಯ ಛಂದದಲಿ ಮುಂದೆ ತಂದೆಳೆವ ನಿನ್ನ 6 ನೀ ಬಿಟ್ಟರೇ ಕೆಡುವೆನೆ ಶ್ರೀ ಭೀಮನೊಬ್ಬ ಬಲ ಸಾಕೆಲೊ ಅಪಾರ ದೈವ ನಿನ್ನ ಕೊಬ್ಬುತ ತಬ್ಬಿ ನಾ ನಿನ್ನೊಲಿಸುವೆ7 ಮಾನದಿಂದಲಿ ತೋರೆಲೊ ನಿನಗಿದು ಘನತೆಯಲ್ಲವೊ ಜೀಯನೆ ಮುನ್ನ ಮಾಡ್ದುಪಕೃತಿ ಮರೆತೆಯಾ8 ಇನಿತು ವಂಚಿಸಿ ಪೋದರೆ ನಾ ನಿನ್ನ ಹೀನ ಗುಣದವನೆನ್ನುವೆ ಮನ್ನಿಸಿ ಸಲಹೋ ಬ್ಯಾಗ ಶ್ರೀ ನರಹರಿಯೆ ನಾ ಭಿನ್ನೈಸುವೆ9
--------------
ಪ್ರದ್ಯುಮ್ನತೀರ್ಥರು
ನಿನಗೆ ನಿನ್ನ ನಾಮ ಗುಣಗಳಿಂದರ್ಚನೆ ಗೈವೆನು ಸ್ವಾಮಿ ಪ ಎನಗೊಂದು ಪದಾರ್ಥವು ದೊರೆಯದು ಮನ್ಮನದಿ ನೀನೆ ನಿಂತು ಮಾಡಿಸನುದಿನಾ ಅ.ಪ ಧೇನುಸುವೆನು ವಾಙ್ಮಯನೆನ್ನುತ ಜೀವ ದೇವ ನಿನ್ನಾ ನಾನಾ ದಿವ್ಯ ಸ್ವರೂಪನೆನ್ನುತಾವಾಹನೆಯನುಗೈವೆ ಗಾನಲೋಲ ಗಂಗಾಜನಕನು ಎಂದಾನು ಪಾದ್ಯವನು ಸಮರ್ಪಣೆ ಮಾಳ್ಪೆನು 1 ಶರಣರಿಗಭಯವ ಕೊಡುವನೆಂದು ಅಘ್ರ್ಯಗಳ ಸಮರ್ಪಿಸುವೆನು ಪರಮ ಪವಿತ್ರನು ನೀನೆನ್ನುತಲಾಚಮನ ಮಾಡಿಸುವೆನು ಸಮರ್ಪಣೆಗೈವೆನು 2 ಹನುಮತ್ಪ್ರಿಯನಿಗೆ ದಿವ್ಯ ಚಂದನಾಕ್ಷತೆಗಳ ಧರಿಸುವೆನೂ ಮುದದಲಿ 3 ಭಕ್ತವತ್ಸಲನು ನೀನೆನ್ನುತ ಧೂಪವನೀವೆನು ಸ್ವಾಮಿ ಭವ ಭಯಹರ ನೀನೆಂದೂ ನಿತ್ಯತೃಪ್ತಗೆ ಮಹಾ ನೈವೇದ್ಯ ತಾಂಬೂಲವನೀವೆ ನೀರಾಜನವರ್ಪಿಸುವೆನು 4 ಸೇವೆಯ ಕೊಡೊ 5
--------------
ಗುರುರಾಮವಿಠಲ
ನಿನಗ್ಯಾಕೋ ಜನರಂಜನೆ | ವಣಾ ಭಂಜನೆ ಪ ಎಲ್ಲವಿದ್ಯವ ಸಾಧಿಸಿ ಮೆರೆಯಬೇಕೆಂಬ | ಬಲ್ಲವಿಕೆ ಹೆಮ್ಮೆಗೆ ಬೀಳುರೆ | ಯಳ್ಳಿಗೆ ಬೆಲ್ಲವ ಹುಯಲು ಹೋದಂತವಯ | ಸುಳ್ಳಿನ ಭ್ರಾಂತಿ ಕಳುವರೇ 1 ಹೆಣಗುತಿ ದೀಕ್ಷಿತನೆಂಬ ಮನ್ನಣಿಗ್ಯಾಗಿ | ದಣಿವರೆ ಕರ್ಮದಿ ದಣ್ಣನೆ | ಮುಣುಗುವವನ ತೆಲಿಮ್ಯಾಲ ಕಲ್ಲನ್ನಿಟ್ಟರೆ | ಗಣಿಸದೇ ದಾಟಲು ಬಲ್ಲನೆ 2 ಶರಣ ಕೊಳಬೇಕೆಂದು ಬೂದಿ ರುದ್ರಾಕ್ಷಿಯ | ಧರಿಸಿ ಕಾವಿಯ ಸೋಗು ಮಾಡುವರೆ | ಹರುಷದಿ ಖಜ್ಜಿಗೆ ಬಿಸಿನೀರು ಹೊಯ್ದಂತೆ | ಮರುಳೆ ಜನ್ಮ ಸಾಧನ ಕೂಡುರೇ 3 ಕಾಲನುಕೂಲವಿದ್ದ ಕೈಯಲಿ ಪರಗತಿ | ಕೀಲವರಿತು ಜ್ಞಾನ ಪಡೆವುದ | ಕೊಳ್ಳೆ ಹೋದ ಬಳಿಕ ಕೂಗುವ ಪರಿಯಲಿ | ಚಾಲವರಿದರಾಗ ಬಾರದು 4 ಒಂದೇ ನಿಷ್ಠೆ ಒಂದೇ ಮಾರ್ಗದಿ ಮನ | ದಂದುಗ ಬಿಟ್ಟು ಶರಣ ಹೊಕ್ಕರೆ | ತಂದೆ ಮಹಿಪತಿ ಸುತ ಪ್ರಭು ಬೀರುವ | ಮಂದನಾಗದೇ ತಿಳಿ ಇನ್ನಾದರೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಕರುಣಕೆಯ ಕಾಣೆನಾ | ವಿಠಲರಾಯಮನ್ನುಜನ್ನ ರೂಪ ಧರಿಪನಾಅನ್ನ ವಸನವಿತ್ತು ಪಿತಗೆ | ಚನ್ನ ಸೇವೆ ಮಾಳ್ಪದೇವೆಘನ್ನ ಸಾಧ್ಯ ಸಾಧನವೆಂದು | ಮನ್ನಣೆಯ ತೋರ್ದೆ ಜಗಕೆ ಅ.ಪ. ಪಂಥ ಜನರ ಸಂದಣೀಯಲಿ | ಮೆರೆಯುತ್ತಿದ್ದಪಂಢರಪುರದ ಸುಪ್ರದೇಶದಿಪುಂಡರೀಕ ನಯನ ಭಕ್ತ | ಬಂಡುಣೀಯ ಮನವ ನೋಡೆಅಂಡಾ ನಂತಕೀಶ ಮನುಜ | ದಿಂಡು ಧರಿಸಿ ಬಂದು ನಿಂತ 1 ಇಂದು ಭಾಗ ಸರಿತು ತೀರದಿ | ಪುಂಡಲೀಕತಂದೆ ಪಾದಸೇವೆ ಭರದಲಿ |ಬಂದ ಮನುಜ ವೇಷ ಹರಿಗೆ | ನಿಂದಿರೆಂದು ಪ್ರಾರ್ಥಿಸುತ್ತಅಂದ ಅನ್ಯ ಪೀಠವಿರದೆ | ಒಂದು ಇಟ್ಟಗಿ ಪೀಠವಿತ್ತ2 ಸಿಂಧು | ಸುಷ್ಠು ಒತ್ತಿಪ ದಯಾಸಿಂಧು3 ಶಾಸ್ತ್ರ ಬಹಳ ಶೃತನು ಎನುತಲೂ | ಶುದ್ಧಮೇಧ ಶಕ್ತಿ ಬಹಳ ಯುತನು ಎನುತಲೂ | ಯುಕ್ತಿಗಾಗ್ಯ ವಲಿವನಲ್ಲ | ಮುಕ್ತಿದಾತ ಲಕ್ಷ್ಮೀನಲ್ಲಭಕ್ತಿ ಮುಡುಪು ಯಿತ್ತು ತುತಿಪ | ಭಕ್ತ ಜನರ ಬಿಡದೆ ಪಾಲಿಪ4 ಭಾವ ದ್ರವ್ಯ ಕ್ರಿಯವು ಎಂಬುದಾ | ಮಹತು ಎನಿಪಈ ವಿಧ ದ್ವೈತತ್ರಯಗಳಾ |ಭಾವದಲ್ಲಿ ಚರಿಸುವಂಥ | ಭಾವವಿತ್ತು ಸಲಹೊ ಗುರುಗೋವಿಂದ ವಿಠಲ ಭಕ್ತಿಪಂಥ | ದೇವನೆಂದು ಮೆರೆವ ವಿಠಲ 5
--------------
ಗುರುಗೋವಿಂದವಿಠಲರು
ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ಪ ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು ಮಂದರ ಶೈಲ ತವಕದಿ ತಂದಾಗ ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು ಮುದದಿಂದ ಕಟಿಯಲು ಮುನಿದು ಮಹರೋಷದಿ ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು ಸುರರು ಸುಖಬಡಲು 1 ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ ಭೂತಳಾಧಿಪ ರಾಮಚಂದ್ರನ ಪದವಾರಿ ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ ಆತುರದಲಿ ಪುರಹೂತನಂದನ ನಿ ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ- ವಾತಹತಮಾಡಿ ಲಂಕಾಪುರವ ಸುಟ್ಟ 2 ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ ಮಂಡಲದೊಳು ಮಹಾಶೂರನೆನಿಸಿ ವಿಷ ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ ಹಿಂಡಿ ಬಕಾಸುರನ ಖಂಡರಿಸಿ ಕೀಚಕನ ಮಂಡಲದೊಳಗೆ ನಿಂದೆ ವಿರಾಟನ್ನ ದಿಂಡುಗೆಡುಹಿ ಕದನದಲಿ ವೇಗ ಕೊಂದೆ 3 ಬುದ್ಧಿಹೀನರಾಗಿ ಬಾಳಿದ ಮನುಷ್ಯರ ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ ಮುದ್ರೆಧಾರಣ ಕೊಟ್ಟು ಜ್ಞಾನಾಂಬುಧಿಯೊಳಿಟ್ಟು ಅದ್ವೈತ ಮತ ಕಾಲಿಲೊದ್ದು ಪರವಾದಿ ಎದ್ದೋಡಿ ಬಂದು ತಿರುಗಿ ನಿಮ್ಮ ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ4 ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ ವಾಯು ಹನುಮ ಭೀಮ ಮಧ್ವನೆಂದಿನಿಸಿದೆ ಕಾಯಜ ಜನಕನ ಪದವ ಪೂಜಿಸಿ ಅಂಬು ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ ನಾಯಕನೆನಿಸಿದೆ ನಾನಾ ದುರಿತವಾಗಿ ಮಾಯಿಗಳೆಲ್ಲ ತರಿದೆ ಸುಭಕುತರ ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ5
--------------
ವಿಜಯದಾಸ
ನಿನ್ನ ಚಿತ್ತ ನಿನ್ನ ಚಿತ್ತ ನಿನ್ನ ಚಿತ್ತವೋ ಪ. ಬನ್ನ ಬಡಿಸಬೇಡವಿನ್ನು ಭಯವ ಬಿಡಿಸಿ ಕಾಯೊ ಎನ್ನ ಅ.ಪ. ಘನ್ನ ಮನಸು ಮಾಡಿ ಈಗ ಎನ್ನ ಸಲಹಿದರೆ ಜಗದಿ ನಿನ್ನ ಕೀರ್ತಿಯು ಉನ್ನತದಲಿ ಮೆರೆವುದಿದೆಕೊ ಬನ್ನ ಬಡಿಸಬೇಡವಿನ್ನು ಘನ್ನಮಹಿಮ ಕೇಳು ಸೊಲ್ಲ ಇನ್ನು ಸುಮ್ಮನಿರಲು ಸಲ್ಲ ಘನಮಹಿಮನೆ 1 ಬುದ್ಧಿ ಭ್ರಮೆಯಿಂದ ನಾನು ಪೊದ್ದಿರುವ ಭಯವ ಬಿಡಿಸಿ ನಿದ್ದೆಯಲಿ ತಿಳಿಸಿದ್ವಾರ್ತೆ ಶುದ್ಧಗೊಳಿಸುತ ಮುದ್ದುಕೃಷ್ಣ ಅಭಯ ತೋರಿ ಉದ್ಧರಿಸಿದರೆ ಎನ್ನ ಶ್ರದ್ಧೆಯಿಂದ ನಿನ್ನ ಕೀರ್ತಿ ಮಧ್ವಮತದಿ ಸಾರುವೆನು2 ಬೆದರಿಸುವ ಪರಿಯದೇನು ಬದಿಗನಾಗಿ ಅರಿಯದೇನು ಹೃದಯದಲ್ಲಿ ನಿಂತ ಮೇಲೆ ಎನ್ನದಿನ್ನೇನು ಪದುಮನಾಭ ನಿನ್ನ ನಂಬಿ ಪದೋಪದಿಗೆ ನೆನೆಸುತಿರಲು ವಿಧ ವಿಧದಿ ಪರಿಕಿಸುವ ವಿಧವನರಿಯೆ ಪದುಮೆಯರಸ3 ಉಡಲು ಉಣಲು ಆಸೆಯಿಲ್ಲ ತೊಡಲು ಇಡಲು ಮಮತೆಯಿಲ್ಲ ಎಡದ ಬಲದ ನೆಂಟರಭಿಮಾನವಿಲ್ಲವು ಎಡರು ಬರಲು ಭಯವು ಇಲ್ಲ ಬಿಡಲು ದೇಹ ಅಂಜಿಕಿಲ್ಲ ನಡುವೆ ಕರೆವುದುಚಿತವಲ್ಲ ಮೃಡನ ಸಖನೆ ಕೇಳೊ ಸೊಲ್ಲ 4 ನಿರ್ದಯವನು ಮಾಡಲಿಕ್ಕೆ ಮಧ್ಯಮಧಮಳಲ್ಲವಿನ್ನು ಮಧ್ವಮುನಿಯ ಮತದಿ ಜನಿಸಿ ಶುದ್ಧ ಭಾವದಿ ಶುದ್ಧ ಸಾತ್ವಿಕರು ತಂದೆ ಮುದ್ದುಮೋಹನ ಗುರುಗಳಿಂದ ಪೊದ್ದಿ ದಾಸ್ಯರೀಗ ಜಗದಿ ಬದ್ಧ ಕಂಕಣಧರಿಸಿ ಮೆರೆವೆ 5 ಒಡೆಯ ನೀನು ಎನ್ನ ಧರೆಗೆ ಬಿಡದೆ ತಂದು ಜನ್ಮವಿತ್ತು ಬಿಡದೆ ಕಾಯ್ವ ಗುರುಗಳನ್ನು ಅಗಲಿಸುತ್ತಲಿ ಅಡಿಗಡಿಗಭಯವ ತೋರಿ ಪಿಡಿದು ಕೈಯ್ಯ ಸಲಹದಿರಲು ಅಡಿಗಳಾರದಿನ್ನು ನಾನು ಪಿಡಿಯೆ ಕಡಲಶಯನ 6 ನಾಥರಾರು ಎನಗೆ ಇಲ್ಲ |ಅ- ನಾಥಗಳನ್ನು ಮಾಡಿ ನಿನ್ನ ಮೂತಿ ತಿರುಹಿ ಸಲಹದಿರಲು ಪಾತಕಲ್ಲವೆ ಪಾತಕಾದಿ ದೂರನೆಂಬೊ ಖ್ಯಾತಿ ಸಟೆಯದಾಯ್ತು ಈಗ ನೀತಿಯರಿತು ಪೊರೆಯದಿರಲು ಜಾತರಹಿತ ಜಗದಿ ಸಲಹು 7 ದಾಸತನದಿ ಮೆರೆವೊದೊಂದು ಆಸೆಯಿಲ್ಲದಿನ್ನು ಬೇರೆ ಆಸೆಯೊಂದು ಇಲ್ಲ ಕೇಳು ನಾಶರಹಿತನೆ ಪಾಶಕರ್ಮ ಹರಿಸಿ ನಿನ್ನ ದಾಸಳೆಂದು ಮೆರೆಸೆ ಜಗಕೆ ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ 8 ಮೃತ್ಯುವಿಗೆ ಮೃತ್ಯುವಾಗಿ ತುತ್ತುಮಾಡಿ ಜಗವ ನುಂಗಿ ಮತ್ತೆ ಬ್ರಹ್ಮಾಂಡ ಸೃಜಿಸಿ ಪೆತ್ತು ಜೀವರ ಭಕ್ತ ಜನಕೆ ಬಂದ ಎಡರು ಮೃತ್ಯುಗಳನು ಕಾಯ್ದ ದೇವ ಮೃತ್ಯು ಮೃತ್ಯು ಶರಣು ನೃಹರಿ ಮೃತ್ಯು ಹರಿಸಿ ಕಾಯೊ ಶೌರಿ9 ಬಿಡಲಿಬೇಡ ಕೈಯ್ಯ ಇನ್ನು ಬಿಡದೆ ಕಾಯೊ ಶರಣು ಶರಣು ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲಾತ್ಮಕ ಕಡೆಗೆ ನಿನ್ನ ಪಾದಸೇವೆ ಬಿಡದೆ ಕೊಡುವ ದೃಢವ ಬಲ್ಲೆ ಕರವ ಪಿಡಿಯೊ 10
--------------
ಅಂಬಾಬಾಯಿ
ನಿನ್ನ ತಂತ್ರಗಳೆಲ್ಲ ಬಯಲಾಯ್ತೊ ರಂಗ ನಿನ್ನ ಕಥೆಯ ಕೇಳಿ ಭಯವಾಯ್ತೋ ಪ ನಿನ್ನ ವಂಚನೆಗೇ ಜಯವಾಯ್ತೋ ಅ.ಪ ಶರನಿಧಿಯ ಮಥನದಿ ಗರಳವು ಜನಿಸಲು ಪರಶಿವನುಂಬುವ ಪರಿಗೈದೆಯೇನೋ ತರುಣಿ ಸಂಜನಿಸಲು ಶರಗಳ ನೀಡಿ ದೈ ಪರಿ ಸಟೆಯೇನೋ 1 ಧರಣಿಯನಿತ್ತನ ಶಿರವನು ತುಳಿದೆ ಪರಿಗಣಿಸದೆ ತಾಯ ಕೊರಳನು ತರಿದೆ ಪರಸತಿಯರ ಕೂಡ ನೆರೆ ನಲಿದಾಡಿದೆ ಕರದಿ ಸನ್ನೆಯ ಮಾಡಿ ಕುರುಕುಲವಿರಿದೇ 2 ಮದನ ಸುಂದರಿಯಾಗಿ ಸುಧೆಯ ಕುಂಭವ ಕೊಂಡೆ ಅದಿತಿಯ ಸುತರಿಗೆ ಅದ ನೀನುಣಿಸಿದೆ ಮಧುರುಚಿಯರಿತನ ಚಕ್ರದಿ ತರಿದೆ [ಎದುರಿಸದೆವಾಲಿಯ ಮರೆಯಲಿರಿದೆ] 3 ಪೊಡವಿಯೊಡೆಯನ ಕಡೆಗಣಿಸೀ ನಿನ್ನ ಅಡಿಯಿಡೆ ಯಿದ್ದವನೊಡವೆರೆದೆ ನುಡಿದು ಕರ್ಣನ ಕಂಗೆಡಿಸಿದೆ ಭೀಷ್ಮನ ಕೆಡಹಿದೆ ಮಾಂಗಿರಿಯೊಡೆಯ ಗೋಪಾಲಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್