ಒಟ್ಟು 3847 ಕಡೆಗಳಲ್ಲಿ , 123 ದಾಸರು , 2597 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಸತ್ಯ ಬೋಧರು ನಿಂದಿಸೋರಿಗೆ ನಿಂದೆಯನು ಕೊಡುವಾ ಕೊನೆಕಾಮರಿಗೆ [?] ಕೊನೆಯನು ಕೊಡುವಾ ಘನ ಮಹಿಮಾ ನಮ್ಮ ಸತ್ಯಬೋಧಗುರು ಅನುದಿನ ನೆನೆಯಲಭೀಷ್ಟವ ಕೊಡುವಾ ಪ ರಾಮದೇವಾರ್ಚನೆ ನೇಮದಿಂದಲಿ ಗೈದು ಕಾಮಿತ ಫಲಪ್ರದ ಬಲವೈಯ್ದಿದಾ ಶೀಮಿಶೀಮಿಯೊಳು ಕಾಮನೈಯ್ಯನ ಜನ ಕಾಮಪ್ರದಾನೆಂಬುದೆ ಸಾರಿದಾ ಧೀಮಾನ್ ಶ್ರೀಮಾನ್ ಕಾಮಿತೇಷ್ಟದಾ ಕಾಮನೆಂದು ತಾ ಪೊಗಳಿಸಿದಾ ವಾಮದೆ ವಗುರು ರಾಮಭಕುತನೆಂದು ಭೂಮಿಯೊಳ್ಡಂಗುರ ಹೊಡಿಸಿದಾ 1 ತತ್ವ ತಿಳಿದು ನೋಡಿ ಸತ್ಯ ಸತ್ಯ ಹರಿ ಮತ್ತುವನಿಗೆ ಭೃತ್ಯವಾದ ಸೂನು ಉತ್ತಮರೆಲ್ಲರು ಸತ್ಸಮಯವಂತೆ ಸತ್ಯ ಪ್ರಮಾಣವ ಪೇಳಿದನು ¸ತ್ಯಬೋಧ ರವಿ ಮಿಥ್ಯಾಗತ್ತಲೆಗೆ ತಾ ಕತ್ತರಿಯೆಂದರುಹಿದನು ¸ತ್ಯ ಬೋಧನೆಯನು ಸತ್ವರಿಂಗೆ ಮಾಡಿ ಮತ್ತವರುದ್ಧಾರ ಮಾಡಿದನು 2 ವರಸದ್ಗುಣಗಣ ನಿಲಯನೆನಿಸಿ ತಾ ವರ ಶಿಷ್ಟಾನ್ವಿತ ಮೇಣ್ ವಂದ್ಯನಾದ ಶಿರಿವರ ಪಾದಾನುಗ್ರಹ ಪಡೆದು ತಾ ಹರಿಜನಾರ್ತಿತಯ ಛೇದಿಸಿದಾ ದುರಿತ ತಮರಾಶಿಗಗ್ನಿಯೆನಿಸಿದಾ ಶರಣರ ಸಂಘ ಬೂದಿಗೈದಾ ನರಸಿಂಹವಿಠಲನ ಕರಣವ ಪಡೆದು ತಾ ಗುರುವರ ವರಪ್ರದನೆನಿಸಿದಾ 3
--------------
ನರಸಿಂಹವಿಠಲರು
ಶ್ರೀ ಸತ್ಯ ವಿಜಯತೀರ್ಥ ಚರಿತ್ರೆ ನಮೋ ಸತ್ಯ ವಿಜಯಾರ್ಯ ತೀರ್ಥರೇ ಸುಮಹ ಕಾರುಣ್ಯದಿಂ ಎನ್ನ ಪಾಪಗಳ ಮನ್ನಿಸಿ ವಿಮಲ ವಾಙ್ಮನೋಕಾಯದಲಿ ಶ್ರೀ ರಾಮ ಯದುಪತಿ ಸ್ಮರಣೆ ಇತ್ತು ಪಾಲಿಪುದು ಪ ಅಶೇಷ ಗುಣಗಣಾಧಾರ ವಿಭು ನಿರ್ದೋಷ ಹಂಸ ಶ್ರೀಪತಿಯಿಂದುದಿತ ಗುರುಪರಂಪರೆಗೆ ಬಿಸಜಭವ ಸನಕಾದಿ ದೂರ್ವಾಸ ಮೊದಲಾದ ವಂಶಜರು ಸರ್ವರಿಗೂ ಶರಣು ಶರಣೆಂಬೆ 1 ಅಚ್ಯುತ ಪ್ರೇಕ್ಷರಿಗೂ ಪರವಾಯು ಅವತಾರಾನಂದ ತೀರ್ಥರಿಗೂ ಉತ್ಕøಷ್ಠ ಗುರುತಮ ಮಧ್ವ ಆನಂದ ಮುನಿಗಳ ಕರಕಂಜಭವ ಸರ್ವ ಯತಿಗಳಿಗು ಶರಣು 2 ಮಾಧವ ಅಕ್ಷೋಭ್ಯ ಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತ ಮೇಧಾಪ್ರವೀಣ ಜಯತೀರ್ಥಾರ್ಯರಿಗೂ ವಿದ್ಯಾಧಿರಾಜರಿಗೂ ನಮೋ ನಮೋ ಶರಣು 3 ವಿದ್ಯಾಧಿರಾಜರ ಶಿಷ್ಯರು ಈರ್ವರಲಿ ಮೊದಲನೆಯವರು ರಾಜೇಂದ್ರ ತೀರ್ಥರಿಗು ನಂತರ ಕೋವಿದೋತ್ತಮ ಕವೀಂದ್ರರಿಗೂ ತತ್ವಜ್ಞ ಶಿಷ್ಯವಾಗೀಶ ತೀರ್ಥರಿಗು ಶರಣು 4 ವಾಗೀಶ ತೀರ್ಥರು ಕವೀಂದ್ರ ಕರಜರು ವಾಗೀಶ ಕರಜರು ರಾಮಚಂದ್ರಾರಾರ್ಯರು ಈ ಗುರುಗಳಿಗೆ ಈರ್ವರು ಶಿಪ್ಯರು ಇಹರು ಬಾಗಿ ಶರಣಾದೆ ಈ ಈರ್ವರಿಗೂ 5 ಮೊದಲನೆಯವರು ವಿಭುದೇಂದ್ರತೀರ್ಥಾರ್ಯರು ವಿದ್ಯಾನಿಧಿ ತೀರ್ಥಾರ್ಯರ ಅನಂತರವು ವಿದ್ಯಾನಿಧಿ ಸುತರು ರಘುನಾಥತೀರ್ಥರು ವಂದಿಸಿ ಶರಣೆಂಬೆ ಇವರಿಗು ಇವರ ವಂಶಕ್ಕು 6 ರಘುನಾಥ ಕರಕಮಲಜಾತರಘುವರ್ಯರಿಗೆ ರಘೂತ್ತಮ ವೇದವ್ಯಾಸ ವಿದ್ಯಾಧೀಶ ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥ ಸತ್ಯಭಿನವ ಸತ್ಯಪೂರ್ಣರಿಗೆ ನಮಿಪೆ 7 ಸತ್ಯಾಭಿನವತೀರ್ಥರ ಮಹಿಮೆ ಬಹುಬಹುವು ಸುತಪೋನಿಧಿಯು ಶ್ರೀನಿವಾಸನ್ನೊಲಿಸಿಕೊಂಡಿಹರು ಸತ್ಯಪೂರ್ಣರಿಗೆ ಶಿಷ್ಯರು ಈರ್ವರು ಸತ್ಯವರ್ಯರು ಸತ್ಯವಿಜಯರು ಎಂದು 8 ಸತ್ಯ ಪೂರ್ಣಾರ್ಯರು ತಮ್ಮ ಗುರು ಸತ್ಯಾಭಿನವರ ಪದ್ಧತಿ ಅನುಸರಿಸಿ ಶ್ರೀಮಠ ಆಳುತ್ತ ಸತ್ಯವರ್ಯರನ್ನು ಗೋದಾವರಿ ಕ್ಷೇತ್ರ ವಿಜಯ ಮಾಡೆಂದು ಸತ್ಯವಿಜಯರನ್ನ ಕಳುಹಿದರು ಪೂರ್ವದಿಸೆಗೆ 9 ಸತ್ಯವರ್ಯರು ಗೋದಾವರಿ ಪಂಚವಟಿ ನಾಸಿಕ ತ್ರಿಯಂಬಕಾದಿ ಕ್ಷೇತ್ರ ಸಮೀಪ ವಿಜಯಮಾಡೆ ಸತ್ಯವಿಜಯರು ತೋಂಡದೇಶ ಚÉೂೀಳ ಪಾಂಡ್ಯಾದಿ ನಾಡಲ್ಲಿ ವಿಜಯ ಮಾಡಿದರು 10 ಜಯಶೀಲರಾಗಿ ದಿಗ್ವಿಜಯಮಾಡಿ ತೋಯಜಾಕ್ಷನಪಾದಐದಿದರು ನಿಯಮೇನ ಸತ್ಯವಿಜಯರು ಅಲಂಕರಿಸಿದರು ಪೀಠ 11 ಸತ್ಯಾಭಿನವ ಆರ್ಯರ ಸತ್ಯಪೂರ್ಣ ಗುರುಗಳ ಪದ್ಧತಿಯಲಿ ಸತ್ಯವಿಜಯಾರ್ಯರು ವೇದಾಂತವಾಖ್ಯಾರ್ಥ ದುರ್ವಾದ ಖಂಡನ ಅಧಿಕಾರಿಗಳಿಗು ಉಪದೇಶ ಮಾಡಿದರು 12 ಸೇತುಯಾತ್ರೆ ಮಾಡಲು ದಿಗ್ವಿಜಯ ಕ್ರಮದಲಿ ಬಂದರು ಆರಣಿಗೆ ತೋಂಡದೇಶದಲಿ ವಿಪ್ರ ಆರಣಿ ರಾಜನು ಸಂತಾನ ವೃದ್ಧಿಗೆ ಕೊರಗುತ್ತಿದ್ದ 13 ಯುಕ್ತಮರ್ಯಾದೆಗಳ ವೈಭವದಿಂದಲಿ ಸತ್ಯವಿಜಯರಿಗೆ ಮಾಡಿ ದೇವಾರ್ಚನೆ ಭೂದೇವರಿಗೆ ಭೋಜನಮಾಡಿಸಿದ ರಾಜನು ವೇದ್ಯವಾಯಿತು ಗುರುಗಳಿಗೆ ರಾಜನ ಕೊರತೆ 14 ಸತ್ಯವಿಜಯತೀರ್ಥಾರ್ಯರ ಗುರುವರ್ಯರು ಸಪ್ತದಶ ಅಕ್ಷರ ಮಂತ್ರ ಪ್ರತಿಪಾದ್ಯಹರಿದಯೆಯಿಂದ ಒದಗಿಸುವ ವಂಶವೃದ್ಧಿ ಎಂದು ಅನುಗ್ರಹಿಸಿ ಪೋದರು ದಿಗ್ವಿಜಯಕೆ ವರವು ಪೂರ್ಣವಾಯಿತು 15 ಸೇತುಯಾತ್ರೆ ದಿಗ್ವಿಜಯ ಪೂರಯಿಸಿ ಆ ಗುರುಗಳು ಮತ್ತು ಬಂದರು ಆರಣಿ ಕ್ಷೇತ್ರಕ್ಕೆ ಕೃತಜ್ಞ ಆ ರಾಜನು ಎದುರುಗೊಂಡು ಗುರುಗಳ ಪಾದದಲಿ ಶಿರವಿಟ್ಟು ಸ್ವಾಗತವನಿತ್ತ 16 ಸಂಸ್ಥಾನ ಮೂರ್ತಿಸ್ಥ ಹರಿಪೂಜಾ ವೈಭವವು ನಿತ್ಯ ಪ್ರವಚನ ಪಾಠಕೀರ್ತನೆ ಏನೆಂಬೆ ಸತ್ಯವಿಜಯರನ್ನ ರಾಜ ಅಲ್ಲಿಯೇ ಇರಬೇಕು ಎಂದು ಕೋರಿ ಒದಗಿಸಿದ ತಕ್ಕ ಸೌಕರ್ಯ 17 ಸತ್ಯವಿಜಯಾರ್ಯರಿಗೆ ದೇಹ ಅಧಾರೂಢ್ಯ ವೇದ್ಯವಾಯಿತು ಆರಣಿರಾಜನಿಗೆ ಭಕ್ತಿಶ್ರದ್ಧೆಯಿಂದಲಿ ಉಪಚಾರ ಮಾಡಿದನು ಮಾಧವಗೆ ಅರ್ಪಿಸುತಕೊಂಡರು ಗುರುಗಳು 18 ಶ್ರೀ ಸತ್ಯವಿಜಯತೀರ್ಥರ ಮಹಿಮೆ ಬಹು ಉಂಟು ಒಂದು ಮಾತ್ರ ಸ್ಥಾಲಿಪುಲಿಕನ್ಯಾಯದಲಿ ಈ ದಿವ್ಯ ಸಣ್ಣ ನುಡಿಗಳಲಿ ಪೇಳಿಹುದು ಮಾಧ್ವಯತಿ ಹರಿದಾಸ ಮಹಿಮೆಗಳಿಗೆ ಅಳವುಂಟೆ 19 ತಮ್ಮ ತರುವಾಯ ಸಂಸ್ಥಾನ ಆಡಳಿತವ ಶ್ರೀ ಮನೋಹರ ಹರಿ ಪ್ರಿಯರು ಸತ್ಯವರ್ಯ ಸುಮನೋಹರ ಸತ್ಯಪ್ರಿಯ ತೀರ್ಥನಾಮದಲಿ ರಮಾರಮಣಸೇವೆಗೆ ವಹಿಸಬೇಕೆಂದು 20 ಭಕ್ತಿಮಾನ್ ಆರಣಿ ರಾಜನಿಗೆ ಹೇಳಿ ಹಿತದಿ ಅನುಗ್ರಹಿಸಿ ಗುರುವರ್ಯ ಸತ್ಯವಿಜಯರು ಧ್ಯಾನದಿಂ ಐದಿದರು ಹರಿಪುರ ಚೈತ್ರ ಕೃಷ್ಣಪುಣ್ಯದಿನ ಏಕಾದಶಿ ದ್ವಾದಶಿಲಿ 21 ಮತ್ತೊಂದು ಅಂಶದಲಿ ಸತ್ಯವಿಜಯ ನಗರಾಖ್ಯ ಕ್ಷೇತ್ರ ಆರಣಿ ಸಮೀಪ ವೃಂದಾವನದೀ ಇದ್ದು ಸೇವಿಸುವ ಸುಜನರಿಗೆ ವಾಂಛಿತ ಒದಗಿಸುತ ಕುಳಿತಿಹರು ಹರಿಧ್ಯಾನ ಪರರು 22 ಸತ್ಯಲೋಕೇಶಪಿತ ಶ್ರೀಪ್ರಸನ್ನ ಶ್ರೀನಿವಾಸ ಪ್ರಿಯ ಸತ್ಯಾಭಿನವತೀರ್ಥ ಕರಕಂಜ ಜಾತ ಕರ ಕಾಯವಾಙ್ಮನದಿ ನಮೋ ಶರಣು ಮಾಂಪಾಹಿ 23
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯಧೀರರು ಚಾರು ಚರಣಗಳಿಗೆರಗುವೆನು ಪ ವರಮತಿಗುಣಗನ ಮಣಿಯೆ ಅ.ಪ. ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ ಮತಿಹೀನರಪಹಾಸ್ಯ ಮಾಡಿದರೆ ಪರಿಯಂತ ಹರಿಸೇವೆಯಾ ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ ಹಿತದಿಂದ ಕೈಗೊಂಡ ದಶರಥನಂದ ರಘುರಾಯ ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ 1 ವರಮಧ್ವಮತಾಭಿಮಾನಿಯೆ ನಿನ್ನಯ ದರುಶನದಿಂದ ಪಾವನನಾದೆನೋ ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ ವರಸೇವಾ ಸರ್ವಜ್ಞ ಪೀಠಕೆ ಸರಸ ಶೋಭಿಸುವಾ ಹರಿವಾಯುಗಳಲಿ ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ 2 ಆನಂದಜ್ಞಾನದಾಯಕನಾಜ್ಞೆಯಿಂ ಸತ್ಯಜ್ಞಾನಾ- ನಂದಗಿತ್ತಿ ಉತ್ತಮಪದವಾ ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ ಸೇವಕನೋ ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ 3
--------------
ಹನುಮೇಶವಿಠಲ
ಶ್ರೀ ಸತ್ಯಪರಾಯಣ ಸ್ವಾಮಿಗಳ ಸ್ತುತಿ ಕಂಗಳು ದಣಿಯ ನೋಡೆಲೆ ಮನವೆ |ಮಂಗಳಾಂಗ ಸತ್ಯಪರಾಯಣ ಗುರುಗಳ ಪ ಹಿಂದಿನ ಜನುಮದಿಂದ | ಬಂದ ಪಾಪಂಗಳ ||ಇಂದು ತಮ್ಮ ದರುಶನ | ದಿಂದ ಕಳದಾ 1 ನಂದತೀರ್ಥ ಶಾಸ್ತ್ರ | ಸಿಂಧುವಿಗೆ ಪೂರ್ಣ ಚಂದ್ರಾ |ನಂದದಲೊಪ್ಪುವ ಗುಣ | ಸಾಂದ್ರರ ಪದಂಗಳ 2 ವರಸೀತಾರಾಮ ಪದ | ಸರಸಿಜಕೆ ಮಧುಪಾ ||ಗುರುಪ್ರಾಣೇಶ ವಿಠಲಾ ನಿರಸಿಹ ಹೃದಯದಿ 3
--------------
ಗುರುಪ್ರಾಣೇಶವಿಠಲರು
ಶ್ರೀ ಸತ್ಯಬೋಧರು ಭೀಕರ ರೂಪವ ತೋರುವ ಯತಿವರನ್ಯಾರೆ ಪೇಳಮ್ಮಯ್ಯ ಪ. ನಾಕಲೋಕಪತಿ ಪಿತನ ಬಲದಿ ಯಮಪಾಶ ಗೆದ್ದ ಸತ್ಯಬೋಧಕಾಣಮ್ಮ ಅ.ಪ. ಹರಿ ಆಚಾರ್ಯರ ಉದರದಿ ಜನಿಸಿದನ್ಯಾರೇ ಪೇಳಮ್ಮಯ್ಯಮಾರನ ಪೋಲುವ ರೂಪದಿಂದ್ಹೊಳಿಯುವ-ನ್ಯಾರೇ ಪೇಳಮ್ಮಯ್ಯಗುರುಮುಖದಿಮಂದಧ್ಯಯನ ಮಾಡುತಮನಮೋಹಗೊಳಿಪ ಬಾಲಕನಾರಮ್ಮ1 ಸುಂದರರೂಪನ ಸತಿಯನಾಮ ಕಳವರಿಸಿ-ನ್ಯಾರೆ ಪೇಳಮ್ಮಯ್ಯಮುದದಿಂದಲಿ ಸತ್ಪುತ್ರರ ಪಡೆದಿಹನ್ಯಾರೆ ಪೇಳಮ್ಮಯ್ಯಮಿಂದಸಂಸಾರದಿ ಇಂದಿರೇಶನ ಭಜಿಸುವಶ್ರೀರಾಮಾರ್ಯ ಕಾಣಮ್ಮ2 ಸತ್ಯಪ್ರೇಮರ ಪ್ರೀತಿಗೆ ಪಾತ್ರನುದಾರೆ ಪೇಳಮ್ಮಯ್ಯತಂತ್ರಿಣಿ ತಲದಲಿ ಆಶ್ರಯಗೊಂಡವನ್ಯಾರೆ ಪೇಳಮ್ಮಯ್ಯಮತ್ತೆ ಜಗದೊಳಿಹ ಮಿಥ್ಯವಾದಿಗಳೆಂಬಾಮತ್ತಗಜಗಳಂಕುಶನಿವನಮ್ಮಾ 3 ಶ್ರವಣಾಖ್ಯಪುರದಿ ಮಾಡಿಹನ್ಯಾರೆ ಪೇಳಮ್ಮಯ್ಯಶೇಷರೂಪದ ದುಷ್ಟದೈತ್ಯನ ಸುಟ್ಟವನ್ಯಾರೆ ಪೇಳಮ್ಮಯ್ಯಶೇಷಗತಿಯ ಮನ ಭೂಸುರ ವೃಂದಕೆನಿಶಿಯಲಿ ರವಿಯನು ತೋರಿದನಮ್ಮ 4 ತಪದ ಪ್ರಭಾವದಿ ಗಂಗೆಯನೊಲಿಸಿಹನ್ಯಾರೆ ಪೇಳಮ್ಮಯ್ಯಗೋಪಿಯ ಮಗನನು ತೀರ್ಥದ ದಡದಲಿ ನಿಲಿಸಿಹನ್ಯಾರೆ ಪೇಳಮ್ಮಯ್ಯಗೋಪರೊಡೆಯ ತಂದೆವರದವಿಠಲನನ್ನುಸತತ ಭಜಿಸುವ ಯತಿವರನೆ 5
--------------
ಸಿರಿಗುರುತಂದೆವರದವಿಠಲರು
ಶ್ರೀ ಸುಮಧ್ವ ವಿಜಯಸ್ಥ ಅಷ್ಟೋತ್ತರ ಶತನಾಮಾವಳಿ ನಮಿಸುವೆ ಜಗದ್ಗುರುಗಳೇ ಪ ಅಮಿತ ಮಹಿಮನ ವಿಮಲ ಪದಪದ್ಮ ತೋರ್ವುದೆಮಗೇ ಅ.ಪ. ಭೂರಿ ವಿಶ್ವ ಭೂಷಣರೇ ಪಾಹಿಮಾಂ ಪಾಹಿ 1 ಪರಿಪೂರ್ಣ ಪ್ರಮತಿಯೇ | ಪುರುಸಂಖ್ಯ ಪೂರ್ಣೇಕ್ಷ ಅರವಿಂದ ಲೋಚನರೆ | ಗುರುಮತ್ಯಮಿತ ಬುದ್ಧಿ ಮರುದಂಶ ಪ್ರಚುರಧೀ | ಪುರು ಕರುಣ ಆಂಬುಧಿಯ ಮೇರೆಯನು ಮೀರಿದವರೆ || ಸರುವಿತ್ ಪೂರ್ಣದೃಕ್ | ಉರುಮತಿಯೆ ಸಕಲಜ್ಞ ಸರುಧೀ ಪೃಥು ಹೃದಾ | ಪುರುಧೀ ಪ್ರಭೂತಧೀಃ ಪರಮ ಆನಂದ ಸತ್ತೀರ್ಥ ಸೂರಿರಾಜಾಧಿ ರಾಜರೆ ಪಾಹಿ ಪಾಹಿ 2 ಫುಲ್ಲ ಬೋಧ ಬಹುಲ ಪ್ರಬೋಧರೇ | ಮಹೀಷ್ಟ ಸುಹೃದಯರೇ ಬಹುಲ ಬೋಧಾಖ್ಯರೇ | ಮಹಾ ಪುರುಷೋತ್ತಮನ ದಾಸರೊಳಧಿಕನೆ ಪಾಹಿ 3 ನಮೊ ನಮೋ ಧೀರಮತಿ | ನಮೊ ಪೃಥೂ ದರ್ಶನರೆನಮೊ ನಮೋ ಸುಖ ತೀರ್ಥ | ನಮೊ ಪೃಥುಲ ಚೇತಾತ್ಮನಮೊ ನಮೋ ಪೃಥುಮತಿಯೆ | ನಮೊ ನಮೊ ಸಮಗ್ರ ಧೀರ್ಸುಸ್ಮಿತೇಂದುಗಳೆ ಪಾಹಿ || ನಮೊ ವಿಪುಲ ಹೃದಯರೇ | ಅಮಂದಧಿಯೆ ಶುದ್ಧಧೀಃ ನಮೊ ನಮೋ ಸುವಿಚಾರ | ನಮೊ ದಾನವರ್ಭೀಮ ನಮೊ ಪುಷ್ಟ ಬುದ್ಧಿಯೇ | ನಮೊ ಪೃಥುಲ ಹರಿ ನಿಗೂಢ ಮೂರ್ತಿಯೆ ಪಾಹಿ ಪಾಹಿ4 ಆನಂತ ಬೋಧಾಖ್ಯ | ಅನೂನ ಬೋಧರು ಎನಿಪಆನಂದ ತೀರ್ಥಾಖ್ಯ | ಅನುಮಾನ ತೀರ್ಥರೇಸ್ವರ್ಣವರ್ಣಾಭಿಧರೆ | ಧನ್ಯ ಪ್ರವರರು ಎನಿಪ ಆದೀನ ಸತುವಾಭಿಧರೆ ||ಅನಂತಧಿಯ ಮಧ್ವ ಸು | ಪೂರ್ಣ ಸಂಖ್ಯ ಧೀರದಿಹನುಮಂತ ಕೃಷ್ಣೇಷ್ಟ | ಪ್ರಾಣೇತ ಪ್ರಾಜ್ಯೇಕ್ಷಆನಮಿಸಿ ಬೇಡ್ವೆ ಸಂ | ಪೂರ್ಣ ಪ್ರಮತಿಯೆ ತವ ಚರಣ ತೋರಿಸಿ ಸಲಹುವುದೂ 5 ಪಾಹ್ಯದ ಭ್ರಮನೀಷ | ಪಾಹಿ ಪ್ರಚುರ ಪ್ರಜ್ಞಪಾಹಿ ವಿಪುಲ ಪ್ರಮತಿ | ಪಾಹಿ ಆಯುತ ಚೇತಪಾಹಿ ಪೃಥು ಪ್ರಬೋಧಾ | ಪಾಹಿ ಪ್ರಬರ್ಹ ಬೋಧಾಖ್ಯರೇ ಪಾಹಿ ಪಾಹಿ ||ಪಾಹ್ಯ ಮಂದಮನೀಷ | ಪಾಹ್ಯದ ಭ್ರಸುಸಂಖ್ಯಪಾಹಿ ಬೃಹತು ಪ್ರಬೋಧ | ಪಾಹ್ಯತಿ ಭದ್ರ ಭಾಷಣಪಾಹ್ಯ ಪೂರ್ವ ಪುರುಷ | ಪಾಹಿ ದಶಧಿಷಣಾರ್ಯಾ ವರ್ಯ ಚರ್ಯರೇ ಪಾಹಿ 6 ಸಿರಿ ಮಾಧವನ | ಗುಣ ಸಾಧಕಾಗ್ರಣಿಯೆ ಪಾಹಿಮಾಂ ಪಾಹಿ ಪಾಹಿ 7 ವಾಸುದೇವ ಪರಿ | ಶಿಕ್ಷಣದಿ ದಕ್ಷನೆನಿಸುವನಿಗೇ ಜಯವಾಗಲಿ ||ಜಯ ಹರಿಗಧಿಷ್ಠಾನ | ಜಯ ಮುಖ್ಯ ಪ್ರತಿ ಬಿಂಬಜಯ ಜಯತುದಾರಮತಿ | ಜಯ ಹರಿದಯಿತ ವರನೆಜಯ ಶ್ರೀ ಮದಾನಂದ | ತೀರ್ಥಾರ್ಯವರ್ಯ ಜಯ ಜಯತು ನಿಮ್ಮ ಪದಗಳಿಗೇ 8 ಮಧ್ವಾಖ್ಯ ಶೃತಿಪ್ರತೀ | ಪಾದ್ಯರೆಂದೆನಿಸುತಲಿಮಧ್ವ ವಿಜಯಾಖ್ಯ ಪ್ರ | ಸಿದ್ಧ ಗ್ರಂಥದಿ ಪೊಳೆವಮಧ್ವಗುರು ತವನಾಮ | ಶಬ್ದಾಖ್ಯ ಮಣಿಗಳಷ್ಟೋತ್ತರದ ಮಾಲೆಯನ್ನೂ ||ಮುದ್ದು ಮೋಹಜ ತಂದೆ | ಮುದ್ದು ಮೋಹರಲಿರುವಮಧ್ವಗುರುವೇ ನಿಮ್ಮ | ಹೃದ್ಗುಹದಲಿರುವಂಥಮುದ್ದು ಗುರುಗೋವಿಂದ | ವಿಠ್ಠಲನಿಗರ್ಪಿಸುವೆ ಉದ್ಧರಿಪುದೆಮ್ಮ ಸತತ 9
--------------
ಗುರುಗೋವಿಂದವಿಠಲರು
ಶ್ರೀ ಹರಿಸ್ತುತಿ ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ ಕರಪಿಡಿಯೊ ಬಿಂದು ಮಾಧವಾ ಪ ಸಾರ ಮಾರ ಜನಕನೆ 1 ಮಂದರಗಿರಿಯನ್ನೆ ಚಂದಾದಿಂದೆತ್ತಿದೋಕಂದನೆಂತೆಂದೆನ್ನ ಮುಂದಕೆ ಕರೆಯೋ 2 ವರಾಹ ರೂಪವ ತಾಳಿ ಧರೆಯ ಸಲಹಿದೆಯೋದುರುಳ ಮನವನಳಿದು ತ್ವರದಿ ನೀ ಕಾಯೋ 3 ಕಂಬದಿಂದಲಿ ಬಂದ್ಯೊ ಅಂಬುಜನಯನಬಿಂಬನ ಪಾಲಿಸೊ ಅಂಬುಧಿಶಯನ 4 ಇಳೆಯ ದಾನವ ಬೇಡಿ ಬಲಿಯ ಮೆಟ್ಟಿದೆಯಾಭಳಿರೆ ಪಾದವ ತೋರಿ ಉಳಹೊ ಮಹರಾಯ 5 ಛಲದಿಂದ ಕ್ಷತ್ರಿಯ ಕುಲವನಳಿದನೆಬಲವಾದ ದುರಿತವ ಕಳೆಯೊ ಸುರವರನೆ 6 ಶಿಲೆಯ ಸತಿಯ ಮಾಡಿ ಸಲಹಿದ ರಾಮಾನಲಿನಲಿವುತ ಬಾರೊ ಜಲಜ ಸಂಭವ ಪ್ರೇಮಾ 7 ಆಕಳ ಕಾಯ್ದೆಯೊ ಗೋಕುಲನಾಥಏಕಭಕ್ತಿಯನೀಯೋ ಲೋಕವಿಖ್ಯಾತ 8 ಉತ್ತಮ ಸ್ತ್ರೀಯರ ಚಿತ್ತವ ಹರಿಸಿದ್ಯೋಉತ್ತಮ ಜ್ಞಾನವನಿತ್ತು ಪೊರೆಯೊ 9ತುರಗ ರಾವುತನಾಗಿ ಮೆರೆದಂಥಾ ವೀರಭರದಿ ಕಾಡುವ ಖಳರ ತರಿಯೊ ಗಂಭೀರ 10 ಶರಧಿಶಯನ ತಂದೆವರದವಿಠಲನುಶರಣು ಬಂದವರನ್ನು ನಿರುತ ಕಾಯುವನು 11
--------------
ಸಿರಿಗುರುತಂದೆವರದವಿಠಲರು
ಶ್ರೀಕರ ಅಷ್ಟಾಕ್ಷರ ಮಂತ್ರ ಗುಣವಾರಿನಿಧಿ ಅನಘ ಉತ್ತಮಮಹಾ ಪ್ರಭುವೆ ನಿನಗೆ ನಮೋ ಶ್ರೀಕರ ನಾರಾಯಣನೆ ಶರಣು ಪ ಉತ್ತಮೋತ್ತಮಗುತ್ತ ಮೋತ್ತ ಮೋದೀತ ಚೇತನಾಚೇತನರಿಗುತ್ತಮಾಶ್ರಯನು ಉತ್ತಮ ಉಮೇಶಾದಿ ಭಾರತಿಗುತ್ತಮ ವಾಯು ಆತಗುತ್ತಮೆ ಸಿರಿಗೆ ಉತ್ತಮೋತ್ತಿಷ್ಠ 1 ಶ್ರೀ ಎಂದರೆ ಜ್ಞಾನಸುಖಪೂರ್ಣೆ ಲಕ್ಷ್ಮಿಸ್ಥ ಕ ಎಂದರಾನಂದಶತ ಸುಖಾಂತಸ್ಥ ರ ಎಂದರೆ ಸ್ವರತ ಸುಖಪ್ರದ ಸುಖಾಶ್ರಯನು ಇಂದಿರೇಶನೆ ಎನಗೆ ಸೌಭಾಗ್ಯವೀಯೊ 2 ಸ್ವಾಹಾ ಆತ್ಮನು ಸ್ವವಶ ಸರ್ವವಶಿ ಶ್ರೀಪನು ಹರಿ ಹಂಸ ನಿರ್ದೋಷ ಬ್ರಹ್ಮ ನಾರಾಯಣ ಅಹರ್ನಿಶಿ ಈ ರೀತಿ ನಿನ್ನ ಸ್ಮರಿಸುವ ಜನಕೆ ನಿಖಿಳ ಐಶ್ವರ್ಯವೀವೆ 3 ಕಂಬು ಅರಿ ಶಂಖನಿಧಿ ಪದ್ಮನಿಧಿ ದಿವ್ಯ ಹಸ್ತಗಳಲಿ ಶೋಭಿತವಾಗುಂಟು ದ್ರವ್ಯ ಹಾಟಕ ರತ್ನ ಧನ ಕೊಡುವ ಕರಗಳು ದೇವಿ ಶ್ರೀ ಹ್ರೀ ಸಹ ಗರುಡಾಂಶಸಂಸ್ಥ 4 ಮೀನಾದಿರೂಪ ತ್ವದ್ ಮಸ್ತಕಾದ್ಯಂಗದಿ ಇನಗಮಿತದೀಪ್ತ ಆಭರಣ ಜ್ವಲಿಸುತಿವೆ ಶ್ರೀನಿವಾಸನೆ ಸ್ವರ್ಣವರ್ಣ ನಮೋ ಶರಣು 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಕರ ನೀನೆ ಗತಿಯಲ್ಲದೆ ಬ್ಯಾರಾಕರವಿಲ್ಲ ಕೃಪಾಕರನೆ ದುರಿತ ನಿರಾಕರಿಸಯ್ಯ ಪರಾಪರನೆ ಪ. ರಾಜಿಕ ದೈಹಿಕ ದೈವಿಕರೆಲ್ಲ ಮ- ಹೋಜಸ ನಿನ್ನೊಶವಾಗಿಹವು ಪೂಜಿಸದೆನ್ನ ಸಭಾಜಿಸು ಮಂಗಲ ಭಾಜನ ಶತ್ರು ಪರಾಜಯ ಮಾಡಿಸು 1 ಹಲವಂಗದಿ ನಾ ಬಳಲುವ ಚಿಂತೆಯು ತಿಳಿಯದೆ ಚಿನ್ಮಯ ಜಲಜ ಸುಲಭದಿ ಸಂಪತ್ಫಲಗಳ ವರ್ಧಿಸಿ ನೆಲೆದೋರೆನ್ನೊಳು ಸುಕಟಾ 2 ರೋಗಭಯಂಗಳ ನೀಗುತ ಭಕ್ತಮ- ನೋಗತ ಫಲಸಂಯೋಗಗಳ ಬೇಗದಿ ನೀಡು ಕರಾಗತ ಮಾಡು ಸು- ನಾಗ ಗಿರೀಂದ್ರ ಸರಾಗ. . . . . . 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಕರಮಾಗಿಹ ಗೋಕುಲದಲಿ ಕರು ಣಾಕರ ಕೃಷ್ಣನು ನೆಲೆಸಿರಲು ಸಿರಿ ತಾ [ಕರೆಯುವ] ಹರ್ಷದೊಳು 1 ಲಾವಣ್ಯಕೆ ಮೋಹಿಸಿ ಮನದಿ ಭಾವಜನಸ್ತ್ರದ ಬಾಧೆಯಿಂದ ಪತಿ ಭಾವದಿ ನೋಡುತ ಭರದಿ 2 ಕಾಮಿಸಿ ಕಾಡಲು ಕಾಕುತ್ಸ್ಥನು ಬಲ ರಾಮ ಸಹಜನವತಾರದಲಿ ಕಾಮಿತವಹದೆನೆ ಕಾಮಿನಿ ರಾಧಾ ನಾಮದಿ ಜನಿಸಿರೆ ಗೋಕುಲದಿ 3 ಒಂದಾನೊಂದಿನನಂದಾದಿಗಳಾ ನಂದಾನ್ವಿತಮತಿವೃತ್ತಿಯಲಿ ಒಂದಾಗಿ ಧರಾವೃಂದಾರಕರನು ವಿಂದಾರಾಧಿಪ ಭಕ್ತಿಯಲಿ 4 ನಂದನದಂತಿಹ ವನದೆಡೆಗೆ ಬಂಧುಗಳೊಂದಿಗೆ ಬಂಡಿಯನೇರಿ ಮು ಕುಂದನ ಧ್ಯಾನಿಸುತಡಿಗಡಿಗೆ 5 ಅಲ್ಲಿಗೆ ಭೂಸುರರೆಲ್ಲ ಬರಲು ಮಿತಿ ಯಿಲ್ಲದೆ ಗೋಧನ ದಾನದಲಿ ಬಲ್ಲಿದ ಭೋಜನದಲ್ಲಿ ದಣಿಸಿ ಸುಖ ದಲ್ಲಿರುತಿರಲಾ ಸಮಯದಲಿ 6 ಅಸ್ತಮಹೀಧರ ಮಸ್ತಕವನು ಸುಜ ನಸ್ತುತ ದಿನಕರನೈದಿರಲು ನಿಸ್ತುಲಮದಿ ಸಮಸ್ತರ ದೃಷ್ಟಿಗಳ ಸ್ತಗೊಳಿಸೆ ಜನ ಭಯಗೊಳಲು7 ನೆಂದು ರಾಧೆಯ ತಾ ನೋಡಿ ಎಂದರೆ ಬಂದಳು ನಗೆಗೂಡಿ 8 ಕಂದ ಬಾರೋ ಗೋವಿಂದ ಬಾ ಯದು ನಂದನ ಬಾ ಕಮಲಾಸನನ ನಂದವ ತೋರುವೆ ಶಶಿವದನಾ 9 ನೋಡಿಸುವೆನು ನೀನೊಲಿದುದನು ಬೇಡ ನಿನ್ನನೆ ಕೂಡಿಹೆನು 10 ರಾಧೆಯ ನುಡಿಗಳನಾದರಿಸುತ ಮಧು ಸೂದನ ತನ್ನಯ ಮನದೊಳಗೆ ಮೋದಚರಿತ್ರನು ಕಾಮಿನಿಗೆ 11 ಮುತ್ತನಿತ್ತು ಬಲು ಮುದ್ದಿಸಿ ಬಾಲಕ ನೆತ್ತಿಕೊಂಡು ಬಲು ಸಡಗರದಿ ನರ್ಥಿಗೆ ಸೊಕ್ಕುವ ಕಾತರದಿ 12 ಕರುಣನಾದೊಡೀಗಲೆ ಬೆರೆದು ಹರುಷದಿ ಬರುತಿರ್ದಳು ನಲಿದು 13
--------------
ವೆಂಕಟವರದಾರ್ಯರು
ಶ್ರೀಕಾಂತನನ್ನೊಲಿಸುವಾ ಬಗೆಯಾನೊರೆವೆ ಮಾನವ ಪ. ಶ್ರೀಕರಗುಣಯುತ ಪಾಕಶಾಸನವಿನುತ ಲೋಕೈಕ ವೀರನನ್ನೊಲಿಸುವಾ ತೆರನ ಪೇಳ್ವೆನಾಲಿಸು ಅ.ಪ. ಶಕ್ತಿ ಸಾಹಸಗಳಿಗೆ ಸೋಲುವನಲ್ಲ ರಕ್ಕಸಾಂತಕಮಲ್ಲ ಯುಕ್ತಿಮಾರ್ಗಕೆ ಮನವ ಸಿಲುಕಿಪನಲ್ಲ ಭಕ್ತವತ್ಸಲ ಸಿರಿನಲ್ಲ ವಿತ್ತ ಮೂಲಕದಿಂದ ಚಿತ್ತ ಚಲಿಸುವುದಲ್ಲ ಮುಕ್ತಿದಾಯಕನ ಮೆಚ್ಚಿಸಲ್ ವಿರಕ್ತಿಯಿಂ ಫಲವಿಲ್ಲ [ಮತ್ತ] ಖಿಲಾಂಡಕೋಟಿ ಬ್ರಹ್ಮಾಂಡನಾಯಕನ ಮೆಚ್ಚಿಸಲ್ ಭಕ್ತಿಯೊಂದೇ ಉತ್ತಮೋಪಾಯ ಕೇಳೆಲೈ1 ದೃಢದಿ ಶೈಶವದೊಳೇ ಅಡವಿಯನಾರಯ್ಯುತೆ ಪೊಡವೀಶನಡಿಗಿತ್ತ ತೊಡವಾವುದದ ಪೇಳ್ ಕಡು ಭಕ್ತನಾ ವಿದುರ ಪಡೆದನಸುರಾರಿಯಾಲಿಂಗನದ ಸುಖಮಂ ಮಡದಿಮಣಿ ಪಾಂಚಾಲಿ ಪಡೆದಳಕ್ಷಯಪ್ರದಾನಮಂ ತಡೆಯೇನು ಪೇಳಾ ಪರಮಾತ್ಮನೊಲ್ಮೆಗಿನ್ನು ದೃಢಭಕ್ತಿಗಿಂ ಮಿಗಿಲು ತೊಡವಾವುದಿರ್ಪುದೈ 2 ದಾನವವಂಶದಲಿ ಜನಿಸಿದನಾ [ಸು]ಜ್ಞಾನಿ ಪ್ರಹ್ಲಾದನು ಸಾನುರಾಗದಿ ಹರಿಯ ಭಕ್ತಿಯಿಂ ಧ್ಯಾನಿಸೆ ಕಂಬದಿಂ ನುನಿಸಿಯಾಕ್ಷಣದಲ್ಲಿ ಮನುಜಕೇಸರಿಯಾಗಿ ಘನದಾಕೋಪವನು ತಾಳಿ ದನುಜನ ಉರವ ಸೀಳಿ ಮನ್ನಿಸುತೆ ಭಕ್ತನಂ ನನ್ನಿಯಿಂ ಮೈದಡಹಿ ಉನ್ನತೋನ್ನತ ಪದವನಿತ್ತನಾಖಲಕುಠಾರಿಶೌರಿ ಮುನ್ನ ಭಕ್ತಿಯಿದುವೇ ಮುಖ್ಯಸಾಧನ ಕೇಳೈ 3
--------------
ನಂಜನಗೂಡು ತಿರುಮಲಾಂಬಾ
ಶ್ರೀಕೃಷ್ಣ ಕಂಡಿರೆ ಅದ್ಭುತ ಕೂಸ ಕಂಡಿರೆ ಕಂಡಿರೆ ಅದ್ಭುತ ಕೂಸ ನಾಭಿ- ಪ. ಮಂಡಲದೊಳಗಬ್ಜಕೋಶ ಅಹ ರಿಪು ಪುಂಡರೀಕ ಚಕ್ರ ಪಾಂಡವ ವನರುಹ ಚಂಡಗದಾದಂಡ ಮಂಡಿತ ಹಸ್ತನ ಅ.ಪ ಈರೇಳು ಭುವನದೊಳಿಲ್ಲದಂಥ ಚಾರು ಶೃಂಗಾರಗಳೆಲ್ಲ ಸಿರಿನಲ್ಲ ನಿನ ಗ್ಯಾರು ಸರ್ವೋತ್ತಮರಿಲ್ಲ ಅಹ ಕ್ರೂರ ಕಂಸಭಯಭೀರುಗಳಾಗಿಹ ಶೌರಿ ದೇವಕಿಯಯಿದಾರನೆಯ ಮಗುವನು 1 ಪಾದ ವೃತ್ತ ಜಂಘೋರು ಪರಿಗತವಾದ ಜಾನು ಶೃಂಗದಂತೆ ಪೂರ್ಣಮಾದ ಮಾ ತಂಗ ಹಸ್ತಸಮನಾದ ಅಹ ಪೀವರೋರು ಸಂಗಿ ಸರ್ವಲೋಕ ಮಂಗಲದಾಯಿ ಶುಭಾಂಗವಾಸನನ್ನು 2 ತ್ರಿಭುವನ ಕಮಲಾಧಾರ ನಾಳ ನೆಗೆದು ಬಂದಿರುವ ಗಂಭೀರ ನಾಭಿ ಸ್ವಗತ ಭೇದದಿಂದ ದೂರ ನಾನಾ ಬಗೆಯಾದ ಲೀಲಾವತಾರ ಅಹ ನಗುವ ರಮೆಯ ಸ್ತನಯುಗ ಮಧ್ಯದೊಳಗಿಟ್ಟ ಖಗಪತಿವಾಹನ ಮಗುವಾದ ಬಗೆಯನು 3 ಕಂಬುಸಮಾನ ಸುಗ್ರೀವ ಲಲಿ- ತಾಂಬುಜಮಾಲೆಯ ಭಾವ ವಿಧಿ- ಕೌಸ್ತುಭ ಶೋಭಾ ಕರು ಣಾಂಬುಧಿ ಭಕ್ತ ಸಂಜೀವಾ ಅಹ ಬಿಂಬಾಧರ ಕಮಲಾಂಬಕ ಮೃದುನಾಸ ನಂಬಿದ ಭಕ್ತ ಕುಟುಂಬಿಯಾಗಿರುವವನ 4 ಮಕರಕುಂಡಲ ಯುಗ್ಮಲೋಲ ದಿವ್ಯ ಕಪೋಲ ಭವ ಚಕಿತರ ಸಲಹುವ ಬಾಲ ಪೂರ್ಣ ಅಕಳಂಕ ತಾರೇಶ ಲೀಲಾ ದಿವ್ಯ ಮುಖ ಲಲಾಟ ರತ್ನ ನಿಕಲ ಕಿರೀಟ ಸೇ- ವಕರ ರಕ್ಷಿಪ ಪೂರ್ಣ ಶಿಖರೀಂದ್ರವಾಸನ5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಕೃಷ್ಣಪರಬ್ರಹ್ಮ ನಮೊ ಶೇಷತಲ್ಪಶಯಶೌರಿ ನಮೊಪ್ರಾಕೃತರ'ತಾನಂತ ನಮೊ ಪರಮಪುರುಷ ಭವದೂರ ನಮೊ 1ಮದನಾರ್ವಧುಸುರಸ್ತೌತ್ಯ ನಮೊ ಮಧುಕೈಟಭದೈತ್ಯಾರಿ ನಮೊಯದುಕುಲಾಂಬುಧಿಸುಧಾಂಶ ನಮೊ ವಾಸುದೇವ ಪರಮಾತ್ಮ ನಮೊ 2ದೇವಕಿದೇ'ಕಿಶೋರ ನಮೊ ದ್ವಿಜಸುತಪ್ರಾಣಸುರಕ್ಷ ನಮೊಭಾವಜಪಿತ ಜಗನ್ನಾಥ ನಮೊ ಭಕ್ತಪ್ರಿಯಗೋಂ'ದ ನಮೊ 3ಅಷ್ಟಮಗರ್ಭಸಂಜಾತ ನಮೊ ಅ'ುತಧೈರ್ಯಗಾಂಭೀರ್ಯ ನಮೊದುಷ್ಟಪೂತನಧ್ವಂಸ ನಮೊ ಧೇನುಕಶಕಟ'ದೂರ ನಮೊ 4ಗೋವರ್ಧನಗಿರಿಧಾರಿ ನಮೊ ಗೋಪಗೋಪಿಕಾಲೋಲ ನಮೊಶ್ರೀವಸುದೇವಾನಂದ ನಮೊ ಸಾಂದೀಪಪ್ರಿಯಬೋಧ ನಮೊ 5ಯಶೋದನಂದೋತ್ಸಾಹ ನಮೊ ವೇಣುಗಾನ'ನೋದ ನಮೊಶಿಶುಪಾಲಶಿರಚ್ಛೇದ ನಮೊ ಶಂಖಚಕ್ರಕರಧಾರಿ ನಮೊ 6ಕೌರವಗರ್ವ'ದಾರಿ ನಮೊ ಕುಬ್ಜಪಾಲಕಮಲಾಕ್ಷ ನಮೊಪಾರಿಜಾತಮಪಹಾರಿ ನಮೊ ಪಾವನತೀರ್ಥಪದಾಯ ನಮೊ 7ತೃಣಾವರ್ತನಾಶಾಯ ನಮೊ ದ್ವಾರಕಾಪುರ'ಹಾರಿ ನಮೊಮೌನಿಮಾನಸೊಲ್ಲಾಸ ನಮೊ ಮಧುರಾಪುರಿನಾಥಾಯ ನಮೊ 8'ದುರ ಅಕ್ರೂರಸ್ತೌತ್ಯ ನಮೊ ವೃಷಭ ಮ್ಟುಕ ಮುರಾರಿ ನಮೊ (?) 9ಶ್ರೀರುಕ್ಮಣಿಹೃದಯೇಶ ನಮೊ ಸಿಂಧುಶಯನ ಕಂಸಾರಿ ನವನೀತ ನಮೊ ಜಂಭಭೇದಿಸುತಪ್ರೇಮ ನಮೊ 10ವೈಜಯಂತಿವನಮಾಲ ನಮೊ ವನದಶ್ಯಾಮಲವರ್ಣ ನಮೊವಜ್ರಸ್ಥಗಿತಕಿರೀಟ ನಮೊ ವರಮಣಿಕುಂಡಲಧರಣ ನಮೊ 11ಭುಜಕಿರೀಟಶುಭಗಾತ್ರ ನಮೊ ಭುವನಮೋಹನಾಕಾರ ನಮೊಅಜಪಿತಕನಕಸುಚೇಲ ನಮೊ ಆರ್ತಶರಣ್ಯೋದ್ಧಾರ ನಮೊ 12ಕಾಲಯವನಮದಖಂಡ ನಮೊ ಕೋಟಿರ'ಪ್ರಭಾಭಾಸ ನಮೊಮಾಲಾಕಾರುಪಕಾರ ನಮೊ ಲೀಲಾಮಾನುಷವೇಷ ನಮೊ 13ದ್ರೌಪತಿಕಭಯೋದ್ಧಾರ ನಮೊ ಧನಂಜಯಾದಿಸುಪಕ್ಷ ನಮೊಶ್ರೀಪತಿಸಕಲಾಧಾರ ನಮೊ ಸರ್ವಭೂತಹೃದಯಾತ್ಮ ನಮೊ 14ನಿಖಿಲಚರಾಚರದೂಪ ನಮೊ ನಾಮರೂಪಕ್ರಿಯರ'ತ ನಮೊಅಖಂಡಮಚಲಾಕಾರ ನಮೊ ಅದ್ಭುತಮ'ಮಾಪಾರ ನಮೊ 15ಸಗುಣನಿರ್ಗುಣಾತೀತ ನಮೊ ಸತ್ಯಾಸತ್ಯಸುಬೋಧ ನಮೊನಿಗಮಾಗನಶೃತಿಸಾರ ನಮೊ ನಿರ್ವಿಷಯಾಭವಪ್ರಣವ ನಮೊ 16ಅಜಪಸೂತ್ರಸಂಕೇತ ನಮೊ ಹಂಸತತ್ವಸುಪ್ರಕಾಶ ನಮೊತ್ರಿಜಗಾಂತರ್ಬ'ವ್ಯಾಪ್ತ ನಮೊ ತ್ರಿಗುಣಾಪ್ರತಿಭಾಗಮ್ಯ ನಮೊ 17ತುಳಸಿರಾಮ ಗುರುಸ್ತೌತ್ಯ ನಮೋ ತಾಕ್ಷ್ರ್ಯಾಚಲವರವಾಸ ನಮೊಮುಳಬಾಗಿಲಪುರಿಪಾಲ ನಮೋ ಮಹಾನುಮಪ್ರಿಯ ವಂದ್ಯ ನಮೋ 18ಮಂಗಳಮಘಚಯಭಂಗ ನಮೋ ಮಂಗಳಂ ಪಾ' ಪಾ' ನಮೋರಂಗಸ್ವಾ'ುದಾಸ ಪೋಷ ನಮೋ ಮಂಗಳಾಂಗ ಶ್ರೀಕೃಷ್ಣ ನಮೋ 19
--------------
ಮಳಿಗೆ ರಂಗಸ್ವಾಮಿದಾಸರು
ಶ್ರೀಗದಾಧರ ಪಾಹಿಮಾಂ ಹರೆ ಭೋಗಿಶಯನ ಶೌರೇ ಪ ಯಾಗ ಯೋಗ ಗಮ್ಯ ನೃಹರೆ ತ್ಯಾಗಶೀಲ ಭೋ ಮುರಾರೆ ಅ.ಪ ಮೃತಮಾನವ ಸುಗತಿ ದಾತಾ ಪತಿತಾನತ ದಿವ್ಯ ನೀತ ಹರಣ ಖ್ಯಾತಾ ತಾಪ ಸನ್ನುತ ಚರಿತಾ 1 ಶೃತಿ ಪುರಾಣ ಭರಿತ ವಿದಿತ ರಥಾಂಗ ಮಣಿರಂಜಿತ ವಿನುತ ನಮಿತ ಖ್ಯಾತಮಾಂಗಿರಿ ವರೂಥ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಗುರುಜಗನ್ನಾಥದಾಸರಾಯರ ಸ್ತೋತ್ರ ಹರುಷದಿ ಕರಪಿಡಿದು ಪರಮ ಕರುಣದಿಂದ ಹರಿದಾಸ್ಯವಿತ್ತು ಉ - ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ಪ ವರದೇಂದ್ರಾರ್ಯರÀು ನಮ್ಮ ಶರಣನು ಇವನಿಗೆ ಕರುಣಿಸೆಂದಾಜ್ಞಾಪಿಸೆ ತರುಳನ ಶಿರದಲಿ ಕÀರವಿಟ್ಟು ಕೃಪೆಯಿಂದ ಗುರುತು ತೋರಿದಕೆ ನಾ ಪರಮಧನ್ಯನೆಂಬೆ 1 ಮರುತಮತದತತ್ವ ಹರಿಕಥಾಮೃತಸಾರ ವರರಹಸ್ಯಗಳೆಲ್ಲವ ಸರಸವಾಗುತೆಂ ಅರಹುವೆವೆಂತೆಂಬ ವರವಾಕ್ಯದಂತೆನ್ನ ಪರಿಪಾಲಿಪುದಯ್ಯ 2 ಹರಿಮುನಿದರು ಗುರುಕರುಣಿಪನೊಮ್ಮಿಗೆ ಗುರು ಮುನಿಯೆ ಹರಿ ಪೊರೆಯ ಹರಿಯ ಕೃಪೆಗೆ ಮುಖ್ಯ ಗುರುವೆ ಕಾರಣನೆಂದು ನೆರೆನಂಬಿರಲು ನೀನರಿಯದಂತಿಪ್ಪುದೆ 3 ಮರುತ ಮತಾಬ್ಧಿಚಂದಿರ ಗುರುರಾಜರ ವರಬಲದಿ ಮೆರೆವ ಹರಿಭಕ್ತಾಗ್ರಣಿ ನಿಮ್ಮ ಚರಿತೆ ಬಣ್ಣಿಸುವೆನಾ ಹರಿವಲಿಯುವÀ ತೆರ ಕರುಣಿಸೆನ್ನಯನಿಜ4 ಬರಿದೆ ಬಾಹ್ಯಾಚಾರ ವಿರಚಿಸದಲೆ ಮನದಿ ಹರಿರೂಪ ಕಾಂಬತೆರದಿ ವರದೇಶ ವಿಠಲನ ಸಿರದಾಸ್ಯತನವೆಂಬ ಗುರುತುತೋರುವುದಯ್ಯ ಗುರುಜಗನ್ನಾಥಾರ್ಯ 5
--------------
ವರದೇಶವಿಠಲ