ಒಟ್ಟು 2406 ಕಡೆಗಳಲ್ಲಿ , 111 ದಾಸರು , 1903 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಕೋ ರಾಮಚಂದ್ರಬಂದನದಕೋ ರಾಮಚಂದ್ರನವನಿಜೆಯ ಕಳುಹೆಂದರೆ ವಿಭೀಷಣನಕುಂದನುಡಿದಣ್ಣಪ.ಲೆಂಕರೊಳೊರ್ವನು ಮಾಭುಂಕರಿಸಿ ವನದಿಶಂಕ ರಕ್ಕಸರಳಿದು ಲಂಕೆ ಉರುಹಿದಸಂಖ್ಯೆರಹಿತ ಪ್ಲವಗರಂಕಪಡೆಯೊಡನೆ ಬಹಪಂಕರುಹಮುಖಿ ಕೊಡೆನಲಹಂಕರಿಸಿದಣ್ಣ 1ಜೀವರಂತಲ್ಲಹರಿಸಾವು ರಚಿತ ನಿಮಗುಶಿವನ ಬಿಲ್ಮುರಿದ ಭಾವರಿವಿರಿನೀವು ರಕ್ಕಸರಾಕೆ ದೇವರರಸಿಯ ಬಯಸಲಾವರಿಸದೆನೆ ಕೊಲ್ಲಲಿ ಕಾವರಿಸಿದಣ್ಣ 2ಅನುಜವಾಕ್ಯವಕೇಳಿದನುಜನುಗ್ರದಿ ಹುಲುಮನುಜ ಸರಿಯೇ ನನ್ನರಣಜಯಿಪನೆಇನಜಭವ ಶುಭಕಂಠಾಂಜನಿಜ ಜಾಂಬವ ಮುಖ್ಯರದನುಜಗ್ರಹಿಸದರಿವನೆನೆ ಜಡಧಿಯಣ್ಣ3ವಿಧಿಯಲೇಖನ ನೋಡಿ ಕುದಿಯಲಾರ್ದಟ್ಟಿಹರುಸುಧೆಯೆ ವಿಷವೈ ಕ್ರೂರ ಹೃದಯಗೆನಲುಬದಿಯ ತಿವಿದೆಲೆ ಹೇಡಿ ಮದೀಯಾರಿ ಹೋಗೆನ್ನೆ ಅಂಬುಧಿಯಿಳಿದ ರಾಮಕುಶಲುದಯವೆಲ್ಲಣ್ಣ 4ದೂಷಣೋಕ್ತಿಯಿಂ ಚಿಂತಾಕೃಶನಾಗಿ ರಾಮಪದದರ್ಶನಾಪೇಕ್ಷದಲಿ ವಿಭೀಷಣ ನಿಲುತಪ್ರಸನ್ನವೆಂಕಟರಾಮನಶನಿಶರಕಂಗನಗನುಸಿ ನುಗ್ಗಹುದು ಸತ್ಯ ಪುಸಿನುಡಿಯೆನಣ್ಣ 5
--------------
ಪ್ರಸನ್ನವೆಂಕಟದಾಸರು
ಬಂದಳು ಸಿರಿಲಕುಮಿಯು ನಮ್ಮ ಮನೆಗೆತಂದಳೈಶ್ವರ್ಯಂಗಳ ಪಇಂದಿರೆಹರಿಯುರ ಮಂದಿರ ನಿತ್ಯಾನಂದನಿಲಯಭವಬಂಧ ವಿಮೋಚನಿಅ.ಪಸುಂದರಾಂಗಿ ಸುಗುಣಾಸಿಂಧುಜಗಜ್ಜನನೀಇಂದುಸೋದರಿ ಪೂರ್ಣೇಂದು ಬಿಂಬಾನನೆ 1ಯೆಂದಿಗೆ ಸಂಪದಕುಂದಬರವ ಹಾಂಗೆನಿಂದುಪಾಲಿಸುವನೆಂದು ದೀಕ್ಷೆಯು ಮಾಡಿ2ಬೃಂದಾರಕಸಂಕ್ರಂದನವಂದಿತೆಮಂದಹಾಸದಿ ರಘು ನಂದನ ಸುಪ್ರಿಯೆ 3ಕಂದ ತುಲಸಿದಾಸನೆಂದು ಸಂಭ್ರಮದಿ ಮುಚುಕುಂದವರದ ಪಾದದ್ವಂದ್ವ ಭಕ್ತಿಯು ಕೊಡಲು 4
--------------
ತುಳಸೀರಾಮದಾಸರು
ಬಂದಿದೆ ದುರಿತಘಸಂಗ ಶ್ರೀರಂಗಮಂದಮತಿಯೆಂದುಪೇಕ್ಷಿಸದುಳುಹೊ ಪ.ಒಲ್ಲೆನೆಂದರೆ ಬಿಡದೀ ಮನ ತಿಳಿದತ್ತೆಕ್ಷುಲ್ಲ ವೃತ್ತಿಯ ಸೇರಿ ಬಿಡಲೊಲ್ಲದುಕಲ್ಲುಗೊಂಡಿದೆ ಪುಣ್ಯಮಾರ್ಗಕ್ಕೆ ಇದರೊಳುಫುಲ್ಲನಾಭನೆ ಆವ ತೆರದಿಂದ ಸಲಹೊ 1ಕೆಂಡವ ಕೊಂಡು ಮಂಡೆಯ ಬಾಚುತಿದೆಪರಹೆಂಡಿರು ವಿತ್ತದಾಸೆಗೆ ತೊಡಕಿಕಂಡರೆ ಸೊಗಸದು ಭಕುತಿ ವೈರಾಗ್ಯವಪುಂಡರೀಕಾಕ್ಷನೆಗತಿನೀನೆ ಬಲ್ಲೆ2ಮೆಲ್ಲ ಮೆಲ್ಲನೆ ದುಷ್ಕರ್ಮವ ಸಾಧಿಸಿಬಲ್ಲಿದಜವನವರ ಬರಮಾಡಿದೆವಲ್ಲಭಪ್ರಸನ್ವೆಂಕಟ ಕೃಷ್ಣನಿಲ್ಲಿಸು ನಿನ್ನ ನಾಮವ ನಾಲಿಗೆಯಲಿ 3
--------------
ಪ್ರಸನ್ನವೆಂಕಟದಾಸರು
ಬಂದೆಯಾ ಪರಿಣಾಮದಿ ನಿನ್ನಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗದಿ ಪಸಂಚೀತ ಪ್ರಾರಬ್ಧ ಕರ್ಮಂಗಳನೆಲ್ಲಕಿಂಚಿತು ಮಾಡಿ ಸಂಕೋಲೆಯ ಹಾಕಿ ||ಮಿಂಚುವ ಧನ - ಪುತ್ರ ದಾರೇಷಣಂಗಳವಂಚಿಸಿ ಕವಲು ದಾರಿಯ ಬಿಟ್ಟು ಮಾರ್ಗದಿ 1ಕಾಮವ ಖಂಡಿಸಿ ದ್ರೋಹವ ದಂಡಿಸಿನಾಮರೂಪ ಕರ್ಮಂಗಳ ನಿಂದಿಸಿ ||ತಾಮಸಕರ್ಮನಡತೆಯ ತಗ್ಗಿಸಿ ನಿರ್ನಾಮ ಮಾಡಿ ಮದ-ಮತ್ಸರಂಗಳನೀಗಿ2ಅಷ್ಟಭೋಗಂಗಳ ನಷ್ಟಂಗಳ ಮಾಡಿಅಷ್ಟೈಶ್ಚರ್ಯವ ಮಟ್ಟು ಮಾಡಿ ||ಅಷ್ಟ ಪ್ರಕೃತಿಗಳ ಕುಟ್ಟಿ ಕೆಡಕಿ ಬಹಳನಷ್ಟತುಷ್ಟಿಗಳಲ್ಲಿ ದೃಷ್ಟಿಯೇನಿಲ್ಲದೆ 3ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳನೆಲ್ಲಬೀಳುಗೆಡಹಿ ಪಂಚಭೂತಂಗಳ ||ಪಾಳು ಮಾಡಿ ಪಂಚ ಪಂಚ ಇಂದ್ರಿಯಗಳಕೋಳಕೆ ತಗುಲಿಸಿ ಕೊನಬುಗಾರನಾಗಿ 4ಹೊಳೆವ ಪ್ರಪಂಚದ ಬಲೆಯ ಬೀಸಿ ಸಂಗ-ಡಲೆ ಸಾಗಿ ಬರುತಿಹ ದಾರಿಯೊಳು ||ಒಲಿದು ಮುಕ್ತಿಯನೀವ ಪುರಂದರವಿಠಲನುಬಲವನಿತ್ತುದರಿಂದೆ ನಾನು ನೀನೆನ್ನದೆ 5
--------------
ಪುರಂದರದಾಸರು
ಬಂದೆಯಾ ಬಾರೊ ಗೋಪಾಲ ಕೃಷ್ಣಬಂದೆಯಾ ಬಾರೊ ಪ.ಇಲ್ಲಿಯ ಗೊಲ್ಲತೇರೆಲ್ಲರುಬಲ್ಲಿದಕಾಮುಕ ನಲ್ಲೇರುಫುಲ್ಲಲೋಚನ ನಿನ್ನ ಮುದ್ದಿನ ಮೊಗವಮೆಲ್ಲನೆ ಚುಂಬಿಸಿ ಬಿಡರೊ ಮಗುವೆ 1ಚಿಕ್ಕವನೆಂದಾಡಿಸಿ ನಿನ್ನಚಕ್ಕಂದಿಲಿ ಬಾಡಿಸಿ ಚಿನ್ನಸಕ್ಕರೆ ಮಾತಲಿ ಬಿಗಿದಪ್ಪುವರೊಕಕ್ಕಸಕುಚದಂಗನೆ ಗೋಪಿಯರೊ 2ಇರುಳ್ಹಗಲೆನ್ನ ಕಂದನ್ನಮರುಳಿಕ್ಕುವರೆಂದಂಜುವೆ ನಾತರಳನ ಕಾಲಿಂಗೆರಗುವೆ ನೋಡೋತರಳೇರೊಡಗೂಡಾಡಲಿ ಬೇಡೊ 3ನಿಲ್ಲದೆ ನಿನ್ನ ಬರಮಾಡುವರೊಚೆಲ್ವಹ ಹಣ್ಣುಗಳ ನೀಡುವರೊಒಳ್ಳೆ ನಾರೇರನುದಿನ ನಿನ್ನಬುಲ್ಲಿ ಬೆಲ್ಲಕೆ ಮನಸೋತಿಹರಣ್ಣ 4ವಿಗಡೇರ ದೃಷ್ಟ್ಯಾಗಲೆತಗಲಿದವೈ ನಿನ್ನ ಮೈಯಲಿಅಗಲದಿರೆನ್ನ ಪ್ರಸನ್ನವೆಂಕಟನಗಪತಿ ಬಡವರ ಧನವೆ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಬನ್ನಿಗಡ ಸುಜನರೆಲ್ಲ ಪಾವನಕಾಯ ಸುಜನಪ್ರಿಯಪುಣ್ಯ ಸತ್ಯನಾಥಯತಿರನ್ನನ ಪಟ್ಟಣಕಿಂದು ಪ.ಪರಬೊಮ್ಮನೆಂಬುವ ಮನೆದೈವನಾಗಿಹಪರಸುಖವನೀವ ಮರುತದೇವನೆಂಬಾತಪರಮಪದದ ಗುರುವು ಯುಕ್ತಿಯಿಂದ ಕಾಪುರುಷರಗಲಿಸುವಂತೆ ಸತ್ಯನಾಥಪುರಪತಿಗೆ ಬೋಧಿಸುವ ಪರಮವಾರ್ತೆಯ ಕೇಳ 1ನವಭಕುತಿರತುನದಿಂದ ನಿರ್ಮಿತ ಪ್ರಾಕಾರಕೆನವದ್ವೇಷಿಗಳು ದಾಳಿಯಿತ್ತು ಅಂಡಲೆಯಲು ದಾನವಾರಿಯ ನಾಮಾಯುಧವ ಸತ್ಯಾಭಿನವÀÀ ತೀರ್ಥರೆಂಬೊ ಪುತ್ರಗೆ ನೀಡುತಮಾನವ ಹರಿಯೆಂಬಸುರರ ಮಡುಹಿಸುವುದು ನೋಡ 2ಕಾಯಜಚೋರನೆಂಬವ ತಾ ಕಳ್ಳ ಹನ್ನೊಂದರ ಕೂಡಿಕಾಯವೆಂಬ ರಾಜಗೃಹಕೆ ಕನ್ನವಿಕ್ಕುವುದ ಕಂಡುಕಾಯುವ ಜ್ಞಾನೆಂಬ ಭಟನು ಅಟ್ಟಲವನಕೈದು ಚಾಪವ ಸೆಳೆದು ಮಿಕ್ಕು ಚೋರನೀಕಾಯಕಟ್ಟಿಸುವಂಥ ಕರುಣಿಗೆ ನಮಿಸುವ3ಹರಿದಾಸರೆನಿಸುವ ಹಲವು ದೊರೆಗಳುಂಟುಹರದಾರಿಕ್ಕೆಲದಿ ಪಣ್ಯವ ಮಾಡಿ ಸುಧೆüವೀರಿಹರಿತತ್ವ ನಾಣ್ಯದೊಳು ರಾಮನಾಮದಹಿರಿದುಮುದ್ರೆಯನೊರೆದು ಪರಂಪರಹರುಷ ವ್ಯವಸಾಯವುಂಟು ಹಿರಿಯಾಮೃತವುಣ್ಣ 4ಅಭಿನವ ಚಂದ್ರಿಕೆದೋರಿ ಅಭಿಜ್ಞಾನತೆ ಮೆರೆದಅಭೀತ ಮಂಗಳಗಾತ್ರ ಅಮಿತ ಬುಧರಮಿತ್ರಅಭಿಜÕಗುರು ಸತ್ಯನಿಧಿಯ ಸುತ ಸತ್ಯನಾಥಅಭು ಪ್ರಸನ್ವೆಂಕಟೇಶನ ಭಜಕನ ಕವಿತಅಬುಜ ಪರಿಮಳಮಂದಾನಿಲವಿಡಿವಳಿಯಂತೆ 5
--------------
ಪ್ರಸನ್ನವೆಂಕಟದಾಸರು
ಬಾ ದೀನವತ್ಸಲ ಲಕ್ಷ್ಮೀನಿವಾಸ ಶ್ರೀವೆಂಕಟೇಶಮಾಧವಮಧುರಿಪು ಮಾನುಷವೇಷ ಶರಣಾಗತಪೋಷಪ.ವೇದಾಗಮ್ಯ ದಯೋದಧಿ ಗೈದಪ-ರಾಧ ಕ್ಷಮಿಸಿ ಸುಗುಣೋದಯನಾಗುತ ಅ.ಪ.ಅನಾಥ ಜನರ ಕಾಮಧೇನು ಕಾಯೊ ಎಮ್ಮನುದಾನವಕಾನನಕಲ್ಪಕೃಶಾನು ಸರ್ವೋತ್ತಮ ನೀನುಆನತಜನ ಸುತ್ರಾಣಿಸುವಂತೆ ಪ್ರ-ದಾನಿಯಂತೆ ಶತಭಾನು ಪ್ರಕಾಶದಿ 1ಕೋಟಿ ಬ್ರಹ್ಮಾಂಡವ ಕಾಯುವ ಮಹಿಮ ಸದ್ಗುಣಗಣಧಾಮಹಾಟಕವಸನ ಕೈರವಶ್ಯಾಮ ಮುನಿಮನವಿಶ್ರಾಮಕಾಟಕ ಮನಸಿನ ಮಾಟವ ನಿಲ್ಲಿಸಿಘೋಟಕಾಸ್ಯ ನರನಾಟಕಧಾರಿ 2ಸೇನಾನಾಯಕನಿಲ್ಲದ ಸೇನೆ ಕಂಡರೆ ತಾನೆಭೂನಾಥಗಿಲ್ಲವೇನು ಬೇನೆ ಉಂಟೆಂಬುದು ನೀನೆಕಾಣಿಸದೆಮ್ಮಲಿ ಮೌನವ ಮಾಳ್ಪರೆದೀನಜನರ ದುಮ್ಮಾನಗೊಳಿಸುವರೆ 3ಹಿಂದೆಮ್ಮ ಕಾಯ್ದವ ನೀನೆಹರಿಸುರನರ ಕೈವಾರಿಮಂದಜ್ಞಾನಿಗಳ ತಪ್ಪನುಮಾರಿಮೂರ್ಲೋಕೋದ್ಧಾರಿಹೊಂದಿದವರಿಗೆಂದೆಂದಿಗು ಬಿಡನೆಂ-ಬಂದವ ತೋರಿ ಆನಂದವ ಬೀರುತ 4ಸರ್ಪಾದ್ರಿಯಿಂದ ಓಡಿಬಂದ ಕಾರ್ಕಳದೊಳು ನಿಂದಚಪ್ಪರ ಶ್ರೀನಿವಾಸ ಮುಕುಂದ ಪರಿಪೂರ್ಣಾನಂದಒಪ್ಪಿಸಿದೆಮ್ಮಭಿಪ್ರಾಯವ ತಿ-ಮ್ಮಪ್ಪ ಲಕ್ಷ್ಮೀನಾರಾಯಣ ಸಲಿಸಲು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾ ಬಾ ಬಾ ಬಾರೋ ಕೃಷ್ಣಬಾರೋ ಮುಖವ ತೋರೋ ಪಬಾರೋ ಮುಖವ ತೋರೋಸರಸಾಮೃತ ಬೀರೋ ಬಾ ಬಾ ಬಾ 1ಸಾ ಸಾ ಸಾ ಸಾಕೋ ನಿನಗೀಲೋಕಮಾಯ ಮೋಹನಾ |ಲೋಕಮಾಯ ಮೋಹನಾ |ಶೋಕನೇಕ ನಾಶನಾ 2ಕೋ ಕೋ ಕೋ ಕೊಡಿಸೊನಮ್ಮ ಉಡುವ ಶೀರೆಕುಪ್ಪಸಾ |ಉಡುವ ಶೀರೆ ಕುಪ್ಪಸಾ |ಮಡದಿಯರಿಗೆ ಒಪ್ಪಿಸಾ 3ಅಲ್ಲ ಲ್ಲ ಲ್ಲ ಲ್ಲದಿದನೆಲ್ಲಗೋಪಿವಲ್ಲಭನೊಳ್ | ಎಲ್ಲಗೋಪಿವಲ್ಲಭನೊಳ್ |ಸೊಲ್ಲಿಸುವೆವು ನಿಲ್ಲದೇ 4ನಂದಂದನ ನಂದಗೋಪಿ|ಕಂದನೇ ಮುಕುಂದನೆ |ಕಂದನೇ ಮುಕುಂದನೇ|ಸುಂದರಾ ಗೋವಿಂದನೇ 5
--------------
ಗೋವಿಂದದಾಸ
ಬಾಯ್ಬಡಿಕರಿಂದ ನಾನು ಬದುಕಿದೆನು - ಅವರು -|ಮಾಡಿದುಪಕಾರವ ಮರೆಯೆ ಶ್ರೀ ಹರಿಯೆ ಪಹಂಗಿಸಿ ಹಂಗಿಸಿ ಮನವ ಹರಿಯಲಿ ನಿಲಿಸಿದರು |ಭಂಗಿಸಿ ಭಂಗಿಸಿ ಬಯಲಾಸೆ ಕೆಡೆಸಿದರು ||ಕಂಗೆಡಿಸಿ ಕಂಗೆಡಿಸಿ ಕಾಮ ಕ್ರೋಧ ಬಿಡಿಸಿದರು |ಹಂಗಿಸಿದವರೆನ್ನಪರಮಬಂಧುಗಳು1ಜಾಡಿಸಿ ಜಾಡಿಸಿ ಎನ್ನ ಜನ್ಮಗಳ ಕಳೆದರು |ಹೂಡಿಸಿ ಹೂಡಿಸಿ ಹುಟ್ಟು ಹೊಂದುಗೊಳಿಸಿದರು ||ಪೀಡಿಸಿ ಪೀಡಿಸಿ ಎನ್ನ ಪ್ರಯತ್ನವ ಕಳೆದರು |ಕಾಡಿ ಕಾಡಿಕೈವಲ್ಯಪದವಿತೋರಿದರು2ಕಾಸು ಮುಟ್ಟಿದಾಗಕಾಯಪ್ರಾಯಶ್ಚಿತ್ತಕಿಕ್ಕಿದರು |ದೂಷಿಸಿ ದೂಷಿಸಿನಿರ್ದೋಷಮಾಡಿದರು ||ಲೇಸನು ಕೊಡು ನಮ್ಮಪುರಂದರವಿಠಲನೆ ||ದಾಸನೆಂದೆನಿಸುವರನುದಿನದಲಿ ಎನ್ನ 3
--------------
ಪುರಂದರದಾಸರು
ಬಾರೇ ಗೋಪಮ್ಮ ನಿನ್ನ ಬಾಲಯ್ಯನಳು ತಾನೆ |ಬಾರೇ ಗೋಪಮ್ಮ - ನಾವ್ ||ಆರೂ ತೂಗಿದರೂ ಮಲಗನು ಮುರವೈರಿಬಾರೇ ಗೋಪಮ್ಮ ಪನೀರೊಳಗಾಡಿ ಮೈಯೊರಸೆಂದು ಅಳುತಾನೆ_ಬಾರೆ-|ಮೇರುವ ಹೊತ್ತು ಮೈಭಾರವೆಂದಳು ತಾನೆ-ಬಾರೆ-||ಧರೆಯ ನೆಗಹಿ ತನ್ನದಾಡೆನೊಂದಳು ತಾನೆ-ಬಾರೆ-|ದುರುಳರಕ್ಕಸನ ಕರುಳ ಕಂಡಳು ತಾನೆ-ಬಾರೆ-1ನೆಲವನಳೆದು ಪುಟ್ಟ ಚರಣನೊಂದಳು ತಾನೆ-ಬಾರೆ-|ಛಲದಿಂದ ಕೊಡಲಿಯ ಪಿಡಿವೆನೆಂದಳು ತಾನೆ-ಬಾರೆ-||ಬಲುಕಪಿಗಳ ಕಂಡಂಜಿಕೊಂಡಳು ತಾನೆ-ಬಾರೆ-|ನೆಲುವಿನ ಬೆಣ್ಣೆ ಕೈ ನಿಲುಕದೆಂದುಳು ತಾನೆ-ಬಾರೆ- 2ಬಟ್ಟ ಬತ್ತಲೆ ನಿಂತು ಎತ್ತಿಕೊ ಯೆಂದಳು ತಾನೆ-ಬಾರೆ-|ಶ್ರೇಷ್ಠ ತೇಜಿಯನ್ನು ಹತ್ತಿಸೆಂದಳು ತಾನೆ-ಬಾರೆ-||ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ-ಬಾರೆ-|ಸೃಷ್ಟಿಯೊಳು ಪುರಂದರವಿಠಲ ಕರೆಯುತಾನೆ-ಬಾರೆ 3
--------------
ಪುರಂದರದಾಸರು
ಬಿಟ್ಟು ಹೋಗುವರೇನೊ ಕೃಷ್ಣಕೋಮಲೆಯರವೃಷ್ಟಿವÀರ್ಯ ಸಕಲ ಇಷ್ಟದ ಬಾಲೆಯರ ಪ.ಮಿತ್ರೆಯರ ಕೂಡಿ ರಮಣ ಚಿತ್ತದಿ ಚಿಂತಿಸಿರಾತ್ರಿ ಕೊಳಲು ವಿಚಿತ್ರದಿಂದ ಊದಿದಿ 1ಎಲ್ಲ ವಿಷಯ ಬಿಟ್ಟು ನಿಲ್ಲದೆ ಬಂದರುಒಲ್ಲದೆ ಅಡಗಿದಿ ಕಲ್ಲೆದೆ ಅಂದ ಪಾರ್ಥ 2ಇಟ್ಟು ನಿನ್ನಲೆ ಮನ ಬಿಟ್ಟು ವಿಷಯ ಸುಖಗಟ್ಯಾಗಿ ರಾತ್ರಿಲೆ ಬಂದು ಎಷ್ಟು ನಂಬಿದ್ದಾರಲ್ಲೊ 3ಇಂಥ ವಂಚಕನೆಂದು ಕಾಂತೆಯರು ಅರಿಯರುಭ್ರಾಂತಿಯ ಗೈಸಿದಿ ಎಂತು ಅರ್ಜುನ ನುಡಿದ 4ಹಸಿದವಗೊಂದೆÉ ತುತ್ತು ಅಶನವÀ ಕೊಟ್ಟು ಅನ್ನವ್ಯಸನವ ಹಚ್ಚಿದಂತೆ ಕುಸುಮನಾಭ ಮಾಡಿದ 5ಬೆಂದು ಬಿಸಲೆÉೂಳು ಬಹಳ ಬಂದ ಪುರುಷಗೆಉದಕಒಂದು ಗುಟುಕುಕೊಟ್ಟು ಆನಂದವ ಮಾಡಿದೆ 6ಕಂದಗೆ ಸ್ತನ ಕೊಟ್ಟುಬಿಂದು ಬಾಯೊಳಗೆ ಇಟ್ಟುಹಿಂದಕ್ಕೆ ಸರೆಯದಂತೆ ತಂದೆ ರಾಮೇಶ ಮಾಡಿದ 7
--------------
ಗಲಗಲಿಅವ್ವನವರು
ಬುದ್ಧಿಯ ಪೇಳೇ ಗೋಪಮ್ಮ ನಿನ್ನಮುದ್ದು ಮಗನ ಲೂಟಿ ಘನವಾದುದಮ್ಮ ಪಸದ್ದು ಇಲ್ಲದ ಹಾಗೆ ಬಂದಾನೆಕದ್ದು ಬೆಣ್ಣೆಯನೆಲ್ಲ ತಿಂದಾನೆಎದ್ದೊಮ್ಮೆ ನೋಡಿ ನಾ ಗದ್ದಲ ಮಾಡಲುಸದ್ದು ಮಾಡದೆ ಕೃಷ್ಣ ಹದ್ದನೇರುತ ಪೋದ 1ಜಲಜ ಗಂಧಿನಿಯರು ಕೂಡೀ ನಾವುಜಲದೊಳಾಡುವುದನ್ನು ನೋಡೀಜಲಜನಾಭನು ಮರದ ತಲೆಯ ಮೇಲ್ಕಟ್ಟಿದಸುಲಿದಿಟ್ಟ ಸೀರೆಯ ಬಲರಾಮನನುಜ 2ಹಾಲ ಮಾರಲು ಪೋದ ಮಗಳಾ ಕಂಡುಮೇಲೆ ಬೀಳುತ ಮಾಡೆ ಜಗಳಾಶಾಲೆಯ ಸುಲಿದು ಬತ್ತಲೆ ನಿಲ್ಲಿಸಿದನುಮೂರ್ಲೋಕದೊಡೆಂiÀುಶ್ರೀಲೋಲಗೋವಿಂದ 3
--------------
ಗೋವಿಂದದಾಸ
ಬೇಡವೆನ್ನೆ ನೀನು ಗೋಪಮ್ಮ ಪಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||ಬೆನ್ನು ಒರಸಲು ಬಂದ-ಬೆದರೇಳ್ವರ |ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |ಚಿಣ್ಣಸಿರಿಗೇಡಿಯು ಎನ್ನ ನಾಚಿಕೆಗೊಂಡ1ನೆಲುವಿಗೆ ಹಾಲ ಏರಿಸುವಳ ಕೈವಿಡಿದು |ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ 2ಮನೆಮನೆಯೊಳು ದಂಪತಿಗಳಿದ್ದ ಮಂಚ-|ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||ಮನು ಮಥನಯ್ಯ ಕಾಣೆ-ಈತನು ಮಹಾ |ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ ಆರಿಗೊಪ್ಪುವುದು ಕೃಷ್ಣ ಪ.ಎಲ್ಲ ಜಗದ ತಂದೆ ನಿನ್ನ ಮಗ ಆ ನಂದನೊಲ್ಲಭೆಯ ಕಂದನಾದಚೆಲ್ಲುವೆ ಅರಸಿ ನಿನ್ನಂಗನೆ ಲಕುಮವ್ವಗೊಲ್ಲತೇರಿಗೆಂತು ಸೋತಿದ್ದೆ ಸ್ವಾಮಿ 1ಮಂದಿ ರಾಜಾಂಡಕೋಟಿಗೆ ಗುರುವರ್ಯ ನೀನುಸಾಂದೀಪನi್ಞ್ಯಳಿಗವ ಮಾಡ್ದೆಮಂದಜಾಸನಆ ವಾಯು ನಿನ್ನ ಓಲೈಸುತಿರೆಕಂದನೆನಿಸಿದೆ ಯಶೋದಾದೇವಿಗೆ ಸ್ವಾಮಿ 2ಮೂರು ಚಾವಡಿ ಪಾರುಪತ್ಯದ ಪ್ರಭುವೆ ನೀನೇರಿದೆ ನರನ ಬಂಡಿಯನುದ್ವಾರಕೆಯ ಅರಸೆ ನೀ ಚೀರಿದರೋಡಿ ಬಂದುಆ ರಮಣಿಯಮಾನಉಳಿಸಿದೆ ಸ್ವಾಮಿ3ಮುಕ್ತದ್ರುಹಿಣರಿಂದಸೇವ್ಯನೀ ಧರ್ಮನಮಖದೊಳೆಂಜಲ ಪತ್ರ ತೆಗೆದೆಪ್ರಕಟಿತನಿತ್ಯಮಹಾತೃಪ್ತ ನೀ ವಿದುರನಕಕುಲತೆಯ ಔತಣಗೊಂಡು ಮುದಿಸಿದೆ ಸ್ವಾಮಿ 4ಹಲವು ಶ್ರ್ರುತಿಗಳಿಗೆ ನೀ ನಿಲುಕದೆ ನೆನೆದವಗೆಸುಲಭದಿ ಪೊರೆವ ಉದಾರಿಬಲದ ಮ್ಯಾಲೊಲಿಯುವ ದೊರೆಯಲ್ಲ ಭಕ್ತರಛಲರಕ್ಷ ಪ್ರಸನ್ನವೆಂಕಟ ಜಗದಧ್ಯಕ್ಷ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು
ಭಾರತೀದೇವಿ ಸ್ತೋತ್ರಗಳು120ಶರಣು ಶ್ರೀ ಮಾರುತನ ರಾಣಿಯೆ |ಶರಣು ಮಂಗಳ ಶ್ರೋಣಿಯೇ ||ಶರಣು ಸ್ಮಿತ ಮುಖ ಉರಗವೇಣಿಯೆ |ಶರಣುಸರಸಿಜಪಾಣಿಯೇ ಪಇಂದ್ರಸೇನೆ ಪುರಂದರಾರ್ಚಿತೆ |ಇಂದಿರಾಪತಿ ಕೃಷ್ಣನಾ ||ನಂದದಲಿ ಸೇವಿಸುವ ಭಕುತಿಯ |ಇಂದುಧರನಿಗೆ ಕೊಡುವಳೇ 1ಗರುಡನುತ ಪದ ಸರಸೀರುಹೆ ವೃಕೋ |ದರನ ಪ್ರೀತಿಗೆ ಯೋಗ್ಯಳೇ ||ತರುಣಿ ಶಿರೋಮಣಿ ದುರ್ಮತಿಯ ಕಳೆದು |ಕರುಣದಲಿಕರಪಿಡಿವುದು 2ವಿದ್ಯುನ್ನಾಮಕೆ ಧಾತಜಾತಳೆ |ಶ್ರದ್ಧೆ ದಾತೆ ನಿರಂತರ ||ತಿದ್ದಿ ಯನ್ನ ವಕ್ರಮತಿಯದ್ರುಹಿಣ|ವಿದ್ಯೆಪಾಲಿಸೆ ಭಾರತೀ 3ಕಾಳೀ ದ್ರೌಪದಿಸ್ಥಾಣುಕನ್ಯಾ |ಶೈಲಜಾದಿ ನಮಸ್ಕøತೇ ||ಕಾಲಿಗೆರಗುವೆ ಯನ್ನಬಿನ್ನಪ|ಕೇಳಿಜ್ಞಾನವ ಪ್ರೇರಿಸೇ 4ಗಜಗಮನೆ ನಳನಂದಿನಿ ಅನಘೆ |ಸುಜನಹೃದಯ ನಿಕೇತನೆ ||ತ್ರಿಜಗಪತಿಪ್ರಾಣೇಶ ವಿಠಲನ |ಭಜನೆಯೊಳು ಮನ ನಿಲ್ಲಿಸೇ 5
--------------
ಪ್ರಾಣೇಶದಾಸರು