ಒಟ್ಟು 2682 ಕಡೆಗಳಲ್ಲಿ , 118 ದಾಸರು , 2023 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಪದಗಳು391ಕೋಲು ಕೋಲೆನ್ನಿರೆ ರನ್ನದ ಕೋಲು ಕೋಲೆನ್ನಿರೇಕೋಲು ಕೋಲೆಂದು ರನ್ನದಕೋಲಧರಿಸಿನಿಂದುಲೋಲಾಕ್ಷಿ ದೇವಿ ಚರಿತೆಯ ಸ್ಮರಿಸುತ್ತ ರನ್ನದಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಲೋಲಾಕ್ಷಿ ದೇವಿ ಚರಿತೆ ಸ್ಮರಿಸುತ್ತ ನಲಿದಾಡಿಪಾಲಿಸೆ ಧರೆಗೆ ವರವ ಕರದೀಗಳ್ ರನ್ನದಾ1ಆದಿದೇವಿಯು ಚತುರ್ವೇದ ಗರ್ಭನನಿತ್ಯಪಾದಸೇವೆಯ ಗೈವಳ್ ಮೋದದಿ ರನ್ನದಿಕೋಲು ಪಾದಸೇವೆಯ ಗೈವಳ್ಮೋದದಿ ಮಾಧವನ ಪೂಜಿಸಿ ನಮಿಸಿಕ್ಷೀರಾಬ್ಧಿಯೊಳ್ ರನ್ನದಾ2ಘೋರದಾನವರೆಲ್ಲ ಧಾರಿಣಿ ಬಾಧಿಸಲುವಾರಿಜೋದ್ಭವನಾರದಾದ್ಯರು ರನ್ನದಾವಾರಿಜೋದ್ಭವನಾರದಾದ್ಯರು ದೇವಿಯೊಳುದೂರಿಡೆಕೇಳಿಅಭಯವಿತ್ತಳು ರನ್ನದಾ3ಸುರರುದಾನವರೆಲ್ಲ ಶರಧಿಯ ಮಥಿಸಲುಅರವಿಂದಮುಖಿ ಲಕ್ಷ್ಮಿ ಜನಿಸಿದಳೆ ರನ್ನದಅರವಿಂದ ಮುಖಿಲಕ್ಷ್ಮಿ ಜನಿಸಲು ನಾರಾಯಣನರಸಿಯೆಂದೆನಿಸಿ ಮೆರೆದಳು ರನ್ನದಾ4ಅಘವಿನಾಶಿನಿ ಜಗದಾಂಬಿಕೆ ಕೀರವಾಣಿಸುಗುಣೆ ಸುಂದರಿ ಸುಶೀಲೆಯು ಫಣಿವೇಣಿನಗುವ ಮೊಗದ ಚಂದ್ರವದನೆಯು ರನ್ನದಾ5ದುಷ್ಟ ನಿಗ್ರಹರೆಂದು ಸೃಷ್ಟಿಗೆ ನಡೆತಂದುಶ್ರೇಷ್ಠಾದಿ ನೂರೊಂದು ರೂಪಾದಳ್ ರನ್ನದಾಶ್ರೇಷ್ಠಾದಿ ನೂರೊಂದು ರೂಪಾಗಿ ಶಿಕ್ಷಾ ರಕ್ಷಾಧ್ಯಕ್ಷಳೆನಿಸಿ ಖಡುಗ ಧರಿಸಿದಳ್ ರನ್ನದಾ6ಘೋರಮಹಿಷನ ಸಂಹಾರಕೆಂದು ಬಂದುಮಾರಾಂತು ರಣದಿ ದುರುಳನ ರನ್ನದಾಮಾರಾಂತು ರಣದಿ ದುರುಳನ ಮರ್ದಿಸಿಈರೇಳು ಜಗವಾ ಪೊರೆದಳು ರನ್ನದಾ7ಶುಂಭಾ ನಿಶುಂಭ ಖಳರೆಂಬ ದೈತ್ಯರ ಗೆಲಿದುಅಂಬುಜಾಲಯದಿ ನೆಲಸಿದಳ್ ರನ್ನದಾಅಂಬುಜಾಲಯದಿ ನೆಲೆಸಲು ಪೂಜಿಸಿದಕುಂಭಿನಿಸುರರಿಗೊಲಿದಾಳು ರನ್ನದಾ8ಚಂಡ ಮುಂಡಕರೆಂಬಘೋರದೈತ್ಯರನೆಲ್ಲತುಂಡು ತುಂಡಾಗಿ ಶಿರ ಖಂಡೀಸಿ ರನ್ನದಾತುಂಡು ತುಂಡಾಗಿ ಶಿರ ಖಂಡೀಸಿ ಮೆರೆದಳುಚಂಡಿ ಕರಾಳಿ ಚಾಮುಂಡಿಗೇ ರನ್ನದಾ9ರಕ್ತ ಬೀಜನಘೋರಶಕ್ತಿಯ ಪರೀಕ್ಷಿಸಿಮುಕ್ತಿ ಪಥವ ತೋರೆ ಮಾಂಕಾಳಿ ರನ್ನದಾಮುಕ್ತಿ ಪಥವ ತೋರೆ ಮಾಂಕಾಳಿ ಅರ್ಚಿಸಿದಭಕ್ತರಿಗೊಲಿದು ನಲಿದಳ್ ರನ್ನದಾ10ದೇವರಾಮನ ಸತಿಯಾಗಿ ಲಂಕೆಗೆ ಪೋಗಿರಾವಣಾದ್ಯರನೆಲ್ಲ ಕೊಲಿಸೀದಳ್ ರನ್ನದಾರಾವಣಾದ್ಯರನೆಲ್ಲ ಕೊಲಿಸೀದಳ್ ಸೀತೆಯು ತಾಪಾವಕನುರಿ ಹೊಕ್ಕಿ ಪೊರಟಳ್ ರನ್ನದಾ11ಸೃಷ್ಟೀಶ ಭೀಷ್ಮಕನ ತನುಜೆ ರುಕ್ಮಿಣೀದೇವಿಕೃಷ್ಣಮೂರ್ತಿಗೆ ಓಲೆ ಬರೆದಾಳು ರನ್ನದಾಕೃಷ್ಣಮೂರ್ತಿಗೆ ಓಲೆ ಬರೆದು ಒಲಿಸಿಕೊಂಡುಪಟ್ಟದರಸಿಯಾಗಿ ಬಾಳಿದಳು ರನ್ನದಾ12ಮಾನಿನೀಮಣಿಪದ್ಮಾವತಿಯು ಜಲಕೇಳಿಗೈದುಶ್ರೀನಿವಾಸನ ಕಂಡು ಸ್ಮರಿಸೀದಳ್ ರನ್ನದಾಶ್ರೀನಿವಾಸನ ಕಂಡು ಸ್ಮರಿಸಿ ಕಲ್ಯಾಣವೆಸಗಿತಾನೆ ವಿಷ್ಣುವ ಪೂಜೆಗೈದಳ್ ರನ್ನದಾ13ನವರಾತ್ರಿ ದಿನದಲಿ ನವದುರ್ಗಿ ರೂಪಿನಲಿನವಗಂಧ ಕುಂಕುಮಚಂದನಪುಷ್ಪಗಳಿಂದನವವಿಧ ಪೂಜೆ ಕೊಂಬಳ್ ರನ್ನದಾ14ಮಾರಿಪೂಜೆಯ ರಕ್ತ ಹಾರಕ್ಕೆ ಮನಗೊಂಬಾಕ್ರೂರಗಣಗಳೊಡ ಸೇರಿದಳ್ ರನ್ನದಾಕ್ರೂರಗಣಗಳೊಡ ಸೇರಿ ಧಾರುಣಿಯೊಳುಚಾರುವರ್ಣ ಪೂಜೆ ಕೈಕೊಂಬಳ್ ರನ್ನದಾ15ಸರ್ವಮಂಗಲ ಮಾತೆ ಸರ್ವಸಜ್ಜನ ಪ್ರೀತೆಸರ್ವ ಆಭರಣ ಭರಿತೇಯು ರನ್ನದಾಸರ್ವ ಆಭರಣ ಭರಿತೇಯು ಪೀತಾಂಬರನೆರಿಹಿಡಿದುಟ್ಟು ರನ್ನದಾ16ಹದಿನೆಂಟು ಪೌರಾಣದಿ ಮೆರೆವ ಈ ದೇವಿ ಚರಿತೆಹದಿನೆಂಟು ಪದವಾಗಿ ನುಡಿಸೀದಳ್ ರನ್ನದಾಹದಿನೆಂಟು ಪದದಿ ತಪ್ಪಿರಲು ತಿದ್ಯೋದಿದವರವಿಧವಿಧ ಮನದ ಬಯಕೆ ಒದಗುವಾದೆ ರನ್ನದಾ17ಮಂದಗಮನೆಧರಣಿಭಾರತಗ್ಗಿಸಿ ಬಂದುನಿಂದಾಳು ವಿಷ್ಣು ವಕ್ಷಸ್ಥಲದಲಿ ರನ್ನದಾನಿಂದಿರ್ದ ವಿಷ್ಣು ವಕ್ಷಸ್ಥಲದ ರಮೆಗೆ ಗೋವಿಂದದಾಸನು ಸರಿಸಿ ನಮಿಸೂವೆ ರನ್ನದಾ18
--------------
ಗೋವಿಂದದಾಸ
ಮಂಗಳ ಮಂದಿರಗೆ ಮಂಗಳ ಮುರಾರಿಗೆಮಂಗಳ ತಿಮ್ಮಯ್ಯಗೆ ಜಯಮಂಗಳ ಪ.ನೀಲಘನಕಾಯಗೆ ಶ್ರೀಲಕುಮಿ ಸಹಾಯಗೆವ್ಯಾಳವರಶಾಯಿಗೆ ಭಾಳನೇತ್ರಧ್ಯೇಯಗೆ 1ದೀನ ಪರಿಶುದ್ಧಗೆ ದಾನವರನೊದ್ದಗೆಆನಂದನಿರುದ್ಧಗೆಮಾನವಮೃಗೇಂದ್ರಗೆ2ಶೇಷಗಿರಿವಾಸಗೆ ದಾಸಭಯನಾಶಗೆತೋಷಪೂರ್ಣಹಾಸಗೆ ಪ್ರಸನ್ವೆಂಕಟೇಶಗೆ 3
--------------
ಪ್ರಸನ್ನವೆಂಕಟದಾಸರು
ಮಂಗಳ ಮಹಿಮಗೆ ನೀರಾಜನಂಗಳ ಪೈಸರಿಸಿ ಭೃಂಗಾಳಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರುವೆಂಗಳಪತಿಗಾರತಿಯ ಬೆಳಗಿರೆ ಪ.ಅಕ್ರಮದಲಿಶ್ರುತಿಕದ್ದೊಯ್ದವನಾಕ್ರಂದಿಸಿ ಸೀಳಿದಶುಭಮತ್ಸ್ಯಾಕೃತಗೆ ಜಗಂಗರ್ಭಾಕೃತಗೆ ಹತತಮವ್ಯಾಕೃತಗಾರತಿಯ ಬೆಳಗಿರೆ 1ಇಂದಿರನೈಶ್ವರ್ಯವು ಮಕರದಮಂದಿರ ಮಗ್ನಾಗಿರೆ ಗಿರಿಭೃತಕಂಧರಗೆ ಕಚ್ಛಪ ಸುಂದರಗೆ ಕರುಣಾಸಾಂದರಗಾರತಿಯ ಬೆಳಗಿರೆ 2ಪೊಂಗಣ್ಣಿನದಿತಿಜಕ್ಷಿತಿಯಹಿಂಗದೆ ಬೈಚಿಡಲು ಕ್ರೋಡದಿಭಂಗಿತಗೆ ವಸುಮತಿ ಸಂಗತಗೆ ದಿವಿಜರಇಂಗಿತಗಾರತಿಯ ಬೆಳಗಿರೆ 3ದಾನವಗಂಜದೆ ಶಿಶು ವರಹರಿನೀನೆ ಗತಿಯೆನೆ ಕಾಯ್ದ ಸುಜಾಣನಿಗೆ ನಿಜಜನಪ್ರಾಣನಿಗೆ ನರಪಂಚಾನನಗಾರತಿಯ ಬೆಳಗಿರೆ 4ಧರ್ಮದಿ ಕೊಬ್ಬಿದ ಬಲಿಚಕ್ರನಮರ್ಮದಿ ಜಡಿದ ವಿಚಿತ್ರಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟುಶರ್ಮನಿಗಾರತಿಯ ಬೆಳಗಿರೆ 5ವೀರ ಕ್ಷತ್ರಿಯರ ಕುಲ ಸಂಹಾರ ರೇಣುಕೆ ಕಂಠ ವಿದಾರಿಗೆ ವಿತರಣ ಶೂರಗೆಘೋರಕುಠಾರಿಗಾರತಿಯ ಬೆಳಗಿರೆ 6ಮುನಿಮಖಪಾಲಕ ತ್ರಯಂಬಕಧನುಹರ ಸೀತಾವರ ದಶಮುಖಹನನಗೆ ಮತ್ತವನನುಜಪಗೆ ಅಂಜನಾತನುಜಪಗಾರತಿಯ ಬೆಳಗಿರೆ 7ಪೊಂಗೊಳಲೂದುತ ಗೋಜಂಗುಳಿಹೆಂಗೆಳೆಯರ ಮೋಹಿಪ ತಾವರೆಗಂಗಳಗೆ ಸುಖದ ತರಂಗನಿಗೆ ಪಾಂಡವಸಂಗನಿಗಾರತಿಯ ಬೆಳಗಿರೆ 8ನೀಚರ ಬಲವಳಿಯಲು ಸತ್ವರಖೇಚರನಾರಿಯರ ವ್ರತಹೃತಆಚರಗೆಜಿತಬೌದ್ಧಾಚರಗೆ ನಿಗಮವಿಗೋಚರಗಾರತಿಯ ಬೆಳಗಿರೆ 9ಸಂಕರ ಕಲಿಯಂ ಮಥಿüಸಲು ತಾಬಿಂಕದಿ ಹಯವೇರಿದ ಸದ್ಧರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸನ್ವೆಂಕಟರೇಯಗಾರತಿಯ ಬೆಳಗಿರೆ 10
--------------
ಪ್ರಸನ್ನವೆಂಕಟದಾಸರು
ಮಂಗಳಂಜಯಮಂಗಳಂ ಪ.ನಿಗಮವ ತಂದಾ ಮತ್ಸ್ಯನಿಗೆನಗವ ಬೆನ್ನಲಿ ಪೊತ್ತ ಕೂರ್ಮನಿಗೆ ||ಜಗವನುದ್ಧರಿಸಿದ ವರಹಾವತಾರಗೆಮಗುವನು ಕಾಯ್ದ ಮುದ್ದು ನರಸಿಂಹಗೆ 1ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆ ||ರಾಮಚಂದ್ರನಾದ ಸ್ವಾಮಿಗೆ ಸತ್ಯಭಾಮೆಯರಸ ಗೋಪಾಲಕೃಷ್ಣಗೆ 2ಬತ್ತಲೆ ನಿಂತಿಹ ಬುದ್ಧನಿಗೆಉತ್ತಮ ಹಯವೇರಿದ ಕಲ್ಕಿಗೆ |ಹತ್ತವತಾರದಿ ಭಕ್ತರ ಸಲಹುವಸತ್ಯ ಶ್ರೀ ಪುರಂದರವಿಠಲನಿಗೆ 3
--------------
ಪುರಂದರದಾಸರು
ಮಂಜುಳ ವೇಣುಗಾನವ ಮಾಡಿ ಮೋಹಿಪ ಜಗವಕಂಜಜನಯ್ಯ ಮುರಾರಿ ಕಾಮಿನಿಯರಿಗುಪಕಾರಿ ಪ.ಯಮುನೆಯ ಪುಲಿನದಿ ಯದುಕುಲ ಚಂದ್ರ ಹೊಂದೆರಮಣೀರ್ವಕ್ಷ ಮಧ್ಯದಿ ರಾಜಿಸುತ ಕುಲಾಂಬುಧಿ 1ಪೂರ್ಣ ಪೀಯೂಷಕರನು ಪೂರ್ವಾಚಲಕೆ ಸಾರ್ದನುಪೂರ್ಣಾನಂದ ಮುಕುಂದ ಪವನ ಸಂಚಾರದಿಂದ 2ಕುಂದನೀಲೋತ್ಪಲ ಜಾಜಿಕಮಲಮಲ್ಲಿಗೆ ಜುಜಿ( ?)ಮಂದಾರಪುನ್ನಾಗಭುಜಮೂಲದಿ ಗೋಪಾಲರಾಜ3ಕುಸುಮಾಕರಕುಂಜದಿ ಕುಶಲಕ್ರೀಡಿತನಾದಿಸುಸಪ್ತ ಸ್ವರದಿಂದ ಸುಖದಾನಂದ ಮುಕುಂದ 4ಕತ್ತಲೆವಿರಿ ಸಂಪಿಗೆಕಮಲಮೊಲ್ಲೆ ಮಲ್ಲಿಗೆಸುತ್ತಿದ ಎಳೆಪಲ್ಲವ ಮಾರನಂತಹ ಚೆಲುವ 5ಮುತ್ತಿನ ಚೊಲ್ಲೆಯಲ್ಲಿಯ ಮುಂಗುರುಳಲ್ಲಿ ವಲಯಕಸ್ತೂರಿ ತಿಲಕ ಒಪ್ಪೆ ಕವಿದಡರ್ವದ್ವೀರೇಫೆ 6ಕಡೆಗಣ್ಣಿನ ನೋಟದಿ ಕುಡಿಹುಬ್ಬಿನ ಮಾಟದಿಮಡದೇರ್ಗೆ ಮಾರಶರ ಮೂಡಿಸುತತಿ ಸುಂದರ 7ಮುಗುಳುನಗೆಮೊಗದ ಮಣಿಕುಂಡಲ ಕರ್ಣದಯುಗ ಕರ್ಣಾಕರ್ಣಿಕರಾಯತ ನಟ ನರಾಕಾರ 8ವನಮಾಲೆವೈಜಯಂತಿಶ್ರೀವತ್ಸಕೌಸ್ತುಭಕಾಂತಿಮಿನುಗುವಾಮೋದ ಗಂಧಮುಡಿ ತೋರೋ ಶ್ರೀ ಗೋವಿಂದ 9ಹಾರಕೇಯೂರ ಕಂಕಣ ಹೊಳೆವ ಮಧ್ಯಒಡ್ಯಾಣಚಾರುಪೀತಾಂಬರೋತ್ತರಿ ಚೀರದಿಂದೆಸೆವಹರಿ10ವಾಮಬಾಹುವಿಲೊಪ್ಪುವ ವೇಣುವಿನ ಘನರವಬ್ರಹ್ಮ ಗಂಧರ್ವರ ಗಾನ ಬಗೆಗೆ ಮೀರುವ ದೇವ 11ಸುಲಲಿತಂದುಗೆ ಗೆಜ್ಜೆ ಸಂದ್ರೇಖೆ ಶೋಭಿತಹೆಜ್ಜೆಕೆಲದ ಗೋಪಾಂಗನೇರ ಕಾಮಧೇನು ಸಾರೋತ್ತರ 12ಧರೆಗೆರಗಿದ ಜಡೆ ಸಲೆ ಕಾಳಿಂದಿ ಮೇಲಾಡೆ ಸಕಳ ಪಕ್ಷಿಮೃಗವು ಸಂಚರಿಸದೆ ನಿಂದವು 13ಜಡಂಗಳು ಚೇತರಿಸೆ ಜನದ ಚೇಷ್ಟೆ ಥಂಬಿಸೆಕಡುರಸತುಂಬಿತುಳುಕಲಜಭವಾಂಡೊಲಿಯಲು14ವೃಕ್ಷಗಳ ಶೃಂಗಾರಿಯ ವತ್ಸಗಳಾವದೊರೆಯಈಕ್ಷಿಸಿ ತೃಣ ಮೆಲ್ಲದೆಯಿದ್ದವು ಗೀತಕೇಳುತ 15ನೀರಸ ತರುಫಲಾಗೆ ನಿತ್ಯಪ್ರಜÕತೆಗೆನೀರದಗೆ ಸ್ವರಗೈಯೆ ನಿಗಮನಯ್ಯ ಮರೆಯ 16ಮಂಗಳಮೇಘಘರ್ಜನೆ ಮಾಡಿದವು ಮೆಲ್ಲಮೆಲ್ಲನೆರಂಗನ ಮೇಲಮೃತ ಧಾರೆಯವಿತ್ತವರ್ಥಿಯಿಂದ 17ನಂದವ್ರಜದ ವನವು ನಂದನ ಚೈತ್ಯಾಧಿಕವುನಂದಸೂನುವಿನ ಗೀತ ನಾದ ವೇದಾನಂತಾನಂತ 18ಕಮಲಜ ಭವೇಂದ್ರಾದಿಕರು ಭ್ರಾಂತಿಯನೈದಿದರುಅಮರಜನ ನಾರೇರು ಅಂಗಜವಶವಾದರು 19ಗೋಷ್ಠದ ಗೊಲ್ಲ ಗೋಪೇರ ಗೋವರ್ಧನ ಗೋಪಾಲರದೃಷ್ಟಕೆ ಸುರಮುನಿ ಗಂಧರ್ವರು ಪೊಗಳಿದರಾಗ 20ಸುರಭ್ಯಾಗಾರದಿ ಕೃಷ್ಣ ಸಂಚರಿಸಲು ಸರ್ವೇಷ್ಠಪೂರಣವಪ್ಪಿತುಧರೆಪರಮಮಂಗಳ ಸಾರಿ21ಸುರರುಸುಖ ಸಂಭೃತ ಶರಧಿಯೊಳೋಲಾಡುತಸಿರಿಮಂಗಳವ ಹೇಳಿ ಸುರಿದರರಳ ಮಳೆ22ಪ್ರಸನ್ನತರ ಚರಿತ ಪ್ರಸನ್ನಾವ್ಯಾಕೃತಗಾತ್ರಪ್ರಸನ್ನಪೂರ್ಣ ಪ್ರಜೆÕೀಷ್ಠ ಪ್ರಸನ್ನವೆಂಕಟಕೃಷ್ಣ 23
--------------
ಪ್ರಸನ್ನವೆಂಕಟದಾಸರು
ಮಡಿಯಾಗಿ ತಂಗಿ ಮಹಾಲಿಂಗ ಪೂಜೆ ಮಾಡೆಮುಕ್ತಿ ಸದನಕೇರುವೆ ನೋಡೇಪದೇಹವೆಂಬ ಮನೆಯ ಸಾರಿಸೆಮೋಹವೆಂಬ ತಂಗಳ ಮಡಕೆ ಹೊರಗಿರಿಸೆಸೋಹಂ ಎಂಬ ರಂಗವಲ್ಲಿಯನಿಡೆಜ್ಯೋತಿಯನು ಬೆಳಗಿಸೆ ನೀನು1ನಾನಾವಾಸನೆಯ ಮೈಲಿಗೆಯನು ಬಿಡೆಮನಮೈಲಿಗೆಯನು ತೊಳೆಸ್ವಾನುಭವದ ಪೀತಾಂಬರವನುಡೆನಾನು ಎಂಬ ಕಸವನು ಗುಡಿಸೆನಾದದ ಸುಖವನು ಅನುಭವಿಸೆ ನೀನು2ಧ್ಯಾನ ಮನನೆನಪಿಲ್ಲದಾಗಿಸ್ವಸ್ಥಾನದಲ್ಲಿ ಭಾನುವೀಗ ಬೆಳಗಿದಂತಾಗಿ ನೀನುನಾನು ಎಂಬುದು ಅಳಿದು ನೀನೆಚಿದಾನಂದನಾಗಿ ಪೂಜಿಸು3
--------------
ಚಿದಾನಂದ ಅವಧೂತರು
ಮಂಡೆಬಾಗಿಕರವಮುಗಿವೆ ಕಾಯೊ ಹರಿಹರಿ |ಪುಂಡರೀಕನಯನ ಮರೆಯಬೇಡವೊ ಹರಿಹರಿ ಪಕರಿವರದನೆ ಸರ್ವಾಂತರ್ಯಾಮಿ ಹರಿಹರಿ |ಕರುಣಾಸಾಂದ್ರ ತರುಣಿ ಮಾನಕಾಯ್ದ ಹರಿಹರಿ ||ಶರಧಿಸುತೆಯ ರಮಣ ದೀನಬಂಧು ಹರಿಹರಿ |ಅರಿಯೆ ನಿನ್ನನುಳಿದು ಕಾಯ್ವರನ್ನು ಹರಿಹರಿ 1ಮೀನನಾಗಿ ವೇದಗಳನು ತಂದೆಹರಿಹರಿ|ಆ ನಗವನು ಪೊತ್ತು ಅಮೃತವೆರೆದೆಹರಿಹರಿ||ನೀನೇ ವರಾಹನಾಗಿಯವನಿಯ ತಂದೆಹರಿಹರಿ|ದಾನವನುದರವ ಬಗೆದು ಅಂದುಹರಿಹರಿ 2ಚಿಕ್ಕ ರೂಪದಿಂದ ಬಲಿಯ ತುಳಿದೆಹರಿಹರಿ|ಸೊಕ್ಕಿದರಸುಗಳನು ಸವರಿಬಿಟ್ಟೆಹರಿಹರಿ||ರಕ್ಕಸರನು ಕೊಂದು ಸತಿಯ ತಂದೆಹರಿಹರಿ|ಅಕ್ಕರದಲಿ ಪಾರಿಜಾತ ತಂದೆಹರಿಹರಿ3ಅಂಬರವನು ತೊರೆದೆ ಬೌದ್ಧನಾಗಿ ಹರಿಹರಿ |ಕುಂಭಿಣಿಯೊಳು ಕುದುರೆಯೇರಿ ಮೆರೆದೆಹರಿಹರಿ||ಶಂಬರಾಂ ಜನಕ ಧರ್ಮತನಯಹರಿಹರಿ|ಅಂಬುಜಾಸನಾದಿ ದಿವಿಜವಂದ್ಯಹರಿಹರಿ4ಶೌರಿರಘುಜ ಮುನಿಜ ಪ್ರಾಣೇಶ ವಿಠಲಹರಿಹರಿ|ಸಾರಿದ ಶರಣರಿಗೆ ಕಲ್ಪತರುವೆಹರಿಹರಿ||ಘೋರದುರಿತವನಕೆ ಧನಂಜಯನೆ ಹರಿಹರಿ |ಭಾರನಿನ್ನದೆವೆ ಹೇಳಲ್ಯಾಕೆಹರಿಹರಿ 5
--------------
ಪ್ರಾಣೇಶದಾಸರು
ಮದ್ದಿನ ಹವಾಯಿ ನೀನೋಡುಬಗಳಮದ್ದಿನ ಹವಾಯಿ ನೀನೋಡುಮದ್ದಿನ ಹವಾಯಿ ಹೃದಯ ಬಯಲಲ್ಲದೆಎದ್ದಿರು ಚತುಷ್ಟ ತನುವಿಗೆ ಬೇರೆಯುಪತೂರ್ವುತಲಿದೆ ಬಿರಿಸಾಕಾಶದ ತುದಿಗೇರ್ವುತಲಿದೆಅಂಬರಬಾಣಬೀರ್ವುತಲಿದೆ ಚಕ್ರದ ಕಿಡಿಯಗಲಕೆಜಾರ್ವುತಲಿದೆ ಅಜ್ಞಾನದಖೂನ1ಗಡಿಗ ಬಾಣದ ಗತಿಯನೆನೋಡುಗಜುಗಿಂಗಳ ಕಾಯಬ್ಬರವಗಿಡುಗಳು ಹಾರ್ವವು ಜಿನಿಸು ಜಿನಿಸುಗಳುಭಡಲ್ ಭಡಲ್ಲಿಹ ಸಪ್ಪಳವು2ಅಂತರ ದೌಸು ಸರಬತ್ತಿಗಳುಅಗಸೆಯ ಹೂವಿನ ಅಚ್ಚರಿಯಕಂತುಕ ಪೆಟಲವು ಮುತ್ತಿ ಸೇ-ವಂತಿಗೆ ಕವಳೆಯ ಹೂವಿನ ಸುರಿಮಳೆಯು3ಕೋಳಿಯು ಮುಳುಗುತಲೇಳುತಲಿರುತಿರೆಕೋಣ ಆನೆಗಳ ಕಾದಾಟಬಾಳೆಯ ಗೊನೆಗಳು ಬೆಳ್ಳಿಯ ಚುಕ್ಕೆಯುಬೆಳ್ಳನೆ ಜ್ಯೋತಿಯ ಕಡಕದಾಟ4ನಿನ್ನ ಕಾಂತಿ ಇವು ನೀನೇ ನೋಡುತಲಿರುತನ್ಮಯ ದೃಷ್ಟಿಯನಿಟ್ಟುಚೆನ್ನ ಚಿದಾನಂದ ಬಗಳೆ ನೀ ಸಾಕ್ಷಿಯಿರೆ ಚೈ-ತನ್ಯಾತ್ಮಕ ಶುದ್ಧನವ5ಸೂಚನೆ :ದೀಪಾವಳಿ ಮುಂತಾದ ಸಂದರ್ಭಗಳಲ್ಲಿ ಹಾರಿಸುವ ಮದ್ದಿನ ವಸ್ತುಗಳ ಬೆಳಕಿಗೆ ದೇವಿಯನ್ನು ಹೋಲಿಸಿದ್ದಾಗಿದೆ. ಇದರಲ್ಲಿ ಬಂದಿರುವಕೆಲವು ಮದ್ದಿನ ಪದಾರ್ಥಗಳ ಹೆಸರುಗಳು ಆಗಿನ ಕಾಲದವು.
--------------
ಚಿದಾನಂದ ಅವಧೂತರು
ಮನವೆಂಬ ಬೇಟೆಗಾರಹತ್ತಿಂದ್ರಿಯ ನಾಯಿಮನ ಬಂತು ಘೋರವಾದಮನಮನಾದಿ ಮೃಗಂಗಳನುಮಹಾಕೊಲೆಯ ಕೊಲ್ಲುತಿಹನುಪಮಹಾಪ್ರಪಂಚ ಬಲೆಯುತಾಪತ್ರಯತೊಡಕುಮಹಾವಿಷಯ ಮೇವು ಮಹಾವಿಷಯಮೇವಿಗೆ ಬಂದು ಮನುಜಮೃಗಗಳು ಕೆಡವುತಿಹವು1ನಯನೇಂದ್ರಿಯಗಳೆಂಬ ನಾಯಿಕಂಡಾಗಲೆ ಹಿಡಿವುದುಪ್ರಾಯ ಒಳ್ಳೆಯ ನಾಯಿನಿಯತವಿಹುದಲ್ಲೆ-ನ್ನದಲೆ ನೆನೆದಾಗಲೇ ಹಿಡಿಯುತಿಹುದು2ಒಂದಕ್ಕದೊಂದು ವೇಗವುಹತ್ತೀಪರಿನಾಯಿಬಂದರೆಂತೊಂದು ಸತ್ವವುಬಂದು ಹಿಡಿಯದಿರೆಮತ್ತೊಂದಾದರೆ ಹಿಡಿದು ಕೆಡವುತಿಹುದು3ಬಾಹ್ಯದ ಅಡವಿಯೊಳಗೆಮೃಗಂಗಳಿಗೆ ಬಹಬಾಧೆ ನಿತ್ಯದೊಳಗೆಬಾಹ್ಯ ವಿಷಯಪೇಕ್ಷೆಯಬಿಟ್ಟರೆ ಬದಿಯ ನಾಯಿಗಳು ಸೇರದಿಹವು4ತನಗೆ ತಿಳಿಯಬೇಕುತಾನುಳಿವುದಕೆ ತನಗೇಯಬೇಕುತನ್ನ ಚಿದಾನಂದನೆಂದು ತನ್ನ ಕಂಡರೆ ಭಯವಿಲ್ಲ5
--------------
ಚಿದಾನಂದ ಅವಧೂತರು
ಮನುಜ ಕೇಳೋ ಮನುಜ ಕೇಳೋಮನುಜ ಕೇಳೆನ್ನ ಮಾತನು ಮುಕ್ತನಾಗುವಿಪವೇಸಿಯ ಮೇಲಿಹವಾಸನೆತೊಲಗಿಸುಮೀಸಲ ಮನವಿಡು ಈಶ ನೀನಾಗುವಿ1ವಿಷಯಂಗಳಲಿ ನೀ ಬಯಸಿ ಬಿದ್ದ ತೆರಹುಸಿಯದೆನ್ನನು ಹೊಂದುಹರನು ನೀನಾಗುವಿ2ಸುದತಿಯ ಸುತರನುನಿತ್ಯನೀ ನೀ ನಂಬದೆಚಿದಾನಂದನ ಹೊಂದುಮುಕ್ತನೀನಾಗುವಿ3
--------------
ಚಿದಾನಂದ ಅವಧೂತರು
ಮನ್ನಾರು ಕೃಷ್ಣಗೆ ಮಂಗಳ ಜಗವಮನ್ನಿಸಿದೊಡೆಯಗೆಮಂಗಳ ಪ.ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆಕಮ್ಮಗೋಲನಯ್ಯಗೆ ಮಂಗಳ ||ಧರ್ಮಸಂರಕ್ಷಗೆ ದಾನವ ಶಿಕ್ಷಗೆನಮ್ಮ ರಕ್ಷಕನಿಗೆ ಮಂಗಳ 1ತುರುಗಳ ಕಾಯ್ದಗೆ ಕರುಣಾಕರನಿಗೆಗಿರಿಯನೆತ್ತಿದನಿಗೆ ಮಂಗಳ ||ಪುರದ ತಿಮ್ಮಪ್ಪಗೆ ವಾರಿಜನಾಭಗೆಹರಿರ್ವೋತ್ತಮನಿಗೆ ಮಂಗಳ 2ದೇವಕಿ ದೇವಿಯ ತನಯಗೆ ಮಂಗಳದೇವ ತಿಮ್ಮಪ್ಪಗೆ ಮಂಗಳ ||ಮಾವನ ಕೊಂದು ಮಲ್ಲರ ಮಡುಹಿದಪುರಂದರವಿಠಲಗೆ ಮಂಗಳ 3
--------------
ಪುರಂದರದಾಸರು
ಮರತೆ ನೀ ಕಂಡ್ಯ ಮನವೇ ಎಚ್ಚರವುಗುರುವರನ ನೆನೆಯೋ ನೀನುಅರಿತು ಸರ್ವಸರ್ವರಲ್ಲಿ ಆತ ತಾನಿಹನೆಂದುಹಿಂದು ನೆಲೆಗೊಳಿಸು ಬೇಗಪಅಣುಮಹತ್ತಾದನೆಂದುಅನಂತ ಗುಣಗಣನೆಯಾದನೆಂದುಎಣಿಸೆ ಏಕ ದೇವಾದವನಕುಣಿಕುಣಿದು ನೆನೆದು ಆಡುವಾಡು1ಆವಾವಸ್ಥೆಯ ತೋರ್ಪಅವನೆಲ್ಲ ತೀವಿಹನು ಪೂರ್ಣನಾಗಿದೇವದೇವಾದವನ ಧೈರ್ಯದಿಂ ಹೃದಯದಲಿಸಾವಧಾನದಲಿ ನಿಲಿಸು ಬಲಿಸು2ನಿರುಪಮ ನಿರಾಶಾಪರ ನಾನಿಶ್ಚಿಂತ ನಿರುತ ನಿರ್ಲೇಪನಾಪರಮಪಾವನಮೂರ್ತಿಪದ್ಮಾವತಿ ಶತಕೋಟಿವರಚಿದಾನಂದ ಗುರುವಾ ಸ್ಥಿರವಾ3
--------------
ಚಿದಾನಂದ ಅವಧೂತರು
ಮರತೆ ಮರತೆ ಪ್ರಪಂಚವ ಎನಗೆ ಈಗಹರಿಯಿತು ಅಜ್ಞಾನದ ಋಣವು ಅಯ್ಯಪಸುರಪತಿಕಲ್ಪವೃಕ್ಷವು ತಾನು ಈಗಸಿರಿಗಿರಿಯನೀಗ ಬಯಸೆನು ನಾನುಪರಮಬಗಳೆ ತಾನಾಗಿಹ ನಾಶವಹಮುರುಕಿ ದೇಹ ಭ್ರಾಂತಿಯಲಿರುವೆನೆ ಕೇಳಕ್ಕಯ್ಯ1ಸತ್ಯವಾದ ಕಾಮಧೇನುವು ಅದು ಈಗಬುತ್ತಿಗೆ ಕೈ ನೀಡುವುದೇ ಕೇಳಕ್ಕಯ್ಯನಿತ್ಯಮಂಗಳೆ ಬಗಳೆಯಾಗಿಹಳು ಸ್ವಪ್ನದಿ ತೆರದಿಮಿಥ್ಯಸಂಸಾರಕೆ ಆಸೆ ಮಾಡುವೆನೆ ಕೇಳಕ್ಕಯ್ಯ2ಚಿಂತೆ ದೂರ ಚಿಂತಾಮಣಿಯನುಕ್ಷುದ್ರ ದೂರ ಕಲ್ಪವೃಕ್ಷವನು ನೆನೆವೆ ಕೇಳಕ್ಕಯ್ಯಚಿಂತಾಯಕ ಚಿದಾನಂದನಾದ ಬಗಳೆ ಇರುವಾಗಎಂತು ಜನನ ಮರಣದ ಚಿಂತೆ ಕೇಳಕ್ಕಯ್ಯ3
--------------
ಚಿದಾನಂದ ಅವಧೂತರು
ಮರತೆ ಮರತೆ ಬಗಳ ಮಹಾಮಂತ್ರವಸುರತರುವಿಗೆ ತರುವಾದ ಬ್ರಹ್ಮಾಸ್ತ್ರವಪಭುಗುಭುಗಿಸಿ ಭುವನಗಳನ್ನೆಲ್ಲಾ ಪಾಲಿಪ ಮಂತ್ರಧಗಧಗಿಸಿ ಝಗ ಝಗಿಸಿ ನಿಗಿ ನಿಗಿವ ಮಂತ್ರಜಗದೊಡೆಯರಾದವರಿಗೆ ಒಡೆಯಳ ಮಂತ್ರತಗತಗನೆ ಶತಕೋಟಿರವಿಸೂಸುವ ಮಂತ್ರ1ಸರಸಿಜಾಸನ ತಾನೆ ಜಪಿಸುತಿಹ ಮಂತ್ರಹರಿಹರರುಅನವರತಸ್ಮರಿಸುವಾ ಮಂತ್ರಸುರಪ ಇಂದ್ರಾಗ್ನಿಗಳಿಗಭಯ ನೀಡಿಹ ಮಂತ್ರದುರುಳರಿಪು ವನಗಳಿಗೆದಾವಾಗ್ನಿಮಂತ್ರ2ಹರಿಯ ಸಮಭಾಗ್ಯ ಕೋ ಎಂದು ಕೊಡುವ ಮಂತ್ರಹರಗೆ ಸರಿಯಾದ ಸತ್ವವನೀವ ಮಂತ್ರಗುರುಚಿದಾನಂದ ತಾನಾದ ಬಗಳ ಮಹಾ ಮಂತ್ರಪರಬ್ರಹ್ಮ ಸತ್ಯ ಬ್ರಹ್ಮಾಸ್ತ್ರ ಮಂತ್ರ3
--------------
ಚಿದಾನಂದ ಅವಧೂತರು
ಮರವೆ ಎಂಬುದು ಎಲ್ಲಿಹುದೋ ಯೋಗಿಗೆಮರವೆ ಎಂಬುದು ಎಲ್ಲಿಹುದೋಅರಿತು ಸರ್ವವ ಸರ್ವದಲಿ ಆತ್ಮ ತಾನಾಗಿರ್ದುನಿರುತ ಕಾಲದಿ ಮುಕ್ತಗೆ ಅವಗೆಪನಿರ್ವಿಕಲ್ಪಸಮಾಧಿನಿತ್ಯನಿತ್ಯಳವಟ್ಟುದುರ್ವಿಘ್ನಗಳೆಜರಿದುಗರ್ವದೂರವಾಗಿ ಗಾಢ ತೂರ್ಯದೊಳಿದ್ದುನಿರ್ವಹಿಸಿ ನಿಜಸುಖವನುಪರ್ವಿಪಸರಿಸಿ ತನಗೆ ಪ್ರತಿಗಾಣುತಿರುತಿಪ್ಪಸರ್ವಸಾಕ್ಷಿ ತಾನಾದವಗೆ1ನಾದದೊಳು ಕಿವಿಯಿಟ್ಟು ನಾಸ್ತಿಮನವಸಿಮಾಡಿಬೋಧೆ ಬಲಿದಾ ಲಹರಿಯಹಾದಿಯಂತುಟೋ ಅಂತು ಹರಿದಾಡುತಲಿ ತಾಭೇದಾ ಭೇದಗಳನುಳಿದುಸಾಧು ಸಂಗವ ಕೂಡಿ ಸಂತುಷ್ಟನಾಗಿಪ್ಪನಾದ ಮೂರುತಿಯಾಗೆ2ಪರಮಸಾರವ ತಿಳಿದು ಪರಿಪೂರ್ಣನಾಗಿರುತವರಚಿದಾನಂದ ಗುರುವೆಚರಣಸ್ಮರಣೆಯ ಮನದಿ ಚಲಿಸದಂತಾವಾಗಹಿಡಿದು ನಾಲಗೆಯೊಳಿರಿಸಿಗುರುವೆ ಗುರುವೆ ಎಂದು ತಾನಾಗಿರ್ದುನಿರತಿಶಯದ ಪರಮಗೆ3
--------------
ಚಿದಾನಂದ ಅವಧೂತರು