ಒಟ್ಟು 246 ಕಡೆಗಳಲ್ಲಿ , 57 ದಾಸರು , 232 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯುದೇವರು ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ ಅನ್ಯ ಹಂಬಲ ಬಿಡಿಸಿ ಬಿಂಬ ಮೂರುತಿ ತೋರೋ ಪ ಹಿಂದೆ ತ್ರೇತಾಯುಗದಿ ರಾಮನಾಜ್ಞೆಯ ಹೊಂದಿ ಸಿಂಧು ದಾಟಿ ಸೀತೆಗೆರಗಿ ನಿಂದು ಸುಂದರ ರಾಮ ಮುದ್ರಿಕೆಯಿತ್ತು ಲೀಲೆಯಲಿ ಕೊಂದ ರಕ್ಕಸ ಪುರವನನಲಗೆ ಇತ್ತೆ 1 ಬಂಡಿ ಅನ್ನವನುಂಡು ಭಂಡ ಬಕನಾ ಕೊಂದು ಹಿಂಡು ನೃಪರಾ ಜರಿದು ಕೊಂಡು ದ್ರೌಪದಿಯಾ ಮಂದಮತಿಗಳನಳಿದು ತಂದಿ ಸೌಂಗಂಧಿಕವ ಪುಂಡ ಕೀಚಕರಳಿದ ಪಾಂಡವಪ್ರಿಯದೂತ 2 ಮೋದತೀರ್ಥರೆನಿಸಿ ವಾದಿಗಳ ನಿಗ್ರಹಿಸಿ ಬೋಧಿಸಿ ಸುಜನರಿಗೆ ಮಾಧವನ ಗುಣವ ಸಾಧು ವಂದಿತ ಬಾದರಾಯಣರು ಇರುತಿರುವ ಬದರಿಯಲ್ಲಿರುವಿ ಶ್ರೀ ನರಹರಿಯ ತೋರೋ 3
--------------
ಪ್ರದ್ಯುಮ್ನತೀರ್ಥರು
ವಾಸುದೇವನ್ನಾ ಪಾದವ ನಂಬಬಾರದೇ | ಈಶನೊಲಮಿಂದಾ ಸದ್ಗತಿ ಸುಖವು ದೊರದೇ ಪ ವನಜಭವಾದಿಗಳು ದೋರುವೆನಾ ಮುಕುತಿಯು ಪಾಯಾ | ಯನುತ ಬಂದರೆಯುನೊಡದಿರು ಅವರ ಕಡೆಯಾ 1 ಜಠರ ಬಾಗಿಲವಾ ಕಾವಾಶ್ವಾನನ ಪರಿಯಂತೆ | ನಿಷ್ಠೆಯೊಂದನೆ ಬಿಟ್ಟು ತಿರುಗಬ್ಯಾಡ ಕಂಡಂತೆ2 ಇಂದಿಗೆ ನಾಳಿಗೇ ಹ್ಯಾಂಗೆಂದು ಚಿಂತಿಸದಿರು | ಛಂದದಿ ಗೀತೆಯಲಿ ಸಾರಿದ ವಾಕ್ಯಾ ಮರೆಯದಿರು 3 ಶಿಲೆಯೊಳಗಿರುತಿಹಾ ಕಪ್ಪಿಗಾಹಾರ ನೀಡುವರಾರೋ | ತಿಳಿದು ನೀನೀಗ ಹಲವ ಹಂಬಲವ ಹಿಡಿಯದಿರು 4 ಎರಡು ದಿನದಿದು ಸಂಸಾರವೆಂಬುದು ನೋಡಿ | ಅರಿತು ಇದರೋಳಗ ಸಾರ್ಥಕ ಸಾಧನವ ಮಾಡಿ 5 ಒಂದು ಭಾವದಲಿ ತ್ವರಿತದಿ ಹೊಕ್ಕರ ಶರಣವನು | ತಂದೆ ಮಹಿಪತಿ ಸುತ ಸನ್ಮಾರ್ಗ ಕೂಡಿಸುತಿಹನು 6 ಏನೆಂದರಿಯದಾ ಕಂದಗೆ ಉದ್ದರಿಸಿದ ನೋಡೀ | ತಂದೆ ಮಹಿಪತಿಯು ದಾರಿಯ ದೋರಿದ ದಯಮಾಡಿ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಿಜಯದಾಸರ ಸ್ತೋತ್ರ ನಂಬಿದೆ ನಾ ನಿನ್ನ ಚರಣಕಮಲವನ್ನು ವಿಜಯರಾಯ ಪ ಬೆಂಬಿಡದೆಲೆ ವಿಷಯ ಹಂಬಲ ಬಿಡಿಸಯ್ಯ ವಿಜಯರಾಯ ಅ.ಪ ತಾಯಿ ಎಳೆಯ ಶಿಶುವನು ಬಿಟ್ಟಿರುವುದುಂಟೆ ವಿಜಯರಾಯಬಾಯ ಬಿಡುವೆ ನಾ ಭವದಲ್ಲಿ ಸಿಗಬಿದ್ದು ವಿಜಯರಾಯನೋಯಲಾರೆನೂ ಎನ್ನ ಕಾಯೊ ಕರುಣದಿಂದ ವಿಜಯರಾಯಕಾಯ ಮನವು ನಿನ್ನ ಚರಣಕ್ಕೊಪ್ಪಿಸಿದೆನೊ ವಿಜಯರಾಯ 1 ಕರ್ಮ ಕತ್ತಲೆಯೊಳು ಸುತ್ತಿ ವಿಜಯರಾಯ ತತ್ತಳಗೊಳುತಿಪ್ಪೆ ಎತ್ತಿರೊ ಎನ್ನ ವಿಜಯರಾಯಪೆತ್ತ ತಂದೆಗೆ ಮಗ ಭಾರವಾಗುವುದುಂಟೆ ವಿಜಯರಾಯವಿತ್ತ ಭಾಗ್ಯವನೊಲ್ಲೆ ಎಂದೆಂದಿಗೂ ನಾನು ವಿಜಯರಾಯ 2 ತುಂಬಿದ ಭಂಡಾರ ಸಂಪತ್ತು ಎನಗೆಂದು ವಿಜಯರಾಯಹಂಬಲಿಸುತ ಬಲು ಸಂಭ್ರಮದಿರುತಿಪ್ಪೆ ವಿಜಯರಾಯಸಂಬಳಕಾರ ಶಿಷ್ಯ ನಿನಗಲ್ಲ ಕೇಳಯ್ಯ ವಿಜಯರಾಯಬಿಂಬ ಶ್ರೀ ವೆಂಕಟ ವಿಠ್ಠಲನ ತೋರೊ ನೀ ವಿಜಯರಾಯ 3
--------------
ವೆಂಕಟೇಶವಿಟ್ಠಲ
ವೈಕುಂಠ ವಿಠ್ಠಲನೆ ನೀನಿವನ ಸಾಕಬೇಕಯ್ಯ ಶ್ರೀ ಹರಿಯೆ ಪ ನಾಕಪತಿಯೆ ನಿನ್ನ ತೋಕನೆಂದೆನಿಸಿ ಕೃಪಾಕರುಣೆ ಕಾಪಾಡ ಬೇಕೊ ಹರಿಯೆ ಅ.ಪ. ಪುಂಡಲೀಕ ವರದ ಪಾಂಡುರಂಗನೆ ನಿನ್ನತೊಂಡನಾಗಿಹನ ಕೈಗೊಂಡು ಕಾಪಾಡೊ ಹರಿಯೆ |ಅಂಡಜಸುವಾಹನನೆ ಮಾರ್ತಾಂಡ ಶತತೇಜಭಾಂಡ ಕಾರಕ ಭೀಮ ಗೊಲಿದಂತೆ ಒಲಿಯಬೇಕು 1 ಇಹಪರಗಳೆರಡಕ್ಕೂ ಅಹಿಶಯ್ಯ ನಿನ ಪಾದವಹಿಸೆ ಸೇವಿಪನಯ್ಯ ಸಹಜ ಭಕ್ತಿಯಲಿವಿಹಗೇಂದ್ರ ವಾಹನನೆ ಐಹಿಕದ ಭಯಹರಿಸಿವಿಹಿತ (ಕರುಣ)ದಿಂದಿವನ ಕಾಪಾಡು ಬೇಕು ಹರಿಯೇ 2 ವಿಘ್ನಹರ ನಿನ್ನಲ್ಲಿ | ಲಗ್ನ ಗೈಸಿಹಮನವ ನಿ-ರ್ವಿಘ್ನತೆಯ ನೀಡಯ್ಯ ಸರ್ವಕಾಲದಲಿಯಜ್ಞೇಶ ಯಜ್ಞ ಭುಗ್ ಯಜ್ಞಸಾಧನ ಯಜ್ಞಯಜ್ಞಾನು ಸಂಧಾನ ಸರ್ವಕಾರ್ಯದಲೀಯೊ 3 ವೃಂದಾರ ಕೇಂದ್ರ ರಿಂ | ವಂದ್ಯ ಹಯಮುಖ ಪಾದಭೃಂಗರೆಂದೆನಿಸುವ ಭಾವಿ ಮರುತರ ಚರಣದೀಸಂಧಿಸುತ ಧೃಡಭಕ್ತಿ ವೃಂದಾವನಾಖ್ಯಾನಸಂದೋಹ ಸುಜ್ಞಾನ ನೀನಿತ್ತು ಸಲಹೊ ಹರಿಯೇ 4 ಪತಿ ನಿನ್ನ ಹಂಬಲಿಸಿ ಬೇಡುವೆನುಇಂಬಿಟ್ಟು ತವ ಪಾದದ್ಹಂಬಲವ ನೀಯೋಉಂಬುಡುವ ಕ್ರಿಯೆಗಳಲಿ ಬಿಂಬ ಕ್ರಿಯೆಗಳ ತಿಳಿಸಿಬಿಂಬ ತವರೂಪ ಹೃದಯಾಂಬರದಿ ತೋರಿ ಸಲಹೋ 5 ಪಂಚಪಂಚಸುತತ್ವ | ಪಂಚ ಭೇದದಜ್ಞಾನಸಂಚಿಂತೆಯ ನೀಯೋ ವಾಂಛಿತಾರ್ಥದನೇಪಂಚ ಅವಿದ್ಯೆಯ ಕಳೆದು ಪಂಚಸು ಪರ್ವದಲಿಪಂಚಾಸ್ಯನಲಿ ನಿನ್ನ ಪಂಚರೂಪವ ತೋರಿಸೋ 6 ದಿವಿಜ ವಂದ್ಯಮಧ್ವಾಂತರಾತ್ಮ ಗುರು ಗೋವಿಂದ ವಿಠಲ ತವದಿವ್ಯ ರೂಪವ ತೋರಿ ಕಾಪಾಡೊ ಹರಿಯೆ 7
--------------
ಗುರುಗೋವಿಂದವಿಠಲರು
ಶಂಭು ಸ್ವಯಂಭುಗಳ ಹೃದಂಬರಕಿಂದು-ಬಿಂಬದಂತಿಹ ಕಂಬುಧರನ ನಂಬು ಮನುಜಡಂಬ ಮತವ ಹಂಬಲಿಸದೆ ಪ. ಕೃದ್ಧ ಖಳರ ಗೆದ್ದು ವೇದವೇದ್ಯವೆನಿಪ ಶುದ್ಧಸುಧೆಯಉದ್ಧರಿಸಿದ ಮಧ್ವಮುನಿ ಪ್ರಸಿದ್ಧವರಗೆ ಊಧ್ರ್ವಹರಿಯಹೊದ್ದಿ ಬದುಕು ಊಧ್ರ್ವಪುಂಡ್ರ ಶ್ರೀಮುದ್ರೆಯನ್ನುಸದ್ವ್ರತಿಯಾಗು ವೃದ್ಧರಂಘ್ರಿಪದ್ಮಕೆರಗು ಕದ್ಯಕರಗದಾದ್ವವ (?) ಬಿಡು 1 ವಿತ್ತ ಪುತ್ರಮಿತ್ರರರ್ಥಿಗೆ ಸುತ್ತ ತಿರುಗುತಿರದೆತೀರ್ಥಕ್ಷೇತ್ರಯಾತ್ರೆಗಳನು ಹೊತ್ತು ಹೊತ್ತಲಿ ವರ್ತಿಸುತಿರುಭಕ್ತರೆ ನಿನ್ನ ಮಿತ್ರರು ಹರಿಭಕ್ತಿಯ ನಿನಗಿತ್ತು ಮತ್ತೆಮುಕ್ತಿಪಥವ ಹತ್ತುವ ಸಂಪತ್ತ ನಿನ್ನತ್ತ ಮಾಡು 2 ಕೋಪವ ಕಳೆ ತಾಪವ ತಾಳು ಪಾಪದ ಬಲು ಲೇಪಕಂಜುಭೂಪರ ಸೇವೆ ಆಪತ್ತಿಹುದು ತಾಪಸರ ಸಮೀಪವ ಸೇರುಶ್ರೀಪತಿ ಹಯವದನನ ಪದದೀಪದ ಬೆಳಕಿನಲಿ ವಿಷಯಕೂಪವ ಕಳೆದಾಪರಮನಲಿ ಪರಸೇವೆಲಾ [ಪೂ]ರನಾಗು 3
--------------
ವಾದಿರಾಜ
ಶಯನ ಸುಖವೇ ಸುಖವೆ ರಂಗನಾಥ ಭಯಗೊಂಡ ಭಕ್ತರೊಳು ದಯವಿಲ್ಲವೆ ಪ ಶರಣನ ಕೈ ನೀಡಿ ಪೊರೆಯೆಂದು ಪೇಳ್ವಾಗ ದುರಿತಗಳ ಹರಿಸೆಂದು ಬೇಡುವಾಗ ಕರುಣಾನಿಧಿ ನೀನೆಂದು ಹಾಡಿ ಹಂಬಲಿಪಾಗ ಶಿರಬಾಗಿ ಪಾದಕೆ ವಂದಿಸುವಾಗ ರಂಗಾ 1 ಜೀವಿಗಳ ಪಾಲಿಸುವ ಹೊಣೆ ನಿನಗೆ ಸಲುವಾಗ ದೇವ ನೀನೋಬ್ಬನೇ ದಿಕ್ಕೆನುವಾಗ ಭಾವದಲಿ ನಿನ್ನಮೂರ್ತಿಯ ನೆನೆದು ನಲಿವಾಗ ದೇವ ಎನ್ನಪ್ಪ ಬಾಯೆನುವಾಗ ರಂಗಾ 2 ಸ್ವಾಭಿಮಾನದಿ ನೀನು ಲೋಕವನು ಮರೆವಾಗ ಲೋಭಿ ನೀನೆನ್ನದೇ ಜಗವೆಲ್ಲ ರಂಗಾ ಲಾಭವುಂಟೇ ಭಕ್ತಜನಕೆಲ್ಲ ಕ್ಷಯರೋಗ ನಾಭಿಗಂಟದೆ ಪೇಳು ಮಾಂಗಿರಿಯರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರಯಧೇನು ಬಂತು ಮನಿಗೆ ದಯ ಕರುಣದಿಂದೊಲಿದು ಸರ್ವಾರ್ಥಗರೆವುತಲಿ ಧ್ರುವ ತನ್ನಿಂದ ತಾನೊಲಿದು ಚೆನ್ನಾಗಿ ತೋರ್ವಿಳಿದು ಭಿನ್ನವಿಲ್ಲದೆ ನೋಡಿ ಹಂಬಲಿಸುತ ಉನ್ನತೋನ್ನತ ಮೋಹ ಮೊಳಿಯೊಳಮೃತ ತುಂಬಿ ಪುಣ್ಯಧಾರಿಂದೊರಗಿ ಭೋರಿಡುತಗಲೆರವುತಲಿ 1 ಸುರಸ ಸಾರಾಯದನುಭವ ಬೆರಸಲಾಗಿ ತಾಂ ವರ ಮಹಾಕೃಪೆ ಘನದೊಳವಿನಿಂದ ಧರೆಯೊಳಾನಂದ ಸುಖ ಸಾರಿಡುತ ಪೂರ್ಣ ಇರ್ಹುಳಗಲೆನದೆ ಸರ್ವಪತಿ ಯಿಂದ್ಹರುಷಗರೆವಾ 2 ಬೆಳಗಿ ತನ್ನರ ಬೆಳೆಸಲಾಗಿ ಸದ್ವಸ್ತು ತಾಂ ತಿಳಿದು ಶ್ರಯಧೇನಾಗಿ ಬಂತು ಬಳಿಗೆ ಕಳವಳಿಸಿ ಕರುಣ ಕಟಾಕ್ಷದಿಂದಲಿ ನೋಡಿ ಎಳೆಗರುವ ಮಹಿಪತಿಗಮೃತನುಣಿಸಿಕೊಳಲಾಗಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ತುಳಸಿ ದೇವಿ ತಾಯಿ ಶ್ರೀ ತುಳಸೀಯೆ | ಕಾಯೆ ಭಕ್ತರ ಪ್ರೀಯೆಕಾಯೆ ಶ್ರೀಹರಿ ಜಾಯೆ | ತಾಯೆ ವರವ ನೀಯೇ ಪ ಪಾದ | ತೋಯಜ ಕಾಂಬುವದಾಯವಿತ್ತೆನ್ನ ನೀ | ಪ್ರೀಯದಿಂದಲಿ ಕಾಯೇ ಅ.ಪ. ಅಮೃತ ಕಲಶಹರಿಯು ಉದುಭವಿಸಲು | ವರ ಧನ್ವಂತ್ರೀಯೂ ||ಹರುಷೋದ್ರೇಕದಿ ನಯನ | ವರಬಿಂದು ಉದುರಲುಶಿರಿ ತುಳಸಿ ಎನಿಸೀದೆ | ಶರಣರ್ಗೆ ಗತಿ ಕೊಡುವ 1 ಓಲಗ ಗೈವರು 2 ಕಲುಷ ಸುಜನ | ಮಲಗಳ ಕಳೆದೂ |ಆಲವ ಭೋದರೆ ಶಾಸ್ತ್ರ | ವಲಿಸಿ ಕೀರ್ತಿಪ ನರಗೆನೆಲೆಯ ಕಾಣಿಪ ತನ್ನ | ಚೆಲುವ ವೈಕುಂಠದಿ 3 ಕರುಣಿಸು ಹರಿಪಾದ | ವರ ಪದ್ಮ ದ್ವಯದಲ್ಲಿನಿರುತ ಭಕುತಿಯನ್ನೆ | ವರಗುಣ ಸಂಪನ್ನೆ |ಕರವೀರ ಪುರದರಿಸಿ | ವರ ಸನ್ನಿಧಾನಕ್ಕೆನಿರುತದಿ ಸತ್ಪಾತ್ರೆ | ಪರಮ ಪಾವನ ಗಾತ್ರೆ 4 ಹಂಬಲೊಂದೆನಗುಂಟು | ಜಾಂಬುವತಿಯೆ ತುಳಸಿಇಂಬಿಟ್ಟು ಸಲಹುವೆ | ನೆಂಬ ಮತಿಯು ಇರೇ |ಬಿಂಬನು ಗುರು ಗೋ | ವಿಂದ ವಿಠಲ ಪಾದಅಂಬುಜದ್ವಯ ತೋರಿ | ಸಂಭ್ರಮದಲ್ಲಿ ಇರಿಸೆ 5
--------------
ಗುರುಗೋವಿಂದವಿಠಲರು
ಶ್ರೀ ಧ್ರುವಚರಿತ್ರೆ ಪದ ಭಜ ಭಜ ಭಜ ಶ್ರೀ ಗಣರಾಜ ತ್ಯಜ ತ್ಯಜ ತ್ಯಜ ತಾಮಸ ಬೀಜ ಪ ಶಂಕರ ಪುತ್ರ ಶುಭಂಕರ ವರನಿಜ ಪಾದ ಸರೋಜ 1 ಲಂಬೋದರ ಪೀತಾಂಬರಧರ ಕರು ಣಾಂಬುಧಿ ವರ ದೇವ ಮಹೀಜ 2 ಶ್ರೀಶಾನಂತಾಜದ್ರೀಶ ವರಾನ್ವಿತ ದಾಸ ಸುವೃತ ಮಾನಸ ಪೂಜ 3 ಆರ್ಯಾ ರಾಜ ಸುಪೂಜಿತ ರಾಜ ರಾಜ ನೃಪ ರಾಜ್ಯ ಮಾಡುತಾ ಇರುತಿಹನು ದುರ್ಜನ ಪುರುಷರ ತರ್ಜನ ಮಾಡುವ ಸಜ್ಜನ ಆತ್ಮಾರಿಂಗ್ಯತಿ ಪ್ರಿಯನು 1 ದೀನ ಬಂಧು ಬಹುದಾನವಂತ ಉ ಪಾದ ಎಂಬುವ ಹೆಸರು ಮಾನಿತರೊಳಗತಿ ಮಾನಯುಕ್ತರು ಮಾನಿನಿಯರು ಇಬ್ಬರು ಇಹರು2 ಸುರಚಿ ಗಣ್ಯಳು ಪಟ್ಟದರಸಿ ಸುನೀತಿಯು ವಿರಸದಿ ಆರಸಗ ನಿಷ್ಟ್ರಿಯಳು 3 ಮುತ್ತಿನಂಥ ವರಪುತ್ರರಿಬ್ಬರು ಉತ್ತಮನೆಂಬ ಸುರುಚಿಪುತ್ರಾ ಉತ್ತಮ ಗಣ್ಯ ಗುಣೋತ್ತಮ ಧ್ರುವನು ಮತ್ತ ಸುನೀತಿಗೆ ತಾ ಪುತ್ರಾ 4 ಮಂದಿರದೊಳಗೆ ವಸುಂಧರೇಶನು ಛಂದದಿ ತಾ ಸುಖದಿಂದಿರಲು ಒಂದಿನದಲಿ ಬಹುಸುಂದರಸಭಿಯಲ್ಯಾ ನಂದದಿ ಬಂದು ತಾ ಕುಳಿತಿರಲು 5 ಶ್ಲೋಕ ಕೂಡಿಸಿತಾ ತೊಡಿಯಲ್ಲಿ| ಮುದ್ದಿಸಿದಾ ಸಭಿಯಲ್ಲಿ | 1 ಛಂದ ನೋಡಿ ಧ್ರುವನು ತಾ ಹರುಷದಿಂದಲಿ ಓಡಿ ಬಂದನು ರಾಜ ಸಭಿಯಲಿ ಕೂಡಬೇಕು ತಾ ಎಂದು ತೊಡಿಯಲಿ ಇಂದು ಮನದಲಿ 1 ನಾಥ ಭೂಮಿಪಾ ನೋಡಿ ಬಾಲನ ಪ್ರೀತಿಯಿಂದಲ್ಯೊಂದು ಮಾತನಾಡನು ತಾತ ಸುತಗೆ ಬಾಯೆಂದು ಕರೆಯನು ಆತ ಧ್ರುವನು ತಾ ಅನಾಥನಾದನು 2 ಆಗ ಸುರುಚಿ ಬಾಲನ್ನ ನೋಡುತಾ ಬ್ಯಾಗನುದರದಲ್ಲಿ ಬಹಳ ಗರ್ವಿತಾ ಯೋಗ್ಯವಲ್ಲ ಕೂಡಲಿಕ್ಕೆ ತೊಡಿಯಲಿ ಹೀಂಗ ದುಷ್ಟ ಮಾತುಗಳು ಬಾಯಲ್ಲಿ 3 ಪದ ಬಾರದೊ ಧ್ರುವಾ ನಿನಗೆ ಸಿಂಹಾಸನ ಪದವಿ ಬಾರದೊ ಧ್ರುವಾ ನಿನಗೆ ಸಾರಸಿಂಹಾಸನವು ಪ ಏರ ಬೇಕೆಂಬುವಂಥಾ ಘೋರತನವ ಬಿಡು ಅ.ಪ ಅನ್ಯಳ ಮಗನೊ ನೀ ಯನ್ನಲಿ ಜನಿಸಿಲ್ಲಾ ಚೆನ್ನಿಗ ಉತ್ತುಮಾಗಿನ್ನ ನೀ ಸರಿಯೇನೋ 1 ಇಂದಿನಾ ಮನೋರಥಾ ಎಂದಿಗಾವುದಲ್ಲಾ ಕಂದ ಸುನೀತಿಯಾ ಮುಂದ ಕೂಡಾಲಿ ಪೋಗೊ 2 ಇಚ್ಛಿ ಮಾಡಾದಿರೋ ಹೆ ಚಿನ್ನಾ ಶ್ರೀ ವತ್ಸನಾರಾಧನಿ ಮಾಡಿಲ್ಲಾ 3 ವೀರ ಸಿಂಹಾಸನ ಏರಬೇಕಾದರೆ ವಾರಿಜನಾಭ ನಾರಾಧನಿ ಮಾಡೊನೀ 4 ` ಚೆನ್ನಿಗಾನಂತಾದ್ರೀಶ್ನ ' ನೀ ಪೂಜಿಸಿ ಯೆನ್ನಲ್ಲಿ ಪುಟ್ಟಾದೆ ಉನ್ನತ ಪದವಿಯು 5 ಶ್ಲೋಕ ಅತ್ಯಂತ ಘೋರತರ ವಾಕ್ಯಗಳನ್ನು ತಾಳಿ ಸಂತಪ್ತನಾದ ಮನದಲ್ಲಿ ಸುನೀತಿ ಬಾಲಾ ಪುತ್ರನ್ನ ನೋಡಿ ಪಿತ ಸುಮ್ಮನೆ ಕೂತನಾಗಾ ತಾತನ್ನು ಬಿಟ್ಟು ನಡದಾ ಧ್ರುವ ತಾನು ಬ್ಯಾಗಾ 1 ಶ್ವಾಸೋಚ್ಛ್ವಾಸವು ಬಾಯಿಲಿಂದ ಬಿಡುತಾ ಕಣ್ಣಿಂದ ನೀರ ಹೋಗುತಾ ಸೂಸು ಬಾಹುವ ದು:ಖದಿಂದ ಮರಗಿತಾ ರೋದನಾ ಮಾಡುತಾ ಬಂದಾ ತೀವ್ರದಿ ತಾಯಿ ಸನ್ನಿಧಿಯಲ್ಲಿ ಆಳುತಾಗ ತುಟಿ ಬಿರಿಗಿಸಿ ಬಂದಾ ಕಂದನ ಮುಂದ ಕುಳ್ಳಿರಿಸಿ ಸತಿ ಕೇಳ್ಯಾಳು ವಿಚಾರಿಸಿ 2 ಪದ ಕಂದ ನೀ ಬ್ಯಾಗ ಹೇಳೊ ಎಲ್ಲೊ ನಿನಗೆ ಇಂದು ಬಡಿದವರ್ಯಾರು ನಿನಗೆ ಪ ಎಂದು ಪೋಗದಲೆ ತನಯ ನೀನು ಇಂದು ಪೋಗಿದ್ದಿಯೊ ದಾರ ಮನಿಗೆ 1 ಘೋರತರ ದು:ಖವೇನೊ ಈ ಪರಿ ನೀರ ತುಳಕುವ ಕಣ್ಣುಗಳಿಗೆ 2 ಏನಂತ ಪೇಳಲಿ ಸ್ವಲ್ಪ ಇಲ್ಲಾ `ಅನಂತಾದ್ರೀಶನ ' ದಯವು ನಮಗೆ 3 ಪದ ತನಯನ ಕೇಳಲು ಹೀಂಗೆ ಪೌರಜನರು ನುಡದರಲ್ಯಾಗೆ ಅರುಚಿನುಡಿಗಳ ಲ್ಹ್ಯಾಂಗೆ ಆ ಸುರುಚಿ ನುಡಿದಳ್ಹಾಂಗೆ 1 ಕೇಳಿದಳೀ ಪರಿವಾಣಿ ಮನ ಪನ್ನಗ ವೇಣಿ ಸಾಗರ ಬಿದ್ದಳು ತರುಣಿ ತಾ ಕೂಗುತ ಕೋಕಿಲವಾಣಿ 2 ಒಡಲೊಳು ಕಿಚ್ಚುರದಂತೆ ಬಹು ಮಿಡುಕೊಳು ತಾಮನದಂತೆ ನಡುಗುತ ಹಿಮ ಹೊಡದಂತೆ ತಾ ನುಡು(ಡಿ)ವಳು ಕರುಣಾದಂತೆ 3 ಏನು ಮಾಡಲಿ ಇನ್ನಯ್ಯೋ ಬಹು ದೀನಳಾದೆ ನಯ್ಯಯ್ಯೊ ಮಾನದ ಪತಿಯೆನ ಕಾಯೊ ಗುರು ಮಾನಸ ದು:ಖವ ತಿಳಿಯೋ4 ಶರಣು ಕೇಳು ದೇವೇಶಾಯನ್ನೊಳು ಕರುಣಾಬಾರದೆ ಲೇಶಾ ಚರಣಕೆರಗುವೆನು ಶ್ರೀಶಾ ಮರಣ ಕುಡಾ`ನಂತದ್ರೀಶ' 5 ಛಂದ ನಾರಿ ಸುರುಚಿಯಾ ಮಾತು ಮರಿಯದೆ ಘೊರ ದು:ಖದಾಪಾರ ತಿಳಿಯದೆ ನೀರ ಧಾರಿಯ ಕಣ್ಣಲ್ಯುದುರುತಾ ಧೈರ್ಯ ಭಾವ ತಾ ಬಿಟ್ಟಳು ಸರುತಾ 1 ಸುಂದರಾಂಗಿಯು ನೊಂದು ಮನದೊಳು ಕಂದಧ್ರುವನ ತಾ ಮುಂದ ನುಡದಳು ಬಂದ ತಾಪವ ಸಹಿಸಬೇಕಯ್ಯಾ ಇಂದು ಮನಸಿನಾ ಕೋಪ ತಾಳಯ್ಯಾ 2 ಕೇಳು ಬಾಲನೆ ರಾಜಯನ್ನನು ಭಾಳ ತುಚ್ಛವ ಮಾಡುತಿಹನು ಭಾಳ ಲಜ್ಜದಿ ಸುನೀತಿ ಭಾರ್ಯಳೆಂದು ಹೇಳಲಿಕ್ಕೆ ನಾಚುತಿಹನು 3 ಯನಗ ಪುತ್ರ ನೀನಾದ ಕಾರಣಾ ನಿನಗ ಮಾಡುವಾ ಅರಸು ನಿರ್ಘೃಣಾ ಕನಸಿಲಿಲ್ಲವೊ ಯನಗ ಹಿತಕರು ತನಯ ವೈಯಲಿಲ್ಲವೊ ಯನ್ನದೇವರು 4 ಮಿಥ್ಯವಲ್ಲವೊ ಸುರುಚಿ ನುಡಿಗಳು ಸತ್ಯ ವಾದ ಮಾತುಗಳು ನುಡಿದಳು ಪಥ್ಯವೆ ಸರಿ ಪರಮ ನಿನಗಿವೆ ಪೊತ್ತುಗಳಿಯದೆ ಪೋಗರಣ್ಯಕೆ 5 ಗುರ್ವನುಗ್ರಹ ಶಿರಸಿ ಗ್ರಹಿಸೈಯ್ಯಾ ಶರ್ವಸಖಗ ನೀ ಪೂಜಿಮಾಡಯ್ಯಾ ಪೂರ್ವದಲ್ಲಿ ನಿನ್ನ ಮುತ್ಯ ಮಾಡಿದಾ ಸಾರ್ವಭೌಮ ಆಧಿಪತ್ಯ ಏರಿದಾ 6 ಇಂದಿರೇಶನಾ ಬ್ರಹ್ಮ ಪೂಜಿಸಿ ಮುಂದ ಏರಿದಾ ಸತ್ಯಲೋಕ ನೇಮಿಸಿ ಕಂದ ಭಜಿಸು ನೀ ಛಂದದಿ ಧ್ರುವಾ ಮುಂದ ಕೇಶವಾನಂದ ಸುರಿಸುವಾ 7 ಶ್ಲೋಕ ಜನನಿಯಾಡಿದ ವಾಕ್ಯವು ಕೇಳಿ ಆಗಾ ಮನಿ ಆಸಿಯು ಬಿಟ್ಟು ನಡದಾನು ಬ್ಯಾಗಾ ಘನಾರಣ್ಯಕೆ ಪೋಗಲು ಶೋಕಸಿಂಧು ಸಿಂಧು 1 ಆರ್ಯಾ ಇಂದಿರೇಶನಾ ಸುಂದರ ಗುಣಗಳ ಬಂದಾಕ್ಷಣಹೀಗೇಂದು ನುಡದನು ಕಂದಗ ಮುನಿ ಆ ಸಮಯದಲಿ 1 ನಿಲ್ಲೆಲೊ ಬಾಲಕ ಬಲ್ಲಿದರಣ್ಯದಿ ನಿಲ್ಲದೆ ಪೋಗುತಿ ಎಲ್ಲಿಗೆ ನೀ ಯೆಲ್ಲಿಂದ ಬಂದಿ ನೀ ಫುಲ್ಲಲೋಚನ ಯೆಲ್ಲ ಬಳಗ ಬಿಟ್ಟಿಲ್ಲಿಗೆ ನೀ 2 ಕಂದ ಬಿಟ್ಟ ನೀ ಬಂದ ಕಾರಣಾ ಇಂದು ತಾಯಿ ತಂದೆಗಳೆಲ್ಲ ಸುಂದರಾನನಾ ಛಂದದಿ ನುಡಿನೀ ಮಂದಿರ ವೃತ್ತಾಂತಗಳೆಲ್ಲಾ 3 ಶ್ರೇಷ್ಠನಾರದ ನೀ ಅಷ್ಟುಲೋಕವಾ ದೃಷ್ಟಿಲಿ ನೋಡುವಿ ಇಷ್ಟರಿಯಾ ಕೆಟ್ಟ ಮಾತು ಆದುಷ್ಟ ಮಳಾಯಿಯು ಎಷ್ಟು ನುಡದಳೊ ಯನಗÀಯ್ಯಾ4 ಏನು ಪೇಳಲಿ ನಾನು ಮುನೀಶ್ವರ ಮಾನ ಗೇಡಿ ಮಾಡಿದಳೆನ್ನಾ ಮಾನ ಹೋಗಿ ಅಪಮಾನಿತನಾಗಿ ಕಾನನ ಶೇರಿದೆ ನಾ ಮುನ್ನ 5 ಮಾನಪಮಾನಗಳೆನಾದರೂ ಸರಿ ಧ್ಯಾನಕ ತರಬಾರದು ನೀನು ನಾನಾ ಲೀಲಿಯಾ ಮಾಡುವ ಬಾಲಕಗೇನು ಚಿಂತೆ ಕೇಳರೆ(ಳುವೆ?) ನಾನು 6 ಶಾಂತನಾಗು ಗುಣವಂತ ಬಾಲ ನಿ ನ್ನಂತರಂಗ ಚಿಂತಿಯು ಬಲ್ಲೆ ಚಿಂತಿಸಿ ಬಂದ್ಯೋ ನೀ ಸತತ ಸುಖ ಭಗವಂತನನೆ ಬ(ರ?) ಬೇಕಂತಿಲ್ಲೆ 7 ಎಂಥವರಿಗೆ ಭಗವಂತ ದೊರಕ ನಿ ನ್ನಂಥ ಬಾಲನಾ ಗತಿಯೇನು ಕಾಂತನಯನ ಶ್ರೀಕಾಂತ ದೊರಕ ಛೀ ಭ್ರಾಂತಿ ಬಿಟ್ಟು ತ್ವರ ನಡಿ ನೀನು 8 ಪದ ನಡಿನಡಿ ನಡಿ ಧ್ರುವಾನೆ ತಿರುಗಿ ಮನಿಗೆ ನಡಿ ನಡಿ ನಡಿ ದೊಡ್ಡ ಅಡವಿಯು ಸೇರಾದೆ ಹುಡುಗ ಬುದ್ಧಿಯನು ಬಿಡು ತಡಮಾಡದೆ ಪ ಅಂಬಕಗಳಿಗೆ ತಾನು ತೋರಾನು ಪೀ ತಾಂಬರಧರ ದೇವಾನು ಅಂಬುಜನಾಭನ ನಂಬಿ ಭಜಿಸುವಂಥ ಹಂಬಲ ಬಿಟ್ಟು ವಿಳಂಬನ ಮಾಡದೆ 1 ಕಾಲಾವಲ್ಲವೋ ಬ್ಯಾಡಯ್ಯ ವಿಗ(ಹಿ?)ತವಾದ ಕಾಲಕೆ ತಪ ಮಾಡಯ್ಯ ಕಾಲಕಾಲಕೆ ಸ್ತನ ಪಾಲನುಂಬುವ ಸಣ್ಣ ಬಾಲ ಈ ವಚನ ಬಿಟ್ಟು ಕಾಲಗಳಿಯದೆ 2 ದೇಶದೇಶವ ತಿರುಗಿ ಬಹಳ ಕಾಸೋಸಿ ಇಂದಲೆ ಮರುಗಿ ಕ್ಲೇಶಾದಿ `ಅನಂತಾದ್ರೀಶ' ದೊರಕ ಘಾಸಿ ನೀ ಆಗದೆ 3 ಆರ್ಯಾ ಮುನಿಯ ವಚನ ನೃಪತನಯ ಕೇಳಿ ಬಹುವಿನಯದಿಂದಲಿ ಹೀಗೆಂದಾ ಘನದು:ಖದಿ ಯನ್ನ ಮನಿಗೆ ಪೋಗಲಿಕ್ಕೆ ಮನಸುವಲ್ಲದು ವಲ್ಲೆಂದಾ 1 ಪದ ಮನಿಗೊಲ್ಲೆ ವಲ್ಲೆ ಮುನಿರಾಯಾಪ ಬಹುತಲ್ಲಣಗೊಳು ತಿಹ(ಹೆ?)ನೈಯ್ಯಾ ಅ.ಪ ಶೋಣೀತ ವಸ್ತ್ರನೆ ಪಾಣಿವಿನಾದಿತ ವೀಣಾಧರ ಕೇಳಯ್ಯ 1 ದುಷ್ಟಮಳಾಯಿಯ ಕೆಟ್ಟಮಾತು ಒಂದಿಷ್ಟು ಸಹಿಸಲಾರೈಯ್ಯ 2 ದೀನದಯಾಳುವೆ ಮಾನಗಳಿದು ಮು ನ್ನೇನು ಉಳಸಲಿಲ್ಲೈಯ್ಯ 3
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ವಧುರಮಣನ ಚರಿತಾಮೃತವನು ಸೇವಿಸಬಾರದೆ ಜಿವ್ಹೆ| ಆವಾಗು ವಿಷಯಾಸಕ್ತಿಲಿ ಬಾಳುವ ದಾವರಸಜ್ಞದ ಗುಣವೇ ಪ ಆರತಿಯಿಂದಲಿ ಷಡರಸದನ್ನದ ಸಾರಾಯಕ ಮರುಳಾದೆ ನೀ| ನರೆರಧರಕ್ಕೊಲಿದೇ ಸುಧಾರಸವೆಂದು ಬಗೆದೇ| ಧಾರಣಿ ಕಳ್ಳಿಯ ಹಾಲೆಂದೆನಿಸಲು ಗೋರಸದ್ಹಂಬಲ ಮರೆದೆ 1 ಜ್ಞಾನವ ಸಾಧಿಸಿ ಬಹು ಸಾಯಾಸದಿ ನಾನು ಶಾಸ್ತ್ರವ ನೋಡಿ| ಮಾನದ ಕಾಂಕ್ಷಿಯ ಕೂಡಿ| ಪರಿ ಕುಣಿದಾಡುವ ಹೀನ ಮನುಜರಾ ಪಾಡಿ2 ಸ್ಮರಿಸಲು ಶ್ರೀಹರಿಯಾ ಲೋಹ| ಪರಸವ ಮುಟ್ಟಿದ ಪರಿಯಾ ಧನ್ಯರು ತಮನೆನಿಸುವನರಿಯಾ| ಗುರುವ್ಕ ಮಹಿತಪಿ ನಂದನು ಸಾರಿದ ಮೊರೆ ಹೋಗು| ಮೂಜಗ ಧೊರಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಶೇಷ ಚಂದ್ರಿಕಾರಾಯರ ಸಂಕ್ಷಿಪ್ತ ಚರಿತ್ರೆ (ವಾರ್ಧಿಕ ಷಟ್ಪದಿ) ರಘುನಾಥರಂ ಸೇವಿಸೀ |ರಘುನಾಥ ತೀರ್ಥರಂ ಮಿಗಿಲಾಗಿ ಸೇವಿಸುವಅಘಗಳನು ನೀಗಿ ಶ್ರೀ ರಘುವರನ ಪ್ರೀತಿಯನುಮಿಗೆ ಪೊಂದಿ ಭವದಾಟಿ ನಗಧರನ ಲೋಕದೊಳು ಬಗೆ ಬಗೆಯ ಸುಖದಿ ಬಾಳ್ವ ಪ ಏಕಮೇವನ ಚರಣ | ತೋಕರೆಂದೆನಿಸಿ ಸಾತ್ವೀಕರೆನಿಪ ತಾಯ್ತಂದೆಗಾಕುವರನೆನಿಸುತಏಕಋಷಿ ಶೌನಕ ಸುಗೋತ್ರದೊಳುವೆಂಕಟವರಮೃಗಾಭಿದನು ಎನಿಸೀ ||ನೂಕಿ ಪಂಚಾಬ್ದಗಳನಾ ಕುವರಗಾಗುಪನಯನಕೈಗೊಂಡು ಗುರು ಚರಣನೇಕ ವಿಧ ಸೇವಿಸುತವಾಕಾದಿ ಶಾಸ್ತ್ರಗಳ ಸಾಕಷ್ಟು ಅಭ್ಯಸಿಸಿ ಸ್ವೀಕರಿಸಿ ದ್ವಿತೀಯಾಶ್ರಮಾ 1 ಅನುಜ ಅಂಭ್ರಣಿಯ ರಮಣಪದಅಂಭುಜಗಳಂ ಭಜಿಸಿ ಸಂಭ್ರಮದಿ ಸತಿವೆರಸಿ ಉಂಬುಡುವ ಸರ್ವವೆಲ್ಲ |ಬಿಂಬನಲಿ ಅನ್ವಯಿಸಿ ಇಂಬುಗೊಂಡವರಾಗಿಸಂಭ್ರಮದ ಸಂತಾನದಂಬಲನೆ ತಾ ತೊರೆದುಹಂಬಲಿಸಿ ಹರಿಪಾದ ಗುಂಭದಿಂದಲಿ ಭಜಿಸಿ ಇಂಬಿಟ್ಟ ಸನ್ಯಾಸದೀ 2 ಹತ್ತು ಮೂರ್ಮತ್ತೈದು ವತ್ಸರದಿ ವಿಠಲ ಪದವರ್ತಿ ಲಕುಮಿನರೆಯಣ ತೀರ್ಥರಿಂ ಸನ್ಯಾಸದುತ್ತ ಮಾಶ್ರಮ ಪೊಂದಿ ಭೃತ್ಯರಿಗೆ ಶ್ರೀಮಧ್ವ ಶಾಸ್ತ್ರಗಳ ಬಿತ್ತರಿಸುತಾ |ಮತ್ತೆ ಬದರಿಯ ಸೇತು ಉತ್ತಮ ಕ್ಷೇತ್ರ ತ್ರೈರಾವರ್ತಿ ಸಂಚರಿಸಿ ಬಲು ಮತ್ತ ಮಾಯ್ಗಳನಳಿದುಕೃತ್ತಿ ವಾಸನ ತಾತ ಉತ್ತಮೋತ್ತಮನೆಂದು ವತ್ತಿ ಪೇಳ್ದರು ಸುಜನಕೇ 3 ಶೇಷನಾವೇಷದಿಂ ವ್ಯಾಸಾಭಿದಾನ ಸ ನ್ಯಾಸಿ ಎನಿಸುತಲಿ ದೀನೇಶನಂಶಜರಿಂದವಾಸಿಸುತ ಹಂಪೆಯಲಿ ಲೇಸು ಸುತ್ಸೂತ್ರಗಳ ಭಾಷ್ಯಾವ್ಯಾಖ್ಯಾ ಚಂದ್ರಿಕಾವ್ಯಾಸ ತ್ರಯಗಳು ಎಂದು ಭಾಸುರದ ಕೀರ್ತಿಯಲಿಕಾಶಿ ಗಧದರ ಮಿಶ್ರ ಏಸು ಮಾಯ್ಗಳ ಜಯಕೆಲೇಸು ಕಾರಣವೆನಿಪ ಆಸಿ ಗ್ರಂಥಗಳ್ರಚನೆ ಬೇಸರದೆ ನೆಡೆಯುತಿರಲೂ 4 ವರಶಿಷ್ಯರಿಂವರೆಸಿ ಇರುತಿರಲು ದಿನ ಒಂದುಅರೆವಾಸಿಯಾದಂಥವರ ಚಂದ್ರಿಕಾಗ್ರಂಥಎರಡು ಅಧ್ಯಾಯಗಳು ಪೂರಣವು ಯಾರಿಂದ ಒರೆವುದೆಂದೆನೆ ಪ್ರಾರ್ಥಿಸೀ ||ವರನರರ ಸಲಹುದಕೆ ಹರಿಯಾಜ್ಞೆಯಿಂ ಮತ್ತೆಎರಡು ಮೂರ್ಜನ್ಮಗಳ ಧರಿಸುವೆವು ನಾವು ಎರಡೈ-ದರಿಲ್ಲಿಂದ ನರಜನ್ಮದೊಳು ಗ್ರಂಥ ಪೂರಣವು ಆಹುದೆಂದರು 5 ಉಕ್ತಿಗನು ರಘುನಾಥ ತೀರ್ಥರೆಂದುರೆ ಮರೆದುಗ್ರಂಥ ಶೇಷವ ರಚಿಸಿ ತತ್ತರಭಿಧರು ಎನಿಸಿತತ್ವ ಕಣಿಕಾಖ್ಯವನು ತಂತ್ರಸಾರದ ವ್ಯಾಖ್ಯಮತ್ತಿತರ ಗ್ರಂಥಗಳನು ||ಬಿತ್ತರಿಸಿ ಹರಿಯನ್ನು ತೃಪ್ತಿಸುತ ಪೂರ್ವದಲಿಛಾತ್ರರಂ ಪಡೆದಂತೆ ಮತ್ತೆ ಈ ಜನ್ಮದಲಿಉತ್ತಮರು ಶಿಷ್ಯ ಸಂಪತ್ತಿನಿಂ ಮೆರೆದಿಹರು ತತ್ವಕೋವಿದರು 6 ತೈಜಸ ಪೇಳಿದ 7 ಮಹಿಷಿ ಕ್ಷೇತ್ರದೊಳುಸಿರಿ ಕೃಷ್ಣನಂ ನಿಲಿಸಿ ಹರಿರಥೋತ್ಸವ ಪೂಜೆವರುಷ ವರುಷದಿ ಗೈಯ್ಯೆವರ ಭೂಮಿ ಕಾಣೆ ಭೂಸುರರಿಗಿತ್ತಿಹರು ಅಯ್ಯಾ 8 ಆಷಾಢ ಸಿತ ತೃತಿಯ ಭಾಸಿಸುವ ಮಧ್ಯಾಹ್ನಕಾಶೀಗೇ ಮಿಗಿಲೆನಿಪ ತ್ರಿಮಕೂಟಗಾಗಮಿಸಿಭೂಸುರರಿಗೇ ತಮ್ಮ ಆಶ್ವಾಸ ತಿಳಿಸುತ್ತ ಲೇಸು ಸಂಗಮವೀಯತಾ ||ಶೇಷ ಚಂದ್ರಿಕಾಚಾರ್ಯ ಶ್ರೀಶನರ್ಚಿಸಿ ಕಾಯರಮೇಶ ಚರಣದಲೀಯ ಲೋಸುಗದಿ ಮನಮಾಡಿಆಸುಸತ್ತಿಥಿ ಚೌತಿ ಲೇಸೆನಿಸಿ ಉದಿಸುತಿರಲೀ ಶರೀರವನು ಅರ್ಪಿಸಿದರು 9 ಇವರ ವೃಂದಾವನವು ಅಶ್ವತ್ಥ ನರೆಯಣನಪವಿತರದ ಪದ ಧ್ರುವಕೆ ಬೀಳುವ ಸ್ಥಳದೊಳಗೆ ಸ್ಥಾಯವದು ಮಠಬಿರಿದುಗಳು ಅಶ್ವತ್ಥತರುಛಾಯವೇ ಛತ್ರಿಯೆನಿಸುತಿಹುದೂ ||ಕವೇರ ಕನ್ಯೆಯು ಕಪಿಲ ದಿವ ದೀವಟಿಗೆ ಸಮವುಇವರಿರುವ ಕ್ಷೇತ್ರವೇ ಪ್ರವರ ಗಯಪ್ರಯಾಗವಿಶ್ವೇಶ ಸನ್ನಿಧಿಯು ಇವರ ಗುಣ ಸ್ಥವನವೇಶಶ್ವದಾನಂದ ಸಂದೋಹವು 10 ವತ್ಸರವು ನೂರೆರಡು ಸತ್ಸಿದ್ದಿಗೇ ಪೊತ್ತಸತ್ಸರೀರವ ತ್ಯಜಿಸಿ ಮತ್ಸರಾದ್ವಿರಹಿತರುವತ್ಸಾರಿ ಸಿರಿಕೃಷ್ಣ ವತ್ಸರೆಂದೆನಿಸುತ್ತ ಸತ್ವ್ಸಭಾವದಿ ಮೆರೆಯುತಾ ||ಹೃತ್ಸರೋಜದಿ ಪವನ ಹೃತ್ಸರೂಜದಿ ಶಿರೀವತ್ಸಲಾಂಛನ ಗುರುಗೋವಿಂದ ವಿಠಲಪದಸತ್ಸರೋಜದ ಧ್ಯಾನ ಉತ್ಸುಕದಿ ಗೈದು ತನವತ್ಸರ್ಗ ಬೀಷ್ಟಗಳಗರೆವಾ 11
--------------
ಗುರುಗೋವಿಂದವಿಠಲರು
ಶ್ರೀ ಸತ್ಯಧೀರರು ಚಾರು ಚರಣಗಳಿಗೆರಗುವೆನು ಪ ವರಮತಿಗುಣಗನ ಮಣಿಯೆ ಅ.ಪ. ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ ಮತಿಹೀನರಪಹಾಸ್ಯ ಮಾಡಿದರೆ ಪರಿಯಂತ ಹರಿಸೇವೆಯಾ ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ ಹಿತದಿಂದ ಕೈಗೊಂಡ ದಶರಥನಂದ ರಘುರಾಯ ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ 1 ವರಮಧ್ವಮತಾಭಿಮಾನಿಯೆ ನಿನ್ನಯ ದರುಶನದಿಂದ ಪಾವನನಾದೆನೋ ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ ವರಸೇವಾ ಸರ್ವಜ್ಞ ಪೀಠಕೆ ಸರಸ ಶೋಭಿಸುವಾ ಹರಿವಾಯುಗಳಲಿ ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ 2 ಆನಂದಜ್ಞಾನದಾಯಕನಾಜ್ಞೆಯಿಂ ಸತ್ಯಜ್ಞಾನಾ- ನಂದಗಿತ್ತಿ ಉತ್ತಮಪದವಾ ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ ಸೇವಕನೋ ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ 3
--------------
ಹನುಮೇಶವಿಠಲ
ಶ್ರೀಮಹಾಲಕ್ಷಮಿತಾಯೇ | ಶ್ರೀ ಮಹಾಮಾಯೆ | ಹೇಮಾಯಾ ಕರುಣಾಬ್ದಿಯೇ | ಕಾಮಿತ ಫಲನೀಯೇ | ಸಾಮಜಗಮನಿಯೇ | ಹೇಮಾಯಾ ಕೋಟಿ ಸಮಕಾಯೇ | ಶುಭಚರಿಯ | ಬಹುಪರಿಯೇ | ಹರಿಪ್ರೀಯೇ | ಅರಿಯೇ ಪ ಶರಧಿಸುತವನೇ | ಸರಸಿಜಸದನೆ | ಸುರಚಿರದವರಾನೆ | ಕರಿಸರ್ಪವೇಣೆ | ದುರಿತಾದೌಘಪಹರಣೆ | ಕರುಣದಾಗಾರೆ ಶರಣೆ | ನೆರೆನಿನ್ನನಂಬಿದೆನೆ ಮಾತೆ | ಅದ್ಭುತೆ | ರವಿನಮಿತೆ | ಪ್ರಖ್ಯಾತೆ | ದಾತೆ 1 ಹೊಳೆವ ಸೌಂದರ್ಯ ಸಲಹೆ | ಸಲೆಕುಲದೈವೆ | ಸುಜನ ಸೇವೆ | ಮಲಿನರ ಭಾವೆ | ಹಲವು ಮಾತೇನು ಫಲವೇ | ಬಲುನಾಹಂಬಲಿಸುವೆ | ಒಲಿದು ಕರುಣಿಸು ಭಾಗ್ಯವಂತೆ | ಗುಣವಂತೆ | ಬಹುಶಾಂತೆ | ದಯವಂತೆ ಕಾಂತೆ 2 ಕರವೀರ ಪುರಧೀಶೆ | ಶರಣರುಲ್ಹಾಸೆ | ಸುರಮುನಿಜನತೋಷೆ | ಶಿರಸ್ವಪ್ರಕಾಶೆ | ಪರತರ ಸುವಿಲಾಸೆ | ಗುರುಕೃಷ್ಣಸುತನೀಶೆ | ವರಕೊಲ್ಹಾಸುರನ ವಿನಾಸ | ಜಗದೀಶೆ | ಮೃದುಭಾಷೆ | ಅವಿನಾಶೆ | ಈಶೆ 3 ಅಂಕಿತ-ಗುರುಕೃಷ್ಣಸುತ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಹರಿ ಕೀರ್ತನೆ ಅಗಲದಿರೋ ಮನ ಮಂದೀರದಿಂದ ಲೆನ್ನ ಎಂದೆಂದಿಗೂ ಕೃಷ್ಣ ಪ ಅಗಲದಿರೋ ಬ್ರಹ್ಮಾದಿ ವಂದಿತ ಪರಿ ಪೂರ್ಣ ಏಕನೆ ವಿಶ್ವ ಸಗುಣ ನಿರ್ಗುಣ ನಿರಜ ನಿಸ್ಸೀಮ ಅ.ಪ. ಕಷ್ಟವಿಲ್ಲದೆ ಸಕಲ- ಚೇಷ್ಟೆಯ ನಡಿಸುವೆ ಕೊಟ್ಟು ದೇಹಾದಿಗಳ- ಬಿಟ್ಟೇ ಜೀವರ ಭವದಿ ಗಿಟ್ಟೀಸೆ ತಮ್ಮ ತಮ್ಮ- ಪಟ್ಟಾ ಮುಕ್ತಿಯ ಬೇಗ ಒಟ್ಟಿನಿಂದಲಿ ಜೀವ ಜಗವಂದಿಷ್ಟು ಚಲಿಸದು ಬಿಟ್ಟು ನಿನ್ನನು ಗುಟ್ಟು ತಿಳಿಯದೆ ಭವದಿ ಕಂ- ಗೆಟ್ಟು ಬಳಲಿದೆ ಭಕ್ತಬಾಂಧವ ನಷ್ಟಕಷ್ಟಗಳಿಲ್ಲದಾ ಸಂತುಷಷ್ಟ ನೀಡುವ ಪ್ರಭುವೆ ಕರುಣಾ- ದೃಷ್ಟಿ ಬೀರುತ ಭಕ್ತಿ ಭಾಗ್ಯವ ಪುಷ್ಟಿಗೈಸುತಲೆನಗೆ ಸಂತತ 1 ಶ್ರೀಶಾನೊಬ್ಬನೆ ಸರ್ವ ತಂತ್ರ ಸ್ವತಂತ್ರನು ನಾಶರಹಿತನಿಗೆಲ್ಲಾ ದಾಸರೆ ಸರಿಸತತಾ ವಾಸುದೇವನು ಜೀವ ಜಗದಿಂ ವಿಲಕ್ಷಣನು ಈಸುಜ್ಞಾನವನೀಯೋ ಜನ್ಮಜನ್ಮಾಂತರಕು ದೋಷದೂರ ವಿಶೇಷ ಮಹಿಮ ಪೂರ್ಣ ವಿಶ್ವಗ ಶಶ್ವದೇಕ ವಿ- ಲಾಸ ಮಿಷಣಾಭರಣ ಭೂಷಿತ ಸಾಮಸರ್ವಾಧಾರ ನಿರುಪಮ ಓಸು ಶಬ್ದಗಳಿಂದ ವಾಚ್ಯನೆ- ನಾಶಗೈಸುತ ಕರ್ಮತ್ರಯಗಳ ಹೃದಯಗುಹೆಯಲಿ 2 ನಿತ್ಯನಿಗಮಾತೀತ-ನೀನೆ ಸತ್ಯರ ಸತ್ಯ ನಿತ್ಯತೃಪ್ತನು ಸ್ವರತ-ಮುಕ್ತೇಶ ಚಿನ್ಮಯನೂ ನಿತ್ಯಜೀವಗೆ ನೀನಿರ್ನಿಮಿತ್ತ ಬಂಧು ಸತತ ನಿತ್ಯಸ್ತೋತ್ರವನು ನುಡಿಸು-ಮೃತ್ಯೋಮೃತ್ಯುವೆ ದೇವಾ ಧಾಮ ವಿಶ್ವೋ ತ್ಪತ್ತಿ ಸ್ಥಿತಿಲಯ ಕರ್ತ ಪರಿಪರಿ ಜೀವ ಸತ್ತಾದಿ ಭಾಸಕ ನಾಥ ಮುಕ್ತಾಮುಕ್ತ ವಂದಿತ - ಭೂತಿ ಭೂರಿದನಾಂತಾತ್ಮ ಖ್ಯಾತ ಸರ್ವೋತ್ತಮ ಪರತ:ಪರಾಕ್ಷರ ವಿಷ್ಣುಸರ್ವಜ್ಞ 3 ಅಂಬುಜಾಕ್ಷನು ನೀನೇ-ಉಂಬುವೆ ಸರ್ವಸಾರ ತುಂಬಿರುವೆ ಒಳಹೊರಗೆ-ಬೆಂಬಲನು ಜಗಕೆಲ್ಲ ಬಿಂಬ ನೀ ಚಲಿಸೆ ಪ್ರತಿ ಬಿಂಬಾ ನಾ ಚಲಿಸುವೆ ನಂಬಿದೆ ಸಲಹಯ್ಯ-ಕಂಬುಚಕ್ರಾಂಕಿತನೆ ಕುಂಭಿಣೀಪತಿ ಕೃಷ್ಣಕೈಬಿಡೆ ಗೊಂಬೆ ಸರಿನಾಲ್ಲವೇನೈ ಡಿಂಬದೊಳಗಿನ ವೈರಿವೃಂದವು ಹಂಬಲಿಸಲೆಡೆಗೊಡವುಭವ ದೊಂಬಿ ಅಡಗಿಸು ದಕ್ಷಣಾಕ್ಷಿಗ-ಸ್ಥಂಭರೂಪಿಯೆ ಶರಣುಶರಣು ಎನಿಸೈ ನೀಡಿ ವಿಜ್ಞಾನ 4 ಮಂದರೋದ್ಧರ ಗೋವಿಂದ ನಿನ್ನಯ ಮಹಿಮೆ ಇಂದಿರೆಗಾಗದು ಸಾಕಲ್ಯ ತಿಳಿಯೆಸಿದ್ಧವಿದೂ ಛಂದಾ ಛ್ಚಾದಿತ ಗಾತ್ರ-ಬಂಧ ಮೋಕ್ಷಪ್ರದನೆ ಎಂದು ಕಾಂಬೆನೋ ನಿನ್ನ-ಮಂದನಾನಿಹೆ ಜಗದೀ ಸದ್ಮ ಪೂರ್ಣಾನಂದ ನಿನ್ನಯ ನಾಮ ವೃಂದದಿ ಬಂಧಿಸಿಹೆ ಜಗವೆಲ್ಲ ವಿಷ್ಣುವೆ-ಛಂದಬೃಹತೀಪತಿಯೆ ನೀನೈ ನಾಡಿ ಮೆರೆಯುವ ಇಂದಿರಾಪತಿ ಕೃಷ್ಣವಿಠಲನೆ-ನಿಂದು ತೋರುತ ನಿನ್ನ ರೂಪವ 5
--------------
ಕೃಷ್ಣವಿಠಲದಾಸರು
ಶ್ರೀಹರಿ ಸಂಕೀರ್ತನೆ ಪತಿತ ಪಾವನ ಗೋವಿಂದ ನಮ್ಮ ಪದುಮದಳಾಕ್ಷ ಸದಾನಂದ ಪ ಸತಿಪತಿ ನುತ ಸಾರ್ವಭೌಮ ಸು ವೃತಾ ಚರಣ ಘನ ರಾಜಿತ ಸುಂದರ ಅ.ಪ ಧೀರನಮೋ ಸುವಿಚಾರ ನಮೋ ಯದುವೀರ ನಮೋ ರಜದೂರ ನಮೊ ಮಾರನಮೋ ಗಂಭೀರ ನಮೊ ಭವಹಾರ ನಮೋ ದಧಿ ಚೋರ ನಮೊ 1 ಜನನ ಮರಣ ಜರ ರಹಿತ ನಮೋ ಪಾವನ ಪದ ಪಂಕೇರುಹ ನಯನ ನಮೋ ಮನ ವಚನಕೆ ಸಿಗದ ನಿಮಿಷ ಪತಿ ನಿನ್ನನೆ ಬೇಡುವೆ ಪೊರೆಯೆನುತ ಕರಮುಗಿದು 2 ಶೌರಿ ಶುಭ ನಾಮ ಭಕ್ತ ಜನ ಹಿತಕಾರಿ ಸುತ್ರಾಮ ಅನುಜ ನಿ ಸ್ಸೀಮ ಮಹಿಮ ಶಿರಿಧಾಮ ಅನಘ ನಮೊ 3 ಅನ್ಯನೆ ನಾ ನಿನ್ನಗೆ ದೇವ ಸಾಮಾನ್ಯನೆ ಅಭಿಮನ್ಯುನ ಮಾವಾ ಇನ್ನೆನೆನ್ನದೆ ನಿನ್ನಿಂ ಲಭಿಸಿದ ನುಣ್ಣುವ ಯನ್ನನು ಮನ್ನಿಸದಿರುವರೆ 4 ಹಿರಿಯರ ದಯವಿರುವುದು ಸರೆ ನೀ ಪೊರೆವಿ ಬಿಡದೆ ಯಂಬೋದು ಖರೆ ಸ್ವರಸ್ವರ ಘಸಿದಾಲ್ಪರಿದ ಮೇಲೆ ಸುಧೆ ಗರಿವರ ತೆರ ಚರಿಪುದು ಧರವೆ 5 ದಾಸರ ಪೊರೆಯಲು ದಾಶರಥೇ ಅಮಿತ ಮತೆ ಶ್ರೀಶಾನಿಮಿತ್ಯ ಬಂಧುಯೆನಿಸಿ ಉದಾಸಿಸೆ ಆಗಮ ರಾಶಿಗೆ ಶೋಭವೆ 6 ಘಾಸಿಗೊಳಿಸುವರೆ ಸೈಸೈಸೈ ನೀ ನೀಶನಾದದಕೆ ಫಲವೇನೈ ಪೋಷಕ ನೀನೆಂದಾಸಿಸಿದವರನು ನೀ ಸಲಹದೆ ಬರೆ ಸೋಸಿಲಿ ಮೆರೆವರೆ 7 ಧೃವನ ಪೊರೆದ ಬಲುವೇನಾಯ್ತೈ ಉದ್ಧವಗೆ ವಲಿದ ದಯ ಏಲ್ಹೊಯತೈ ಬವರದೊಳಗೆ ಪಾಂಡವರ ಕಾಯ್ದ ಮತಿ ಸವಿಯುತೆ ಪವನಪಸವಿದ ಸತತ ಸುಖ 8 ಘನ್ನ ಕರುಣಿ ನೀ ನಹುದೇನೊ ಆಪನ್ನ ರಾಪ್ತ ನೀ ನಿಜವೇನೋ ಸೊನ್ನೊಡಲಾಂಡಗ ನೀನಾದರೆ ಗತ ಮನ್ಯುನಾಗಿ ಜವ ನಿನ್ನನೆ ತೋರಿಸು 9 ತಂದಿನ ಪಾಲಿಸಿ ಮಗನನ್ನು ಬೇಕೆಂದು ಕೊಂದ ಕೃಷ್ಣನೆ ನೀನು ತಂದು ತೋರೊತವ ಸುಂದರ ಪದಯುಗ10 ಕಂದುಗೊರಳನುತ ಪೊರೆಯೆಂದು ಬಲು ವಂದಿಸಿದರು ತ್ವರ ನೀ ಬಂದು ಕಂದನ ಕರದ್ಯಾಕೆಂದು ಕೇಳ್ದದಕೆ ನೊಂದು ಬಿಡಿ ನುಡಿ ಗಳೆಂದೆನು ಕ್ಷಮಿಸೈ 11 ಬಲು ಮಂದಿನ ಸಲಹಿದಿ ನೀನು ಅವರೊಳಗೆ ಓರ್ವನಾನಲ್ಲೇನೊ ನೆಲೆಗಾಣದೆ ತವ ಜಲಜ ಪಾದ ಹಂಬಲಿಸುವರರ್ಥವ ಸಲಿಸದೆ ಬಿಡುವರೆ 12 ಬೇಡಿಕೊಂಬುವದೊಂದೆ ಬಲ್ಲೆ ಅದುಕೂಡಾ ತಿಳಿದು ನೋಡಲು ಸುಳ್ಳೆ ಬೇಡಿ ಬೇಡಿಸುವಿ ಮಾಡಿ ಮಾಡಿಸುವಿ ರೂಢಿಪತಿ ನೀನಾಡಿದ ನಾಡುವೆ 13 ನಾಗಶಯನ ನೀ ಬದುಕಿರಲು ಎನಗಾಗ ಬೇಕೆ ಕಲಬಾಧೆಗಳು ಸಾಗರಾಂಬರಪ ಸುತನಿಗೆ ಪುರ ಜನ ಬಾಗದೆ ಅಣಕಿಸಿಧಾಂಗಲ್ಲವೆ ಇದು 14 ಕರೆದರೆ ಬರುವೆನು ನಿನ್ನಡಿಗೆ ಧಿ ಕ್ಕರಿಸಲು ಮರುಗುವೆ ಮನದಾಗೆ ನಿರ್ವಿಣ್ಯನು ಪರತಂತ್ರನು ನಾನಿ ನ್ನೆರಳಲ್ಲವೆ ಮದ್ಗುರುವರ ವರದಾ 15 ಕಲ್ಲಿನ ರೂಪದಿ ಪೂಜಿಯನು ಗೊಳ್ಳುವ ಬಗೆ ನಾನೊಲ್ಲೆ ನಿನ್ನ ಶಿರಿ ನಲ್ಲೆ ಸಹಿತ ಬಂದು ನಿಲ್ಲೊ ಅರ್ಚಿಸುವೆ 16 ಕಣ್ಣಲಿ ತವದರ್ಶನ ಅಮೃತ ಭವ ತ್ರಾತಾ ಘನ ಕರುಣಿ ಬಾರೆನೆ ಬರುವೆನು ಎಂದೆನ್ನುವ ಬುಧ ನುಡಿ ನನ್ನಿಯೆನ್ನುವೆನು 17 ಭಿಡೆಯ ಬಾರದೆ ಬಲು ಘನ್ನಾ ನಾನುಡಿಯು ವಡ್ಡಿ ಬೇಡಿದರನ್ನ ಕೊಡಗೈಯವನಿಗೆ ಲೋಭವು ಎಲ್ಲಂದಡರಿತು ನುಡಿ ನುಡಿ ಕಡಲಜಳೊಡೆಯನೆ18 ನ್ಯಾಯಕೆ ಅಧಿಪ ನೀನೆ ಜೀಯಾ ಅನ್ಯಾಯಕೆ ಪೇಳುವರಾರೈಯ್ಯ ಮಾಯವೆಂಬೊ ಘನ ಘಾಯವುಎನ್ನನು ನೋಯಿಸುತಿದೆ ಜವಮಾಯಿ ಸುಭೀಷಿಜನೆ 19 ವರುಣಗೆ ವಾರಿಯು ನೀನಯ್ಯ ದಿನ ಕರನಿಗೆ ಮಿತ್ರನು ನೀನಯ್ಯ ಸುರಪಗೆ ಇಂದ್ರನು ಉರಗಕೆ ಶೇಷನು ಸರ್ವವು ನೀನೆಂದರಿತೆನು ಕರುಣಿಸು 20 ಹನುಮಗೆ ಪ್ರಾಣ ಮೂರೊಂದು ಆನನನಿಗೆ ವೇಧನು ನೀನಂದು ಮನಸಿಗೆ ನೀ ಮನ ಜೀವಕೆ ಜೀವನ ಎನುತ ಅರಿದು ನಮೊ ಎನ್ನುವೆ ಕರಮುಗಿದು 21 ಮೂಗಣ್ಣಗೆ ರುದ್ರನು ನೀನೆಧರೆ ಆಗಸ ಸಾಗರ ಧಾರಕನೆ ಶ್ರೀ ಗುರು ರಘುಪತಿ ರಾಗ ಪಾತ್ರ ಭವ ನೀಗದೆ ಬಿಡುವರೆ 22 ಪದುಮನಾಭ ನಿನ್ನನು ಕುರಿತು ನಾ ನೊದರುವ ನುಡಿಗಳು ಚಿತ್ರವತು ವಿಧಿಪತ್ರವನಾಂತು ನಿನ್ನ ಪಾದ ವದಗಿಸದಲೆ ಬರೆ ಪದವೆನಿಸಿದವೆ 23 ಸ್ತವನಕೆ ವಲಿಯದೆ ಇರೆ ನಮನ ಗೈಯುವೆ ಇಕೊ ನೋಡೆ ದಾಸ್ಯತನಾ ಅವನಿಪ ಸರ್ವಕೆ ವಲಿಯದೆ ಇರೆ ಬೈಯುವೆ ಬಡಿಯುವೆ ಸಿಕ್ಕರೆ ಸೆರೆ ಪಿಡಿಯುವೆ 24 ಚೋರನೆ ನೀ ನಡಗಿದೆಯಾಕೆ ಸ್ಮøತಿ ದೂರನೆ ಎನ್ನನು ಮರಿವದೇಕೆ ಆರು ನಿನಗೆ ವೈಯಾರವು ಈ ಪರಿ ಕಾರುಣ್ಯದಿ ಕಲಿಸಿದರೋ ಕರಿವರದಾ 25 ಮರೆದಿಯ ನೀ ಕನಿಕರ ಬಡುವ ಸ್ಥಿತಿ ನೀ ಜರದರೆ ನಮಗಿನ್ನೇನು ಗತಿ ಪರಿಪರಿ ವರಲು ವರಲಿ ದಯಮಾಡದೆ ಇರವದು ನಿನ್ನಗೆ ಮರಿಯಾದಿಯೆ ಹರಿ 26 ರೂಪ ತೋರಲೆನ್ನುವಿಯಾ ಆಹದೆ ಪೇಳಲೊ ಹೇ ವಿಗತಾಗಭಯ ಪಾಪಬಾರದೆ ಈ ಪರಿಯನ್ನನು ನೀ ಪಿಡಿಸೆ ಗತತಾಪ ಶ್ರೀಪ ಹರಿ 27 ಸುರತನು ಸಾಕದೆ ಬಿಟ್ಟವಗೆ ತನ್ನ ಸತಿಯಳ ಖತಿಯೊಳಗಿಟ್ಟವಗೆ ಕ್ಷಿತಿಯರು ಏನೆನ್ನುವರು ಮನದೊಳಗೆ ಪತಿ ಯೋಚಿಸಿ ಹಿತಗೈಯನ್ನೊಳು 28 ಶಿರಿಗೋವಿಂದ ವಿಠಲ ಪಾಹಿ ಗುರುವರ ರಘುಪತಿನುತ ಪದ ಪಾಹಿ ಬರೆ ಮಾತಲ್ಲವೊ ತ್ವರ ತವ ಪಾದ ಸಿರಿ ಸುರರಾಣೆ 29
--------------
ಅಸ್ಕಿಹಾಳ ಗೋವಿಂದ