ಒಟ್ಟು 4643 ಕಡೆಗಳಲ್ಲಿ , 128 ದಾಸರು , 3220 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ಯಾಸೆಪಡಬೇಡ ಅಸ್ಥಿರ ಸಂಸಾರ ಮತ್ತನಾಗದಿರೆಲವೊ ಪ ವೆತ್ಯಸ್ತ ಸ್ಥಿತಿಯಿಂದಾನಿತ್ಯಾ ಶರೀರವಿದು ಅ.ಪ ಜನರಾಡುವುದು ಕೇಳಿ ಮನಕೆ ಬಂದುದ ಕೋರಿ ಅನುಮಾನ ಚಿತ್ತನಾಗಿ ವನಿತೆಯರ ಬಲೆಯೊಳು ಸಿಲುಕಿ ಮೋಹಭ್ರಾಂತಿ ವಶನಾಗಿ ಧರ್ಮಾಧರ್ಮಗಳ ತಿಳಿಯದೆ 1 ಹೇಯ ಸುಖವ ಬಯಸಿ ಆಯಾಸ ಪಡುತಲಿ ಬಾಯ ಬಿಡುತ ಸತತ ನೋಯುತಾ ನುಡಿಯುತ ಕ್ರೋಧ ಲೋಭದಿ ಮುಳುಗಿ ನಾಯಿಯಂದದಿ ತಿರಿಗಿ ನಾನಾ ವಿಧದಲಿ 2 ದಾನಧರ್ಮಗಳಿಲ್ಲ ಜ್ಞಾನಸತ್ಯಗಳಿಲ್ಲ ಧ್ಯಾನವು ಮೊದಲೇ ಇಲ್ಲ ಮಾನಾಭಿಮಾನ ಅಜ್ಞಾನದಿ ಮುಳುಗಿ 3 ಪರರೊಡೆವೆಯ ತಂದು ಒಡಲ ಹೊರೆಯುತಲ- ನೆರೆಹೊರೆ ನೋಡಿ ಅವರಂತೆ ನಾನಿರಬೇಕೆಂದ 4 ಕರ್ಮ ಭಿನ್ನಇವರಿಗೆಲ್ಲ ಮುನ್ನಿನ ಕರ್ಮದಿ ಫಲ ಬೆನ್ನಬಿಡದು ಎಂದು ಪೇಳುವ ಶಾಸ್ತ್ರಗ- ಳನ್ನು ನಂಬದಲೆ ನಿನ್ನನ್ನೆ ನೀ ಪೊಗಳಿ ಕೊಂಡು 5 ನ್ಯಾಯಾರ್ಜಿತ ದ್ರವ್ಯದಿಂದ ಕಾರ್ಯಗಳವು- ಪಾಯದಂದಲಿ ನಡೆಸಿ ತಾಯಿ ಮಕ್ಕಳ ನೋಡುವಂತೆ ದೀನರಿಗೆ ಸ- ಹಾಯ ಮಾಡುತ ಜ್ಞಾನಿಗಳ ಸೇವಿಸುತಿಹರು 6 ಪೊರೆವೊ ಭಾರಕರ್ತ ಗುರುರಾಮವಿಠಲ ತಾ ಶರಣಾದವರಿಗೆ ಭಯವೇನು ಸ್ವಾಮಿ ಸರ್ವರ ಪಾಲಿಸುವನು ನಿನ್ನನು ಮಾತ್ರ ಬಿಡುವನೆ 7
--------------
ಗುರುರಾಮವಿಠಲ
ಅದ್ರಿಸಂಭವೆ ಸರ್ವಸಂಭ್ರಮದೊಳುಭಾದ್ರಪದ ಶುದ್ಧ ತದಿಗೆಯ ದಿವಸದಿಸದ್ರಾಜಮಾರ್ಗದಿ ನಡೆತರಲುನಡೆತರೆ ಸತ್ಯಭಾಮೆ ರುಕ್ಮಿಣಿಯೊಳೀಭದ್ರೆ ಯಾರೆಂದು ನುಡಿದಳು 1 ಕೋಟಿ ಸೂರ್ಯಕಾಂತಿಯ ನವರತ್ನ ಕಿರೀಟಾಗ್ರದಿ ಚಂದನ ರೇಖೆಯಮೀಟೆನೆ ತಳೆದು ಬಾಹವಳಾರೆ ಅಕ್ಕಕೈಟಭವೈರಿಯ ಸತಿಕೇಳೆ ಮಧುಕೈಟಭ ದಾನವರ ಗೆಲಿದ ಶಶಿಜೂಟನ ವಲ್ಲಭೆ ಶಂಕರಿ ಶಾಕಂಬರಿಯೀಕೆ ಕಾಣೆ 2 ಸತಿ ಕೇಳೆಚಂಡಾಮುಂಡಾಸುರರನು ಗೆಲಿದು ಭೂಮಂಡಲವ ಕಾಯ್ದ ದೇವಿ ಭವಾನಿಯೀಕೆ ಕಾಣೆ 3 ವೀರಮುದ್ರಿಕೆ ಕಂಕಣ ಕಡಗವದೋರೆ ಹಿಂಬಳೆ ದಂಡು ಮುತ್ತಿನಹಾರವ ಧರಿಸಿ ಬಾಹವಳಾರೆ ಅಕ್ಕನಾರಾಯಣನರಸಿ ನೀ ಕೇಳೆಧೀರನಿಶುಂಭನ ಗೆಲಿದಮರರ ಪರಿವಾರವ ಪೊರೆದ ಪರಶಿವೆ ಪರಮೇಶ್ವರಿ ಕಾಣೆ 4 ಮೆರೆವೇಕಾವಳಿಗುಂಡಿನಸರಪರಿಪರಿ ಚಕ್ರಸರ ನಕ್ಷತ್ರದಸರಗಳ ಧರಿಸಿ ಬಾಹವಳಾರೆ ಅಕ್ಕಕರಿವರದನ ಅರಸಿ ನೀ ಕೇಳೆಧುರದೊಳೆ ಧೂಮ್ರಾಕ್ಷನ ವಧಿಸಿದಗಿರಿರಾಜ ಕುಮಾರಿ ಮಂಗಳಗೌರಿ ದೇವಿ ಈಕೆ ಕಾಣೆ5 ಅಚ್ಚ ಮುತ್ತಿನ ಸರಗಳ ನಡುವೆಪಚ್ಚೆಯ ರತುನದ ಪಂಚಸರಗಳನಿಚ್ಚಳದಿ ಧರಿಸಿ ಬರುವವಳಾರೆ ಅಕ್ಕಅಚ್ಚುತನ ಅರಸಿ ನೀ ಕೇಳೆಅಚ್ಚರಿಯನೆ ಶುಂಭ ನಿಶುಂಭರಕೊಚ್ಚಿದ ರುದ್ರಾಣಿ ಶಿವೆ ಶರ್ವಾಣಿ ಈಕೆ ಕಾಣೆ 6 ಚೆಂಗಾವಿಯ ಸೀರೆಯನುಟ್ಟುರಂಗುರತುನದೊಡ್ಯಾಣವನುಟ್ಟುಭೃಂಗಕುಂತಳನರ್ತಿಸೆ ಬಾಹಳಾರ ಅಕ್ಕಅಂಗಜನ ಮಾತೆ ನೀ ಕೇಳೆಸಂಗರದಲಿ ರಕ್ತಬೀಜನ ಗೆಲ್ದಗಂಗಾಧರನರಸಿ ಕಾಳಭುಜಂಗವೇಣಿ ಈಕೆ ಕಾಣೆ 7 ಝಗಝಗಿಸುವ ಕುಂಕುಮರೇಖೆಮಗಮಗಿಸುವ ಮೃಗಮದ ತಿಲಕದಿಅಗಿಲುಗಂಧದೊಳೊಪ್ಪುತ ಬಾಹಳಾರೆ ಅಕ್ಕನಗಧರನಂಗನೆ ನೀ ಕೇಳೆಜಗಳದೆ ಮಹಿಷನ ಮಿಗೆ ಮರ್ದಿಸಿದಗಣಿತ ಸನ್ಮಹಿಮಾಸ್ಪದೆ ಸರ್ವೇಶ್ವರಿ ಈಕೆ ಕಾಣೆ8 ಕೆಂದಾವರೆಯಂದವ ನಿಂದಿಪಬಂಧುರಪದದಂದುಗೆ ಕಲಿರೆನೆಕುಂದಣದ ಸರಪಣಿಯಿಟ್ಟು ಬಾಹಳಾರೆ ಅಕ್ಕಮಂದರಧರನಂಗನೆ ಕೇಳರ-ವಿಂದಜ ಸಂಕ್ರಂದನಮುಖಿ ಸುರವೃಂದವ ಪೊರೆವ ಮಾಹೇಶ್ವರಿ ಈಕೆ ಕಾಣೆ 9 ಮರುಗ ಮಲ್ಲಿಗೆ ಸುರಗಿ ಸೇವಂತಿಗೆಪರಿಮಳಿಸುವ ಸಂಪಗೆ ಕೇದಗೆ-ಯರಳನೆ ಮುಡಿದು ಬಾಹವಳಾರೆ ಅಕ್ಕಮುರಹರನಂಗನೆ ನೀ ಕೇಳೆವರ ಕೆಳದಿಯ ಪುರದೊಳು ನೆಲಸಿದವರದ ರಾಮೇಶ್ವರನಂಗನೆ ಪಾರ್ವತಿ ಈಕೆ ಕಾಣೆ 10
--------------
ಕೆಳದಿ ವೆಂಕಣ್ಣ ಕವಿ
ಅಧಿಕಾರಿ ಮೋಕ್ಷಾಧಿಕಾರಿ ಬಲುಗುದಿಗೆಯ ಮಾರಿ ಅನಧಿಕಾರಿ ಪ ಮುರುಕು ಮಾಳಿಗೆಯಲಿರೆ ಮರುಗುತಲ-ವರಿಗೆ ಮನೆಯ ಕೊಡುವನವನಧಿಕಾರಿಮರಗಳ ಕಡಿವನು ಮುಂದುಗಾಣದಲೆಮನೆ ಹೊಗಗೊಡದವ ಅನಧಿಕಾರಿ1 ಕೇಳುತ ತತ್ವವ ಆಲೋಚನೆಮಾಡಿ ಅಂತೆಯ ನಡೆವವನಧಿಕಾರಿಖೂಳರೊಳಾಡುತ ಕುಂಚಿತನೆ ಕುರುಡನವನು ಅನಧಿಕಾರಿ 2 ಪಡೆಯನು ಪಾಪವ ಬಿಡನವ ಸತ್ಯವನುಡಿವ ಸುವಾಕ್ಯವನಧಿಕಾರಿಮಡದಿಯ ಮೋಹಕೆ ಮುಂದುಗಾಣದಲಿಹಮುಡುದಾರನೆನಿಪವ ಅನಧಿಕಾರಿ 3 ತಿಳಿದರ ಸೇವೆಗೆ ತೇಯುವ ತನುವನು ತಗಲನು ನಿಂದ್ಯಕೆ ಅಧಿಕಾರಿತಲೆಯನು ಮಣಿಯನು ಮನದಲಿ ಮೋಸವ ಚಿಂತಿಪನವನು ಅನಧಿಕಾರಿ 4 ಚಿತ್ ಬಿಂದು ಉಕ್ಕುತ ಚಿತ್ಸುಖ ಸವಿದು ಚಿದಾನಂದನಾಗುವನಧಿಕಾರಿಎಡಬಲ ನೋಡುತ ಎತ್ತತ್ತ ಒಲೆವುತ ನಿಂತಿಹನವನು ಅನಧಿಕಾರಿ 5
--------------
ಚಿದಾನಂದ ಅವಧೂತರು
ಅಧೀನ ಸ್ತೋತ್ರ ನಿನ್ನಧೀನವು ಎಲ್ಲ ಘನ್ನ ಸುಮಹಿಮನೆ ಪ ಬೊಮ್ಮನ ಪಿತ ನೀನು ಅಮ್ಮ ಲಕುಮಿಪತೆ ಎಮ್ಮನು ಪೊರೆ ಶ್ರೀನಿವಾಸ 1 ಬೃಹದಣುರೂಪನೆ ಮಹದಣು ಸರ್ವದಿ ಬಹಿರಂತರದಿ ಇಹ ಮಹಾವಿಷ್ಣು ಪರಮಾತ್ಮ 2 ಸಿರಿಯು ನಿನ್ನೊಡಗೂಡಿ ಚರಿಪಳು ಎಲ್ಲೆಲ್ಲೂ ಸರಿ ಯಾರು ನಿನಗಿಲ್ಲ ಪರರುಂಟೆ ಸಿರಿಸೇವ್ಯ 3 ಅಜ ನರಹರೇ ನಮೋ ಸೃಜಾಸೈಜ ಅಂಗಗಳೊಳ್ ಜ್ವಲಿಸುವೆ ಶಕ್ತೀಶ 4 ಪೋಷ ಕಲುಷಹ ಶೇಷಗಿರೀಶನೆ ದೋಷವೇನಿಲ್ಲದ ಹೃಷೀಕೇಶ ಕ್ಷೇತ್ರಜ್ಞ 5 ಏಕಮಾದ್ವಿತೀಯ ಸರ್ವೋತ್ತಮ ಭೂಮನ್ ಸಾಕಲ್ಯ ನಿನ್ನ ತಿಳಿಯಲು ಅಶಕ್ಯ 6 ಪ್ರಾರ್ಥಿಸಲರಿಯೆ ನಾ ದಯದಿ ನೀ ಸಲಹೆನ್ನ ವೃತತಿಜಾಸನ ತಾತ ಪ್ರಸನ್ನ ಶ್ರೀನಿವಾಸ 7
--------------
ಪ್ರಸನ್ನ ಶ್ರೀನಿವಾಸದಾಸರು
ಅಧ್ಯಾಯ ಒಂದು ಜಯ ವಿಬುಧನುತರ ಚರಣ ಜಯತು ನಾಗಾಭರಣ ಜಯ ಭಕ್ತ ಜನ ಶರಣ ಜಯ ದುಃಖಹರಣ 1 ಜಯತು ಖಳಕೃತಕದನ ಜಯಜಯತು ಜಿತಮದನ ಜಯ ಜಯತು ಸುಖಸದನ ಜಯ ಪಂಚವದನ2 ಜಯತು ಶ್ರೀಶಕೈಲಾಸ ಜಯ ಭಜಕವಿಶ್ವಾಸ ಜಯ ಅನಂತಾದ್ರೀಶ ಪ್ರಿಯಪಾರ್ವತೀಶ 3 ಪದ ಮುಂಚೆ ನುತಿಸುವೆ ಭಕುತಿಯಿಂದಲಿ ಪಂಚವದನನ ಪಾದಪಂಕಜ ಚಂಚಲಾಗದಲಿರಲಿ ಮನ ಮತಿ ಮುಂಚೆ ಕೊಡುಯೆಂದು ಹಿಂಚೆ ಕುಲ ದೇವಾದಿ ಪದಯುಗ ವಂಚನೆಯು ಇಲ್ಲದಲೆ ನುತಿಸುವೆ ಹಂಚಿಕಿಂದಲಿ ಕುಶಲಬುದ್ಧಿ ಪ್ರಪಂಚ ಕೊಡುಯೆಂದು 1 ಮನಸಿಜನ ಗೆದ್ದವರು ಮೇದಿನಿಯ ಹುಡಿಕಿದರಿಲ್ಲಾ ಮತ್ತೀಮನಸು ಗೆದ್ದವರುಂಟೆಯೆಲ್ಲರಿ ಗನುಭವಾಗಿಹುದು ಮನಸಿಜನ ಗೆದ್ದಂಥ ರುದ್ರನು ಮನಕೆ ತಾ ಅಭಿಮಾನಯಾಗಿಹ ನೆನುತ ಮೊದಲಾತನನ ನುತಿಸಿದೆ ಮನಸಿನೊಳಗಿಟ್ಟು 2 ಸಾರಲಿಂಗ ಪುರಾಣದರ್ಥದ ಸಾರಿ ತಿಳುವುತ ಮತ್ತೆ ಗ್ರಂಥ ವಿ ಚಾರ ಮಾಡುತ ಅದರ ಅರ್ಥವ ಪೂರ್ಣ ತಿಳಕೊಂಡು 'ಶ್ರೀರತಾನಂತಾದ್ರಿ' ರಮಣನ ಸಾರ ಕೃಪೆಯಿಂದಲೆಯೆ ಪೇಳುವೆ ಪಾರ್ವತೀಶಗೆ ಪ್ರೀತಿಕರ ಶಿವ ಪಾರಿಜಾತವನು 3 ಪದ ಪೂರ್ವದಲ್ಲಿ ಪಾರ್ವತಿಯು ಪರ್ವತಶ್ರೇಷ್ಠ ಹಿಮ ಪರ್ವತದ ಮಧ್ಯದಲ್ಲಿ ಸರ್ವಗುರು ಕೈಲಾಸ ಪಾರ್ವತೀಶನ ಮನ:ಪೂರ್ವಕದಿ ಬಯಸುತಲ ಪೂರ್ವ ತಪ ಮಾಡುತಿರುವಳಲ್ಲೆ ಪಾರ್ವತಿಯ ಕಷ್ಟ ಹಿಮಪರ್ವತನು ತಾ ನೋಡಿ ಸರ್ವ ಕಾರ್ಯವ ಬಿಟ್ಟು ಇರುವ ಬಲು ಚಿಂತೆಯಲಿ ಸರ್ವಸಂಪನ್ನಳಾಗಿರುವಳೆನ್ನ ಮಗಳು ಈ ಪಾರ್ವತಿಗೆ ತಕ್ಕ ವರನಿರುವನಾರೆಂದು 1 ಬಂದನಾಗಲ್ಲವನ ಮಂದಿರಕೆ ನಾರದನು ಮುಂದೆ ಗಿರಿರಾಜ ಅಲ್ಲಿಂದ ಆತನಕಂಡು ಇಂದು ಇಲ್ಲಿಗೆ ನೀವು ಬಂದು ಕಾರಣವೇನುಯೆಂದು ಕೇಳಿದನು ಅಂದ ಮಾತನ್ನು ಕೇಳಿ ಮುಂದೆ ಮುನಿರಾಜ ತಾ ಮಂದಹಾಸದಿ ನಗುತವೊಂದೊಂದು ಕಥೆ ಪೇಳಿ ಛಂದದಲಿ ಮನಸಿಗಾನಂದ ಬಡಿಸುತ ನುಡಿದ ಬಂದ ಕಾರ್ಯವ ಅವನ ಮುಂದೆ ವಿಸ್ತರದಿ 2 ಪದ ತಿಳಿಯೋ ನೀ ಗಿರಿರಾಜ ನಾ ಬಂದ ಕಾರ್ಯವ ತಿಳಿಯೋ ನೀ ಗಿರಿರಾಜ ಭೋರಾಜರಾಜಾ ತಿಳಿಯೋ ನಿನಗೊಬ್ಬಳಿಯ ಬಂದಿಹ ನಳಿಯನಾಗಿ ಮುಖಕಳೆಯು ಉಳ್ಳವ ಇಳೆಯೊಳಿಂಥಾ ಅಳಿಯನ ಸಮ ಅಳಿಯನಿಲ್ಲ ಕಾಲ್ಗಳೆಯುದಲೆ ಇರು ಪ ಹರಿಯಿರುವ ಪ್ರಖ್ಯಾತಾ ಸರ್ವರಿಗೆ ಆತನೆ ದೊರೆಯೆನಿಸಿಕೊಂಬಾತಾ ಕರಿರಾಜ ಕೂಗುತ ಕರೆಯಲೊದಗಿದನಾತಾ ತನ್ನ ಸ್ಮರಿಸಿದವರನು ಮರೆಯದಲೆ ಪೊರೆವಾತಾ ಅನಾಥಾನಾಥ ಧರೆಯೊಳಗೆ ಶ್ರೀಹರಿಯ ಮೂರ್ತಿಯ ಸರಿಯುಯಿಲ್ಲವು ಮರೆಯದಲೆ ಆ ಸಿರಿಯ ರಮಣನ ಕರೆಯ ಕಳಿಸುತ ಹಿರಿಯ ಮಗಳನು ಹರಿಗೆ ಅರ್ಪಿಸು1 ಬಡವನಲ್ಲವು ಆತಾ ಬಹುಬಡವ ಭಕ್ತರ ದೃಢವ ನೋಡುವನಾತಾ ತಾ ಬಿಡದೆ ಕರವನು ಪಿಡಿವ ಸ್ನೇಹ ಸಮೇತಾ ಬೇಡಿದ್ದು ತ್ವರದಲಿ ಕೊಡುವನವ ಬಹು ದಾತಾ ಲಕ್ಷ್ಮಿಯಸತ್ತಾ ದೃಢವಿರಲಿ ಮನ ಪೊಡವಿರಲಿ ಉಂಬುಡುವ ಮಗಳನು ತಡವು ಮಾಡದೆ2 ಕೊಡುವದುಚಿತವು ಒಡವೆಗಳು ಬಹಳಿಡುವುತಲೆ ಸುಖಪಡುವಳಾಕೆಯು ಎಂಥವನು ಅವ ತಾನು ಎಂಬಂಥ ಮನಸಿನ ಭ್ರಾಂತಿ ಬಿಡು ಎಲೋ ನೀನು ಅತ್ಯಂತವಾಗಿಹ ಶಾಂತ ಮೂರುತಿ ತಾನು ಎಂತೆಂಥವರಿಗವ ನಂತ ತಿಳಿಯದು ಇನ್ನು ಮತ್ಹೇಳಲೇನು ಇಂಥ ಶ್ರೀಮದನಂತಾದ್ರೀಶನು ಕಾಂತಿಯಿಂದಿರುವಂಥ ಮಗಳಿಗೆ ನಿಶ್ಚಿಂತೆಯಿಂದಿರು 3 ಪದ ಮುನಿಯ ಮಾತನು ಕೇಳಿ ಮನಸಿನೊಳು ಹಿಗ್ಗುತಲೆ ಮನದ ಚಿಂತೆಯ ಬಿಟ್ಟು ಮನಸಿಜಪಿತನು ಎನ್ನ ಮನಿ ಅಳಿಯನಾದ ಎನ್ನ ಜನುಮ ಸಾರ್ಥಕವಾಯಿ ತೆನುತ ತಿಳಿದನು ತಾನು ಘನ ಹಿಮಾಚಲನು ಅನುದಿನವು ತನ್ನಲ್ಲಿ ಅನು ಕೂಲವಾಗುತಲೆ ತನಗೆ ಹಿತಮಾಡುತಿಹ ಜನರೊಳಗೆ ಮ- ತ್ತಾಪ್ತ ಜನರನ್ನು ಕೇಳದಲೆ ಅನುಮಾನ ಬಿಟ್ಟು ಹೀಗೆನುತ ಮಾತಾಡಿದನು ಮುನಿಯ ಮುಂದೆ ಪದ ಕೊಡುವೆನು ಆ ವಿಷ್ಣುವಿಗೆ ಮಗಳನ್ನು ಕೊಡುವೆನು ಕೊಡುವೆನು ಸಂತೋಷ ಬಡುವೆನಾತನ ಪಾದಾ ಹಿಡಿವೆನು ಚಿಂತೆಯ ಬಿಡುವೆನು ಮಗಳನ್ನು ಪ ನಾರದ ನಿನಮಾತು ಇನ್ನು ಸರಿ ಬಾರದು ಆರಿಗೆ ಮುನ್ನ ನೀರದ ವರ್ಣನ ತೋರಿದ ಬುದ್ಧಿ ವಿ ಶಾರದ ನಿನ್ನ ಮಾತು ಮೀರದೆ ಮಗಳನ್ನು ಕೊ....1 ನಿನ್ನ ಮಹಿಮೆ ಬಲ್ಲೆ ನಾಲ್ಕುಲೋಕ ಮಾನ್ಯರಿಗತಿಮಾನ್ಯ ನೀನು ನಿನ್ನ ಚಿತ್ತಕೆ ಬಂದರಿನ್ನೇಕೆ ತಡಬಹು ಚೆನ್ನಾತ ಆತಗೆ ಮನ್ನಿಸಿ ಮಗಳನ್ನು ಕೊ....... 2 ಭಾಷೆಯು ಅದು ಸುಳ್ಳಲ್ಲ ಲೇಸಾಗಿ ನಾನಿನ್ನ ಭಾಷೆಗೆ ಮೆಚ್ಚಿ ಉಲ್ಲಾಸದಿ `ಅನಂತಾದ್ರೀಶಗೆ ' ಮಗಳನ್ನು ಕೊಡುವೆನು3 ಪದ ಬ್ರಹ್ಮಪುತ್ರ ಕೇಳಿ ಸಂಭ್ರಮ ಬಡವುತ ನಮ್ಮ ಕಾರ್ಯ ಆಯಿತೆಂದು ಸುಮ್ಮನಿರುವುತ 1 ಒಮ್ಮಿಂದೊಮ್ಮೆಲೆದ್ದು ಮತ್ತೊಮ್ಮೆ ಹೇಳುತ ರಮಿಸದಲೆ ನಡೆದ ತನ್ನ ಜಿವ್ಹೆ ತೋರುತ 2 ಹೋಳು ತಂಬೂರಿ ತಂತಿಗಳನು ಮೀಟುತ ಚೆಲುವ ಮುನಿಯ ನಡೆದ ಬಾಗಿಲವ ದಾಟುತ 3 ಚೆಂದವಾಗಾನಂದ ಭಾರದಿಂದ ಮಣಿವುತ ಮುದೆ ಪಾರ್ವತಿಯ ಬಳಿಗೆ ಬಂದು ಕುಣಿಯುತ 4 ಮುನ್ನ ನುಡಿದ ಮದುವೆಯ ಸುದ್ದಿಯನು ನಗವುತ ಚೆನ್ನಿಗ`ನಂತಾದ್ರೀಶ'ನನ್ನು ಸ್ಮರಿಸುತ 5 ಪದ ಕೇಳಮ್ಮ ಹೊಸಸುದ್ದಿ ಪಾರ್ವತಿ ನಿನಗೆ ಹೇಳಬಂದೆನು ಎನಗಿದು ಪ್ರೀತಿಪ ಪಂಕಜನಾಭ ಬರುವನಂತೆ ನಿನ್ನ ಕಂಕಣಕಯ್ಯ ಪಿಡಿವನಂತೆ ಪಂಕಜಮುಖಿಯೆ ನಿಶ್ಚಯವಂತೆ ನಿ ಶ್ಯಂಕೆಯಿಂದಿರು ಯಾತಕೆ ಚಿಂತೆ 1 ನಕ್ಕು ಆಡುವನಲ್ಲವು ನಾನು ಎ ನ್ನಕ್ಕಯ್ಯ ನಿನಗೆ ಹಿತ ಪೇಳುವೆನು ಮಿಕ್ಕ ಮಾತುಗಳಿಂದ ಫಲವೇನು ನಿನ್ನ ತಕ್ಕ ಪುರುಷ ಅವ ತಿಳಿ ನೀನು 2 ಶ್ರೀಮದನಾಂತಾದ್ರಿವಾಸಗೆ ನಿನ್ನ ನೇಮಿಸಿದ ಹಿಮವಂತನು ಈಗ ಕೋಮಲಾಂಗಿಯೇ ಎನ್ನ ಮನಸಿಗೆ ಬಂತು ಈ ಮಾತು ಸತ್ಯವಾಗಲಿ ಬೇಗ 3 ಪದ ಪರಿ ಸುದ್ದಿಯುಂಟೆಂದು ಪೇಳುತಲೆ ಟಣ್‍ಟಣನೆ ಜಿಗಿವುತು ತ್ಕಂಠzಲ್ಲಿ ಅಲ್ಲಿಂದ ಹೊರಟು ಮುನಿಬಂದು ವೈ ಕುಂಠದಲಿ ತಾ ನುಡಿದ ಉಂಟಾದ ಸುದ್ದಿ ವೈಕುಂಠಪತಿಗೆ ಎಂಟೆಂಟು ಕಳೆಯಿಂದ ಉಂಟಾದ ಪಾರ್ವತಿಯ ಗಂಟು ಹಾಕಿದೆಯೆನಲು ತಂಟಕನೋ ನೀ ಕಲಹಗಂಟಕನೋ ಸರಿಯಿನ್ನು ಭಂಟನಹುದೆಂದು ವೈಕುಂಠಪತಿನಕ್ಕ 1 ನಾರದನ ಮಾತು ಸರಿಬಾರದೆ ಪಾರ್ವತಿಯು ತೀರದಂಥಾ ದು:ಖವಾರಿಧಿಯಲಿ ಮುಳುಗಿ ಸಾರಿದಳು ತನ್ನೊಳಗೆ ಘೋರಾದ ಚಿಂತೆ ಬಂತಾರಿದನು ಬಿಡಿಸುವರು ತೋರದೆನಗೆ ತೋರದಿರಬೇಕು ನಾ ದೂರದಲಿ ಇಲ್ಲೆ ಇರಬಾರದೆಂತೆಂದು ಸುಖ ತೋರದಲೆ ತನ್ನ ಮಾತು ಮೀರದಲೆ ಇರುವ ಸುವಿ ಶಾರದಳು ಸಖಿಯೊಡನೆ ಘೋರಾದರಣ್ಯವನು ಸೇರಿದಳು ತಾನು ಮುಂದೆ ಮತ್ತಾಕೆಯ ಮುಂದೆ ಮಾತಾಡದಲೆ ನೊಂದು ತನ್ನೊಳಗೆ ತಾ ತಂದು ಆ ವನದಲ್ಲಿ ಮುಂದೇನು ಮಾಡಲೆಂತೆಂದು ತಿಳಿಯದೆ ಮರುಗಿ ಮಂದಗಮನೆಯು ಚಿಂತೆಯಿಂದ ಮಲಗಿದಳು ಮುಂದೆ ಆ ಸಖಿ ನೋಡಿ ಸಂದೇಹ ಬಡುತ ತ್ವರ ದಿಂದ ಬದಿಯಲಿ ತಾನು ಬಂದು ಹಾ ಇದುಯೇನು ಇಂದು ಮುಖಿ ಹೀಗೆಯೆಂದೆಂದು ಮಲಗುವಳಲ್ಲ ಇಂದೇನು ಬಂತು ಇಂತೆಂದು ಚಿಂತಿಸುತ ಹೀಗೆಂದಳಾಗ 2 ಪದ ಇಲ್ಲೇಕೆ ಮಲಗಿದೆ ಹೇಳಮ್ಮ ನೀ ಇಲ್ಲೇಕೆ ಎಲ್ಲಾನು ಬಿಟ್ಟು ವನದಲ್ಲಿಯೆ ಪಾರ್ವತಿ ಮಂದಿರ ಪ ಬಿಟ್ಟು ಇಲ್ಲಿ ಮಲಗುವರೆ ನಿನಗೆ ಬಂದಿಹದೇನು ಹೇಳದಿರುವರೆ ನಿನ್ನ ತಂದೆ ತಾಯಿಗಳೆಷ್ಟು ಮರಗುವರೆ ಇಂದು ಮುಖಿಯಳೆ ಯಾರೇನಂದರೇನೆ ಗೆಳತಿ ನಿನಗೆ 1 ನಿನ್ನ ಪ್ರಾಣದ ಸಖಿನಾನಲ್ಲೆ ನಿನ ಗಿನ್ನಾರಿರುವರು ಹಿತವರು ಇಲ್ಲೆ ನಾ ನಿನ್ನ ಕಾರ್ಯವ ಮಾಡುವಳಲ್ಲೆ ಚಿನ್ನದಂಥವಳೆ ನೀ ಘನ್ನಾರಣ್ಯಕೆ ಬಂದು 2 ನಿದ್ರೆ ಬಂದಿಹುದೇನೆ ನಿನಗಿಂದು ಅಥವಾ ಬುದ್ಧಿ ಹೋಯಿತೆ ಮತ್ತೆ ನಿನ್ನದು ಇಂದು ತಿಳಿಯದು ಬುದ್ಧಿವಂತಿಯೆ ಅನಂತಾದ್ರೀಶನಾಣೆ ನಿನಗೆ 3 ಪದ ಇಂದು ಮುಖಿ ಪಾರ್ವ ತಿಯು ಹಿತದಿಂದ ಆಡಿದ ಮಾತು ಒಂದೊಂದು ಸ್ಮರಿಸುತಲೆ ಛಂದಾಗಿ ಮನಸಿಗೆ ತಂದು ನೋಡಿದಳು ಇಂದು ಯೆನ್ನ ಭಾಗ್ಯಕ್ಕೆ ತಂದೆ ತಾಯಿಗಳಿಲ್ಲ ಬಂಧು ಬಾಂಧವರಿನ್ನು ಮುಂದೆಲ್ಲಿ ಬರುವವರು ಸಂದೇಹವೇಕೆ ಸಖಿ ಯಿಂದಧಿಕ ಮತ್ತಿಲ್ಲ ವೆಂದು ದು:ಖವ ಸಖಿಯ ಮುಂದ ಹೇಳಿದಳು 1 ಪದ ಏನು ಹೇಳಲಿಸಖಿ ಇನ್ನೇನು ಹೇಳಲಿ ನಾನು ಖೂನದಿ ತಂದೆಯು ಹರಿಗೆಯೆನ್ನನು ನೇಮಿಸಿದಾ ಪ ಮೃತ್ಯುಂಜಯ ಮೃಡನೆ ಎನ್ನ ಚಿತ್ತಕೊಪ್ಪುವ ಪತಿಯು ಸತ್ಯದಿ ಆಗಲಿಯೆಂದು ಚಿತ್ತದಿ ಬಯಸುತಲೆ ನಿತ್ಯದಿ ಬಹುದಿನ ಬಿಡದಲೆ ಅರ್ಥಿಲೆ ಮಾಡಿರುವಂಥ ಪಾರ್ಥೇಶ್ವರನಾ ಪೂಜೆಯು ವ್ಯರ್ಥಾಯಿತಲ್ಲೆ 1 ನಾರದ ಮುನಿಯಿ ಮಾತು ಸಾರಿದ ನನ್ನಲಿ ಬರಿದು ಬಾರದೆನ್ನ ಮನಸಿಗೆ ಅದು ತಾರದೆ ನಾ ಬಂದೆ ಮೀರಿದ ಕೆಲಸವು ತೀರಲಾರದು ಅದು ಎಂದು ಸೇರಿದೆ ವನವನು ನಾಕಾಲೂರದೆ ಮನೆಯಲ್ಲೆ2 ಹೃದ್ರೋಗದಿ ಬಳಲುವಳಿಗೆ ನಿದ್ರೆಯೆಂಬುವದೆಲ್ಲೆ ಭದ್ರಾಂಗಿಯು ಸತಿ ನಾನು ಉದ್ರೇಕದಿ ಮೈಮರೆತು, ಹಿಮಾದ್ರಿಯು ಎನ್ನನು ಕೈಲಾ ಸಾದ್ರೀಶನ ಬಿಟ್ಟು ಅನಂತಾದ್ರೀಶಗೆ ಕೊಡುವ3 ಪದ ಪರಿ ಮಾತುನು ಕೇಳಿ ಆ ಪ್ರಾಣದ ಸಖಿ ತಾನು ಪರಿ ಮಾತಾಡಿದಳು ಆ ಪಾರ್ವತಿಯ ಮುಂದೆ ಏ ಪಾರ್ವತಿಯೇ ಬಿಡುಸಂತಾಪವ ನಿನಗೊಂದು ಹೇಳುವೆ ಆ ಪಿತಗರಿಯದೆ ನಡೆ ನೀ ತಾಪಸವನದಲ್ಲೆ 1 ಈ ರೀತಿಯ ನುಡಿ ಕೇಳಿ ಹಾರೈಸುತ ಸಖಿಕೂಡಿ ಪಾರ್ವತಿ ತಾ ನಡೆದಳು ಘೋರಾರಣ್ಯದಲಿ ಇರ್ವಳು ಆಳುPದೆÀಲಿಂಗಾಕಾರವು ಪೂಜಿಸುತಲ್ಲೆ ಚಾರ್ವಾಂಗಿಯು ತಾ ನಿದ್ರಾಹಾರವು ಇಲ್ಲದಲೆ2 ದೀನೋದ್ಧಾರಕ ಶಿವನು ತಾನೆ ಅಲ್ಲಿಗೆ ಬಂದು ಏನು ಬೇಡುವೆ ಪಾರ್ವತಿ ನೀನು ಬೇಡೆಂದ ಏನು ಧೇನಿಸುವೇ ಬಿಡು ಮಾನಿನಿಯೆ ಭಕ್ತಾ ಧೀ ನಾನಂತಾದ್ರೀಶನ ಆಣೆ ನಿನಗುಂಟು 3 ಪದ ಹರನ ಮಾತನು ಕೇಳಿ ಹರಿಣಾಕ್ಷಿ ಪಾರ್ವತಿಯು ತ್ವರದಿಂದ ಎದ್ದು ಪರಮ ನಾಚಿಕೆಯಿಂದ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ನಾಲ್ಕು ವಚನ ಮುಂದೆ ಬ್ರಹ್ಮಾದಿಗಳು ಇಂದಿರಾದೇ ವಿಗ್ಹೀಗೆಂದು ಮಾತಾ ಇಂದು ಕುಳಿತಿರುವ ನೀ ಮುಂದ್ಹೋ ಮಂದ ಗಮನೆಯು ತಾನು ಕಾರ್ಯ ನನ್ನಿಂದ ಆಗದು ಕಳುಹಿಸಲವನು ಹರಿಚರಣಾರವಿಂದಲಿ ಸಾಷ್ಟಾಂಗ ತಲೆಯ ಮೇಲೆ ಚಂದಾಗಿ ಕೈಯಿ ಪ್ರಹ್ಲಾದ ಹೀಗೆಂದು ಪ್ರಾರ್ಥಿಸಿದಾ 1 ರಾಗ ದಯಮಾಡೊ ಹರಿಯೆ ದಯಮಾಡೊ ಪ ದಯಮಾಡ್ಹರಿಯೆ ಅಭಯಕೊಟ್ಟು ನೋಡೋ ಅ.ಪ ನಿನ್ನ ಕೋರೆಗಂಜುವ ಪಾರುಮಾಡೋ 1 ಭಯಾಂಕಿತನಲ್ಲವೋ ಭಯಾಂಕಿತನಾದೆನು ಶಂಕಿಸಬೇಡೋ 2 ಬೀಳದೆ ಕದನ ನಡುಗವೆ ಒದಗಿ ಬೇಗನೆ ಬಂದು ಬದಿಯಲಿ ಕೂಡೋ 3 ಮಾಳ್ಪ ಪರಮಪರಾಧವ ನಾನಿನ್ನ ಮರೆತರು ನೀನೆನ್ನ ಮರೆಯಲು ಬೇಡವೋ 4 ನಿನ್ನಡಿಗಳ ಮರಗುವೆ ಮರೆಯದಂಥ ವರತ್ವರದಲಿ ನೀಡೋ 5 ವಚನ ವ್ಯಾಪಿಸಿರುವಂಥ ಆಕೋಪ ಕೋಪವದು ಆಜಗದ್ವ್ಯಾಪ ಶ್ರೀಪತಿಯ ಸೇವೆಯಲಿ ವ್ಯಾಪರಕ್ಹಿಗ್ಗುತ ನಿಶಾಪತಿ ಪ್ರಸನ್ನನಾಗುತಲೆ ಈ ಪರಿಯ ನುಡಿದಾ 1 ರಾಗ ಹಿಡಿ ನೀ ವರವಾ ಹಿಡಿ ನೀ ವರವಾ ದೃಢವಾಗಿರುವಾÀ ಪ ಕಡು ಪ್ರಹ್ಲಾದನೆ ಬಿಡುಸಂಶಯವಾಅ.ಪ ನೇಮಿಸಿ ಕೊಡುವೆ 1 ಮಾನ್ಯರಾಗುವರು 2 ಬಿಟ್ಟು ಬಂದಿರುವೆ3 ವಚನ ಅಚ್ಚಸ್ನೇಹವ ಮಾಡಿ ಇಚ್ಛಿಸದೆ ಮನ ಭಕುತಿಯನು ಅಚ್ಯುತನ ವತ್ಸರೊಳು ಗಣನಿಲ್ಲ ಜ್ಞಾನದಲಿ ಹೆಚ್ಚಿನವ ತಾನು ಬೇರಿಚ್ಛೆ ಯವನಲ್ಲ ತನ್ನಿಚ್ಛೆಯಿಂದಲಿ ನುಡಿದ ಸ್ವಚ್ಛ ನರಹರಿಗೆ 1 ರಾಗ ನಾವೆಲ್ಲನು ವರಗಳ ಹರಿಯೆ ನಾವಲ್ಲೆನು ಪ ವಲ್ಲೆನು ವರ ಲಕ್ಷ್ಮೀವಲ್ಲಭನೆ ಅ.ಪ ಕೊಟ್ಟೆನ್ನ ವಂಚಿಸಬೇಡಾ 1 ಮುಕ್ತಿಯಾದರು 2 ಬಡುವೆ ಅನಂತಾದ್ರೀಶನೆ 3 ರಾಗ ಹೀಗೆಂದು ನುಡಿದನು ನೃಪಗೆ ನರಸಿಂಹಾ ಪ ಇಂಥಾ ಬಲ್ಲಿದ ಆಗ್ರಹವೇಕೋ ನರಸಿಂಹಾ1 ಭಕ್ತನೋ ನಾನು ನರಸಿಂಹಾ 2 ಭಕ್ತನೆಂದು ತಿಳಿದುಕೊಡುವೆ ನೃಪಸಿಂಹಾ ಸ್ವಚ್ಛ ಭಕ್ತಿಯೊಂದೆ ಸಾಕೊ ಎನಗೆ ನರಸಿಂಹ3 ಐಶ್ವರ್ಯವ ಭೋಗಿಸು ನೀನು ನೃಪಸಿಂಹಾ ಅಷ್ಟು ಐಶ್ವರ್ಯ ಸಲ್ಲೋದು ನಿನಗೆ ನರಸಿಂಹಾ 4 ರಾಜ್ಯದಿಂದ ಫಲವೇನೊ ನರಸಿಂಹಾ 5 ಕೊಂಡಾಡುವೆ ನರಸಿಂಹಾ 6 ನಿಷ್ಕಾಮುಕನೆಂಬುದರಿಯಾ ನರಸಿಂಹಾ 7 ಮುಕ್ತಿಯನ್ನು ತಂದೆಗೆ ಕೊಡು ನೀ ನರಸಿಂಹಾ 8 ಅನಂತಾದ್ರೀಶ ನರಸಿಂಹಾ 9 ವಚನ ಕೊಟ್ಟವರ ಬಿಡಬೇಡ ಬಿಟ್ಟು ನನ್ನಲಿ ಚಿತ್ತ ಬಿಟ್ಟುಸಂಶಯ ಮುಂದೆ ಇಷ್ಟುಮಾತುಗಳಾಡಿ ತಟ್ಟನವನೊ ಮೇಲಭಯವನು ಸೃಷ್ಟಿಕರ್ತನೆ ಕರಕೊಂಡು ಪಟ್ಟಗಟ್ಟಿದವಗೆ ಆ ಪಟ್ಟದಾಸನದಲ್ಲಿ ಕುಳಿತಾ 1 ಕೊಟ್ಟರಾಕಾಲದಲಿ ಪಟ್ಟಿಯನು ನಡುವಿನಲಿ ಇಟ್ಟು ಸಕಲಾಭರಣ ಅಷ್ಟು ಆಭರಣದಲೆ ದಿಟ್ಟಾಗಿ ಕಸ್ತೂರಿ ಬಟ್ಟಿಟ್ಟ ಕೈಯಲ್ಲಿ ಪಟ್ಟದಾನೆಯ ಭಯಪಟ್ಟು ಬಳಕುತ ಪ್ರಹ್ಲಾದನ್ನ ದೃಷ್ಟಿಯಿಂದಲಿ ಬೆಳಗಿದರು ದಿಟ್ಟನಾರಿಯರು 2 ರಾಗ ಮಂಗಲಂ ಜಯ ಮಂಗಲಂ ತಿಳಿದವಗೆ ಹಿರಣ್ಯ ಪತ್ನಿಯ ಗರ್ಭದಲಿರುತಲಿ ಗುರುನಾರದನಿಂದರಿತವಗೆ 1 ವೃದ್ಧನಾದವಗೆ ಶೋಧಿಸಿ ಪುತ್ರ ಪ್ರಹ್ಲಾದನಿಗೆ 2 ಪೇಳ್ದವಗೆ ಭೂಲೋಕ ಮುಖ್ಯದಿ ಮೂಲನಿಗೆ 3 ಇರುವವಗೆ ಸಿರಿಯು ಸಿಟ್ಟು ಬಿಡಿಸಿರುವವಗೆ 4 ಸಂತತ ನಿಸ್ಪøಹನಾದವಗೆ ಸಂತೋಷದಿ ಕುಳಿತಿರುವ ಸತತ ಶ್ರೀ ಮದನಾಂತಾದ್ರೀಶನ ಚಿಂತನದಿಂದಿರುವಂಥವಗೆ 5 ವಚನ ಮುಂದೆ ಪ್ರಹ್ಲಾದ ತಾನಿಂದಿರೇಶನ ಆಜ್ಞೆ ಯಿಂದ ಇದು ಹರಿಸೇವೆಯೆಂದು ರಾಜ್ಯವ ಮಾಡಿ ಬಂದ ಬಂದವರಿಗೆ ಮುಂದಕ್ಕೆ ಕರೆದು ಆ ನಂದದಿಂದತಿ ಮನಕೆ ಬಂದದ್ದು ಕೊಟ್ಟುತ್ವರ ದಿಂದ ಮಾಡಿದ ಪುಣ್ಯ ಅಂದಿಗರ್ಪಿಸಿ ಹರಿಗೆ ಚಂದಾಗಿ ನಿರ್ಲಿಪ್ತನೆಂದೆನಿಸಿಕೊಂಡಾ ಮುಂದೆ ಈ ಕಾಲದಲಿ ಹಿಂದೆ ಮಾಡಿದ ಪುಣ್ಯ ಮುಂದೆ ಮೋಕ್ಷಕ್ಕೆ ಒಂದು ಉಪಯುಕ್ತವಲ್ಲ ಬಂದ ಬಂದವರಿಗೊಂದೊಂದು ನಾ ಕೊಡುವೆನು ಎಂದು ಪ್ರಹ್ಲಾದ ರಾಜೇಂದ್ರನೆ ಶ್ರೀರಾಘ ವೇಂದ್ರ ರಾಯರು ಎನಿಸಿ ಬಂದು ಮಂತ್ರಾಲಯಕೆ 1 ಮುಂದೆ ಅಲ್ಲಿರುವ ಬಹುಚಂದದಿಂದ ಲೋಕದಲಿ ಪ್ರಹ್ಲಾದನೀ ಕಥೆಯ ಕೇಳ್ವವರು ಲೋಕÀಮಾನಿತರವರು ಬೇಕಂತ ಭಕ್ತಿಯಲಿ ಸ್ವೀಕರಿಸಿ ಪಠಿಸಿದರೆ ವಾಕ್ಚಪಲರಾಗುವರು ತೂಕ ಇಲ್ಲವರಿಗೆ ಬೇಕಾದ ಸ್ಥಳದಲಿ ಬೇಕಾದ್ದು ಬರುವದು ತೋಕರುಗಳಾಗುವರು ತಾ ಕರೆದು ಕೊಡುವ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಮೂರು ಪದ್ಯ ಭಕ್ತರಭಿಮಾನಿ ಶಿವಶಕ್ತಿ ಎಂಬುವ ಸೂರ್ಯದೈತ್ಯವರ್ಯನು ಎಂಬೊ ಕತ್ತತಿಯ ಸಂಹರಿಸಿ ಮತ್ತು ದಿತನಾಗಿರಲು ಇತ್ತ ಅನುಭೂತಿಯಾಗುತ್ತಾದ ಮುಖಕಮಲ ಮತ್ತಳಿತಾಗೆ|| ಸತ್ಯವಂತಿಯು ದೇವಿ ಸತ್ಯದಿಂದನು ಭೂತಿಗಿತ್ತುತ ಬಾಯಂದು ಮತ್ತೆ ಮುಂದಕೆ ಕರೆದು ಹೆತ್ತ ತಾಯಿಯಂತೆ ಅತ್ಯಂತ ಸ್ನೇಹವ ಸುರಿಸಿ ಒತ್ತಿ ಮಾತಾಡಿದಳು ಮತ್ತೆ ಈ ಪರಿಯ|| 1 ಪದ ರಾಗ :ಶಂಕರಾಭರಣ ಅಟತಾಳ ಸ್ವರ ಷಡ್ಜ ಮತ್ತೇನು ಬೇಕು ನೀಬೇಡಮ್ಮ|| ನಿನ್ನ ಚಿತ್ತದೊಳು ಸಂಶಯ ಬೇಡಮ್ಮ|| ಪ ದೈತ್ಯನ ಸಂಹಾರ ಮಾಡಿದೆ| ನಾ ಮತ್ತೆ ಬಂದು ನಿನ್ನಕೂಡಿದೆ|| ಅಂತಃ ಕರುಣದಿಂದ ನೋಡಿದೆ || ನಿನ್ನೊಳತ್ಯಂತ ಸ್ನೇಹವಮಾಡಿದೆ|| 1 ದಾರು ಧನ್ಯರೆನಿಸಿ ಲೋಕಮಾನ್ಯರು|| 2 ಮಿತ್ರಾನಂತಾದ್ರೀಶಹ್ನಿಡುವವರು||3 ಆರ್ಯಾ ಪರಿ ಪರಿ ಅನುಭೂತಿ ತಿಳಿದಳು ಎಂಬುವರು ಸುಖಸಾರ|| 1 ಸಂಶಯ ಬಿಟ್ಟಾಡಿದಳು ಹೀಗೆಂದೂ||2 ಪದ ರಾಗ:ಕಾಪಿ ತಾಳಬಿಲಂದಿ ಸ್ವರ:ಪಂಚಮ ಇಂದು ತಾಯಿಯೆ|| ಇಂದು ಎಂದೆಂದೂ ದಯಾ ಒಂದೆ ಸಾಕು|| ಪ ದಾವ ಕಾಲಕು ದೇವಿ ನಿನ್ನ ಸೇವೆ ಇರಲಿ|| 1 ನತಿಯು ಮಾಡುವೆ|| ಮತಿಯು ಬೇಡುವೆ|| ಮತಿಯಿಂದಲೆ ಪತಿಯ ಸೇವಿಸಿ ಪತಿಯಿಂದಲೆ ಗತಿಯು ಆಗಲಿ|| 2 ಪ್ರಾತಗಾಣಿ ಸೆ || ಪಂಥಗೆಲ್ಲಿಸೆ || ಸಂತತಾನಂತಾ ಧ್ರೀಶನ ಅಂತರಂಗದಿ ಚಿಂತಿಸುವೆನು||3 ಆರ್ಯಾ ಅನುಭೂತಿಯ ಅನುಸರಿಸಿ || ಅನುಕೂಲ ಸ್ಥಾನ ಅನುದಿನ ಕರದ್ಹೇಳಿದಳು ಹೀಗೆಂದೂ|| ಪದ ರಾಗ:ಕಾನಡಾ ಆದಿತಾಳ ಸ್ವರ ಪಂಚಮ ಬಾರೋ ಬ್ಯಾಗನೆ ಭೈರವಾ|| ನೀ ಪೋಗೀ || ಬ್ಯಾ|| ಯಮುನಾ ತೀರಕೆಪೋಗಿ|| ಪ ದೊಡ್ಡದು|| ಶ್ಯಲವಾಗಿ ಈ ಕಾಲಕ ಅಲ್ಲೊಂದಾಲಯ ನಿರ್ಮಿಸಿಕಾಲಗಳ್ಹಿಯದೆ|| 1 ಬರುವೆನು|| ನಿಂದಿರಲೆ ತ್ವರದಿಂದಲೆ ಪೋಗುತ ಇಂದ ಈ ಕಾರ್ಯವ ಚಂದದಿ ಮಾಡಿ|| 2 ಯಮುನಾದ್ರಿಗೆ ಪೋಗಿ|| 3 ಆರ್ಯಾ ಆ ದೇವಿಯ ಆಜ್ಞಾವನೂ|| ಆದರದಿಂದಲೇ ಧರಿಸಿ ಹೋದಾತನು ಅಲ್ಲೇನಿಂತ ನಿತ್ಯದಲಿ|| 1 ಬರಲಿಲ್ಲಾಕೆಂತೆಂದು|| ತುಳುಜಾ ತಾನಾಗಿ ಅಲ್ಲಿಗೆ ಬಂದು || ಪರಮಾಜ್ಞಾಧಾರಕನಾ || ತ್ವರದಲಿ ನೋಡ್ಯಾಡಿದಳು ಈ ವಚನಾ|| 2 ಪದ ರಾಗ :ಶಂಕರಾಭರಣ ಅಟತಾಳ ಸ್ವರ ಪಂಚಮ ಕಾರ್ಯವಂತಯಂದು ನಿನ್ನ ಉಳಸಿದೆ|| 1 ಇಲ್ಲಿಗೆ ಬಂದ್ಯೋನಿ ಕಾರ್ಯಾರ್ಥಿ|| ಬರದೆ ಇಲ್ಲೇ ನಿಂತಿ ಪಡದಿ ನೀನು ಅಪಕೀರ್ತಿ||2 ಅನಂತಾದ್ರೀಶನ ಆಣೆ ನಿನಗುಂಟು|| 3 ಆರ್ಯಾ ಈ ರೀತಿಯ ನುಡಿ ಕೇಳಿ || ಹೇರಿದ ಅಪರಾಧ ಭಾರವನು ತಾಳಿ|| ಘೋರವು ಬಂತಿದು ಎಂದಾ|| ಭೈರವ ಮಾತಾಡಿದನು ಭಯದಿಂದಾ|| 1 ಪದ ರಾಗ:ಆನಂದ ಭೈರವಿ ಆದಿತಾಳ ಸ್ವರ ಪಂಚಮ ಎನ್ನ ಪರಾಧಾ ಹಿಡಿಬ್ಯಾಡಮ್ಮಾ|| ತಾಯಿಎನ್ನಾ ||ಅಂ|| ಬಹುಕಾಲ ನಿನ್ನವನಾದ ಮ್ಯಾಲೆ|| ಪ ಮದದಿಂದೆ|| ಈಗ ನನ್ನ ಅಪರಾಧದಿಂದ ನಾನೊಂದೆ || ನಿನ್ನ ಹೊರತು ಎನಗಿನ್ಯಾರ್ಹಿತಕರುಂಟು|| 1 ಮಂಗಳಾಂಗನೆ ನಾನು ಮಂಗನಂತಲಿ ನಿಂತೆ|| 2 ಅಚ್ಯುತಾನಂತಾದ್ರೀಶನಿಚೆÀ್ಛಗೆ ಬಂತಿದೆ|| 3 ಪದ್ಯ ಈ ರೀತಿ ನುಡಿಕೇಳಿ ಕಾರುಣ್ಯನಿಧಿ ದೇವಿ ತೋರಿಸ್ನೇಹವು ನಗುತ ಭೈರವನ ಶಿರದಲ್ಲಿ ಚಾರುಹಸ್ನದಿ ಹೊಡೆದಳ್ಹಾರ್ಯ ಭಾವದಲಿ ಆ ಭೈರವನು ಆ ಹಸ್ತಭಾರದಲಿ ವಟುಕಾದ ಉರ್ವಿಯಲಿ ತಾ ಡೋಳ್ಹಭೈರವನು ಎನಿಸಿ || ಪಾರ್ವತಿಯು ಚಾರು ಉರ್ವಿಯಲಿ ಜನರನುದ್ಧಾರ ಮಾಡುತ ಬಿಡದೆ ಸಾರಗಿರಿಯಲಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಅನಂತ ಅಪರಾಧ ಅನುಗಾಲ ಮಾಡುತಿಹೆ ಪ ಸ್ನಾನ ಸಂದ್ಯಾ ಜಪ ಮೌನವೇ ಮೊದಲಾದ ನಾನಾವಿಧದ ವಿಹಿತ ಧರ್ಮತೊರೆದು ನಾನು ನನ್ನದು ಎಂಬೊ ಹೀನ ಬುದ್ಧಿಗಳಿಂದ ಹೀನ ಜನರೊಡಗೂಡಿ ಙÁ್ಞನಿಗಳ ನಿಂದಿಸುವೆ 1 ಶ್ರೀಕಾಂತ ನಿನ್ನ ಸೇವೆಯನು ಮರೆದು ಬೇಕಾದ ವೈಷಿಕವ ಸ್ವೀಕರಿಸಿ ಲೋಕÀದೊಳು ಸಾಕಿದವರನು ನಾ ನಿರಾಕರಿಸಿ ಬಾಳುವೆನು 2 ಎನಗಿಂತ ಅಧಿಕರಾದವರ ಕೂಡ ದ್ವೇಷವನು ಅನುಗಾಲ ಮಾಡುವೆನೊ ಅನಿಮಿಷೇಶಾ ಎನಗೆ ಸರಿಯಾದವರ ಕಂಡು ಮತ್ಸರಿಸುವೆನು ಎನಗಿಂತ ನೀಚರನು ನಾ ನೋಡಿ ನಗುತಿಪ್ಪೆ 3 ಕಾಸಿನಾಸೆಗೆ ಪೋಗಿ ದಾಸವೇಷವÀ ಧರಿಸಿ ಮೋಸಮಾಡುವೆ ಜನರ ಪಾಶದಿಂದಾ ವಾಸುದೇವನೆ ಸರ್ವದೇಶ ಕಾಲಾದಿಗಳಿ ಗೀಶನೆಂದರಿಯದಲೆ ಮೋಸಹೋದೆನು ಸ್ವಾಮಿ 4 ಸಕಲ ದುರ್ಗುಣಕೆ ಆಗಾರ ನಾನವನಿಯೊಳು ಭಕುತಿ ವೈರಾಗ್ಯ ಪ್ರಸಕುತಿಯಿಲ್ಲಾ ಭಕುತವತ್ಸಲ ಗುರುಜಗನ್ನಾಥವಿಠಲನೆ ಅಕಳಂಕಮಹಿಮನೆ ಮುಕುತಾಮುಕುತರೊಡೆಯಾ 5
--------------
ಗುರುಜಗನ್ನಾಥದಾಸರು
ಅನಂತ ಹರಿ ವಿಠಲ | ಕಾಪಾಡೊ ಇವನಾ ಪ ಅನಘ ಕರುಣಾಳು ಹರಿ | ನಿನಗೆ ಭಿನ್ನೈಪೇ ಅ.ಪ. ಪಿತೃಮಾತೃ ಸೇವೆಯಲಿ | ರತಿಯ ಕರುಣಿಸು ಇವಗೆಹಿತ ವಹಿತ ವೆರಡರಲಿ | ಪ್ರೀತಿ ಸಮ ವಿರಲೀಮತಿ ಮತಾಂವರರಂಘ್ರಿ | ಹಿತದಿಂದ ಸೇವಿಸುವಮತಿಯನೇ ಕರುಣಿಸುತ | ಕಾಪಾಡೋ ಹರಿಯೇ 1 ಭಕುತಿ ಸುಜ್ಞಾನಾದಿ | ವ್ಯಕುತಿಗೈ ಇವನಲ್ಲಿಕಕುಲಾತಿ ಇರದಂತೆ | ಮುಕುತಿ ಸತ್ಪಥದೀಪ್ರಕಟಗೈ ಸ್ಥಿರಬುದ್ಧಿ | ಅಕಳಂಕ ಶ್ರೀಹರಿಯೆನಿಖಿಲಾಗಮ ಸುವೇದ್ಯ | ಭಕುತ ಪರಿಪಾಲಾ2 ಸ್ಮರಣೆ ಸುಖ ಸುಧೆ ಸುರಿದು | ಶರಧಿಭವ ಉತ್ತರಿಸೊಮರುತಾಂತರಾತ್ಮಕನೆ | ಕಾರುಣ್ಯ ಮೂರ್ತೇಆರುಹಲೇನಿಹುದಿನ್ನು | ಸರ್ವಜ್ಞ ನೀನಿರಲುಮೊರೆಇದನ ಸಲಿಸು ಗುರು | ಗೋವಿಂದ ವಿಠಲ3
--------------
ಗುರುಗೋವಿಂದವಿಠಲರು
ಅನಂತಗಿರಿವಿಠಲ | ಪಾಲಿಸೋ ಇವಳಾ ಪ ಗುಣಪೂರ್ಣ ಶ್ರೀಹರಿಯೆ | ಬೇಡುವೆನು ಧೊರೆಯೇ ಅ.ಪ. ಸಿದ್ಧಿಸುತ ಶಿಷ್ಯತ್ವ | ಶುದ್ಧ ಸ್ವಪ್ನದೊಳೀಕೆಉದ್ಧಾರಕೆಂದೆನುತ | ಪ್ರಾರ್ಥಿಸುತ್ತಿಹಳೋ |ಮಧ್ವರಮಣನೆ ದೇವ | ಸಿದ್ದಾಂತ ಸಾರವನುಬುದ್ದಿಗೇ ನಿಲುಕಿಸೋ | ಭದ್ರಮೂರುತಿಯೆ 1 ಪ್ರಾಚೀನ ದುಷ್ಕರ್ಮ | ಮೋಚನೆಗೆ ಮನಮಾಡೋವಾಚಾಮ ಗೋಚರನೆ | ಖಚರಾರಿ ವಂದ್ಯನೀಚೊಚ್ಚ ತರತಮವ | ವಾಚಿಸುತ ಕರ್ಮಗಳಪಾಚಿಯನೆ ಕಳೆಸವ್ಯ | ಸಾಚಿ ಸಖದೇವಾ 2 ಹರಿಪಾದ ರತಿ ಕೊಟ್ಟು | ಹರಿ ಗುರು ಸೇವೆಗಳನಿರುತಗೈಯುವ ಮನವೆ | ಪರಿಪಾಲಿಸ್ಹರಿಯೇಅರವಿಂದನಾಭಹರಿ ಸರ್ವ ಸತ್ಸಾಧನವನೆರವೇರಿಸೆಂದೆನುತ | ಪ್ರಾರ್ಥಿಸುವೆ ಹರಿಯೇ 3 ಜ್ಞಾನಾನು ಸಂಧಾನ | ಮಾಣದಲೆ ಇತ್ತಿವಳಧ್ಯಾನ ಮಾರ್ಗಕೆ ತಂದು | ಮೌನಿ ಜನ ವಂದ್ಯಾಸಾನುರಾಗದಿ ನಿನ್ನ | ಹೃದಯ ಗಹ್ವರದಲ್ಲಿಕಾಣುವ ಸುಸಾಧನವ | ನೀನೇ ಮಾಡಿಸೊ ಹರಿಯೇ 4 ಸರ್ವಾಂತರಾತ್ಮಕನೆ | ದುರ್ವಿ ಭಾವ್ಯನೆ ದೇವಸರ್ವಕರ್ಮದಿ ನಿನ್ನ | ಸಂಸ್ಕøತಿಯ ನಿತ್ತುದರ್ವಿಜೀವಿಯ ಕಾಯೋ ಸರ್ವೇಶ ಶ್ರೀಹರಿಯೆಶರ್ವನೊಡೆಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಅನಂತಶಯನ ವಿಠಲಾ | ಕಾಪಾಡೊ ಇವಳಾ ಪ ಸಾರ ಅ.ಪ. ತಾಪತ್ರಯಗಳು ಎಂಬ | ಕೂಪಾರದಲಿ ಬಿದ್ದು ಶಾಪಕೊಳಗಾಗಿ ಹಳ ಕಾಪಾಡಬೇಕೊದ್ರೌಪದಿಯವರದ ಕರು | ಣಾಪಯೋನಿಧಿಹರೆಯೆನೀ ಪೊರೆಯದಿರಲನ್ಯ | ಕಾಪಾಡ್ವರ್ಯಾರೊ 1 ತೈಜಸನೆ ನೀನಾಗಿ | ಸೂಚಿಸಿಹ ಅಂಕಿತವಯೋಜಿಸಿಹೆ ಇವಳೀಗೆ | ಅವ್ಯಾಜ ಕರುಣೀಪ್ರಾಜ್ಯ ಎನ ಸಂಸಾರ | ಗೌಜು ಕಳೆಯಲ್‍ವೆನ್‍ತ್ರ್ಯಜಗದ್ವಾಪನೆ | ವಾಜಿವದನಾಖ್ಯ 2 ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಪೇರ್ಮೆಯಲಿ ಪತಿಸೇವೆ | ಕರ್ಮಪ್ರಾಧಾನ್ಯಧರ್ಮವನೆ ತಿಳಿಸುತ್ತ | ಭರ್ಮಗರ್ಭನ ಪಿತನೆಕರ್ಮಬೀಜವ ಕಳೆಯೊ | ಬ್ರಹ್ಮಣ್ಯದೇವಾ3 ಮರುತಾಂತರಾತ್ಮನೆ | ಮೂರೆರಡು ಭೇದಗಳತರತಮಂಗಳನರುಹಿ | ಪೊರೆಯೊ ಇವಳಾಅರುಹುವೆನೊ ಸರ್ವಜ್ಞ | ತರುಳೆಬಹುಭಕ್ತಿಯಂತೆಕರುಣಿಸೆಲೊ ಕೃಪಾಸಾಂದ್ರ | ಕಂಜಜಾನಯ್ಯ 4 ಗಾವಲ್ಗಣೀ ವರದ | ಭಾವದಲಿ ಮೈದೋರಿನೀ ವೊಲಿಯೆ ಬಿನ್ನಪದೆ | ಗೈಯೆ ಶ್ರೀಹರಿಯೆಕೋವಿದೊತ್ತಂಸ ಗುರು | ಗೋವಿಂದ ವಿಠಲನೆಕಾವ ಕರುಣಿ ಎಂದು | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ಅನಂದವಾಯಿತು ಸ್ವಾನಂದ ಘನಸುಖ ತನುಮನದೊಳಗೆ ತನ್ನಿಂದ ತಾನೊಲಿದು ಖೂನದೋರಿತು ಘನ ಗುರು ಕೃಪೆ ಎನಗೆ 1 ಸೋಮಾರ್ಕದ ಮಧ್ಯಸ್ವಾಮಿ ಸದ್ಗುರು ಪಾದ ನಮಿಸಿ ನಿಜದೋರಿತು ಜುಮುಜುಮುಗಟ್ಟಿ ರೋಮಾಂಚನಗಳುಬ್ಬಿ ಬ್ರಹ್ಮಾನಂದವಾಯಿತು 2 ನಾಮ ಸೇವಿಸಿ ಮಹಿಪತಿಗೆ ಸವಿದೋರಿತು ಪ್ರೇಮಭಾವನೆಯೊಳಗೆ ಧಿಮಿಧಿಮಿಗುಡುತ ಬ್ರಹ್ಮಾನಂದದ ಸುಖ ಅನುಭವಿಸಿತೆನಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅನಾಥ ನನ್ನಿಂದ ಆಗುವುದು ಏನು ನೀನೆ ದಯಾಮಾಡಿ ಎನ್ನ ನೋಡಿದರೆ ಸರಿಯಲ್ಲದೆ ಪ ಸ್ನಾನ ಸಂಧ್ಯಾವನ ವೆಂಬ ಸತ್ಕರ್ಮ ವಿಧಿಹೋಗೆ ಧ್ಯಾನಮೌನ ಜಪತಪ ನಿಧಾನ ಹೋಗೆ ಕಾನನದೊಳಗಿನ ಕೊಂಡೆತ್ತಿ ನಂದದಿ ಏನು ಅರಿಯದ ವ್ಯರ್ಥ ಹೀನನಾಗಿರುವಂಥ 1 ಮಾಧವಾ ನಿಮ್ಮ ಸ್ಮರಣೆ ಮಹಾಮಹಿಮ ಸೇವೆ ಹೋಗೆ ವೇದ ಶಾಸ್ತ್ರಗಳಲ್ಲಿ ಇರುವ ಮರ್ಮ ಹೋಗೆ ಭೋಧ ಗುರುಕರ್ಣ ಪೂರ್ಣವು ಎಂಬದದು ಹೋಗೆ ----------- ಂದರಿಯದೆ ಹೆಡ್ಡನಾದಂಥಾ 2 ಹರಿ ನಿಮ್ಮ ಭಕ್ತರ ಅನುಗ್ರಹಕ್ಕೆ ಪಾತ್ರಹೆಂಗೊ ಹರಿ ನಿನ್ನ ಚರಿತಗಳು ಅರುವದ್ಹೇಗೊ ಕರುಣಿಸು ಕೈ ಹಿಡಿದು ಕಾಯ್ದರೆ ಸರಿ ಅಲ್ಲದೆ ವರ 'ಹೊನ್ನ ವಿಠ್ಠಲ’ ನೀನೆಂದು ನಾನರಿಯದಾ 3
--------------
ಹೆನ್ನೆರಂಗದಾಸರು
ಅನಿಲ ಹೃತ್ಕಮಲಸ್ಥ | ಮುನಿ ವೇದವ್ಯಾಸಎನಗಿನ್ನು ತವಧ್ಯಾನ | ಸುಖವೀಯೊ ಶ್ರೀಶಾ ಪ ಚಿದಚಿದ್ವ ಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ |ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯೆಎನಗರುಹು ವೇದಾರ್ಥ | ವೇದವೇದ್ಯಾ |ಘನ ಮಹಿಮ ಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮ 2 ಸಚ್ಛಾಸ್ತ್ರ ಕರ್ತೃ ಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವಗಳ | ಅರುಹೆ ವಿಬುಧರಿಗೇ |ಮತ್ಸ್ಯಾದಿ ರೂಪನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಭೋದಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಾಲಕ್ಷ್ಮಿ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಲಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ | ಮಲಗಲನು ವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಭೋದರ ಸುಸೇವೆಯನೆ | ಸತತ ಕೊಳುತಾ |ಮೋದ ಗುಣ ಪೂರ್ಣ ಗುರು | ಗೋವಿಂದ ವಿಠ್ಠಲನೆಹೇ ದಯಾಂಬುಧೆ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು
ಅನಿಲ ಹೃತ್ಕುಮುದೇಂದು | ವೇದ ವ್ಯಾಸಾಎನಗಿನ್ನು ತವ ಧ್ಯಾನ | ಸುಖವೀಯೊ ಶ್ರೀಶಾ ಪ ಚಿದ ಚಿದ್ವಿಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ | ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ 1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯಎನಗರುಹು ವೇದಾರ್ಥ | ವೇದ ವೇದ್ಯಾ |ಘನ ಮಹಿಮಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮಾ 2 ಸಚ್ಛಾಸ್ತ್ರ ಕರ್ತೃಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವವರುಹೆ | ಬುಧ ಜನರಿಗೇ |ಮತ್ಸ್ಯಾದಿ ರೂಪ ನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಬೋಧಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಲಕ್ಷ್ಮೀ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಳಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ ಮಲ | ಗಲನುವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಬೋಧರ ಸುಸೇವೆಯನು | ಸ್ವೀಕರಿಸುವೇ |ಮೋದಗುಣ ಪೂರ್ಣ ಗುರು | ಗೋವಿಂದ ವಿಠಲನೇಹೇ ದಯಾಂಬುಧೇ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು