ಒಟ್ಟು 233 ಕಡೆಗಳಲ್ಲಿ , 63 ದಾಸರು , 219 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ ಆ ಮಹಾತತ್ವ ತಾರತಮ್ಯಗಳ ತಿಳಿದು ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಪ ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ ಅಕ್ಷರಿ ಎನೊ ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ | 1 ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ ರಿರ್ಮುರಿದು ಸೀಳಿ ಬಿಸಟು ಕಿರ್ಮೀರ ದನುಜರ ಸದೆದು ಪೂತಂದು ಸು- ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ 2 ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ ಗರಿಯೆ ಜ್ಞಾನ ಮಾರ್ಗಾಂಕುರಿಯೆ ವೇದದ ಸಾರ ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ ಭಜಿಸಿರಯ್ಯಾ | ಅಯ್ಯಯ್ಯಾ 3 ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ ಇವನೆಂದು ವೇದಗಳು ಸಾರುತಿವೆ ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ4 ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ ಜಾತರನ ಉದ್ಧರಿಸ ಪೋಗೆನಲು ಜಯ ತನೋ ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ ಜಾತನಂ ಭಜಿಸಿರಯ್ಯ | ಅಯ್ಯಯ್ಯಾ | 5 ಇಳಿಯೊಳಗೆ ಬಲವಂತನಾದ ಮತ ಮಧ್ವಮತ ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುಜ್ಞಾನ ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ ಹರಿನಾಮ ದಂಡವಾ ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ |6 ದುರವಾದಿಗಳ ಗಂಡ ಗಜದಭೇರುಂಡ ಸಂ ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ ಕುಹಕ ಮುರಿದು ಉರಹಿ ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ 7 ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ ಉರಗ ಉಪವಾಸ ತಂತ್ರ ಕರಿ ಕರುಣತಿಪ್ಪುವದು ಗುರು ದಯಾಕರನಾಗೆ ಹರಿವೊಲಿದು ಸಲಹುವನು ಪಾದವ ನಂಬಿರೈಯ್ಯ | ಅಯ್ಯಯ್ಯಾ 8 ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ ಸಿರಿ ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ 9
--------------
ವಿಜಯದಾಸ
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಎನ್ನಿರೋ ``ಶ್ರೀ ರಾಘವೇಂದ್ರಾಯನ ನಮಃ'' ಎಂಬ ಪ ನಾಮವ ಸ್ಮರಿಸಿ | ಸುಖಿಯಾಗು ಮನವೇ ಅ.ಪ ಸಂಸಾರ ಸಾಗರದಿ ಬೆಂದು ಬಳಲಿರುವೇನಯ್ಯ ಮುಂದೇನು ಗತಿ ಕಾಣೆ ಗಾಡಾಂಧಕಾರದೊಳು ಮುಳುಗಿ ಬೆಂಡಾದೆನೊ ಕರುಣಿಸೈ ಗುರುರಾಘವೇಂದ್ರಾ1 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆಂದು ನಂಬಿದೆನೈ ಪ್ರಭವೆ ಸಂದೇಹವೇಕಿನ್ನು ಕಂದನೆನು ತೆಂದು ಕಾಯೋ ಗುರುವೇ ಶ್ರೀ ರಾಘವೇಂದ್ರ ಪ್ರಭುವೆ2 ಅಂಧತ್ವ ಮೂಕತ್ವ, ಬಧಿರತ್ವ ಎಕಲಾಂಗಿಗಳ ಹಿಂದೆ ಪೊರೆದೆ ನೀನೆಂಬ ವಾರ್ತೆಕೇಳಿ ನಿನ್ನ ಘನ್ನಮಹಿಮಾ ಶ್ರೀ ರಾಘವೇಂದ್ರಾ 3 ಭವರೋಗ ಗಳೆಲ್ಲ ಪರಿಹರಿವುದೊ ಸ್ಮರಣೆ ಮಾತ್ರದಿ ಸಕಲ ಪಾಪಗಳನೋಡಿಸಿ ಪುನೀತರನೆ ಮಾಡುವಿಯೊ ಗುರುವೆ 4 ಬಿಡೆನು ಬಿಡೆನು ನಿನ್ನಡಿಗಳಿಗೆ ಸೇವಿಸಲು ದೃಢ ಭಕುತಿಯನೆ ಕೊಡು ಎನಗೆ ಶ್ರೀ ರಾಘವೇಂದ್ರಾ ಅಪಾರ ಮಹಿಮ ಶ್ರೀ ರಾಘವೇಂದ್ರಾ 5
--------------
ರಾಧಾಬಾಯಿ
ಶ್ರೀ ರಾಘವೇಂದ್ರಸ್ವಾಮಿಗಳ ಸ್ತೋತ್ರ ತಂಗಿನೀ ಕೇಳಿದ್ಯಾ ರಾಘವೇಂದ್ರಾ | ಘಂಗಳ ಕಳದು ಸುಖಂಗಳ ಕೊಡುವದು || ತಂಗಿ ನೀ ಕೇಳಿದ್ಯಾ ಪ ಶ್ರೀ ಪೂರ್ಣಬೋಧರ ಮತಾಪಯೋಬ್ದಿಗೆ ಚಂದ್ರ |ತಾಪಸೋತ್ತಮರ ದಿವ್ಯಾಪಾರ ಮಹಿಮೆಯ 1 ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು |ಸಂಗೀತ ಮುಖದಿ ಜನಂಗಳು ಪಾಡುವದು 2 ಕಿವಿಯಿಲ್ಲದವರಿಗೆ ತವಕಾದಿ ಕೊಟ್ಟರೆಂದು |ಸುವಿವೇಕ ಮನದಿಂದ ಕವಿಜನ ಪಾಡುವದು 3 ವಂಧ್ಯಾಸ್ತ್ರೀಯರು ಬಂದು ನಿಂದು ಆರಾಧಿಸೆ |ಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ 4 ಗುರು ಪ್ರಾಣೇಶ ವಿಠಲಾ ಸರುವ ಕಾಮಿತಾರ್ಥವಾ |ಗುರು ರಾಘವೇಂದ್ರರಲ್ಲಿ ನಿರುತದಿ ಕೊಡಿಸುವ 5
--------------
ಗುರುಪ್ರಾಣೇಶವಿಠಲರು
ಶ್ರೀಗುರುವಿಟ್ಟಂತಿರಿರೋ ವ್ಯರ್ಥಸ್ಯ ಭ್ರಮೆಗೊಳ್ಳಬೇಡೀ ಪ ಕೊಟ್ಟರೂಟವ ಮಾಡಿ ಕೊಡದಿದ್ದರವನ ಪಾಡಿ ಸಿಟ್ಟಾಗಿ ಶಿವನ ಬೈಬೇಡೀ 1 ಸಂತೆಯ ಕೂಟವಿದು ಸಟೆಯ ಸಂಸಾರವಿದು ಅಂತರಾತ್ಮನ ಧ್ಯಾನಿಸುವನೇ ಸಾಧು 2 ಯಾರಿಗೆ ಯಾರಿಲ್ಲಾ ನರದೇಹ ಸ್ಥಿರವಲ್ಲಾ ವಸ್ತು ಮೀರಿದ ಬಳಿಕ ಇರಲಿಲ್ಲಾ 3 ಒಂದೇ ಜನ್ಮದ ನಂಟು ಸುಖದುಃಖಕ್ಕೋಂದೇ ಗಂಟು ಸಂದೇಹವಿಲ್ಲ ಕೊಟ್ಟ ಋಣ ಉಂಟು 4 ವರಮಂಗೀಶಾತ್ಮಾರಾಮಾ ಇರಿಸಿದಂತಿರುವ ನೇಮಾ ಗುರು ವಿಮಲಾನಂದ ಸುಖಧಾಮಾ 5
--------------
ಭಟಕಳ ಅಪ್ಪಯ್ಯ
ಶ್ರೀಶೈಲದೊಳಗಿಪ್ಪ ಸ್ವಾಮಿ ಪುಷ್ಕರಣಿ ಇತಿ ಹಾಸವ ದಿಲೀಪನೃಪ ಬೆಸಗೊಳಲು ಕೇಳಿ ದು ಕೇಳಿ ಸಂತೋಷಿಸುವುದು ಪ ಮುನಿಕುಲೋತ್ತಮ ನೆನಿಸಿ ದುರ್ವಾಸಋಷಿ ದಿಲೀ ಪನ ಸದನವೈದಿರಲು ಕೇಳಿ ಸಂತೋಷದಲಿ ಮುಗಿದು ವಿಜ್ಞಾಪಿಸಿದನು ಋಷಿಗೆ ಅನಿಮಿಷೇಶಾ ವೆಂಕಟನ ನಾಮಧೇಯ ಕುಂ ಭಿಣಿ ಯೊಳಿಪ್ಪಾಖ್ಯಾನ ತೀರ್ಥಗಳ ವೈಭವಗ ದುರ್ವಾಸ ಪೇಳೊದಗಿದಿ 1 ಕೇಳು ರಾಜೇಂದ್ರ ವೆಂಕಟ ಪರ್ವತನು ಮೇರು ಶೈಲಾತ್ಮಜನು ವಾಯು ಶೇಷರ ಸುಸಂವಾದ ಸ್ವರ್ಣ ಮುಖರೀ ತೀರದಿ ಬೀಳಲ್ಕೆ ನೊಂದು ಪ್ರಾರ್ಥಿಸಿದ ಶೇಷನು ಎನ್ನ ಮ್ಯಾಲೆ ಮಲಗಿಪ್ಪ ತೆರದಂತೆ ದಯದಿಂ ನೀನೆ ಶೇಷಾದ್ರಿಯೆನಿಸುತಿಹುದು 2 ಈ ನಗೋತ್ತಮದಾದಿ ಮಧ್ಯಾವಸಾನ ಪ್ರ ಸೂನು ಫಲ ಸಂಯುಕ್ತ ಸಾನುಗಳ ಸುರುಚಿಕೋ ಪುಷ್ಕರಣಿ ತೀರ್ಥದ ತಟದಲಿ ಶ್ರೀನಿವಾಸನು ಬಂದು ನಿಂತ ಕಾರಣವೆನಗೆ ನೀನರುಪುವುದು ಯೆಂದು ಬೆಸಗೊಳಲು ದುರ್ವಾಸ ನೃಪಗೆ ಹರುಷೋದ್ರೇಕದಿ 3 ತೀರ್ಥೋತ್ತಮತ್ವ ಸಾಪೇಕ್ಷಿಯಿಂದಲಿ ಬ್ರಹ್ಮ ಪತ್ನಿ ಪೂರ್ವದಲಿ ಬ್ರಹ್ಮಾವರ್ತ ದೇಶದೊಳ ಪುಲಸ್ತಾಖ್ಯ ಮುನಿಪ ತತ್ತೀರದಲಿ ತಪವಗೈವೆನೆಂದೆನುತ ಬರೆ ಪುತ್ರನೆಂದರಿದು ಮನ್ನಿಸದಿರಲು ಕೋಪದಲಿ ನಿಷ್ಫಲವಯೈದಲೆಂದು ನುಡಿದ 4 ನದ್ಯೋತ್ತಮತ್ವ ಜಾಹ್ನವಿಗಿರಲಿ ಗುಣಗಳಿಂ ಸ್ವರ್ಧುನಿಯು ನೀಚಳಾದರೆಯು ಸರಿ ಲೋಕ ಪ್ರ ಪಾದ ಪ್ರಸಾದದಿಂದ ವಾಗ್ದೇವಿ ನುಡಿಗಳು ಭ ವದ್ವಂಶರೆಲ್ಲ ರಾಕ್ಷಸರಾಗಿ ಬಹಳ ವಿ ಪದಕೆರಗಿ ಬಿನ್ನೈಸಿದ 5 ಅನಭಿಜ್ಞ ಲೋಕೋಪಕಾರ ತಪವೆಂದರಿಯ ದನುಚಿತೋಕ್ತಿಗಳನಾಡಿದೆ ಮಯಾಕೃತದೋಷ ಮುನಿವರನು ಸಂಪ್ರಾರ್ಥಿಸೆ ಪುನರಪಿ ವಿಶಾಪವಿತ್ತಳು ಪ್ರಸನ್ಮುಖಳಾಗಿ ಜನಿಸಲೀ ಭವದ ಪ್ರಾಂತಕ್ಕೆವರ ವಿಭೀ ಭಗವದ್ಧ್ಯಾನಪರಳಾದಳು 6 ತೀರ್ಥೋತ್ತಮತ್ವ ಸಾಪೇಕ್ಷಯಿಂ ವಾಗ್ದೇವಿ ಮತ್ತು ತಪದಿ ಪ್ರೀತಿಗೊಳಿಸಲ್ಕೆ ದೇವದೇ ಬಿನ್ನೈಸಿದಳು ವಾಂಛಿತವನು ವ್ಯರ್ಥವಾಯಿತು ತಪವು ಬಹ್ಮ ಶಾಪದಲಿ ತೀ ರ್ಥೋತ್ತಮತ್ವವು ಕರುಣಿಸೆಂದು ಕೇಳ್ದುದಕೆ ಪ್ರ ಇನಿತೆಂದು ಕಾರುಣ್ಯಸಿಂಧು 7 ನದಿಯರೂಪಕೆ ಬ್ರಹ್ಮಶಾಪ ನಿನಗಾಯಿತ ಲ್ಲದೆ ಸರೋವರಕೆ ಬ್ಯಾರಿಲ್ಲ ಪುಷ್ಕರಣಿಗಳೊ ಸ್ವಾಮಿ ಪುಷ್ಕರಣಿ ಎನಿಸಿ ವಿಧಿಪತ್ನಿ ಶೇಷನೋದ್ದೇಶ ತ್ವತ್ ಸನ್ನಿಧಾ ನದಿ ವಾಸವಾಹೆ ಸಂದೇಹವಿಲ್ಲಿದಕೆ ಸ ಸಜ್ಜನರಿಗಖಿಳಾರ್ಥವೀವೆನೆಂದ 8 ಮೂರುವರೆ ಕೋಟಿ ತೀರ್ಥಗಳು ಭುವನತ್ರಯದೊ ಳಾರಾಧಿಸಿದರೆಯೆನ್ನ ಸ್ವಸ್ವ ಪಾಪೌಘ ಪರಿ ಧನುರ್ಮಾಸ ಸಿತಪಕ್ಷದ ಈರಾರುದಿನದಲರುಣೋದಯಕೆ ತೀರ್ಥ ಪರಿ ವಾರನೈದಿರಿ ಶುದ್ಧರಾಗುವಿರಿಯೆಂದು ತ ಪ್ರೇಷ್ಯತ್ವ ವಾಣಿಗಿತ್ತ 9 ವಾಣಿದೇವಿಯು ತೀರ್ಥರೂಪಳಾಗಲು ಕೃಷ್ಣ ವೇಣಿಸಮ ಬಕುಳ ಮಾಲಿಕೆ ತೀರ್ಥ ಭೂಮಾಭಿ ಹರಿಗೆ ನೈವೇದ್ಯರಚಿಸಿ ಪಾನೀಯ ಧೀ ಭೋಗ ಪತ್ನಿ ಪೂರ್ವದಿ ಸನ್ನಿ ಧಾನದಲ್ಲಿಪ್ಪೆನೆಂದೆನುತ ಪ್ರಾರ್ಥಿಸೆ ಶೇಷ ತಾನಿತ್ತ ಕಮಲಾಕಾಂತನು 10 ಸ್ವಾಮಿ ಪುಷ್ಕರಣಿ ನವತೀರ್ಥಮಾನಿಗಳಿಗೆ ಸು ಧಾಮವೆನಿಸುವಳು ತತ್ತನ್ನಾಮಗಳು ಪೇಳ್ವೆ ಅಗ್ನಿಯನು ಋಣವಿಮೋಚನಿ ಈ ಮಹಾ ವಾಯು ತೀರ್ಥಗಳ ಸುಸ್ನಾನಲ ಕ್ಷ್ಮೀ ಮನೋಹರನ ದರುಶನ ತತ್ವ್ರಸಾದಾತ್ರ ಅಲ್ಪಾಧಿಕಾರಿಗಳಿಗೆ 11 ಕವಿಭಿರೀಡಿತ ಪೂಜ್ಯನೆನಿಸುವನು ಪದ್ಮಸಂ ಭವನು ಪೂಜಕನೆನಿಪ ನೈವೇದ್ಯಕರ್ತೃ ಭಾ ಶರ್ವಶಕ್ರಾರ್ಕ ಮುಖ್ಯ ದಿವಿಜಗಣವಿಹರೆಂದು ಚಿಂತಿಸದೆ ಮರೆದು ಮಾ ನವರೆ ವರ್ತಿಪರೆಂದು ತಿಳಿವವನು ಘೋರ ರೌರವ ಧರಾತಳದೊಳೆಂದ 12 ಮೇರುನಂದನ ವೈಕುಂಠಾದ್ರಿಶತಯೋಜನದ ಮೇರೆಯೊಳು ಪುಣ್ಯತೀರ್ಥಗಳಿಪ್ಪವಲ್ಲೆಲ್ಲ ಮುಖ್ಯಾಮುಖ್ಯ ಭೇದದಿಂದ ನೂರೆಂಟು ತೀರ್ಥಗಳು ಮುಖ್ಯವೆನಿಸುವುವಿದರೊ ಳಾರುತ್ತಮೋತ್ತಮವುಗಳ ನಾಮ ಪೇಳ್ವೆನು ಕು ತುಂಬರ ಆಕಾಶಗಂಗ 13 ವಸುರುದ್ರ ಕಾಣ್ವಗ್ನಿ ಮನ್ವಿಂದ್ರಯಮ ಸೋಮ ಬಿಸರುಹ ಪ್ರೀಯ ನವಪ್ರಜ ಆಶ್ವಿನಿಗಳು ಶುಕ ಜಗಜ್ಜಾಡ್ಯಹರ ಬಾರ್ಹಸ್ವತಿ ದಶಪ್ರಚೇತಸ ಗರುಡ ಶೇಷವಾಸುಕಿಯು ಹೈ ಬ್ಬಸುರ ನಾರದ ವೈಶ್ವದೇವ ಸ್ವಾಹಾಸ್ವಧಾ ಹಸ್ತಿ ನಾರಾಯಣಾದಿ ಪಂಚ 14 ಶಿವರೂಪಿ ದೂರ್ವಾಸ ಪೇಳ್ದನಿನಿತೆಂದು ಜಾ ಹ್ನವಿಯೊಳಬ್ದ ಸ್ನಾನಫಲ ಧನುರ್ಮಾಸದೊಳು ವಾಗ್ದೇವಿ ಶುಕ್ಲಪಕ್ಷ ದ್ವಾದಶಿ ದಿವಸದಿ ಶುಚಿರ್ಭೂತನಾಗಿ ಸಂತೋಷದಲಿ ವಿವರಾಗ್ರಜೋದಯದಿ ಸ್ನಾನವನು ಮಾಡೆ ಐ ಶಿಷ್ಯನೆಂದರಿದು ದಯದಿ 15 ನಾರದ ಮುನೀಂದ್ರನುಪದೇಶದಿಂ ದಕ್ಷನ ಕು ಮಾರಕರು ಸಾಹಸ್ರ ತಮ್ಮ ತಮ್ಮಾಶ್ರಮದ ದಾಕ್ಷಣ್ಯವೆನಿಸುತಿಹ್ಯದು ಭೈರವಾಷ್ಟ ತೀರ್ಥ ಸಿದ್ಧಿಪ್ರದಾಯಕ ಕು ಮಾರಧಾರಿಕ ಪಶ್ಚಿಮದಲಿಹವು ಎಂಟಧಿಕ ತೀರ್ಥಾದ್ರಿಯೆನಿಸುತಿಹುದು 16 ತಾ ತಿಳಿ ಪುದಿತಿಹಾಸ ಶೌನಕಾದ್ಯರಿಗೆ ವರ ಪುಷ್ಕರಣಿಮಹಿಮೆ ಪ್ರೀತಿಯಿಂದಲಿ ತಿಳಿದು ಪಠಿಸುವವರಿಗೆ ಜಗ ನ್ನಾಥ ವಿಠಲ ಮನೋವಾಂಛಿತಗಳಿತ್ತು ಪುರು ಹೂತ ಲೋಕದಲಿ ಸುಖಬಡಿಸಿ ಪ್ರಾಂತಕೆ ತನ್ನ ಪುರವನೈದಿಪ ಕೃಪಾಳು17
--------------
ಜಗನ್ನಾಥದಾಸರು
ಸತ್ಯವರ ಯತಿಗಳ ಸ್ತೋತ್ರ ಮೂರ್ತಿ ಪ ಅಂದು ನರಹರಿ ಯತಿಯು ತಂದದ್ದು ನಾ ಕರ್ಣ-ದಿಂದ ಕೇಳಿ ಬಲ್ಲೆ ನಾ ಕಂಡದ್ದು ಇಲ್ಲ ||ಇಂದೆಮ್ಮ ಗುರು ಸತ್ಯಸಂಧ ಸುತರಿಗೊಲಿದುಬಂದ ರಾಮನ ಕಣ್ಣಿಂದ ಕಂಡೇ 1 ಅವರೊಯ್ದರಿವರೊಯ್ದರೆಂಬ ಮಾತುಗಳ್ ಪುಸಿಅವನ ಸತಿಯು ತನ್ನ ತವರು ಮನೆಗೆ ||ತವಕದಿಂದಲಿ ಕರದೊಯ್ಯೆ ಗುರುಗಳ ತಪಕೇಭುವನ ತಲ್ಲಣಿಸಲು ಭುವನೇಶ ಬಂದ 2 ಆಗ ಶ್ರೀ ರಘುನಾಥ ಯೋಗಿಗೊಲಿದುಸಾಗಿ ಬಂದುದು ನಾ ಕೇಳಿ ಬಲ್ಲೆ ಈ ನ- ||ಮ್ಮ ಗುರು ಸತ್ಯವರ ಯೋಗಿಗೊಲಿದು ರಾಮಬೇಗ ಬಂದುದು ಚೆನ್ನಾಗಿ ಕಣ್ಣಿಲಿ ಕಂಡೆ 3 ನಾಮಗೊಂಡಲು ಈ ಭೂಮಿದೇವಿ ಇಲ್ಲಿತಾ ಮಗಳ ಅಳಿಯನ್ನ ಕರೆದು ಒಯ್ದು ||ಪಾಮರರಿಗೆ ಪೋದರೆಂದೆಂಬ ಭ್ರಮೆಯ ತೋರಿಈ ಮುನಿಯ ಮಾನಸ ಹಂಸನಾಗಿದ್ದ 4 ಒಂದು ಮಾಸವುಪವಾಸ ಮಾಡಿದವರ್ಗೆಬಂದೊದಗುವ ಜಗದೊಳಗೆ ಖ್ಯಾತ ||ಸಂದೇಹವಿಲ್ಲದೆ ಅನಶನ ವ್ರತವನ್ನುಒಂದು ತಿಂಗಳು ಮಾಡಿ ಇಂದಿರೇಶನ ತಂದ 5 ನಳನಾಮ ಸಂವತ್ಸರ ಫಾಲ್ಗುಣ ಬಹುಳ ದ್ವಾದಶಿನಳಿನಾಕ್ಷ ರಾಮಸ್ವಾಮಿಯು ಹೊರಟು ||ಖಳರ ಖಂಡಿಸಿ ತಾನು ಇವರ ಭಾವಕೆ ಮೆಚ್ಚಿಲಲನೆ ಸಹಿತವಾಗಿ ಭುವನೇಶ ಬಂದ6 ಗಂಗಾದಿ ಸಕಲ ತೀರ್ಥಗಳಲ್ಲಿ ಮಿಂದು ಶ್ರೀರಂಗಾದಿಯಲ್ಲಿ ಮೋಹನ ವಿಠಲನ್ನ ||ಸಂಗೀತೆಗೆ ಸರ್ವದಾಧಿಕ ಫಲಸಂಘಟಿಸುವದು ಸಜ್ಜನರು ಕೇಳಿ 7
--------------
ಮೋಹನದಾಸರು
ಸಂದೇಹ ವೇತಕೆ ಸರ್ವೇಶಾ ಇಂದೆನ್ನ ಹೃದಯಾದಿ ನಿಂದೆನ್ನ ರಕ್ಷಿಸಲು ಪ ಹಿಂದೆ ನೀ ಸಲಹಿದವರು ಹೊಂದಿದವರೇನಾ ಪಾದ ಹೊಂದಲಲ್ಲೇ ಬಂದೆನ್ನ ಅತಿತ್ವರದಿಂದೆನ್ನ ಕೈಯಪಿಡಿದು ಅಂಧ ನಾ ತೋರಿಸಾ ನಂದನ ಸುತಹರಿ 1 ಭಂಡಾರ ವುಳ್ಳವನಾಗಿ ನೀನುಯನ್ನ ಕಂಡಾರೆ-------------- -------------- ಏನು ಹೆಂಡಾರ ಮೇಲೆ ದೃಷ್ಟಿ ಗಂಡಾರಿಗಿಲ್ಲದಿರೆ ದುಂಡೇರಿಗೇನುಗತಿ ಪುಂಡರೀಕ್ಷಾಕ ಹರಿ 2 ನಿನ್ನನ್ನೇ ನಂಬಿದವ ನಾನು ಇನ್ನು ಯನ್ನಾ ನೀಕಡೆ ದೃಷ್ಟಿ ನೋಡ್ವದೇ ನೋ ನಿನ್ನಾಣೆ ನಿನಗೆ ಇನ್ನು ಎನ್ನ ನೀ ಸಲುಹದಿರೆ ಮುನ್ನೀನಾ ದೋಷ ಕಳೆದು 'ಹೆನ್ನೆಯ ವಿಠಲಾ’ 3
--------------
ಹೆನ್ನೆರಂಗದಾಸರು
ಸಫಲವಾಯಿತು ಜನುಮ ಸಫಲವಾಯಿತು ಸಫಲವಾಯಿತೆನ್ನ ಜನುಮ ವಿಭು ಶ್ರೀ ವೈಕುಂಠೇಶನ ಕಂಡೇ ಪ ಚತುರವೇದ ಸ್ಮøತಿ ಪುರಾಣ ತತಿಗಳೊಂದಾಗಿ ನೆರೆದು ತಮ್ಮ ಮತಿಗಳಿಂದ ನುತಿಸಿ ಮಹಿಮೋ ನ್ನತಿಯ ಕಾಣದ ಮಹಿಮನ ಕಂಡೇ 1 ಶಂಖ ಚಕ್ರ ಗದೆ ಪದುಮಾ ಲಂಕೃತವಾದ ಹಾರ ಕೇಯೂರ ಕಟಕ ಮುಕುಟಾ ಲಂಕೃತನಾದ ಹರಿಯ ಕಂಡೇ 2 ಕರವ ಜಘನದ ಮೇಲೆ ಮ ಕರವ ತಾನಿದ್ದಯಿರವೆ ಸಂದೇಹವೇಕೆ ವೈಕುಂಠ ವೆಂದು ಅಟ್ಟೈಸುವಂದದಿ ಹರಿಯ ಕಂಡೇ 3 ಲಕುಮಿಗುಣಗಳೆಣಿಪನೆಂದು ಪಿಡಿದು ಅಕಳಂಕದುಂಗುಟದುಗುರುರೆ ಧ್ಯಾನಿಸಿ ಪ್ರಕಟಿತವಾದ ಗುಣಗಳನಂತ ನಿಕರವ ತೋರಿದ ಹರಿಯ ಕಂಡೇ 4 ತನ್ನ ನಂಬಿದವರನೆಂದು ಮನ್ನಿಪೆನೆಂಬ ಬಿರಿದ ತೋರ್ಪ ಚನ್ನ ಶ್ರೀ ರಂಗನಾಥ ಘನ್ನ ವೈಕುಂಠೇಶನ ಕಂಡೇ 5
--------------
ಬೇಲೂರು ವೈಕುಂಠದಾಸರು
ಸರ್ವಾಂತರ್ಯಾಮಿ ನೀ ಸಲಹೋ ಎನ್ನ ಪ ದುರ್ವಾರ್ತೆ ಕೇಳಿ ಮನ ಬರಿದೆ ಚಿಂತಿಸುತಿದೆ ಅ ಕಾಲ ಕರ್ಮ ಪ್ರಕೃತಿಯು ಸ್ವ ಭಾವಗಳನನುಸರಿಸಿ ಸುಖದುಃಖವಾ ಈವ ದೊರೆ ನೀನಲ್ಲದಿನ್ನುಂಟೆ ಜಗಕೆ ಮ ದಾತ 1 ಸತ್ಯ ಸಂಕಲ್ಪ ನೀನೆಂದೆಂದಿಗೂ ಸರಿ ಭೃತ್ಯವತ್ಸಲನೆಂಬ ಬಿರುದಲ್ಲವೇ ದತ್ತರೂಪನೆ ನಿನ್ನ ಸ್ಮರಣೆ ಮಾತ್ರದಲಿ ಅಪ ಮೃತ್ಯು ಪರಿಹರವಾಹುದು ಸಂದೇಹವಿಲ್ಲಿದಕೆ 2 ಮಾಪತಿ ಎನ್ನ ವಿಜ್ಞಾಪನೆ ಕೈಕೊಂಡು ಪಾಪಿಜನರಿಂದ ಬಂದಾಪತ್ತನು ನೀ ಪರಿಹರಿಸಿ ಸಲಹೋ ದ್ರೌಪದಿ ವರದ 3
--------------
ಜಗನ್ನಾಥದಾಸರು
ಸಾಧನವು ಮತ್ತೇನಾಗಬೇಕು ನಿನಗೇ ಪ ಮಾಧವನ ನಾಮವು ಮನದೊಳಿದ್ದರೆ ಸಾಲದೇ ಅ.ಪ. ಗೋಕೋಟಿ ದಾನವು ಗೋವಿಂದನ ಸ್ಮರಣೆಯ ತಾಕಲಾರದಿದಕೆ ಸಂದೇಹವೇ ಇಲ್ಲ ಸಾಕಲ್ಯದಿ ಮಾಳ್ಪ ಸಕಲ ದೇವತಾರ್ಚನೆಯು ಪಾದ ಭಜನೆಗೆಣೆಯು ಅಲ್ಲ 1 ಸ್ನಾನ ಸಂಧ್ಯಾವಂದನ ಜಪತಪಾದಿಗಳು ದಾನವೇ ಮೊದಲಾದ ನೇಮ ನಿಷ್ಟೆಗಳು ಆನುಪೂರ್ವಕ ಮಾಳ್ಪ ಸಕಲ ಕರ್ಮಗಳೆಲ್ಲ ಶ್ರೀನಿವಾಸನ ನಾಮಸ್ಮರಣೆಗೆ ಎಣೆಯು ಅಲ್ಲ 2 ರಾಸಿ ವಿದ್ಯ ವೇದಾಧ್ಯಯನ ಪಾಠಗಳು ಬೇಸರಿಲ್ಲದೆ ಪಠಿಪ ಮಂತ್ರ ತಂತ್ರಗಳೆಲ್ಲ ಈ ಸಮಸ್ತ ಭುವನಗಳೊಡೆಯನಾದ ಶ್ರೀ ರಂ ಗೇಶವಿಠಲನ ನಾಮದಲ್ಲಡಗಿರುವುದಲ್ಲ 3
--------------
ರಂಗೇಶವಿಠಲದಾಸರು
ಸಾಧು ನೀನಾಗೆಲೊ ಸ್ವಾಮಿ ತಾ ಕಾಣುವಾ ಪ ಮೇದಿನಿ ಅ.ಪ ಎಂದಿಗೆ ನಂದಿ ನಾನೊಂದುವೆನೆಂದು ನೀ ಸಂದೇಹ ಸಂವರಿಪನೊಲಿದು ತಾ 1 ತಾನಾದರೆ ತನ್ನದೇನು ಜಾಣ ತಾ ನೋಡುತಂ ಪ್ರಾಣನಾಥ ನೀನೆಂದಾಡುತಂ ಪಾಡುತ 2 ವಿಶ್ವದೊಳು ರಾಜಿಪ ಸಸ್ವರೂಪಾ ಗುರು ಅಸ್ಮದಾರ್ಯ ತುಲಸಿರಾಮದಾಸನಿತ್ತ 3
--------------
ಚನ್ನಪಟ್ಟಣದ ಅಹೋಬಲದಾಸರು
ಸಾಲವ ಕೊಡದಿದ್ದರೆ ನಿನಗೆ | ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ ಪ ಏಸು ದಿವಸದಿಂದ ಎಲ್ಲರ ಸೇವಿಸಿ | ಕಾಸು ಕಾಸಿಗೆ ನಾನು ಕೂಡಹಾಕಿ | ಲೇಸು ಉಳ್ಳವನೆಂದು ಕೊಟ್ಟರೆ ನೀ ನಿಂತು | ಮೋಸಗೊಳಿಸುವರೆ ಕಾಣಿಸಿಕೊಳ್ಳಿದಲೆ 1 ಬಡ್ಡಿ ಏನಾಯಿತೊ ಕೊಟ್ಟ ಗಂಟಿಗೆ ನಿನ | ಗಡ್ಡ ಬೀಳುವೆನೊ ಸಾಲವ ತೀರಿಸೊ | ಖಡ್ಡಿ ಮಾನವನೆಂದು ನೋಡ ಸಲ್ಲಾ ಎನ್ನ | ದೊಡ್ಡವರು ಕಂಡರೆ ಅಡ್ಡಗೈಸದೆ ಬಿಡರು 2 ಗುಣಿಸಿ ನೋಡಿದರೆ ಏನಯ್ಯಾ ಮುತ್ತಯ್ಯಾ ಯಾ ಕೆ ನಿಲ್ಲದೆ ನಿನಗೆ ಸಾಲವಿತ್ತೆ | ಧನವ ಎಣಿಸಲಾಗಿ ನೆಲೆಗಾಣೆಯಿನ್ನು ಸು | ಮ್ಮನೆ ಕೂಗದೆ ನಿಂದು ಋಣವ ತಿದ್ದು ಚಲುವಾ3 ಸಾಲಾ ಬಂದರೆ ಒಳಿತೆ ಇಲ್ಲದಿದ್ದರೆ ಕೇಳು | ಮೇಲೆ ಮೇಲೆ ಬಿದ್ದು ನಿನ್ನ | ಕೀಲಿಸಿ ಬಿಡದಲೆ ತೊಲಗ ಬಿಡೆ ದೇವಾ 4 ಬತ್ತಲಿದ್ದವರಿಗೆ ಭಯವಿಲ್ಲವೆಂಬೊ ಗಾದಿಗೆ | ನೆತ್ತಿಯೆತ್ತಿ ಮೋರೆ ತೋರ ಬೇಕೊ | ಹತ್ತರ ಇದ್ದು ತೀರಿಸಬೇಕೊ ಸರ್ವೇಶಾ | ಸುತ್ತಿ ಭಳಿರೆ ಸಂದೇಹ ಬೇಡ ನೀ ಬರೆದ ಬರಹ ನೋಡು 5 ಬಡತನ ಬಂದರಾಗ ನಾ ನಿನಗೆ ಬಾಯಿ | ಬಿಡುವೆನೆ ದೈನ್ಯದಲಿ ಭಾಗ್ಯವಂತಾ | ತಡ ಮಾಡಲಾಗದು ಕೊಡು ಎನ್ನ ಒಡಿವೆ | ಪೊಡವಿಲಿ ಪರರಿಗೆ ಸಲ್ಲದೊ ಸರ್ವೇಶಾ 6 ಗತಿಯಿಲ್ಲ ನಾನಪ್ರಮಾಣಿಕ ನಾನಹುದೆಂದು | ಸಂತತ ಸಂತರ ಮುಂದೆ ನುಡಿದು ಬಿಡುವೆ | ಪತಿತ ಪಾವನ ನಮ್ಮ ವಿಜಯವಿಠ್ಠಲ ನಿನ್ನ | ನುತಿಸಿಕೊಳ್ಳುತ್ತ ಕಾಲಕ್ರಮಣ ಮಾಡುವೆ 7
--------------
ವಿಜಯದಾಸ
ಸಿದ್ಧಬಸವ ಪ್ರಸಿದ್ಧನ ಮಹಿಮೆಯ ಕೇಳಿರಿ ನೀವಿನ್ನು |ವಿದ್ಯಾ ಬುದ್ಧಿ ಧನ ಧಾನ್ಯವನು ಸಿದ್ಧಿಸುವವಿನ್ನೂ ಪ ಶಿವನ ಅಪ್ಪಣೆ ತೆಗೆದುಕೊಂಡು ಶಿವಕಂಚಿಯೊಳಗೆ |ಪಾವನ ಚರಿತ ಬ್ರಾಹ್ಮಣನಲ್ಲಿ ಪುಟ್ಟಿದನು ಬೇಗ ||ದಿವಸ ದಿವಸಕೆ ಬೆಳೆದನು ಬಿದಗಿ ಚಂದ್ರಮನ ಹಾಗೆ |ಜಾವ ಜಾವಕೆ ಶಿವನ ಧ್ಯಾನವ ಮಾಡುವ ಮನದೊಳಗೆ1 ಮುಂಜಿ ಮಾಡಿಸಿಕೊಂಡನು ಸಿದ್ಧನು ಮದುವೆಯಾಗಲಿಲ್ಲ |ರಂಜಿಸುತಿಹನು ಸೂರ್ಯನಂತೆ ತೋರುವ ಜಗಕೆಲ್ಲ ||ಬಂಜೆ ಒಬ್ಬಳು ಇದ್ದಳು ಆಕೆಗೆ ಮಗನ ಕೊಟ್ಟನಲ್ಲ |ಸಂಜೆ ಹಗಲು ಕಾಣದ ಕುರುಡಗ ಕೊಟ್ಟನು ಕಣ್ಣುಗಳ 2 ತಂದೆ ತಾಯಿಗೆ ಹೇಳಿದನಾಗ ಪೋಗುವೆ ನಾನೆಂದು |ಕಂದ ನಮ್ಮನು ಬಿಟ್ಟು ಪೋಗುವದುಚಿತವೆ ನಿನಗೆಂದು ||ಅಂದ ತಾಯಿಗೆ ವಂದಿಸಿ ಹೇಳಿದ ಮಗನಾಗುವೆನೆಂದು |ಸಂದೇಹವು ಬೇಡೆಂದು ಪೇಳುತ ತೆರಳಿದ ದಯಾಸಿಂಧು 3 ಮಹಾಶಿವಾಲಯ ಕಂಡನು ಸಿದ್ಧನು ದೇಶ ತಿರುಗುತಲಿ |ಆ ಸೀಮೆಯಲಿ ಹಳ್ಳದ ನೀರು ನಿರ್ಮಲ ನೋಡುತಲಿ ||ಆಸನ ಹಾಕಿ ಕುಳಿತನು ಶಿವನ ಧ್ಯಾನವ ಮಾಡುತಲಿ |ಆ ಸಮಯದಿ ಬಂದನು ಕರಣಿಕ ಹೊಲಗಳ ನೋಡುತಲಿ 4 ಉದ್ದಂಡ ಸಂತತಿ ಆಗಲಿ ಇನ್ನು 5 ನಿನ್ನಯ ಪೂಜೆಯ ಮಾಡುವದ್ಹೇಗೆ ಹೇಳೋ ನಮಗೀಗ |ಮನ್ನಿಸಿ ಅವಗೆ ಪೇಳಿದ ಸಿದ್ಧ ಪುರುಷನು ತಾ ಬೇಗ ||ಸಣ್ಣ ಬಿಂದಿಗೆಯನಿಟ್ಟು ದ್ವಿಜರ ಪಾದೋದಕವೀಗ |ಸಂಖ್ಯೆಯಿಲ್ಲದ ಕೊಡಗಳ ಹಾಕಲು ತುಂಬದು ಎಂದೀಗೆ 6 ಅಂದಿಗೆ ಉಂಟು ಇಂದಿಗೆ ಇಲ್ಲ ಎನಲಾಗದು ನೀನು |ಸಂದೇಹವಿಲ್ಲ ಆಶ್ವೀನ ವದ್ಯ ದ್ವಿತೀಯದ ದಿನವು ||ಇಂದಿಗೆ ಕರಣಿಕ ವಂಶದವರು ಮಾಡುತಾರೆ ಇನ್ನೂ |ಮುಂದಕೆ ತೆರಳಿ ಕೊಳಕೂರಕೆ ಬಂದ ಸಿದ್ಧ ತಾನು 7 ಗಾಣಿಗರ ಮನೆಯೊಳಗಿದ್ದು ಗಾಣಾ ಹೂಡಿದನು |ಪ್ರಾಣ ತೊಲಗಿದ ಹೆಣ್ಣುಮಗಳಿಗೆ ಪ್ರಾಣವನಿತ್ತಾನು ||ಗೋಣಿಯೊಳಗೆ ಹೊಲಿದು ನದಿಯಲಿ ಪಾಚ್ಛಾ ಹಾಕಿದನು |ಕಾಣಿಸದಂತೆ ಬೇಗನೆ ಹೊರಗೆ ಹೊರಟು ಬಂದಾನು 8 ಹೆಸರು ನಿನ್ನದು ಏನು ಎಂದು ಪಾಚ್ಛಾ ಕೇಳಿದನು |ಹೆಸರು ನನಗೆ ಬಸವನೆಂದು ಕರೆತಾರೆ ಇನ್ನು ||ಪಶು ನೀನಾದರೆ ಸೊಪ್ಪಿಯ ಬೇಗ ತಿನಬಾ ಎಂದನು |ನಸು ನಗುತಲಿ ಸೊಪ್ಪಿಯ ತಿಂದು ಡುರಕಿ ಹೊಡೆದಾನು 9 ಗೊಂಬಿಗೆ ವಸ್ತಾ ಸೀರೆಯನುಡಿಸಿ ಸಿಂಗಾರ ಮಾಡಿದನು |ರಂಭೆಗೆ ಸರಿ ಈ ಹೆಣ್ಣು ಮಗಳಿಗೆ ಮದುವ್ಯಾಗೋ ನೀನು ||ಅಂಬುಜ ಮುಖಿ ಬಾರೆಂದು ಕರೆದನು ಸಿದ್ಧ ಮುನೀಶ್ವರನು |ತುಂಬಿದ ಬಸುರೊಳು ಮಗನ ಪಡೆದಳು ವಂಶಾದೆ ಇನ್ನು 10|| ನೇಮವ ಮಾಡಿ ಕೊಳಕೂರದಿ ಇರುವೆನು ನಾನೆನುತ |ಈ ಮಹಿಮೆಯೊಳಗೆ ಭೀಮಾ ದಕ್ಷಿಣವಾಹಿನಿ ಮಹಾಕ್ಷೇತ್ರ ||ಗ್ರಾಮಸ್ಥರನು ಕರೆದು ಹೇಳಿದನು ಅಡಗುವೆ ನಾನೆನುತ |ನೀವು ಮಾತ್ರ ನಾವಿದ್ದ ಸ್ಥಳವನು ನೋಡಬೇಡೆನುತ 11 ಕಲಿಕಾಲವನು ಕಂಡು ಸಿದ್ಧನು ಅದೃಶ್ಯನಾದನು |ತಿಳಿದು ಭಕ್ತಿ ಮಾಡಿದವರಿಗೆ ವರಗಳ ಕೊಡುತಿಹನು ||ಸುಳಿವನು ಕಣ್ಣಿಗೆ ಸತ್ಪುರುಷರಿಗೆ ಸಿದ್ಧ ಬಸವ ತಾನು |ಹಲವು ಹಂಬಲ ಮಾಡಲು ಬೇಡರಿ ಇರುವೆ ನಾನಿನ್ನೂ 12 ಹನ್ನೆರಡು ನುಡಿ ಸಿದ್ಧನ ಸ್ತೋತ್ರವ ಕೇಳಿದವರಿಗೆ |ಮುನ್ನ ಮಾಡಿದ ಪಾಪವು ನಾಶಾಗಿ ಹೋಗುವದು ಬೇಗ ||ಧನ್ಯನಾಗುವ ಕೀರ್ತಿ ಪಡೆಯುವ ಲೋಕದ ಒಳಗ |ಚನ್ನಾಗಿ ಶ್ರೀಪತಿ ಗುರುವಿಠ್ಠಲನು ಒಲಿವನು ತಾ ಬೇಗ 13
--------------
ವಿಶ್ವಪತಿ
ಸೀಸಪದ್ಯ ಮಕರ ಭಾದೆಗೆ ಸಿಲುಕಿ ಕರಿರಾಜ ತಾ ಕರೆಯೆ ಭರದಿ ನೀ ಬಂದೆ ತಂದೆ ಭಾಧಿಸುತಿರಲು ಕಂದ ಪ್ರಹ್ಲಾದನನು ಸಂದೇಹವಿಲ್ಲದೆಲೆ ಬಂದು ಕಾಯ್ದೆ ವಿಪಿನದಲಿ ಧ್ರುವರಾಯ ತಪವಗೈಯುತಲಿರಲು ಕೃಪೆಯಿಂದ ಮೈದೊರ್ದೆ ಕೃಪಣವತ್ಸಲನೇ ಮರಣ ಕಾಲದಿ ಮಗನ ಕರೆದಜಾಮಿಳನಂದು ಕರುಣದಿಂದಲಿ ಪೊರೆದೆ ಕರುಣ ಶರಧೆ ದುರುಳ ಸೆರಗ ಸೆಳೆಯುತಿರೆ ನೊಂದು ಚೀರಿಡಲಕ್ಷಯಾಂಬರವನಿತ್ತೆ ಇಂದು ನೀನಲ್ಲದೆಲೆ ಕಾಯ್ವರಿನ್ನಾರಿಹರು ತಂದೆ ನೀ ಮೈದೋರು ಶ್ರೀ ಕರಿಗಿರೀಶ
--------------
ವರಾವಾಣಿರಾಮರಾಯದಾಸರು
ಸುಖದಿ ಜೀವಿಸು ಬಾಲೆ ಸುಗುಣ ಶೀಲೆ ಸುಖದಿ ಜೀವಿಸು ಬಾಲೆ ಪ ಸುಖದಿ ಜೀವಿಸು ಬಾಲೆ | ಸುಕುಮಾರಿ ಗುಣಲೀಲೆ ರುಕುಮಿಣೀಶನ ಭಕುತಳೆನಿಸಿದ ಸಖುದೇವಿಯಂತೆ ಸಕಲ ಭಾಗ್ಯದಿ ಅ.ಪ ಭೂಸುರೋತ್ಮರಿಂದಲಿ | ಗುರುಮಂತ್ರೋಪ ದೇಶವಗೊಳ್ಳುತಲಿ | ಪ್ರತಿದಿವಸ ತಪ್ಪದೆ ಬ್ಯಾಸರಿಯದೆ ಹರುಷದಲಿ | ಸದ್ಭಕ್ತಿ ಪೂರ್ವಕ ದಾಸರ ಪದ ನಿತ್ಯದಲಿ | ನೀ ಪಾಡುತಲಿ ಸುಜನ ವೃಂದಕೆ ದೂಷಿತ ಬಹು ದೋಷಕಂಜುತ ವಾಸುದೇವನ ವಾಸರದಿ ಉಪ ವಾಸವನು ಲೇಸಾಗಿ ಮಾಡುತ 1 ಭಾವ ಭಕುತಿಲಿರುವ | ಗೋ ತುಳಸಿ ವೃಂದಾವನ ಪೂಜಿಸುತ | ವಿನಯದಿ ಅತ್ತಿ ಪತಿ ಪರ ದೇವನು ಎಂದೆನುತ | ಸಲೆ ಸೇವಿಸುತ್ತ ಕಾಲ ಕಪಟ ಮತಿಗಳ ಠಾವಿಗ್ಹೋಗದೆ ಪರರ ಒಡವೆಯ ಬೇವಿನಂದದಿ ಭಾವಿಸುತ ಸಂ ಭಾವಿತಳು ನೀನಾಗಿ ಜಗದೊಳು 2 ಮಂದ ಮತಿಯರ ಕೂಡದೆ | ಎಂದೆಂದಿಗು ಪರ ನಿಂದೆ ಮಾತುಗಳಾಡದೆ ಅವರೊಲುಮೆಯಿಒಂದಲಿ ಪಡಿ ಪ್ರೇಮದಿ | ಸಂದೇಹ ಪಡದೆ ತಂದೆ ತಾಯಿಗೆ ಕುಂದು ತಾರದೆ ನಂದ ಕಂದ ಮುಕುಂದ ಶಾಮ ಸುಂದರನ ಶುಭನಾಮ ಬಿಡದಲೆ ಒಂದೆ ಮನದಲಿ ಧ್ಯಾನಿಸುತ ಚಿರ 3
--------------
ಶಾಮಸುಂದರ ವಿಠಲ