ಒಟ್ಟು 19445 ಕಡೆಗಳಲ್ಲಿ , 133 ದಾಸರು , 8422 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಹರಿ ಸಂಕೀರ್ತನೆ ವಾಸುದೇವ ನೀನೊಬ್ಬನಲ್ಲದೇ ಪ ಮಾತೆ ಇದ್ದರು ದೃಢವ್ರತನಾದ ಧ್ರುವಗೆ ಶ್ರೀ- ಪತಿ ನೀನೆ ಗತಿಯಾದೆ ಆರಾದರಯ್ಯ ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ ಗತಿ ನೋಡಿ ನರಹರಿ ಗತಿ ಪ್ರದ ನೀನಾದೆ 1 ಭ್ರಾತರಾವಣನ ಸಹಜಾತ ವಿಭೀಷಣನ ನಿ- ರ್ಭೀತನ ಮಾಡಿ ಕಾಯ್ದವÀರಾರಯ್ಯ ಪತಿಗಳೈವರು ಸತಿಯಾ ಅತಿ ಖೇದ ಹರಿಸಿದರೆ ಸಂತೈಸಿದಾನಾಥ ರಕ್ಷಕ ಹರಿಯಲ್ಲವೇ 2 ಬಂಧುಗಳಿರೆ ಗಜರಾಜನ ನಕ್ರವು ಬಂದು ಬಾಧಿಸೆ ಬಂಧ ಬಂದು ಹರಿಸಿದರ್ಯಾರೋ ಇಂದು ಎಂದನಿಮಿತ್ತ ಬಂಧು ನೀ ಬಂಧುವಲ್ಲದೆ ಎಲ್ಲರು ಬಂಧಕರಯ್ಯಾ3 ಸತಿಯಿಂದ ದಶರಥಪತಿಯು ಸುತನನಟ್ಟಿ ಗತಿಕಾಣದೆ ತಾನೇನಾದನೋ - ಸತತ ಕುರುಪತಿ ಅತಿಹಿತನಾದನೆ ಭೀಷ್ಮಗೆ ಪತಿತಪಾವನ ನೀ ಅಂತ್ಯಕಾಲಕ್ಕಾದೆ 4 ಸುತರು ರಕ್ಷಕರೇನೊ - ಶತಸೂನುಗಳಿಗೆ ಪಿತ ಧೃತರಾಷ್ಟ್ರಗೆ ಕೊನೆಗಾರಾದರಯ್ಯ ಇತರರ ಪಾಡೇನೊ ಶ್ರೀ ವೇಂಕಟೇಶನೆ ಗತಿ ಎಮಗೆ ಉರಗಾದ್ರಿವಾಸ ವಿಠಲನಲ್ಲವೆ 5
--------------
ಉರಗಾದ್ರಿವಾಸವಿಠಲದಾಸರು
ಸತ್ಯಲೋಕೇಶನೆ ಬಳಿತ್ಥಾದಿ ಶ್ರುತಿವಿನುತ ಸುರಪೂಜ್ಯ ಭಕುತರ ವಿ ಪತ್ತು ಪರಹರಿಸಿ ಸಲಹಯ್ಯ 1 270 ಸತ್ಯಲೋಕವೆ ಸದನ ತತ್ವಾಭಿಮಾನಿಗಳು ಭೃತ್ಯರೆನಿಸುವರು ಮಹಲಕ್ಷ್ಮಿ | ಮಹಲಕ್ಷ್ಮಿ ಜನನಿ ಪುರು ಷೋತ್ತಮನೆ ಜನಕನೆನಿಸುವ 2 271ಚತುರದಶ ಲೋಕಾಧಿಪತಿಯೆಂದೆನಿಪ ನಿನಗೆ ಸರ ಸ್ವತಿಯು ನಿಜರಾಣಿ ವಿಹಗೇಂದ್ರ | ವಿಹಗೇಂದ್ರ ಶೇಷ ಪಾ ರ್ವತಿಪರಾತ್ಮಜರು ಎನಿಸೋರು 3 272 ಋಜುಗಣಾಧೀಶ್ವರನೆ ಅಜಪದವಿಗೋಸುಗದಿ ಭಜಿಸಿದವನಲ್ಲ ಹರಿಪಾದ | ಹರಿಪಾದ ಸೇವೆಯು ಸ ಹಜವೇ ಸರಿ ನಿನಗೆಂದೆಂದು 4 273 ಚತುರಾಸ್ಯ ತತ್ವ ದೇವತೆಗಳಂತರ್ಯಾಮಿ ನತಿಸಿ ಬಿನ್ನೈಪೆ ನಿನ್ನಲ್ಲಿ | ನಿನ್ನಲ್ಲಿ ಭಕ್ತಿಶಾ ಶ್ವತವಾಗಿರಲೋ ಹರಿಯಲ್ಲಿ 5 274 ದ್ವಿಶತ ಕಲ್ಪದಲಿ ತಪವೆಸಗಿ ಅಸುದೇವ ಪೊಂ ಹರಿಯಿಂದ ಮಿಕ್ಕ ಸುಮ ನಸರಿಗುಂಟೇನೊ ಈ ಭಾಗ್ಯ 6 275 ಇನಿತಿದ್ದ ಬಳಿಕ ನೀ ಸಲಹದಿಪ್ಪುದು ನಮ್ಮ ಅನುಚಿತೋಚಿತವೊ ನೀ ಬಲ್ಲೇ | ನೀ ಬಲ್ಲೆ ಶಾರದಾ ವನಿತೆಯ ರಮಣ ದಯವಾಗೊ 7 276 ಸತ್ವಾತ್ಮಕ ಶರೀರ ಮಿಥ್ಯಾದಿ ಮತಗಳೊಳು ಉತ್ಪತ್ತಿ ಸಂಪತ್ತು ಕೊಡದಿರು | ಕೊಡದಿರೆನಗೆಂದು ಸಂ ಪ್ರಾರ್ಥಿಸುವೆ ನಿನಗೆ ನಮೋ ಎಂದು 8 277 ಅಜ್ಞಾನವೆಂಬ ಧಾನ್ಯವನು ಒರಳಿಗೆ ಹಾಕಿ ಸುಜ್ಞಾನವೆಂಬೊ ಒನಕೀಲಿ | ಒನಕೀಲಿ ಪಾಪಧಾನ್ಯಗಳ ನುಗ್ಗು ಮಾಡಿದೆಯೊ ಘಳಿಗ್ಯಾಗೆ 9 278 ಮಾತರಿಶ್ವನೆ ನಿನ್ನ ಪ್ರೀತಿಯೊಂದೇ ಜಗ ನ್ನಾಥವಿಠಲನ್ನ ಕರುಣಕ್ಕೆ | ಕರುಣಕ್ಕೆ ಕಾರಣವು ಯಮ ಯಾತನವು ಬರಲು ನಾನಂಜೆ 10
--------------
ಜಗನ್ನಾಥದಾಸರು
ಸಂಪ್ರದಾಯ ಆರುತೀಯಾ ಬೆಳಗೆ ಬೇಗಾ ಸಾರಸಾಕ್ಷ ದೇವನೀಗೆ ಪ ನಾರಿಮಣಿಯರೆಲ್ಲ ಕೂಡೀ | ತಾರೆ ಮುಕ್ತಿನಾರುತೀಯಾ ಅ.ಪ ರಕ್ಕಸಾಂತಕ ದೇವನೀಗೆ | ಸಕ್ಕುಬಾಯಿ ವರದನಿಗೇ ಲಕ್ಕೂಮೀಯ ಪ್ರೀಯನೀಗೆ | ಮಂಗಳಾ ಜಯಮಂಗಳಾ 1 ನಾರಸಿಂಹಾ ವಿಠಲನೀಗೆ | ಚಾರುಮಹಿಮಾತೋರಿದವಗೇ ನಾರೆಯರು ಹರುಷದಿಂದಾ | ತಾರೆ ಮುತ್ತಿನಾರುತೀಯಾ 2
--------------
ಓರಬಾಯಿ ಲಕ್ಷ್ಮೀದೇವಮ್ಮ
------------------- ಪ --------------------- -------------------- --------------------- 1 -------------------- -------------------- ------------------- 2 ಖ್ಯಾತಿಲಿ ನಿನ್ನ ಸ್ತುತಿಸುವ ಭಕುತನ ಪ್ರೀತಿಲಿ ರಕ್ಷಿಪ ರಾಮ ಪೂತನಿ --- ಪಾತಕ ಭವದೂರ ಪುರ 'ಹೊನ್ನವಿಠ್ಠಲ ' ರಾಮ 3
--------------
ಹೆನ್ನೆರಂಗದಾಸರು
----------ನೋಡಿದೆ ತಾಂಡವ ಕೃಷ್ಣನ ನೋಡಿದೆ ಕೃಷ್ಣನ ನೋಡಿದೆ ಸೃಷ್ಟಿಗೆ ಕರ್ತನಾದ ವಿಠ್ಠಲಮೂರುತಿ ಅಭೀಷ್ಟದಾ ನಾಯಕನಾ ಪ ಅಕ್ಷಯ ತೋರುವನಾ ಸಕಲಾ ರಕ್ಷಕ ರಘುರಾಮಾನಾ ಲಕ್ಷ್ಮಿ ಮನೋಹರನಾ ದೈವಾಧ್ಯಕ್ಷ ಮಹಾಮಹಿಮನಾ ಕಲ್ಪವೃಕ್ಷ ಕಾಮಧೇನು ವಿಶ್ವಕುಟುಂಬನಾ 1 ದಶರಥನಂದನನಾ ದೇವಾ ವಸುಧಿಯನಾಳುವನಾ ಪಶುಪತಿ ಪಾಲಕನಾ ಭಕ್ತರ ಕುಶಲದಿ ಸಲಹುವನಾ ಬಿಸರುಹಾಕ್ಷ ಶ್ರೀ ಪೂರ್ಣ ಪ್ರಕಾಶನ ದಶಶಿರನಳಿದ ಕೋದಂಡರಾಮನ 2 ಶಿರಮಣಿ ಮಕುಟಧರನಾದಾ ಕೊರಳ ಪದಕಹಾರ ಕರದೊಳು ಕಂಕಣವಾ ಕಿರಿಬೆರಳಲಿ ಉಂಗುರವಾ ಪರಮ ಪರುಷ ನರಹರಿ ` ಹೆನ್ನೆವಿಠ್ಠಲ ' ಪರಮಾತ್ಮನ ಸರ್ವ ಪೋಷಕ ನಾದನಾ 3
--------------
ಹೆನ್ನೆರಂಗದಾಸರು
----------ಪರಿನಂಬಿ------ಕೃಷ್ಣಾ ಸಂತ----- ಪ -------ಪಾದಸ್ಮರಣೆಯ ಮಾಡು ಸಾಧು ಸಂತರಸಂಗಾ -----ಸರ್ವಕಾಲದಲಿ ನಿಂತು ನಿನ್ನ ಸೇವಿಸುವ ನಿಜಭಕ್ತಾ----ಇರುವಂಥಾ ---- ವೇಮಾರಿ 1 ಬಂದ ಭವದ ದೋಷಕಳೆದು ಪಾಲಿಸುವಂಥಾ ದೇವ ಭಾವಧಿರುವ ಭಕ್ತಗೀ ಮಾಡಿಕಾಯೋ ವಿಶ್ವಮನ ---- 2 ಚಿನ್ಮಯ ರೂಪಾ-----ದಾರಯ್ಯಾ ಇನ್ನು ನಿನ್ನವರಕಯ್ಯ ಹಿಡುವಾ ಧನ್ಯರಾದ ಭಾರ ನಿನ್ನದೇ ಸ್ವಾಮಿ ಶ್ರೀಪನ್ನಗಾದ್ರಿವಾಸ `ಹೊನ್ನ ವಿಠ್ಠಲ ' ಪ್ರೇಮಿ 3
--------------
ಹೆನ್ನೆರಂಗದಾಸರು
--------ನಿಲಯ ಮನೆಗೆ ಭವರೋಗ ವೈದ್ಯಾ ತೋರಯ್ಯ ------ಕರುಣಿ ದಯಾರಸವೆಂಬ ಔಷದ ಪ ಸಂಸಾರವೆಂಬಂಥಾ ಸಾಗರ ಬಹುದು:ಖ ------ದೊಳಗೆ ಬಿದ್ದು ಇರುವಾರೋಗಾ ಹೇಮ ಮಕುಟಧರನೆ ---------ಸಲಹುವ ಕ್ರಿಯವು ನಿನ್ನದೊ 1 ಜನ್ಮಾಜನ್ಮಾಗಳಿಂದಾ ಚಿನ್ಮನೆ-------- ಕಲ್ಮಾಷಾ ದೋಷ ಕಳೆವಾ ಘನಾಮಾತ್ರ ನಿನ್ನಲ್ಲಿ --------ನೆ ಬಿಟ್ಟು ಕೈಯ್ಯಾನಾದೆನ್ನ ಕೈಯ್ಯ ಪಿಡಿದು ನಿರ್ಮಲ ಜ್ಞಾನವೆಂಬ ನಿಜಾ ಔಷಧ ಕೊಡಲು 2 ಅಖಿಲಲೋಕಾಗಳಿಗೆ ಆದಿ-------ತ್ರಿಯಾದಿ ಸಕಲಾ ಚರಾಚರ ಸರ್ವದಾನೀ ನಿ-------ರಾದಿ ಪುರವಂತ ನಿಜ 'ಹೆನ್ನ ವಿಠ್ಠಲನಂಥ’ ಭಕ್ತವತ್ಸಲ ಲಕ್ಷ್ಮೀಕಾಂತ ಶ್ರೀಮಂತಾ 3
--------------
ಹೆನ್ನೆರಂಗದಾಸರು
--------ನೆ ಮಾಡುವೆಯಂದರೆ ಅರಸುಳ್ಯ ದ್ವಂದ್ವಪಾದಕೆ ನಾ ವಂದನೆ ಪ ಅಂದು ಜಲದೊಳಾಡಿ ಕೊಂದ ಸೋಮಕನ ವೇದತಂದೂ ------ಗಿತ್ತಾಗೊಂದನೆ ಮಂದರಗಿರಿಯ ನೆತ್ತಿ ಚಂದದಿ --------- ಭೂಮಿ ಮೂಗಿನಿಂದ ಸೀಳಿದ ದೇವಗೆ ವಂದನೆ 1 ತರುಳನಿ ಗೋಸ್ಕರ ಸ್ತಂಭದೊಳಗೆ ಬಂದಾ ನರಹರಿ ರೂಪಗೆ ವಂದನೆ ಮುರುಡನಾಗಿ ದಾನ ಮೂರು ಪಾದವು ಕೇಳಿ ಧರುಣಿಯ ಗೆದ್ದವಗೆ ವಂದನೆ 2 ಪ್ರೇಮಸಲ್ಲದೆ ಪಿತೃವಾಕ್ಯವು ಮನ್ನಿಸಿ ಪಡೆದಮ್ಮನ ಹೊಡೆದಾತಗೆ ವಂದನೆ ತಾಮಸ ದಾನವರಗಳ ಖಂಡಿಸಿದ ಶ್ರೀರಾಮ ದೇವರಿಗೆ ವಂದನೆ 3 ಗೊಲ್ಲರ ಸ್ತ್ರೀಯರ ಕೂಡಿ ಮೆರೆದಾಡುವಂಥ ನಲ್ಲ ಕೃಷ್ಣಗೆ ವಂದನೆ ಎಲ್ಲಾನೂ ತೊರೆದು ಬತ್ತಲಲ್ಲಿ ಇರುವ ನಮ್ಮ ಬೌದ್ಧಾವತಾರಗೆ ವಂದನೆ 4 ಚಲುವ ಅಶ್ವವನೇರಿ ಚರಿಸಿದ ಮಹಾಮಹಿಮ ಕಲ್ಕಿ ಸ್ವರೂಪಗೆ ವಂದನೆ ಸುಲಭದಿ ಭಕ್ತರ ಚನ್ನಾಗಿಸಲಹುವ ಶ್ರೀ ಹೆನ್ನೆ ವಿಠ್ಠಲಗೆ ವಂದನೆ 5
--------------
ಹೆನ್ನೆರಂಗದಾಸರು
-------ಅರಿಯೆ ----ನಡತಿ ಮಾರ್ಗವನೂ ಹೀನಮಾನವ ನಾನು ಯಂ ---- ಹರೇ ಪ ನಾನಾಯೋನಿಗಳಲ್ಲಿ ನಟಿಸಿನಟಿಸಿ ಇಲ್ಲದೆ ಇರೊ ವಿಧಾನ ಒಂದಲ್ಲದೆ 1 ದರಿ----ರ್- ಸರತಿ ತಿಳಿದಿನ್ನು ಧೀನ ರಕ್ಷಕ ನಿನ್ನ ದಿನಚರ್ಯ ವರ್ಣಿಸುವರ ಕಾಣುತಲೆ ವಂದಿಸಿ ಕಾಲುಹಿಡಿವದು ಅರಿಯೆ 2 ವೇದಾದಿ ಸಕಲವು ವಿದ್ಯಶಾಸ್ತ್ರವನರಿಯೆ ಮೇದಿನಿಯೊಳು ನಡೆವ ಸುಮಾರ್ಗ ನಾನರಿಯೆ ಗಾಧಿ ಬೋಧಿಗಳೀಗೆ ಒಳಗಾಗಿ ಈ ಪರಿಯೆಗಾಧೆಯೊಳಗೆ ಬಿದ್ದನ ಕೈ ಪಿಡಿಯೊಧೊರಿಯೆ 3 ಆಗ ಅಂತರಂಗದಾ ಭಾವನರಿಯೆ ನಾಗಶಯನ ನಿಮ್ಮ ನಾಮವೆಂಬುದು ಅರಿಯೆ ಕೃಪೆತೋರಿ ರಕ್ಷಿಸಯ್ಯಾ ಹರಿಯೆ 4 ಸಕಲಾವು ನೀನೆಂದು ಸಾರುವ ಧರೆಯಾ ಭಕ್ತವತ್ಸಲನೆಂಬ ಬಿರುದು ನಿಂದರಿಯಾ ಅಕಳಂಕ ಮಹಿಮ `ಹೊನ್ನವಿಠ್ಠಲನೆ’ ಪ್ರೀಯಾ ಮುಕುತಿದಾಯಕ ಆಲಸ್ಯನಾದವನ ಪೊರೆಯಾ 5
--------------
ಹೆನ್ನೆರಂಗದಾಸರು
------ನ್ಯರ ಸಂಗಾ ಘಳಿಗೆ ಸಾಕಯ್ಯ ಪ ಎಲ್ಲಾ ಇದ್ದೂ ದುರ್ಜನ ಸಂಗ ಎಂದಿಗೂ ಬೇಡಯ್ಯ ----- ಹರಿಯಾ ಮರೆಯದೆ ಇರುವಂಥಾ ------ಕೃಷ್ಣನ ----- ನಿರುವಂಥ ಸುಜನಾರ ಸಂಗ ಕೂಡದ ನಿನ್ನಿಂತಾ ಪರಾಸು (?) ಮಕ್ಕಾಳ ಕೂಡಿ----------- 1 ಉದಯದಾವೇಳೆ ಉಚಿತಕರ್ಮ ಮಾಡುವಾ ಸದಯ ಹೃದಯರಾದ ಸಜ್ಜನಸಂಗ------- ಸದಯ ಕಾಲಾದಿ ಯಿ-----ಸನ್ನಿಧಿ ಸೇರುವಾ ಕುದಯಾ ಕುಜನಾರ ಕೂಡಿದವ -----ಸೇರುವಾ 2 ಅನೇವಿಷಾ (ಅನಿಮಿಷಾ) ಶ್ರೀ ಕೃಷ್ಣಾನ ಅರಸುತಿರುವಂಥ ಜನ ಮಹಾಮಹಿವiರಾದ ಶರಣಾರ -------ರದಂಥಾ ಹೊನ್ನ ವಿಠ್ಠಲನ ಕರುಣಾವು ಪಡುವಂಥಾ ಮಾರ್ಗ- ವನ್ನು ಸೌಖ್ಯವು ತೋರುವಂಥಾ 3
--------------
ಹೆನ್ನೆರಂಗದಾಸರು
------ಯು ಮಾಡಿದರು ಏನು ಹರಿಯೆ ಸ್ಪಷ್ಟ ನಿಮ್ಮ ಹರುಷರನು ಮುಟ್ಟುವ ಪರಿ-----ರದೆ ಪ ಹಗಳಿರಳು ಬಗೆ ಬಗೆಯ ಹಲವುÀ ಯೋಚನೆಮಾಡಿ ಸೊಗಸಾಗಿ ದೇಹವನು ಸಲುವದೊಂದೆ ನಿಗಮಗೋಚರ ನಿಮ್ಮ ನಾಮಧ್ಯಾನವು ತೊರೆದು ಭುಗಲಿಗೆ ಒಳಗಾಗಿ ಪರಿಪರಿ ವಿಧದಿಂದಾ 1 ನರಳುತ ನೀ ಎನಗೆ ಇನ್ನಿಲ್ಲವೆಂದು ಹೊರಳಿ ಹೊರಳಿ ದು:ಖ ಹೊಂದಿ ಬಿಡುವುದ ಒಂದೇ ಕರುಣಾ------- 2 ಕರುಣೆ ತೋರಿ ತೋರದೆ ಇನ್ನು ದುರುಳ ಬುದ್ಧಿಯ ಮಾಡಿ ಮೀರಿ ಒಬ್ಬರ ------------- ಮಾಡಿಬಾಳು--------- 3 ಫಣೆಯಲ್ಲಿ ಬರೆದಂಥ ಬರಹವು ತಪ್ಪದಿನ್ನು ನಾನು ಅಪೇಕ್ಷೆಗೆ ಒಳಗಾಗಿ ಬಹಳ----- ---ಲ್ಲದೆ ಉದರ ಧ್ಯಾಸಕ್ಕೆ ಒಳಗಾಗಿ ಮನಸು ನಿಲ್ಲದೊ ಮರಳಿ ಮರುಳುತಲಿ ಇನ್ನೂ 4 ಇಂಥ ಪರಿ-----ಗೆ ಒಳಗಾಗಿ ಭ್ರಾಂತನಾಗಿ ನಿಮ್ಮ ಚರಣ ಭಜನೆ ಮರೆದು ಸಂತತಯಿರುವುದು ವಂದೇ ನಾಥ ----- ಕಂತುಪಿತನಾಥ ಶ್ರೀ ಘನಹೆನ್ನವಿಠ್ಠಲಾ 5
--------------
ಹೆನ್ನೆರಂಗದಾಸರು
(2) ಆಂಡಾಳ್ ಸ್ತುತಿ ಆಂಡಾಳ್ ದೇವಿ ಶರಣೆಂಬೆ ಶ್ರೀಗೋದಾದೇವಿ ಪೊರೆಯೆಂಬೆ ಪ ಮುಡಿದು ಕೊಟ್ಟ ನಾಯಕಿ ತಾಯೆ ರಂಗನಾಥನ ಪರಮಪ್ರಿಯೆ ಮುಡಿಪುಹೊತ್ತು ಸೇವಿಪೆವಮ್ಮ ಶರಣಾಗತಿಯನ್ನ ಅ.ಪ ಅಂದುಗೋಪಿಯರು ಕೃಷ್ಣನ ಸೇರಲು ಚಂದದಿಮಾಡಿದ ಕಾತ್ಯಾಯನಿವ್ರತವ ತಂದೆಯಮತದಿ ಹೊಂದಿಸೇವಿಸಿದೆ ಒಂದು ತಿಂಗಳ ತಿರುಪ್ಪಾವೈಯಲಿ 1 ದಿನಕೊಂದು ಪಾಶುರ ಕಟ್ಟಿಪಾಡುತ ದಿನದಿನ ಸಖಿಯರೊಳು ಮಾರ್ಗಳಿಯಲಿ ದಿನ ಮೂಡುವಮೊದಲೆ ತಣ್ಣೀರ್ಮೀಯುತ ದಿನಪ ಕೃಷ್ಣನ ಕಲೆತ ಕನ್ಯಾಮಣಿಯೆ 2 ಧನುರ್ಮಾಸವನು ಧರಿಸಿ ಭಜಿಸುವೆವು ಧನಂಜಯನ ತೋರೆ ಸಿರಿಬಾಯ್ನುಡಿಯೆ ಧನಕನಕಚಂದನೂ ಬಲ್ಲೆವು ತಾಯೆ ತನು ಕರಗಿಸು ಜಾಜಿಪುರೀಶನಡಿಯಲ್ಲಿ 3
--------------
ನಾರಾಯಣಶರ್ಮರು
(2) ಮಾದದಗೊಂಡನಹಳ್ಳಿ (ಮಹದೇವಪುರ) ಜಯ ಮಂಗಳ ಶ್ರೀಕರ ಹಂಸನಿಗೆ ಪ ಜಯಮಂಗಳ ಸಾಮಜಪೋಷಕಗೆ ಅ.ಪ ಜಯಮಂಗಳ ಫಲ್ಗುಣಪಾಲನಿಗೆ ಜಯಮಂಗಳ ಶ್ರೀಗುರುರಂಗನಿಗೆ1 ಪರತರಗತಿಯಂಪೊಂದುವ ಭರದಿಂ ಶ್ರೀರಂಗದಾಸವರ್ಯನು ಪೆಳ್ದಾ ವರಕವಿತೆಯ ಜರಿಯದೆ ಸ ದ್ಧರಿಭಕ್ತರು ತಪ್ಪ ತಿದ್ದಿ ಮನ್ನಿಸಿ ಮುದದಿಂ ಕಂದ
--------------
ರಂಗದಾಸರು
(2) ವೇದಾಂತದೇಶಿಕರು ವೇದಾಂತ ಗುರು ಸಾರ್ವಭೌಮ ಜ್ಞಾನ ಬೋಧಾನುಕೂಲ ನಿಸ್ಸೀಮ ಪ ಆದಿನೋಡು ಅನಾದಿಯೆನ್ನುತ ಬೋಧೆಗೊಳಿಸುಪದೇಶ ಮಾಡಿದ ಸಾಧುಶಿಖರನೆ ಸರ್ವತಂತ್ರನೆ ವಾದಭೀಕರ ವೈಷ್ಣವೋ ನಿಜ 1 ದ್ವಿದಳ ದಾಸನ ಕೈದಸಿದ ನಿಜ ಪದವಿನೋಡೆಂದೆನುತ ಮನಸನು ಕದಿವ ಕಳ್ಳರ ಕೊಂದು ಹಿಡಿಯೆಂ ದೊದಗಿತ್ತನು ಮೊದಲಿನಕ್ಷರಾ2 ಮೂರು ಬಿಡು ನೀ ಮೂರು ಹಿಡಿ ಕೇ ಳಾರು ಚಕ್ರವ ದಾಂಟಿ ತ್ರಿಕುಟಿಯ ಸೇರಿ ಸಂಪದವಾರಿಯೊಳಗದ್ದು ತೋರಿದ ಪರಮಾತ್ಮ ಪರತರ 3 ಎಂಟು ಹಾರಿಸಿ ಎಂಟುಲಿಪಿಯನು ಗಂಟು ಮಾಡೆಂದೆನುತ ನನ್ನೊಳ ಗುಂಟುಮಾಡಿಯು ತೋರಿದ ವೈ ಕುಂಠನಾಥನ ನನ್ನೊಳಗ ನಿಜ 4 ಶುದ್ಧ ಹಂಸನ ಮಾಡಿ ನನಗಾ ಚಿದ್ವಿವೇಕದ ಕವಚ ತೊಡಿಸಿದ ಸತ್ಸ್ವರೂಪಾಚಾರ್ಯನಹುದೆಲೊ ಮದ್ಗುರುವೆ ಶ್ರೀ ತುಲಶೀರಾಮಾ 5
--------------
ಚನ್ನಪಟ್ಟಣದ ಅಹೋಬಲದಾಸರು
(2) ಸರಗೂರು ರಂಗನಾಥನೇ ವೋ ರಂಗನಾಥನೇ ಪ ಅಂಗಜಕೋಟೀರನೆ ತಿಂಗಳಥರ ಜಂಗಮಂದಿರ ಮಂಗಳ ಹರಿ ಮಾಧವನೇ 1 ಶ್ರೀವರ ದಾಮೋದರ ನಿಜದೇವ ರಂಗನಾಥ 2 ಶರಣರನ್ನು ಪೊರೆಯುವ ತರುಣೀಮಣಿ ಕರುಣಾಕರ ಶರಣೆಂದೆನು ಸರಗೂರಿನ ರಂಗಾ 3 ವಂದಿಪೆ ಶ್ರೀ ತುಲಶಿರಾಮಾ ಸುಂದರಗಿರಿ ಯೆಂದಿಗೊ ನೀ ಬಾರೆಂದಿಪುದು ಮಂದರಧರ 4
--------------
ಚನ್ನಪಟ್ಟಣದ ಅಹೋಬಲದಾಸರು