ಒಟ್ಟು 412 ಕಡೆಗಳಲ್ಲಿ , 67 ದಾಸರು , 299 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಕಾಂತೆಯರಸನ ತೋರೆನಗಮ್ಮ ಸಾಕುವ ಸರಸನ ತೋರೆ ಪ. ಕಣ್ಣೆರಡು ಸಾಸಿರುಳ್ಳವನಂಗದಿ ಕಣ್ಣಮುಚ್ಚಿ ಮಲಗಿಪ್ಪನ ಹೊನ್ನು ಮಣ್ಣಿನ ರಾಶಿಯಿಂದ ಕೂಡಿಪ್ಪನ ಮಣ್ಣ ಕೂಡಿದ ದಿವ್ಯಕಾಯನ 1 ಮಣ್ಣಿನ ದೇವರ ಮುಖದಿಂದ ಮಣ್ಣಿಗೆ ಸೆಣಸುವರ ಭುಜದಿಂದ ಮಣ್ಣ ಪಾ(ನಾ?)ಡುವರ ತೊಡೆಯಲ್ಲಿ ಮೂಡಿ ಮತ್ತೆ ಮಣ್ಣ ಚರಣದಿ ಪುಟ್ಟಿಸಿದನ 2 ಕಣ್ಣ ಮುಚ್ಚದನ ಕಣ್ಣ ತೋರದನ ಹೆಣ್ಣಾಳಿನುರುಬಿನಲಿ ಮುಕ್ಕಣ್ಣನ ಮಣ್ಣನಳೆದು ಮಣ್ಣಿನರಸನೊರೆಸಿದ ಮಣ್ಣಿನ ಮಗಳನಾಳಿದನ 3 ಮಣ್ಣ ಪೊತ್ತನಧರಿಸಿದ ಚಿಣ್ಣನ ಮಣ್ಣ ಮೆದ್ದ ಸಣ್ಣ ಬಾಯೊಳು ಮಣ್ಣನೆ ತೋರಿದ ನಂದನರಾಣಿಗೆ ತಲ್ಲಣ ಹಬ್ಬವ ಕೊಟ್ಟ ಧೀರ4 ಕನ್ನಗಳ್ಳರ ಕೊಂದು ಕಣ್ಣಿಲ್ಲದವರಿಗೆ ಕಣ್ಣ ತರಿಸಿಕೊಟ್ಟ ಚದುರನ ಕಣ್ಣಿಲ್ಲದವನಿಗೆ ಕಣ್ಣ ಕೊಟ್ಟನಂತ ಕಣ್ಣುಳ್ಳ ರೂಪವ ತೋರ್ದನ 5 ಹೆಣ್ಣ ಮೋಹಿಸುವನ ಸುಟ್ಟುರಿ- ಗಣ್ಣನ ಮರುಳು ಮಾಡಿದನ ಹೆಣ್ಣನುಂಗುಟದಿ ಪಡೆದು ತಮ್ಮಣ್ಣನ ಮಣ್ಣಿನೊಡೆಯ ಮಾಡಿಸಿದನ 6 ಮಣ್ಣಿಗಾಗಿ ಬಂದ ಮಣ್ಣನಾಳಿದ ದುರ್ಜನ ದಾನವರ ಕೊಂದನ ಹೆಣ್ಣು ಮಣ್ಣೊಲ್ಲದ ವಾದಿರಾಜನಿಗೆ ಪ್ರಸನ್ನನಾದ ಹಯವದನನ 7
--------------
ವಾದಿರಾಜ
ಮಾನವ ಪ ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಅ ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೊಅನ್ನದಿಂದ ಬಂದ ಕಾಮ ನಿನ್ನದೇನೆಲೊಕರ್ಣದಿಂದ ಬರುವ ಘೋಷ ನಿನ್ನದೇನೆಲೊನಿನ್ನ ಬಿಟ್ಟು ಹೋಹ ದೇಹ ನಿನ್ನದೇನೆಲೊ1 ಹಲವು ಜನ್ಮದಿಂದ ಬಂದಿರುವನು ನೀನೆಲೊಮಲದ ಗರ್ಭದಲಿ ನಿಂದಿರುವನು ನೀನೆಲೊಜಲದ ದಾರಿಯಲಿ ಬಂದಿರುವನು ನೀನೆಲೊಕುಲವು ಜಾತಿ ಗೋತ್ರವುಳ್ಳವನು ನೀನೆಲೊ 2 ಕಾಲಕರ್ಮ ಶೀಲ ನೇಮ ನಿನ್ನದೇನೆಲೊಬಾಲವಿದ್ಯೆ ಬಯಲ ಮಾಯೆ ನಿನ್ನದೇನೆಲೊಕೀಲು ಜಡಿದ ತೊಗಲಗೊಂಬೆ ನಿನ್ನದೇನೆಲೊಲೋಲ ಆದಿಕೇಶವನ ಭಕ್ತನಾಗೆಲೊ 3
--------------
ಕನಕದಾಸ
ಮುರವೈರಿಯೇ ಮೊರೆ ಹೊಕ್ಕೆ ನಿನ್ನಕರಿಯ ಕಾಯ್ದಹಲೈಯ | ವರದನೆಂದರಿತು ಪ ಸರಸಿ ಜಾಂಡದೋಳು | ಅರಸಿ ಅನ್ಯ ಕಾಣೆಕರುಣಿ ಕಂಜನಯನ | ಪರಿಪೋಷಿಸೆನ್ನ ಅ.ಪ. ಭಕ್ತಾಭೀಷ್ಟದಾ | ಮುಕ್ತಿದಾಯಕಾಶಕ್ತನಾಗಿ ಇರಲು | ವ್ಯಕ್ತನಾಗದಿರೆ |ಸೂಕ್ತವೇನೊ ನಿನಗೆ | ಯುಕ್ತಿ ಪೂರ್ಣ ಪುರುಷಸೂಕ್ತ ಮೇಯ ನೀನು | ವ್ಯಕ್ತನಾಗೊ ಮನದಿ 1 ಕಣ್ಣು ಬಿಟ್ಟು ಗಿರಿಯ | ಬೆನ್ನಿಲ್ಹೊತ್ತರೇನುಮಣ್ಣ ಹಲ್ಲಿಲಗಿದು | ಚಿಣ್ಣನನ್ನೆ ಪೊರೆದುಸಣ್ಣ ವಟುವೆ ಪಿಡಿದೆ | ಚೆನ್ನ ಪರಶುವನ್ನಘನ್ನ ಧನುವ ಮುರಿದ | ಕನ್ಯೆ ಸೀತೆ ಪತಿಯ 2 ಗೊಲ್ಲರೋಳು ಪುಟ್ಟಿ | ಮಲ್ಲರನು ಕುಟ್ಟಿಚೆಲ್ವ ಕನ್ಯೆ ಕೂಡಿ | ಕೊಲ್ಲಿಸಿ ತ್ರಿಪುರರಚೆಲ್ವ ಹಯವನೇರಿ | ಕೈಲಿ ಖಡ್ಗ ಪಿಡಿದುಚೆಲ್ವ ಕಲ್ಕಿ ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಮೂಲೋಕದೊಳಗೆ ಮುಕುಂದನೆ ದೈವವಿದ- ಕಾಲೋಚನೆಯ ಮಾಡಬೇಡ ಇವ ಲೋಲಾಕ್ಷಿ ಎಂದೆಂದು ಬಿಡ ಅಲ್ಲದಿದ್ದರೆ ಮೇಲಣ ಸಂಪದವ ಕೊಡ ಇಂಥವನಾವ ಪ. ಆಡÀಲೇಕಿನ್ನು ಸಖಿ ಅಂಜಿದವನಂತೋಡುವ ಕಾಡುವ ಖಳನಾಗಿ ನಿತ್ತ (ನಿಂತ?) ಇವ ರೂಢಿಯೊಳಗೆ ಬಲುದೈತ್ಯ ಇದನೋಡಿ ಪಾಡುವರು ಸುಖ ನಲಿವುತ್ತ ಇಂಥವನಾವ 1 ಕಾಳಿಯ ನಾಗನ ತುಳಿದ ಮತ್ತವಗೊಲಿದ ಬಾಲಗೋಪಾಲ ಸುಕೃಪಾಳು ಇವ ನಾಳು ನಾನೆಂದು ಸಖಿ ಬಾಳು ಗಿರಿಯ ಭಾರವ ತಾಳಿತಿವನದೊಂದು ತೋಳು ಇಂಥವನಾವ 2 ಕಣ್ಣಾರೆ ಕಂಡೆವಲ್ಲ ಮಣ್ಣಮೆದ್ದೆಯೆನಲು ಸಣ್ಣ ಬಾಯೊಳು ಸರ್ವಜಗವ ಎಲೆ ಹೆಣ್ಣೆ ತೋರಿ ತೊಳೆದ ನಮ್ಮಘವ ಇನ್ನು ಹಯವ ದನ್ನ ತನ್ನವನೆನ್ನಾಳುವ ಇಂಥÀವನಾವ 3
--------------
ವಾದಿರಾಜ
ಮೈಹೋಳು ನೀ ಬಂದು ಮೈಯ ಮರಿಯ ಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ಧ್ರುವ ಮಾಯಾ ಮೋಹದೊಳು ಸಿಲ್ಕಿ ದೇಹ್ಯ ಭ್ರಮೆಯಗೊಂಡು ಕಾಯ ಸೌಖ್ಯಕೆ ಬಾಯಿದೆರಿಯಬ್ಯಾಡವೋ 1 ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಪರಿಯಲಿನ್ನು ಕಣ್ಣು ಗೆಟ್ಟು ಕರುಡನಂತೆ ದಣಿಯಬ್ಯಾಡವೋ 2 ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿತೇಜನಂಘ್ರಿ ಬೆರೆದು ಮನಕೂಡವೂ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮೊದಲಿಂದ ನೀ ಕೆಟ್ಟೆ ಮನುಜ ಪ ಬುಧರಾಡುತಿಹ ನುಡಿಯನು ಕೇಳದೆ ಅ.ಪ ಹಗಲಿರುಳು ದುರ್ವಿಷಯದಲಿ ಬಿದ್ದು ಮಿಗೆ ದುರಿತಗಳ ಗಳಿಸಿ ಮುಂದೆ ಯ- ಮಗೆ ನಿರುತ್ತರನಾದೆಯಲೊ 1 ಹೆಣ್ಣು ಹೊನ್ನು ಮಣ್ಣುಗಳ ಬಯ ಸಿನ್ನು ದುರ್ಜನ ಸೇವೆಯಿಂ ಜನ್ಮವ ನಿರರ್ಥಕವ ಗೈಯುತಾ ರಣ್ಯದೊಳಿಹ ಪಿಶಾಚದೋಲ್ 2 ನಿರತವು ಸಜ್ಜನರಡಿಯ ಕಿಂ- ಕರನೆನಿಸಿ ನೀ ಬಾಳೆಲೊ ಕರುಣದಲಿ ಗುರುರಾಮ ವಿಠ್ಠಲ ಕಾಯುವನು ಸಂದೇಹ ಬಿಡು 3
--------------
ಗುರುರಾಮವಿಠಲ
ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ ಪ ಆಡದಿರಪವಾದಗಳನು ನೀನು ಕೊಂಡಾಡದಿರು ಚಿಲ್ಲರೆ ದೈವಗಳನು ಬೇಡಾಡದಿರುಭಯ ಸೌಖ್ಯಗಳನು ನೀ ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು 1 ಹಾಳು ಹರಟಿಗ್ಹೋಗ ಬ್ಯಾಡ ಕಂಡ ಕೂಳುಗಳನು ತಿಂದು ವಡಲ್ಹೊರಿಯ ಬೇಡ ಕಾಲ ವೃಥಾ ಕಳಿಯ ಬ್ಯಾಡ ನಮ್ಮ | ಶ್ರೀ ಹರಿ ದಯಮಾಡಾ 2 ನಾನು ಯೆಂಬುದು ಬಿಡು ಕಂಡ್ಯಾ ಎನ್ನ ಮಾನಾಭಿಮಾನದ ಹರಿಯನ್ನು ಕಂಡ್ಯಾ ಜ್ಞಾನಿಗಳೊಡನಾಡು ಕಂಡ್ಯಾ ವಿಷಯ ಬೀಳುವಿ ಯಮಕೊಂಡಾ 3 ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ ಮಣ್ಣು ಕೂಡಿರುವರೆಗೊ ಕೇಳೊ ಮೂಢಾ ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ ಮೈಮರೆದಿರ ಬ್ಯಾಡಾ4 ನರಜನ್ಮ ಬರುವೋದು ಕಷ್ಟ ಅಮ್ಮ ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ ಮರಳಿ ಬಾರದು ಉತ್ಕøಷ್ಟ ನಮ್ಮ ಕೇಳೆಲವೋ ಮರ್ಕಟ 5 ಗೋವಿಪ್ರರ ಸೇವೆ ಮಾಡೋ ಸೋಹಂ ಭಾವಗಳನು ಬಿಟ್ಟು ದಾಸತ್ವ ಕೂಡೋ ಕೇವಲ ವೈರಾಗ್ಯ ಮಾಡೋ ಎಂಟು ಲಜ್ಜೆಯನೀಡ್ಯಾಡೋ6 ಕಷ್ಟ ಪಡದೆ ಸುಖ ಬರದು ಕಂ ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು ದುಷ್ಟ ವಿಷಯದಾಶೆ ಜರಿದು ವಿಜಯ ವಿಠಲನೆನ್ನದೆ ಮುಕ್ತಿಯು ಬರದೂ, ಕೂಗೆಲವೊ ಬ್ಯಾದೆರದು 7
--------------
ವಿಜಯದಾಸ
ಯತಿಗಳು (ಶ್ರೀ ಬ್ರಹ್ಮಣ್ಯತೀರ್ಥರು) ಕೈಪಿಡಿದು ಪಾಲಿಸೈ ಬ್ರಹ್ಮಣ್ಯಗುರುವೇ ಪ ಅಯ್ಯನೀನೆಂದು ನಿನ್ನಡಿಗೆ ವಂದಿಸುವೇ ಅ.ಪ ಮೂಢವiತಿಗಳು ಬಂದು ಬೇಡಿ ಕೊಳ್ಳಲು ಕರುಣ ನೀಡಿ ನಿನ್ನವರನ್ನು ಕಾಯ್ದರೀತಿ ಗಾಢದಿಂದಲಿ ಬಂದು ಮೂಢನಾದೆನ್ನನು ಗೂಢದಿಂದಲಿ ಕಾಯೊ ಗುಣನಿಧಿಯೆ ಗುರುವೇ . . 1 ಪುರುಷೋತ್ತಮಾರ್ಯರ ವರಪುತ್ರನೆಂದೆನಿಸಿ ಹರುಷದಿಂದಲಿ ಬಂದ ಭಕ್ತಜನರ ಮೊರೆಯಲಾಲಿಸಿ ಸ್ವಾಮಿ ಸ್ಮರಣೆಯ ಕೊಟ್ಟೆನ್ನ ಹರುಷಪಡಿಸುವ ಗುರುವು ನೀನೆಂದು ನಾ ಬಂದೆ 2 ವರಕಣ್ವನದಿ ಕೂಲದಲಿ ಕಲ್ಮಷ ತೊಳೆದು ಸಾರ್ವಭೌಮನ ಗುಣವ ಸರ್ವದಾ ಪಾಡುತಲಿ ಸರ್ವಜನರನು ಕಾವೆ ಸರ್ವಕಾಲದಲಿ 3 ಸರ್ವಗುಣ ಪೂರ್ಣ ಬ್ರಹ್ಮಣ್ಯಪುರ ವಾಸ ನರಹರಿಯ ಪಾದವನು ಸ್ಮರಿಸಿನಿತ್ಯ ಸರಸದಲಿ ಅಬ್ಬೂರು ಪುರವಾಸಿಗಳನೆಲ್ಲ ಅರ್ಭಕರ ತೆರನಂತೆ ರಕ್ಷಿಸುವ ಗುರುವರ್ಯ 4 ಮಣಿದು ಬೇಡುವೆ ನಿನ್ನ ಚರಣದಾಶ್ರಯವಿತ್ತು ಅಣುಗನೆಂದೆನಿಸೆನ್ನ ಸಲಹಬೇಕೊ ಗುಣನಿಧಿ ಶ್ರೀ ಪ್ರಾಣನಾಥ ವಿಠ್ಠಲನ ಘನ ಚರಣ ಸ್ಮರಣೆಯ ನೀಯೊ ಗುರುವೆ 5
--------------
ಬಾಗೇಪಲ್ಲಿ ಶೇಷದಾಸರು
ಯಾಕೆ ಬಂದಿ ಜೀವಾ ಯಾಕೆ ಬಂದಿ | ಲೋಕದ ಸವಿಸುಖ ಅನುಭವವಾಯಿತು ಪ ಮೇರು ಪರ್ವತದಲ್ಲಿ ವಾರಣವಂತನಾಗಿ | ಶ್ರೀ ರಮಣನ ಧ್ಯಾನ ಆರಾಧನೆಯ ಬಿಟ್ಟು 1 ಉಡಿಗೆ-ತೊಡಿಗೆ ಇಟ್ಟು ಅಡಿಗಡಿಗೆ ಸುಖ | ಬಡುವೆನೆಂಬುದಕೆ ಈ ಪಾಡುಬಡಲು ನೋಡು 2 ಉಣ್ಣು ಉಣ್ಣು ಉಣ್ಣು ಮತ್ತೆ ಉಣ್ಣು ಹೆಣ್ಣು-ಹೊನ್ನು-ಮಣ್ಣು ನಿನ್ನಾಧೀನವೆಂಬೀ 3 ಅಲ್ಲಿಗಲ್ಲಿಗೆ ಜ್ಞಾನ ಬಲ್ಲವರ ಕೂಡ | ಎಲ್ಲ ಕಾಲದಲಿ ನಲಿದಾಡೋದು ಬಿಟ್ಟು 4 ಆದದ್ದಾಯಿತು ಹೋದ ಮಾತುಗಳೇಕೆ | ಶ್ರೀಧರ ವಿಜಯವಿಠ್ಠಲನ ಮರೆಯದಿರು 5
--------------
ವಿಜಯದಾಸ
ಯಾರಿಗೆ ದಾರೋ ಗೋಡೆಗೆ ಮಣ್ಣು ಮಾರಿಯರೆಲ್ಲರು ಶ್ರೀ ಹರಿಯೇ ಪ ಸ್ಥಿತಿಯಲ್ಲ ದೇವಾ ನಿನ್ನುಳಿದು 1 ಅಂಬುಜಲೋಚನ ಪರಮ ಪುರುಷನ ಭವ ಅಂಬುಜೆರಮಣಾ ನಿನ್ನುಳಿದು 2 ನಂಬಿದ ಭಕ್ತರ ಸಲಹುವ ಹರಿಯೇ ಸಂಭ್ರಮದಾತ್ಮಗೆ ನಿನ್ನುಳಿದು3 ನರಹರಿ ಭಕ್ತಿ ಮಾಡಿದ ಧರ್ಮ ಸರಸದಿ ಪರಹಿತವನ್ನುಳಿದು 4 ಹಿಡಿಯುವೆ ಮುಕ್ತಿಯ ಮಾರ್ಗವನೀಗ ಪಡೆವೆನು ಸುಖವ ಕೇಶವನೇ5
--------------
ಕರ್ಕಿ ಕೇಶವದಾಸ
ರಘುರಾಮರ ಪಾದವ ಹಿಡೀ ಹಿಡಿ ಪ ಕಾಮ ಕ್ರೋಧ ಮದ ಮತ್ಸರಗಳೆಂಬೋ ದುರಿತವ ಬ್ಯಾಗನೆ ಹೊಡಿ ಹೊಡಿ 1 ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ ಅದರೊಳಗೇನಿದೆ ಹುಡಿ ಹುಡೀ 2 ಶ್ರೀದವಿಠಲನ ಪಾದಸ್ಮರಣೆಯ ಮರೆಯದೆ ಬೇಗನೆ ನುಡಿ ನುಡೀ3
--------------
ಶ್ರೀದವಿಠಲರು
ರಾಘವೇಂದ್ರಯತಿಗಳು ಗುರುರಾಯರ ನಂಬಿರೋ ರಾಘವೇಂದ್ರ ಗುರುರಾಯರ ನಂಬಿರೋ ಜಗದೊಳು ಪ. ಗುರುರಾಯರ ನಂಬಿ ವರಗಳ ಬೇಡಿರೊ ನರಹರಿ ಪದ ಧ್ಯಾನಿಪ ಕರುಣವ ಬೀರುವಂಥ 1 ಆದಿ ಪ್ರಹ್ಲಾದರು ಮೋದದಿ ಹರಿಪದ ಆದರದಿಂದ ಜಗಕೆ ಸಾಧಿಸಿ ಬೀರಿದರೊ 2 ದ್ವಿತೀಯ ವ್ಯಾಸರಾಜ ಸ್ತುತ ಬ್ರಹ್ಮಣ್ಯಾರ್ಯ ಕರ ಗತಪುರುಷೋತ್ತಮ ಗುಹ ಪಥದೊಳಗಿಪ್ಪರ 3 ತೃತೀಯ ರಾಘವೇಂದ್ರ ಪತಿತ ಪಾವನ ನಾಮ ರತ್ನ ಖಚಿತವಾಗಿದೆ ಭಕ್ತ ಸುಚರಿತರೆಲ್ಲ ಬೇಗ 4 ಭೂತ ಪ್ರೇತಗಳ ಪ್ರೀತಿಯೊಳಳಿದು ಶ್ವೇತ ಕುಷ್ಠಗಳ ದೂರ ಮಾಳ್ಪವರ 5 ಪಾದ ಪಂಕಜ ದುರಿತ ದೂರ ಶ್ರೀ ಶ್ರೀನಿವಾಸನ ಭಜಿಪ ಗುರು 6
--------------
ಸರಸ್ವತಿ ಬಾಯಿ
ರಾಜಿಯಿದ್ದೋರೆಲ್ಲ ಕೇಳ್‍ಬಹುದಣ್ಣ ಪೂಜೆ ಮಾಡೋ ಇದ ಹೇಳತೀನಣ್ಣ ಪ ಸಾಜದ ಹಾದಿಲಿ ಬಾಳ್ಯವ್ರಣ್ಣ ಅ.ಪ ಹಾಸಿಗೇಲಿ ತಿಂಡಿ ತಿನಬಾರ್ದಣ್ಣ ಮೋಸದ ಯೋಚನೆ ಯಿರಬಾರ್ದಣ್ಣ ಕಾಸಿಗೆ ಸುಳ್ಳ ಯೋಳ್ಬಾರದಣ್ಣ 1 ನಾಮ ಇಬೂತಿಯ ಅಣೆಗಚ್ರಣ್ಣ ರಾಮಾ ನಿನ್ಪಾದ್ವೇಗತಿಯೆನ್ನಣ್ಣ 2 ಮಣ್ಣಿನ ಭೂಮಿಯ ನಂಬದಿರಣ್ಣ ಸಣ್ಣ ಕೃಷ್ಣನೇ ಗತಿಯೆನ್ನಣ್ಣ 3 ನೋಡುವ ಕಣ್ಗಳ ಮನದಲಿಡಣ್ಣ ನೋಡದರಲಿ ಹೊಳೆ ಹೊಳೆವಾಬಣ್ಣ 4 ಅದರ ಮೇಲೆಳ್ಡು ಕಾಲ್ಗಳ ನೋಡಣ್ಣ ಮದನ ಗೋಪಣ್ಣನು ಕಾಣುವನಣ್ಣ 5 ಮಡಿಯ ಪೀತಾಂಬ್ರದವುಡಗೆಯ ನೋಡಣ್ಣ ಹಿಡಿದೆತ್ತಿದ ಕೈಕೊಳಲನು ನೋಡು 6 ಮುಡಿಯ ಕಿರೀಟದ ಹೊಳಪನು ನೋಡು ನಡುಹಣೆಯ ನಿಡು ತಿಲಕವ ನೋಡು ಕಡೆನೋಟದ ಕಣ್ಮಿಂಚನು ನೋಡು 7 ಅಂಬರದಂತೆ ಸರೀರವ ನೋಡು ನಂಬಿಕೆಯಲಿ ಸರಣಾರ್ತಿಯ ಮಾಡು 8 ಬೋಗಾನಂದವ ಪಡಿತೀಯಣ್ಣ ಕೂಗಿಗೆ ಬರುವನು ಮಾಂಗಿರಿಯಣ್ಣ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮದುರ್ಗದ ಪರಮ ಪೂಜ್ಯ ಆಚಾರ್ಯರನುನೇಮದಿಂದ ಸ್ಮರಿಸೊ ಮನುಜಾಕಾ'ುತಾರ್ಥವ ಕೊಟ್ಟು ಪ್ರೇಮದಿಂದ ಕ್ಕೆಪಿಡಿದುಸನ್ಮಾರ್ಗ ತೋಗಿಸುವರರು ಅವರು ಪಮಧ್ವಮತದೊಳು ಜನಿಸಿ ಸಚ್ಛಾಸ್ತ್ರಗಳನೋದಿ ಪ್ರಸಿದ್ಧಪಂಡಿತರಾಗಿ ಶುದ್ಧ ಆಚರಣೆ ಸದ್ದೈರಾಗ್ಯಸದ್ಭಕ್ತಿ ಸುಜ್ಞಾನ ಪೂರ್ಣರಾಗಿದುಡ್ಡಪ್ಪ ದೊಡ್ಡಪ್ಪ ಧಡ್ಡಪ್ಪರೆನ್ನದೆ ಸರ್ವಸಮದ್ಟೃ ಇಟ್ಟು'ದ್ಯಾರ್ಥಿಗಳಿಗೆಲ್ಲ ಅನ್ನವಸ್ತ್ರವ ಕೊಟ್ಟು ಗುರುಕುಲನಡಿಸಿದ ಋಗಳವರು 1ಸ್ನಾನಸಂಧ್ಯಾನ ಜಪಿತಪ ಅನುಷ್ಠಾನ ಅಗ್ನಿಹೋತ್ರವನಡಿಸುತ ಧ್ಯಾನಮೌನವು ಸದಾ ರಾಮನಾಮ ಸ್ಮರಣೆಪಾಠಪ್ರವಚಿನ ಪುರಾಣ ದಾನಧರ್ಮವು ದಿವ್ಯ ಸಂತಾನಸಂಪತ್ತು ರಾಜಮನ್ನಣೆ ಪಡೆದರು ಕ್ಷಣ ವ್ಯರ್ಥಕಳೆಯದೆ ವ್ಯರ್ಥಮಾತಾಡದೆ ದಿನಚರಿ ನಡಿಸಿದರು ಕಡೆತನರ 2ಘನವೈಯ್ಯಾಕರಣಿ ಗರ್ವವು ಎಳ್ಳೆಷ್ಟು ಇಲ್ಲಾ'ನಯ ಪೂರ್ಣಸ್ವಭಾವ ಹಣಹೆಣ್ಣು ಮಣ್ಣಿನಾಶೆಯುಪೂರ್ಣಬಿಟ್ಟವರು ಜನ'ತದಿ ಸತತ ನಿಂತರುಧನ ಮಾನ ಮರ್ಯಾದೆಗಳಿಗಾಗಿ ಎಂದೆಂದೂ ಧಡಪಡ-ಮಾಡಲಿಲ್ಲಾ ಗುಣನಿಧಿ ಭೂಪತಿ 'ಠ್ಠಲನ ಭಜನೆಯಾಕುಣಿಕುಣಿದು ಮಾಡುವ ಪರಮ ಭಾಗವತರು 3ಗಲಗಲಿ ನರಸಿಂಹಾಚಾರ್ಯರು
--------------
ಭೂಪತಿ ವಿಠಲರು
ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ. ಲಕ್ಷ್ಮೀಶ ಪಾಲಿಸೊ ಎನ್ನ | ಜಗ ದ್ರಕ್ಷಕ ಪರಮಪಾವನ್ನ ಈಕ್ಷಿಸು ಕರುಣ ಕಟಾಕ್ಷವ ಬೀರುತ ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ. ನಾಗರಾಜನ ಗಿರಿವಾಸ | ಭೋಗ ಆಗುಮಾಡೆಲೊ ಸರ್ವೇಶ | ನಿನಗೆ ಬಾಗಿ ನಮಿಸುವೆ ಜಗದೀಶ | ಭವ ರೋಗ ಹರಿಸು ಕ್ಲೇಶನಾಶ | ಆಹ ಕೂಗಿದರು ನಿನಗೀಗ ಕೇಳಿಸದೇನೊ ಜಾಗುಮಾಡದೆ ನೀಡೊ 1 ಸೃಷ್ಟಿಗೆ ಎನ್ನನು ಕರೆದೆ | ಭವ ಕಷ್ಟದಿ ಬಂಧಿಸಿ ತಂದೆ | ಇನ್ನು ಘಟ್ಯಾಗಿ ಕಾಪಾಡು ಎಂದೆ | ಮೊರೆ ಮುಟ್ಟದೆ ನಿನಗಿನ್ನು ತಂದೆ | ಆಹ ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2 ಕರ್ಮಬಂಧನಗಳ ಕಡಿಯೊ | ಶ್ರೀಶ ನಿರ್ಮಲರೂಪ ಕೈಪಿಡಿಯೊ | ಬೇಗ ಧರ್ಮ ಅಧರ್ಮವ ತಿಳಿಯೊ | ಜಗ ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3 ಶ್ರೀನಿವಾಸ ಬಾರೊ ಬೇಗ | ನಿನ್ನ ನಾನು ನಂಬಿದೆನೊ ಶ್ರೀ ಭೋಗ | ನೀಗು ನೀನೆ ತ್ರಿಕರ್ಮದ ಭೋಗ | ಬೇಗ ಭವ ರೋಗ | ಆಹ ಪೋಗುತಲಿದೆ ದಿನ ಜಾಗುಮಾಡಲು ಸಲ್ಲ ನಾಗಶಯನ ಎನ್ನ ಬೇಗನೆ ರಕ್ಷಿಸೊ 4 ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ ಬೆನ್ನ ಭಾರವಿದಿನ್ನೇನು | ಕೋರೆ ಮಣ್ಣು ಆರ್ಭಟಿಸುವೆ ನೀನು | ವಟು ಚಿಣ್ಣ ಭಾರ್ಗವ ನೀನು | ಆಹ ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ ಬಣ್ಣಗೆಟ್ಟು ಹಯವನ್ನೇರಿದ ಧೀರ 5 ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ ತತ್ವಾಧಿಪತಿಗಳು ಮುದದಿ | ಜಗ ತ್ಕರ್ತನೆ ಕಾಯ್ವ ದಯದಿ | ಬೇಗ ಇತ್ತು ಮತಿಯ ಸಲಹೊ ದೃಢದಿ | ಆಹ ಸತ್ಯರೂಪನೊ ನೀ ಸತ್ಯ ಸಂಕಲ್ಪನೊ ನಿತ್ಯ ನಿಂತು ಕಾಯೊ 6 ಗೋಪಾಲಕೃಷ್ಣ ವಿಠ್ಠಲ | ಭವ ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ ರಾಪು ಮಾಡುವುದುಚಿತಲ್ಲ | ಜಗ ದ್ವ್ಯಾಪಕ ಭಕ್ತವತ್ಸಲ | ಆಹ ಈ ಪಯೋಜಜಾಂಡದಿ ರೂಪ ರೂಪಾಂತರದಿ ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
--------------
ಅಂಬಾಬಾಯಿ