ಒಟ್ಟು 366 ಕಡೆಗಳಲ್ಲಿ , 63 ದಾಸರು , 310 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ಪ. ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು 1 ಪರಿಮಳಿಸುವ ಮಾಲೆಯ ನೆವದಿ ಹರಿಯುದರದಲ್ಲಿಸಿರಿಯೊಲಿಹಳುತÀರುಣಿ ತುಲಸಿ ತಪ್ಪದೆಯವನಚರಣವ ರಮೆ ಭಜಿಸೆ ಭಜಿಪಳು2 ಪೂಜಿಸುವರ ಶಿರದಿ ನಿರ್ಮಾಲ್ಯಗಳವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳುಈ ಜಗದೊಳು ತಾವಿಬ್ಬರಿದ್ದಲ್ಲಿಆ ಜನಾರ್ದನನಾಕ್ಷಣ ತಹಳು 3 ಒಂದು ಪ್ರದಕ್ಷಿಣವನು ಮಾಡಿದವರಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯಎಂದೆಂದಿವಳ ಸೇವಿಸುವ ನರರಿಗೆಇಂದಿರೆಯರಸ ಕೈವಲ್ಯವೀವ 4 ತುಲಸಿಯ ನೆಟ್ಟವನು ಮತ್ತೆ ತನಗೆ ಇಳೆಯೊಳು ಪುಟ್ಟುವ ವಾರ್ತೆಯ ಕಳೆವಜಲವೆÀರೆದು ಬೆಳೆಸಿದ ಮನುಜರಕುಲದವರ ಬೆಳೆಸು ವೈಕುಂಠದಲ್ಲಿ 5 ತುಲಸಿಯೆ ನಿನ್ನ ಪೋಲುವರಾರುಮೂಲದಲ್ಲಿ ಸರ್ವತೀರ್ಥಂಗಳಿಹವುದಳದಲ್ಲಿ ದೇವರ್ಕಳ ಸನ್ನಿಧಾನಚೆಲುವಾಗ್ರದಿ ಸಕಲ ವೇದಗಳು 6 ತುಲಸಿ ಮಂಜರಿಯೆ ಬೇಕಚ್ಚುತಂಗೆದಳಮಾತ್ರ ದೊರಕಲು ಸಾಕವಗೆಸಲುವುದು ಕಾಷ್ಠಮೂಲ ಮೃತ್ತಿಕೆಯುಫಲವೀವನಿವಳ ಪೆಸರ್ಗೊಳಲು 7 ಕೊರಳಲ್ಲಿ ಸರ ಜಪಸರಗಳನ್ನುವರ ತುಲಸಿಯ ಮಣಿಯಿಂದ ಮಾಡಿಗುರುಮಂತ್ರವ ಜಪಿಸುವ ನರರುಹರಿಶರಣರ ನೆಲೆಗೆ ಸಾರುವರು8 ಎಲ್ಲಿ ತುಲಸಿಯ ಬನದಲ್ಲಿ ಲಕ್ಷುಮೀ-ವಲ್ಲಭನು ಸರ್ವಸನ್ನಿಹಿತನಾಗಿನೆಲಸಿಹನಿವಳೆಸಳೊಂದಿಲ್ಲದಿರೆಸಲ್ಲದವಂಗನ್ಯಕುಸುಮದ ಪೂಜೆ 9 ಎಲ್ಲ ಪಾಪಂಗಳೊಮ್ಮೊಮ್ಮೆ ಕೈಮುಗಿಯೆಎಲ್ಲಿ ಪೋಪುದು ದೇಶದೇಶಂಗಳಿಗೆನೆಲ್ಲಿ ಮಲ್ಲಿಗೆ ಮೊದಲಾದ ಸೈನ್ಯಅಲ್ಲೀಗಲು ನಮ್ಮ ಬನದಲೊಪ್ಪಿಹಳು 10 ಹರಿಪಾದಕೆ ಶ್ರೀತುಲಸಿಯೇರಿಸಿದನರರನು ಪರಮ ಪದಕೇರಿಸುವುದುನಿರುತದಿ ತುಲಸಿಯ ಕಂಡರವಗೆನರಕಗಳ ದರುಶನ ಮತ್ತಿಲ್ಲ 11 ಪಡಿ ಆಯಿತು ಗಡನ್ನಿವಳ ವೃಂದಾವನದಲ್ಲಿ ನೆಟ್ಟುಮನೆಮನೆ ಮನ್ನಿಸದವನ್ಯಾವ12 ಕನಸಿನಲಿ ಕಂಡಂತೆ ಇನ್ನೊಂದುಕೊನೆವೆರಸಿದ ಪುಷ್ಪದಿ ಜಪಿಸಿಅನುದಿನ ಹಯವದನನ್ನ ತೀರ್ಥವನು ಕೊಂಡು ನಾ ಧನ್ಯನಾದೆನು 13
--------------
ವಾದಿರಾಜ
ಯಾರೆಂದು ತಿಳಿದೆಯೋ ಈತನ ನೀನು ಪ ಯಾರೆಂದು ತಿಳಿದಿಹೆ ಯದುಕುಲೋತ್ತಮಮನ ನೀ ಪೋರ ಮಾತುಗಳನು ಸಾಕುಮಾಡೆಲೋ ಮೂಢ ಅ.ಪ. ಪಶುಪಾಲನಿವನೆನುತ ಜರಿದೊಡೇನಾಯ್ತು ಪಶುಪತಿ ವಿನುತನೀತ ಬಿಸಜ ಸಂಭವನಿತ್ತ ವರದ ಬಲುಮೆಯಿಂದ ವಸುಧೆ ಕಂಟಕನಾದ ಅಸುರ ಹಿರಣ್ಯಕನ ಬಸುರ ನಖದಲಿ ಬಗೆದು ಸವರಿದ ಅಸುರರಿಪು ಶ್ರೀಕರಿಗಿರೀಶನ ದಶಶಿರಾಂತಕ ದಶರಥಾತ್ಮಜ ಅಸಮ ಮಹಿಮನ ಅಪ್ರಮೇಯನ 1
--------------
ವರಾವಾಣಿರಾಮರಾಯದಾಸರು
ರಕ್ಷಿಸು ಪರಮೇಶ್ವರ ದೇವ ಸಂ- ರಕ್ಷಿಸು ಪರಮೇಶ್ವರ ದೇವ ಪ ಗಂಗಾಧರ ಜಟಾಜೂಟ ಮನೋಹರ ರಂಜಿತ ಕೇಶಾಲಂಕೃತ ಶಶಿಧರ ಭಸ್ಮೋದ್ಧೂಳಿತ ಭವ್ಯ ಶರೀರ ಆಬ್ಜ ಪ್ರಭಾಕರ ಅನಲ ತ್ರಿನೇತ್ರ ಸದ್ಯೋಜಾತನೆ ಪರಮ ಪವಿತ್ರ 1 ಮಂಡಿತ ಹಾಸೋನ್ಮುಖ ಮುಖ ಮಂಡಲ ಕುಂಡಲಿ ಭೂಷಿತ ಕರ್ಣಕುಂಡಲ ವಿಷಧರ ಕಂಧರ ಕಂಧರ ಮಾಲ ಭಕ್ತಾ ಭಯಕರ ಕರಧೃತ ಶೂಲ ವಾಮದೇವ ದೇವೋತ್ತಮ ಲೋಲ 2 ಘೋರ ಕಪಾಲ ಖಟ್ವಾಂಗ ಡಮರುಗ ಅಕ್ಷಮಾಲ ಪಾಶಾಂಕುಶ ಸಾರಗ ಖಡ್ಗ ಧನುಶ್ಯರ ಖೇಟಕ ಭುಜಗ ಸಾಯಕ ಧೃತಕರ ಜಗ ದೇಕವೀರ ಅಘೋರನೆ ಸುಭಗ 3 ಗಜ ಶಾರ್ದೂಲಾ ಜಿನಧರ ಸದ್ಗುಣ ಅಣಿಮಾದ್ಯಷ್ಟೈಶ್ವರ್ಯ ನಿಷೇವಣ ಅಂಕಾರೋಹಿತ ಅಗಜಾ ವೀಕ್ಷಣ ಸನಾಕಾದ್ಯರ್ಚಿತ ಪಾವನ ಚರಣ ತತ್ಪುರಷನೆ ನಮೋ ಕರುಣಾಭರಣ 4 ರುದ್ರಾದಿತ್ಯ ಮರುದ್ಗಣ ಸೇವಿತ ನಂದೀಶಾದಿ ಪ್ರಮಥಗಣ ವಂದಿತ ನಾರದ ಮುಖ ಸಂಗೀತ ಸುಪ್ರೀತ ನಿಗಮ ಪರಾರ್ಥ ದಾತ 5
--------------
ಲಕ್ಷ್ಮೀನಾರಯಣರಾಯರು
ರಕ್ಷಿಸೋ ಜಗನ್ನಾಥದಾಸ ರಕ್ಷಿಸೋ ರಕ್ಷಿಸು ಗುರು ಜಗನ್ನಾಥದಾಸ ಪಕ್ಷಿವಾಹನನ ನಿಜದಾಸ ಮು ಮುಕ್ಷು ಮಾರ್ಗವ ತೋರ್ದಧೀಶ ನೀನೆ ಪ್ರ ತ್ಯಕ್ಷ ಪ್ರಹ್ಲಾದನನುಜ- ||ಅಹಾ|| ಈ ಕ್ಷಿತಿಯೊಳು ಸುರಶ್ರೇಷ್ಠನೆನಿಸಿ ವಿ ಶಿಷ್ಟರ ಮನೋಭೀಷ್ಟವನಿತ್ತ ಹರಿದಾಸ 1 ವೇದವಂದ್ಯನ ನಿಜತತ್ತ್ವ ನಿಜ ನಿತ್ಯ (ಸತ್ಯ) ಪೂರ್ಣ ಬೋಧರ ಗ್ರಂಥ ತತ್ತ್ವ ನೀತಿ ತ ಪ್ಪದೆ ಪೇಳ್ದೆ ಮಹತ್ವ ||ಅಹಾ|| ಮೋದಪಡಿಸಿ ಮೋದತೀರ್ಥರ ಮತ ದು ಗ್ಧಾಬ್ಧಿಸುಧೆಯನಿತ್ತ ಬಾದರಾಯಣನ ದಾಸ 2 ಪ್ರಕೃತಿಬಂಧಕರಾದ ಜನರು ನಿನ್ನ ಪ್ರಾಕೃತಗ್ರಂಥನೊಡಿ ಮೋದಿಪರು ಸತತಾ ಪ್ರಾಕೃತನ ತಾ ವಂದಿಪರು ಜನ್ಮ ಸುಕೃತಕ್ಕೆ ತಾವು ಸಾಧಿಪರು ||ಅಹಾ|| ಸಂಸ್ಕøತ ಭಾಷೆಯ ಪ್ರಕರಣಗಳನೆಲ್ಲ ಪ ರಿಷ್ಕøತ ಪಡಿಸಿ ನೀ ಪ್ರಾಕೃತದೊಳು ತೋರ್ದೆ3 ವಿಪ್ರವರೇಣ್ಯನೆ ನೀನು ಜಗದಿ ಅಪ್ರಮೇಯನ ಪ್ರಮೇಯವನ್ನೂ ಅದಕ್ಕೆ ಸಪ್ರಮಾಣಗಳೆಲ್ಲವನ್ನೂ ತೋರಿ ದಿ ಕ್ ಪ್ರದರ್ಶನ ಮಾಡಿ ಇನ್ನೂ ||ಅಹಾ|| ಸ್ವಪ್ರಯೋಜನ ರಹಿತ ಅಪ್ರಮೇಯನ ಮಹಿಮೆ ಕ್ಷಿಪ್ರ ಭೋಧೆಯಾಗಲ್ ತ್ವತ್ಪ್ರಸಾದವನಿತ್ತೆ4 ನಿನ್ನುಪಕಾರದ ಪರಿಯಾ ನಾನು ಜನ್ಮಜನ್ಮಾಂತರಕೆ ಮರೆಯೆ ನೀನೆ ಘನ್ನ ಶ್ರೀಹರಿದಾಸಾಗ್ರಣಿಯೇ ಇನ್ನು ನಿನ್ನ ಹರಿಕಥಾಮೃತಸಾರಕ್ಕೆಣೆಯೇ ||ಅಹಾ|| ಇನ್ನಿಲ್ಲ ನಿನ್ನಂಥ ಘನ್ನ ಕವಿಗಳ ಕಾಣೆ ಪನ್ನಂಗಶಯನ ಶ್ರೀ ವೆಂಕಟೇಶನ ದಾಸಾ 5
--------------
ಉರಗಾದ್ರಿವಾಸವಿಠಲದಾಸರು
ರಘುವರ್ಯ ಕರಜಾತ ಶ್ರೀ | ರಘೋತ್ತಮ ತೀರ್ಥಾ ಪ ಅಘಹರ ಶ್ರೀ ರಾಮ ಪದ ಭಜಕ ನೇಮಾ ಅ.ಪ. ಪ್ರವಚನಾಚಾರ್ಯರಿಂ | ದವಮಾನ ತಡೆಯದಲೆಸವನ ಮೂರರ ಮೇಲೆ | ಪವಡಿಸಿರೆ ತಾನೂ |ಪವನ ಪಿತ ತೈಜಸನು | ಗುರುವರರ ರೂಪಿನಲಿಪ್ರವಚಿಸೆನೆ ನ್ಯಾಯ ಸುಧೆ | ಪ್ರವಚಿಸಿದ ಮಹಿಮಾ 1 ಪ್ರಮೆಯ ದೀಪಿಕೆ ತತ್ವ | ಅಮಮ ಬೃಹದಾರಣ್ಯಸುಮನ ವ್ಯಾಹರಣೆಯನು | ನೀ ಮಾಡಿ ಮುದದೀ |ಕಮಲನಾಭನ ಮಹಿಮೆ | ಅಮೃತವನು ತೆಗೆಯುತಲಿಸುಮನಸರಿಗುಣಿಸಿದೆಯೋ | ರಾಮ ಪದ ಭಜಕಾ 2 ತತುವನ್ಯಾಸವ ಮಾಡೆ | ತತ್ವ ದೇವತೆಗಳನುತತುತತೂ ರೂಪದಲಿ | ಸತತ ನೋಡುವನೇ |ಕ್ಷಿತಿಪತಿ ಶ್ರೀ ಗುರೂ | ಗೋವಿಂದ ವಿಠ್ಠಲನೆಉತ್ತಮೋತ್ತಮನೆನುತ | ಬಹು ಮೆರೆಸಿದಾತ 3
--------------
ಗುರುಗೋವಿಂದವಿಠಲರು
ರಮಾ ಮನೋಹರ ಶ್ಯಾಮಸುಂದರ ವಿಮಾನ ಶೋಭಿತ ಹರೇ ಹರೇ ಪ ಕುಮಾರಪಿತನುತ ಶವi ದಮಾಯುತ ಸಮಾನ ವಿರಹಿತ ನಮೋ ನಮೋಅ.ಪ ಸುರೇಶ ಪಶುಪತಿ, ನಾರಾಯಣಾ ಧರೇಶ ರಘುಪತಿ ಲಾವಣ್ಯಮೂರುತಿ ಹರೀಶ ಮಾರುತಿ ಪಾರಾಯಣ 1 ಗೋಪಾಂಗನಾ ಪ್ರಿಯ ಗೋಪಾಲ ಬಾಲ ಚಾಪಾಂಬುಕರ ಭಯಹಾರ ಪ್ರಮೇಯ ಶ್ರೀಪಾದ ಚಿನ್ಮಯ ಸೌಂದರ್ಯ ಶೀಲ ಭೂಪಾಲ ಮಾಂಗಿರಿ ಶೃಂಗಾರ ನಿಲಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮ ಗೋವಿಂದ-ಹರಿ-ಕೃಷ್ಣ ಗೋವಿಂದ ಕೃಷ್ಣ ಗೋವಿಂದ- ಹರಿ-ರಾಮ ಗೊವಿಂದ ಪ ರಾಮ ರಾಮ ಕೃಷ್ಣಕೃಷ್ಣ _ ಕೃಷ್ಣಕೃಷ್ಣ ರಾಮರಾಮ ರಾಮ ಕೃಷ್ಣ ರಾಮರಾಮ _ ಕೃಷ್ಣ ರಾಮ ಕೃಷ್ಣ ಕೃಷ್ಣ ಅ.ಪ. ಮತ್ಸ್ಯಕೂರ್ಮ ಭೂವರಾಹ _ ಜೈ ಜೈ ವಾಮನ ನಾರಸಿಂಹ ತ್ರಿವಿಕ್ರಮ _ ಶರಣು ಉಪೇಂದ್ರ 1 ಬುದ್ಧ ಕಲ್ಕಿ _ ಭೃಗುಜ ಜಯೇಶ ವಾಸುದೇವ ಹೃಷಿಕೇಶ _ ಕೇಶವಾಚ್ಯುತ 2 ಅಧೋಕ್ಷಜ ಅನಿರುದ್ಧ ಶ್ರೀಧರ ವೇದವ್ಯಾಸ ಕಪಿಲದತ್ತ _ ಮಧುಸೂದನ 3 ತೈಜಸ ಪ್ರಾಜ್ಞತುರ್ಯ-ಬ್ರಹ್ಮ ಧಾಮ ಪೃಶ್ನಿಗರ್ಭ ಮಹಿದಾಸ _ ಪುರುಷೋತ್ತಮ 4 ಅಜಪರಶ್ರೀನಿವಾಸ _ ಸಾಸಿರಾನಂತ ಶಿಂಶುಮಾರ _ ಸಚ್ಚಿದಾನಂದ 5 ನಾರಾಯಣ ಜನಾರ್ದನ _ ಹಂಸ ಪ್ರದ್ಯುಮ್ನ ಮಾಧವ 6 ಅಪ್ಪ ಉರಗಾದ್ರಿ ವಾಸ _ ವೆಂಕಟೇಶ ಅಪ್ರಮೇಯ ರಂಗನಾಥ _ ಪಾಂಡುರಂಗ 7 ಸತ್ಯವ್ಯಕ್ತ ಸತ್ಯನೇತ್ರ _ ಸತ್ಯಪರ ಭಿನ್ನ ನಿತ್ಯತೃಪ್ತ _ ಸತ್ತದಾತ _ ಪುರುಷ ಮಹಾಂತ 8 ಲಕ್ಷ್ಮೀರಮಣ ಕೃಷ್ಣವಿಠಲ _ ಮುಕ್ತರಾಶ್ರಯ ಲಕ್ಷ್ಯಮಾಡೆ ಮುಕ್ತಿ ಕೊಡುವ _ ಭಕ್ತವತ್ಸಲ9
--------------
ಕೃಷ್ಣವಿಠಲದಾಸರು
ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. 1 ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ 2 ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಹೆಣ್ಣುಗಳ ಮಧ್ಯೆ ಇಳಿಸಿದರು3 ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ- ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ ತಂದು ಅರಿಶಿಣ ಎಣ್ಣೆ ಗಂಧವಿತ್ತು4 ತಡಮಾಡಲಾಗದು ಕಡಲಶಯನ ನಿಮ್ಮ ಮಡದಿಯಂಗಕ್ಕೆ ತೊಡೆವುದೆನಲು ಮಡದಿಯಂಗಕ್ಕೆ ತೊಡೆವುದು ಎನಲಾಗಿ ಕಡು ಹರುಷದಿ ಸತಿಯಳ ನೋಡಿದನು 5 ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ | ಕನ್ಯೆ ಶಿರೋಮಣಿ ಪಾವನ ದೇಹಿ || ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ | ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ 6 ತಂದೆ ನಂದನರಿಗೆ ಬಂಧು ಬಳಗ ಸುತ್ತ | ಹೊಂದಿದ ಜನರಿಗೆ ಹಲವರಿಗೆ || ಹೊಂದಿದ ಜನರಿಗೆ ಹಲವರಿಗೆ ಕದನ | ತಂದು ಹಾಕುವಳೆಂದು ಹಚ್ಚಿದನು 7 ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ | ಬಾಗಿಲ ಕಾಯಿಸುವಳೆ ಬಲ್ಲಿದರ || ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ | ಸಾಗರನ ಮಗಳು ಎಂದು ತೊಡೆದನು 8 ಇಂದಿರಾದೇವಿ ಬಾ ಮಂದಿರಾಂಬುಜ ರಾಮ | ಸುಂದರ ಶ್ರೀವಾರಿ ಮಂಗಳಗಾತ್ರೆ || ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು | ಅಂಗಜ ಜನಕನು ನಗುತಲಿದ್ದ 9 ರಮಣಿಯ ದೇಹಕ್ಕೆ ಕಮಲನಾಭನು ಎದ್ದು | ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ || ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ | ಕ್ರಮದಿಂದ ಲೇಪಿಸಿ ಊಟಣಿಸಾರಿ 10 ಸಾಕಾರಗುಣವಂತಿ ತ್ರಿಲೋಕದ ಜನನಿ | ನಾಕಜವಂದಿತಳೆ ನಾಗಗಮನೆ || ನಾಕಜವಂದಿತಳೆ ನಾಗಗಮನೆ ಏಳೂ | ಶ್ರೀಕಾಂತನ ಸೇವೆಯ ಮಾಡೆಂದರು 11 ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು | ನಿಂದು ಸಮ್ಮುಖದಲ್ಲಿ ರಂಗನ ನೋಡಿ | ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ | ಚಂದ್ರವದನೆ ಪತಿಗೆ ಹಚ್ಚಿದಳು 12 ಗೋವಳರ ಎಂಜಲು ಆವಾಗ ತಿಂದವನೆ | ಮಾವನ್ನ ಕೊಂದವನೆ ಮಾಯಾಕಾರ || ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ | ಸೇವೆಗೆ ಶಕ್ತಳೆನುತ ಹಚ್ಚಿದಳು 13 ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ | ಮುನ್ನೆ ತೊತ್ತಿನ ಮಗನ ಮನಿಯ ಉಂಡ || ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ | ಹೆಣ್ಣಾಗಿ ಇದ್ದವನೆಂದು ಹಚ್ಚಿದಳು 14 ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ | ಭಿನ್ನವಖಿಳ ಜೀವಕ್ಕೆನ್ನ ಒಡೆಯ || ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು | ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು 15 ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ | ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ || ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು | ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು 16 ದೇವಿ ದೇವೇಶಗೆ ಈ ಉರುಟಣೆಯಿಲ್ಲ | ಆವಾವ ಬಗೆ ಎಲ್ಲ ತೋರಿಸುತ್ತ || ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ | ಹೂವು ಬಾಸಿಂಗವ ರಚಿಸಿದರು17 ಅಸುರ ವಿರೋಧಿ ವಸುದೇವನಂದನ | ಪಶುಪತಿ ರಕ್ಷಕ ಪರಮ ಪುರುಷ || ಪಶುಪತಿ ರಕ್ಷಕ ಪರಮ ಪುರುಷ ಎಂದು | ಹಸನಾಗಿ ಲೇಪಿಸಿ ಇತ್ತ ಜನರ 18 ಶೃಂಗಾರವಂತೇರು ರಂಗ ಶ್ರೀಲಕುಮಿಗೆ | ಮಂಗಳಾರತಿ ಎತ್ತಿ ಹರಸಿದರು || ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ | ಅಂಗನೆಯಳ ಸಹಿತ ನಡೆಯೆಂದರಾಗ 17 ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ | ಮತ್ತೆ ಸುಗಂಧಿಯರು ಹೊಸ್ತಿಲೊಳಗೆ || ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು | ಪತ್ನಿಯ ಹೆಸರು ಪೇಳೆಂದರು ಆಗ 20 ಬೇಗ ಮಾರ್ಗವ ಸಾರಿ ತೂಗಲಾರನು ಇವಳ | ಸಾಗಿ ಪೋಗುವನೆಂದು ಪೇಳುತಿರಲು || ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ | ತೂಗವದೆಂತು ನಾಳೆ ನುಡಿಯೆಂದರು 21 ನಕ್ಕು ಸಂತೋಷದಲಿ ರುಕ್ಮಿಣಿ ಎಂದನು | ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ || ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು | ಚಕ್ರಪಾಣಿ ಎಂದು ಪೇಳಿದಳು ಲಕುಮಿ 22 ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ | ಮಂಡಲದ ಚರಿತೆ ತೋರಿದರು ಆಗ || ಮಂಡಲದ ಚರಿತೆ ತೋರಿ ವಧು-ವರಗಳಿಗೆ | ಕಂಡವರಿಗೆ ಮದುವೆಯೆನಿಸಿದರು 23 ದಂಪತಿಗಳು ಒಲಿದು ಇಂಪಾಗಿ ಉರುಟಣಿ | ಸೊಂಪಾಗಿ ಮಾಡಿದರು ಅನೇಕವಾಗಿ || ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ 24
--------------
ವಿಜಯದಾಸ
ರಾಮ ರಾಮ ಹರಿ ರಾಮ ರಾಮ ಸೀತಾ ರಾಮ ರಾಮ ನುತಪ್ರೇಮ ರಾಮ ಓಂ ಪ ರಾಮ ರಾಮ ಪುಣ್ಯನಾಮ ಪಾಪವಿ ರಾಮ ಕುಜನಕುಲ ಭೀಮ ರಾಮ ಓಂ ಅ.ಪ ಶಾಮಸುಂದರ ಸುಖಧಾಮ ದಾಮೋದರ ಕಾಮಿತದಾಯಕ ಸ್ವಾಮಿ ಶ್ರೀರಾಮ ಓಂ ಸೋಮಕಸಂಹರ ಕಾಮಜನಕ ತ್ರೈ ಭೂಮಿಪಾಲಯ ನಿಸ್ಸೀಮ ರಾಮ ಓಂ 1 ಕಡಲಮಥನ ಪಾಲ್ಗಡಲನಿಲಯ ಮಹ ಕಡಲಬಂಧಕ ದಯಗಡಲ ರಾಮ ಓಂ ಜಡಜನಾಭ ಭವತೊಡರು ನಿವಾರಣ ಕಡಲಸುತೆಯ ಪ್ರಾಣದೊಡೆಯ ರಾಮ ಓಂ2 ದೋಷ ವಿನಾಶನ ಶೇಷಶಯನ ದಯ ಭೂಷಣ ಕೇಶವ ರಾಮರಾಮ ಓಂ ಭಾಸುರಕೋಟಿಪ್ರಕಾಶ ಅಪ್ರಮೇಯ ಸಾಸಿರನಾಮಕ ರಾಮ ರಾಮ ಓಂ3 ಭಕ್ತಾಂತರ್ಗತ ಭಕ್ತವತ್ಸಲ ನಿತ್ಯ ನಿರ್ಮಲಾತ್ಮ ರಾಮ ರಾಮ ಓಂ ಸತ್ಯ ಸರ್ವೋತ್ತಮ ಮೃತ್ಯು ವಿಜಯ ನಿಜ ಸತ್ಯಸಂಕುಲಧಾಮ ರಾಮ ರಾಮ ಓಂ 4 ಜಾನಕಿರಮಣ ದೀನ ಪಾಲನ ದಾನವಾಂತಕ ಹರಿ ರಾಮ ಓಂ ಧ್ಯಾನದಾಯಕ ಜಗತ್ರಾಣ ಪ್ರವೀಣ ಮಮ ಪ್ರಾಣೇಶ ಶ್ರೀರಾಮ ನಮ:ನಮ:ಓಂ 5
--------------
ರಾಮದಾಸರು
ರುದ್ರದೇವರು ಸಾಂಬ ಸದಾಶಿವ | ಸಾಂಬ ಶಿವ ಪ ಶಂಭೋಶಂಕರ | ಶಶಾಂಕಶೇಖರ | ಸಾಂಬ ಶಿವ ಅ. ಪ. ಗಂಗಾಧರ ವರ | ಅಂಗಜ ಮದಹರ | ಸಾಂಬ ಶಿವ || ಸಂಗರಹಿತನೇ ಭು| ಜಗಭೂಷ ವರ | ಸಾಂಬ ಶಿವ 1 ವ್ಯೋಮಕೇಶಭವ | ಭಕ್ತಪರಾಯಣ | ಸಾಂಬ ಶಿವ || ವಾಮದೇವ ಪ್ರಮ | ಥಾಧಿಪ ಶಂಕರ | ಸಾಂಬ ಶಿವ2 ಖಂಡ ಪರಶು ಮಾ | ರ್ತಾಂಡಸಮಪ್ರಭ | ಸಾಂಬ ಶಿವ || ದಂಡಧರ ಹರ | ಮೃತ್ಯುಂಜಯ ಭೂ | ಸಾಂಬ ಶಿವ3 ಜಟಾ ಮಕುಟ ಸುರ | ತಟನೀ ಧರ ವರ | ಸಾಂಬ ಶಿವ || ಸ್ಫಟಿಕಸನ್ನಿಭ | ಖಲತ್ರಿಪುರಾಂತಕ | ಮೃಡ ಸಾಂಬ ಶಿವ 4 ನಕ್ತಂಚರ ಹರ | ಶತ್ರುಭಯಂಕರ | ಸಾಂಬ ಶಿವ || ಭಕ್ತವಶಂಕರ | ಭಜಕಸುಖಂಕರ | ಸಾಂಬ ಶಿವ 5
--------------
ವೆಂಕಟ್‍ರಾವ್
ಲಕ್ಷ್ಮೀ ದೇವಿ ಕಾದಿರುವಳು ರುಕ್ಮಿಣಿ ಕೃಷ್ಣ ಬರುವನೆಂದು ಪ. ಕರವ ಪಿಡಿವನೆಂದು ಅ.ಪ. ವಿಪ್ರನ್ನ ಕಳುಹಿರುವೆನು ಕ್ಷಿಪ್ರದೊಳು ಗುಡಿಯೊಳಿಹೆನು ಅಪ್ರಮೇಯ ನಿನ್ನಡಿಗಳನ್ನು ಸುಪ್ರಕಾಶ ನಂಬಿರುವೆನೆಂದು 1 ಶಿಶುಪಾಲನೊಲ್ಲೆನೆಂದು ವಸುಧೀಶ ನೀನೆ ಗತಿಯೆಂದು ಹಸುಳೇಯ ಸಲಹು ಎಂದು ಬೆಸಸಿಹೆನು ಪತ್ರವೆಂದು 2 ರಥವೇರಿ ಬರುತಲಿಹನೊ ಪಥದೊಳು ಕಾದಿರುವನೊ ರತಿಪತೀ ಪಿತನ ಪದವ ಅತಿಶಯದಲಿ ಕಾಣುವ ತವಕದಿ 3 ಶಂಕಾತುರಂಗಳಿಂದ ಶಂಕರೀಯಪೂಜೆಗೈದು ಕಿಂಕಿಣಿಯ ನಾದದಿಂದ ಶಂಕರಾದಿವಂದ್ಯ ಬರುವ ಪಥದಿ ಬಂದು 4 ಬಂದಾನೋ ಬಾರನೋ ಎನುತಾ ಇಂದಿರೆಯ ಅರಸನ್ಹೊರತು ಪೊಂದಲಾರೆನನ್ಯರನೆನುತ ಸುಂದರೀಮಣಿ ಕೃಷ್ಣನಾಗಮ ನೋಡುತ 5 ದ್ವಾರಕಿಯಾ ನಾಥ ಬಂದು ಪಾರುಗಾಣಿಸುವನೆಂದು ಚಾರುಕರದೊಳೆತ್ತಿ ಎನ್ನ ದ್ವಾರಕೆಗೊಯ್ವ ಶ್ರೀ ಶ್ರೀನಿವಾಸನೆಂದು 6
--------------
ಸರಸ್ವತಿ ಬಾಯಿ
ಲಕ್ಷ್ಮೀನಾಥ ವಿಠಲ | ರಕ್ಷಿಸೊ ಇವನಾ ಪ ಇಕ್ಷುಚಾಪನ ಪಿತನೆ | ಅಕ್ಷರನೆ ದೇವಾ ಅ.ಪ. ನಿತ್ಯ ತೃಪ್ತಾತ್ಮಾಅರ್ಥಿಯಲಿ ಲಕ್ಷ್ಮಿಯನು | ಭಕ್ತಿಯಿಂ ಸೇವಿಸುತಪ್ರಾರ್ಥಿಸುವ ತವಪ್ರೀತಿ | ಲಕ್ಷ್ಮಿವಲ್ಲಭನೇ 1 ಅಪ್ರಮೇಯನ ಪತ್ನಿ | ಲಕ್ಷ್ಮಿಯನೆ ತುತಿಸುತ್ತಸುಪ್ರಸಾದವ ಕೊಂಡು | ಗೃಹಕಾಗಿ ತೆರಳೀಅಪ್ರತಿಮ ಸಂತಸದಿ | ಹರಿಯ ಕೊಂಡಾಡುತ್ತಅಪ್ಪವೆಂಕಟನನ್ನು | ಹಾಡಿ ಹೊಗಳಿದನಾ 2 ವೇದಾಂತ ವೇದ್ಯ ಹರಿ | ವೇದ್ಯವಾಗಲಿ ಇವಗೆಮೋದ ತೀರ್ಥರ ಮತದ | ಸಾದು ತತ್ವಗಳುಹಾದಿಯಾಗಲಿ ಮುಕುತಿ | ಸಾಧನ ಸುಮಾರ್ಗಕ್ಕೆಬಾದರಾಯಣ ದೇವ | ಮಾಧವನೆ ಹರಿಯೆ 3 ಕರ್ಮಮರ್ಮವ ತಿಳಿಸಿ | ದುಷ್ಕರ್ಮ ಪರಿಹರಿಸಿನಿರ್ಮಮನ ಮಾಡಯ್ಯ | ಬ್ರಹ್ಮಾದಿ ವಂದ್ಯಪ್ರಮ್ಮೆಯಂಗಳ ಬೋದ | ಸಲ್ಲಲಿತವಾಗಿರಲಿಅಮ್ಮಹಾ ಪರದೈವ | ಹರಿಯೆಂದು ತಿಳಿಸೊ4 ಅದೈತ ತ್ರಯದರಿವು | ಬುದ್ದಿಗೇ ನಿಲುಕಿಸುತಸಿದ್ಧಾಂತ ಪಥವೆಂಬ | ಹೆದ್ದಾರಿ ನಡಸೋಕೃದ್ಧಬಳಮರ್ದನನೆ | ಮುದ್ದು ನರಹರಿದೇವಅದ್ವಿತೀಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ ಪ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನ ಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿನಿಲಯ ವೆಂಕಟರಾಯ ಜೀಯ 1 ಜಗದೇಕನಾಯಕ ಜಲಜದಳನೇತ್ರಖಗರಾಜವಾಹನ ಕಲ್ಯಾಣ ಚರಿತಸಗರತನಯಾರ್ಚಿತ ಸನಕಾದಿ ವಿನುತರಘುವಂಶ ಕುಲತಿಲಕ ರಮಣೀಯ ಗಾತ್ರ2 ನವನೀತ ಸತಿ ವಿನುತ ವಿಶ್ವಸಂಚಾರನಂದ ಗೋವಿಂದ ಮುಚುಕುಂದ ನುತಸಾರ 3 ಅಖಿಳ ಲೋಕೇಶಲಕ್ಷಣ ಪರಿಪೂರ್ಣ ಲಕ್ಷ್ಮೀ ಪ್ರಾಣೇಶ4 ನರಮೃಗಾಕಾರಿ ಹಿರಣ್ಯಕ ವೈರಿಕರಿರಾಜ ರಕ್ಷಕ ಕಾರುಣ್ಯಮೂರ್ತಿಹರಿ ಆದಿಕೇಶವ ಗುರು ಅಪ್ರಮೇಯಸಿರಿಧರ ಶೇಷಗಿರಿ ವರ ತಿಮ್ಮರಾಯ 5
--------------
ಕನಕದಾಸ
ವರವಾಮನಾಕಾರ ಪರಮಕರುಣಾಸಾರ ಶರಣಜನಮಂದಾರ ಭಯವಿದೂರ ಶತಯಾಗ ಸಹಜಾತ ದಿತಿಜಾಳಿ ಘನವಾತ ಶತಪತ್ರದಳನೇತ್ರ ಚಾರುಗಾತ್ರ ಕಶ್ಯಪಾತ್ಮಜಯೋಗ ವಶ್ಯ ಸದ್ಗುಣಭೂಷ ನಿತ್ಯ ಮಾಧುರ್ಯವಾಗ್ವಿಹಿತ ಭೇದರಹಿತ ಅನಂತ ಕಲ್ಯಾಣಗುಣಾಪ್ರಮೇಯ ಸನಕಾದಿ ಮುನಿನಿಕರವಂದ್ಯ ಚರಣ ಮನ್ಮೋಹನಾಂಗ ಪರಿಪಾಹಿರಂಗ
--------------
ನಂಜನಗೂಡು ತಿರುಮಲಾಂಬಾ
ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು | ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು | ಗಮನ ರಂಗಾ ಪ ಕುಂಡಲ ಮಿನುಗುವ ಹಸ್ತ ಕಂಕಣ ಬೆರಳುಂಗರ | ಕೌಸ್ತುಭ ಕಂಬು ಸೂದರು | ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ | ಕಿಣಿ ಕನಕಾಂಬರವ ಪೂಸಿದ ಗಂಧ | ಪುನುಗು ಜವ್ವಾದಿಯಿಂದೆಸೆವ ಸುರತರುವೆ 1 ಕಾಂಚಿದಾಮ ಥಳಿ | ಥಳಿಸುವ ಪದಕ ನ್ಯಾ | ತುಂಬಲು ಸೂಸುತಿರೆ ದಂತಾ | ಮಾತಾರಗಿಳಿಯಂತೆ ಶೋಭಿಸಿ | ಕಪೋಲ ಸುತ್ತಲು ಬೆಳಗುವ ಕಂಗಳ ನಾಸಕಾಂತಿ | ಸಿರಿ ತಿರುವೆಂಗಳಾ2 ಕಟಿ ಕರ ಎರಡೇಳು ಲೋಕ ಜಠರದೊಳಡಗಿರೆ | ಕರಿ ಪಲ್ಲಿನಂತೆ ಸುಂದರ ಜಂಘೆ ಗುಲ್ಫ ವಿ | ಪಾದ ನಖ ಪರಿ ಪರಿ ರೇಖೆಗಳ ಕಾಲಿಂದಿಗೆ | ನಿತ್ಯ ಮಂಗಳಾ 3 ನಿರಯ ತ್ತಮ ಜನ ಮನೋರಥ | ಗಮ ಸಿದ್ಧಾಂತನೆ ವಿ | ಕ್ರಮದಾನವ ಹರ | ಕೋಟಿ ಪ್ರಕಾಶಾ | ವೆಂಕಟೇಶಾ | ಅಪ್ರಾಕೃತ | ಪ್ರಮೆಯಭರಿತನಾದ | ಕುರುವಂಶ ವಿನಾಶಾ 4 ಭೂಗೋಳದೊಳಗಿದರಾಗಮ ತಿಳಿ | ದುರಗ ಗಿರಿ ಯಾತ್ರಿಗೆ | ಭೋಗದಾಶೆಯ ಬಿಟ್ಟು | ವೇಗದಿಂದಲಿ ನಿಜ | ಭವ ಸಾಗಿ ಬರಲು ಚನ್ನಾಗಿ ಜ್ಞಾನವ ನೀವುತ್ತ ಸಾಕುವಂಥ | ಶ್ರೀ ಗುರು ವಿಜಯವಿಠ್ಠಲ ಭಕ್ತರ ದಾತಾ5
--------------
ವಿಜಯದಾಸ