ಒಟ್ಟು 229 ಕಡೆಗಳಲ್ಲಿ , 57 ದಾಸರು , 204 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಪ್ರದಾಯದ ಹಾಡುಗಳು ಕೋಲು ಹಾಡು ಆಕಾಶಕಭಿಮಾನಿ ಶ್ರೀಕಂಠ ವರಪುತ್ರಏಕದಂತನೆ ವಿಘ್ನೇಶ ಕೋಲೆಏಕದಂತನೆ ವಿಘ್ನೇಶ ನಿನ್ನ ಪದಏಕ ಚಿತ್ತದಲಿ ಬಲಗೊಂಬೆ ಕೋಲೆ 1 ನೆನೆಯಕ್ಕಿ ನೆನೆಗಡಲೆ ಗೊನೆಯ ಬಾಳೆಯ ಹಣ್ಣುಘನವಾದ ಚಿಗುಳಿ ತಂಬಿಟ್ಟು ಕೋಲೆಘನವಾದ ಚಿಗುಳಿ ತಂಬಿಟ್ಟು ತಂದೀವೆಗಣಪತಿ ಮತಿಯ ಕರುಣಿಸು ಕೋಲೆ 2 ಜಾಹ್ನವಿ ಜಾಹ್ನವಿ ಜನಕ ನಾರಾಯಣನಗಧರನ ಮುನ್ನ ಬಲಗೊಂಬೆ ಕೋಲೆ 3 ಮಚ್ಛ ಕೂರುಮ ವರಹ ನರಸಿಂಹ ವಾಮನಸ್ವಚ್ಛ ಭೃಗುರಾಮ ರಘುರಾಮ ಕೋಲೆಸ್ವಚ್ಛ ಭೃಗುರಾಮ ರಘುರಾಮ ಕೃಷ್ಣ ಬೌದ್ಧಅಚ್ಛ ಕಲ್ಕಿಯ ಬಲಗೊಂಬೆ ಕೋಲೆ 4 ಈಶ ಬ್ರಹ್ಮರಿಗೆ ನಿಯಾಮಕನಾಗಿದ್ದುಪೋಷಿಸುತಿಪ್ಪ ಪರಮಾತ್ಮ ಕೋಲೆಪೋಷಿಸುತಿಪ್ಪ ಪರಮಾತ್ಮನಾದ ಶ್ರೀಕೇಶವನ ಮೊದಲೆ ಬಲಗೊಂಬೆ ಕೋಲೆ 5 ನೀರಿಗಾಶ್ರಯನಾಗಿ ನೀರೊಳು ಮಲಗಿಪ್ಪನೀರಜ ನೇತ್ರ ನಿಗಮಾತ್ಮ ಕೋಲೆನೀರಜ ನೇತ್ರ ನಿಗಮಾತ್ಮನಾದ ಶ್ರೀನಾರಾಯಣನ್ನ ಬಲಗೊಂಬೆ ಕೋಲೆ 6 ಯಾದವ ಕುಲಜನೆ ಸಾಧುಗಳರಸನೆಮಾದೇವಿಗಾಶ್ರಯನಾಗಿಪ್ಪ ಕೋಲೆಮಾದೇವಿಗಾಶ್ರಯನಾಗಿ ಪಾಲಿಸುವಮಾಧವನ್ನ ಮೊದಲೆ ಬಲಗೊಂಬೆ ಕೋಲೆ 7 ಚಂದದಿಂದ ವೇದ ವೃಂದ ಪ್ರತಿಪಾದ್ಯನೆಇಂದಿರಾದೇವಿ ರಮಣನೆ ಕೋಲೆಇಂದಿರಾದೇವಿ ರಮಣನಾದ ಗೋ-ವಿಂದನ್ನ ಮೊದಲೆ ಬಲಗೊಂಬೆ ಕೋಲೆ 8 ಸೃಷ್ಟಿಯೊಳಗೆಲ್ಲ ವ್ಯಾಪ್ತನಾಗಿರುತಿಪ್ಪವೈಷ್ಣವಕುಲಕೆ ತಿಲಕನೆ ಕೋಲೆವೈಷ್ಣವ ಕುಲಕೆ ತಿಲಕನಾದ ಶ್ರೀವಿಷ್ಣುವಿನ ಮೊದಲೆ ಬಲಗೊಂಬೆ ಕೋಲೆ 9 ಅಧಮನಾಗಿದ್ದಂಥ ಅಸುರನ ಸಂಹರಿಸಿಮುದವ ಬೀರಿದನೆ ಸುರರಿಗೆ ಕೋಲೆಮುದವ ಬೀರುತ ಸುರರ ಪಾಲಿಸುವಂಥಮಧುಸೂದನನ್ನ ಬಲಗೊಂಬೆ ಕೋಲೆ 10 ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕವ ಕೋಲೆಆಕ್ರಮಿಸಿ ತ್ರಿಲೋಕವನಳೆದ ತ್ರಿ-ವಿಕ್ರಮನ್ನ ಮೊದಲೆ ಬಲಗೊಂಬೆ ಕೋಲೆ 11 ಭೂಮಿಯೊಳಗೆ ಅತಿ ಸಂಭ್ರಮನಾಗಿದ್ದಕಾಮಿತಾರ್ಥಂಗಳ ಕರೆವನೆ ಕೋಲೆಕಾಮಿತಾರ್ಥಂಗಳ ಕರೆದು ಭಕ್ತರ ಪೊರೆವವಾಮನನ್ನ ಮೊದಲೆ ಬಲಗೊಂಬೆ ಕೋಲೆ 12 ವೇದಾಭಿಮಾನಿಗೆ ಸಾದರವಾಗಿಪ್ಪಬೌದ್ಧ ಮೂರುತಿಯೇ ಭವದೂರ ಕೋಲೆಬೌದ್ಧ ಮೂರುತಿಯೇ ಭವದೂರನಾದ ಶ್ರೀಶ್ರೀಧರನ್ನ ಮೊದಲೆ ಬಲಗೊಂಬೆ ಕೋಲೆ 13 ಸಾಕಾರ ಮೂರುತಿ ಸರ್ವೇಂದ್ರಿ ನಿಯಾಮಕನಾಕೇಶ ವಂದ್ಯ ನಳಿನಾಕ್ಷ ಕೋಲೆನಾಕೇಶ ವಂದ್ಯ ನಳಿನಾಕ್ಷನಾದ ಹೃಷಿ-ಕೇಶ ಹರಿಯ ಬಲಗೊಂಬೆ ಕೋಲೆ 14 ಪದುಮ ಸಂಭವ ಪಿತ ಪದುಮಿನಿ ವಲ್ಲಭಪದುಮ ಪೊಕ್ಕುಳಲಿ ಪಡೆದನೆ ಕೋಲೆಪದುಮ ಪೊಕ್ಕುಳಲ್ಲಿ ಪಡೆದು ಪಾಲಿಸುವಂಥಪದುಮನಾಭನ ಮುನ್ನ ಬಲಗೊಂಬೆ ಕೋಲೆ 15 ಕಾಮಿನಿ ಯಶೋದೆ ಒರಳಿಗೆ ಕಟ್ಟಲುಶ್ರೀ ಮನೋಹರ ಶೆಳೆದೊಯ್ದ ಕೋಲೆಶ್ರೀ ಮನೋಹರ ಶೆಳೆದು ಪಾಪವ ಕಳೆದದಾಮೋದರನ್ನ ಬಲಗೊಂಬೆ ಕೋಲೆ 16 ಕಿಂಕರರ ಚಿತ್ತ ದುರ್ವಿಷಯಕ್ಕೆರಗಲುಪಂಕಜನಾಭ ಶಳೆದನೆ ಕೋಲೆಪಂಕಜನಾಭ ಶಳೆದು ತನ್ನಲ್ಲಿಡುವಸಂಕರುಷಣನ್ನ ಬಲಗೊಂಬೆ ಕೋಲೆ 17 ಏಸು ಬ್ರಹ್ಮಾಂಡದೊಳು ವಾಸವಾಗಿರುತಿಪ್ಪದಾಸವರ್ಗವನೆ ಪೊರೆವನೆ ಕೋಲೆದಾಸ ವರ್ಗವನೆ ಪೊರೆವನೆ ನಮ್ಮ ಶ್ರೀವಾಸುದೇವನ್ನ ಬಲಗೊಂಬೆ ಕೋಲೆ 18 ಅದ್ವೈತ ಮಹಿಮನೆಸದ್ವೈಷ್ಣವರ ಪೊರೆವನೆ ಕೋಲೆಸದ್ವೈಷ್ಣವರ ಪೊರೆವನೆ ಅಜನಯ್ಯಪ್ರದ್ಯುಮ್ನ ಹರಿಯ ಬಲಗೊಂಬೆ ಕೋಲೆ 19 ಅನಿಮಿಷ ದೈತ್ಯರ ಮನಕೆ ಸಿಲುಕದಿಪ್ಪಸನಕಾದಿ ವಂದ್ಯ ಸಕಲೇಶ ಕೋಲೆಸನಕಾದಿ ವಂದ್ಯ ಸಕಲೇಶನಾಗಿಪ್ಪಅನಿರುದ್ಧ ಹರಿಯ ಬಲಗೊಂಬೆ ಕೋಲೆ 20 ಕ್ಷರಾಕ್ಷರದೊಳು ಪರಮೋತ್ತಮನಾದಕರಿರಾಜ ವರದ ಕವಿಗೇಯ ಕೋಲೆಕರಿರಾಜ ವರದ ಕವಿಗೇಯನಾದ ಶ್ರೀಪುರುಷೋತ್ತಮನ್ನ ಬಲಗೊಂಬೆ ಕೋಲೆ 21 ಅಕ್ಷಯ ಮೂರುತಿ ಮೋಕ್ಷದಾಯಕ ಸ್ವಾಮಿಕುಕ್ಷಿಯೋಳ್ ಜಗವ ರಕ್ಷಿಪ ಕೋಲೆಕುಕ್ಷಿಯೋಳ್ ಜಗವ ಪಾಲಿಪ ನಮ್ಮ ಅ-ದೋಕ್ಷಜ ಹರಿಯ ಬಲಗೊಂಬೆ ಕೋಲೆ 22 ಕ್ರೂರ ಖಳನುದರ ಸೀಳಿ ಪ್ರಹ್ಲಾದನಕಾರುಣ್ಯದಿಂದ ಕಾಯ್ದನ ಕೋಲೆಕಾರುಣ್ಯದಿಂದ ಕಾಯ್ದನ ನಮ್ಮ ಶ್ರೀನಾರಸಿಂಹನ್ನ ಬಲಗೊಂಬೆ ಕೋಲೆ 23 ಸಚ್ಚಿದಾನಂದನೆ ಸಕಲಗುಣ ಪರಿಪೂರ್ಣಮುಚುಕುಂದ ವರದ ಮುನಿನುತ ಕೋಲೆಮುಚುಕುಂದ ವರದ ಮುನಿನುತನಾದ ಶ್ರೀಅಚ್ಯುತನ ಮೊದಲೆ ಬಲಗೊಂಬೆ ಕೋಲೆ 24 ದುರ್ಧರ್ಷರಾಗಿದ್ದ ಖಳರ ಸಮುದಾಯವಮರ್ದನ ಮಾಡಿದ ಮಹಮಹಿಮ ಕೋಲೆಮರ್ದನ ಮಾಡಿದ ಮಹಮಹಿಮನಾದ ಜ-ನಾರ್ದನ್ನ ಮೊದಲೆ ಬಲಗೊಂಬೆ ಕೋಲೆ 25 ಇಂದ್ರಾನುಜನಾಗಿ ಸ್ವರ್ಗದೊಳಿರುತಿದ್ದುಸಾಂದ್ರ ಸುಖವೀವೆ ಸುರರಿಗೆ ಕೋಲೆಸಾಂದ್ರ ಸುಖವಿತ್ತು ಸುರರ ಪಾಲಿಸುವ ಉ-ಪೇಂದ್ರನ ಮೊದಲೆ ಬಲಗೊಂಬೆ ಕೋಲೆ 26 ಪರಮ ಭಕ್ತರ ಪಾಪ ಪರಿಹಾರವನೆ ಮಾಡಿಪರಮ ಪದವಿಯ ಪಾಲಿಪ ಕೋಲೆಪರಮ ಪದವಿಯ ಪಾಲಿಪ ನಮ್ಮ ಶ್ರೀ-ಹರಿಯ ಮೊದಲೆ ಬಲಗೊಂಬೆ ಕೋಲೆ 27 ಶಿಷ್ಟ ಪಾಲಕ ಉತ್ಕøಷ್ಟ ಜ್ಞಾನಾನಂದಕೃಷ್ಣೆಯ ಕಷ್ಟ ಬಿಡಿಸಿದ ಕೋಲೆಕೃಷ್ಣೆಯ ಕಷ್ಟ ಬಿಡಿಸಿದ ನಮ್ಮ ಶ್ರೀ-ಕೃಷ್ಣನ್ನ ಮೊದಲೆ ಬಲಗೊಂಬೆ ಕೋಲೆ 28 ಅನಿರುದ್ಧಾದಿ ರೂಪ ವಿಶ್ವಾದಿ ಅಜಿತಾದಿಸನತ್ಕುಮಾರಾದಿ ಅಜಾದಿ ಕೋಲೆಸನತ್ಕುಮಾರಾದಿ ಅಜಾದಿ ರೂಪನಾದಘನ ಮಹಿಮನ್ನ ಬಲಗೊಂಬೆ ಕೋಲೆ 29 ಹಯಗ್ರೀವ ದತ್ತ ಋಷಭ ಸಂಕರ್ಷಣಭಯರಹಿತ ಬಾದರಾಯಣ ಕೋಲೆಭಯರಹಿತ ಬಾದರಾಯಣ ಮಹಿದಾಸವಯಿಕುಂಠ ಹರಿಯ ಬಲಗೊಂಬೆ ಕೋಲೆ 30 ಆತ್ಮಾದಿ ವಾಸುದೇವಾದಿ ಮೂರುತಿಶ್ರೀ ತರುಣೇಶ ವಿಶ್ವೇಶ ಕೋಲೆಶ್ರೀ ತರುಣೇಶ ವಿಶ್ವೇಶ ರೂಪನಾದಜ್ಯೋತಿರ್ಮಯನ ಬಲಗೊಂಬೆ ಕೋಲೆ 31 ಮುನಿ ವೇದವ್ಯಾಸ ಸನತ್ಕುಮಾರ ಮೂರ್ತಿಮಿನಗುವ ದತ್ತಾತ್ರೇಯನೆ ಕೋಲೆಮಿನಗುವ ದತ್ತಾತ್ರೇಯ ಹಯಗ್ರೀವದನುಜಾಂತಕನ್ನ ಬಲಗೊಂಬೆ ಕೋಲೆ 32 ಕಂಗಳಾಪಾಂಗದಿಂ ಕಮಲಾಸನಾದಿಗಳಸಂಗಾತ ಸೃಷ್ಟಿಪ ಮಹಲಕ್ಷ್ಮೀ ಕೋಲೆಸಂಗಾತ ಸೃಷ್ಟಿಪ ಮಹಲಕ್ಷ್ಮೀ ನಿನ್ನ ಪಾ-ದಂಗಳಿಗೆರಗಿ ಬಲಗೊಂಬೆ ಕೋಲೆ 33 ಮಾಯಾ ಜಯಾಕೃತಿ ಶಾಂತಿ ಇಂದಿರಾದೇವಿಕಾಮನ ಜನನಿ ಜಯಂತಿ ಕೋಲೆಕಾಮನ ಜನನಿ ಜಯಂತಿ ಜಾನಕಿ ಸತ್ಯ-ಭಾಮಾ ರುಕ್ಮಿಣಿಯ ಬಲಗೊಂಬೆ ಕೋಲೆ 34 ಪರಮೇಷ್ಠಿ ಪರಮೇಷ್ಠಿ ನಿನ್ನ ಪದಪದುಮವ ಮುನ್ನ ಬಲಗೊಂಬೆ ಕೋಲೆ 35 ಹನುಮ ಭೀಮ ಮಧ್ವ ಮುನಿರಾಯ ಮಾರುತಿದನುಜಾರಿ ಭಕ್ತ ವಿರಕ್ತ ಕೋಲೆದನುಜಾರಿ ಭಕ್ತ ವಿರಕ್ತ ನಿನ್ನ ಪಾದವನಜವ ಮುನ್ನ ಬಲಗೊಂಬೆ ಕೋಲೆ 36 ವಾಣಿ ಅಜನ ಮುದ್ದು ರಾಣಿ ಪಲ್ಲವ ಪಾಣಿಜಾಣೆ ಕೊಡೆಮಗೆ ಮತಿಗಳ ಕೋಲೆಜಾಣೆ ಕೊಡೆಮಗೆ ಮತಿಗಳ ನಿನ್ನ ಪಾದರೇಣುವಿನ ಮುನ್ನ ಬಲಗೊಂಬೆ ಕೋಲೆ 37 ಭಾರತಿದೇವಿ ನಿನ್ನ ವಾರಿಜ ಚರಣವಬಾರಿ ಬಾರಿಗೆ ಭಜಿಸುವೆ ಕೋಲೆಬಾರಿ ಬಾರಿಗೆ ಭಜಿಸುವೆ ಎಮಗೆ ಶ್ರೀನಾರಾಯಣನಲ್ಲಿ ರತಿ ಕೊಡು ಕೋಲೆ 38 ಇಂದ್ರನ ಗೆದ್ದು ಸುಧೆ ತಂದು ಮಾತೆಯಬಂಧನ ಕಡಿದ ಬಲುಧೀರ ಕೋಲೆಬಂಧನ ಕಡಿದ ಬಲುಧೀರನಾದ ಖ-ಗೇಂದ್ರನ್ನ ಮುನ್ನ ಬಲಗೊಂಬೆ ಕೋಲೆ 39 ಸಾಸಿರ ಮುಖದಿಂದ ಶ್ರೀಶನ್ನ ತುತಿಸಿ ಶ್ರೀವಾಸುದೇವಂಗೆ ಹಾಸಿಕೆ ಕೋಲೆವಾಸುದೇವಂಗೆ ಹಾಸಿಕೆಯಾದ ಮಹ-ಶೇಷನ್ನ ಮುನ್ನ ಬಲಗೊಂಬೆ ಕೋಲೆ 40 ಅಪರಿಮಿತ ಕಾರ್ಯ ತ್ರಿಪುರ ದಹನನೆಚಪಲ ಮೂರುತಿ ಚಂದ್ರಚೂಡ ಕೋಲೆಚಪಲ ಮೂರುತಿ ಚಂದ್ರಚೂಡ ಭಜಕರಅಪಮೃತ್ಯು ಹರನ ಬಲಗೊಂಬೆ ಕೋಲೆ 41 ಖಗ ಶೇಷಶಂಭು ರಾಣಿಯರ ಬಲಗೊಂಬೆ ಕೋಲೆ 42 ಶಕ್ರ ಕಾಮಾದಿ ದೇವರ್ಕಳ ಚರಣಕ್ಕೆಅಕ್ಕರದಿಂದ ಅಭಿನಮಿಪೆ ಕೋಲೆಅಕ್ಕರದಿಂದ ಅಭಿನಮಿಸಿ ಪೇಳ್ವೆ ದೇ-ವಕ್ಕಿ ನಂದನನ ಚರಿತೆಯ ಕೋಲೆ 43 ಪದ್ಮನಾಭ ನರಹರಿತೀರ್ಥಶ್ರೀ ಮಾಧವಾರ್ಯ ಅಕ್ಷೋಭ್ಯ ಕೋಲೆಶ್ರೀ ಮಾಧವಾರ್ಯ ಅಕ್ಷೋಭ್ಯ ಜಯತೀರ್ಥಸ್ವಾಮಿಗಳ ಮೊದಲೆ ಬಲಗೊಂಬೆ ಕೋಲೆ 44 ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆನ್ಯಾಯ ಗ್ರಂಥಗಳ ರಚಿಸಿದ ಕೋಲೆನ್ಯಾಯ ಗ್ರಂಥಗಳ ರಚಿಸಿದ ನಮ್ಮ ವ್ಯಾಸ-ರಾಯರ ಮುನ್ನ ಬಲಗೊಂಬೆ ಕೋಲೆ 45 ಜನನಿ ಗರ್ಭದಿಂದವನಿ ಸ್ಪರ್ಶಿಸದೆಜನಿಸಿ ಬ್ರಹ್ಮಣ್ಯ ಮುನಿಗಳ ಕೋಲೆಜನಿಸಿ ಬ್ರಹ್ಮಣ್ಯ ಮುನಿಗಳ ಮೃದು ಹಸ್ತವನಜ ಸಂಭವನ ಬಲಗೊಂಬೆ ಕೋಲೆ 46 ಶ್ರೀಪಾದರಾಯರಲಿ ಸಕಲ ವಿದ್ಯವನೋದಿಶ್ರೀಪತಿ ಪ್ರೀತಿ ಪಡಿಸಿದ ಕೋಲೆಶ್ರೀಪತಿ ಪ್ರೀತಿ ಪಡಿಸಿದ ವ್ಯಾಸಮುನಿಭೂಪನ ಮೊದಲೆ ಬಲಗೊಂಬೆ ಕೋಲೆ 47 ದೇಶಾಧಿಪತಿಗೆ ಬಂದ ಕುಯೋಗವನೆ ನೂಕಿತಾ ಸಿಂಹಾಸನವೇರಿ ಮೆರೆದನೆ ಕೋಲೆತಾ ಸಿಂಹಾಸನವೇರಿ ಮೆರೆದನೆ ವ್ಯಾಸ ಮು-ನೀಶನ್ನ ಮೊದಲೆ ಬಲಗೊಂಬೆ ಕೋಲೆ 48 ದಂಡ ಕಮಂಡಲು ಧರ ಪಂಡಿತಾರಾಧಾರಕುಂಡಲಿಶಯನನ ಭಜಕರ ಕೋಲೆಕುಂಡಲಿ ಶಯನನ ಭಜಕ ರಾಘವೇಂದ್ರರಕೊಂಡಾಡಿ ಪದನ ಗುಣಿಸುವೆ ಕೋಲೆ 49 ತಂತ್ರ ಸಾರಗಳಿಗೆ ಅರ್ಥವನ್ನು ಸ್ವ-ತಂತ್ರದಿಂದಲಿ ರಚಿಸಿದ ಕೋಲೆ ಸ್ವ-ತಂತ್ರದಿಂದಲಿ ರಚಿಸಿದ ರಾಘವೇಂದ್ರರಪಂಥವಿದ್ದಲ್ಲಿ ಬಲಗೊಂಬೆ ಕೋಲೆ 50 ವೇದಶಾಸ್ತ್ರಾಮೃತ ಸಾರಬಲ್ಲ ರಾಮವೇದವ್ಯಾಸರ ಭಜಕರ ಕೋಲೆವೇದವ್ಯಾಸ ಭಜಕ ರಾಘವೇಂದ್ರರಪಾದವಿದ್ದಲ್ಲಿ ಬಲಗೊಂಬೆ ಕೋಲೆ 51 ತುಂಗಭದ್ರಾ ತೀರ ಮಂತ್ರಾಲಯದಲ್ಲಿಮಂಗಳ ಮಹಿಮರೆನಿಪರೆ ಕೋಲೆಮಂಗಳ ಮಹಿಮರೆನಿಪ ರಾಘವೇಂದ್ರ-ರಂಘ್ರಿ ಕಮಲವ ಬಲಗೊಂಬೆ ಕೋಲೆ 52 ಗುರು ರಾಘವೇಂದ್ರರ ಚರಣ ಪಂಕಜವನ್ನುಸ್ಥಿರ ಬುದ್ಧಿಯಿಂದ ಸ್ಮರಿಸುವೆ ಕೋಲೆಸ್ಥಿರ ಬುದ್ಧಿಯಿಂದ ಸ್ಮರಿಸಿ ನಾ ಪೇಳ್ವೆನುಸರಸಿಜಾಕ್ಷನ್ನ ಚರಿತೆಯ ಕೋಲೆ 53 ರಾಜರಾಜೇಶ್ವರ ಸತ್ಯಾಭಿನವ ತೀರ್ಥರಾಜಕರಾಬ್ಜ ಸಂಭೂತ ಕೋಲೆರಾಜಕರಾಬ್ಜ ಸಂಭೂತ ಸತ್ಯಾಧಿ-ರಾಜರ ಮೊದಲೆ ಬಲಗೊಂಬೆ ಕೋಲೆ 54 ಕ್ಷೀರನದಿಯ ತೀರ ವೇಲೂರ ಪುರವಾಸಸಾರ ಸಜ್ಜನರ ಪೊರೆವನೆ ಕೋಲೆಸಾರ ಸಜ್ಜನರ ಪೊರೆವ ಸತ್ಯಾಧಿರಾಜಧೀರ ಯತಿಗಳ ಬಲಗೊಂಬೆ ಕೋಲೆ 55 ಸತ್ಯಬೋಧರೆಂಬ ಸದ್ಗುರು ಚರಣವಚಿತ್ತದೊಳಿಟ್ಟು ಚರಿಸುವೆ ಕೋಲೆಚಿತ್ತದೊಳಿಟ್ಟು ಸ್ಮರಿಸಿ ನಾ ಪೇಳ್ವೆನುಚಿತ್ತದೊಲ್ಲಭನ ಚರಿತೆಯ ಕೋಲೆ 56 ಪುರಂದರ ರಾಯರಪರಮ ಕೃಪಾಪಾತ್ರ ವಿಜಯರಾಯ ಕೋಲೆಪರಮ ಕೃಪಾಪಾತ್ರ ವಿಜಯರಾಯರ ಪಾದಪರಮ ಭಕ್ತಿಯಲಿ ಸ್ಮರಿಸುವೆ ಕೋಲೆ 57 ದೇವ ನಾರಾಯಣ ಭೂದೇವಿ ಮೊರೆ ಕೇಳಿದೇವಕಿಯಲ್ಲಿ ಜನಿಸಿದ ಕೋಲೆದೇವಕಿಯಲ್ಲಿ ಜನಿಸಿ ಧಾರುಣಿದೇವಿ ಭಾರವನೆಲ್ಲನಿಳುಹಿದ ಕೋಲೆ 58 ಶಕಟ ಪೂತನಿ ವತ್ಸ ಬಕಧೇನುಕ ಕಂಸಮುಖಾದ್ಯರನ್ನು ಮಡುಹಿದ ಕೋಲೆಮುಖಾದ್ಯರನ್ನು ಮಡುಹಿ ವಸುದೇವ ದೇ-ವಕಿಯರ ಬಂಧನ ಬಿಡಿಸಿದ ಕೋಲೆ 59 ಹೆತ್ತ ತಾಯಿಯ ಮೊಲೆಯರ್ತಿಲಿ ನಲಿದುಂಡುಮತ್ತೆ ಬಾಲಲೀಲೆ ತೋರಿದ ಕೋಲೆಮತ್ತೆ ಬಾಲಲೀಲೆ ತೋರಿ ತೋಷವ ಪಡಿಸಿಮುತ್ಯಾಗೆ ಪಟ್ಟವ ಕಟ್ಟಿದ ಕೋಲೆ 60 ಜರೆಯ ಸುತನು ತಾನು ಜಗಳಕ್ಕೆ ಬಹನೆಂದುಕರೆಸಿದ ವಿಶ್ವಕರ್ಮನ್ನ ಕೋಲೆಕರೆಸಿದ ವಿಶ್ವಕರ್ಮನ್ನ ದ್ವಾರಕಪುರವ ನಿರ್ಮಿಸೆಂದಾಕ್ಷಣ ಕೋಲೆ 61 ದ್ವಾರಕಪುರದ ಶೃಂಗಾರ ವರ್ಣಿಸಲುಮೂರು ಕಣ್ಣವಗೆ ವಶವಲ್ಲ ಕೋಲೆಮೂರು ಕಣ್ಣವಗೆ ವಶವಲ್ಲ ನಾಲ್ಕಾರುಮೋರೆಯವರಿಗೆ ವಶವಲ್ಲ ಕೋಲೆ 62 ತಳಿರು ತೋರಣಗಳುಮೇರುವಿಗೆ ಪೊನ್ನ ಕಲಶವು ಕೋಲೆಮೇರುವಿಗೆ ಕಲಶ ಕನ್ನಡಿ ಮನೋ-ಹಾರವಾಗಿರುವುದು ಸಟೆಯಲ್ಲಿ ಕೋಲೆ 63 ಹದಿನಾರು ಸಾವಿರ ಚದುರೇರ ಮಂದಿರವುಮದನನಯ್ಯನ ಮನೆ ಮಧ್ಯ ಕೋಲೆಮದನನಯ್ಯನ ಮನೆ ಮಧ್ಯ ಪ್ರದೇಶಅದುಭುತವಾಗಿ ಬೆಳಗೋದು ಕೋಲೆ 64 ನಾರಿ ರುಕ್ಮಿಣಿ ಸತ್ಯಭಾಮೆದೇವಿ ಮತ್ತೆವಾರಿಜಮುಖಿಯರ್ ನಾಲ್ಕೆರಡು ಕೋಲೆವಾರಿಜಮುಖಿಯರ್ ನಾಲ್ಕೆರಡು ಸಹಿತಾಗಿವಾರಿಜನಾಭ ಕುಳಿತಿದ್ದ ಕೋಲೆ 65 ಶ್ರೀ ಭೂರಮಣನಾದ ಶ್ರೀಕೃಷ್ಣನರಮನೆಗೆಸುಭದ್ರೆ ಮುಯ್ಯ ತರುತಾಳೆ ಕೋಲೆಸುಭದ್ರೆ ಮುಯ್ಯ ತರುತಾಳೆ ಗಜಪುರಭೂ ಭುಜರೆಲ್ಲ ಬರುತಾರೆ ಕೋಲೆ 66 ಧರ್ಮ ಭೀಮಾರ್ಜುನ ನಕುಲ ಸಹದೇವರುಪೆರ್ಮೆಯಿಂದಲಿ ಪೊರವಂಟು ಕೋಲೆಪೆರ್ಮೆಯಿಂದಲಿ ಪೊರವಂಟು ದಿಕ್ಪಾಲರುಕೂರ್ಮೆಯಿಂದಲಿ ಬರತಾರೆ ಕೋಲೆ 67 ವಜ್ರ ಧರಿಸಿ ಉ-ಪೇಂದ್ರನರಮನೆಗೆ ಬರುತಾರೆ ಕೋಲೆ 68 ಸತಿ ಸ್ವಾಹಾದೇವಿಯ ಕೂಡಿಅತಿಶಯದಿಂ ಮೇಷವೇರುತ್ತ ಕೋಲೆಅತಿಶಯದಿಂ ಮೇಷವೇರಿ ಶಕ್ತಿಯ ಪಿಡಿದುಕ್ರ್ರತುಪತಿ ಮನೆಗೆ ಬರುತಾನೆ ಕೋಲೆ 69 ಯಮನು ಮಹಿಷವೇರಿ ಗಮನದಿಂದಲಿ ಸತಿಶಾಮಲಾದೇವಿ ಸಹಿತಲಿ ಕೋಲೆಶಾಮಲೆ ಸಹಿತ ದಂಡಾಯುಧ ಧರಿಸಿರಾಮನ ಮನೆಗೆ ಬರುತಾನೆ ಕೋಲೆ 70 ನಿರರುತಿ ತಾನೊಂದು ನರನ ಪೆಗಲನೇರಿಪರಮಾಪ್ತ ಸ್ತ್ರೀಯನೊಡಗೂಡಿ ಕೋಲೆಪರಮಾಪ್ತ ಸ್ತ್ರೀಯನೊಡನೆ ಕುಂತವ ಧರಿಸಿಧರಾಧರನ ಮನೆಗೆ ಬರುತಾನೆ ಕೋಲೆ 71 ವರುಣ ತಾನೊಂದು ಮಕರಿಯನೇರಿಕೊಂಡುಸಿರಿ ಭಾಗೀರಥಿಯನೊಡಗೊಂಡು ಕೋಲೆಸಿರಿ ಭಾಗೀರಥಿಯನೊಡನೆ ಪಾಶಧರಿಸಿಸಿರಿವತ್ಸನರಮನೆಗೆ ಬರುತಾನೆ ಕೋಲೆ 72 ಮರುತದೇವನೊಂದು ಎರಳೆಯನೇರಿತರುಣಿ ಪ್ರಾವಹಿಯೊಡಗೂಡಿ ಕೋಲೆ ತರುಣಿ ಪ್ರಾವಹಿಗೂಡಿ ಧ್ವಜ ಧರಿಸಿ ಶ್ರೀ-ಧರನ ಮನೆಗೇ ಬರುತಾನೆ ಕೋಲೆ 73 ವಿತ್ತಪತಿಯೊಂದು ಉತ್ತಮ ಹಯವೇರಿಚಿತ್ತದೊಲ್ಲಭೆಯ ಒಡಗೂಡಿ ಕೋಲೆಚಿತ್ತದೊಲ್ಲಭೆಯ ಒಡನೆ ಖಡ್ಗ ಧರಿಸಿಕರ್ತನ್ನ ಮನೆಗೆ ಬರುತಾನೆ ಕೋಲೆ 74 ಈಶಾನ ತಾನೊಂದು ವೃಷಭವೇರಿಕೊಂಡುಶ್ರೀ ಸತಿದೇವಿಯೊಡಗೂಡಿ ಕೋಲೆಶ್ರೀ ಸತಿದೇವಿಯೊಡಗೂಡಿ ಶೂಲ ಧರಿಸಿ ನಾ-ರಸಿಂಹನ ಮನೆಗೆ ಬರುತಾನೆ ಕೋಲೆ 75 ಹರಿಯೇ ಸರ್ವೋತ್ತಮ ಹರಿಯೇ ಪರದೇವತೆಹರಿದಾಸರೆಂಬೋ ಬಿರುದಿನ ಕೋಲೆಹರಿದಾಸರೆಂಬೋ ಬಿರುದಿನ ಹೆಗ್ಗಾಳೆಹಿರಿ ಬಾಗಿಲೊಳು ಹಿಡಿಸಿಹರು ಕೋಲೆ 76 ಒಬ್ಬನೆ ವಿಷ್ಣುವಿನ್ನೊಬ್ಬ ದೈವಗಳಿಲ್ಲೆಂ-ದಬ್ಬರದಿಂದ ನಾಗಸ್ವರ ಕೋಲೆಅಬ್ಬರದಿಂದ ನಾಗಸ್ವರಂಗಳಹೆಬ್ಬಾಗಿಲೊಳಗೆ ನುಡಿಸೋರು ಕೋಲೆ 77 ಖಳನ ಬೆನ್ನ ಚರ್ಮ ಸುಲಿದು ಭೇರಿಗೆ ಹಾಕಿಅಲವ ಬೋಧರೆ ಜಗದ್ಗುರು ಕೋಲೆಅಲವ ಬೋಧರೆ ಜಗದ್ಗುರುಗಳೆಂತೆಂದುಛಲದಿಂದ ಭೇರಿಯ ಹೊಡಿಸೋರು ಕೋಲೆ 78 ವಿಷ್ಣು ಸರ್ವೋತ್ತಮ ವಿಷ್ಣು ಪರದೇವತೆವಿಷ್ಣುದಾಸರೆಂಬ ಬಿರುದಿನ ಕೋಲೆವಿಷ್ಣುದಾಸರೆಂಬ ಬಿರುದಿನ ಠೆಕ್ಕೆಯಘಟ್ಯಾಗಿ ಎತ್ತಿ ನಿಲಿಸೋರು ಕೋಲೆ 79 ಮತದೊಳು ಮಧ್ವಮತ ವ್ರತದೊಳು ಹರಿದಿನಕಥೆಯೊಳು ಭಾಗವತವೆನ್ನಿ ಕೋಲೆಕಥೆಯೊಳ್ ಭಾಗವತವೆನ್ನಿ ಇದರಂತೆಪ್ರತಿಮೆಯೊಳ್ ವಿಷ್ಣು ಪ್ರತಿಮೆನ್ನಿ ಕೋಲೆ 80 ಈಚಲ ಬನದೊಳು ಗೋ ಕ್ಷೀರ ಕುಡಿದಂತೆನೀಚರ ಸಂಗ ಸುಜನರು ಕೋಲೆನೀಚರ ಸಂಗ ಸುಜನರು ಮಾಡಲುಈಚೆ ನೋಡುವರಿಗೆ ಅನುಮಾನ ಕೋಲೆ 81 ಸೂರಿ ಜನರ ಸಂಗ ಸುಧೆಯ ಪ್ರಾಶನೆಯಂತೆಹೋರಣೆ ಗುಣವುಳ್ಳ ಅಧಮರ ಕೋಲೆಹೋರಣೆ ಗುಣವುಳ್ಳ ಅಧಮರ ಸಹವಾಸನೀರುಳ್ಳಿ ತಿಂದ ತೆರನಂತೆ ಕೋಲೆ 82 ಒಳ್ಳೆ ಮನುಜರ ಸಂಗ ಮಲ್ಲಿಗೆ ಮುಡಿದಂತೆಖುಲ್ಲ ಕುಮತಿಯ ಸಹವಾಸ ಕೋಲೆಖುಲ್ಲ ಕುಮತಿಯ ಸಹವಾಸ ಮಾಡಲುಮುಲ್ಲಂಗಿ ತಿಂದು ತೇಗಿದಂತೆ ಕೋಲೆ 83 ಭಾವಜ್ಞರ ಸಂಗ ಶ್ಯಾವಿಗಿ ಉಂಡಂತೆಭಾವವನರಿಯದ ಬಲುಹೀನ ಕೋಲೆಭಾವವನರಿಯದ ಬಲುಹೀನರ ಸಂಗಬೇವಿನಹಾಲ ಕುಡಿದಂತೆ ಕೋಲೆ 84 ಬಾಳುವರ ಸಂಗ ಹಾಲೋಗರುಂಡಂತೆಬಾಳುವೆಗೆಟ್ಟ ಅಧಮರ ಕೋಲೆಬಾಳುವೆಗೆಟ್ಟ ಅಧಮರ ಸಹವಾಸಹೇಳಬಾರದ್ದು ತಿಂದಂತೆ ಕೋಲೆ 85 ಹರಿಗುರು ದ್ರೋಹಿ ಮರಳಿ ಮಾತೃ ದ್ರೋಹಿವರ ವೈಷ್ಣವ ದ್ರೋಹಿ ಪಿತೃ ದ್ರೋಹಿ ಕೋಲೆವರ ವೈಷ್ಣವ ದ್ರೋಹಿ ಸ್ವಾಮಿ ದ್ರೋಹಿನೆರಳು ಬಿದ್ದವರ ನೆರೆಹೊಲ್ಲ ಕೋಲೆ 86 ಕತ್ತೆ ಕುದುರೆ ಒಂದೆ ಅತ್ತೆ ಸೊಸೆಯು ಒಂದೆಹೆತ್ತಮ್ಮ ಒಂದೆ ಹೆಂಡ್ತೊಂದೆ ಕೋಲೆಹೆತ್ತಮ್ಮ ಒಂದೆ ಹೆಂಡ್ತೊಂದಾದ ಮೇಲೆವ್ಯರ್ಥದ ಮದುವೆ ನಿನಗ್ಯಾಕೆ ಕೋಲೆ 87 ಅಕ್ಕ ತಂಗಿಯು ಒಂದೆ ಮಕ್ಕಳು ಸೊಸೆ ಒಂದೆಚಿಕ್ಕಮ್ಮ ಒಂದೆ ಹೆಂಡ್ತೊಂದೆ ಕೋಲೆಚಿಕ್ಕಮ್ಮ ಒಂದೆ ಹೆಂಡ್ತೊಂದಾದ ಮೇಲೆರೊಕ್ಕ ವೆಚ್ಚ ಮಾಡಿ ಮದುವ್ಯಾಕೆ ಕೋಲೆ 88 ಹಿಟ್ಟು ಬೂದಿ ಒಂದೆ ರೊಟ್ಟಿ ಮುಚ್ಚಳ ಒಂದೆಕಟ್ಟಿಗೆ ಒಂದೆ ಕಬ್ಬೊಂದೆ ಕೋಲೆಕಟ್ಟಿಗೆಯೊಂದೆ ಕಬ್ಬೊಂದಾದ ಮೇಲೆಕಟ್ಟಿಗೆ ಯಾಕೆ ಮೆಲುವೊಲ್ಲೆ ಕೋಲೆ 89 ಹಾಲು ಮಜ್ಜಿಗೆಯೊಂದೆ ಕೋಳಿ ಕೋಗಿಲೆಯೊಂದೆಮಾಳಿಗೆ ಒಂದೆ ಬಯಲೊಂದೆ ಕೋಲೆಮಾಳಿಗೆಯೊಂದೆ ಬಯಲು ಒಂದಾದರೆಹೇಳಬಾರದ್ದು ತಿನವಲ್ಯ ಕೋಲೆ 90 ಗಂಗೆಯ ತಡಿಯಲ್ಲಿ ಲಿಂಗವನರ್ಚಿಸಿಅಂಗೈಯಲಿಟ್ಟು ಪೂಜಿಸುವೆ ಕೋಲೆಅಂಗೈಯಲಿಟ್ಟು ಪೂಜಿಸುವೆ ಎಲೆ ಪಾಪಿಲಿಂಗನು ನೀನು ವಂದ್ಹ್ಯಾಗೆ ಕೋಲೆ 91 ಶಿವನು ನೀನಾದರೆ ಶಿವೆಯು ನಿನಗೇನುಅವಿವೇಕಿ ಮನುಜ ಈ ಮಾತು ಕೋಲೆಅವಿವೇಕಿ ಮನುಜ ಈ ಮಾತು ಕೇಳಿದರೆಕವಿಗಳು ನಗರೆ ಕೈ ಹೊಯ್ದು ಕೋಲೆ 92 ವೇದ ಪ್ರಾಮಾಣ್ಯಂದು ಸುಜನರಿಗೆಲ್ಲಬೋಧಿಸುತಿಪ್ಪ ಬೌದ್ಧನ ಕೋಲೆಬೋಧಿಸುತಿಪ್ಪ ಬೌದ್ಧನ ಎಳೆದೊಯ್ದುಕಾದೆಣ್ಣೆಯೊಳು ಕೆಡುಹೋರು ಕೋಲೆ 93 ಇಲ್ಲಿ ಮಾತ್ರ ಭೇದ ಅಲ್ಲಿಯೊಂದೆ ಎಂಬಕ್ಷುಲ್ಲಕರ ಹಿಡಿದು ಹಲ್ಮುರಿದು ಕೋಲೆಕ್ಷುಲ್ಲಕರ ಹಿಡಿದು ಹಲ್ಮುರಿದು ಯಮರಾಯಕಲ್ಲುಗಾಣಕ್ಕೆ ಹಾಕಿಸುವ ಕೋಲೆ 94 ಅಪ್ಪ ನಾರಾಯಣನಿಪ್ಪಂಥ ಅರಮನೆಅಪ್ರಾಕೃತದ ವೈಕುಂಠ ಕೋಲೆಅಪ್ರಾಕೃತದ ವೈಕುಂಠವೆಂಬೋದುಸ್ವ ಪ್ರಕಾಶದ ಪರಮಾತ್ಮ ಕೋಲೆ 95 ಸುತ್ತ ವಿರಜಾನದಿ ಮತ್ತೆ ಆನಂದ್ವನಚಿತ್ತಜನೈಯ್ಯನರಮನೆಗೆ ಕೋಲೆಚಿತ್ತಜನೈಯ್ಯನರಮನೆ ಎಂಬುದುಉತ್ತಮೋತ್ತಮ ವೈಕುಂಠ ಕೋಲೆ 96 ನೀಲ ವೈಢೂರ್ಯ ನಿಚ್ಚಳ ವಜ್ರಅಚ್ಚ ಮಾಣಿಕ್ಯದ ಅಳವಟ್ಟು ಕೋಲೆಅಚ್ಚ ಮಾಣಿಕ್ಯದ ಅಳವಟ್ಟು ಹರಿಪುರಅಚ್ಯುತನಿಪ್ಪ ಅರವನೆ ಕೋಲೆ 97 ಸಿರಿಯು ತಾ ಮುರಹರನ ಪಟ್ಟಣದಲ್ಲಿವಿರಜೆಯೆಂತೆಂದು ಕರೆಸೋಳು ಕೋಲೆವಿರಜೆಯೆಂತೆಂದು ಕರೆಸಿ ವೈಕುಂಠಕ್ಕೆಪರಿಖಾ ರೂಪದಲ್ಲಿ ಮೆರೆವಳು ಕೋಲೆ 98 ಉತ್ತರದಿ ನಾಲ್ಕು ತತ್ಥಳಿಸುವ ದ್ವಾರಮುತ್ತು ಮಾಣಿಕ್ಯ ನವರತ್ನ ಕೋಲೆಮುತ್ತು ಮಾಣಿಕ್ಯ ನವರತ್ನ ಝಲ್ಲಿಯಎತ್ತಿ ಮೇಲ್ಕಟ್ಟು ಬಿಗಿದಿದೆ ಕೋಲೆ 99 ಜಯ ವಿಜಯಾದ್ಯೆಂಟು ದ್ವಾರಪಾಲಕರುಜಯದೇವಿ ರಮಣನರಮನೆಗೆ ಕೋಲೆಜಯದೇವಿ ರಮಣನರಮನೆ ಬಾಗಿಲೊಳ್‍ಜಯ ಜಯವೆನುತ ನಿಂದಾರೆ ಕೋಲೆ 100 ಕಸವೆಲ್ಲ ಪರಿಮಳ ಕೆಸರೆಲ್ಲ ಶ್ರೀಗಂಧಬಿಸರುಹ ನೇತ್ರನ ಅರಮನೆ ಕೋಲೆಬಿಸರುಹ ನೇತ್ರನ ಅರಮನೆಯೊಳಗೆಲ್ಲಕುಸುಮದ ಮಳೆಯು ಗರೆವುದು ಕೋಲೆ 101 ಕಾಜಿನ ನೆಲೆಗಟ್ಟು ರಾಜ ಮಾಣಿಕ ಗೋಡೆಈ ಜಡ ದ್ರವ್ಯವಲ್ಲಿಲ್ಲ ಕೋಲೆಈ ಜಡ ದ್ರವ್ಯವಲ್ಲಿಲ್ಲ ಪುಸಿಯಲ್ಲಶ್ರೀ ಜನಾರ್ದನನರಮನೆಯೊಳ್ ಕೋಲೆ 102
--------------
ಮೋಹನದಾಸರು
ಸಾಸಿರ ನಾಮವ ಹಾಡೆ | ತಂಗಿ ಪ ದಾಸರು ಬಂದರೆ ಕೈ ಜೋಡಿಸಿ ವಂದಿಸೆ ತೋಷದಿ ವರಗಳ ಸೀಡುವರಮ್ಮ ಅ.ಪ ಪರಿಮಳ ಭರದಲಿ ಮೆರೆಯುವ ಹೂಗಳ ಅರಸಿ ತಂದಿರುವಳು ನೀನಲ್ಲವೇ ಪರಮ ಮಂಗಳಕರ ಸರಸಿಜಪಾದಕೆ ಹರುಷದೊಳರ್ಪಿಸೆ ಮರೆಯದಿರಮ್ಮ 1 ಮಂದರಧರ ಗೋವಿಂದನು ಮನದಲಿ ನಿಂದಿರುವನು ತಾನೆಂದೆಣಿಸಮ್ಮ ಬಂಧಿಸಿ ಪಂಚೇಂದ್ರಿಯಗಳನೆಲ್ಲ ವಂದಿಸಿ ಕೈಪಿಡಿ ಎಂದು ಬೇಡಮ್ಮ 2 ಅಂಗನೆಯರ ಭಾವಭಂಗಿಗೆ ನಲಿಯುವ ಮಾಂಗಿರಿಯರಸನು ನಿಜವಮ್ಮ ಇಂಗಿತವರಿತು ಗೋಪಾಂಗನೆಯರಿಗಾ- ಲಿಂಗನವಿತ್ತವನಿವನಮ್ಮ 3 ಇವನಮ್ಮ ಮನದೈವ ಗೋಪಾಲನು ಇವನಮ್ಮ ಪರದೈವ ನೀಲಾಂಗನು ಭವದೂರ ಸುಕುಮಾರ ಸಿರಿಲೋಲನು ನವನೀತ ದಧಿಚೋರ ಸುವಿಲಾಸನು 4 ಪರಮಾರ್ಥ ಚರಿತಾರ್ಥ ವರದಾತನು ಪರತತ್ವ ಚಿರತತ್ವ ಗುರುವೀತನು ದುರಿತಾರಿ ಉಪಕಾರಿ ಪರಮಾತ್ಮನು ಸಿರಿರಂಗ ಮಾಂಗಿರಿಯ ದೊರೆಯೀತನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸೀತಾ ಕಲ್ಯಾಣ ಪಾಕ ಶೇಷಾದ್ರಿ ಬ್ರಹ್ಮಕೆ ಶರಣು ಲೋಕನಾಯಕ ಹೆಳವನಕಟ್ಟೆ ವೆಂಕಟ ನೀ ಕರುಣಿಸಿ ಸಲಹುವುದೆನಗೆ ಜಯ ಜಯ ಪ. ಮದುವೆಯ ನಾಲ್ಕು ದಿವಸದಲ್ಲಿ ಮದುವಣಿಗನು ರಾಮ ಜಾನಕಿಗೆ ಪದನ ಹೇಳುವೆ ಸುಜನರು ಕೇಳಿ ಜಯ ಜಯ 1 ಚಿತ್ತಜಪಿತ ಶ್ರೀರಾಮರಿಗೆ ಅರ್ತಿಯಿಂದರಿಷಿಣೆಣ್ಣೆಯ ಮಾಡ್ವ ಮಿತ್ರೆ ಕೌಸಲ್ಯದೇವಿ ಕೇರಿ ಕೇರಿಯ ಗುಂಟ ಮುತ್ತೈದೇರನು ಕರೆಸಿದಳು ಜಯ ಜಯ 2 ಪೀತಾಂಬರದುಡುಗೆಯನುಟ್ಟು ಜ್ಯೋತಿಯಂದದಿ ಥಳಥಳಿಸುತಲಿ ಜಾತಿಮಾಣಿಕದಾಭರಣವಿಟ್ಟು ರಾಮರ ಮಾತೆಯರೆಲ್ಲ ಶೃಂಗಾರವಾಗಿ ಜಯ ಜಯ 3 ಚೀಣ ಚೀಣಾಂಬರಗಳನುಟ್ಟು ವೇಣಿ ಕಸ್ತೂರಿಯ ಪಣೆಗಿಟ್ಟು ಜಾಣೆಯರೆಲ್ಲ ಶೃಂಗಾರವಾಗಿ ಮಲ್ಲಿಗೆ ಬಾಣನ ಪಟ್ಟದಾನೆಗಳಂತೆ ಜಯ ಜಯ 4 ಪೊಂಬಣ್ಣದ ಹಳದಿಯ ಕಲೆಸಿ ತುಂಬಿದ ಹರಿವಾಣದೊಳಗೆ ಅಂಬುಜನಾಭಗೆ ಅರಿಷಿಣೆಣ್ಣೆಯ ಮಾಡ್ವ ಸಂಭ್ರಮಕೆ ನಡೆತಂದರಾಗ ಜಯ ಜಯ 5 ಗರುಡನ್ವಲ್ಲಭ ಸೌಂದರದೇವಿ ವರುಣನ್ವಲ್ಲಭೆ ಕಾಳಕದೇವಿ ಹರನ್ವಲ್ಲಭೆ ಪಾಪ[ನಾ] ಶಿಗಂಗೆ ಸಹಿತಲಿ ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ 6 ಬ್ರಹ್ಮವಲ್ಲಭೆ ಶಾರದಾದೇವಿ ವಾ- ಯುರಮಣಿ ಅಂಜನಾದೇವಿ ಹರುಷದಿ ಕೌಸಲ್ಯೆ ಕೈಕೆಸೌಮಿತ್ರೆಯರು ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ7 ಅಲ್ಲಲ್ಲಿ ನಡೆವ ನಾಟಕಶಾಲೆ ಬಿಲ್ಲಾಳು ಬೆತ್ತ ಕಾಟನವರು ಸೊಲ್ಲುಸೊಲ್ಲಿಗೆ ಹಿಡಿಹೊನ್ನನು ತ್ಯಾಗವ ಚೆಲ್ಲುತ ದಶರಥ ನಡೆದನಾಗ ಜಯ ಜಯ 8 ಹೊಡೆವ ತಂಬಟೆ ಭೇರಿ ನಿಸ್ಸಾಳೆ ಬಿಡದೆ ಚೀರುವ ಹೆಗ್ಗಾಳೆಗಳು ಸಿಡಿಲು ಗರ್ಜಿಸುವಂತೆ ಪಂಚಮವಾದ್ಯದಿ ನಡೆದರು ಜನಕರಾಯನ ಮನೆಗೆ ಜಯ ಜಯ 9 ಕುಸುಮಬಾಣನ ಮಾರ್ಬಲದಂತೆ ಹಸುರು ಪಚ್ಚೆಯ ಪಲ್ಲಕ್ಕಿಗಳು ಮುಸುಕಿದ ಪರಿಮಳದೊಳಪ[ಸಾ]ತಕೆ ದಶರಥ ಬಂದನೆಂದರೆ ಜನರು ಜಯ ಜಯ 10 ಭರದಿಂದಲೆದ್ದು ಜನಕರಾಯ ತರಿಸಿ ನಿವಾಳಿಗಳನು ಹಾಕಿ ಹರುಷದಿ ಕೈಲಾಗವ ಕೊಟ್ಟಯೋಧ್ಯದ ಅರಸ[ನ] ಮನ್ನಿಸಿ ಒಡಗೊಂಡನಾಗ ಜಯ ಜಯ11 ಬೇಗದಿ ಗದ್ದುಗೆಯನು ಹಾಸಿ ಬೀಗನ ಉಪಚರಿಸಿದ ಜನಕ ಭಾಗೀರಥಿ ಪಾರ್ವತಿ ಗಂಗೆ ಸಹಿತಲಿ ನಾಗಭೂಷಣನು ಕುಳಿತನಾಗ ಜಯ ಜಯ 12 ಸುತ್ತಣ ರಾಯರಾಯರಿಗೆಲ್ಲ ರತ್ನಗಂಬಳಿಗಳ ಹರಹಿದರು ಅರ್ತಿಯಿಂದಲಿ ಸುರರೆಲ್ಲರು ಕುಳಿತರು ವಿಸ್ತರಿಸಿದ ಮಂಟಪದೊಳಗೆ ಜಯ ಜಯ 13 ಮಣಿಮಂಟಪದೊಳು ಹಸೆಹಾಸಿ ಕನಕ ಮಣಿಯ ತಂದಿಳುಹಿದರು ದಿನಕರಕುಲರಾಮ ಹಸೆಗೇಳೆನುತಲಿ ಗುಣಾವಳಿಗ[ಳ] ಕೊಂಡಾಡಿದರು ಜಯ ಜಯ 14 ಪೊಕ್ಕಳೊಳಜನ ಪೆತ್ತವನೇಳು ಅಕ್ರೂರಜನ ಪೆತ್ತವನೇಳು ಮುಕ್ಕಣ್ಣನ ರಿಪುಬಲವ ಸಂಹರಿಸಿದ ಭಕ್ತವತ್ಸಲ ಹಸೆಗೇಳೆಂದರು ಜಯ ಜಯ 15 ದಶರಥರಾಜನಂದನನೇಳು ಅಸುರಸಂಹಾರ ಕಾರಣನೇಳು ವಸುಧೆಗೊಡೆಯ ರಾಮ ಹಸೆಗೇಳೆನುತಲಿ ಋಷಿಗಳೆಲ್ಲರು ಶ್ರುತಿಗರೆದರಾಗ ಜಯ ಜಯ 16 ಋಷಿವಾಲ್ಮೀಕಿ[ಯ]ರೆಲ್ಲರು ಕೂಡಿ ಕುಶಲದ ಬಾಸಿಂಗವ ಪಿಡಿದು ಅಸುರಾರಿಯ ಮಸ್ತಕಕಳವಡಿಸೋರು ವಸುದೇವನಾಗೆಂದು ಹರಸುತಲಿ ಜಯ ಜಯ 17 ತಂಡತಂಡದ ರತ್ನ ಅಡಸಿದಾಗ ಮಣಿ ಬಿಗಿದಿದಾಗ ತೊಂಡಿಲ ಮುತ್ತೈದೇರಳವಡಿಸೋರು ಕೋ- ದಂಡ ಪಾಣಿಸತಿಜಾನಕಿಗೆ ಜಯ ಜಯ 18 ಬೆರಳಿಗೆ ಮುದ್ರೆ ಉಂಗುರವಿಟ್ಟು ಕೊರಳಿಗೆ ಏಕಾವಳಿಯನೆ ಹಾಕೋರು ತರಳಾಕ್ಷಿಯರಾ ಜಾನಕಿಗೆ ಜಯ ಜಯ 19 ಬೊಂಬೆಯ ತೊಂಡಿಲ ಮುಡಿದಿರ್ದು ಕುಂಭಿಣಿಸುತೆ ಕುಳ್ಳಿರಲಾಗಿ ಅಂಬುಜಾಂಬಕ ರಘುರಾಮನ ಹರುಷದಿ ರಂಭೆಯಿದ್ದೆಡೆಗೆ ಬಂದನೆ ನಗುತ [ಜಯ ಜಯ]20 ಬಂದನೆ ಭಾಗ್ಯಲಕ್ಷ್ಮೀರಮಣ ಬಂದನೆ ಭಕ್ತವತ್ಸಲ ಸ್ವಾಮಿ ಬಂದನೆ ಜಾನಕಿಯಡೆ ರಾಮನು ತಾ ಬಂದನೆ ಮಣಿಮಂಟಪದೆಸೆಗೆ [ಜಯ ಜಯ] 21 ಧೂರ್ಜಟಿ ಜಪಿಸುವ ನಾಮವಿಗ್ರಹ ಬಂದ ವಜ್ರಮಾಣಿಕದ್ಹಸೆಯಿದ್ದೆಡೆಗೆ ಜಯ ಜಯ 22 ಕೌಸಲ್ಯಸುತ ಕುಮಾರ ಬಂದ ಹಂಸವಾಹನಪಿತ ರಾಮ ಬಂದ ಕಂಸಾರಿ ದುಃಖವಿ [ನಾಶ] ರವಿಕುಲ ವಂಶೋದ್ಧಾರಕ ಬಂದನಾಗ [ಜಯ ಜಯ] 23 ಭಕ್ತವತ್ಸಲ ರಾಘವ ಬಂದ ಮುಕ್ತಿದಾಯಕ ಶ್ರೀರಾಮ ಬಂದ ಅರ್ಕನು ಶತಕೋಟಿತೇಜನು ಜಗಕತಿ- ಶಕ್ತ ತಾ ಬಂದನೆಂದವೆ ಕಹಳೆ ಜಯ ಜಯ 24 ಸಿಂಧುಬಂಧನ ರಾಘವ ಬಂದ ಪು- ರಂದರವರದ ಶ್ರೀರಾಮ ಬಂದ ಇಂದುವದನೆಪತಿ ರಾಮ ಬಂದನು ರಾಮ- ಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 25 ಯಜ್ಞಶಿಕ್ಷಾಮಿತ್ರ ರಾಮ ಬಂದ ಸುಗ್ರೀವರಕ್ಷಕಾರಣ ಬಂದ ಲಕ್ಷ್ಮ- ಣಾಗ್ರಜ ಬಂದನೆಂದವೆ ಕಹಳೆ ಜಯ ಜಯ 26 ಯಂತ್ರವಾಹಕ ರಾಘವ ಬಂದ ಮಂತ್ರಮೂರುತಿ ರಾಮ ಬಂದ ಕಾಂತೆ ಶ್ರೀ ಜಾನಕಿರಮಣ ಬಂದನು ರಾಮ ತಂತ್ರಿ ತಾ ಬಂದನೆಂದವೆ ಕಹಳೆ ಜಯ ಜಯ 27 ದೂಷಕಹರಣ ಶ್ರೀರಾಮ ಬಂದ ವಿ- ಭೀಷಣವರದ ರಾಘವ ಬಂದ ಭಾಷೆ ಪಾಲಿಪ ರಾಮಚಂದ್ರ ಬಂದನು ಜಗ- ದೀಶ ತಾ ಬಂದನೆಂದವೆ ಕಹಳೆ ಜಯ ಜಯ 28 ತಾಟಕಪ್ರಾಣಾಪಹಾರ ಬಂದ ಜಟÁಯುಮುಕ್ತಿಕಾರಣ ಬಂದ [ತಾಟಂಕ] ಧರ ನಾರಾಯಣ ರವಿಕುಲ ಕೋಟಿ ತಾ ಬಂದನೆಂದವೆ ಕಹಳೆ ಜಯ ಜಯ 29 ವೀರ ವಿಕ್ರಮ ರಾಘವ ಬಂದ ಮಾರೀಚಮರ್ದನ ರಾಮ ಬಂದ ನಾರಿ ಶ್ರೀ ಜಾನಕಿರಮಣ ಬಂದನು ಹರಿ ರಾಮ ತಾ ಬಂದನೆಂದವೆ ಕಹಳೆ ಜಯ ಜಯ 30 ದೇವಕುಮಾರ ರಾಘವ ಬಂದ ದೇವರ ದೇವನು ರಾಮ ಬಂದ ಭಾವೆ ಶ್ರೀ ಜಾನಕಿರಮಣ ಬಂದನು ರಾಮಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 31 ನಿರುಪಮಚರಿತ ರಾಘವ ಬಂದ ದುರಿತದಲ್ಲಣ ರಾಮದೇವ ಬಂದ ಭರತಶತ್ರುಘ್ನರ ಸಹೋದರಯೋಧ್ಯದ ಸುರಪತಿ ಬಂದನೆಂದವೆ ಕಹಳೆ ಜಯ ಜಯ 32 ಹೇಮಖಚಿತ ರತ್ನ ಪೀಠದಲಿ ಭೂಮಿಜೆ ಸಹಿತ ಕುಳಿತ ರಾಮ ವಾಮ ಭಾಗದಿ ಒಪ್ಪಿರ್ದಳು ಜಾನಕಿ ಆ ಮಹಾಸಭೆಯನು ಬೆಳಗುತಲಿ ಜಯ ಜಯ 33 ಕುಂದಣ ರತ್ನದಡ್ಡಿಕೆಯೊಳಗೆ ಹೊಂದಿಸಿ ನವರತ್ನ ಇರುವಂತೆ ಇಂದುವದನೆ ಜಾನಕಿ ಹರುಷದಿ ರಾಮ ಚಂದ್ರನ ಮಧ್ಯದೊಳೊಪ್ಪಿದಳು ಜಯ ಜಯ 34 ಹೇಮದ್ಹರಿವಾಣದೊಳಗ್ನಿಯನು ಕಾಮಿನಿಯರು ತಂದಿಳುಹಿದರು ರಾಮ ಮನ್ನಿಸಿ ಉಡುಗೊರೆಯಿತ್ತು ಅವರಿಗೆ ಹೇಮಾರ್ಚನೆಗಳ ತೊಡಗಿದನು ಜಯ ಜಯ 35 ಲಾಜತೊಂಡಿ[ತಂಡು?]ಲ ಆಹುತಿಗೊಟ್ಟು ಪೂಜಿಸಿದನೆ ವಿಘ್ನೇಶ್ವರನ ರಾಜವದನೆಯ ಒಡಗೊಂಡು ರಾಘವ ಪೂಜಿಸಿದನೆ ಋಷಿಮುನಿವರರ ಜಯ ಜಯ 36 ಇಂದ್ರಾದಿ ಮುನಿಗಳು ಕೈಹೊಡೆದು ಚಂದ್ರ ಸೂರ್ಯರು ಉಘೇಉಘೇಯೆನಲು ಮಂದಾರ ಮಲ್ಲಿಗೆ ಮಳೆಗಳ ಕರೆದರು ಅಂದದಿ ಸುರಜನರೆಲ್ಲರಾಗ ಜಯ ಜಯ 37 ಅರಳುವ ಕೆಂದಾವರೆ ಕುಸುಮ ಪರಿಮಳ ಸುರಮ್ಯ ಕಣ್ಗೆಸೆಯೆ ಎರಗುವ ಮರಿದುಂಬಿಗಳಂತೆ ರಾಘವ ಕರಗಳ ಪಿಡಿದೆÀತ್ತಿದ ಸತಿಯ [ಜಯ ಜಯ] 38 ಇಳೆಯ ಜಗಂಗಳನುದರದಲಿ ಅಳವಡಿಸಿದ ಮಹಾತ್ಮಕನು ಇಳೆಯ ಮಗಳನು ಎತ್ತಲಾರದೆ ರಾಮ ಬಳಲಿದನೆಂದು ನಕ್ಕರು ಜನರು ಜಯ ಜಯ 39 ಪರಾಕು ಸ್ವಾಮಿ ಪರಾಕು ದೇವ ಪಾದ ಎಚ್ಚರಿಕೆ ಸೀತಾಪತಿ ರಾಮನೆ<
--------------
ಹೆಳವನಕಟ್ಟೆ ಗಿರಿಯಮ್ಮ
ಸುಂದರ ಕೃಷ್ಣನು ಕರೆಯುವ ಬನ್ನಿರೆ ಇಂದುಮುಖಿಯರೆಲ್ಲ ಪ ಚಂದದಿ ವಿಹರಿಸುವ ಬನ್ನಿರಿ ಇಂದುಮುಖಿಯರೆಲ್ಲ ಅ.ಪ ಭಾಸುರಾಂಗನ ಕೂಡಿ ನಾವು ರಾಸಕ್ರೀಡೆಯಲಿ ಈ ಸಂಸಾರದ ಕ್ಲೇಶಗಳನು ಪರಿ ಹಾಸ ಮಾಡುವ ಬನ್ನಿ 1 ಪರಿಮಳ ಕುಸುಮಗಳ ಸೊಗಸಿನ ತರುಲತೆ ಬುಡದಲ್ಲಿ ಮುರಹರ ಕೃಷ್ಣನ ಮುರಳಿಯನೂದುವ ತರಳೆಯ ಅಂಬನ್ನಿ 2 ನಂದಕುಮಾರನಿಗೆ ನಾವು ಮಂದಹಾಸದಲ್ಲಿ ಗಂಧ ತಾಂಬೂಲಗಳಂದದಿ ನೀಡುತಾ ನಂದಪಡುವ ಬನ್ನಿ 3 ಯಮುನಾ ತೀರದಲಿ ನಾವು ಸುಮಬÁಣನ ಸೊಲ್ಲನು ಮುರಿಯುವ ಬನ್ನಿ ಕಮಲಾಕ್ಷಿಯರೆಲ್ಲಾ 4 ಪನ್ನಗವೇಣಿಯರೇ ಈಗ ಪ್ರ ಸನ್ನವದನ ಕೃಷ್ಣ ತನ್ನ ಇಂಗಿತವನರುಹಲು ಎಮ್ಮನು ಸನ್ನೆಯ ಮಾಡುತಿಹ 5
--------------
ವಿದ್ಯಾಪ್ರಸನ್ನತೀರ್ಥರು
ಸುರಪನಾಲಯದಂತೆ ಮಂತ್ರಾಲಯ ಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ ಪ ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವ ಭೌಮ ಸುಧೀಯೀಂದ್ರಸುತ ರಾಘವೇಂದ್ರ ಆಮಯಾಧಿಪ ಖಳತಮಿಶ್ರ ಓಡಿಸುವ ಚಿಂ ತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ 1 ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಾಶ್ರಿ ತರ ಮನೋರಥಗಳನು ಪೂರೈಸುವಾ ಧರಣಿಸುರಾಖ್ಯ ಷಟ್ಟದಗಳಿಗೆ ಸತ್ಯದಾ ಪರಿಮಳದಿ ತೃಪ್ತಿಬಡಿಸುವ ಮರುತನಂತೆ 2 ವಾರಾಹಿ ಎಂಬ ನಂದನ ವನದಿ ಜನರತಿ ವಿ ಹಾರ ಮಾಳ್ಪರು ಸ್ನಾನಪಾನದಿಂದಾ ಶ್ರೀ ರಾಘವೇಂದ್ರನಿಲ್ಲಿಪ್ಪ ಕಾರಣ ಪರಮ ಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು 3
--------------
ಜಗನ್ನಾಥದಾಸರು
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ ಪ. ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ ವರ ವಾಣಿರಮಣಗೆ ಶರಣೆಂಬೆ ಸುವ್ವಿ ವರ ವಾಣಿರಮಣಗೆ ಶರಣೆಂದು ಪೇಳಿದ ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ 1 ¥ಕ್ಕಿವಾಹನ್ನ ಜಗಕ್ಕೆ ಮೋಹನ್ನ ರಕ್ಕಸದಾಹನ್ನನಿವ ಸುವ್ವಿ ರಕ್ಕಸದಾಹನ್ನನಿವ ತನ್ನ ಮರೆ- ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ 2 ಯಶೋದೆಯ ಕಂದ ತನ್ನ ವಿಷವನುಣ್ಣೆಂದ ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ 3 ಶಕಟಾಸುರನ್ನ ಮೆಟ್ಟಿ ಕೊಂದ ಬಲು ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ- ಸ್ತಕದಮೇಲೆ ನಲಿವುತ ನಿಂದ ಸುವ್ವಿ4 ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ 5 ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ ಭೃತ್ಯರಿಗೊಲಿದು ವರವಿತ್ತ ಸುವ್ವಿ ಭೃತ್ಯರಿಗೊಲಿದು ವರವಿತ್ತ ತನ್ನ ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ 6 ವೃಂದಾವನದಿ ನಿಂದು ಚಂದದಿ ನಲಿವಾಗ ತನ್ನ [ಕೊಂದಪೆ]ನೆಂದು ಬಂದ ಬಕನ ಸುವ್ವಿ [ಕೊಂದಪೆ]ನೆಂದು ಬಂದ ಬಕನ ಸೀಳಿ ಪುಲ್ಲಂದದಿ ಕೊಂದು ಬಿಸುಟಾನೆ ಸುವ್ವಿ 7 ಕಲ್ಪತರುವಂತೆ ನಮ್ಮ ತನ್ನಧರಿಂದ ಕೊಳಲನೂದುವ ಚೆಲುವಗೆ ಸುವ್ವಿ ಕೊಳಲನೂದುವ ಚೆಲುವ ಗಾನಲೋಲ ಗೋ- ಪಾಲಕೃಷ್ಣನಿಗೆ ಶರಣೆಂಬೆ ಸುವ್ವಿ 8 ರಂಗ ರಾಸಕ್ರೀಡೆಯೆಂಬ ಶೃಂಗಾರರಸ ಬಸಿವ ಮಂಗಳ ವಿಲಾಸವನು [ರಚಿಸಿದ]ಸುವ್ವಿ ಮಂಗಳ ವಿಲಾಸವನು ರಚಿಸಿದಾತನ ಕಂಡು ದೇ ವಾಂಗನೆಯರೆಲ್ಲರು ತನುವ ಮರೆತರು ಸುವ್ವಿ 9 ಮಧುರೆಗೆ ಪೋಗಿ ಮಲ್ಲರಸುವ ನೀಗಿ ಮದಾಂಧ ಮಾವನ್ನ ಮಡುಹಿದ ಸುವ್ವಿ ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ ಮುದದಿ ತನ್ನವರ ಮುದ್ದಿಸಿದ ಸುವ್ವಿ 10 ಧರ್ಮವ ಬಿಡಬೇಡ ದುಷ್ಕರ್ಮ ಮಾಡಬೇಡ ದುರ್ಮನವ ಬಿಡದೆ ಹರಿಯಲಿಡು ಸುವ್ವಿ ದುರ್ಮನವ ಬಿಡದೆ ಹರಿಯಲಿಡು ಮನವ ಕಾಮಿನಿಯೊಳಾಡಿ ಕೆಡಬೇಡ ಸುವ್ವಿ 11 ದುರುಳರ ನೋಡಿ ದೂರಕ್ಕೋಡು ಹರಿ- ಶರಣಡಿಗೆ ಪೊಡಮಡು ಸುವ್ವಿ ಶರಣರಡಿಗೆ ಪೊಡಮಡು ಶ್ರೀಕೃಷ್ಣನ ಸು- ಚರಿತವ ಪಾಡುವರೊಳಗಾಡು ಸುವ್ವಿ 12 ಏರಲರಿಯದವ ಮರನೇರಿ ಬಿದ್ದು ಸಾವಂತೆ ನೀರ ಮೀನುಗಳು ಕರಗುವಂತೆ ಸುವ್ವಿ ನೀರ ಮೀನುಗಳು ಕರಗುವಂತೆ ಮನುಜ ನೀ ಬಾರದ ಭಾಗ್ಯಕ್ಕೆ ಹೋರಬೇಡ ಸುವ್ವಿ 13 ಹಿಂದೆ ಪುಣ್ಯದ ಬೀಜವ ಕುಂದದೆ ಬಿತ್ತಿದರೆ ಇಂದು[ಬಾಹದೈಶ್ವರ್ಯ ಮುಂದಿಪ್ಪೋದು] ಸುವ್ವಿ ಇಂದು [ಬಾಹದೈಶ್ವರ್ಯ ಮುಂದಿಪ್ಪೋದು] ಬರಿದೆ ನೀ ನೊಂದು ವಿಧಿಯ ಬೈದರೆ ಎಂದೆಂದು ಕೆಡುವೆ ಸುವ್ವಿ 14 ದುರುಳ ಕೀಚಕ ಕೆಟ್ಟ ಪರಧನಕೆ ಮರುಳಾಗಿ ಕುರುರಾಯ ಸುವ್ವಿ ಪರಧನಕೆ ಮರುಳಾಗಿ ಕುರುರಾಯ ಕೆಟ್ಟನೆಂದು ಒರೆವ ಭಾರತವ ನಿರುತ ಕೇಳು ಸುವ್ವಿ 15 ವಾದಿಯೂ ಹರಿಯಾದ ಪ್ರತಿವಾದಿಯೂ ಹರಿಯಾದ ಭೇದವಿಲ್ಲವೆಂಬ ಮತದಲ್ಲಿ ಸುವ್ವಿ ಭೇದವಿಲ್ಲವೆಂಬ ಮತದಲ್ಲಿ ತಾನೊಬ್ಬನೇ ಕಾದಿ ಗೆದ್ದಾನೆಂತು ಬಿದ್ದಾನೆಂತು ಸುವ್ವಿ 16 ಎಲ್ಲ ಒಂದಾಂದರೆ ಶಾಲ್ಯಾನ್ನನುಂಬುವರು ಪುಲ್ಲನ್ಯಾಕೆ ಮೆದ್ದು ಬದುಕರು ಸುವ್ವಿ ಪುಲ್ಲನ್ಯಾಕೆ ಮೆದ್ದು ಬದುಕರು ಸ್ಥಳಚರರು ಜಲದೊಳು ಚರಿಸೆ ಅಳುವದ್ಯಾಕೆ ಸುವ್ವಿ 17 ವರ್ತಿಯ ಸಂಸಾರ ವ್ಯವಹಾರಕ್ಕೀಗ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಸುವ್ವಿ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಭೇದ ಸತ್ಯವಾದರೈಕ್ಯ ಎತ್ತಿಹೋದು ಸುವ್ವಿ 18 ಅತ್ತೆ ಸೊಸೆಯರಿದ್ದಾಗ ಮನೆಯೊಳು ಮತ್ಸರವು ಕತ್ತೆನಾಯಿಗಳಂತೇಕೆ ಬೆರಸರು ಸುವ್ವಿ ಕತ್ತೆನಾಯಿಗಳಂತೇಕೆ ಬೆರಸರು ಅದರಿಂದ ಪ್ರತ್ಯೇಕ ಜೀವರ ಇರವು ಸುವ್ವಿ 19 ಮಿಥ್ಯಾ ಭೇದಾದರೆ ಅದು ಶುಕ್ತಿರೂಪದಂತೆ ತ- ನ್ನರ್ಥವ ತಾ ಕಾಣಲರಿಯನು ಸುವ್ವಿ ತ- ನ್ನರ್ಥವ ತಾ ಕಾಣಲರಿಯನು ಅದರಿಂದ ನಾ- ವೆತ್ತಿದ ದೂಷಣೆಗೆ ಉತ್ತರವಿಲ್ಲ ಸುವ್ವಿ 20 ಬೊಮ್ಮ ಮಿಥ್ಯವಲ್ಲವೋ ನಿನ್ನ ಮಿಥ್ಯ ಶಶಶೃಂಗ ಸತ್ಯವಲ್ಲ ಸುವ್ವಿ ಮಿಥ್ಯಶ ಶಶೃಂಗ ಸತ್ಯವಲ್ಲ ಶೃಂಗ್ಯೆರಡು ಜ- ಗತ್ತಿನೊಳು ಕೂಡವು ಕುಯುಕ್ತಿಯ ನಿನಗಾವ ಕಲಿಸಿದ ಸುವ್ವಿ 21 ಸತ್ತ ಪೆಣನುಂಟು ಸಾಯದ ವಸ್ತುಂಟು ಸತ್ತು ಸಾಯದ ಮತ್ರ್ಯರಿಲ್ಲ ಸುವ್ವಿ ಸತ್ತು ಸಾಯದ ಮತ್ರ್ಯರಿಲ್ಲ ಮತ್ರ್ಯನಾಗಿ ನಿನ್ನ [ಮಿಥ್ಯಾವಾದ]ವೆಂತು ನಿತ್ಯವಹುದು ಸುವ್ವಿ 22 ಸತ್ಯವೆಂದರುಂಟು ಮಿಥ್ಯವೆಂದರಿಲ್ಲ ಎಂ- ಬರ್ಥ ತಾ ಕೂಡಲರಿಯದು ಸುವ್ವಿ ಎಂ- ಬರ್ಥ ತಾ ಕೂಡಲರಿಯದು ಅದರಿಂದ ಅರ್ಥವಪೇಳೆ ಮಿಥ್ಯಕೆ ನಾಮಾಂತರ ಸುವ್ವಿ23 ಭರ್ತೃಯಿಲ್ಲದವಳ ಮುತ್ತೈದೆಯೆಂಬಂತೆ ನಿನ್ನ ಮಿಥ್ಯಜಗಕಿಟ್ಟ ಸತ್ಯನಾಮ ಸುವ್ವಿ ಮಿಥ್ಯಜಗಕಿಟ್ಟ ಸತ್ಯನಾಮ ನಿನ್ನ ಯುಕ್ತಿಶೂನ್ಯನೆಂದು ಸುತ್ತ ನಗುತಿಪ್ಪುದು ಸುವ್ವಿ 24 ಇಲ್ಲ ಜಗವೆಂಬುದನು ಈಗ ಕಂಡದ ಕಾರಣ ಇಲ್ಲವಾತನ ವಾದಕ್ಕೆ ಪೊಗಳಲರಿಯದು ಸುವ್ವಿ ಇಲ್ಲವಾತನ ವಾದಕ್ಕೆ ಪೊಗಳಲರಿಯದ ಹೊಲೆಯನ [ಎಲ್ಲರರಿಯದಿದ್ದರೆ] ಹೊಲೆಜಾತಿ ಹೋಕ ಸುವ್ವಿ 25 ಗಿರಿಯ ಪಿರಿಯ ಗುಹೆಯೊಳು ದಳ್ಳುರಿಯ ಬೇಗೆಗೆ ಬೆಂದ ಕರಿಯನರಿಯದ ಕಾರಣ ಮರನ ಮುರಿವುದೆ ಸುವ್ವಿ ಕರಿಯನರಿಯದ ಕಾರಣ ಮರನ ಮುರಿವುದೆ ವಾದಿಯೀ ಪರಿಯಲಿ ನಿನ್ನ ಮಿಥ್ಯದಿ ಕಾರ್ಯವಾಗದು ಸುವ್ವಿ 26 ಹಳೆಯ ಮಲವೆಲ್ಲವು ಮಲವೆ ಅಲ್ಲದೆ ಮತ್ತೆ ಜಲಜಾಕ್ಷಿಯರ ಸಂಗಕ್ಕೆ ಪರಿಮಳವೀವುದೆ ಸುವ್ವಿ ಜಲಜಾಕ್ಷಿ ್ಷಯರ ಸಂಗಕ್ಕೆ ಪರಿಮಳವೀವುದೆ ಶೂಲದಿ ಸತ್ತ[ಪೆಣನು] ಸುಳಿವುತಿಪ್ಪುದೆ ಸುವ್ವಿ 27 ನಾಸ್ತಿಯೆಂಬ ವಸ್ತುವ ನಾಸ್ತಿಯೆಂದರಿಯದೆ ಆಸ್ತಿಯೆಂದು ಕಂಡರೆ ಅತಿಮೂರ್ಖ ಸುವ್ವಿ ಆಸ್ತಿಯೆಂದು ಕಂಡರೆ ಅತಿಮೂರ್ಖ ಅಕಟಕಟ ಜ- ಗತ್ತಿನ ಮಹಂತರ ಉನ್ಮತ್ತರ ಮಾಡಿದ ಸುವ್ವಿ 28 ಏಕಾಕಿ ನ ರಮತೆಯೆಂಬ ವೇದವಾಕ್ಯ ವಿ- ವೇಕಿಗಳೆಲ್ಲ ಬಲ್ಲರು ಸುವ್ವಿ ವಿ- ವೇಕಿಗಳೆಲ್ಲ ಬಲ್ಲರು ಅದರಿಂದ ನಿನ್ನ ಮುಕ್ತಿ ಏಕಾಕಿಯಾದರೆ ಶೋಕಕ್ಕೊಳಗಾದೆ ಸುವ್ವಿ 29 ಲೋಕದೊಳು ಹಾಳೂರ ಹಂದಿಯ ಬೇಸರದೆ ನೋಡೊ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ಸುವ್ವಿ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ನಮ್ಮ ಶ್ರೀ ವೈಕುಂಠದ ವಾಸನೆ ಲೇಸು ಸುವ್ವಿ 30 ಅಲ್ಲಿ ಸಹಬ್ರಹ್ಮಣಾ ಸರ್ವಕ ಮಂಗಳೆಂಬಾರಂತೆ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ಸುವ್ವಿ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ನೀ ಕೇಳು ಎಲ್ಲ ಮತ್ರ್ಯರಲ್ಲಿ ಹರಿಯನುವ್ರತರಂತೆ ಸುವ್ವಿ 31 ಅಲ್ಲಿ ನರ ನಾರಿಯರು ಚಿನುಮಯ ಚೆಲುವರಂತೆ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಸುವ್ವಿ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಅವರ ಶ್ರೀ- ವಲ್ಲಭ ಲಾಲಿಸಿ ಪಾಲಿಸುವನಚಿಂತೆ ಸುವ್ವಿ 32 ನಗರ ಕೃಷ್ಣಗೆ ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ34 ಇಂತು ಹಯವದನ ನಿಶ್ಚಿಂತ ಜಗತ್ಕಾಂತ ಸಂತರನು ಸದಾ ಸಲಹುವ ಸುವ್ವಿ ಸಂತರನು ಸದಾ ಸಲಹುವ ಮಾರಾಂತರ ಕೃ- ತಾಂತನ ಬಳಿಗೆ ಕಳುಹುವ ಸುವ್ವಿ 35
--------------
ವಾದಿರಾಜ
ಸೂಳೆವೆಂಗಳ ನಂಬಬೇಡಅವರ ಖೇಳಮೇಳವ ಬಿಡೋ ಮೂಢಬಲು ಜಾಲಗಾತಿಯರ ಬಲೆಗೆ ಸಿಕ್ಕದಿರುಯಮನಾಳೆ ಮುಡಿಸುವನೆ ಬಿಡುಬಿಡುಗಾಡ ಪ ಸುರತಸುಖವ ತೋರಿಸುವರುಮನೆಯೊಳಿರುವ ಧನವ ತರಿಸುವರುಪರಪುರುಷನಿದಿರು ಮಾಡುವರುಧನ ಬರಿದಾಗೆ ತಪ್ಪು ಹೊರಿಸುವರುಕಡೆಗೆ ತಿರಿದು ತಾರಂದು ಕೈಯಲಿ ತೂತುಗರಟವಕರೆದು ಕೊಡುವರು ಬೈವರು ದೂರುವರು1 ಗುರುಹಿರಿಯರ ತೊರೆಸುವರುಮನೆಯೊಳಿರುವ ಮಕ್ಕಳ ಮರಸುವರುಧನ ಬರುವತನಕ ನೋಡುವರುಬಾರದಿರೆ ಛಿ ಹೋಗೆಂದು ದೂಡುವರು ಗಂಧಪರಿಮಳ ತಿಲಕ ತಾಂಬೂಲ ಕ್ರಮುಕದೊಳುಮರುಳು ಮದ್ದಿಕ್ಕಿ ಕೈವಶವ ಮಾಡುವರು2 ಹೆಂಡತಿಯನು ತೊರಸುವರುಕಂಡ ಕಂಡ ಪುರುಷರ ಕೂಡುವರುಮಂಡೆಗೆ ಮದ್ದನೂಡುವರು ಕಡೆಗೆಭಂಡಾಟವ ಮಾಡುವರು...........(ಅಸಮಗ್ರ)
--------------
ಕೆಳದಿ ವೆಂಕಣ್ಣ ಕವಿ
ಸ್ಮರಿಸಿ ಸುಖಿಸು ಮನವೆ ಗುರುರಾಜಾಚಾರ್ಯರ ಪ ಸ್ಮರಿಸು ಪರಿಮಳ ವಿರಚಿಸಿದ ಗುರು ವರರ ಕರುಣವ ಪಡೆದ ಶರಣರ ದುರಿತ ಉರಗಕೆ ಗರುಡನೆನಿಸಿದವರ ಸುಚರಿತೆಯ ಹರುಷದಿಂದಲಿ ಅ.ಪ ಇಳಿಯೋಳ್ ಶ್ರೀ ಸುರಪುರದಿ ಯಳಮೇಲಿ ಶ್ರೀ ವಿಠ್ಠಲಚಾರ್ಯ ರಿಹ ಜನ್ಮದಿ ಕುಸುಮೂರ್ತಿ ಗುರುಗಳ ಒಲಿಮೆ ಪಡೆದು ನಿತ್ಯದಿ ಗಳಿಸಿದ ಸುಪುಣ್ಯದಿ ಲಲನೆ ಜಾನಕಿ ವರ ಸುಗರ್ಭದಿ ಚಲುವ ಲಕ್ಷಣ ಗಳಲಿ ಜನಿಸಿ ಗೆಳೆಯರೊಡನಾಡುತಲೆ ಶಬ್ಧಾವಳಿ ಸುಶಾಸ್ರ್ತವ ಕಲಿತ ವರಪದ 1 ಮೆರೆವ ಘನ ವೈಭವದಿ ವೈರಾಗ್ಯಭಾಗ್ಯವೆ ಪಿರಿದೆಂಬೊ ಧೃಢಮನದಿ ವನಿತಾದಿ ವಿಷಯದಿ ತಿರುಗಿಸುತ ಮನವಿರದೆ ಸಿರಿವರ ತುರುಗವದನನ ಚರಣ ಪೂಜಿಯೊಳಿರಿಸಿ ಗುರುವರ ಮುಖದಿ ಶ್ರೀ ಮನ್ಮರುತ ಶಾಸ್ತ್ರದ ಶ್ರವಣಗೈದರ 2 ಚರಿಸಿ ಶಾಸ್ತ್ರವ ಬೋಧಿಸಿ ಪ್ರವಚನದಿ ಗುರುಗಳ ಕರುಣವ ಸಂಪಾದಿಸಿ ನೃಪಮಾನ್ಯರೆನಿಸಿ ಹರಿದಿನಾದಿ ವೃತ ಬಿಡದಾಚರಿಸಿ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ ಪರಮ ಮಹಿಮರ ಚರಣ ಯುಗಲವ 3
--------------
ಕಾರ್ಪರ ನರಹರಿದಾಸರು
ಸ್ಮರಿಸುವ ನರನೇ ಧನ್ಯ ಸನ್ಮಾನ್ಯ ಪ ಸ್ಮರಿಸುವರಿಗೆ ಸುರತರುಕಲ್ಪ ವಿಭರಾಮ ಪುರದಿ ಶ್ರೀಹರಿ ಧ್ಯಾನಪರ ಶ್ರೀ ಕೃಷ್ಣಾಚಾರ್ಯರ ಅ.ಪ ಭರತ ಭೂಮಿಯೊಳವತರಿಸಿ ದೇವಾಂಶದಿ ಪುರುಹೂತನಂತೆ ಗಜಾಂತ ವೈಭವದಿಂದ ಮೆರೆಯುತ ತಮ್ಮಯ ಚರಣಾರಾಧಕರನು- ದ್ದರಿಸಲೋಸುಗದಿ ಸಂಚರಿಸುತ ಮುದದಿ ಸಂದರುಶನದಿಂಧಾಘವ ಕಳೆದು ಬಲು ಕರುಣದಲಿಷ್ಟಾರ್ಥವ ಗರಿದು ಬಹು ಶರಣು ಜ- ನರ ಪೊರೆವ ಭೂಸುರರೊಳು ಮರುತ ಮತಾಬ್ಧಿ ಚಂದಿರನೆನಿಸಿದವರ 1 ವರ್ಣಿಸಲೊಶವಲ್ಲ ಚರಣಯುಗ್ಮಾರಭ್ಯ ಶಿರಪರಿಯಂತರ ಗುರುಗಳಾಕೃತಿಯನ್ನು ನಿರುತ ಧ್ಯಾನಿಪರಿಗೆ ಪರಮ ಮಂಗಳವೀವ ಪರಿಶೋಭಿಸುವ ರತ್ನಾಭರಣದಿಂದೋಪ್ಪುವ ಸ್ವರ್ಣತುಲಸಿ ಮುಕ್ತಹಾರ ಭೂಷಿತ ಕಂಧರ ಸುಂದರವಾದ ಮುಖದೊಳು ಮಂದಸ್ಮಿರ ಕಸ್ತೂರಿಯಂತೆ ಪರಿಮಳಾನ್ವಿತ ಶರೀರ ಮಂತ್ರಾಲಯ ಗುರುರಾಘವೇಂದ್ರರ ಕರುಣಾಸುಪಾತ್ರರ2 ಚಿರಕಾಲ ಶೇವಿಪ ಪರಮ ವಂಧ್ಯರಿಗೆಲ್ಲ ವರಪುತ್ರ ಸೌಖ್ಯವ ಕರುಣಿಸುವರು ಸತ್ಯ ಅಪರಿಮಿತ ಮಹಿಮರೆಂದರಿಯದೆ ಇವರನ್ನು ಜರಿಯಲಾಕ್ಷಣದಲಿ ಅರಿತು ಭೀಕರವಾದ ಉರಗರೂಪವ ತೋರುತ ತ್ಯಜಿಸಿ ಮತ್ತೆ ನಿಜರೂಪದಿಂದಿರುತ ನೋಳ್ಪರಿಗತ್ಯಾಶ್ಚರ್ಯ ಸದ್ಗುಣ ಭರಿತ ಕಾರ್ಪರ ನರಹರಿಯ ಪರೋಕ್ಷದಿ ನಿರುತ ಸುಖಿಪರಂಘ್ರಿ 3
--------------
ಕಾರ್ಪರ ನರಹರಿದಾಸರು
ಹಡಪ ಕಾಳಾಂಜಿ ಚಾಮರ ಛತ್ರ ವ್ಯಜನ ಪಾ ವಡಗಾಡಿ ವಸಡುಗ ಪಾವುಗೆ ಸುವರ್ಣದರ್ಪಣವಾ ಪ ಪಿಡಿದ ನಾರಿಯರು ಯಡಬಲದ ಕೈದೀವಿಗೆಯ ಕೊಡುತ ಕೈಲಾಗಿನವರಡಿಗಳೆಚ್ಚರಿಕೇ ಅ.ಪ ವೀಣೆ ದಂಡಿಗೆ ತಾಳ ಮೇಳ ಸನಕಾದಿ ಸುರ ನಾರಿಯರು ಗೀತ ಪ್ರಬಂಧ ನರ್ತನದ ಪು ರಾಣ ಕೋವಿದರು ಪಾಠಕನಿಕರ ಸಹಿತ ಗೀ ರ್ವಾಣರೈದಿರಲು ಅವಧಾನವೆಚ್ಚರಿಕೇ 1 ಗಂಧ ಪರಿಮಳ ಪುಷ್ಪ ತಾಂಬೂಲ ಫಲಗಳನು ತಂದು ಉಡುಗೊರೆಯ ಕಾಣೆಕೆಯಿಟ್ಟು ಜಯವೆನುತ ನಂದ ಮುಕುಂದ ಗೋವಿಂದ ಕೇಶವಯೆನುತ ವಂದನೆಗಳನೆ ಮಾಡಿ ನಿಂದರೆಚ್ಚರಿಕೇ 2 ಭಾಗವತ ಜನರು ಬಿರುದಾವಳಿಯ ಪೊಗಳೆ ಮುನಿ ಯೋಗಿಗಳು ತತ್ವ ಪ್ರಬಂಧದಧ್ಯಾಪಕರು ಮೇಘವಾಹನ ಪೂಮಳೆಗರೆಯೆ ಸಕಲ ವಿನಿ ಯೋಗದವರನು ಕಳುಹುವಾಗಲೆಚ್ಚರಿಕೇ3 ಸರಸಿಜೋದ್ಭವನು ದಿಕ್ಪಾಲನಾರದ ಧ್ರುವನು ಗರುಡ ಗಂಧರ್ವ ವಿದ್ಯಾಧರರು ಅನಿಲಜನು ಪರಮ ಭಕ್ತಿಯಲಿ ಊಳಿಗಕೆ ಬಂದೈದಾರೆ ಧರೆಗಧಿಕ ವೈಕುಂಠ ಚನ್ನ ಕೇಶವ ಚಿತ್ತೈಸೋ 4
--------------
ಬೇಲೂರು ವೈಕುಂಠದಾಸರು
ಹಾಕುವೆ ಸುಮಾಲಾ ಸುಶೀಲಾ ಜೀವದೊಡೆಯ ಪರದೇವತೆ ನೀನೆಂಬೊ ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 1 ಸರಸಿಜನಾಭನೆ ಸುರದೊಡೆಯನೆ ನೀ ವಿರಚಿಸಿದಂಥ ಪರಿಮಳ ಹಾರುವ ಸರುವ ಹಾರವ ತಂದು ಕೊರಳಿಗೆ ಹಾಕುವೆ 2 ಶಾಮಸುಂದರ ನಿಮ್ಮ ನೇಮದಿ ನಡೆವೆ ನಾ ಭಾಮೆಯನಗಲದೆ ಪ್ರೇಮದಿ ಪೊರೆಯೆಂದು 3
--------------
ಶಾಮಸುಂದರ ವಿಠಲ
ಹಾಕುವೆ ಸುಮಾಲಾ ಸುಶೀಲಾ ಸ್ವೀಕರಿಸೈ ಕರುಣಾಕರ ಕಂಠದಿ ಪ ಅರಳಿದ ಮಲ್ಲಿಗೆ ಸುರಸು ಶಾವಂತಿಗೆ ಪರಿಮಳ ಪುಷ್ಪದ ಸರವನು ಶಾವಂತಿಗೆ ಪರಿಮಳ ಪುಷ್ಪದ ಸರವನು ವಿರಚಿಸಿ 1 ಜೀವದೊಡೆಯ ಪರದೇವತೆ ನೀನೆಂಬೊ ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 2 ಶಾಮಸುಂದರ ನಿನ್ನ ನೇಮದಿ ನೆನೆವೆನು ಭಾಮೆಯನಗಲದೆ ಪ್ರೇಮದಿ ಪೊರೆ ಎಂದು 3
--------------
ಶಾಮಸುಂದರ ವಿಠಲ
ಹೂ ಬೇಕೆ ಹೂವು ಪರಿಮಳದ ಹೂವು ಪ ಪರಮ ಪುರುಷ ನಮ್ಮ ಕೃಷ್ಣನ ತೋಟದ ಅ.ಪ ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಮಲ್ಲೆ ಗುಲಾಬಿ ತಾವರೆ ಪಾರಿಜಾತ ಎಲ್ಲ ವಿಧದ ಮನಕ್ಲೇಶವ ಕಳೆಯಲು ಪುಲ್ಲಲೋಚನ ನಮ್ಮ ಕೃಷ್ಣನು ಧರಿಸಿದ 1 ದಾರದಿ ಕಟ್ಟಿಲ್ಲ ಮಾರು ಹಾಕುವುದಿಲ್ಲ ಕೇರಿ ಕೇರಿಗಳಲ್ಲಿ ಮಾರುವುದಲ್ಲ ಭೂರಿಭಕುತಿ ಎಂಬ ಭಾರಿಯ ಬೆಲೆಗಿದ ಮಾರೆಂದು ಪೇಳಿದ ಶೌರಿಯ ಸೊಬಗಿನ2 ರಂಗು ರಂಗುಗಳಿಂದ ಕಂಗೊಳಸುವ ಸ್ವಚ್ಛ ಬಂಗಾರದ ಛವಿ ಹಂಗಿಸುವ ಸಿಂಧು ಪ್ರಸನ್ನ ಶ್ರೀ ಮಾಧವ ನಂಘ್ರಿಯ ಸಂಗದಿ ಮಂಗಳಕರವಾದ 3
--------------
ವಿದ್ಯಾಪ್ರಸನ್ನತೀರ್ಥರು
139-4ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಗುರುಗಳು ಏಕಾಂತದಲ್ಲಿ ಇತ್ತ ಉಪದೇಶಮರೆಯದೇ ಅನುಸರಿಸಿ ಭೀಮರತಿಯನ್ನುಸೇರಿ ವಿಹಿತದಿ ಸಂಕಲ್ಪಾದಿಗಳ ಮಾಡಿನೀರಲ್ಲಿ ಇಳಿದರು ಶ್ರೀನಿವಾಸಾಚಾರ್ಯ 1ಸರ್ವ ಜಗತ್ಪಾಲ ಶ್ರೀ ಪಾಂಡುರಂಗವಿಠ್ಠಲನುಪ್ರವಾಹ ಸುಳಿಯಿಂದ ಬಡುಗಾತ್ರ ಭಕ್ತನ್ನಕಾಯ್ವುದಕೆ ಗಂಡಾ ಶಿಲಾ ನಿರ್ಮಿಸಿದ ಅಲ್ಲಿದೇವಗುರುಸ್ಮರಣೆಯಿಂ ಇಳಿದರಾಚಾರ್ಯ2ನರಸಿಂಹ ವಿಠ್ಠಲದಾಸರು ತಂದೆಯಗುರುಗಳು ಗೋಪಾಲ ವಿಠ್ಠಲ ದಾಸರಪರಮಗುರುಗಳುವಿಜಯವಿಠ್ಠಲ ದಾಸರಪುರಂದರದಾಸರಾಜರ ಸ್ಮರಿಸಿದರು3ತೀರ್ಥಾಭಿಮಾನಿಗಳ ಭಾರತೀಪತಿಯಪದುಮೆ ಪದ್ಮೇಶ ಫಂಡರಿ ನಾಥ ಹರಿಯಮೋದಚಿನ್ಮಯ ಜಗನ್ನಾಥನ ಸ್ಮರಿಸುತ್ತಉದಕಪ್ರವಾಹದೊಳು ತನುವ ಅದ್ದಿದರು4ಸೀನಪ್ಪ ಶ್ರೀನಿವಾಸ ಶ್ರೀನಿವಾಸಪ್ಪ ಈಶ್ರೀನಿವಾಸಾಚಾರ್ಯ ಒಂದು ಸಲ ಮುಳುಗೇಳೆತನುಗತ ಒಳ ಹೊರಗಿನಕಲುಷಕಳೆದವುಪುನಃ ಮುಳಗೇಳಲು ಸುಪವಿತ್ರರಾದರು 5ಪುನಃ ಮುಳುಗಿ ಎದ್ದು ಅ ಘ್ರ್ಯವ ಅರ್ಪಿಸಲುಇನನ ಮಂಡಲದಿ ವರವಾಯು ಅಧಿಷ್ಠಾನದಲಿಶ್ರೀ ನಾರಾಯಣ ಸರ್ವಜನ ಹಿತಕರನಆನಂದ ಚಿನ್ಮಾತ್ರ ವಪುಷನ್ನ ಸ್ಮರಿಸಿದರು 6ಋಕ್ಸಾಮ ವೇದಗಳಿಂದ ವಾಣೀವಾಯುಸುಖಪೂರ್ಣ ನಾರಾಯಣನ ಸ್ತುತಿಸುವರುಆಕಳಂಕ ಉನ್ನಾಮಸಾಮನಾಮ ಹೀಂಕಾರಶ್ರೀಕೃತಿಪತಿ ಪ್ರದ್ಯುಮ್ನಾದಿ ಸ್ವರೂಪ 7ಸಪ್ತಕಾಲದಿ ಸಪ್ತಸಾಮ ಪ್ರತಿಪಾದ್ಯನುಸಪ್ತಸ್ವರೂಪನು ಆದಿತ್ಯಾಂತಸ್ತಪ್ರದ್ಯುಮ್ನವಾಸುದೇವವರಾಹನಾರಾಯಣಅನಿರುದ್ಧ ನರಸಿಂಹ ಸಂಕರುಷಣ 8ಪರಮಗುರುವಿಜಯದಾಸಾರ್ಯರ ಪ್ರೇರಣೆಯಿಂದಗುರುಗಳು ಗೋಪಾಲದಾಸಾರ್ಯರುಅರುಪಿದಅನುಸಂಧಾನಕ್ರಮದಿಂದಲೇಗುರುತಮ ಸಮೀರನಲಿ ಹರಿಯ ಸ್ಮರಿಸಿದರು 9ಸೂರ್ಯನೊಳಿಪ್ಪಸಮೀರಅಧಿಷ್ಠಾನಸ್ಥಸೂರಿಜನ ಪ್ರಾಪ್ಯ ಋಕ್ ಸಾಮಾದಿಸ್ತುತ್ಯಸೂರ್ಯತೇಜಃ ಪುಂಜ ಸ್ಫೂರ್ತಿದ ಜಗತ್ಕರ್ತ ಶ್ರೀಶ್ರೀನಾರಾಯಣಗಘ್ರ್ಯ ಅರ್ಪಿಸಲು ಒಲಿದ 10ಝಗಝಗಿಪ ತೇಜಸ್ಸು ಶಿರೋಪಕಂಡರುಮೂಗಿನಿಂದೊಂದಡಿ ಶಿರದ ಮೇಲೆಜಗನ್ನಾಥವಿಠ್ಠಲ ಎಂದು ಪ್ರಜ್ವಲಿಸಿತುಹೇಗೆ ವರ್ಣಿಸುವೆ ಆ ಅದ್ಭುತ ದೃಶ್ಯ 11ಸರ್ವ ಜಗದ್ರಕ್ಷಕ ವಿಠ್ಠಲನು ತತ್ಕಾಲಪ್ರವಾಹವ ತಡೆಯಲು ನಿರ್ಮಿಸಿದ ಶಿಲೆಯುಪ್ರಜ್ವಲಿಪ ಈ ದಿವ್ಯ ಹರಿನಾಮ ಅಂಕಿತಕ್ಕೆಐವತ್ತು ಅಂಗುಲ ಹಿಂದೆ ನಿಂತಿತ್ತು 12ಕ್ಷಣಮಾತ್ರದೊಳಗೆ ಈತಟಿತ್ಕೋಟಿನಿಭಜ್ಯೋತಿಫಣೆಮುಂದೆ ನಿಂತಿತು ಆಗ ಆಚಾರ್ಯಚೆನ್ನಾಗಿ ನೋಡಿದರುಹರಿಇಚ್ಛಾಶಕ್ತಿಯಿಂಶ್ರೀನಿವಾಸವಿಜಯಗೋಪಾಲ ವಿಠ್ಠಲನ13ಶ್ರೀ ಶ್ರೀನಿವಾಸನೇವಿಜಯವಿಠ್ಠಲನಾಗಿಶ್ರೀ ಶ್ರೀನಿವಾಸ ಗೋಪಾಲ ವಿಠ್ಠಲನಾಗಿಶ್ರೀ ಶ್ರೀನಿವಾಸ ಶ್ರೀ ಜಗನ್ನಾಥ ವಿಠ್ಠಲನಾಗಿಶಿರಿ ಜಗನ್ನಾಥ ದಾಸಾರ್ಯರು ನೋಡಿದರು 14ಶ್ರೀ ಶ್ರೀನಿವಾಸನೆ ಪ್ರಸನ್ನನು ಆಗಿತೋರಿಹನು ಜಗನ್ನಾಥ ವಿಠಲನೆನಿಸಿತಿರುಪತಿ ಶ್ರೀನಿಧಿಯೇ ಪಂಡರಿ ವಿಠ್ಠಲನುಸೂತ್ರನೋಡಿ ನಸ್ಥಾನ ತೋಪಿ15ಶ್ರೀ ರುಕ್ಮಿಣೀಪತಿ ಪರಂಜ್ಯೋತಿ ಪರಂಬ್ರಹ್ಮಉರುಅಖಿಳಸಚ್ಛಕ್ತ ಜಗನ್ನಾಥ ವಿಠ್ಠಲಶಿರಿ ಜಗನ್ನಾಥದಾಸರ ಹೃದಯ ¥ದ್ಮದೊಳುಸೇರಿದನು ಜ್ವಲಿಸುತಿಹ ಸರ್ವೋತ್ತಮ ಅಲ್ಲಿ 16ಎಂಟುಅಕ್ಷರಮೂಲಮಂತ್ರದಿ ನಾರಾಯಣನವಿಠ್ಠಲ ಹಯಗ್ರೀವ ವೆಂಕಟೇಶಾದಿಷಡಕ್ಷರಿ ವಿಷ್ಣು ರಾಮ ಕೃಷ್ಣಾದಿಗಳಕ್ರೋಡನರಸಿಂಹಾದಿಗಳನು ಜಪಿಸಿದರು17ಗುರುಪರಮಗುರುಪೇಳ್ದ ರೀತಿಯಲಿ ಜಪಚರಿಸಿಶ್ರೀ ರುಕ್ಮಿಣಿ ವಿಠ್ಠಲ ಮಂದಿರಕೆ ಪೋಗಿಪುರಂದರಾರ್ಯರ ನಮಿಸಿಗುರುಪರಮಗುರುಗಳಸ್ಮರಿಸಿ ಒಳಪೊಕ್ಕರು ವಿಠ್ಠಲನ್ನ ನೋಡೆ 18ಶ್ರೀ ಮಧ್ವರಮಣ ನಿನ್ನ ಅದ್ವಿತೀಯ ಮಹಿಮೆಈ ಮಹೋತ್ತಮಕೃತಿಪುರಂದರದಾಸರದುಅಮಲ ಭಕ್ತಿಯಲ್ಲಿದನ್ನ ಅರ್ಥ ಅರಿತು ಪಠಿಸಿಶ್ರೀಮಂದಿರದೊಳು ಪ್ರವೇಶ ಮಾಡಿದರು 19ತ್ರಿಜಗದೀಶನಪಾದಪದ್ಮಗಳ ನೋಡುತ್ತನಿಜಭಕ್ತಿ ಭಾವದಲಿ ಸಾಷ್ಟಾಂಗ ನಮಿಸಿಅಜಭವೇಂದ್ರಾದಿ ಸುರವಂದ್ಯನ್ನ ಕೇಶಾದಿರಾಜೀವಪಾದಾಂತ ದರುಶನ ಮಾಡಿದರು20ಜ್ವಲಿಸುವ ಕಿರೀಟ ಸುಳಿಗುರುಗಳು ಫಣಿಯ ತಿಲಕಬಿಲ್ಲುವೋಲ್ ಸುಂದರ ಭ್ರೂ ಮುಖಕಮಲಜಲಜೇಕ್ಷಣ ಮುಗುಳುನಗೆಯು ತಟಿದಂದಿಪೊಳೆವ ಕುಂಡಲಕರ್ಣ ಕಂಬುಗ್ರೀವ 21ವನಮಾಲೆ ಎಳೆ ತುಳಸಿದಳ ಹಾರ ಕೊರಳಲ್ಲಿಘನಬಾಹು ವಿಸ್ತಾರವಕ್ಷ ಶ್ರೀವತ್ಸಸ್ವರ್ಣಮಣಿ ಗ್ರೈವೇಯಕೌಸ್ತುಭರತ್ನವುಕಣ್ಣಾರ ಕಾಣಲಾನಂದ ಸೌಂದರ್ಯ 22ಮೂರುಗೆರೆ ಉದರದಲಿವನರುಹನಾಭಿಯುಕರಗಳು ಕಟಿಯಲ್ಲಿ ಶಂಖಾರವಿಂದಪುರುಟಮಣಿ ಗಣಸೂತ್ರ ಪೀತಾಂಬರ ಉಡಿಸ್ಫುರದ್ರತ್ನ ನೂಪುರ ಸಮಪಾದದ್ವಯವು 23ತಟಿತ್ಕೋಟಿನಿಭ ತನ್ ಕಾಂತಿಯಲಿ ಜ್ವಲಿಸುವಸಾಟಿಯಿಲ್ಲದ ಸುಂದರಾಂಗ ಶ್ರೀರಮಣವಿಠ್ಠಲ ಕೃಪಾನಿಧಿ ಶರಣಜನ ಪಾಲನ್ನಹಾಡಿ ಸ್ತುತಿಸಿದರು ಜಗನ್ನಾಥ ದಾಸಾರ್ಯ 24ಫಣಿಪಶಾಯಿಯ ಅನಂತ ಪದ್ಮನಾಭನು ತನ್ನಆನಂದಲೀಲೆಯಲಿ ಜಗವ ಪಡೆಯುವನುಆನಂದಲೀಲೆಯಲಿ ಅವತಾರ ರೂಪಗಳತಾನೇ ಪ್ರಕಟಿಸಿ ಸಜ್ಜನರ ಪಾಲಿಸುವ 25ದೇಶಗುಣಕಾಲ ಅಪರಿಚ್ಛಿನ್ನನು ಅನಂತನುಶ್ರೀಶಸರ್ವೇಶ ಚಿನ್ಮಯನುಅನಘಐಶ್ವರ್ಯ ಪೂರ್ಣಜಗದೇಕ ಪಾಲಕನುಅಸಮ ಸರ್ವೋತ್ತಮನು ಸುಖಮಯನು ಸುಖದ 26ಮೀನಕೂರ್ಮಸ್ತ್ರೀ ಅಜಿತ ಧನ್ವಂತರಿಕ್ರೋಢಶ್ರೀನಾರಸಿಂಹ ವಟುಭೃಗು ರಾಮರಾಮಕೃಷ್ಣ ಜಿನಸುತ ಕಲ್ಕಿ ಠಲಕ ವೆಂಕಟರಮಣಆನಂದಚಿತ್ತನು ಅನಂತ ಅವತಾರ 27ದಾಸೋಹಂ ತವ ದಾಸೋಹಂ ಎಂದುದಾಸವರ್ಯರು ಬಿನ್ನೈಸಿ ಸ್ತುತಿಸಿದರುನಸುನಗುತ ವಾತ್ಸಲ್ಯದಿಂದ ವಿಠ್ಠಲನುವಿಶೇಷಾಪರೋಕ್ಷ ಅನುಗ್ರಹಿಸಿದನುದಯದಿ 28ಸೌದಾಮಿನಿಗಮಿತ ವಿದ್ಯುತ್ ಕಾಂತಿಯಿಂದದಿಕ್ಕು ವಿದಿಕ್ಕುಗಳ ರಂಜಿಸುವರೂಪದಿಂದ ಪಾಲ್ಗಡಲಲಿ ಆವಿರ್ಭವಿಸಿದ ಶ್ರೀಇಂದಿರೆಯೆ ರುಕ್ಮಿಣಿ ಸೌಂದರ್ಯಪೂರ್ಣೆ 29ಮಾಯಾಜಯಾಕೃತಿಶಾಂತಿ ಸೀತಾಲಕ್ಷ್ಮಿತೋಯ ಜಾಲಯ ಚಿತ್ಪ್ರಕೃತಿ ಭೂದುರ್ಗಾತೋಜಯಾಕ್ಷಿವೇದವತಿದಕ್ಷಿಣಾ ಶ್ರೀಜಯಂತಿ ಸತ್ಯಾರುಕ್ಮಿಣಿ ಸುಂಧುಕನ್ಯಾ 30ಸರ್ವ ಜಗಜ್ಜನನಿಯು ಸರ್ವ ವಿಧದಲಿ ಹರಿಯಸೇವಿಸುತಿಹಳು ಸದಾ ನಿತ್ಯಾವಿಯೋಗಿನಿದೇವದೇವೋತ್ತಮ ರಾಜರಾಜೇಶ್ವರನು ವಿಠ್ಠಲನುದೇವಿ ಶ್ರೀ ರಾಜರಾಜೇಶ್ವರಿಯು ರುಕ್ಮಿಣಿಯು 31ಜ್ವಲಿಸುವ ಮುತ್ತು ನವರತ್ನದಿ ಕಿರೀಟಒಳ್ಳೆ ಪರಿಮಳ ಹೂವು ಮುಡಿದಂತ ತುರುವುಫಾಲದಲಿ ಶ್ರೇಷ್ಠತಮ ಕಸ್ತೂರಿ ತಿಲಕವುಪೊಳೆವ ಪೂರ್ಣೇಂದು ನಿಭ ಮೂಗುಬೊಟ್ಟು 32ಅಂಬುಜಾಕ್ಷಿ ದಿವ್ಯ ಮುತ್ತಿನ ತೋಡುಗಳುಗಂಭೀರ ಸೌಭಾಗ್ಯದ ಕೃಪಾನೋಟಕಂಬುಕಂಠದಿ ಮಂಗಳಸೂತ್ರಕರಯುಗದಿಅಂಬುಜವರಕೊಡುವಅಭಯಹಸ್ತಗಳು33ಕಂಧರದಲಿ ಪರಿಮಳಕಮಲಮಾಲಾಪೀತಾಂಬರ ದಿವ್ಯ ಕುಪ್ಪಸ ಮೇಲ್ಪಟ್ಟೆವಸ್ತ್ರವು ಸ್ವರ್ಣಸರ್ವಾಭರಣ ಭೂಷಣವುಪಾದಉಂಗುರ ಪೆಂಡೆ ಕಂಡು ನಮಿಸಿದರು34ಜಗನ್ನಾಥ ವಿಠ್ಠಲನೂ ಜಗನ್ಮಾತೆ ರುಕ್ಮಿಣಿಯೂಜಗನ್ನಾಥದಾಸರಿಗೆ ಔತಣ ಮಾಡಿದ್ದುಜಗತ್ತಲ್ಲಿ ಭಕ್ತಜನರೆಲ್ಲ ಪೇಳ್ತಿಹರುಜಗದೀಶ ಪಂಢರೀ ವಿಠ್ಠಲನ ಮಹಿಮೆ 35ಕೇಶವ ನಾರಾಯಣಮಾಧವಗೋವಿಂದಶ್ರೀಶ ವಿಷ್ಣು ಮಧುಸೂದನ ತ್ರಿವಿಕ್ರಮಈಶ ವಾಮನ ಶ್ರೀಧರ ಹೃಷಿಕೇಶರಮೆಯರಸಪದ್ಮನಾಭದಾಮೋದರ36ಸಂಕರುಷಣ ವಾಸುದೆವ ಪ್ರದ್ಯುಮ್ನ ನಮೋಅಕಳಂಕ ಅನಿರುದ್ಧ ಪುರುಷೋತ್ತಮನಿಷ್ಕಳಅಧೋಕ್ಷಜನರಸಿಂಹಅಚ್ಯುತಶ್ರೀಕರ ಜನಾರ್ದನ ಉಪೇಂದ್ರ ಹರಿಕೃಷ್ಣ 37ರಮಾಪತಿ ರಮಾಯುತನು ಶ್ರೀಹರಿಯ ರೂಪಗಳಬ್ರಹ್ಮವಾಯು ವಾಣೀಭಾರತಿ ಉಮೇಶಉಮಾ ತತ್ವದೇವದಿಕ್ಪಾಲಕರು ಗಂಗಾಕರ್ಮಮಾನಿ ಪುಷ್ಕರಾದಿಗಳೊಳ್ ತಿಳಿದರು 38ಭೋಜನ ಪದಾರ್ಥದಲು ತದ್ಗತ ಶಬ್ದಂಗಳಲುಭೋಜ್ಯಗಳ ಬಡುಸುವರಲ್ಲೂ ಕ್ಷೇತ್ರದಲ್ಲೂಭೋಜಭಿಮಾನಿಗತ ಖಂಡಾಖಂಡಗನುಭಜನೀಯ ಸ್ಥೂಲಭುಕ್ ಅವ್ಯಯನ ಕಂಡರು 39ಕರುಣಾಬ್ಧಿ ಶ್ರೀ ಹರಿಯ ಔದಾರ್ಯ ಏನೆಂಬೆಶ್ರೀ ಶ್ರೀನಿವಾಸನು ಅಂದು ತಿರುಪತಿಯಲ್ಲಿಶಿರಿ ವಿಜಯಾರ್ಯರ ರೂಪದಿ ಪ್ರೇರಿಸಿಧಾರೆಯೆರಿಸಿದ ಆಯಸ್ ಗುರುಗಳ ಕೈಯಿಂದ 40ಶ್ರೀ ಶ್ರೀನಿವಾಸನ ಮಹಾದ್ವಾರಕೆದುರಾಗಿಹಾರೆ ಕಲ್ಲುಮಂಟಪ ಆಗ್ನೇಯ ದಿಕ್ಕುಎರಡನೆಯದೋ ಮೂರನೆಯದೋ ಅಂಕಣದ ಖೋಲಿಹರಿದಾಸರು ಇದ್ದ ಮುಖಾಮಿ ಬಿಡಾರ 41ಎಳೆಕೆಂಪು ರೋಜ ಊದಾವರ್ಣದಿ ಅಂಚುಬಿಳಿರೇಷ್ಮೆ ವಸ್ತ್ರವ ಮೇಲ್ ಹೊದ್ದುಕೊಂಡುಮಲಗಿ ಚಲಿಸದೆ ನಿತ್ರಾಣನಾಗಿದ್ದವಗೆಒಲಿದು ಆಯುರ್ದಾನ ಮಾಡಿಸಿದ ಕರುಣಿ 42ಗುರುಗಳು ಗೋಪಾಲದಾಸರ ರೂಪದಿಂದ ಬಂದುಶಿರಿವರನು ತಾನೇನೆ ಅನ್ನಪ್ರಸಾದಕರದಲ್ಲಿ ಇತ್ತನು ಅವನೇವೆಇಂದುಶಿರಿಸಹ ಅಮೃತಾನ್ನ ಔತಣವನ್ನಿತ್ತ 43ಶಿರಿಯ ವಾತ್ಸಲ್ಯ ದಯೆ ಏನೆಂದು ಪೇಳಲಿಚಾರುದೇಷ್ಣಾಹ್ವಯ ತನ್ನಸುತ ಈಗವರಗೋಪಾಲದಾಸರುಅವರಶಿಷ್ಯರಿವರೆಂದು ಪ್ರೀತಿಯಲಿ ಔತಣ ಮಾಡಿಹಳು 44ಈ ರೀತಿ ಹರಿಶಿರಿ ಇತ್ತ ಔತಣ ಮತ್ತುಹರಿಯ ಕೈಯಿಂದ ಹರಿಗರ್ಪಿತ ಮಾಲಾದಿಹರಿಪ್ರಸಾದವ ಕೊಂಡು ಫಂಡರಿಪುರದಿಂದಹೊರಡಲಾದರು ಜಗನ್ನಾಥದಾಸಾರ್ಯ 45ನರಸಿಂಹಾದಾಸಾರ್ಯರಾದ ತನ್ನ ತಂದೆಗೆಗುರುಗಳುಪುರಂದರದಾಸಾರ್ಯರೆಂದುಪರಮಗುರುವಿಜಯದಾಸಾರ್ಯರ ಗುರುಯೆಂದುಚರಣವಂದಿಸಿ ಹೊರಡೆ ಅಪ್ಪಣೆ ಕೊಂಡರು46ಪರಮಗುರು ವಿಜಯದಾಸಾರ್ಯರ ಸ್ಥಳಕೆಸ್ಮರಣೆ ಪೂರ್ವಕ ಮನಸಾ ಪೋಗಿ ಸನ್ನಮಿಸಿಗುರುಗಳಚರಣಆಕಾಂಕ್ಷಿಗಳು ತ್ವರಿತದಿಹೊರಟರು ಶ್ರೀ ಜಗನ್ನಾಥನ್ನ ಸ್ಮರಿಸುತ್ತ 47ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 48- ಇತಿ ಪಂಚಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಅರಿಯಧಮನ ಸಂಗ ಕರಗಿದ್ದ ಹಿತ್ತಾಳೆಒರೆದು ನೋಡಲು ಬಣ್ಣ ಬರುವುದೇ ಹೇಳಿ ಪ.ಮಂಜುನೀರನೆ ತಂದು ತಂದನವ ಹದಮಾಡಿಒಂದಾಗಿ ಕೂಡಿ ಪರಿಮಳವ ಬೇಗಹಂದಿಯನು ಕರೆದು ಸೆಲೆ - ಪೊಸಲು ಅದು ತನ್ನಗಂಜಲವ ನೆನೆನೆನೆದು ಹೋಹಂತೆ ರಮಣಿ 1ಚೀನಿಕೋಲನೆ ತಂದು ಕೊರೆದು ತುಂಡನೆ ಮಾಡಿಶ್ವಾನನನು ಕರೆದು ಬಾಯೊಳಗಿರಿಸಲುತಾನದನು ಸವಿಸವಿದು ನೋಡಲರಿಯದ ತನ್ನದನದ ಮೂಳೆಯ ನೆನೆದು ಹೋಹಂತೆ ರಮಣಿ 2ಅಂತರವನರಿಯದಲೆ ಮಿಯಾ ಹೋಗುವುದರಿಂದಅಂತೆ ಇರುವುದೇ ಲೇಸು ಬಹು ಪ್ರೌಢರುಚಿಂತಿತಾರ್ಥವನೀವ ಸುಗುಣ ಪುರಂದರವಿಠಲನೆಂತೆಂತು ಭಜಿಸಿದರೆ ಅಂತಂತೊಲಿವನಲ್ಲರೆ 3
--------------
ಪುರಂದರದಾಸರು