ಒಟ್ಟು 324 ಕಡೆಗಳಲ್ಲಿ , 73 ದಾಸರು , 252 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೆಚ್ಚಿದೆ ಯಾಕಮ್ಮ ಲಕ್ಕುಮಿದೇವಿ ಸಚ್ಚಿದಾನಂದಾತ್ಮ ಹರಿಯೆಂದರಿಯದಲೆ ಪ ರಕ್ಕಸಾಂತಕ ಹರಿಗೆ ಸೊಗಸಿನ ತಕ್ಕ ವಾಹನವಿಲ್ಲದಿದ್ದೊಡೆ ಹಕ್ಕಿಯ ಹೆಗಲೇರಿ ತಿರುಗುವ ಚಿಕ್ಕ ಬುದ್ಧಿಯ ಚಲುವ ಕೃಷ್ಣಗೆಅ.ಪ ನೀರೊಳು ಮುಳುಗಿ ಭಾರವಪೊತ್ತು ಧರಣಿಯ ಕೋರೆದಾಡೆಲಿ ತಂದ ಕ್ರೂರ ರೂಪನಿಗೆ ಮೂರಡಿ ಭೂಮಿಯ ಬೇಡಿ ಕ್ಷಿತಿಪರ ಕೊಂದು ನಾರು ವಸ್ತ್ರಗಳುಟ್ಟು ಸೀರೆ ಕದ್ದವಗೆ ಶೂರತನದಲಿ ತ್ರಿಪುರರಗೆದ್ದು ವಿ- ಹಾರ ಮಾಡ್ಡ ಏರ್ದ ಕುದುರೆಯ ಮಾರಪಿತ ಮಧುಸೂಧನನ ವ್ಯಾ- ಪಾರ ತಿಳಿಯದೆ ವಾರಿಜಾಕ್ಷಿ 1 ಹಾಸಿಕಿಲ್ಲದೆ ಹಾವಿನ ಮೇಲೆ ಮಲಗುವ ಹೇಸಿಕಿಲ್ಲದೆ ಎಂಜಲ್ಹಣ್ಣನೆ ಮೆಲುವ ದೋಷಕಂಜದೆ ಮಾವನ ಕೊಂದು ಮಧುರೆಲಿ ದಾಸಿ ಕುಬ್ಜೆಯ ಡೊಂಕು ತಿದ್ದಿ ಪರಿಮಳ ಪೂಸಿ ಸೋಸಿನಿಂದಲಿ ಕರಡಿ ಮಗಳನು ಯೋಚಿಸದೆ ಕೈಪಿಡಿದು ಸೌಳ- ಸಾಸಿರದ ಸತಿಯರನು ಕೂಡಿದ ವಾಸುದೇವನ ಮೋಸವರಿಯದೆ 2 ಮೋಸದಿಂದಲಿ ಬಂದು ಶಿಶುವನೆತ್ತಿದ ದೈತ್ಯ ದಾಸಿಯ ಕೊಂದ ಉದಾಸೀನದಿಂದ ಗ್ರಾಸಕಿಲ್ಲದೆ ಗೋಪೇರ ಮನೆಗಳ ಪೊಕ್ಕು ಮೀಸಲು ಬೆಣ್ಣೆ ಪಾಲ್ಮೊಸರನೆ ಸವಿದು ರಾಸಕ್ರೀಡೆಯ ವನಿತೆಯರ ಮನ ದಾಸೆ ಪೂರೈಸಿ ರಾತ್ರಿ ವೇಳದಿ ವಾಸುದೇವನು ಓರ್ವ ಸತಿಯೊಳು ಕ್ಲೇಶಪಡಿಸದೆ ಮೋಸವರಿಯದೆ3 ಅಖಿಳ ಮಹಿಮನೆನೆ ಊಳಿಗ ಮಾಡಬಹುದೆ ಚಂಡನಾಡುವ ನೆವದಿಂದ ಕಾಳಿಂಗನ ಮಂಡೆಯ ತುಳಿದು ನಾಟ್ಯವನಾಡಬಹುದೆ ಗಂಡುಗಲಿ ಅರ್ಜುನನು ರಥಕೆ ಬಂಡಿಬೋವನ ಮಾಡಬಹುದೆ ಪುಂಡಲೀಕನು ಇಟ್ಟೆಗೆಯ ಮೇ- ಲ್ಪಾಂಡುರಂಗ ನಿಲಿಸಬಹುದೆ4 ಕಮಲಾಕ್ಷ ಯಾಗಶಾಲೆಗೆ ಗೋಪರನು ಕಳುಹಿ ರಮೆಯರಸಗೆ ಬಹಳ್ಹಸಿವೆನುತಿರಲು ಕಮಲಾಕ್ಷನ ನುಡಿ ಗಮನಿಸದೆ ರುಷಿವರರಿಗೆ ಕಮಲ ಮುಖಿಯರೆಲ್ಲ ಪರಮ ಸಂಭ್ರಮದಿಂದ ಕಮಲನೇತ್ರಗೆ ವಿವಿಧ ಭಕ್ಷಗ- ಘೃತ ಪರಮಾನ್ನಗಳನು ಕಮಲನಾಭ ವಿಠ್ಠಲಗೆ ಅರ್ಪಿಸಿ ಶ್ರಮವ ಕಳೆದೈದಿದರು ಮುಕ್ತಿಯ 5 ಯಾಕೆ ಮೆಚ್ಚಿದೆಯಮ್ಮ ಲೋಕ ಸುಂದರಿಯೆಶ್ರೀ ಕಮಲಜಪಿತ ಲೋಕ ಮೋಹಕನ
--------------
ನಿಡಗುರುಕಿ ಜೀವೂಬಾಯಿ
ಯಾಕೆ ದಯವುಬಾರದು ಗೋಪಾಲಕೃಷ್ಣಾ ಪ ಕರುಣನಾದ ದೇವ ಅ.ಪ ಬಿಡದಾನಂದಾದಿ ಇನ್ನು ಇಂದಿರೆ ರಮಣ 1 ನಿನ್ನ ಧ್ಯಾನಾವೇಗತಿ ಎನ್ನುತ ನೀ ಎಂದೆಂದಿಗಾಪ್ತನು ಛಲದಾನಿ ಇರುವದು ನಿನಗೆ ಎನ್ನ ದಿವ್ಯದಾನಿಗಳರಸ 2 ತ್ರಿಜಗವಂದಿತಧೊರಿಯೆ ಸದ್ಗುಣಶೀಲ ಸುಜನರ ಭಾಗ್ಯನಿಧಿಯೆ ಜಲದೊಳು ಯಿ ----- ಸುರನುತ-----ತ ಪರಾಕ್ರಮ 3
--------------
ಹೆನ್ನೆರಂಗದಾಸರು
ಯಾರಿಗುಸುರಲಿ ಸಾರತತ್ವ ವಿ ಚಾರ ಭವದೂರಾ ಪ ಚಾರು ಸೇರಿ ಮುಕ್ತಿಯ ಸೊರೆವಿಡಿವುದಿನ್ಯಾರಿಗುಸುರಲಿ ಅ.ಪ. ಶ್ರೀ ಗುರುನಾಥನ ಕಟಾಕ್ಷದಿ ತ್ಯಾಗಿಸಿ ಸಂಸಾರದ ಗೊಡವೆಯ ಯೋಗಿಯಂದದೊಳಿದ್ದು ಆಗಮ ನಿಗಮಾರ್ಥಕೆ ಸಿಲುಕದ ಯೋಗ ಘನವನೊಳಗೊಂಡಿಹ ಅಂಗದ ಯೋಗಾನಂದದುಯ್ಯಾಲೆಯ ತೂಗಿ ನೆಲೆಗೆ ನಿಂದಿಹ ನಿಜಸುಖವಿನ್ಯಾರಿಗುಸುರಲಿ 1 ಉದರದ ನಾಭಿಯ ನೀಳದ ತುದಿ ಹೃದಯ ವಾರಿಜದೊಳಗಿಪ್ಪ ಶಿವ ಸದನ ಲಿಂಗವ ಕಂಡು ಅದು ಇದು ಬೇರ್ಪಡಿಸದೆ ಹೃದಯದಿ ಚದುರ ಸಾಧು ಸತ್ಪುರುಷರ ಮತದಲಿ ಮುದದಿ ಮುಕ್ತಿ ಮಾನಿನಿಗೆ ಮಂಗಲ ಮದುವೆಯಾದ ಮನಸಿನ ಮಹಾ ಗೆಲವಿನ್ಯಾರಿಗುಸುರಲಿ 2 ನೆತ್ತಿಯೊಳ್ ಹೊಳೆ ಹೊಳೆವ ಚಿದಾ ದಿತ್ಯನ ಪ್ರಕಾಶವ ಕಂಡು ಚಿತ್ತದಿ ನಲಿದಾಡಿ ಉತ್ತಮಾನಂದಾತ್ಮರಸ ಸವಿ ಯುತ್ತ ಚಪ್ಪರಿದು ಶರಣರ ಮೊತ್ತದೊಡನೆ ಕುಣಿಕುಣಿದು ಬ್ರಹ್ಮನ ಗೊತ್ತು ತಿಳಿದ ಗುರುತಿನ ವಿಸ್ತರವಿನ್ಯಾರಿಗುಸುರಲಿ 3 ಕುಂದುವ ಕಾಯದ ಸುಖಿಕೆಳೆಸದೆ ಹೊಂದಿದ ಸರ್ವಾಂಗದ ಶೋಧಿಸಿ ಒಂದೇ ದೇವನೊಳಾಡಿ ವಂದಿಸಿ ಗುರುಹಿರಿಯರ ಚರಣಕೆ ಹೊಂದಿ ಹೊಂದಿ ಓಲಾಡುವ ಅರಿಗಳ ಬಂದಿಯೊಳಗೆ ಸಿಲುಕದೆ ಬ್ರಹ್ಮಾ ನಂದರಸಾಮೃತ ಸವಿದಿಹ ಸುಖವಿನ್ಯಾರಿಗುಸುರಲಿ 4 ಹಲವು ಯೋನಿಯೊಳಗೆ ಹೊರಳ ಕುಲ ಛಲ ಶೀಲವ ಮೂರಡಗಿಸಿ ಸುಲಭ ವಂಶದೊಳುಂಡು ಮಲಿನ ಮಾಯಾಮೋಹಕೆ ಸಿಲುಕದೆ ಬಲೆಯ ಛೇದಿಸಿ ಮುಕ್ತಾಂಜ್ಯದ ಬಗೆ ಇನ್ಯಾರಿಗುಸುರಲಿ 5
--------------
ಭಟಕಳ ಅಪ್ಪಯ್ಯ
ಯೋಗನಿದ್ರೆಯ ಮಾಡುತಿಹನು ಕ್ಷೀರಸಾಗರಮಧ್ಯದಿ ಭೋಗಿಶಯನನು ಪಏಳು ಸುತ್ತಿನ ಪುರವಿದನೂ ಎಂಟುಪಾಲಾಗಿ ರಮಣಿ ತಾ ಕಾದಿರಲದನುಬಾಲಕನೊಬ್ಬ ಪಾಲಿಪನೂ ಮಂತ್ರಿನಾಲುವರೊಪ್ಪಿರೆ ಶ್ರೀಹರಿ ತಾನು 1ಕಾಲಜ್ಞಾನಿಗಳೈವರಿಹರೂ ಅವರೂಳಿಗಕೈವರು ಕಾದುಕೊಂಡಿಹರುವೇಳೆ ವೇಳೆಯ ಬಲ್ಲ ಭಟರು ತಮ್ಮಊಳಿಗವನು ಬಂದು ಪೇಳುತ್ತಲಿಹರು 2ಸಕಲ ಲೋಕಂಗಳ ಸೃಜಿಸಿ ಅಲ್ಲಿ ಸಕಲ ಲೋಕೇಶನು ತಾನೆ ವಿಶ್ರಮಿಸಿಸಕಲವ ತನ್ನೊಳಗಿರಿಸಿುೀಗಮುಕುತಿದಾಯಕ ವೆಂಕಟೇಶ ಶ್ರೀ ವೆರಸಿ 3ಕಂ||ಹರಿ ಪವಡಿಸೆ ಹರೆದೋಲಗಸುರರೆಲ್ಲರ್ ಸ್ಥಾನಕೈದಲಾನಂದಾಂಬುಧಿತೆರೆುಳಿದು ತಿರುಪತೀಶನಚರಣವೆ ತಾನಾಗಿ ನಿಂದುದೆನ್ನೆದೆಮನೆಯೊಳ್ ಓಂ ವೇದವೇದ್ಯಾಯ ನಮಃ
--------------
ತಿಮ್ಮಪ್ಪದಾಸರು
ರಕ್ಷಿಸೋ ಶ್ರೀ ವೇದವ್ಯಾಸ | ಬದರಿನಿವಾಸ | ಆಶ್ರಿತ ಜನತೋಷ ಪ ಭೃತ್ಯ ಮತ್ಸ್ಯ | ವ್ಯಕ್ತನಾದನು ಹರಿ ಅವ್ಯಕ್ತ | ಕರೆಸಿದ ಸತ್ಯ | ವತಿಯಸುತ ಗೋಪ್ತ 1 ಕಾಲ ತಾಪ | ಬಟ್ಟರು ಜನ ಪ್ರಲಾಪ |ಶ್ರೀಪತಿ ತಾಳ್ದನು ರೂಪ | ವ್ಯಾಸ ರೂಪ | ದೋಷ ನಿರ್ಲೇಪ |ದ್ವೀಪದೊಳುದಿಸಿತೀರೂಪ | ಯಮುನಾ ಸಮೀಪ | ಪರಾಶರ ಜನೆನಿಪ 2 ಸೂತ್ರ ದಾತ | ಎನ್ನೊಳು ಪ್ರೀತ | ನಾಗು ಭಕ್ತಿ ಪ್ರದಾತ 3 ಜನಿತ | ಸಕಲ ಭಸ್ಮೀಭೂತ 4 ಭೋಗಾದಿಂ ಪ್ರಾರಬ್ಧ ಪೋಗಾಡಿದಂಥ | ಕಾರ್ಯಾಖ್ಯ ಬ್ರಹ್ಮಪ್ರಾಪ್ತ |ಯೋಗೀಜನ ಪ್ರಳಯೇಪಿ ಅಜನ ಪ್ರಾಪ್ತ | ಇತ್ಯಾದ್ಯವಸ್ಥಾದಿಯೊಳ್ಗತ |ಮಾರ್ಗಗಳು ಶೇಷ ಗರುಡಾದಿಯೋಳ್ಗತ | ಈ ಪರೀಯಿಂ ಸಮಸ್ತ |ಯೋಗೀ ಜನಂಗಳಿಗೆ ಆ ಅಜಸಮೇತ | ವಿರಜಾ ಸ್ನಾನ ಪ್ರಾಪ್ತ ||ಸ್ನಾನದಿಂದಲಿ ಲಿಂಗನಾಶ | ಮಾಡುವೆ ಶ್ರೀಶ | ಆದರವರು ನಿರ್ದೋಷ |ಅನಂತರ್ಹರಿ ಉದರ ಪ್ರವೇಶ | ಕೆಲವರು ಶ್ರೀಶ | ಆನಂದವೇ ವಪುಷ |ಜ್ಞಾನಿ ಇನ್ನಿತರರು ತದ್ದೇಶ | ದಲ್ಲಿವಾಸ | ಆನಂದಾನನುಭವ ಶ್ರೀಶ |ನಾನಾ ಪರಿಯೋಗ್ಯರ ಶ್ರೀಶ | ಪ್ರಳಯದಲ್ಲೀಶ | ಧರಿಸುವಸರ್ವೇಶ 5 ಪರಿ ಕಾರಣಂಗಳಿಂದ ನಿನ್ನ | ಇಚ್ಚಾಖ್ಯ ಆವರಣವಪಸಾರಿಸೀ |ತುಷ್ಟೀಯಿಂದಲಿ ಸ್ವಸ್ತಯೋಗ್ಯಸುಖವ | ಅಭಿವ್ಯಕ್ತಿಂಗಳಂ ಗೈಯ್ಯುವಾ |ಲಕ್ಷ್ಣ ಮುಕ್ತಿದ ಮಾಯೆ ಪತಿಯು ಆದ | ಶ್ರೀವಾಸುದೇವನ ದರ್ಶನ ||ವಾಸುದೇವನ ಕಂಡನಂತರ | ಮತಿವಂತರ | ಪೊಗಿಸುವಾಗಾರ |ಶ್ರೀಸಿತ ದ್ವೀಪಾದಿ ಆಗಾರ | ವರ ಮಂದಿರ | ವೈಕುಂಠಾಗಾರ | ಲೇಸಾಗಿ ಸ್ವಯೋಗ್ಯ ಸುಖಸಾರ | ಅತಿಪರತರ | ಅನುಭವಿಪ ವಿಸ್ತಾರ | ಆಶಾಮಾತ್ರದಿ ಸರ್ವ ಸುಖಸಾರ | ಸೃಷ್ಟ್ಯಾದಿ ಇತರ | ಇತ್ತು ತೋಷಿಪೆ ಅವರ 6 ಚಾರು ಕೌಪೀನ ಮದನ ದರ ಪೋಲ್ವಧದನ | ತುಳಸಿಯ ವನ | ಮಾಲೆಗಳ್ಹಸನ |ನಂದನಂದನ ನಿನ್ನ ಕರುಣ | ಗುಣಾಭರಣ | ತೊಡಿಸಯ್ಯ ಪ್ರಧನ 6 ಪ್ರೀಯಾ ಪ್ರೀಯ ಸರ್ವ ವಿಷಯಕೆಲ್ಲ | ನೀನೇ ಮೂಲನೆಂದು ತಿಳಿಸೋ |ಕಾಯಾ ವಾಚಕ ಮಾನಸೀಕ ಸರ್ವಾ | ಕರ್ಮಾದಿಗಳೆಲ್ಲವಾ ||ಜೀಯಾ ನಿನ್ನಯ ಚರಣಕಿತ್ತು ನಮಿಪ | ಬಿಂಬಕ್ರಿಯಾಜ್ಞಾನವಾ ||ರಾಯಾ ನೀನೆನಗಿತ್ತು ಪಾಲಿಸಯ್ಯ ಮುದದೀ | ನಿನ್ನನ್ನು ನಾ ಬೇಡುವೆ ||ತುತಿಪ ಜನರ ಸುರಧೇನು | ಕಾಮಿತವನೆ | ಕರುಣಿಪ ಕಲ್ಪದ್ರುಮನೆ |ಮತಿಗೆಟ್ಟ ಮನುಜನು ನಾನೆ | ನಿನ್ನ ಪಾದವನೆ | ನಂಬಿ ಬಂದಿಹೆ ನಾನೇ |ಹಿತದಿಂದ ನೀನೆನ್ನ ಕರವನೆ | ಪಿಡಿ ಎಂಬೆನೆ | ನಾ ಬೇಡುವೆ ನಿದನೆ |ಅತುಳ ಮಹಿಮ ಜಗದೀಶನೆ | ಮಧ್ವೇಶನೆ | ಗುರು ಗೋವಿಂದ ವಿಠಲನೆ 8
--------------
ಗುರುಗೋವಿಂದವಿಠಲರು
ರಜತ ಪುರೀಶಾ ಪಾಲಿಸೋ | ನಿನ್ನ ಶ್ರೀಪಾದಭಜನೆಯೋಳಿರಿಸೋ ಪ ಅಜ ಜನಕನೆ ಹರಿ | ನಿಜ ಜನರಿಗೆ ನೀವಿಜಯದ ತವ ಪದ | ರಜದವನೆನಿಸೋ ಅ.ಪ. ಕ್ರತು ಕುವರಾ 1 ಭವ ಮುಖನುತ | ಪತ ಸರಸಿಜ ಯುಗಹೃದಯದಿ ಪೊಳೆಯುತ | ಮುದವನೇ ಬೀರೋಶ್ರೀಹಂಸಾ | ಯದು ವಂಶಾ | ಖಲಧ್ವಂಸಾಕೃತ ಕುರುಕುಲ ನಿರ್ವಂಶಾ 2 ಭವ | ಕರುಣಾ ನಿಧಿ ಪೊರೆಗೋವಿಂದ ಎನಗಾನಂದಾ 3
--------------
ಗುರುಗೋವಿಂದವಿಠಲರು
ರಾಮಾ ರಘುಕುಲರಾಮ ಪ ಸುರ ಸಾರ್ವಭೌಮ ಪಾಹಿ ಗುಣಧಾಮಾ ಅ.ಪ. ವಾಹನ ಫಣೀಂದ್ರಶಯನ ವರ ದೇಂದ್ರನುತ ರಾಮಚಂದ್ರಾ 1 ಚಂಡಬಾಣ ಕೋದಂಡಾ ವಿಧೃತ ದೋ ರ್ದಂಡಾ ಲೋಕೈಕ ಶುಂಡಾ 2 ಗೋಪ್ತಾ ಮೂಜಗದ್ವ್ಯಾಪ್ತಾ ದೋಷನಿ ರ್ಲಿಪ್ತಾ ವಿಬುಧಜನರಾಪ್ತಾ 3 ಘನ್ನಾ ಸೌಪರಿಛಿನ್ನ ಕಾಲಾತಿ ಭಿನ್ನ ಜಗದ ಮೋಹನ್ನಾ 4 ಅಂಬಾವಲ್ಲಭ ಬಿಂಬಾಸುರ ಮುನಿಕ ದಂಬಾ ಸೇವೆ ಕೈಕೊಂಬಾ 5 ಗಣ್ಯಾಗಣ್ಯನೆ ಶರಣ್ಯ ಸಲಹೋ ನಿ ರ್ವೀಣ್ಣ ಸುರವರವರೇಣ್ಯ 6 ಜ್ಞಾನಾನಂದಾದಿ ನಾನಾ ಗುಣಪೂರ್ಣ ಶ್ರೀ ನಾರಾಯಣ ಸಮಾನಾ 7 ಕಪಿಲಾ ಭಕ್ತರಿಗೆ ಸುಫಲಾದಾಯಕ ಚಪಲಚಿತ್ತರಿಗೆ ಉಪಲಾ 8 ಸೀತಾಪತೆ ಜಗನ್ನಾಥ ವಿಠಲ ಖ್ಯಾತಾ ಭವವನನಿಧಿ ಪೋತಾ 9
--------------
ಜಗನ್ನಾಥದಾಸರು
ರುದ್ರದೇವರು ಇಂದು ಶೇಖರ ಶಿವ ನಂದಿವಾಹನ ಶೂಲಿ ಸ್ಕಂಧಗಣಪರ ತಾತ ದಂದಶೂಕಕಲಾಪ ಪುರಂದರ ಮುಖಸುರ ವೃಂದವಿನುತ ಪಾದಾದಿಂದ ಶೋಭಿತ ದೇವ ಕಂದು ಕಂಧರ ತ್ರಿಪುರ ಸಂದೋಹಹರ ಹರ ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ ಇಂದು ಪೂರ್ತಿಸೋ ಗುರೋ ಗಂಧವಾಹನ ತನಯಾ ಇಂದಿರಪತಿ ಗುರುಜಗನ್ನಾಥವಿಠಲಾ ನಂದಾ ಬಡುವನಿದಕೆ ಸಂದೇಹ ಇನಿತಿಲ್ಲಾ
--------------
ಗುರುಜಗನ್ನಾಥದಾಸರು
ಲಕ್ಷುಮಿ ನಾರಾಯಣ ಪ ಮೋಕ್ಷದಾಯಕ ಗುರು | ಸಚ್ಚಿದಾನಂದಾ ನಮೊ 1 ಕವಿಜನ ಪೂಜಿತ | ಶಿವಸಖನ ಜಪಿತ 2 ಲೇಸು ಸುಬೋಧಾಯನೆ | ದಾಸರ ದಾಸ ನಮೋ 3 ನಿತ್ಯ ಪರ | ವಸ್ತು ಸದಾನಂದ 4
--------------
ಸದಾನಂದರು
ವಂದಿಪೆ ಯತಿವರೇಂದ್ರ ತವ ಪಾದದ್ವಂದ್ವಕ್ಕಾನಂದಾ ದಿನಾ ಬಂದ ಕಂದನಾ ಪಾಲಿಸೆಂದೆ ಪ ಸಿಲ್ಕಿರುವೆನಾ ಶರಣು ಬಂದೆನಾ 1 ಮೂಢ ಸೇವಕನಾ ಬಿಡಿಸೊ ವ್ಯಸನಾ 2 ಶ್ರೀಶನಾದ ಹನುಮೇಶವಿಠಲನ್ನಾ ದಾಸ ಉದಾಸೀನದಲ್ಲೆ ಎನ್ನಾ ಪೋಷಿಸೊ ನೀ ಮನದಾಸೆ ಪೂರೈಸಿನ್ನು ಕರುಣಾಜ್ಞಾನಪೂರ್ಣ 3
--------------
ಹನುಮೇಶವಿಠಲ
ವಾಸುದೇವ ಹೃದಯನಮೋ ನಮೋ ನಂದಾಭ್ಯುದಯ ನಮೋ ನಮೋ ಗೋಪಿಕಾ ಪ್ರಿಯ ಪದೀನಜನಾವನಲೋಲ ದಾನವಶಿಕ್ಷಕ ಕಾಲಭಾನುಶತಾಭಜಾಲ ಶ್ರೀ ನಿಜಭೋಗವಿಶಾಲ 1ಮುರಹರ ಮುಚುಕುಂದ ಸೇವ್ಯ ಭಾವ್ಯ 2ಪರಮ ಪುರುಷ ಶ್ರೀ ರಮಣ ಶರಧಿಶಯನ ನಿರಾವರಣದುರಿತತಿಮಿರಹರಚರಣ ತಿರುಪತಿ ವೆಂಕಟರಮಣ 3ಓಂ ಇಳಾಪತಯೇ ನಮಃ
--------------
ತಿಮ್ಮಪ್ಪದಾಸರು
ವಿಜಯ ಗುರು ತವಪಾದರಜವ ಕರುಣಿಸಿ ಎನಗೆ ಭುಜಗಶಯನನ ಧ್ಯಾನ ಭಜನೆ ನೀಡುವುದು ಪ. ತವ ಶಿಷ್ಯವಂಶ ಸಂಜಾತಳೆನ್ನುತಲಿ ಬಹು ತವಕದಲಿ ಕರುಣಾರ್ದ ದೃಷ್ಟಿಯಿಂದ ತವ ಸೇವೆ ಎನಗಿತ್ತು ತವ ಕೀರ್ತನೆಯ ನುಡಿಸಿ ಮೂರ್ತಿ ತೋರೆನ್ನ ಭವತಾಪ ಹರಿಸಯ್ಯ 1 ನಿನ್ನ ಮಹಿಮೆಯ ಗುಟ್ಟು ವರ್ಣಿಪರು ಯಾರಿನ್ನು ನಿನ್ನ ಚರ್ಯೆಯ ಚರಿತೆ ಬರೆದವರ್ಯಾರೊ ನಿನ್ನ ನಿಜ ಸಂಕಲ್ಪ ಇನ್ನು ಅರಿಯುವರುಂಟೆ ಬನ್ನ ಭವ ಉಂಟೆ 2 ಆ ದೇವಮುನಿ ಆಜ್ಞೆ ಮೋದದಲಿ ಸ್ವೀಕರಿಸಿ ಪಾದನ್ಯೂನತೆ ಕವನ ಪೂರ್ಣಗೊಳಿಸಿ ವೇದಶಾಸ್ತ್ರಗಳರ್ಥ ಸುಲಭದಲಿ ತಿಳಿಸುತಲಿ ಹಾದಿ ತೋರಿದೆ ಶಿಷ್ಯರಾದ ಸುಜನರಿಗೆ 3 ಸತ್ಕರ್ಮ ಫಲಗಳನು ನಿತ್ಯದೊಳಗರ್ಪಿಸಲು ಉತ್ತಮನು ಆರೆಂಬ ಚಿತ್ತದಳಲ ಮುಕ್ತಿಯೋಗ್ಯರಿಗೆ ಬಹು ಯುಕ್ತಿಯಿಂದಲಿ ತೋರಿ ಉತ್ತಮನು ಹರಿಯೆಂದು ಶಕ್ತಿಯಿಂ ಸ್ಥಾಪಿಸಿದ 4 ವೈಕುಂಠಪುರದೊಳಗೆ ಶ್ರೀ ಕರನ ವಕ್ಷಕ್ಕೆ ಸೋಕಿಸಿದೆ ಚರಣವನು ಜೋಕೆಯಿಂದ ಈ ಕಾರ್ಯಕಾರಣವ ನಾ ಕೇಳಿ ನುಡಿವಂಥ ವಾಕು ಲಾಲಿಸುತ ವಿವೇಕ ಮತಿ ಕರುಣಿಪುದು 5 ಆ ಕಮಲನಾಭನಾ ಹೃದಯ ಕರುಣಾಮೃತವು ಸೋಕಿ ತುಂಬಿಹುದು ತವ ಚರಣ ಕಮಲದಲಿ ನಾ ಕೇಳ ಬಂದೆನಾ ಕರುಣಾಮೃತದ ಕಣವ ಯಾಕೆ ಮರೆಮುಚ್ಚಿನ್ನು ನೀ ಕೊಡೈ ತವಕದಲಿ 6 ಪಾದ ರೂಢಿಗೊಡೆಯಗೆ ಲಕುಮಿ ಓಡಿದಳು ಕರವೀರಪುರಕೆ ಸ್ವಾಮಿ ಬೇಡಾಗೆ ವೈಕುಂಠ ನೋಡಿ ಆನಂದಾದ್ರಿ ಮಾಡಿದನು ಮಂದಿರವ ಕೂಡಿ ಪದ್ಮಿನಿಯ 7 ನೋಡಿ ವೈಕುಂಠದೊಳು ನಾಡಿಗೊಡೆಯನ ಚರ್ಯ ರೂಢಿಯೊಳು ಜನಿಸಿ ಭೂಸುರವಂಶದಿ ದುರಿತ ಈಡಾಡಿ ಹರಿದಾಸ್ಯವನು ಬೇಡಿ ಬಯಸುತ ಪೊಂದಿ ನಾಡಿನೊಳು ಮೆರೆದೆ 8 ಪ್ರತಿವರ್ಷ ಬಿಡದೆ ತಿರುಪತಿ ಯಾತ್ರೆ ಭಕ್ತಿಯಲಿ ಪತಿತಪಾವನನ ಓಲೈಸಿ ಮೆರೆದೆ ಕ್ಷಿತಿಯಕ್ಷೇತ್ರ ಅಪ್ರತಿಮಹಿಮ ಸಂಚರಿಸಿ ಕ್ಷಿತಿಗೆ ತೋರಿದೆ ನಿನ್ನ ಮಹಿಮೆ ಜಾಲಗಳ 9 ಅಂಕಿತವದಲ್ಲದೆ ದಾಸತ್ವ ಸಿದ್ಧಿಸದು ಕಿಂಕರಗೆ ಅಂಕಿತವೆ ಕುರುಹು ಎಂದು ಅಂಕಿತವ ಪಡೆದು ಚಕ್ರಾಂಕಿತನ ಗುಣ ಮಹಿಮೆ ಶಂಕಿಸದೆ ಪೇಳ್ದೆ ತವ ಕಿಂಕರೋದ್ಧಾರಕನೆ 10 ನಿನ್ನ ಮಹಿಮಾದಿಗಳ ವರ್ಣಿಸಲು ಎನ್ನಳವೆ ಚನ್ನ ಗುರು ವಿಜಯವಿಠ್ಠಲನ ಪದಕಮಲ ಚನ್ನಾಗಿ ಕಂಡು ಹೃನ್ಮಂದಿರದಿ ಸತತದಲಿ ತನ್ಮಂತ್ರ ಕಿರಣವೆಮ್ಮಲ್ಲಿ ಬೀರಿದ ಕರುಣಿ 11 ವಿಕ್ರಮ ಕಾರ್ತೀಕ ಶುದ್ಧ ದಶವಿೂ ದಿವ್ಯ ಶುಕ್ರ ನಾಮರು ವಾರ ಶುಭದಿನದಿ ಇಂದು ಅಕ್ಕರದಿ ಕರಸಿಲ್ಲಿ ಉಕ್ಕಿಸಿದೆ ತವ ಸ್ತೋತ್ರ ಮಕ್ಕಳಂದದಿ ಪೊರೆವ ಅಕ್ಕರೆಯು ಉಂಟೊ 12 ಮಧ್ವರಾಯರ ಕುಲದಿ ಉದ್ಭವಿಸಿದಂಥ ಈ ಶುದ್ಧ ವೈಷ್ಣವ ಕುಲದಿ ಜನಿಸಿ ಬಂದೆ ಶುದ್ಧ ದಾಸತ್ವದ ಮುದ್ರಾಂಕಿತದ ರತ್ನ ಪಾದ ಕಂಡೆ 13 ಪಾಪಿ ಜನರುದ್ಧರಿಪ ಪಾವನಗಾತ್ರನೆ ಆ ಪಯೋಜಾಸನರ ತರತಮ್ಯವ ಸ್ಥಾಪಿಸಿದ ಮಹಿಮನೆ ಸದ್ಗುಣಾಂಬುಧಿ ನಿಲಯ ಗೋಪಾಲಕೃಷ್ಣವಿಠ್ಠಲನ ಪದಭೃಂಗ 14
--------------
ಅಂಬಾಬಾಯಿ
ವಿಶ್ವೇಶ ವೆಂಕಟೇಶ_ ವಿಶ್ವಾದಿ ಪರರೂಪಿ ಶ್ರೀ ವಿಷ್ಣು ಪರಬ್ರಹ್ಮ_ನಮೋ ನಮೋ ಪ ವಿಶ್ವಾತ್ಮ ಶ್ರೀಗುರು _ ವಿಶ್ವಾನ್ನ ಅನ್ನದ ವಿಶ್ವಸ್ಥ ಶ್ರೀ ಕೃಷ್ಣ _ ನಮೋ ನಮೋ ಅ.ಪ ಕೇಶವಾ ಮಾಧವಾ _ ಗೋವಿಂದ ಅಚ್ಯುತ ವಾಸುದೇವಾನಂತ _ ನಾರಾಯಣಾ1 ಗೋಧರಾ ಶ್ರೀಕರಾ _ ಶ್ರೀಮತ್ಸ್ಯ ಕಚ್ಛಪ ಶುದ್ಧಾನಂದಾತ್ಮಕ _ ನಾರಸಿಂಹ 2 ಶ್ರೀಧರಾ ವಾಮನಾ _ ಪ್ರದುಮ್ನ ಹೃಷಿಕೇಶ ಆದ್ಯಂತ ವರ್ಜಿತ _ ತ್ರಿವಿಕ್ರಮಾ 3 ಭಾರ್ಗವಾ ರಾಘವಾ _ ಶ್ರೀ ಕೃಷ್ಣ ಉಪೇಂದ್ರ ಯೋಗೇಶ ಬುದ್ಧಕಲ್ಕಿ ಜನಾರ್ದನ 4 ಪದ್ಮನಾಭ ಪದ್ಮೇಶ ಅನಿರುಧ್ಧ _ ಸಂಕರ್ಷಣ 5 ದಾಮೋದರಾ ದತ್ತ _ ಕಪಿಲ ಶಿಂಶುಮಾರ ಅಧೋಕ್ಷಜ _ ಸೀಮಾಶೂನ್ಯ 6 ಶ್ರೀ ವಿಷ್ಣುಹರಿಯಜ್ಞ _ ಧನ್ವಂತ್ರಿ ಮಹಿದಾಸ ಶ್ರೀ ವಂದ್ಯ “ಕೃಷ್ಣವಿಠಲ” ಪಾರಾಶರ7
--------------
ಕೃಷ್ಣವಿಠಲದಾಸರು
ವೆಂಕಟ ಕೃಷ್ಣವಿಠಲ | ಲೆಂಕನನ ಸಲಹೋ ಪ ಪಂಕಜೋದ್ಭವ ಪಿತನೆ | ವೆಂಕಟೇಶಾ ಅ.ಪ. ಅಬುಜ ಜಾಂಡೋದರನೆ | ಶಬರಿ ಎಂಜಲನುಂಡೆಕುಬುಜೆಗಂಧಕೆ ಒಲಿದು | ಸದ್ಗತಿಯನಿತ್ತೆಇಭವರದ ನೀನಾದೆ | ಕುಲಶೀಲನೆಣಿಸದಲೆವಿಭುವೆ ಈ ಭಕುತಂಗೆ | ವೈಭವವ ತೋರೋ 1 ಮಧ್ವಮತ ತತ್ವದಲಿ | ಶುದ್ಧ ಭಕುತಿಯ ತೋರ್ಪಶ್ರದ್ಧಾಳು ಎನಿಸಿಹನು | ಬುದ್ಧಿ ಪೂರ್ವಾಸಿದ್ಧಾಂತ ತಾತ್ಪರ್ಯ | ಬುದ್ಧಿಗೆಟಕೂವಂತೆಉದ್ಧರಿಸ ಬೇಕಿವನ | ಅಬ್ದಿಜೆಯ ರಮಣ 2 ನೀಚೋಚ್ಚ ತರತಮದ | ಸ್ವಚ್ಛ ಜ್ಞಾನವ ನೀಯೊಮತ್ಸ್ಯಕಚ್ಛಪರೂಪಿ | ಸಚ್ಚಿದಾನಂದಾನಿಚ್ಚ ನಾಮಸ್ಮರಣೆ | ಸ್ವಚ್ಛ ಪೇರ್ಮೆಲಿ ಗೈವಉತ್ಸಾಹ ಇವಗಿತ್ತು | ಉದ್ಧರಿಸೊ ಹರಿಯೇ 3 ವ್ಯಾಜ ಕರುಣೀ4 ಪಾಕ್ಕು ಕರ್ಮವ ಕಳೆದು | ಲೋಕದಲಿ ಸತ್ಕೀರ್ತಿಬೇಕಾದ ವರಗಳನೆ | ತೋಕನಿಗೆ ಈಯೋನಾಗನದಿ ಪಿತ ಗುರೂ | ಗೋವಿಂದ ವಿಠ್ಠಲನೆವಾಕು ಮನ್ನಿಸಿ ಕಾಯೋ | ಶ್ರೀ ಕರಾರ್ಜಿತನೇ 5
--------------
ಗುರುಗೋವಿಂದವಿಠಲರು
ವೇದಾಂತ ಸಾಮ್ರಾಜ್ಯ ರಾಜಾಧಿರಾಜ ತೇಜೋಮಯರ ಪಾದಾಬ್ಜನೇ ಶರಣಪ ರಾಜಾಧಿರಾಜ ಕರಾರ್ಚಿತ ಚರಣ ಪ್ರಾಜ್ಯಪ್ರಜ್ಞರ ಶುದ್ಧಕುಲ ದಿವ್ಯಾಭರಣ ಅ.ಪ ಭ್ರಾಂತಿಗೆ ನಿಧನ ಸುಖಶಾಂತಿಗೆ ಸದನವೇ ದಾಂತಿಯ ಮಾನಸ ಕಾಂತಿಗೆ ಸಾಧನ 1 ಇಂದಿರಾಪತಿಯ ಆನಂದಾದಿ ಸದ್ಗುಣ ವೃಂದ ತೋರಿದ ಶೇಷಚಂದ್ರಿಕಾಚಾರ್ಯ 2 ಹಿರಿದು ನಿಮ್ಮಯ ವ್ಯಾಪ್ತಿ ಕಿರಿದು ಎಮ್ಮಯ ಶಕ್ತಿ ಪರಮ ಪ್ರಸನ್ನ ಶ್ರೀಗುರು ಸಾರ್ವಭಾಮ 3
--------------
ವಿದ್ಯಾಪ್ರಸನ್ನತೀರ್ಥರು