ಒಟ್ಟು 325 ಕಡೆಗಳಲ್ಲಿ , 70 ದಾಸರು , 293 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರತಿ ಎತ್ತಿರೀತಗೆ ಮಾನಿನೀಯರು ಹರಿಗೆ ಪ ಕೃಷ್ಣಗೆ ಮಾನಿನೀಯರು ಕಂಗಳಿಂದಲೆ ನೋಡಿಸುಖಿಸಿ ಕಮಲಮುಖಿಯರು ಅ.ಪ. ಕುಂಡಲ ಹಾರ ಪದಕ ಧರಿಸಿ ಕುಳಿತಿಹಾಪದಕ ಧರಿಸಿ ಕುಳಿತಿಹಾಸರಸಿಜಾಕ್ಷನೋಳ್ಪಜನನೆ ಹರುಷ ಕೊಡುತಿಹಾ 1 ಕಡಗ ಕಂಕಣ ವಂಕಿ ನಾಗಮುರಿಗೆ ಪೊಳೆವುದುನಾಗಮುರಿಗೆ ಪೊಳೆವುದುಜರದಗೊಂಡೆ ತಾಯತ ಮುತ್ತು ಸಿರಿಯು ತೂಗೊದು 2 ಕಾಲಕಡಗ ರುಳಿಯು ಗೆಜ್ಜೆ ಸಾಲು ಚರಣದಿಗೆಜ್ಜೆ ಸಾಲು ಚರಣದಿಭಾಳ ದನಿಯ ಮಾಡುತಿಹುದು ಕೇಳಿ ಕರ್ಣದಿ 3 ಕನಕ ವಸನ ಹೀರ ಕಾಂಚಿ ಕಟಿಯ ತಟದಲಿಕಾಂಚಿ ಕಟಿಯ ತಟದಲಿಮಿಂಚಿನಂತೆ ಮಿನುಗುತಿಹದೊ ನೋಡಿ ಸುಖದಲಿ 4 ಬೊಟ್ಟು ಹಿಡಿದು ಬಾಲನಿಂದ ಚರಿಸಿದಂದದಿಹಿಡಿದು ಬರಿಸಿದಂದದಿಕೃಷ್ಣ ವಿಷ್ಣು ಜಯದ ಸಿರಿಯು ಕೃಷ್ಣ ಜನ್ಯದೀ 5 ಕರವ ಪಿಡಿದು ಹಯದ ಷಣಶ ತಿರುಗುವಾ 6 ಹರಣ ಹರಣ ಮಾಡಿದಧುರದಿ ಪಾರ್ಥನ ಹೆಸರು ಮಾಡಿ ಹರಿಯ ನಡೆಸಿದಾ7 ಹರಿಯು ಮುಖವ ನೋಡಿ ರಾಜರು ಹರುಷಬಟ್ಟರುರಾಜರು ಹರುಷಬಟ್ಟರುಮುಖವ ದಯದಿ ಮೋಕ್ಷದ ಸಿರಿಯನುಂಡೆಯೋ 8 ನಿತ್ಯ ತಂದು ಸುಖಿಸುವೆ 9
--------------
ಇಂದಿರೇಶರು
ಮನುಜದನುಜ ರಿವರೆವೆ ನೋಡಿ | ದನುಜನು ದೈತ್ಯರೊಳೆನ ಬ್ಯಾಡಿ ಪ ಹರಿ ನೆನೆಯುತ ಹರಿಕಥೆಗಳ ಕೇಳುತ | ಹರಿ ಭಕುತಿಗೆ ಬೆರೆದವ ಮನುಜಾ | ನಿರುತ ಆಹಾರ ನಿದ್ರೆ ಚರಟ ಮಾತುಗಳಾಡಿ | ಬರಿದೆವೆ ದಿನಗಳೆವವ ದನುಜಾ 1 ಪರರ ಸದ್ಗುಣ ವಾಲಿಸಿಕೊಳುತಲಿ | ಸಕ | ಲರಿಗೆ ಮನ್ನಿಸುವವನೇ ಮನುಜಾ | ಗರುವ ಹಿಡಿದು ತನ್ನ ಹೊಗಳುತ ಅನ್ಯರ | ಬರಿದೆ ನಿಂದಿಸುವವನೆ ದನುಜಾ 2 ಪಥ | ಸರ್ಕನೆ ತಿಳಿದವ-ನೆವೆ ಮನುಜಾ | ಮೂರ್ಖತನ ಹಿಡಿದು ಸಾಧು ಸಂತರಲಿಕು | ತರ್ಕವ ಮಾಡುವವನೆ ದನುಜಾ 3 ಹುಟ್ಟಿದರಲಿ ಸಂತುಷ್ಟದಿ ಕವಳವ | ನಿಷ್ಠೆಗೆ ತಾರದವನೆ ಮನುಜಾ | ನೃಪರ ನಂಬಿ ಲಾಭಾ ಲಾಭ ಕೊಡುವ | ಸೃಷ್ಟೀಶನನು ಮರೆತವ ದನುಜಾ 4 ತಂದೆ ಮಹಿಪತಿ ಭೋಧವ ಮನದಲಿ | ತಂದು ಹರುಷವ ಪಡುವವ ಮನುಜಾ | ದಂದುಗ ಚಿತ್ತದಿ ಹೇಳಿದ ಮಾತಿಗೆ | ಸಂದೇಹ ಬಟ್ಟವನವ ದನುಜಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನ್ನಿ ಮನ್ನಿಗೆ ಉಣ್ಣ ಬಂದಾ | ತನ್ನವರೊಳಗಿದ್ದ ಸರ್ವ ಸಾರಭೋಕ್ತಾ ಪ ಭಕುತರಗೋಸುಗ ಭಕುತಿಯ ಕೈಕೊಂಡು ಇಂದು 1 ಭೂವದರೊಳಗಿದ್ದು ದೈತ್ಯರ ಗೆದ್ದಂತೆ | ಆವಿಷ್ಣುವಾಗಿ ಮನ್ನಣೆಯ ಕೈಕೊಳುವಲಿ 2 ನಂಬಿದ ದಾಸರ್ಗೆ ಪ್ರಾರಬ್ಧ ಕರ್ಮವು | ಉಂಬೋದು ಬಿಡದಂದು ತದಾಕಾರ ರೂಪದಿ3 ದಿವಿಜರ ಒಡಗೂಡಿ ದಿನ ಪ್ರತಿದಿನದಲ್ಲಿ 4 ತನ್ನ ಸಂಕಲ್ಪವು ಸಿದ್ಧಿ ಮಾಡುವೆನೆಂದು ಘನ್ನತೆಯಲಿ ನಮ್ಮ ವಿಜಯವಿಠ್ಠಲಸ್ವಾಮಿ 5
--------------
ವಿಜಯದಾಸ
ಮನ್ಮಥ ಚರಿತೆ340 ವರಸಿದ್ಧಿ ಗಣೀಶನ ಬಲಗೊಂಡೀ- ಶ್ವರನ ಪದಕೆ ನಮಿಸಿ | ಶಾರದೆಯ ಹರುಷದಿ ಸಂಸ್ಮರಿಸಿ | ಚ ತುರ್ಮುಖಗಳ ನೆರೆ ಭಜಿಸಿ ಹರುಷದಿ ನುತಿ ಮಾಡಿ | ಮಾಡಿ- ದ ಕೃತಿಯ ಸುಜನರು ನೋಡಿ 1 ಕಾಮಜನಕ ನಿಷ್ಕಾಮಜನಾಪ್ತ | ಸು- ಧಾಮನ ಸಖ ಹರಿಯು | ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ- ತ್ಕಮಲದೊಳೀಪರಿಯು ಕಾಮನ ಸುಚರಿತೆಯು | ಸಜ್ಜನರು- ಇಹಪರ ಸದ್ಗತಿಯು | 2 ಪೃಥಿವಿಯೊಳಿಹ ಸುಜನರು ಕೇಳಿ | ಮ ನ್ಮಥ ಚರಿತ್ರೆಯನು | ಸಹ- ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ- ದ್ಗತಿಗಳನು ಕೊಡುವನು | ಶತಮುಖವಂದಿತ ಸಿರಿದೇವಿಯರಸ- ನೊಲಿದು ಪಾಲಿಸುವನು | ಜನರ ಕೋ- ರಿದ ಕೋರಿಕೆಗಳನು | ತಾ ಕೊಟ್ಟವರನು ಪಾಲಿಪ ತಾನು 3 ತಾರಕಾಸುರನ ಭಯದಿಂದಲಿ ವೃಂ- ದಾರಕರೆಲ್ಲ ಕೂಡಿ | ಮನದಿ ಆಲೋಚನೆಗಳ ಮಾಡಿ | ವನಜ ಸಂ- ಭವನಡಿಗಳ ಬೇಡಿ | ಯಾರು ನಮಗೆ ದಿಕ್ಕೆಂದು ಕಳವಳಿಸಿ ನಾರಾಯಣನ ತ್ವರಿತದಲಿ | ಕಂಡು ವಂ- ದಿಸಿದರು ತವಕದಲಿ | 4 ವಾರಿಜಾಕ್ಷ ಪರುಷೋತ್ತಮ ವಿಶ್ವಾ- ಧಾರ ಪರಾತ್ಪರನೆ | ಅನಂತನವ- ತಾರ ಕೃಪಾಕರನೆ | ನಾವೆಲ್ಲ ಸೇರಿದೆವೈ ನಿನ್ನನೆ | ತಾರಕಾಸುರನ ಬಾಧೆ ಪರಿಹರಿಪ- ರ್ಯಾರನು ನಾವ್ ಕಾಣೆವೈಯ್ಯ | ಉ-- ದ್ಧಾರ ಮಾಳ್ಪನು ನೀನೆ | ಭಕ್ತಜನ- ವಾರಿಧಿ ಚಂದ್ರಮನೆ | 5 ಎನಲು ಸುರರೊಡನೆ ನುಡಿದನಾಗಲಾ- ವನಜನಾಭ ತಾನು | ಈ ಕಾರ್ಯ- ಕೆನಾ ಮಾಡುವುದೇನು | ಭ- ವಾನೀಧವನಾಗಿ ಶಿವನು | ಘನತಪವನಾಚರಿಸುತ್ತ ಮೇರುಗಿರಿ ಗುಹೆಯೊಳು ಕುಳಿತಿಹನೊ | ಫಾಲದಲಿ ಉರಿಗುಣ್ಣುಳ್ಳವನು | ಏನಾದರು ಸರಿ ತಾ ಲೆಕ್ಕಿಸನು | 6 ಕಾಮನಿಂದ ಶಂಕರನ ತಪಕಿಡಿಸಿ ಕರುಣಿಸಬೇಕೆಂದು ಬೇಡಿ | ಕೊಂ- ಡರವ ನಿಮ್ಮೊಳು ದಯಮಾಡಿ | ತ- ಕ್ಕಯೋಚನೆಗೈಯ್ಯುವ ನೋಡೀ | ತಾಮಸನ ಮುರಿದು ನಿಮಗೆ ಸಂತತವ ಕೊಡುವನು ಮುದಗೂಡಿ | ಎಂದು ಪೇಳಿದ ಶ್ರೀಹರಿಯನುಡಿ | ಕೇಳಿ ಇಂದ್ರನು ಗುರುವನು ನೋಡಿ 7 ಚಂದದಿಂದ ಸೇರಿ | ಸ್ಮರಗೆಯಿದ- ರಂದವೆಲ್ಲವುಸುರಿ | ಅವನಮನ ಶೌರಿ ಕಂದನೆಯಂತಾದರು ತಂದರೆ ಸುಖ- ವೆಂದನುಪಕಾರಿ | ಗುರು ವಂದಿಸೆ ಸುರರ ದೊರಿ | ಬೀಳ್ಕೊಂಡು ಬಂದನು ಕುಸುಮಪುರಿ8 ಕುಸುಮಾವತಿಯಲಿ ಮೀನಕೇತನನ ಶಶಿನಿಭವದನೆಯರು | ಸೇ- ವಿಸುತಿರೆ ಹಸನಾದ ಪನ್ನೀರು | ಪುನಗು ಅಗರು | ಕುಸುಮಶರನ ಉಪಚರಿಸುತ ಬಾಲೆಯ- ರೆಸೆಯಲು ಮೋದದೊಳು | ರತಿ- ಕ್ರೀಡೆಯಲಿ ಮನಕರಗಲು | ಬೃ ಹಸ್ಪತಿಯನಿತರೊಳೈತರಲು 9 ಊಳಿಗದವರಿಂದ್ಹೇಳಿ ಕಳುಹೆ ಗುರು ಕೇಳಿ ಸುದ್ದಿ ಮಾರಾ | ತವಕ ಪರಿಪರಿಯುಪಚಾರ | ಶ್ರೀಪತಿಯ ಕುಮಾರ | ಬಂದಹದ- ನೇನೆನುತ ಪದಾರ | ವಿಂದ- ಕೆರಗಿದನಾ ಕುಸುಮಶರ 10 ಭಯದೊಳಮರರೆಲ್ಲ | ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ- ಸಲು ಕೇಳಿ ಸಿರಿಯನಲ್ಲಾ | ಅರಘಳಿಗಾಲೋಚಿಸಿ ಎನ್ನೊಳುನುಡಿ- ದನುಕೇಳಿಸಿರಿಯನಲ್ಲಾ | ಖಳಗೆಧರೆ- ಪರಿ ಎಲ್ಲವನು ಬಲ್ಲ 11 ಕಾಮನು ಪುಷ್ಪ ಶರಗಳಿಂದೆಸೆಯಲು ಗೌ- ರಿಮನೋಹರನೂ | ಬ- ಹಿರ್ಮುಖನಾಗುತ ಶಂಕರನೂ | ನಿ- ಕ್ಷೇಮವ ಪಾಲಿಪನು | ರಜತಗಿ ರಿವಾಸಿ ಮಹೇಶ್ವರನು | ಇದಕೆ ಗುರಿಯಾದ ಎನ್ನ ಮಗನು 12 ನಾವು ಪೇಳಿರುವೆವೆಂದು ನಮ್ಮ ಸು- ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ- ಳಿವಿವರಮಾಗೆ | ಕರೆದುಕೊಂ- ಡ್ಹೋಗಿ ಶಿವನ ಬಳಿಗೆ | ಪಾವಕಾಕ್ಷ ಬಲು ಕರುಣಾನಿಧಿಯಿ- ನ್ನೇನು ಚಿಂತೆ ನಮಗೆ | ಬೇಗನಡೆ ಯೆಂದ ಹರಿಯು ಎನಗೆ | ಸಕಲವೂ ತಿಳಿಸಿದೆ ನಾನಿನಗೆ | 13 ಪರಿಯೋಚನೆ ಮಾಡು | ಸ- ತ್ಕೀರ್ತಿಯ ಸಂಪಾದನೆ ಮಾಡು | ಭರದಿ ಹೂ ಶರಗಳ ನೀ ಹೂಡು | ಹರನ ತಪವ ಭಂಗಿಸಿ ನಮ್ಮೆಲ್ಲರ ಕರುಣದಿ ಕಾಪಾಡು | ತಂದೆಯ- ಪ್ಪಣೆಯ ಮನದಿ ನೋಡು | ಮೂಜಗದಿ ಯಾರು ನಿನಗೆ ಜೋಡು | 14 ಈ ಪರಿಪೇಳಿದ ಗುರುವಿನ ನುಡಿಯನು ಶ್ರೀಪತಿಯ ಕುಮಾರ | ರತಿಯೊಡನೆ ಮಾರ | ನುಡಿದಳಾ ಶಿವನು ಮಹಾಕ್ರೂರ | ಆಪತ್ತೊದಗುವುದೀಗ ಬೇಡ ಎಂ- ಕಂದರ್ಪಮನದಿ ಸೋತು | ಬೃಹಸ್ಪತಿ- ಗೆಂದ ಕಾಮನಿನಿತು 15 ಸಮ್ಮತಿಯಿದು ಕೇಳಿ | ಪೂಶರನ ಬಿಡಲು ಚಂದ್ರಮೌಳಿ | ಕೋಪಿಸಲಾ ಹಣೆಗಣ್ಣೆನಗಾಳೀ | ಬ್ರಹ್ಮಾಂಡಗಳಾದರು ದಹಿಸುವುದು ಎನ್ನಳವೇ ಎಂದಾ | ಈ ಕಾರ್ಯಕೆ ನಾನು ಬಾರೆನೆಂದ | ನುಡಿಗೆ ಸುರ- ಗುರುಮತ್ತಿಂತೆಂದ | 16 ಮರೆಹೊಕ್ಕಿರುವಮರರ ಪಾಲಿಸುನೀ ಕಂದರ್ಪ | ಜಗ- ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ ನಡಿಸಲು ಬೇಕಪ್ಪಾ | ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ ಸರಿಯಾರಪ್ಪಾ | ನಮ್ಮ ನುಡಿ ಮೀರಬಾರದಪ್ಪಾ | ಅಷ್ಟು ಪೇಳಿ- ದರು ಕಾಮವೊಪ್ಪಾ | 17 ಕಾಮನವೊಪ್ಪಿಸಿ ಕರದೊಯಿದಮರರು ಕೈಲಾಸವ ಸೇರಿ | ಅರುಹಿದರು ಗಿರಿರಾಜ ಕುಮಾರಿ | ಕೇಳಿನಡೆತಂದಳಾಗಗೌರಿ | ವ್ಯೋಮಕೇಶನಿಹ ಗವಿಯ ದ್ವಾರಕೇ ಬರಲು ನೋಡಿ ನಂದಿ | ತಾಯಿನೀ- ನಿಲ್ಲಿಗೇಕೆ ಬಂದಿ | ಏನು ಅ- ಪ್ಪಣೆಯೆಂದನು ನಂದಿ 18 ವಂದನೆ ಒಳಗೆ ಹೋಗುವನು ಇವನನೀ ತಡೆಯಬೇಡವಯ್ಯ | ಎನ್ನ ಕಂದನು ಇವ ಕೇಳಯ್ಯ | ಎಂದು ಪೇ- ಳಿದ ಗೌರಿಯ ನುಡಿಯಾ | ಮುದದಿ ಶಿರದೊಳಾಂತನು ನಂದೀಶ್ವರ ಮುಂದೆ ಕೇಳಿ ಕಥೆಯ | ಅನಿತರೊಳ್ ಬಂದ ಕಾಮರಾಯ | ಪೋಗ ಬಹು- ದೆಂದ ಪ್ರಥಮಗೇಯ | 19 ಕಾಮಪೊಕ್ಕನಂದು | ಕರದಿ ಜ- ಪಮಾಲೆ ಪಿಡಿದು ಮುಂದು | ಮ- ಹಾಮಂತ್ರಗಳ ಜಪಿಸುತಂದು | ನೇಮದೊಳೇಕೋಭಾವದೊಳಿರುತಿಹ ಸೋಮಧರನ ಕಂಡ | ಏ- ನು ಮಾಡುವದೆಂದು ಪ್ರಚಂಡಾ | ಇಕ್ಷುಧ- ನುಶರಗಳ ಕೈಕೊಂಡಾ | 20 ವಿನಯದಿಂದ ಪ್ರಾರ್ಥಿಸಿ ಮಾತಾಡಿಸು- ವೆನೆಂದು ಶಂಕರನ | ನುತಿಸಿ ಬೇಡಿ- ದನು ಶೂಲಧರನಾ | ಎಷ್ಟಾದರು ಕರಗಲಿಲ್ಲವನಮನಾ | ಪರಿಪರಿಯೋ- ಚನೆ ಮಾಡಿ ಮನ್ಮಥನು | ಬೆರಗಾಗುತಾ ನಿಂತಾ ಸಮಯನೋಡುತ- ಲಿರತಿಯ ಕಾಂತಾ | ಮನ ದಿ ಹೊಂದಿದನು ಮಹಾಚಿಂತಾ 21 ನೆಂದು ಯೋಚಿಸಿದನು | ಇ- ಕ್ಷು ಧನುವನು ಜೇ ಹೊಡೆದಾನು | ಮಹೇ- ಶನ ಮರ್ಮಸ್ಥಳಗಳನು | ಪುಷ್ಪ ಬಾಣಗಳೂಡೆಸೆಯೆ ಮ- ಶರಗಳನು ಸುರಿದಾನು | ಜ- ನರೆ ಕೇಳೀಯಾಶ್ಚರ್ಯವನು | 22 ಆ ಮಹೇಶ್ವರನ ಮೂಲ ತಿಳಿಯಲಿಂ- ದ್ರಾದಿಸುರರಿಗಳವೆ | ಕೇಳಿಯೀ ಕಾಮನೇನು ಲಕ್ಷ್ಯವೆ | ಕರಿಚರ್ಮಾಂಬರನಾ | ಮೀನ ಕೇ- ತನನ ಬಾಣಕೆ ಮನಾ | ಬಹಿರ್ಮು- ಖನಾಗಿ ನೋಡಿ ಸ್ಮರನಾ | 23 ಕಣ್ಣುತೆಗೆದು ಮುಕ್ಕಣ್ಣಯಲೋ ನಿನ- ಗೆನ್ನೊಳೇಕೆ ಪಂಥಾ | ಛೀ ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ- ತನ್ನನಿಜಸ್ವಾಂತ-| ವನ್ನು ಪೂರ್ವದಂದದಿ ತಪದಲ್ಲಿರಿಸಚ- ಪೋಲ್ವಂದದಲಾ ಶಾಂತಾ | ಶೂರ್ಪಕಾ- ರಿಯು ಎದುರಲಿ ನಿಂತಾ | 24 ನಾನು ಬಂದಾ ಕಾರ್ಯವ ಕೇಳದಲೆ ಇ- ದೇನೀ ಪುರಹರನು | ಛೀಹೋಗೋ- ಗೆಂದು ಗರ್ಜಿಸಿದನು | ಎನುತ ತೆ- ಗೆದೆಚ್ಚ ಪೂಶರವನು | ನಾನಾವಿಧದಲಿ ತನ್ನ | ಚಮತ್ಕಾ- ರಗಳ ತೋರಿಸಿದನು | ಮನದಿ ಭಯಗೊಳುತ ಮನಸಿಜನು | ಮುಂದಾಗುವ ಕಥೆಯ ಕೇಳಿಯಿನ್ನು 25 ಭರ್ಗಕಣ್ದೆರೆದು ನೋಡಲಾಕ್ಷಣದಿ ಭರದಿಂ ಮನ್ಮಥನಾ | ಕೋಪಕಿಡಿ- ಯಿಡುತ ಫಣೆಗಣ್ಣ | ತೆಗೆದು ನೋಡಲು ತಕ್ಷಣ | ಚಿಣ್ಣಾ ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ ದಗ್ಧನಾದ ಮದನಾ | ಭಸ್ಮದಂ- ತಿದ್ದು ಮರ್ಮಸದನಾ | ಅಗ್ನಿವ್ಯಾ ಪಿಸೆ ಬ್ರಹ್ಮಾಂಡವನಾ 26 ಸುರರು ಕಿನ್ನರರು ಗಡಗಡ ನಡುಗುತ ಬೆರಗಾದರು ನೋಡಿ | ಅವರ- ಶಿರವನಲ್ಲಾಡಿ | ಚರರು ಬಂದು ರತಿಗೀ ಸುದ್ದಿಯ ಪೇಳಿ- ದರು ದುಃಖ ಮಾಡಿ | ಕೇಳಿ ನಾರಿಯರು ಶೋಕವಮಾಡಿ | ರತಿಯು ನೆಲದೋಳ್ ಬಿದ್ಹೊರಳಾಡಿ | 27 ಹಾಹಾರಮಣಾ ಹಾ ನಿಜೇಶ ಹಾ ಪ್ರಾಣಕಾಂತಕಾಮಾ | ಎನ್ನ ಕರ್ಕಶನಿಸ್ಸೀಮ | ಸಾಹಸ ಮಾಡುವೆನೆಂದು ಪೋಗಿ ಶಂ- ಕರನಿಂದಲಿ ಮಡಿದೆ | ಪೇಳಿದಮಾ- ತ್ಕೇಳದೆ ನೀ ನಡೆದೇ | ಪೋಗಬೇ- ಡೆಂದು ನಾನು ನುಡಿದೆ 28
--------------
ಗುರುರಾಮವಿಠಲ
ಮರೆವಿನೊಳಗೆ ಮನೆಮಾಡಿದ್ದಿ ಮನ ಅರಿವಿನ ಆಲಯ ಬಿಟ್ಟಿದ್ದಿ ಪ ಹರಿದುಹೋಗುವಂಥ ಸಿರಿಗೆ ಒಲಿದು ನೀ ಪರಮ ಹರಿಯ ಪಾದಕ್ಹೊರತಿದ್ದಿ ಅ.ಪ ಮಂದಿಮಕ್ಕಳೆಂದು ನೆಚ್ಚಿದ್ದಿ ನಿನ್ನ ಹಿಂದೆ ಬರುವರೇನು ಅಂತಿದ್ದಿ ಕುಂದುವ ಜಗ ಮಾಯದಂದಗೆಟ್ಟು ಒಬ್ಬ ನೊಂದಿನ ಹೋಗ್ವುದು ಮರೆತಿದ್ದಿ 1 ಸಿರಿಸಂಪತ್ತಿಗೆ ಹಿಗ್ಗಿದಿ ಇದು ಸ್ಥಿರವಲ್ಲೆಂಬುದು ಅರಿಯದ್ಹೋದಿ ಎರೆದೆಣ್ಣಿರುವನಕುರಿವ ದೀವಿಗೆಯೋಲ್ ವರ ಪುಣ್ಯಿರುವನಕಿರುತದೆ ಸಿರಿಯದು 2 ಹೇಳಿದಮಾತನು ಕೇಳದ್ಹೋಗಿ ಮನ ಮೂಳನಾಗಬೇಡೆಲೆ ಗೂಗಿ ಹಾಳುಯೋಚನೆ ಬಿಟ್ಟು ಮೇಲುಪದವಿ ಪಡಿ ಶೀಲ ಶ್ರೀರಾಮಗೆ ತಲೆಬಾಗಿ 3
--------------
ರಾಮದಾಸರು
ಮಾಡು ನೀ ಹರಿಯ ಭಜನಿ ಪ ಹರಿಯ ಭಜನಿ ಮಾಡು ಹಲವು ಯೋಚನೆಯ ಬಿಡು ಶರಣರೊಳಗೆ ಕೂಡು ಸಿರಿಧರನ ನೋಡು 1 ಹರಿಜನರನ್ನೇ ನೋಡಿ ಅವರ ಪಾದವು ಪಿಡಿ ಶರೀರ ಸಾಧ್ಯನಿಕೆ ಮಾಡಿ ಶರಣ ತತ್ವವುಪಡಿ 2 ಸಿಂಧುಶಯನ ಹರಿ ಎಂದು ಸ್ತುತಿಸೂತೇರಿ ದಂದಗಳನೆ ಮರಿ ದೇವರೆಯೆಂದು ಇರಿ 3 ಸುರಮುನಿ ವಂದ್ಯನಾ ಸುಗುಣ ವಿಲಾಸ ನಾ ಅನುದಿನ ಭಜಿಸಿ 4 ದೇಹ-----ವೆಂದೂ ದಿನಮಾನ ತಿಳಿದಂದೂ ಮಹ ಹೊನ್ನ ವಿಠ್ಠಲ ಎಂದೂ ----- 5
--------------
ಹೆನ್ನೆರಂಗದಾಸರು
ಮಾನವ ನಿನ್ನಾ | ಪಡೆದು ಕೊ ಸದ್ಗತಿಯನು ಪ ತಡಿಯದೇ ಸದ್ಗುರು ಅಡಿಗಳ ಪೂಜಿಸಿ | ಒಡನೆ ಭವಾಂಭವಾಂಬುಧಿ ಥಡಿಯವ ಸಾರೆಲೋ ಅ.ಪ ಪತ್ರೇಂದ್ರವಾಹನನು | ಮಣಿಗಣ ಸೂತ್ರದಂದದಿ ಜೀವನು | ಚಿತ್ರ ವಿಚಿತ್ರದಲಿ ಅಡಿಸುವ | ಗು | ಣತ್ರಯ ವಾದಲಿ | ಕಳತ್ರ ಸುಮಿತ್ರ ಸಮಂಧ | ಧತ್ರಿಲಿ ಮಾಯ ಚರಿತ್ರವಿದೆಂದು 1 ತಾನಾರು ತನುವಾರದು ತನುವಿನ | ತಾನೀ ಸಂಮಂಧವಾರದು | ಜ್ಞಾನಿಗಳನು ಮತದಿ ತಿಳಿದು ನೋಡು | ಸ್ವಾನುಭವದ ಬೋಧದೀ | ಹಾನಿ ಯಶ _ ಸುಖ ಮಾನಾಪಮಾನವು | ಮಾನವರಿಗೆ ಪ್ರಾಚೀನ ಫಲೆಂದು 2 ಹಿಂದಾದ ನೆನಹಿಸದೇ ವಾಸನೆಗಳ | ಮುಂದೇನು ಕಾಮಿಸದೇ | ಕ | ನಸಿನಾನಂದ ವಿದೆಂದು ಭಾವಿಸೀ | ತಂದೆ ಮಹಿಪತಿ ಕಂದಗ ಸಾರಿದ | ದ್ವಂದ್ವಗೆಲಿದು ಗೋವಿಂದ ನೆನೆಯುತ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು
ಮುಕ್ಕೋಟ ದ್ವಾದಶಿಯ ದಿವಸ (ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ) ರಂಭೆ : ಮತಿವಂತೆ ಪೇಳೀತನ್ಯಾರೆ ದೇವ ವ್ರತತಿಯಧಿಪನಂತೆ ನೀರೆ ತೋರ್ಪ ಅತಿಶಯಾಗಮ ಬಗೆ ಬ್ಯಾರೆ ರತ್ನ ದ್ಯುತಿಯಾಭರಣವ ಶೃಂಗಾರ ಆಹಾ ಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ- ಗತಿ ಸ್ಮøತಿ ತತಿಗಳ ಮತಿಗಗೋಚರನಂತೆ 1 ಊರ್ವಶಿ : ಲಾಲಿಪುದೆಲೆಗೆ ಪೇಳುವೆನು ನೂತನವ ಲೋಲ ಲೋಚನನ ನಾಟಕ ಸತ್ಕಥನವ ಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿ ಬಾಲಾರ್ಕಸದೃಶನೀತನು ಇರ್ಪನಲ್ಲಿ ನೀಲನಿಭಾಂಗನು ನೆನೆವರ ಪಾಪವ ಘೋಲುಘಡಿಸಲೆಂದೆನುತಲಿ ಭಾರ್ಗವ ಕೋಲಿಂದೆಸಗಿದ ಧರಣಿಗೆ ಬಂದು ಸ- ಲೀಲೆಗಳೆಸಗುವ ಜಾಲವಿದೆಲ್ಲ 2 ಸರಸಿಜಗಂಧಿ ಕೇಳ್ ದಿಟದಿ ತನ್ನ ಅರಮನೆಯಿಂದ ಸದ್ವಿಧದಿ ಈರ್ವ- ರರಸಿಯರ್ ಸಹಿತ ಮಿನಿಯದಿ ಅತಿ ಭರದಿಂದ ಸೂರ್ಯನುದಯದಿ ಆಹಾ ಉರುತರ ಹೇಮಪಲ್ಲಂಕಿಯೊಳಡರಿ ತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ3 ಊರ್ವಶಿ : ಮದ್ದಾನೆಗಾತ್ರೆ ಲಾಲಿಸಿ ಕೇಳು ಮಾತ ಬದ್ಧ ನೀ ಪೇಳ್ದ ಮನದ ಶಂಕಾವ್ರಾತ ತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳು ಸೂರ್ಯ ಉದಯ ಕಾಲದೊಳು ಭದ್ರಭವನವನು ಪೊರಟು ವಿನೋದದಿ ಅದ್ರಿಧರನು ಸಜ್ಜನರೊಡಗೂಡಿ ಉ- ಪದ್ರಿತ ಪಾಪವ ಛಿದ್ರಿಪ ಸ್ನಾನಕೆ ರೌದ್ರಿತ ರಾಮಸಮುದ್ರದ ಬಳಿಗೆ 4 ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿ ಪರಮ ಮಹಿಮೆನೆಂದ ಮೇರೆಗೆ ಘನ- ತರ ಸ್ನಾನವೇನಿದು ಕಡೆಗೆ ವೃತ ದಿರವೋ ಉತ್ಸವವೋ ಪೇಳೆನಗೆ ಆಹಾ ತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈ ಪರಿಗಳ ಸಾಂಗದಿಂದರುಹಬೇಕೆನಗಿನ್ನು 5 ಊರ್ವಶಿ : ಅಕುಟಿಲೆ ಬಾಲೆ ಯೌವನವಂತೆ ಕೇಳೆ ಸಕಲಾಂತರ್ಯಾತ್ಮನೀತನು ಸತ್ಯಶೀಲೆ- ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿ ಭಕುತವತ್ಸಲನು ಉತ್ಸವಿಸುವನಲ್ಲಿ ವಿಕಳಹೃದಯ ನರನಿಕರಕಸಾಧ್ಯವೆಂ ದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿ ಅಖಿಳೋತ್ಸವ ಮಸ್ತಕಕಿದು ವೆಗ್ಗಳ ಮುಕುಟೋತ್ಸವವೆಂದೆನುತಲಿ ರಚಿಸುವ 6 ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನ ವೊಲವಿಂದ ಗೈದ ಮೇಲಿವನು ತನ್ನ ರಮಣಿಯರ್ಸಹಿತಂದಣವನು ಏರಿ ನಿಲುನಿಲುತ್ಯಾಕೆ ಬರುವನು ಆಹಾ ಪೊಳಲೊಳಗಿಹ ಜನನಿಳಯದ ದ್ವಾರದಿ ಕಳಕಳವೇನಿದ ತಿಳುಪೆನಗೀ ಹದ7 ಊರ್ವಶಿ : ಕುಂದರದನೆ ಬಾಲೆ ಚದುರೆ ಸೈ ನೀನು ಮಿಂದು ತೋಷದಿ ಅಂದಣವನ್ನೇರಿ ತಾನು ಇಂದೀ ಪುರದೊಳಿರ್ಪ ಜನರ ದೋಷಗಳ ಕುಂದಿಸಲೆಂದವರವರ ದ್ವಾರದೊಳು ನಿಂದಿರುತಲ್ಲಿಯದಲ್ಲಿ ಆರತಿಗಳ ಚಂದದಿ ಕೊಳುತೊಲವಿಂದ ಕಾಣಿಕೆ ಜನ- ವೃಂದದಿ ಕೊಡುತಾನಂದ ಸೌಭಾಗ್ಯವ ಒಂದಕನಂತವ ಹೊಂದಿಸಿ ಕೊಡುವ 8 ರಂಭೆ : ಸರಸಿಜಾನನೆ ಮತ್ತೇನಿದನು ತನ್ನ ಅರಮನೆಯಲ್ಲಿ ಭೂದ್ವಿಜನರನು ಸರ್ವ ಪುರಜನ ಸಹಿತೊಳಗಿವನು ನಾನಾ ತರದಿ ಮೆರೆವ ಭೋಜನವನು ಆಹಾ- ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ- ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9 ಊರ್ವಶಿ : ಮಂಗಲಾನನೆ ಲೇಸು ನುಡಿದೆ ಕೇಳ್ ನೀನು ಗಂಗಾಜನಕ ತನ್ನ ಗೃಹದಿ ವಿಪ್ರರನು ಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿ ಸಂಗಾತದಲಿ ಆರೋಗಣೆ ಗೈದು ಮೆರೆಸಿ ಅಂಗಣದಲಿ ರಾತ್ರೆಯಲಿ ವಿನೋದದಿ ಕಂಗೊಳಿಸುವ ಉರಿದರಳ ಸಮೂಹಕೆ ರಂಗಪೂಜೆಯನುತ್ತಂಗವಿಸುವ ನಿಗ- ಮಂಗಳೊಡೆಯನು ವಿಹಂಗಮಾರೂಢ 10 ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ- ಕುಮುದಾಪ್ತ ಠಾವಿನ ವೋಲು ಬಂದು ಆದರಿಸಲಿದರ ಮಧ್ಯದೊಳು ತನ್ನ ರಮಣಿಯರ್ ಸಹಿತ ತೋಷದೊಳು ಆಹಾ ವಿಮಲವನ್ನೇರಿನ್ನೆಲ್ಲಿಗೈದುವನೆಂಬಾ- ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11 ಊರ್ವಶಿ : ಥೋರ ಕನಕುಂಭಕುಚಭಾರೆ ಕೇಳೆ ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆ ಚಾರು ಈ ಹೂವಿನ ತೇರನೇರುತಲಿ ಕೇರಿ ಕೇರಿಯೊಳಾರತಿಗೊಳ್ಳುತಲಿ ಭೋರಿಡುತಿಹ ವಾದ್ಯಧ್ವನಿ ಘನತರ ಭೇರಿ ಮೃದಂಗಾದ್ಯಖಿಳ ವಿನೋದದಿ ಸ್ವಾರಿಗೆ ತೆರಳುವ ಕ್ರೂರ ನರರ ಆ- ಘೋರ ಪಾಪ ಜರ್ಝರಿಸಲೆಂದು 12 ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನ ಅರಮನೆಯಿದಿರು ರಥವನು ತಾನು ಭರದೊಳಗಿಳಿದಂದಣವನು ಏರಿ ಮೆರೆವಾಲಯದ ಸುತ್ತುಗಳನು ಆಹಾ ತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ- ಭರಿತ ಗಾಯನ ಭೇರಿ ಧ್ವನಿಗಳೇನಿದ ಪೇಳೆ13 ಊರ್ವಶಿ : ಕೃಷ್ಣಾಂಕ ವದನೆ ಕೇಳೆಲೆ ಪೇಳ್ವೆ ನಿನಗೇ ದುಷ್ಟಮರ್ದನ ರಥವಿಳಿವುತ್ತಲಾಗೇ ಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆ ಅಷ್ಟಾವಧಾನವ ರಚಿಸುತ್ತ ಕಡೆಗೆ ಶ್ರೇಷ್ಠನು ರತ್ನಾಸನದಿ ಗ್ರಹದಿ ಪರ ಮೇಷ್ಟಜನಕೆ ಸಂತೋಷಾನಂದದಿ ಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತ ಇಷ್ಟವನೀವ ಯಥೇಷ್ಟ ದಯಾಬ್ಧ 14 ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನು ಹರಿ ಏಕರೂಪನೆನ್ನುತಲಿ ಲಕ್ಷ್ಮೀ ಕರವೆನಿಸುವ ಕಾರ್ಕಳದಲಿ ಭಾಗ್ಯೋ- ದಯ ದೇವಾಲಯದ ಮಧ್ಯದಲಿ ಆಹಾ ತ್ವರಿತದಿ ನುತಿಸಿರೊ ಗುರು ನಾರಸಿಂಹ ಶ್ರೀ- ಕರ ವೆಂಕಟೇಶನ ಚರಣಕಮಲಗಳ 15
--------------
ತುಪಾಕಿ ವೆಂಕಟರಮಣಾಚಾರ್ಯ
ಮುಂದೆ ಗಾಣದೆ ದಾರಿ ಮುದಿಗೆ ಬಿದ್ದು | ಹಿಂದು ನೋಡದೆಬಂದದ್ದು ಬರಲೆಂದು ತಾಳದೊ ಕಂದಗಳ ಪ್ಯಾಡುತಲಿದಿನ ಸುಖವೆಂದೆಂದಿಗೂ ಬೇಕೆಂದು ಬೆಂದ ಭವದಂದದಿಗೆ ನಾ ಕುಂದದೆ ನೊಂದೆ ನಿನಗೆ ವಂದಿಸದೆ 1 ದೇವ ಕಾಯಯ್ಯ ಆವ ದೈವಕ ಬಾಹದೆ | ದಯಾಭಾವಿಸಲ್ಯಾಕ ಭಾವಜಾನಯ್ಯ | ಕಾಮನ ಕಾಟಿಗೆ ಕಂಗೆಡಿಸುವದುರ್ಭಾವಗಳನು ಪರಿಹರಿಸೈ | ಹಾವಿನ ಹಗಿಹಗಳಲಿವಿಹರಿಸುತಿಹ ಜೀವದ ಜೀವನದೊಡೆಯ 2 ಕರ ವಿಡಿದಿಂದುದ್ಫಸದಿಹದು ಬಾಹಳರದು 3
--------------
ರುಕ್ಮಾಂಗದರು
ಮೃಡ ಫಣೀಂದ್ರವೀಂದ್ರ ವಂದ್ಯ ಕಡಲಶಯನ ಶ್ರೀನಿವಾಸ ಒಡೆಯನಾಜ್ಞೆಯಿಂದಲೆನಗೆ ಪ. ಜೀವಗಣಪತೆ ಸರ್ವದೇವತಾಗತೆ ಪಾವನಾತ್ಮ ಪದ್ಮ ಸಮಕರಾವಲಂಬಿತ್ತು ಬೇಗ 1 ಮೂರು ತಾಪವಾ ಹತ್ರ ಸೇರದಂದದಿ ಅದರ ಬೇರ ಕಡಿದು ಭಕ್ತಿಸಾರ ಧಾರದಿಂದ ದೃಢವ ಮಾಡಿ 2 ಕೈಟಭಾರಿಯ ಪುರದ ಭಾಟದಾರಿಯ ಬೇಟ ಜಲಟ ಕುಕ್ಕುಟಗಳ ನೋಟಾಪಾಟದೊಡನೆ ತೋರಿ 3 ಹರಿಯ ದೊರೆತನ ಕರುಣಿಕಾಗ್ರಣಿ ಕಮಲ ಕರವ ಎನ್ನ ಶಿರದೊಳಿಕ್ಕಿ 4 ನಿನ್ನ ಕರುಣವು ನಿಯತವಾಗಲು ಪನ್ನಗಾಚಲೇಂದ್ರ ದಯದಿ ತನ್ನ ದಾಸನೆಂದು ಕಾವ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮೊರೆಯ ಲಾಲಿಸಬೇಕು ಮರುಗಿ ದಮ್ಮಯ್ಯಾವರದ ಸದ್ಗುರುರಾಯ ವಾಸುದೇವಾರ್ಯ ಪ *ಜನನೀಯ ಜಠರಾದಿ ಜಪಿಸಿದ ಸ್ಥಿತಿಯಾನೆನೆಯಾದೆ ಮರೆತಂಥ ನೀಚಾ ನಾನಯ್ಯಾಸನಿಹವನ ಸೇರಾದೆ ಸುಜ್ಞಾನರಡಿಯಾಕಣುಗೆಟ್ಟು ದಾರಿಯಕಾಣೆ ಗುರುರಾಯಾ 1ಕಾಮಾದಿ ರಿಪುಗಾಳ ಕೂಟದಿ ನಿಂದುಪ್ರೇಮಪಾಶದ ಕಟ್ಟು ಬಿಗಿಯಾಗಿ ಬಂದುಭೀಮಸಂಸಾರದಿ ಬಿದ್ದನಿವನೆಂದುನೀ ಮನಕೆಚ್ಚರ'ತ್ತು ಸೆಳಕೊಂಡು 2ಕೊಳಚೆಯೊಳಿಪ್ಪಾ ಸೂಕರ ವಾಸನೆಯುತೊಲಗಿ ಪೋಗಲಿಯೆಂದು ತೋರ್ಪುದೆ ಮತಿಯುಹೊಲೆದೇಹ ನಾನೆಂಬ ಹಳೆಯ ಸಂಗತಿಯುಬಲಿತಿದೆ ನೀನಿದ ಬಿಡಿಸಿ ಸನ್ಮತಿಯ 3ಸಾಲವ ತಂದು ಸ' ಸ'ಯಾಗಿ ತಿಂದೂಬಾಳುತಿರೇ ಕೊಟ್ಟವ ಬಡ್ಡಿ ಬೇಕೆಂದುಕೇಳಿ ಬಾಧಿಸಲೇತಕೆ ಕಡಗೈದೆನೆಂದುಆಲೋಚಿಪಂತೆಚ್ಚರಾುತೆನಗಿಂದು 4ಬರುವುದು ಸುಖವೆಂದು ಬಲುಯತ್ನಗೈದುಸೊರಗಿದೆನಲ್ಲದೆ ಸುಖಗಾಣೆ ನೊಂದುಕರಣಕೆಚ್ಚರವೊ ಕರುಣಿಸಲ್ಪ'ದುಕರಪಿಡಿದುಳುಹೆಂದು ಕೂಗಿದೆನಿಂದು 5ುೀ ದಯಾರಸಕೆ ನಾನೀವೆನೇನುವನುಪಾದಪದ್ಮವ ನಂಬಿ ಪಾಲಿಸೆಂಬುವನುಆದರಿಸುತ ಭಕ್ತಿಯಾನಂದವನ್ನುವೇದವೇದ್ಯನೆ ಕೊಟ್ಟು ಸಲಹು ನೀನಿನ್ನು 6ಪುಟ್ಟಿದಂದಿನಿಂದಾ ಮಡಿ ಮಡಿಯಾಗಿ ದುಡಿದುಘಟ್ಟಿಗತನವನು ಗಳಿಸಬೇಕೆಂದುಹೊಟ್ಟೆ ಹೊರಕರೊಳಾಡಿ ಹುಸಿಯನೆ ನುಡಿದುಕೆಟ್ಟು ಸುಖಗಾಣದೆ ಕೂಗಿದೆನಿಂದು 7ಸಾಕಾುತಯ್ಯಾ ಸಂಸಾರ ಕೋಟಲೆಯುನಾ ಕಾಣೆ ಸುಖವನು ನಿ'ುಷವಾದರೆಯುನೀಕರಿಸುವರಿಂದ ನಿರ್ವೇದ ಗತಿಯುಸೋಕಲು ನಿನ್ನೊಳು ಸಿಕ್ಕಿತು ಮತಿಯು 8ಧರೆಯೊಳಜ್ಞರ ನೋಡಿ ದಯದಿಂದ ಮುದದಿನರದೇಹದಾಳಿ ಚಿಕನಾಗಪುರವರದಿಒರೆದು ವೇದಾಂತರ್ಥವನು 'ಸ್ತರದಿ 1ಉದ್ಧರಿಸಿದೆ1 ವಾಸುದೇವಾರ್ಯ ಸುಖ ಪಥದಿ 9(ಈ) ಸಾಮಾಜಿಕ ಕೃತಿಗಳು
--------------
ವೆಂಕಟದಾಸರು
ಮೋದದಲಿರಬೇಕಮ್ಮ | ಸುಮ್ಮನೆ ನೀನು ಮೋದದಲಿರಬೇಕಮ್ಮ ಪ. ಮೋದ ಶ್ರೀ ಗುರುಗಳ ಚರಣ ಕಮಲವನ್ನು ಮೋದದಿಂದಾಶ್ರಯಿಸಿ ಸುಖದಲಿರಲಿಬೇಕು ಲೋಕದ ಜನಗಳ ನುಡಿಗಳ ಲೆಕ್ಕಿಸದೆ ಲೋಕವಂದ್ಯನ ಚರಣ ಕಮಲವ ಸ್ಮರಿಸುತ ಅ.ಪ. ಪರಮಾತ್ಮನ ಕೃಪೆಗೆ ಕಾರಣವಿದು ಗುರುಕರುಣದ ಬಲವು ಅರಿಯದ ಮನುಜರ ಬಿರುನುಡಿಗೆ ಮನ ಕೊರಗಿಸದಂದದಿ ಹರುಷಪಡಲಿಬೇಕು 1 ಎಚ್ಚತ್ತು ನಡಿಯಬೇಕು | ಶ್ರೀ ಗುರುಸೇವೆ ಇಚ್ಛೆಯಿಂ ಮಾಡಬೇಕು ತುಚ್ಛ ಮಾತುಗಳಿಗೆ ಮನಕೊಡದೆ ಹರಿ ಮೆಚ್ಚುವಂದದಿ ಗುರು ಇಚ್ಛೆಯನರಿತು ನಡೆದು 2 ವಂದನೆ ನಿಂದ್ಯಗಳ | ಮೋಕ್ಷಾರ್ಥಿಯು ಒಂದಾಗಿ ಭಾವಿಸುತ ಮಂದರೋದ್ಧರನ ಮಾಯಕೆ ಮನದಿ ಮೋದಿಸುತ ಮಂದರಂದದಿ ಮನುಜರಿಗೆ ತೋರುತಲಿದ್ದು 3 ಮಾನವ ಜನ್ಮ ಸಾಧನ ಜನ್ಮವಮ್ಮ ಸಾಧಾರಣವಲ್ಲ ಸಾಧು ಸಜ್ಜನಸಂಗ ಸಾಧಿಸಿ ದುಷ್ಕರ್ಮ ಛೇದಿಸಬೇಕಮ್ಮ 4 ಚಿಂತೆಯನಳಿಯಬೇಕು | ಶ್ರೀ ಗುರು ಕರುಣ ಅಂತರ ತಿಳಿಯಬೇಕು ಸಂತತ ಗೋಪಾಲಕೃಷ್ಣವಿಠ್ಠಲನ ಅಂತರಂಗದಿ ಭಜಿಸಿ ಮುಕ್ತಿ ಸಾಧಿಸಬೇಕು 5
--------------
ಅಂಬಾಬಾಯಿ
ಯಾಕೆ ಮರುಳಾದೆ ಹೀಂಗೆ ಎಲೆ ಮನವೆ ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ. ಧನದಾಸೆಯನು ಮರಿ ಮನುಮಥನ ಬಾಣಕಳುಕದಿರು ತೊಳಲದಿರು ನೆಲದಾಸೆಗೆ ನೀನದರ ಅನುವರಿತು ಹರಿಯ ಸ್ಮರಿಸು ಮನವೆ 1 ಅನ್ಯರಾಗುಣ ದೋಷಯಣಿಸದಲೆ ನಿನ್ನಿರವ ನೋಡು ಕಂಡ್ಯಾ ಮನವೆ ಬಂಣಗಾರಿಕೆಯು ಬರಿದೆ ಔದಂಬ್ರ- ಹಣ್ಣಿನಂತೀ ಕಾಯವು ಮನವೆ 2 ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ ಭ್ರಮೆಗೊಂಡು ಬಳಲಾದಿರೋ ಕಮಲಪತ್ರಕ್ಕೆ ಒಳಗಿನ ಜಲದಂತೆ ನೆಲಕೆ ನಿರ್ಲೇಪನಾಗೋ ಮನವೆ 3 ಈ ದೇಹ ಸ್ಥಿರವಲ್ಲವೊ ಕಾಲನಾ ಬಾಧೆಗೋಳಗಾಗದಿರೋ ಮನವೆ ಭೇದ ದುರ್ಗುಣವ ತ್ಯಜಿಸು ನೀ ಗೇರುಬೀಜದಂದದಿ ತಿಳಿಯೊ ಮನವೆ 4 ಮಾಡು ಹರಿಸೇವೆಯನ್ನು ಮನದಣಿಯೆ ಬೇಡು ಹರಿಭಕ್ತಿಯನ್ನು ಕೂಡು ಹೆಳವನಕಟ್ಟೆಯ ವೆಂಕಟನ ಬೇಡಿ ಮುಕ್ತಿಯನು ಪಡೆಯೊ ಮನವೆ 5
--------------
ಹೆಳವನಕಟ್ಟೆ ಗಿರಿಯಮ್ಮ
ಯಾಕೆ ಸುಮ್ಮನೆ ಪೇರಿ ಹೊಡೆಯುವಿ ಕಾಕು ದುರ್ಭವ ಚಕ್ರದಿ ಪ ಲೋಕದಿರುವು ನಿನಗೇನು ಸ್ಥಿರವೆಲೋ ಕಾಕುಜೀವ ವಿಚಾರ ಮಾಡದೆ ಅ.ಪ ಕಾಕುಸಿರಿಗೆ ಕೈಹಾಕಿ ಬಲು ಬಲು ಶೋಕದಬ್ಧಿಲಿ ಮುಳುಗಿದ್ಯೊ ನೂಕಿ ಯಮನರೊದೆದು ಎಳೆವಾಗ ಲೋಕಸಂಪದ ನಿನ್ನ್ಹಿಂದೆ ಬರುವುದೆ 1 ನಾನು ಯಾರೆಂದೆಂಬ ಖೂನ ಸು ಜ್ಞಾನ ವಿಡಿದು ತಿಳಿಯದೆ ಶ್ವಾನಸೂಕನಂದದಿ ಮಹ ಹೀನ ಬವಣೆಯೊಳ್ಬೀಳುತ 2 ಗೋತಗೋಜಲಕುಣಿ ಈ ಸಂಸಾರ ರೋತಿ ಹೊಲಸಿಕ್ಕಿ ನಾರುವ ನೀತಿಗೆಟ್ಟದರೊಳಗೆ ಬಿದ್ದೆಮ ಭೀತಿಯಿಂ ಬಳಲುವುದೇನೆಲೊ 3 ಪೂರ್ವಪುಣ್ಯದಿಂ ಸಿಕ್ಕ ಈ ಮಹ ಪರ್ವಕಾಲ ಸಮಯರಿಯದೆ ದುರ್ವಿಕಾರದಿಂ ಸರ್ವ ಕಳೆಯಲು ದೊರೆವುದೇ ಪುನ:ಬಯಸಲು 4 ತೋರಿ ಇಂದ್ರಜಾಲದಂದದಿ ಹಾರಿಹೋಗುವ ಮಾಯ ನೆಚ್ಚಿ ಸಾರತರ ಮೋಕ್ಷವನು ಕರುಣಿಪ ಶ್ರೀರಾಮನ ನಂಬದೆ 5
--------------
ರಾಮದಾಸರು