ಒಟ್ಟು 216 ಕಡೆಗಳಲ್ಲಿ , 56 ದಾಸರು , 207 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆ ಬಹನೆ ಕೃಷ್ಣ ಮಂದಸ್ಮಿತಾನನೆ |ಅಂದದಿಂದಿರುವ ತನ್ನಯ ವೃಂದಾವನ ಬಿಟ್ಟಿಲ್ಲಿಗೆ ತವಕದಿ ಪತರುಣೀ, ಗೋಕುಲದೊಳಗಿಹ ಸಖಿಯರು ಎಂಥಾ ಧನ್ಯರೆ |ಪರಮಾತ್ಮನ ಪೊಂದಿ ಇತರ ಕರಕರಿ ಅರಿಯಳೆ ||ಹರಿಯಿಂತೊಲಿದಿರಲವರೇನು ಸುರಲೋಕದ ಸ್ತ್ರೀಯರೇ |ಪರಿಪರಿ ಸುಖ ಸಾಗರದೊಳಗಿರುವರುಜರಿದುಮಧುರೆಯಲ್ಲಿಹದೆಂದು 1ಅಮ್ಮೆಏನೊಳ್ಳೆವರವರಾಳ್ವರು ಸಮ್ಮಾತಾಂತಲ್ಲವೆ |ನಮ್ಮನೆಯವರವರಂತೆ ಸುಮ್ಮನೆ ಇರುವರೆ ||ಬೊಮ್ಮನ ಜನಕೆಮೊಲಿಸಿದರೆ ಒಮ್ಮೆಗೆ ಪೇಳಿರೆ |ಸಮ್ಮಸಿ ಕೊಳ್ಳಲು ಮನದಿ ಸುಕರ್ಮದ ಪ್ರಬಲಿಗೆ ಘಮ್ಮನೆ ಬಹಸಖಿ 2ಅಲ್ಲೀ ಸ್ತ್ರೀಯರಕಿಂತಿತಿಶಯ ಚಲ್ವೆರ್ನಾವಲ್ಲವೆ |ಸುಳ್ಳಲ್ಲಿಂತಾಭರಣಾಂಬರವೆಲ್ಲಿ ಕಂಡಿಹರೆ ||ಗೊಲ್ಲಿತಿಯರು ನಮ್ಮಂದದಿ ಸೊಲ್ಲಿಸಬಲ್ಲರೆ |ಮಲ್ಲಮರ್ದನ ಪ್ರಾಣೇಶ ವಿಠಲೆಮ್ಮನು ಬಿಟ್ಟೆಲ್ಲಿ ಪೋಗನು 3
--------------
ಪ್ರಾಣೇಶದಾಸರು
ಏನು ಗತಿಯೊ ರಂಗ ನಾ ನಿನ್ನವನಾಗಿಜ್ಞಾನದಂತಿರಲಿಲ್ಲವೊ ಪ.ಉಂಡುಂಡುತುಡುಗಕೋಣನಪರಿಸೊಕ್ಕಿದೆಕಂಡಲ್ಲಿ ಕುಳಿತೆ ನೊಣನ ತೆರದಿಭಂಡು ಭೂತದ ಮಾತನಾಡಿ ಭಂಡನಾದೆಪುಂಡರೀಕಾಕ್ಷನನ್ನಂಥ ಪಾತಕಿಗೆ1ಬಲು ಶಾಸ್ತ್ರಶ್ರವಣೆಂಬುವ ಮಳೆಗರೆದರೇನುಕಲುಗುಂಡಿನಂತೆ ಕೆಟ್ಟೆದೆ ತೊಯ್ಯದುಹಲವು ಅಧ್ಯಾತ್ಮವನುಸುರೇನು ಚಿತ್ತದಕಳವಳಿ ನಿಲಿಸಲಾರದ ಪಾಮರಗೆ 2ಭವಸುಖ ಉಂಬಾಗ ನೋವು ಬೇವಾದಾಗತವಕದಿ ನುಡಿವಾಗ ಕನಸಿನಾಗಅವಿರಳಅಚ್ಯುತನಿನ್ನಂಘ್ರಿ ನೆನೆದೀಶಅವಸರಕೊದಗೆಂದೆ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ಒಂದೇ ಕೂಗಳತೆ | ಕೈಲಾಸಕ್ಕೆ |ಒಂದೇ ಕೂಗಳತೆ ಪಬಾಲ ಮಾರ್ಕಾಂಡೇಯ ಕಾಲಪಾಶದಿ ಸಿಕ್ಕಿ |ಗೋಳಿಟ್ಟು ಸ್ತುತಿಸಲಾ ನೀಲಕಂಧರನಾ ||ಶೂಲಪಾಣಿಯು ಕಲ್ಲ ಲಿಂಗದಿ ಮೈದೋರಿ |ಕಾಲನ ಮುರಿದೆತ್ತಿ | ಬಾಲನ ಸಲಹಿz À 1ಶಿವನ ಅರ್ಧ ಪ್ರಹರದಿ ಒಲಿಸಿಕೊಳ್ಳುವೆನೆಂದು |ಪವನಾತ್ಮಜನು ಗದೆಯನಂಬರಕ್ಕೆಸೆದು ||ಭುವನದಿ ಸ್ತುತಿಸುತ್ತ ಶಿರಒಡ್ಡಿನಿಂದಿರೆ |ತವಕದಿಂದೈತಂದು ಶಿವನು ಭೀಮನ ಕಾಯ್ದ 2ಚರರನಟ್ಟಿದನೇ ರತ್ನಾಂಗದ ಶಿವನಿಗೆ |ಕರೆಯ ಪೋದನೇ | ಕನ್ಯನೆಂಬ ಚಂಡಾಲ ||ಬರದೋಲೆ ಕಳುಹಿಸಿ ಕೊಟ್ಟಾಳೆ ನರ್ಮದೆ |ಸ್ಮರಿಸಿದಾಕ್ಷಣ ಗೋವಿಂದನಸಖಬರುವರೇ 3
--------------
ಗೋವಿಂದದಾಸ
ಔತುಕೊಂಡಿ ಯಾಕೊ ನರಹರಿಪ್ರಾರ್ಥನೆಯನ್ನು ಕೇಳೊ ಸ್ವಾಮಿ ಪವೇದ ತಂದುಭಾರಪೊತ್ತುಕೋರೆ ತೋರಿ ಕರುಳ ಬಗೆದುಬೇಡಿ ಭೂಮಿ ದೂಡಿನೃಪರಸಾಗರವ ಬಂಧಿಸಿದ ಭಯವೋ 1ಕದ್ದು ಬೆಣ್ಣೆ ಕಳ್ಳನೆನಿಸಿವದ್ದು ತ್ರಿಪುರಾಸುರರ ಸದೆದುಹದ್ದನೇರುವುದನೆ ಬಿಟ್ಟುಹಯವನೇರಿದ ಭಯವೋ ಸ್ವಾಮಿ 2ತರಳಗೊಲಿದು ಬರಲು ನಿನ್ನಇರಿಸಿ ಸ್ನಾನಕೆನುತ ಪೋಗಿತ್ವರದಿ ಬಂದು ನೋಡಲು ಅದ್ಭುತದಿ ಬೆಳೆದ ಭಯವೋ ದೇವ 3ನಿಲುಕದಿರಲು ನಿನ್ನವದನಯುವಕ ನೋಡಿ ಮೊರೆಯನಿಡಲುತವಕಿಸುವಿ ಬಾಲಕನೆ ನಿನ್ನಸಮಕೆ ಎನ್ನ ಮಾಡಿಕೊ ಎಂದು 4ಸಿರದಿ ಕರವನಿಡುತ ತನ್ನಸಮಕೆ ಬರುವ ತೆರದಿ ನಿನ್ನಸಿರವ ಪಿಡಿದು ಬಿತ್ತಿ ಸ್ತುತಿಸೆಕುಳಿತೆ ಕೂಡಲಿಯ ತೀರದಲಿ 5ಭಕ್ತರೆಲ್ಲ ನೆರೆದು ನಿನ್ನಭಕ್ತಿಪಾಶದಿಂದ ಬಿಗಿದುಇಚ್ಛೆ ಬಂದ ತೆರದಿ ಕುಣಿಸೆಮೆಚ್ಚಿಅವರಪೊರೆವೆÀ ದೇವ6ಬಂದ ಜನರು ಛಂದದಿಂದತುಂಗಭದ್ರೆ ಸಂಗಮದಲಿಮಿಂದು ನಿನ್ನ ವಂದಿಸುವರೊತಂದೆ ಕಮಲನಾಭವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ಕಣ್ಣಿನೊಳಗೆ ನೋಡೊ ಹರಿಯ - ಒಳ -ಗಣ್ಣಿನಿಂದಲಿ ನೋಡೊ ಮೂಜಗದೊಡೆಯ ಪ.ಆಧಾರ ಮೊದಲಾದ ಆರು - ಚಕ್ರಶೋಧಿಸಿ ಸುಡಬೇಕು ಈ ಕ್ಷಣ ಮೂರು ||ಸಾಧಿಸಿ ಸುಷಮ್ನ ಏರು ಅಲ್ಲಿಭೇದಿಸಿ ನೀ ಪರಬ್ರಹ್ಮನ ಸೇರು 1ಎವೆಹಾಕದೆ ಮೇಲೆನೋಡು - ಮುಂದೆತವಕದಿಂದಲಿ ವಾಯು ಬಂಧನಮಾಡು ||ಸವಿದು ನಾದವ ಪಾನಮಾಡು - ಅಲ್ಲಿನವವಿಧ ಭಕ್ತಿಯಲಿ ನಲಿನಲಿದಾಡು 2ಅಂಡದೊಳಗೆ ಆಡುತಾನೆ -ಭಾನು -ಮಂಡಲ ನಾರಾಯಣನೆಂಬುವನೆ ||ಕುಂಡಲಿತುದಿಯೊಳಿದ್ದಾನೆ - ಶ್ರೀ ಪು -ರಂದರ ವಿಠಲನು ಪಾಲಿಸುತಾನೆ 3
--------------
ಪುರಂದರದಾಸರು
ಕಾಳೀ ದ್ರೌಪದಿ ಭಾರತೀನಿನ್ನಪಾದಕೀಲಾಲಜನುತಿಪೆಪ್ರತಿ||ವೇಳೆಯೊಳಗೂ ಲಕ್ಷ್ಮೀಲೋಲನ ಚರಣಾಬ್ಜ |ವಾಲಗವೀಯೇ ಸುಶೀಲೆ ಸ್ವಯಂಭುಜೆ ಪಇಂದ್ರಸೇನಾ ನಳನಂದಿನಿ ಶಿವಕನ್ಯಾ |ನಂದಪೂರಿತಳೆ ಚಂದ್ರಾ |ನಿಂದಕರಿಪುಜ್ಞಾನಸಾಂದ್ರೆ ಸುಪತಿವ್ರತೆಕಂದುಗೊರಳ ವಾರುಣೀಂದ್ರ ಅಂಡಜಾಧಿಪ ||ಇಂದ್ರನಿರ್ಜರವೃಂದ ಮುನಿಗಣವಂದಿತ ಪದಾರವಿಂದೆ ಭವದಲಿನೊಂದೆ ಭಯವಾರೆಂದು(ನಿನ್ನೊಡಿವೆಂದದಲಿ ನಿನ್ನಡಿ ಪೊಂದಿ ಬೇಡುವೆ ನಂದದಲಿ)ಕೊಡೆ (ಅ)ಮಂದಕರುಣೆ 1ತರಣಿಯಾನಂದ ಭಾಸೆ |ಪ್ರದ್ಯುಮ್ನ ದೇವರ ಸುತೆಕ್ಲೇಶಹರಿಸೆ |ಹರಹಿ ಯನ್ನಯ ಮೇಲೆ ಕರುಣಾಪಾಂಗದ ದೃಷ್ಟಿ |ದುರುಳಮತಿ ಪರಿಹರಿಸಿತವಕಹರಿ-ಗೆರಗೊ ಮನ ಕೊಡುಪರಮಧಾರ್ಮಿಕೆಕರೆವೆ ಬಂದೀಗಿರೆ ಹೃದಯಾಬ್ಜದಿ |ಉರು ಪರಾಕ್ರಮೆಪರತರಳೆ ಸದಾಪೊರೆಯೆ ಬಿಡದಲೆಕರಮುಗಿವೆ 2ವಾಣೀ ಸುಂದರಿ ವರದೆ ಸಾಧ್ವೀ |ವೀಣಾಪಾಣಿ ಪೇಳುವೆನೆ ಇದೇ |ಹೀನ ವಿಷಯವಲ್ಲೆ ಪೋಣಿಸಿ ಸುಮತಿ ಶ್ರೀಪ್ರಾಣೇಶ ವಿಠಲನ ಧ್ಯಾನದೊಳಿಹ ಮ-ಹಾನುಭಾವರ ಸಂಗ ಪಾಲಿಸೇ ||ಮಾನಿನೀ ಕುಲಮೌಳಿಮಣಿಚಂ |ದ್ರಾನನೆ ಮದಗಜಗಮನೆ ಸು-ಶ್ರೋಣಿ ಅಷ್ಟಾಪದ ಸುಕಾಂತೆ 3
--------------
ಪ್ರಾಣೇಶದಾಸರು
ಕೇಳೆಗೋಪಿಗೋಪಾಲ ಮಾಡಿದ ಬಲು |ದಾಳಿಯ ಗೋಕುಲದಿ ಪತಾಳೆಲಾರೆವೆ ತವಕದಲಿ ಕಂದಗೆ ಬುದ್ಧಿ |ಹೇಳೆ ಕೃಷ್ಣವ ಕರೆದು ಅ.ಪಸರಿರಾತ್ರಿಯೊಳು ಸರಸರನೆ ಮನೆಗೆ ಬಂದು |ಸುರಿದು ಪಾಲ್ಪೆಣ್ಣೆಗಳ ||ಉರೋಜಗಳಿಗೆಕರಸರಿಸಿ ಕಣ್ಗಳನು |ತೆರೆದು ನೋಡುವನೆ ನಮ್ಮ 1ಗಂಡನು ಮನೆಯೊಳಗಿರಲು ಬಂದು ಕೃಷ್ಣ |ಭಂಡ ಮಾತುಗಳ ಬಹು ||ತುಂಟತನದಲಾಡಿಉದ್ದಂಡಕಠಿಣಕಾಯ |ದುಂಡುಕುಚವ ಪಿಡಿದ 2_______ವದ ಮೇಲಿರಲು ತಾ |ಸೀರೆಯ ಸೆಳೆವ ನೋಡೆ ||ಆರಿವರೆಂದು ವಿಚಾರಿಸಿ ನೋಡಲು |ಮೋರೆಯ ಬಾಗಿದನೆ 3ಕೇರಿಯೊಳಗೆದಧಿಮಾರುತಿರಲು ಕೃಷ್ಣ |ಸಾರಿ ಬಂದು ಮೊಸರ ||ಸೂರೆಗೊಂಡು ಪರನಾರಿಯರ ನೆರೆದು ತಾ |ಘೋರರೂಪದಿ ಮೆರೆದ 4ಆಡಲೇತಕೆ ನಮ್ಮ ಬಾಗಿಲಂಗಳದೊಳು |ಬೇಡುವ ಜಲ ದೈನ್ಯದಿ ||ನೀಡುವೆ ಜಲ ಜಲಜಾಕ್ಷ ಬಾಬಾ ಎನೆ |ಮಾಡುವರತಿಎಂಬನೆ5ಹುಡುಗನೆಂದು ಕೈಯ ಪಿಡಿಯ ಪೋಗಲು ನಮ್ಮ |ಉಡೆಮುಡಿ ಪಿಡಿದ ನೋಡೆ ||ಪಡೆದವಳಿಗೆ ಪೇಳುವೆ ನಡೆ ಎನೆ ಮಚ್ಚ |ಕೊಡಲಿ ತೋರುವನೆಗೋಪಿ6ಮಡದಿಯರೆಲ್ಲರು ಮಿಯುತಲಿರೆ ಮೈ |ಉಡುಗೆಯ ತೆಗೆದುಕೊಂಡು ||ಸಡಗರದಲಿ ಬೇಡಿಕೊಳ್ಳೆ ವಸ್ತ್ರಗಳನು |ಕೊಡದೆ ಅಡವಿಗೆ ನಡೆದ 7ಬೆಣ್ಣೆಯ ತಿಂದು ತಮ್ಮಣ್ಣಗೆ ತಾ ಕೊಟ್ಟು |ಚಿಣ್ಣರ ಬಡಿವ ನೋಡೆ ||ಬಣ್ಣಿಸಿ ನಮ್ಮ ಬಾಯಿಗೆ ಬೆಣ್ಣೆ ತೊಡೆಯುತ |ಬೆಣ್ಣೆಯ ತಿಂದಿರೆಂಬ 8ಏಣಲೋಚನೆ ಸರ್ಪವೇಣಿ ನಮ್ಮ ಮನೆ |ಓಣಿಯೊಳಗೆ ಪೋಗುತ ||ಕಾಣದಂತೆ ಚಕ್ರಪಾಣಿ ನಮ್ಮೊಳು ತನ್ನ |ತ್ರಾಣವ ತೋರಿದನೆ 9ಪದುಮನಾಭನು ಪುರದ ಚದುರಿಯರಿಗೆ ತಾನು |ಮದನಶಾಸ್ತ್ರವ ಪೇಳುತ ||ಮುದದೊಳಗಿರಲವರೊಡೆಯ ಬರಲು ಕೃಷ್ಣ |ಕುದುರೆಯ ನೇರಿದನೆ 10ಎಷ್ಟುಪದ್ರವ ಕೊಟ್ಟರು ಗೋಕುಲದೊಳು |ಬಿಟ್ಟವನಿರಲಾರೆವೆ ||ಸೃಷ್ಠಿಯೊಳಗೆ ಸರ್ವಾಭಿಷ್ಟದ ಪುರಂದರ-|ವಿಠಲ ಸಲಹುವನೆ 11
--------------
ಪುರಂದರದಾಸರು
ಕೊಟ್ಟ ಉಡುಗೊರೆಉತ್ಕøಷ್ಟ ಗೋಪಾಲಧಿಟ್ಟ ಪಾಂಡವರಿಗೆ ಉಚಿತವಕೆಲದಿಪ.ಏಸವೊ ಮಾಣಿಕದೊಸ್ತ ದೆಸೆಗೆಲ್ಲ ಬೆಳಗುವ ವಸ್ತಹೊಸ ಮುತ್ತಿನ ರಥ ಹಿಡಿದೇಜಿಕೆಲದಿಹೊಸ ಮುತ್ತಿನ ರಥ ಹಿಡಿದೇಜಿ ಶೂರಪಾಲಿಅಶ್ವತ್ಥ ನರಸಿಂಹಗೆಹರಿಕೊಟ್ಟಕೆಲದಿ1ಪಟ್ಟಾವಳಿಯ ಸೀರೆ ಧಿಟ್ಟಾದ ಪಲ್ಲಕ್ಕಿಬಟಮುತ್ತಿನ ರಥ ಹಿಡಿದೇಜಿಬಟಮುತ್ತಿನ ರಥ ಹಿಡಿದೇಜಿ ಶೂರಪಾಲಿಕೃಷ್ಣಾ ಭಾಗೀರಥಿಗೆ ಹರಿಕೊಟ್ಟಕೆಲದಿ2ಏಸವೊ ಮಾಣಿಕದೊಸ್ತ ಹಸಿರು ಪಟ್ಟಾವಳಿವಸ್ತ್ರಕುಶಲದ ಪುಸ್ತಕವ ನಡುವಿಟ್ಟುಕೆಲದಿಕುಶಲದ ಪುಸ್ತಕವ ನಡುವಿಟ್ಟು ಶ್ರೀಕೃಷ್ಣಋಷಿಗಳಿಗುಚಿತವಹರಿಕೊಟ್ಟಕೆಲದಿ3ಸಾರಾವಳಿ ಸೀರೆ ಥೋರ ಮುತ್ತಿನ ಸರಹಾರ ಭಾರಗಳು ನಡುವಿಟ್ಟುಕೆಲದಿಹಾರ ಭಾರಗಳು ನಡುವಿಟ್ಟು ಉಚಿತವನಾರಿ ಕುಂತೆಮ್ಮಗೆ ಹರಿಕೊಟ್ಟಕೆಲದಿ4ಲೆಕ್ಕವಿಲ್ಲದೆ ವಸ್ತ್ರ ಸಂಖೆವಿಲ್ಲದ ರಥಆಕ್ಷಆನೆಗಳು ರಥಗಳುಕೆಲದಿಅಕ್ಷಅನೆ ರಥಗಳು ಬಿಲ್ಲು ಬಾಣಮುಖ್ಯ ಧರ್ಮನಿಗೆಹರಿಕೊಟ್ಟಕೆಲದಿ5ಮಿತಿಯಿಲ್ಲದೆ ಬಾಣ ಬಿಲ್ಲುಗಳು ರಥ ಕುದುರೆಗಳುಅತಿಶಯ ಬೆಳಗುವ ಆಭರಣಕೆಲದಿಅತಿಶಯ ಬೆಳಗುವ ಆಭರಣಪಟ್ಟಾವಳಿಕುಂತಿಸುತ ಭೀಮ ರಾಯಗೆ ಹರಿಕೊಟ್ಟಕೆಲದಿ6ಮದ ಸೊಕ್ಕಿದಾನೆಗಳು ರಥ ಬಿಲ್ಲುಗಳು ಬಾಣಅದ್ಬುತ ಬೆಳಗುವ ಆಭರಣವಕೆಲದಿಅದ್ಬುತವಾಗಿ ಬೆಳಗುವ ಪೀತಾಂಬರಚದುರ ಪಾರ್ಥಗೆ ಹರಿಕೊಟ್ಟಕೆಲದಿ7ಆನೆಹಯರಥಗಳು ಏನೆಂಬೊ ಬಿಲ್ಲಾಳುನಾನಾ ರತ್ನಗಳು ಆಭರಣವೆಕೆಲದಿನಾನಾ ರತ್ನ ಆಭರಣವೆ ನಕುಲಗೆಮಾನದ ವಸ್ತ್ರಗಳು ಹರಿಕೊಟ್ಟಕೆಲದಿ8ಉತ್ತಮ ಕುದುರೆಗಳು ಹತ್ತುವ ರಥ ಕೋಟಿಮತ್ತೆ ಬಿಲ್ಲುಗಳು ಆಭರಣಕೆಲದಿಮತ್ತೆ ಬಿಲ್ಲು ಆಭರಣವಸ್ತ್ರಗಳಸಹದೇವಗೆಅರ್ಥಿಲೆ ರಾಮೇಶ ಇವು ಕೊಟ್ಟಕೆಲದಿ9
--------------
ಗಲಗಲಿಅವ್ವನವರು
ಗಂಗಾಧರ ದೇವ ಜಯಗೀಷ ವ್ಯಾನಂಗಾರಿ ಗಿರಿಜಾಧವ |ಮಂಗಳ ಪ್ರದನೆ ಅಮಂಗಳ ಶೀಲ | ಭುಜಂಗ ರೂಪದಿ ಪಾಂಡು |ರಂಗ ಘಾಸಿಗೆಯಾದ ಪವೈಕಾರಿಕಾಹಂಕಾರ ತತ್ವದೊಡೆಯ, ನಾಕುಮೊಗನ ಕುಮಾರ |ಶ್ರೀಕಂಠ, ಸ್ಥಾಣು, ವಿಶ್ಖೋಜನಕ, ಚಂದ್ರಶೇಖರ, ಈಶಪಿನಾಕಿಭಕ್ತವತ್ಸಲ |ಶೋಕನಾಶಕ ಶಂಭು, ಪಶುಪತಿ, ಹೇ ಕರುಣಿ, ಸದ್ಗುಣ ಸುಖಾರ್ಣವ |ಪಾಕಶಾಸನ ಪ್ರಮುಖ ವಂದ್ಯ, ವಿಶೋಕ, ಎನ್ನಭಿಲಾಷೆ ಪೂರ್ತಿಸು1ಪ್ರಾಣನಂದನ ತೈಜಸಾಹಂಕಾರಾಭಿಮಾನಿ ಶ್ರೀಶುಕದೂರ್ವಾಸ|ಕ್ಷೋಣಿಸಂಧೃತ ಧನ್ವಿ, ದಾನವಾಂತಕ, ಶೂಲಪಾಣಿ, ಪ್ರಮಥಾಧಿಪ ಬಾಣವರದಯನ್ನ |ಮಾನನಿನ್ನದು ಚಕ್ರಿ ಪದಕಂಜರೇಣುತೋರಿಸು ತವಕದಿಂದಲಿ |ದ್ರೌಣಿ, ಶಿವ, ಪ್ರಣತ ಜನ ಸುಮನಸಧೇನು, ತವ ಪದ ಸಾರ್ವೆ ಸತತ 2ತಾಮಸಾಹಂಕಾರೇಶ ಸಂಕರ್ಷಣನಾ ಮಗನೇ ಕೊಡು ಲೇಸ ರಾಮನಾಮ ಮಂತ್ರ |ಪ್ರೇಮದಿ ಜಪಿಸುವ ಸ್ವಾಮಿ, ಅನಲ,ವಹ್ನಿಸೋಮಲೋಚನ ಹರ |ವಾಮದೇವ, ಕಪರ್ದಿ,ಭವಭಯ ಭೀಮ ಶ್ರೀ ಪ್ರಾಣೇಶ ವಿಠಲನ |ಪ್ರೇಮ ಪುಟ್ಟಿಸೋ ರೌಪ್ಯ ಪರ್ವತಧಾಮ ಶ್ರೀ ವಿರೂಪಾಕ್ಷ ಗುರುವೇ 3
--------------
ಪ್ರಾಣೇಶದಾಸರು
ಗಂಗಾಧರ ಸುಮತಿ ಪಾಲಿಸೋ | ಪಾಂಡು |ರಂಗನ ಚರಣಾಬ್ಜ ಭಜನೆಮಾಡುನಿತ್ಯ ಪವೈಕಾರಿಕಾದಿತ್ಯರೂಪದನುಜರಿಗೆ |ಶೋಕಕೊಡುವದು ನಿರಂತರದಿ ||ಲೌಕಿಕವೆಲ್ಲ ವೈದಿಕವಾಗಲೆನಗೆ ಮೈನಾಕೀ |ಹೃತ್ಕಮಲಮಾರ್ತಾಂಡಭಕ್ತ ವತ್ಸಲ 1ವಾಸವಾದ್ಯಮರ ವಂದಿತನೆ ಪದ್ಮಜ ಸುತ |ನೀ ಸಲಹುವದೋ ಕೈಲಾಸವಾಸ ||ಕ್ಲೇಶಮೋದವು ಸಮ ತಿಳಿಸೋ ಅಶ್ವತ್ಥಾಮ |ದೋಷರಹಿತನೆ ದಕ್ಷಾಧ್ವ ರನಾಶಕ 2ಪವಮಾನತನಯನಿನ್ನವರಲ್ಲಿ ಕೊಡು ಸ್ನೇಹ |ದಿಙ ವಸನಾದಿಯಲ್ಲಿ ಎನ್ನಿರವ ಬಲ್ಲಿ ||ಅವಲೋಕಿಸದೆ ಎನ್ನನೇಕ ಪಾಪಗಳನ್ನು |ತವಕಉದ್ಧರಿಸೋ ವಿಯತ್ಪತಿ ಜನಕ 3ಸಾಮಜಾಜಿನ ವಸ್ತ್ರ ಭಸ್ಮ ಭೂಷಿತ ದೇವ |ಸೋಮಶೇಖರನೆ ಬಿನ್ನಪವ ಕೇಳು ||ಪ್ರೇಮದಿಂದಲಿ ಭಾಗವತರ ಸಂಗತಿನಿತ್ಯ|ಶ್ರೀ ಮನೋರಮನ ಚರಿತೆ ಪಾಡಿಸುವದಯ್ಯ 4ಶ್ರೀಕಂಠ ನೀ ಪೇಳಿದನ್ಯಶಾಸ್ತ್ರಕೆ ಬುದ್ಧಿ |ಸೋಕದೆಗುರುಮಧ್ವ ಮುನಿಮತವೇ ||ಬೇಕು ಜನುಮ ಜನುಮಕ್ಕೆನಿಸೋ ತ್ರಿಯಂಬಕ |ನಾ ಕೈಯ್ಯ ಮುಗಿವೆ ಪ್ರಾಣೇಶ ವಿಠಲದಾಸ 5
--------------
ಪ್ರಾಣೇಶದಾಸರು
ಗಣೇಶ ಪ್ರಾರ್ಥನೆವಂದಿಪೆ ನಾ ನಿನ್ನನು ಸೊಂಡಿಲ ಗಣಪ ಧಬಂದೆನ್ನ ಸಲಹೊ ನೀನು ಪಪುಂಡರೀಕಾಕ್ಷನುದ್ದಂಡ ಪರಾಕ್ರಮಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ಅಪಪಾಶಾಂಕುಶಧರನೇ ವೂೀದಕಹಸ್ತಭಾಷಿಗ ನೀನಹುದೋಆಶಾಪಾಶಗಳಿಂದ ಘಾಸಿಗೊಂಡಿಹ ಮನಬೇಸರ ಕಳೆದೆಮ್ಮ ಪೋಷಿಪನನು ತೋರೊ 1ಗೌರಿಯ ವರಪುತ್ರನೆ ಪ್ರಾರ್ಥಿಸುವೆ ಶ್ರೀ-ಶೌರಿಯಪಾದಸ್ಮರಣೆಗೌರವದಿಂ ಮಾಳ್ಪ ಶೌರ್ಯ ಎನಗೆ ಕೊಟ್ಟುಮಾರಪಿತನಪಾದತೋರಿಸು ತವಕದಿ2ಅಂತರಂಗದ ಶತ್ರುಗಳಿಂದಲಿ ಮನಚಿಂತೆಗೆ ಗುರಿಗೈಸಿತೊಎಂತು ಈಭವದಾಂಟುವಂಥ ಪಥವ ಕಾಣೆಕಂತÀುಪಿತನಪಾದಚಿಂತನೆ ಕೊಡಿಸಯ್ಯ3ವಾನರನಿಕರದೊಳು ಶ್ರೇಷ್ಠನ ಪ್ರಭುವಾರಿಧಿಯನು ಬಂಧಿಸೆಆದಿಮೂರುತಿ ನಿನ್ನ ಆರಾಧಿಸಿದನೆಂಬಸೋಜಿಗಸುದ್ದಿಯು ಮೂರ್ಜಗದೊಳಗುಂಟು4ಕಮಲನಾಭವಿಠ್ಠಲ ಭಕ್ತರ ಹೃದಯಕಮಲದೊಳಗೆ ಶೋಭಿಪಮಿನುಗುವ ಮಧ್ವಮಂಟಪದೊಳು ರಾಜಿಪಸನಕಾದಿವಂದ್ಯನ ಕ್ಷಣ ಬಿಡದಲೆ ತೋರು 5
--------------
ನಿಡಗುರುಕಿ ಜೀವೂಬಾಯಿ
ಗೋಕುಲದೊಳಗೆಲ್ಲ ಕೊಳಲೂದಲು |ಬೇಕಾದ ಧ್ವನಿಗಳು ಕೂಡಿ ಕೃಷ್ಣ-ಗೋ- ||ಪಿಕಾಸ್ತ್ರೀಯರುತವಕದಿಂದ ನೋಡ- |ಬೇಕೆಂದು ನಡೆಯೆ ನೂಕ್ಯಾಡುತ ಪಎಂತೆಂತು ಪೊರಟರಂತು ನಾರಿಯರು |ಇಂಥ ವಿಪರೀತ ಯಿಂತಿಲ್ಲ ಮುಂದಿಲ್ಲ |ಸಂತೋಷವಹದು ಚಿಂತೆ ಪೋಗುವುದು |ಸಂತರು ಕೇಳಲುತಂತುಮಾತ್ರಾ ||ಭ್ರಾಂತರಾಗಿ ಯೇನು-ಎಂತು ತಿಳಿಯದೆ |ನಿಂತು ನಿಲ್ಲಲಾರದಂತರದಲೆವೆ |ಧ್ವಾಂತಕಿರಣನಂತಾನ ಮುತ್ತೂರು |ಅಂತರವಿಲ್ಲದ ಸಂತೆಯಂತೆ 1ಚಿಕ್ಕಟುಯೆಂದು ಒಬ್ಬಕ್ಕನು ಗಂಡನ |ತೆಕ್ಕೆಲಿ ಪಿಡಿದುಕಕ್ಕಸಬಡುತ |ಪೊಕ್ಕಳಿಗೆ ಬಟ್ಟನಿಕ್ಕಿ ಒಬ್ಬವಳು |ಅಕ್ಕಿಯ ನುಚ್ಚನೆ ಸಕ್ಕರೆಂದು ||ಮಕ್ಕಳಿಗೀವುತ ಮಿಕ್ಕವರೆಲ್ಲರು |ನಕ್ಕು ತಂತಮ್ಮೊಳಗೆ ಗುಕ್ಕುತ ತಲೆಯ |ಹಿಕ್ಕುತ ಬಂದರು ಫಕ್ಕನೆ ಈಕ್ಷಿಸ-ರಕ್ಕಸ ದಲ್ಲಣನಕ್ಕರದಿ 2ತತ್ತರಿಸಿ ಕರವೆತ್ತಿಗೆ ಬಿಟ್ಟರು |ಮುತ್ತಿನ ಕಟ್ಟಾಣಿವೊತ್ತಿ ಮುಡಿಗಿಟ್ಟು |ನೆತ್ತಿಗೆ ಸೀರೆಯ ಸುತ್ತಿಕೊಂಡು ಬರೆ |ಸುತ್ತಲಂಗನೆರು ಬತ್ತಲಾಗಿ ||ತುತ್ತು ಮಾಡಿ ಮಾಡಿ ಹತ್ತಿಸೆ ಎದೆಗೆ |ಹೊಸ್ತಲಿ ದಾಟಲಿ ಗತ್ತಿಡಲಾರದೆ |ಹತ್ತೆಂಟು ಮಂದಿಯು ಚಿತ್ತಪಲ್ಲಟಾಗಿ |ಉತ್ತಮಾಂಗನಿಗೆ ಸುತ್ತಿದರೊ 3ಹಾಲಿಗೆ ಪಿಲ್ಲೆಯು ಫಾಲವಿದೇಯೆಂದು |ಕಾಲಿಗೆ ಕುಂಕುಮ ವಾಲಿಟ್ಟು ಮೂಗಿಗೆ |ಮೇಲಾದ ಹೂವಿನ ಮಾಲಿಕೆ ಕಟಿಗೆ |ತೋಲಾದ ಸರಿಗೆ ಬಾಳಿಗಿಟ್ಟು ||ಹೇಳುವ ಮಾತನುಕೇಳಿಕೇಳದಂತೆ |ಇಳೆಗೆ ಅಗಾಧ ಧೂಳಿಯ ಮುಚ್ಚುತ |ಜಾಲಸಂಭ್ರಮದಿ ವಾಲಯ ಬಂದರು |ಜಾಲಜಾನಾಭನ ವಾಲಗಕ್ಕೆ 4ಭೋರೆಂಬ ಶಬ್ದವ ಮರೆತಳೆಮುನೆ |ಗಿರಿಯು ಬ್ಯಾವಿಯೆ ? ತುರುವು ಮೇವನು |ತೊರೆಯೆ, ಫಣಿಯು ಶಿರವ ತೂಗಿತು |ತೆರೆಯ ಕಟ್ಟಿತು ಶರಧಿಯು ||ಸುರರುನಭದಿ ನೆರೆದು ಪೂಮಳೆ |ಗರೆಯೆದುಂದುಭಿಮೊರೆಯೆ ಸುಖವ |ಸುರಿಯೆ ಪ್ರಾಣೇಶ ವಿಠಲ ಕೊಳಲ |ತ್ವರನುಡಿಸುವ ಸ್ವರಗೇಳಿ 5
--------------
ಪ್ರಾಣೇಶದಾಸರು
ಚತುರ್ದಶಿಯ ದಿನ(ಹನುಮಂತನನ್ನು ಕುರಿತು)ರಂಭೆ : ಇವನ್ಯಾರೆ ದೂರದಿ ಬರುವವ ಇವನ್ಯಾರೆ ಪ.ಇವನ್ಯಾರೆ ಮಹಾಶಿವನಂದದಿ ಮಾ-ಧವನ ಪೆಗಲೊಳಾಂತು ತವಕದಿ ಬರುವವ 1ದಾಡೆದಂತಮಸಗೀಡಿರುವದು ಮಹಾಕೋಡಗದಂತೆ ಸಗಾಢದಿ ಬರುವವ 2ಕಡಲೊಡೆಯನು ಮೃದುವಡಿಯಡರಿಸಿ ಬಿಡದಡಿಗಡಿಗಾಶ್ರೀತರೊಡಗೂಡಿ ಬರುವವ 3ಊರ್ವಶಿ : ನಾರಿ ಕೇಳೆಲೆಗೆ ವೈಯಾರಿ ನೀ ಮುದದಿನಾರಾಯಣನಿಗೀತ ಬಂಟನಾದಾದರಿದಿವೀರ ರಾಮವತಾರದಿ ಹಿಂದೆ ಹರಿಯಚಾರಕನಾಗಿ ಸೇವೆಯ ಗೈದ ಪರಿಯಕ್ರೂರ ದಶಾಸ್ಯನ ಗಾರುಗೆಡಿಸಿನೃಪವೀರನ ಪೆಗಲಿನೊಳೇರಿಸಿ ದೈತ್ಯರಭೂರಿವಧೆಗೆ ತಾ ಸಾರಥಿಯಾದವಕಾರುಣೀಕ ಮಹಾವೀರ್ಹನುಮಂತ 1ಆಮೇಲೆ ವೀರಾವೇಶದಿ ವಾರಿಧಿಯನುರಾಮನಪ್ಪಣೆಯಿಂದ ದಾಟಿದನಿವನುಭೂಮಿಜೆಗುಂಗುರ ಕೊಟ್ಟ ನಂತರದಿಕಾಮುಕರನು ಸದೆಬಡಿದನಾ ಕ್ಷಣದಿಹೇಮಖಚಿತ ಲಂಕಾಮಹಾನಗರವಹೋಮವ ಗೈದು ಸುತ್ರಾಮಾರಿಗಳ ನಿ-ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ-ಡಾಮಣಿ ತಂದ ಮಹಾಮಹಿಮನು ಇವ 2ವಾರಿಮುಖಿ ನೀ ಕೇಳಿದರಿಂದ ಬಂದವೀರ ಹನುಮಂತನನೇರಿ ಗೋವಿಂದಸ್ವಾರಿಗೆ ಪೊರಟ ಚಾತುರ್ದಶಿ ದಿವಸಆರತಿಯನು ಕೈಕೊಳ್ಳುವ ಶ್ರೀನಿವಾಸಭೇರಿಮೃದಂಗ ಮಹಾರವದಿಂದ ಸ-ರೋರುಹನಾಭ ಮುರಾರಿ ಶರಣರುದ್ಧಾರಣಗೈಯುವ ಕಾರಣದಿಂದ ಪಾ-ದಾರವಿಂದಗಳ ತೋರಿಸಿ ಕೊಡುವ 3ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿನಲವಿಂದ ವೇದಘೋಷವ ಕೇಳ್ವಶೌರಿಜಲಜಭವಾದಿ ನಿರ್ಜರರಿಗಸಾಧ್ಯಸುಲಭನಾದನು ಭಕ್ತಜನಕಿದುಚೋದ್ಯಸುಲಲಿತ ಮಂಟಪದೊಳೊ ನೆಲಸುತ ನಿ-ಶ್ಚಲಿತಾನಂದ ಮಂಗಲದ ಮಹೋತ್ಸವಗಳನೆಲ್ಲವ ಕೈಕೊಳುತಲಿ ಭಕ್ತರಸಲಹುವ ನಿರುತದಿ ಮಲಯಜಗಂಧಿನಿ 4ಶ್ರೀಕಾಂತ ಬಳಿಕ ಭಕ್ತರ ಒಡಗೂಡಿಏಕಾಂತ ಸೇವೆಯಗೊಂಡ ಕೃಪೆಮಾಡಿಸಾಕಾರವಾಗಿ ತೋರುವ ಕಾಣೆ ನಮಗೆಬೇಕಾದ ಇಷ್ಟವ ಕೊಡುವ ಭಕ್ತರಿಗೆಶ್ರೀಕರ ನಾರಾಯಣ ಶ್ರೀನಿವಾಸ ಕೃ-ಪಾಕರ ವಿಬುಧಾನೇಕಾರ್ಚಿತ ರ-ತ್ನಾಕರಶಯನ ಸುಖಾಕರ ಕೋಟಿ ವಿ-ಚಾರಕ ಭಾಸತ್ರಿಲೋಕಾಧಿಪನಿವ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಚಿಣ್ಣರೊಡನಾಡನಡೆದ ಮುದ್ದುರಂಗ ಮುದ್ದು ಕೃಷ್ಣ ಪ.ಇಟ್ಟು ಹಣೆಯೊಳು ಉಗುರು ನಾಮವ ಗೋವಗಟ್ಟಿಗೆಯನು ಕರದೊಳು ಪಿಡಿದುಪುಟ್ಟ ಕಂಬಳಿ ಹೊದ್ದು ಪದಕೆ ಪಾದುಕೆಮೆಟ್ಟಿ ಅಣ್ಣ ಬಲರಾಮ ನಡೆಯೆಂದು 1ಆಡಲೊಲ್ಲೆನೆಂಬ ಮಕ್ಕಳ ಮನ್ನಿಸಿಕೂಡಿಕೊಂಡು ಅಣ್ಣ ತಮ್ಮನೆಂದುಹಾಡುತ ಕುಣಿದು ಚಪ್ಪಾಳೆ ಹೊಯಿದಾಡುತಓಡ್ಯಾಡಿ ಅಮ್ಮನ ಮಾತ ಕೇಳದೆ ಕೃಷ್ಣ 2ಚಿಣ್ಣಿ ಪೊಂಬಗರ್ಚೆಂಡು ಗುಮ್ಮ ಗುಸಕು ಹಬ್ಬೆಅಣ್ಣೆಕಲ್ಲು ಹÀಲ್ಲೆ ಗಜಗ ಗೋಲಿಕಣ್ಣುಮುಚ್ಚಾಲೆ ಮರನೇರಾಟ ನೀರಾಟಸಣ್ಣರೊಳಾಡಿ ಸೋಲಿಪೆನೆಂಬ ತವಕದಿ 3ರಾಜಿಪ ರಾಜಬೀದಿಲಿನಿಂದುನೋಡುವರಾಜಮುಖಿಯರೊಳು ಸೆಣಸ್ಯಾಡುತರಾಜಕುಲಾಗ್ರಣಿ ಸರ್ವಭೂಷಣದಿ ವಿರಾಜಿತನಾಗಿ ಗೋಳಿಡುತ ಮುರಾರಿ 4ಜಗವ ಪುಟ್ಟಿಸಿ ನಲಿದಾಡುವಾಟವು ತನಗೆ ಸಾಲದೆಂದು ಆವಹಳ್ಳಿಲಿಬಗೆ ಬಗೆ ಲೀಲೆಯ ತೋರಿ ಗೋಗಾವರ್ಗೆಸುಗತಿನೀವೆನೆಂದು ಪ್ರಸನ್ವೆಂಕಟ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಚಿಂತೆಗೆಣಿಕೆ ಇಲ್ಲದಂತಾಗಿ ಎನ್ನಂತರಂಗದ ಕ್ಲೇಶಕೆಂತೌಷಧ ರಂಗ ಪ.ಒಂದು ದೊರೆತರೆ ಇನ್ನೊಂದಾಗಲುಬೇಕುಮಂದಿರವಿರಲು ಮೇಲಟ್ಟ ಬೇಕುಮಂದಮತಿಸತಿಇನ್ನೊಬ್ಬ ಸುಗುಣಿ ಬೇಕುಎಂದೆಂದು ಬೇಕೆಂಬ ನುಡಿಗುಂದದು ರಂಗ 1ಅವಭೋಗಿ ಅವಗಿಂತ ಮೀರ್ವೆನೆಂಬುವ ಹವಣುಅವನ ವಿದ್ಯಕೆ ಹೆಚ್ಚಲೆಂಬ ಹವಣುತವಕದಿ ಸಂಪದ ಮೇಳವಿಸುವ ಹವಣುಅವಿರಳ ಹವಣಕೆ ಕಡೆಗಾಣೆ ರಂಗ 2ರೂಢಿಲಿ ಸಿರಿವಂತರ ಮುಂದೆಖೋಡಿಮಾತಾಡಿ ಗುದ್ದಿಸಿಕೊಂಡ ನರನಂತೆನೋಡ ಪ್ರಸನ್ವೆಂಕಟೇಶಅಲ್ಲದಕೃತ್ಯಮಾಡಿ ಕ್ಲೇಶವನುಂಡೆ ನಿನ್ನ ಬೇಡದೆ ರಂಗ 3
--------------
ಪ್ರಸನ್ನವೆಂಕಟದಾಸರು