ಒಟ್ಟು 810 ಕಡೆಗಳಲ್ಲಿ , 89 ದಾಸರು , 638 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನ್ಮವ್ಯರ್ಥವಾಯಿತು ಶಾಙ್ರ್ಗಧನ್ವ ನಿನ್ನನಂಬದೆ ಪ ಮನ್ಮಥನಾಟದಲ್ಲಿ ಮರೆತು ಹೋಗಿಕಾಲ ನಾಕಳದೇ ಅ.ಪ ಹೊಟ್ಟೆಗೋಸಗ ಕಾಡಿಬೇಡಿ ನಿಷ್ಟುರಗಳನಾಡುತಾ ಕೆಟ್ಟವನಿವನೆನಿಸಿ ಕೊಂಡು ಕೀರ್ತಿಶೂನ್ಯನಾಗುತಾ 1 ನಿತ್ಯಕರ್ಮಮಾಡದೆ ಗೃಹಕೃತ್ಯದಲ್ಲಿ ಬಳಲುವೆ ಸತ್ಯವೆಂಬುದು ಸ್ವಪ್ನದಲ್ಲಿಯು ಸಾಧ್ಯವಾಗದು ಜನರಿಗೆ2 ಸುಳ್ಳು ಹೇಳುವವನ ಜನರು ಒಳ್ಳೆವನಿವನೆಂಬರು ಬಲ್ಲ ಹಿರಿಯರಾಡುವ ನುಡಿ ಭಕ್ತಿಯಿಂದನಂಬರು 3 ಖಲರು ನಡಿಯಲಾರದೆಯಿದು ಕಲಿಯುಗವೆಂದು ನಿಂದಿಸೀ ಕೊಲೆಗೆ ಗುರಿಯಾಗಿ ಕಾಮ ಕ್ರೋಧಗಳಿಂದ ಬಂಧಿಸಿ 4 ಹೀನ ವಿದ್ಯಗಳೆಚ್ಚಿತು ಸುಜ್ಞಾನಬೋಧೆ ತಗ್ಗಿತು ಸ್ವಾನುಭವಕೆ ಹಾನಿಕರ ನಿಧಾನಿಸೇ ಧರ್ಮ ಕುಗ್ಗಿತು 5 ದುರ್ಗುಣಿಗಳ ತೃಪ್ತಿಪಡಿಸೆ ಭರ್ಗಗಾದರು ಸಾಧ್ಯವೇ ನಿರ್ಗಮಿಸುವಧ್ಹ್ಯಾಗೆ ನಾವಿನ್ನಿರುವುದು ಭೂಮಿಭಾರವೆ6 ಲೇಶ ಸಾಧನವಾಗುವದಿಲ್ಲ ಆಸೆ ಅಧಿಕವಾದುದರಿಂದ ಘಾಶಿಪಡುವದಲ್ಲದೆ ದೇಹಾಯ್ಸವೇಕೆ ಪಡುವೆನಾಂ 7 ಮಾನವಿಲ್ಲ ಜ್ಞಾನವಿಲ್ಲ ಮಮತೆಯೆಂಬೋದು ಬಿಡದಲ್ಲಾ ಹೀನಾರನಾಸೇವಿಸಲಾರೆ ಹಿತವ ಕಾಣೆ ಸಿರಿನಲ್ಲಾ8 ಇರುಳು ಹಗಲು ನಿನ್ನ ದಿವ್ಯ ಚರಣಸೇವೆ ಪಾಲಿಸೊಗುರುರಾಮ ವಿಠಲನೆ ಪಾಮರರ ಬಿನ್ನಹ ಲಾಲಿಸೊ9
--------------
ಗುರುರಾಮವಿಠಲ
ಜಯ ಜಯ ನಿಮಗೆ ಜಯವಣ್ಣ ಭಯವಿಲ್ಲೀನುಡಿ ಕೇಳ್ ಚಿಣ್ಣ ಪ ಶ್ರೀ ಮನೋಹರನ ಲೀಲೆಯಿದು ಸು ಕ್ಷೇಮವಹುದು ಸತ್ಪುರುಷರಿಗೆ1 ಈ ಜಗತ್ತನೂ ಈಶ್ವರನೂ ತಾ ರಾಜನಾಗಿ ಕಾಪಾಡುವನು 2 ಕುರುಡರು ತಾವ್ ಕೆಡುವರು ಕೊನೆಗೆ 3 ಇದರೊಳುಂಟು ಬಹುವಿಧ ಭೇದ ವದರುತಿಪ್ಪದು ಸಕಲವೇದ4 ಅಂತ್ಯವಿಲ್ಲದಿಹ ಕಾರಣದಿ ಅ ನಂತ್ಯವೆಂದು ಪೇಳ್ವರು ಭರದಿ 5 ಮನುಜ ಜನ್ಮ ಬಹುದುರ್ಲಭವು ಮನನಶೀಲರಿಗಹುದು ಶುಭವು 6 ಮರೆಯಬೇಡಿ ಜನರೆ ನೀವು ಅರಿತು ಅರಿಯದವರಿಗೆ ನೋವು 7 ಕತ್ತಲೆ ಕೊನೆಯಿಲ್ಲದ ಘೋರ 8 ವುಳಿಯದು ನಿಮಗದು ಕೇಳ್ ಜನರೆ 6 ಧರ್ಮವೆಂಬ ಮೂಟೆಯ ಕಟ್ಟೆ ಬಟ್ಟೆ 10 ಗುರುವಾಜ್ಞೆಯ ಮೀರುವುದು ಸಲ್ಲ ಈ ದುರುಳತನ ನಿಮಗೆ ಸರಿಯಲ್ಲ 11 ನಾನೇ ಶ್ರೇಷ್ಠನೆಂಬುವ ಮಾತು ಶಾನೆ ವಡಕು ಗಡಿಗೆಯು ತೂತು 12 ಹಿಂದಿನವರ ಕಷ್ಟವ ನೋಡಿ ಮುಂದಕೆ ಸತ್ ಸಾಧನೆ ಮಾಡಿ 13 ಮೂರು ಕರಣ ಶುದ್ಧಿಯು ಬೇಕು ಧೀರ ಜನರಿಗಿಷ್ಟೇ ಸಾಕು 14 ಜನರ ನೋಡಿ ನಡೆಯಲಿಬೇಡಿ ಕೊನೆಗೆ ನಿಮಗೆ ಕಾಲಿಗೆ ಬೇಡಿ 15 ಹೆಚ್ಚಪೇಕ್ಷಿಸೆ ಬರುವುದಿಲ್ಲ ಮೆಚ್ಚನು ನಿಮಗೆ ಸಿರಿಯನಲ್ಲ 16 ನಿರ್ಮಲ ಮಾರ್ಗ ಹುಡುಕಿದಿರಾ 17 ಜ್ಞಾನರತ್ನ ಸಂಪಾದನೆಯು ಹೀನ ಜನರಿಗಾಗದು ಕೊನೆಯು 18 ದುರಾಸೆಯಲಿ ಕೆಡುವರು ಕೆಲರು ನರಾಧಮರು ಎಂದೆನಿಸುವರು 19 ಪರಿಯಂತ ತಂ ತಮ್ಮಟ್ಟಿಗಿಹುದು ಅಂತ 20 ಗೂಡಿನ ಮೇಲೆ ದುರಭಿಮಾನ ಮಾಡಿ ಮಾಡಿ ಕೆಡುತಿಹರು ಜನ 21 ಯೀಗೂಡಿಗೆವೊಂದಾಧಾರ ಯೋಗಿಗಳರಿವರಿದರಸಾರ 22 ವರ ರಸಗಳು ನಾಲ್ಕು ತೊಗರು 23 ಹಂಚೇಳರಿಂ ಮಾಡಿಹದೇವ 24 ಘಟಿಸಿರುವುದು ಪತ್ತಲೆಯಿದರೊಳ್ 25 ಮರನಿದೆಂದು ಶಾಸ್ತ್ರದ ಮೂಲ ಅರಿಯದೆ ನಾನೆಂಬೆನು ಬಾಲ 26 ಪಕ್ಷಿಗಳೆರಡೀ ಮರದಲ್ಲಿ ಸಾಕ್ಷಿ ಒಂದು ಒಂದಕೆ ಅಲ್ಲಿ 27 ಮರದ ಪಣ್ಣು ತಿಂಬುವದೊಂದು ನಿರುತವು ನೋಡುತಿರುವದೊಂದು 28 ದ್ವಾಸುಪರ್ಣ ಶೃತಿ ಇದರರ್ಥ ದಾಸನಾಗದಿರುವನು ವ್ಯರ್ಥ 29 ಅಧ್ಯಾತ್ಮ ವಿದ್ಯದಲಿ ತೋರುವುದೇ 30 ಜೀವನಾಮ ಆತ್ಮನಿಗುಂಟು ದೇವತಾನು ತಬ್ಬಿದ ಗಂಟು 31 ಅಭೇದ ಶೃತಿಗಳೇನಕ ವಿಧ ಸ್ವಭಾವದಿರುನಡೆ ತೋರುವದ32 ಸುರರುತ್ತಮರು ನರರಾನಿತ್ಯ ಸುರೇತರರು ನೀಚರು ಸತ್ಯ 33 ನೂರು ವರುಷ ಬದುಕುವರೆಂದು ಮೀರಿ ಮನದಿ ಯೋಚಿಸಿ ಮುಂದು 34 ಬಹು ಧನಾರ್ಜನೆಯ ವೂಹೆಯಲಿ 35 ಮೊದಲು ಅನ್ನಕಿಲ್ಲೆಂದು ಮತಿ ವಿಧ ವಿಧ ವಸ್ತ್ರಗಳಲಿ ಪ್ರೀತಿ 36 ನಾಬಡವನು ಎಂದಗಲಿರುಳು 37 ತನಗೆ ಬೇಕಂತ ಚಿಂತೆಯೊಳು 38 ಇತರರ ನೋಡಿ ತನಗಪೇಕ್ಷೆ ಗತಿ ಇಲ್ಲದೆ ಇರುವುದೆ ಶಿಕ್ಷೆ 39 ತಾವ್ ಸಮಂಜಸದಿ ಪೇಳಿದರು 40 ಪ್ರವೃತ್ತಿ ಮಾರ್ಗದ ಸಂಪತ್ತು ಭವಾಂಬುಧಿ ಸುಳಿಯು ವಿಪತ್ತು 41 ಫಲವ ಕೋರಿ ಕರ್ಮವ ಮಾಡಿ ಹಲವು ಯೋನಿಗಳೊಳೋಡಾಡಿ42 ಮರಳಿ ಮರಳಿ ಜನನ ಮರಣದೆ ದರಿಯ ಕಾಂಬ ಬಗೆ ದಾರಿಯದೆ 43 ಇದುವೆ ದೊಡ್ಡ ಸಂಸೃತಿ ವೃಕ್ಷ ತುದಿ ಮೊದಲಿಗು ದೊರಕದು ಮೋಕ್ಷ 44 ಇನ್ನು ಅಕ್ಕ ತಂಗಿಯು ಮೊದಲು 45 ಸತಿ ಸುತರು ಬಳಗಗಳು 46 ಇವರು ತನ್ನವರಿತರರಲ್ಲ ಭವ ಜಲಧಿಯ ಜಂತುಗಳೆಲ್ಲ 47 ಕೊಡದಿದ್ದರೆ ಕೋಪವು ಬಹಳ 48 ವಿತ್ತವಿರಲು ಬಂಧುಗಳೆಲ್ಲ ಹತ್ತಿ ಇವನ ಬಾಧಿಪರೆಲ್ಲ 49 ಸುಳ್ಳುಹೇಳಿದರೆ ಬಹುನಂಬಿಕೆ 50 ಹಿತೋಪದೇಶದಿ ಬಹುಕೋಪ ಪತಿತ ಜನರಿಗೆ ಇದು ಪಾಪ 51 ಒಬ್ಬ ದೈವಲೋಕಕೆ ಸತ್ಯ ಹಬ್ಬವವನ ಭಜಿಪುದಗತ್ಯ 52 ಕಾಮುಕರಿಗೆ ಕಡೆಗೂ ದುಃಖ ನೇಮವದಕೆ ಮೂಲವುರೊಕ್ಕ 53 ಸ್ಪøಹದಿಂದಲೆ ಕೋಪವು ಬಹುದು ವಿಹಿತವೆಂದು ನಗುವನೆ ಸಾಧು 54 ಲೋಭದಿಂದ ಮೂಲಕೆ ನಾಶ ಸ್ವಾಭಾವ್ಯದಿ ದುರ್ಜನಕಾಶಾ 55 ರಾಶಿ ಧನವ ಕೊಳ್ಳೆಯು ಕೊಡುವ 56 ದಾನಕೆಂದರಿಲ್ಲವು ಕಾಸು ದಂಡಕೊಡುವುದಕೆ ಬಹುಲೇಸು 57 ನಷ್ಟವಾದರೂ ಮನಕಿಷ್ಟ ದುಷ್ಟಾತ್ಮರು ಪಡುವರು ಕಷ್ಟ 58 ಆರ್ಯರುಕ್ತಿ ಕೇಳುವುದಿಲ್ಲ ಕಾರ್ಯದಲಿ ವಿಘಾತವೆ ಎಲ್ಲ 59 ಧನವಿದ್ದರು ಸೌಖ್ಯವು ಕಾಣೆ ಘನದುರಾಸೆ ಕುಜನರಿಗೆ ಆಣೆ 60 ಭೂಮಿ ಉಂಟು ತನಗೆಂಬುವರು ನೇಮದಿ ದಂಡವ ತೆರುತಿಹರು 61 ಮಳೆಬೆಳೆಯನು ನಿಂದಿಪರು ಕೆಲರು ಖಳರು ಸುಮನಸರ ದೂಷಿಪರು62 ಮೊದಲು ತುದಿಯಲಿ ದುರಭಿಮಾನ 63 ವ್ಯಾಪಾರದಿ ಧನ ಕಳಕೊಂಡು ಕೋಪ ವ್ಯಾಜ್ಯಕೆಳೆವದೆ ಫಂಡು 64 ಬಲುಧನವ ಕೂಡಿಸುತಲಿ ಮುಂದು 65 ಮುಖದಾಕ್ಷಿಣ್ಯದಿ ಮಾತಾಡಿ ವಿಕಲರನರ ಸ್ನೇಹದಿ ಕೂಡಿ66 ದೊಡ್ಡದಾಗಿ ಮನೆಯನು ಕಟ್ಟಿ ದುಷ್ಟತನದಿ ವಾದಿಸಿ ಬಿಟ್ಟಿ 67 ಕೂಲಿಯವರ ಹೊಟ್ಟೆಗೆ ಕೊಡದೆ ಲೋಲನಾಗಿ ವಂಚನೆ ಬಿಡದೆ 68 ಸಂಸಾರವಿದೆ ಸ್ಥಿರವೆಂದು ಹಿಂಸೆಪಡುತಲಿ ಸದಾನೊಂದು 69 ಚತುರ ಶೀತಿ ಲಕ್ಷಯೋನಿಗಳೊಳ್ ಮತಿಹೀನರಾಗಿ ಜನಿಸುತಲೂ 70 ಭದ್ರವು ತಮಗೆಂದು ಪ್ರಾಣಿಗಳು 71 ಇದಕ್ಕಾಗಿ ಪರಾಧೀನದಲಿ ಪದೇ ಪದೆಗೆ ತಾವು ನೋಯುತಲಿ 72 ಮನುಜ ಜನ್ಮ ಬರುವುದೆ ಕಷ್ಟ ಮಾನಿತನಾದವನೆ ಅತಿ ಶ್ರೇಷ್ಠ 73 ಭೋಧಿಸುವಾತನೆ ಶುಭತಮನು 74 ಸುಜನರಿಲ್ಲವವರದೆ ಪಂಥ 75 ಕರ್ಮಾರ್ಥ ಶೃತಿ ಗಹನದಲಿ ನಿರ್ಮಲರಾಗದೆ ಚಿಂತೆಯಲಿ&ಟಿbsಠಿ
--------------
ಗುರುರಾಮವಿಠಲ
ಜಯತೀರ್ಥ ಮುನಿವರ್ಯ ಪ ದಯತೋರಿ ಪೊರೆಯಯ್ಯ ವಿಜಯಸಾರಥಿಪ್ರಿಯ ಅ.ಪ ಶ್ರೀಶಶಯನಾವೇಶ ಮಹೇಶ ಪ್ರತಿಬಿಂಬ ಸು ರೇಶ ಯತಿಕುಲಾಧೀಶ ಪಾಲಿಸಯ್ಯ ಏಸು ನಿನ್ನಯ ಕರುಣರಾಶಿ ಎಂತಿಹುದಯ್ಯ ಆಸೆ ಸಲಿಸಲು ಮನೆಗೆ ಲೇಸಾಗಿ ನೀ ಬಂದೆ 1 ಪಶುಪತಿಯ ಮತ ದಹಿಸಿ ಅಸುಪತಿಯ ಮತ ಮೆರೆದೆ ವಸುಮತಿಯ ಸುರನಾಗಿ ಬಂದು ನಿಂದೆ ಪಶುಪ್ರಾಯನೆಂದೆನ್ನ ಉದ್ಧರಿಸಲೋಸುಗದಿ ಬಿಸಜತವಪಾದ ಪಾಂಸವನಿತ್ತೆ 2 ಜಯಗುರುವೆ ಶ್ರೀ ವಿಜಯದಾಸರಲ್ಲೆನ್ನ ಮನೋ ಜಯವು ಪುಟ್ಟಿಸಿದ ನಿನ್ನ ಕರುಣವೆಂತೊ ಸೃಜಿಸಿ ತೋರಿದ ಸ್ವಪ್ನ ನಿಜವು ಆಗಲಿ ಎಂದು ಬಿಜಯ ಮಾಡಿದೆ ನಿನ್ನ ನಿಜದಾಸರೊಡನೆ 3 ಜಯಗುರುವೆ ನಿಮ್ಮ ಹುದ್ಗುಹದಲಿ ನಲಿಯುತಿಹ ವಾಯುವಂತರ್ಗತ ಕೃಷ್ಣನ ತೋರೋ ಜಯತು ಶ್ರೀ ವೇಣುಗೋಪಾಲ ಮೂರ್ತೇ ಜಯತು ಶ್ರೀ ವೇಣುಗೋಪಾಲನೆಂದೆನಿಸಿಯ್ಯ 4 ಸೃಷ್ಟಿಗೆ ಬಂದು ನಾನೆಷ್ಟು ಜನ್ಮವ ಕಳೆದೆ ಪುಟ್ಟಿದೆನೋ ನಾನೀಗ ಈ ಜನ್ಮದಿ ಪುಟ್ಟಲಿಲ್ಲವೋ ಜ್ಞಾನ ಹರಿ ಗುರುಸ್ಮರಣೆಗೆ ಇಟ್ಟಕಡೆಗಣ್ಣÂನೋಳಿಷ್ಟು ನೋಡಯ್ಯ5 ವಾದಿಮಸ್ತಕ ಭೇದಿ ಮೋದತೀರ್ಥರ ತತ್ತ್ವ ಛೇದಿಸಿ ವಾಕ್ ಯುದ್ದ ಯೂಥಪಗಳನೆಲ್ಲ ಗೆದ್ದು ಸತ್ತತ್ತ್ವದಾ ಸಿಂಹನಾದವ ಮಾಡ್ದೆ 6 ಮಧ್ವರಾಯರಿಗೆ ನೀ ಮುದ್ದುಮೊಮ್ಮಗನಯ್ಯ ಸದ್ವಿದ್ವದ್ಗ್ರಂಥ ಭಾರವನೆ ವಹಿಸಿ ಮುದ್ದು ತೊತ್ತೆನಿಸಿ ಎತ್ತಾಗಿ ಸೇವಿಸಿ ಯತಿಯಾಗಿ ನಿಂದ ತತ್ತ್ವಮುತ್ತಿನ ಖಣಿಯೆ 7 ಇಳೆಯೊಳಗೆ ನಿನ್ನಂಥ ಕರುಣಾಳುಗಳ ಕಾಣೆ ಅಳವಲ್ಲ ವರ್ಣಿಸಲು ನಿನ್ನ ಗುಣಗಳನು ಮಳಖೇಡವಾಸ ಯತಿಕುಲಾಧೀಶಾ 8 ಗುರುವೆ ನಿನ್ನಯ ಕರುಣಕವಚ ತೊಟ್ಟವರ ಚರಣಕಮಲದೊಳಿಹ ಮಧುಪನೆಂದೆನಿಸೋ ನಿರುತ ದೃಢಭಕುತಿ ಶ್ರೀ ವೇಂಕಟೇಶನೊಳಿಟ್ಟುಪೊರೆಯೊ ಶ್ರೀ ಗುರುವರಾಗ್ರಣಿಯೆ ನಮೋ ಎಂಬೆ9
--------------
ಉರಗಾದ್ರಿವಾಸವಿಠಲದಾಸರು
ಜಯತು ಜಯತು ಜಯತೆಂಬೆನು ವಿಠಲ ಭಯನಿವಾರಣ ನಿರಾಮಯ ನೀನೆ ವಿಠಲಪ. ಮನವೆನ್ನ ಮಾತ ಕೇಳದು ಕಾಣೊ ವಿಠಲ ಮನಸಿಜನಾಯಸ ಘನವಾಯ್ತು ವಿಠಲ ನಿನಗಲ್ಲದಪಕೀರ್ತಿಯೆನಗೇನು ವಿಠಲ ತನುಮನದೊಳಗನುದಿನವಿರು ವಿಠಲ1 ಕದನ ಮುಖದಿ ಗೆಲುವುದ ಕಾಣೆ ವಿಠಲ ಮದನ ಮುಖ್ಯಾದಿ ವೈರಿಗಳೊಳು ವಿಠಲ ವಿಧವಿಧದಿಂದ ಕಷ್ಟಪಟ್ಟೆನು ವಿಠಲ ಇದಕೇನುಪಾಯ ತೋರಿಸಿ ಕಾಯೋ ವಿಠಲ2 ಹುಟ್ಟಿದೆ ನಾನಾ ಯೋನಿಗಳೊಳು ವಿಠಲ ಸುಟ್ಟ ಬೀಜದ ವೋಲ್ ಫಲವಿಲ್ಲ ವಿಠಲ ಇಷ್ಟಾರ್ಥಗಳನಿತ್ತು ಸಲಹಯ್ಯ ವಿಠಲ ಇಷ್ಟಕ್ಕೆ ನೀ ಮನ ಮಾಡಯ್ಯ ವಿಠಲ3 ಬಂಗಾರ ಭಂಡಾರ ಬಯಸೆನು ವಿಠಲ ಮಂಗಲ ಕೊಡು ಯೆನ್ನ ಬುದ್ಧಿಗೆ ವಿಠಲ ರಂಗ ರಂಗನೆಂಬ ನಾಮದಿ ವಿಠಲ ಭಂಗವ ಪರಿಹರಿಸಯ್ಯ ನೀ ವಿಠಲ4 ಏನು ಬಂದರೂ ಬರಲೆಂದಿಗು ವಿಠಲ ಮಾನಾವಮಾನ ನಿನ್ನದು ಕಾಣೊ ವಿಠಲ ನಾನು ನಿನ್ನವನೆಂದು ಸಲಹಯ್ಯ ವಿಠಲ ಲಕ್ಷ್ಮೀನಾರಾಯಣ ನೀನೆ ತಂದೆ ಕೇಳ್ ವಿಠಲ5
--------------
ತುಪಾಕಿ ವೆಂಕಟರಮಣಾಚಾರ್ಯ
ಜಾಣ ನೀನಹುದೋ ಗುರುಮುಖ್ಯಪ್ರಾಣ ನೀನಹುದೊ ಪ ರಾಣಿ ಭಾರತೀ ರಮಣ ನಿನಗೆಣೆಕಾಣೆ ತ್ರಿಭುವನದೊಳಗೆ ಸರ್ವಪ್ರಾಣಿಗಳ ಹೃದಯದಲಿ ಮುಖ್ಯಪ್ರಾಣನೆಂದೆನಿಸಿದೆಯೊ ಧಿಟ್ಟ ಅ.ಪ ಧೀರ ನೀನಹುದೋ ವಾಯುಕುಮಾರ ನೀನಹುದೊಸಾರಿದವರ ಮನೋರಥಂಗಳಬಾರಿ ಬಾರಿಗೆ ಕೊಡುವೆನೆನುತಲಿಕ್ಷೀರನದಿ ತೀರದಲಿ ನೆಲೆಸಿಹಮಾರುತಾವತಾರ ಹನುಮ 1 ಧಿಟ್ಟ ನೀನಹುದೊ ಬೆಟ್ಟವ ತಂದಿಟ್ಟವ ನೀನಹುದೊರೆಟ್ಟೆ ಹಿಡಿದಕ್ಷಯ ಕುಮಾರನಕುಟ್ಟಿ ದೈತ್ಯರ ಕೆಡಹಿ ಬೇಗದಿಸುಟ್ಟು ಲಂಕೆಯ ಸೀತೆಗುಂಗುರಕೊಟ್ಟೆ ಜಗಜ್ಜಟ್ಟಿ ಹನುಮ2 ದುರಿತ ಮಾರ್ತಾಂಡ ನೀನಹುದೊಕುಂಡಲ ಕಿರಿಘಂಟೆ ಉಡಿಯಲಿಪೆಂಡೆ ನೂಪುರ ಕಾಲಲಂದಿಗೆತಂಡ ತಂಡದಿ ಕೃಷ್ಣನಂಘ್ರಿಪುಂಡರೀಕಕೆ ಕೈಯ ಮುಗಿದ 3
--------------
ವ್ಯಾಸರಾಯರು
ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಿಸಮ್ಮ ಪ ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ ದನಕರ ಹೊಲಮನೆಯನು ಮಾರಿದೆ ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1 ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ 2 ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3 ಹಾರಿ ಹೋಗುವದಮ್ಮಾ ಪಕ್ಕಾರಂಗು ಧಾರುಣೀಶರ ಮಧ್ಯ ತೋರೀದ ಸಮಯದಿ ಆ ರಾಣಿ ವರ್ಗವ ಥರ ಥರ ನಡುಗಿಸುವಿ 4 ಅಕ್ಕರದಲಿ ಎರಡೆಕ್ಕದೊಳು ಬಂದು ಪಕ್ಕನೆ ನೀ ಎನ್ನ ಕೈಯೊಳು ಬಾರೆ ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ 5 ಕಾಮಿತ ದಾಯಿನಿ ಕಾಮಿನಿ ಶಿರೋಮಣಿ ಶಾಮಸುಂದರ ಸಾರ್ವಭೌಮನ ರಾಣಿ ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
--------------
ಶಾಮಸುಂದರ ವಿಠಲ
ಜಿತಮನವ ನೀಡೆನಗೆ ಜಿಷ್ಣುಸಖನೆ ರತಿಪತಿಪಿತ ನಿನ್ನ ಹಿತದಿ ಭಜಿಸುವೆನೊ ಪ. ದುಷ್ಟ ಇಂದ್ರಿಯಗಳು ಕೆಟ್ಟ ವಿಷಯಗಳಲ್ಲಿ ಕಟ್ಟ್ಟೆ ಎನ್ನಯ ಮನವ ಸೆಳೆಯುತಿಹವೊ ಕೃಷ್ಣಮೂರುತಿ ನೀನೆ ದೃಷ್ಟಿಯಿಂದಲಿ ನೋಡಿ ಒಟ್ಟುಗೂಡಿಸಿ ನಿನ್ನ ಪಾದದಲ್ಲಿಡಿಸೊ 1 ಎಂಟು ಜನ ದುಷ್ಟರು ಆರು ಜನ ಕಳ್ಳರು ಕಂಟಕರಾಗಿನ್ನು ಕಾಡುತಿಹರೋ ಎಂಟುದಳಗಳಿಪ್ಪ ನೆಂಟರೆನಗಾಗರೊ ಎಂಟೆರಡು ಇಂದ್ರಿಯವ ಬಂಧನದೊಳಿರಿಸೊ 2 ಮೂರು ತಾಪಗಳಿಂದ ಮೂರು ಗುಣದೊಳು ತಿರುಗಿ ಮೂರು ಮಾರ್ಗವ ಕಾಣೆ ಮುರವೈರಿಯೆ ಮೂರು ಅವಸ್ಥೆಗಳ ವಿವರವರಿಯದ ಎನಗೆ ದಾರಿ ತೋರಿ ಸಲಹೊ ಕಾರುಣ್ಯನಿಧಿಯೆ 3 ಡಿಂಬ ಮಧ್ಯದಲಿರುವ ಅಂಬರದಲಿ ನಿನ್ನ ಬಿಂಬರೂಪವ ತೋರೊ ಶಂಭು ಸಖನೆ ಅಂಬುಜನಾಭ ಎಪ್ಪತ್ತೆರಡು ಸಾಹಸ್ರ ತುಂಬಿದ ನಾಡಿಯೊಳು ರೂಪಗಳ ತೋರೊ4 ಮನದಲ್ಲಿ ನೆಲಸಿಹನೆ ಮನುಶಬ್ದವಾಚ್ಯನೆ ಮನದಿಂದ ಭಿನ್ನನೆ ಮನಪ್ರೇರಕ ಮನವ ನಿನ್ನಲಿ ನಿಲಿಸಿ ಅನುಗಾಲ ಸಲಹುವುದು ಚಿನುಮಯನೆ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಜೋ ಜೋ ಜೋನಂತ ಸದ್ಗುಣಧಾಮಾ ಜೋ ಜೋ ಜೋ ಯದುವಂಶಲಲಾಮ ಜೋ ಜೋ ಸಕಲ ಮಲಾಪಹ ನಾಮ ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ. ನಿಗಮತತಿಗಳೆಲ್ಲ ಪೊಗಳುತ್ತಲಿಹನ ನಗಚಾಪ ಪಿತನನ್ನು ನಗುತ ಪೆತ್ತವನ ಸ್ವಗತ ಭೇದಶೂನ್ಯ ಖಗಪ ವಾಹನನ ಮಗುವೆಂದು ಕೂಗುವ ಮಾರಜನಕನ 1 ಮೂರು ಗುಣಂಗಳ ಮೀರಿದ ಸಿರಿನಲ್ಲ ಚೋರತನದಿ ಬೆಣ್ಣೆ ಮೆಲುವರೆ ಬಲ್ಲ ಈರೇಳು ಭುವನವ ಮೂರಡಿ ಮಾಡಿದ ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2 ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು ಭೋಗಿ ಶಯನತ್ವದಧೀನವಾಗಿರಲು ವಾಗೀಶವಾಯುಗಳರ್ಚಿಪ ನಿನ್ನನು ತೂಗುವ ರಾಗವ್ಯಾವದೊ ಪೇಳೊ ರನ್ನ 3 ಆದರು ಕಲುಷಾವನೋದನ ನಿನ್ನಯ ಪಾದಕಮಲಗಳ ಪೊಗಳಿ ಪಾಡುವರ ಕಾದುಕೊಳ್ಳುವೆನೆಂಬ ವೇದ ಸಾರವನ್ನು ನೀ ದಯ ಮಾಡಿದರೋದುವೆನಿದನು 4 ನೀರೊಳಗಾಡಬ್ಯಾಡೆಂದರೆ ಕೇಳದೆ ಮಂದರ ಪೊತ್ತು ಬೇರನೆ ಕಿತ್ತಿ ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ ಧಾರುಣೀಶರ ಕೊಂದ ಧೀರ ರಾಘವನೆ 5 ಚಿಕ್ಕತನದಿ ಬಹು ರಕ್ಕಸ ಕುಲವ ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6 ಘೋರ ಜರಾಸಂಧ ಸಾಲ್ವೈಕಲವ್ಯರ ಗಾರಗೆಡಿಸಿ ದ್ವಾರಕಾ ಪುರ ರಚಿಸಿ ಕೌರವನೊಶದಲಿ ಸೇರಿದ ಧರಣಿಯ ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7 ಎರಡು ಹೆಂಗಳನಾಳುವುದೆ ಬಹು ಘೋರ ಎರಡೆಂಟು ಸಾವಿರ ಮತ್ತೆಂಟು ನೂರ ನೆರಹಿಕೊಂಡರೆ ನಿನಗಾಗದೆ ಭಾರ ಪರಮಾತ್ಮ ನಿನಗಿದು ಲೀಲಾವತಾರ 8 ಬತ್ತಲೆ ತಿರುಗಿದರಾಗದೆ ದೃಷ್ಟಿ ಕರವಾಳ ಮುಷ್ಟಿ ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ ನಿತ್ಯ ನಂಬಿದಪರಿಗಾನಂದ ಪುಷ್ಟಿ 9 ಅಣುಗಳಿಗೆ ಪರಮಾಣುವಾಗಿ ನಿಲುವಿ ಘನಕಿಂತ ಘನವಾಗಿದನುಜರ ಕೊಲುವಿ ಕನಡಿಲಿ ಪ್ರತಿಫಲಿಸುವ ವೋಲಿರುವಿ ಕನಲುತ ಭಕ್ತರು ನೆನೆವಲ್ಲಿ ಒಲಿವಿ 10 ಜೋಗಿ ಜನರ ಸಹವಾಸ ಬೇಡೆಂದರೆ ಪೋಗಿ ಪೋಗಿ ಅವರ ಮನದೊಳಗಿರುವಿ ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11 ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ ಮಂಗಳ ದೇವಿಯ ಮೋಹಿಪಕಾಯ ಗಂಗೆಯ ಪಡದಂಗುಷ್ಠವನಿಟ್ಟಪಾಯ ರಂಗನಾಥ ಶ್ರೀ ವೆಂಕಟರಾಯ 12
--------------
ತುಪಾಕಿ ವೆಂಕಟರಮಣಾಚಾರ್ಯ
ಜ್ಞಾನ ಪ್ರದಾಯಕ ಪ್ರಾಣದೇವ ಪ ಕಾಣೆ ನಿನಗೆ ಸಮಸತ್ಪ್ರಭಾವ ಅ.ಪ ಈ ಶರೀರದೊಳು ವಿಭೀಷಣನ ತೋರೊ 1 ಕೋಪ ಕುಜನತ್ವ ದುರ್ ವ್ಯಾಪಾರಾದಿಗಳನ್ನೆಲ್ಲ ರೂಪಡಗಿಸಿದೆ ನೀನೇ ಭೂಪನೈಯ್ಯ 2 ಇಪ್ಪತ್ತೊಂದು ವಿಧದ ತಪ್ಪುಗಳ ತಿದ್ದಿದೆ ತಿ- ಮ್ಮಪ್ಪ ವೇದ ವ್ಯಾಸರ ಶಿಷ್ಯಾವರ್ಯಾ 3 ಕಲಿಮಾರ್ಗದಲಿ ಪೋಪ ಹೊರೆ ಬುದ್ಧಿನಾಶಗೈಸಿ ಒಳಗೆ ನೀ ಪೊಳೆವುದು ಜಲಜಾಪ್ತ ಪ್ರಿಯ4 ರಂಜೀತವಾದ ಕಣ್ಣ್ಣಿಗೆ ಮಂಜು ಮುಚ್ಚಿಹುದು ದಿ- ವ್ಯಾಂಜನ ಹಚ್ಚೈ ವೀರಾಂಜನೇಯಾ5 ಯೇಳಾರೊಳಗೆ ಹದಿನೇಳಾನೆಯವರನು ಪಾಲಿಪ ದೊರೆ ನೀನು ಜಾಲವೇನು?6 ಸಿರಿಗುರುರಾಮ ವಿಠಲನ ಶರಣಾರಾಭರಣ ನೀನೆ ಕರುಣೀಸದಿದ್ದರೆಮ್ಮನು ಕಾವರಾರೈ 7
--------------
ಗುರುರಾಮವಿಠಲ
ಜ್ಞಾನಾನಂದ ಸ್ವರೂಪ ಭಾನುಕೋಟಿ ಪ್ರದೀಪ ನಾನಾದೋಷ ನೀರ್ಲೇಪ ಮೀನ ರೂಪ ಪ ಏನು ಅರಿಯದ ದೀನ ಭಕುತನಿಗೆ ಸಾನುರಾಗದಿ ಜ್ಞಾನವನೀಯೋ ಅ.ಪ ನಿಗಮಗಳೆಲ್ಲವು ಬಗೆ ಬಗೆಯಿಂದ ನಿನ್ನ ಅಗಣಿತ ಗುಣಗಳ ಪೊಗಳುತಲಿದ್ದರು ಸಿಗದ ನಿನ್ನ ನಾನು ಪೊಗಳಲಳವೆ ಪೇಳೊ ಸಿರಿಯರಸನೆ ನಿನ್ನ ಚರಣಕಮಲದಲಿ ಪರತರ ಭಕುತಿಯ ದೊರಕಿಸೆಲೊ ಸರಸಿಜ ಜನಕನೆ ಮರೆತಪರಾಧವ ಕರುಣದಿಂದಲಿ ಎನ್ನ ಕರಗಳ ಪಿಡಿಯೋ 1 ಒಂದು ದಿನವು ಸುಖ ಗಂಧವನರಿಯದೆ ಭವ ಸಿಂಧುವದನನೆ ತೊಂದರೆ ಪಡುತಿಹೆ ಸುಂದರ ವದನನೆ ತಂದೆ ಎನಗೆ ನೀನೆ ಬಂಧುವೆನಗೆ ನೀನೆ ಮಂದ ಬುದ್ಧಿಯಲಿ ನಿಂದ್ಯನಾದೆನಗೆ ಕುಂದು ಸಹಸ್ರವು ಸಂಧಿಸಿತು ಇಂದು ಮನಕೆ ಆದ ತಂದುಕೊಳ್ಳದೆಲೆ ಮಂದಹಾಸದಲಿ ಬಂದೆನ್ನ ಪೊರೆಯೋ 2 ಹಿತವೆಂದು ಭವವನು ಅತಿ ಮೋಸಹೋದೆನು ಮತಿಗೆಟ್ಟು ನಿನ್ನನು ಸ್ತುತಿಸಲಿಲ್ಲವೊ ನಾನು ಮಿತಿಮೀರುತಿರಲೆನ್ನ ಸ್ಥಿತಿಯ ನೀನರಿಯುತ ಮತಿ ಬೇರೆ ಮಾಡಿ ಮರೆತೆಯೇನೊ ಶ್ರೀಪತೆ ಕ್ಷಿತಿಯೊಳೆನಗೆ ಗತಿ ಇತರರ ಕಾಣೆನÉೂೀ ಪತಿ ನೀನಿರೆ ವಸುಮತಿಯೊಳಗೆ ಪತಿತಪಾವನನೆ ಪ್ರಸನ್ನನಾಗಿ ದಿವ್ಯ ಸತತ ಸುಖಕೆನಗೆ ಪಥವನು ತೋರೊ 3
--------------
ವಿದ್ಯಾಪ್ರಸನ್ನತೀರ್ಥರು
ತಡವ ಮಾಡುವಿಯಾಕೊ ಒಡೆಯ ಗೋವಿಂದ ಬಡವನ ಮೇಲಿನ್ನು ಮುನಿಸೆ ಮುಕುಂದ ಪ. ಕೆಟ್ಟ ಕೃತ್ಯಗಳತ್ಯುತ್ಕøಷ್ಟವಾದುದರಿಂದ ಮಂಡೆ ಕುಟ್ಟುವ ತೆರದಿ ಸಿಟ್ಟಿನಿಂದಲಿ ಬಹು ಕಷ್ಟಗೊಳಿಸಿದಿ ಕಟ್ಟ ಕಡೆಯಲಿ ನೀ ಕಟ್ಟ ಬಿಡಿಸಿದಿ 1 ದುಷ್ಟ ಬಾಧೆಯ ಮುರಿದಟ್ಟಿದಿ ದಯದಿ ಘಟ್ಟ ಬೆಟ್ಟಗಳನ್ನು ಮೆಟ್ಟಿ ನಾ ಭರದಿ ನಿಟ್ಟುಸುರಲಿ ಬಾರೆ ಕೃಷ್ಣ ನೀ ಕರುಣದಿ ತೊಟ್ಟಿಲ ಶಿಶುವಿನಂದದಲಿ ಪಾಲಿಸಿದಿ 2 ಜನರ ಸಹಾಯವ ಕನಸಿಲಿ ಕಾಣೆ ಧನಬಲವೆಂದೆಂದಿಗಿಲ್ಲ ನಿನ್ನಾಣೆ ವನರುಹೇಕ್ಷಣ ನಿನ್ನ ನಾಮ ಒಂದೆ ಹೊಣೆ ಯೆನುತ ನಂಬಿದುದರ ಫಲವಿನ್ನು ಕಾಣೆ 3 ಜಗದ ಸಜ್ಜನರಿದು ಮಿಗೆ ಮೀರಿತೆನಲು ಹಗೆಗಳೆಲ್ಲರು ಬಹು ಸೊಗಸಾಯಿತೆನಲು ನಗಲು ಎನ್ನನು ನೋಡಿ ನಗಧರ ನೀ ಬಂದು ಅಘಟಿತ ಘಟನ ಮಾಡಿದಿ ದೀನಬಂಧು 4 ಈ ಪರಿಯಲಿ ನಿರುಪಾಧಿಯೊಳೆನ್ನ ಕಾಪಾಡಿ ಕಡೆಯೊಳೀ ಕಷ್ಟಗಳನ್ನ ನೀ ಪರಿಹರಿಸಲೇಬೇಕು ಪ್ರಸನ್ನ ಶ್ರೀಪತಿ ಶೇಷಾದ್ರಿವಾಸ ಮೋಹನ 5
--------------
ತುಪಾಕಿ ವೆಂಕಟರಮಣಾಚಾರ್ಯ
ತದಿಗೆಯ ದಿವಸ (ಶೇಷ ದೇವರನ್ನು ಕುರಿತು) ರಂಭೆ : ನಾರೀಮಣೀ ನೀ ಕೇಳೆ ಈತ- ನ್ಯಾರೆಂಬುದನೆನಗೆ ಪೇಳೆ ಕ್ರೂರತನದಿ ತಾ ತೋರುವನೀಗ ಮ- ಹೋರಗನೆನ್ನುತ ಕೋರಿಕೆ ಬರುವದು1 ಒಂದೆರಡು ಶಿರವಲ್ಲ ಬಹು ಹೊಂದಿಹವು ಸಟೆಯಲ್ಲ ಕಂಧರದಲಿ ಕಪ್ಪಂದದಿ ತೋರ್ಪವು ಚಂದಿರಮುಖಿ ಯಾರೆಂದೆನಗರುಹೆಲೆ 2 ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ- ಸಾಮಾನ್ಯನೆ ಕಾಣೆ ಭೂಮಿಯ ಪೊತ್ತ ನಿರಾಮಯನಾದ ಸುಧೀಮನಿವನು ಜಾಣೆ 1 ವಾಸುದೇವಗೆ ಈತ ಹಾಸಿಗೆಯವ ನಿ- ರ್ದೋಷನಿವನು ಜಾಣೆ ಸಾಸಿರಮುಖದ ವಿಲಾಸನಾಗಿಹ ಮಹಾ- ಶೇಷನಿವನು ಕಾಣೆ 2 ಅದರಿಂದಲಿ ಕೇಳ್ ತದಿಗೆಯ ದಿವಸದಿ ಮಧುಸೂದನನಿವನ ಅಧಿಕಾನಂದದಿ ಒದಗಿಸಿ ಬರುವನು ಇದೆಯಿಂದಿನ ಹದನ 3 ಎಂದಿನಂತೆ ಪುರಂದರವಂದ್ಯ ಮು ಕುಂದ ಸಾನಂದದಲಿ ಅಂದಣವೇರಿ ಗೋವಿಂದ ಬರುವನೊಲ- ವಿಂದತಿ ಚಂದದಲಿ4 ಕಂಟಕಗಳು ಎಲ್ಲುಂಟೆಂಬಂತೆ ನೃಪ- ಕಂಠೀರವಗೈದ ಘಂಟಾನಾದದಿ ಮಂಟಪದೊಳು ವೈ- ಕುಂಠನು ಮಂಡಿಸಿದಾ 5 ಕಾಂತಾಮಣಿ ಕೇಳಿಂತೀಪರಿ ಶ್ರೀ- ಕಾಂತ ನತತಂಡ ಸಂತವಿಸುತ ಮಹಾಂತಮಹಿಮನೇ- ಕಾಂತಸೇವೆಯಗೊಂಡ 6 * * * ಪರಶಿವನನ್ನು ಕುರಿತು ರಂಭೆ :ಯಾರಮ್ಮಾ ಮಹಾವೀರನಂತಿರುವನು ಯಾರಮ್ಮಾ ಇವನ್ಯಾವ ಶೂರ ಯಾವ ಊರಿಂದ ಬಂದ ಪ್ರವೀರ ಆಹಾ ಮಾರಜನಕನ ವಿಸ್ತಾರಪೂಜೆಯ ವೇಳ್ಯ ಧೀರನಂದದಿ ತಾ ವಿಚಾರ ಮಾಡುವನೀತ1 ಕರದಿ ತ್ರಿಶೂಲವ ಧರಿಸಿ ಮತ್ತೆ ವರ ಕೃಷ್ಣಾಜಿನವನುಕರಿಸಿ ಹರಿ ಚರಣಸನ್ನಿಧಿಗೆ ಸತ್ಕರಿಸಿ ಆಹಾ ಜರಿಯ ದುಕೂಲವ ನಿರಿದುಟ್ಟುಕೊಂಡು ವಿ- ಸ್ತರವಾದ ತೋಷದಿ ಮೆರದು ನಲಿವ ಕಾಣೆ 2 ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ. ಈತನೀಗ ಪೂರ್ವದೊಳಗೆ ಭೂತನಾಥ ಸೇವೆಯೊಲಿದ ಓತು ವಿಷ್ಣುಭಕ್ತಿಯಿಂದ ಪೂತನಾದ ಪುಣ್ಯಪುರುಷಅ.ಪ. ತೀರವಾಯ್ತು ವೇಣು ತಾ ವಿ- ಉದಾರತನದಿ ರಾಮೇಶ್ವರಕೆ ಸಾರಗ್ರಹಿತ ಮುಕ್ತಿ ಪಥವನು ಕರುಣದಿಂದ ತೋರಿಸುವನು ವಿಷ್ಣುವೆಂದೆನುತ ಗಿರಿಯ ಪದಾರವಿಂದಸೇವೆಗೈದು ನಲಿವ ಚಾರುಚರಿತ 1 ಬರುವ ಕಾಲದಲ್ಲಿ ಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತ ಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆ ಚರಿಸುವ ತ್ರಿಕಾಲಪ್ರಜ್ಞನು ಇವನ ಗುಣವ- ಮಹತ್‍ಕಾರಣೀಕ ಕರುಣವುಳ್ಳ ವಿಷ್ಣುಭಕ್ತ 2 ಪ್ರಧಾನಿಯೆಂದು ನಡೆಸಿಕೊಡುವ ತೋಷಪಟ್ಟು ಇರುವ ಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತ ನಾನಾ ಉಪದ್ರವಗಳ ಬಿಡಿಸುವ ಧನಿಯ ಆಜ್ಞೆ ಬಂದು ಪೇಳಿ ಜನರ ಕ್ಷೋಣಿಯೊಳಗೆ ಕೀರ್ತಿಪಟ್ಟ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಪಿಸಲಾರೆ ನಾನು ಪರಿಪರಿ ತಾಪದಲಿ ಕೃಪೆಮಡಿ ಸಲಹಿರಿ ಶ್ರೀ ಗುರುಗಳೆ ಪ. ಸುಪಥ ಕಾಣದೆ ನಿಮ್ಮ ಪಾದವನೆ ನಂಬಿದೆನು ಗುಪಿತ ಮಹಿಮರೆ ಇನ್ನು ಭವಪಾಶ ಬಿಡಿಸುತ್ತ ಅ.ಪ. ಬಂಧು ವರ್ಗಗಳನ್ನ ಬದುಕಿಸುವರು ಎಂದು ಬಂಧನದೊಳು ಬಿದ್ದು ಬೆಂದು ನೊಂದೆ ಮುಂದೆ ದಾರಿಯ ಕಾಣೆ ಮುಕ್ತಿ ಮಾರ್ಗವನರಿಯೆ ಬಂಧು ಬಳಗಗಳೆಲ್ಲ ನೀವೆಂದು ನಂಬಿದೆ 1 ಅಶನವಸನಗಳಲ್ಲಿ ಆಸೆಯನು ತೊರೆಯದೆ ವಸುಮತಿಯೊಳು ಜ್ಞಾನ ಹೀನವಾಗಿ ಪಶುವಿನಂದದಿ ತಿರುಗಿ ಕಾಲವ್ಯರ್ಥ ಕಳೆದೆ ಅಸಮ ಮಹಿಮರೆ ಇನ್ನು ಅಜ್ಞಾನ ಪರಿಹರಿಸಿ 2 ಮಮತೆಯನು ತೊರೆಯದೆ ಮಾಯ ಪಾಶಕೆ ಸಿಲುಕಿ ಮಮಕಾರದಿಂದ ನಾ ಮೈಮರೆತೆನು ನಮಿಸುವೆನು ದೈನ್ಯದಲಿ ನಾನೀಗ ನಿಮ್ಮ ಪದಕೆ ರಮೆಯರಸನ ತೋರಿ ಎನ್ನ ಮನ ಮಧ್ಯದಿ 3 ಪಾವನರೂಪರೆ ಪಾಪರಾಹಿತ್ಯರೆ ಪಾವಿನಶಯನಗೆ ಪರಮಪ್ರಿಯರೆ ದೇವತೆಗಳೊಡೆಯರೆ ದೇವಾಂಶ ಸಂಭವರೆ ಪಾವಮಾನಿಗೆ ಪ್ರಿಯರೆ ಪಾವನ್ನಗಾತ್ರರೆ 4 ಆಪತ್ತು ಕಳೆಯುವರೆ ಶ್ರೀಪತಿಯ ತೋರ್ವರೆ ಕೋಪಿಸದೆ ಎನ್ನೊಳು ಕೃಪೆಗೈಯ್ಯರಿ ಗೋಪಾಲಕೃಷ್ಣವಿಠ್ಠಲ ತಾನು ಹೃದಯದಲಿ ತೋರ್ಪುತೆ ಕರುಣಿಸುತ ಈ ಪರಿಯಿಂ ಸಲಹಿರಿ5
--------------
ಅಂಬಾಬಾಯಿ
ತಪ್ಪ ಪಾಲಿಸಯ್ಯ ತಿಮ್ಮಯ್ಯ ತಪ್ಪ ಪಾಲಿಸಯ್ಯಪ. ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳು ಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆಅ.ಪ. ಜಲಜನಾಭ ನಿನ್ನ ಮಹಿಮೆಯ ನೆಲೆಯನರಿಯದೆನ್ನ ಮನವದು ನೆಲೆಯಿಲ್ಲದ ಭವಜಲಧಿಯೊಳಾಡುತ್ತ ಲಲನಾ ವಿಷಯದ ಬಲೆಗೆ ಮೋಹಿಸಿ ಮನ ಸಿಲುಕಿ ಮಲಿನವಾಯ್ತು ತತ್ವದ ನೆಲೆಯನರಿಯದಾಯ್ತು ಹೀಗೆನ್ನುತ ಕಳೆದುಹೋಯ್ತು ವಿಂಶತಿ ವತ್ಸರಗಳು ತೊಳಲಿ ಸಕಲ ಭವದೊಳಗಾರ್ಜಿತವಹ1 ಹಾಳು ಮನವು ಕೂಡಿ ನಾನಾ ಚಾಳಿ ಮಾಳ್ಪುದಾಡಿ ಬುದ್ಧಿಯ ಪೇಳಿದಷ್ಟು ದುಶ್ಯೀಲವೆ ಮಾಳ್ಪುದು ಆಲೋಚನೆಯೊಳಗೆ ಬಿದ್ದರೆ ಮೇಲಿಲ್ಲವು ಕ್ಷಣಕೆ ತನ್ನಯ ಶೀಲವನೆ ಸ್ವೀಕರಿಸುತಿರುವುದು ಪೇಳಲೇನು ಕರುಣಾಳು ನೀ ಯೆನ್ನಯ2 ನಾನಾ ಕಷ್ಟಪಟ್ಟೆ ಇನ್ನಾದರು ಮಾನಿಸಬೇಕಷ್ಟೆ ಎನ್ನೊಳು ಊನ ಗ್ರಹಿಸಿ ಅನುಮಾನ ಸಾಧಿಸಿದರೆ ನಾನೆಂಬುವದೇನು ಸ್ವತಂತ್ರವ ಕಾಣೆನು ಎನ್ನೊಳಗೆ ಸಂತತ ನೀನೇ ಗತಿಯೆನಗೆ ಇದಕನು- ಮಾನವಿಲ್ಲ ಪಾದಾನತಜನರಾ ಧೀನನೆಂಬ ಬಿರುದಾನಬೇಕಾದರೆ3 ಅಪರಾಧಿಯೆ ನಾನು ಹೇಗೈ ಅಖಿಲಾತ್ಮನು ನೀನು ಹೃದಯದಿ ಕೃಪೆಯ ಬೀರಿ ತೋರಿಪ ಪರಮಾತ್ಮನೆ ಚಪಲನಾಗಿ ಎನ್ನುಪಮೆಗೆಯೊಡ್ಡಿದೆ ಸಫಲವಾಯ್ತು ಎನಗೆ ಕೀರ್ತಿಯು ಅಪಕೀರ್ತಿಯು ನಿನಗೆ ಪಾದವ ಜಪಿಸುವಂತೆ ಕರುಣಿಪುದಿನ್ನಾದರೂ ಕಪಟವಾಯ್ತೆ ಸರೀಸೃಪಗಿರಿರಾಜನೆ4 ದೂಷಣಾರಿ ನಿನ್ನ ಪಾದದ ದಾಸಗೈಯ್ಯೊ ಎನ್ನ ಎನ್ನೊಳು ದೋಷವಿಲ್ಲ ಜಗದೀಶ ಜನಾರ್ದನ ದಾಶರಥಿಯ ಕರುಣಾಶರಧಿಯೊಳಗೆ ಈಸಾಡಿದ ದಾಸ ಕಾರ್ಕಳಾ ಧೀಶ ಶ್ರೀನಿವಾಸ ರವಿಶತ ಭಾಸ ಶ್ರೀಲಕ್ಷ್ಮೀನಾರಾಯಣ ಸ ರ್ವೇಶ ಭಕ್ತಜನಪೋಷ ನೀಯೆನ್ನಯ5
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪುವುದೇ ಬ್ರಹ್ಮಕೆ ಗುರಿಯು ನೀನುತಪ್ಪಿದರು ತಾನು ತಪ್ಪದು ಅರಿಯೋ ನೀನು ಪ ಕರವ ಭೂಮಿಗೆ ಬಡಿಯಲು ಪೆಟ್ಟಹೊರಗನೆ ಮಾಡುವುದು ಆವ ಪರಿಪರಿಪೂರ್ಣ ಬ್ರಹ್ಮ ತುಂಬಿರಲು ನೀನುಪರವೆಂದು ಕಾಣೆ ಸಂಶಯವೆ ನಿಜವಿರಲು 1 ಗುಡ್ಡಕೆ ಗುರಿಯ ನೋಡಿದೆ ಅದುಅಡ್ಡಬಿಟ್ಟು ಬೇರೆ ನಿಲ್ಲುವುದೆ ನೋಡೆಖಡ್ಡಿಕೊಳ್ಳದು ಬ್ರಹ್ಮವಾಡೆ ನಿನ್ನದೊಡ್ಡ ಬ್ರಹ್ಮವೆನಲು ಸಂಶಯ ನೋಡೆ 2 ಆಕಾಶ ನೋಡುವುದೇ ತಾನು ಆಆಕಾಶ ನೋಡಲು ನೂಕು ನುಗ್ಗೇನುಏಕ ಚಿದಾನಂದ ನೀನು ಜಗದೇಕ ಬ್ರಹ್ಮವೆಂದು ನಿನ್ನ ನೀನೇ ಕಾಣ 3
--------------
ಚಿದಾನಂದ ಅವಧೂತರು