ಒಟ್ಟು 19445 ಕಡೆಗಳಲ್ಲಿ , 133 ದಾಸರು , 8422 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡಲಾಗದಿದ್ದರೆ ನುಡಿಯುವರೇನಣ್ಣ ಕಡೆಯಿಂದ ಬಾರೆಂದು ಜಡಿದಿಂದು ಪ. ದುಡುಕಿದೆವೆನ್ನುತ ಮಿಡುಕದಿರಣ್ಣಯ್ಯ ಕಡುಮುದದಿಂದಾವು ನಡೆದೇವು ಕೋಲೇಕೋಲೆ ಮುತ್ತಿನ ಕೋಲೆ ಅ.ಪ ಗುಣಯುತರೆನಿಸುವ ಹಿರಿಯ ವಂದಿಸ ಲೆನಂತಲೈ ತಂದೆವು ಮಣಿದೆವು ಹಣಗಾರರರೆಂದಲ್ಲಿ ಮಣಿಯಲು ಬರಲಿಲ್ಲ ಹಣದಾಸೆ ನಮಗಿಲ್ಲ ಕೇಳೀಸೊಲ್ಲ ||ಕೋಲೇ|| 1 ಅಣ್ಣಯ್ಯ ನಿಮಗೀ ಘನತೆಯು ಸಲ್ವುದು ಗಣ್ಯರಾದಿರಿ ನೀವು ಜಗದೊಳು ಪುಣ್ಯವಂತೆಯು ನಿಮ್ಮ ಪಡೆದಾಮಾತೆಯು ಧನ್ಯರಾದಿರಿ ನಿಮ್ಮೀಗುಣದಿಂದ ಕೋಲೆ 2 ದೋಷರಹಿತ ಶ್ರೀಶೇಷಗಿರೀಶನಾ ಕೇಶವನೊಲವೊಂದೆಮಗಿರಲಿ ಭಾಷೆಯ ಕೊಡುವೆವು ದೇಶಸೇವಕರಾವು ಲೇಸಾಗಲಿಳೆಗೆಂದು ಮನದಂದು ||ಕೋಲೆ||3
--------------
ನಂಜನಗೂಡು ತಿರುಮಲಾಂಬಾ
ಕೊಡಲು ನೀನಾರು ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು ಪ ಪಾಡುವ ಪದ್ಯಗಳಲಿ ಭಾವವಾಗಿರುವನೋಡುವ ನೋಟಗಳ ನೋವು ಗ್ರಹಿಸುವನುಡಿವ ನುಡಿಯ ತಾತ್ಪರ್ಯವನರಿವನಾಡಿ ನರಗಳಂತೊಲಿವ ಆದಿಕೇಶವರಾಯ 2
--------------
ಕನಕದಾಸ
ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ- ಮಂಡಲದೊಳು ಹಯಗ್ರೀವಮೂರ್ತಿ ಪ. ವೇದಂಗಳ ಜಲದಿಂದ ತಂದೆ ನೀ ಪೋದ ಗಿರಿಯ ಬೆನ್ನೊಳಾಂತು ನಿಂದೆ ಮೇದಿನಿಯ ಕದ್ದೊಯ್ದನ ಕೊಂದೆ ಸಂ- ವಾದದಿಂದ ಕಂಬದಿಂದಲಿ ಬಂದೆ 1 ಚರಣಾಗ್ರದಲಿ ನದಿಯನು ಪೆತ್ತೆ ತೀಕ್ಷ್ಣ ಪರಶು ಪಿಡಿದು ಬಾಹುಜರ ಕಿತ್ತೆ ನೆರೆನಂಬಿದಗೆ ಸ್ಥಿರಪಟ್ಟವನಿತ್ತೆ ದೊಡ್ಡ ದುರುಳಕಾಳಿಂಗನ ಶಿರದಿ ನಿಂತೆ 2 ಪರವ್ರತೆಯರ ಮಾನಭೇದನ ಚತುರ ತುರಗವೇರಿ ನಲಿವನ ಕ್ಷಿತಿಯೊಳುತ್ತಮ ವಾದಿರಾಜನ ಸ್ವಾಮಿ ಸತತ ರಕ್ಷಿಪ ಶ್ರೀ ಹಯವದನ 3
--------------
ವಾದಿರಾಜ
ಕೊಂಡಾಡುವರ ಪ್ರಿಯನ ವಿಠ್ಠಲನ ಪ ಸಮಚರಣ ಭುಜನ ನಿಗಮಾ ಗಮತತಿಗೋಚರನಾ ಅಮಿತ ಪರಾಕ್ರಮನ ರುಕ್ಮಿಣಿ ರಮಣ ರವಿಕ್ಷಣನಾ ವಿಠ್ಠಲನ 1 ಕಾಮಿತಾರ್ಥ ಪ್ರದನ ಶ್ರೀ ತುಲಸೀ ಧಾಮ ವಿಭೂಷಿತನ ಪತಿ ಪಾಲನ ತ್ರಿಭುವನ ಸ್ವಾಮಿ ಚಿತ್ಸುಖಮಯನ ವಿಠ್ಠಲನ 2 ಗೋಕುಲ ಪೋಷಕನ ಮುನಿ ಪುಂಡ ರೀಕಗೋಲಿದು ಬಂದನ ಲೋಕವಿಲಕ್ಷಣನ ಪ್ರಣತರ ಶೋಕವಿನಾಶಕನ ವಿಠ್ಠಲನ 3 ವಿಧಿ ವಿಹ ಗೇಂದ್ರ ಮುಖಾರ್ಚಿತನ ಇಂದ್ರೋತ್ಪಲನಿಭನ ಗುಣಗಣ ಸಾಂದ್ರ್ರ ಸರ್ವೋತ್ತಮನ ವಿಠ್ಠಲನ 4 ಶ್ವೇತವಾಹನ ಸಖನ ಸತಿಗೆ ಪಾರಿ ಜಾತನ ತಂದವನಾ ವೀತ ಶೋಕ ಭಯನಾ ಶ್ರೀ ಜಗ ನ್ನಾಥ ವಿಠಲರೇಯನಾ 5
--------------
ಜಗನ್ನಾಥದಾಸರು
ಕೊಡಿಸೆ ಭಕ್ತರ ಒಡಂಬಡಿಸೆ ಮೊಲೆಯುಣ್ಣಿಸಿ ತೊಟ್ಟಿಲೊಳ್ ಮಾಯೆ ನೀನೊಬ್ಬಳೆ ತಾಯೆ ಭಕ್ತರ ಸಂತತ ಕಾಯೆ ಶಾಂತೇಶ್ವರಿ ಮಾಹಾಮಾಯೆ ನಾನಿನ್ನ 1 ಸಪ್ತಸ್ವರ ಭೇದವ ತಿಳಿಸಿದ್ಯಾಕೆ ನೀನು ಪೇಳುವ ನುಡಿ ಪುಸಿಯಲ್ಲ ನಾನಿನ್ನ 2 ವರಕೊಲ್ಲಾಪುರದ ಶ್ರೀ ದುರ್ಗಾಂಬಾ ನಾನಿನ್ನ ಪಾದದ ಸ್ಮರಣೆ ಬಿಡೆನು ಶ್ರೀ ಮೂಕಾಂಬಾ ಅಡಿಗಡಿಗೆ ನಾ ಶ್ರೀ ಮೂಕಾಂಬೆ ನಾನಿನ್ನ 3
--------------
ಭಟಕಳ ಅಪ್ಪಯ್ಯ
ಕೊಡು ಕಂಡ್ಯಾ ಹರಿಯೇ | ಶ್ರೀಪತಿ ಉತ್ತಮರ ಸಂಗತಿಯಲೆನ್ನಯಿಟ್ಟು ಪ ಬಂದು ಕುಳ್ಳಿರುವಲ್ಲಿ ಸಿಂಹಾಸನನಾಗುವೆನು | ನಿಂದಲ್ಲಿ ಮೆಟ್ಟುವ ಹಾವಿಗೆಯಾಗುವೆ | ಮಿಂದ ಬಚ್ಚಲಿಗೆ ಹಚ್ಚಿದ ಶಿಲೆಯಾಗುವೆ | ಗಂಧವಾಗುವೆ ನಿನ್ನ ಅಂಗಾಲಿಗೆ 1 ಉಂಬಲ್ಲಿ ಬಿದ್ದ ಎಂಜಲ ತಿಂದು ಬದುಕುವೆ | ಕರವ ತೊಳಿವೆ | ಅಂಬುಜ ಕುಸುಮವಾಗಿ ಹಾಸಿಕೆಯಾಗುವೆ ಬಾಯ | ದೊಂಬಲಿಗೆ ಕರವಡ್ಡಿ ಛಲ ಹೊರುವೆ2 ಪವಡಿಸುವ ಮನೆಯೊಳಗೆ ಸೂಜ್ಯೋತಿಯಾಗುವೆ | ಸಿರಿ ವಿಜಯವಿಠ್ಠಲ | ಜವನ ದೂತರನೊದದು ಸುಶುಚಿಯಾಗುವೆ3
--------------
ವಿಜಯದಾಸ
ಕೊಡು ಕೃಷ್ಣನೇ ಎನ್ನ ಸಾಲವ ಬೇಗ ಕೊಡದಿದ್ದರೆ ಬಿಡೆನೊ ಪ. ತಡ ಮಾಡಿದೊಡೆ ನಿನ್ನಾಟದ ಬೆಡಗನು ಪೊಡವಿಗೆ ತಿಳಿಸುವೆನು ಜೋಕೆ ಅ.ಪ. ನೀರ ಪೊಕ್ಕರು ಬಿಡೆ ನಿನ್ನ ಭವ ವಾರಿಧಿ ದಾಟಿಸುವೆಂಬೆ ಭಾರ ಪೊತ್ತರೆ ನೀನೇ ಎನ್ನ ಸಂಸಾರ ಭಾರಕೆಂಬೇ ದೇವ ಕೋರೆ ತೋರಲು ಅಂಜುವೆನೆ ಭೂಮಿಯ ಮೇರೆ ಸಿಲಿಕದೋಡಿದರೂ ದೃಢವನು ಕೊಡದಿದ್ದರೂ ಬಿಡೆ ನಾ 1 ಕಂಬದೊಳಡಗಲು ಬಿಡೆನು ನಿನ್ನ ಡಿಂಬ ಭಜಿಪೆ ನರಹರಿಯೆ ಸಂಭ್ರಮದೊಳು ಬ್ರಹ್ಮಚಾರಿಯಾಗಲು ನಿನ್ನ ಹಂಬಲು ಬಿಡೆ ಕೊಡಲಿಯನು ತೋರಲು ಕದಂಬ ಬಾಹು ಛೇದಿಸಲು ರಾಮ ಕೊಡದಿದ್ದರೆ ದೃಢನಾ ದೇವ 2 ಒಂದು ಸ್ಥಳದಿ ಪುಟ್ಟಿ ತಿಳಿಸದೆ ಇ ನ್ನೊಂದು ಸ್ಥಳಕೆ ಪೋಗೆ ಕೃಷ್ಣಾ ಅಂದದ್ವಸನ ಬಿಟ್ಟು ಸುಂದರಿಯರ ವ್ರತ ಛಂದದಿ ಕಳೆದುನೀ ತೇಜೀಯೇರಲು ಸುಂದರ ಶ್ರೀ ಶ್ರೀನಿವಾಸ ನಿನ್ನಡಿ ದೃಢ ಕೊಡದಿದ್ದರೆ ಬಿಡೆನಾ 3
--------------
ಸರಸ್ವತಿ ಬಾಯಿ
ಕೊಡು ಕೊಡು ಕೊಡು ಭಕುತಿ ಪ ಕೊಡು ಕೊಡು ತವ ಭಕ್ತಿ ಬಿಡಲಾರೆ ಶ್ರೀಪತಿ ಬಿಡದೆ ಭಜಿಪ ನಿನ್ನ ದೃಢ ಚಿತ್ತ ಕೊಡು ರಂಗ 1 ದೇವಕಿ ಸುತ ನಿನ್ನ ಸೇವಿಸಲರಿಯೆನು ಭಾವಾತೀತನೆ ದುಷ್ಟ ಭವದಿಂದ ದಾಟಿಸೊ 2 ಸುಜನರ ಪಾಲನೇ ಕುಜನರಾಂತಕÀನೇ ಭಜಕರ ಪೊರೆವನೇ ಅಜಪಿತ ಹರಿಯೇ 3 ಸನ್ನುತ ಸ್ಮರಿಸುವೆ ಮನ್ನಿಸಿ ರಕ್ಷಿಸೋ ಚನ್ನಕೇಶವನೇ 4
--------------
ಕವಿ ಪರಮದೇವದಾಸರು
ಕೊಡು ಕೊಡು ಕೊಡು ಭಕುತಿ ಪ ಕೊಡು ಕೊಡು ತವ ಭಕ್ತಿ ಬಿಡಲಾರೆ ಶ್ರೀಪತಿ ಬಿಡದೆ ಭಜಿಪ ನಿನ್ನ ದೃಢ ಚಿತ್ತ ಕೊಡು ರಂಗ 1 ದೇವಕಿ ಸುತ ನಿನ್ನ ಸೇವಿಸಲರಿಯೆನು ಭಾವಾತೀತನೆ ದುಷ್ಟ ಭವದಿಂದ ದಾಟಿಸೊ 2 ಸುಜನರ ಪಾಲನೇ ಕುಜನರಾಂತಕÀನೇ ಭಜಕರ ಪೊರೆವನೇ ಅಜಪಿತ ಹರಿಯೇ 3 ಸನ್ನುತ ಸ್ಮರಿಸುವೆ ಮನ್ನಿಸಿ ರಕ್ಷಿಸೋ ಚನ್ನಕೇಶವನೇ 4
--------------
ಕರ್ಕಿ ಕೇಶವದಾಸ
ಕೊಡು ಕೊಡು ಕೊಡು ಹರಿಯೆ ಕೆಡದಂಥ ಪದವಿಯ ಒಡನೆ ನಿಮ್ಮಂಘ್ರಿಯ ಕಡುದೃಢ ಭಕುತಿಯ ಪ ತ್ರಿಜಗ ಪರಿಪಾಲಕ ಭಜಿಸಿಬೇಡುವೆ ನಿಮ್ಮ ಭಜನೆಸವಿಸುಖಲಾಭ 1 ಪರಕೆ ಪರತರವೆನಿಪ ಪರಮಪಾವನ ನಿಮ್ಮ ಚರಿತ ಪೊಗಳಿ ಬಾಳ್ವ ಪರಮಾನಂದದ ಜೋಕು 2 ಯತಿತತಿಗಳು ಬಿಡದೆ ಅತಿ ಭಕ್ತಿಯಿಂ ಬೇಡ್ವ ಪತಿತ ತವಸೇವೆಯಭಿರುಚಿ ಎನ್ನೊಡಲಿಗೆ ಸತತ 3 ಪರಿಭವ ಶರಧಿಯ ಕಿರಿಯಾಗಿ ತೋರಿಪ ಪರಮಪುರುಷ ನಿಮ್ಮ ಕರುಣ ಚರಣ ಮೊರೆ 4 ದುಷ್ಟ ಭ್ರಷ್ಟತೆಯಳಿದು ಶಿಷ್ಟರೊಲುಮೆಯಿತ್ತು ಅಷ್ಟಮೂರುತಿ ನಿಮ್ಮ ಶಿಷ್ಟಪಾದದ ನಿಷ್ಠೆ 5 ಕನಸು ಮನಸಿನೊಳೆನ್ನ ಕೊನೆಯ ನಾಲಗೆ ಮೇಲೆ ನೆನಹು ನಿಲ್ಲಿಸಿ ನಿಮ್ಮ ಕರುಣಘನ ಕೃಪೆ 6 ನಾಶನಸಂಸಾರದಾಸೆಯಳಿದು ನಿಜ ಸಿರಿ 7 ಮೂರ್ಹತ್ತು ಮೂರುಕೋಟಿ ವಾರಿಜಾಸನ ಸುರರು ಸೇರಿ ಭಜಿಪ ನಿಮ್ಮ ಮೂರುಕಾಲದ ನೆನಪು 8 ಅಂತರ ಶೋಧಿಸಿ ಅಂತರಾತ್ಮನ ಕಂಡು ಸಂತಸದ್ಹಿಗ್ಗುವ ಸಂತರ ಮತವರ್ಣ 9 ಸರ್ವಜ್ಞರೆನಿಸಿದವರ ಶರಣರ ಸಂಗಕರುಣಿಸಿ ಕರುಣದಿ ಪರಮ ಜ್ಞಾನೆನುವ ಪದವಿ 10 ಮಿಗಿಲಾಗಿ ನಿರ್ಧರಿಸಿ ಸಿರಿವರನಂಘ್ರಿಯೇ ಜಗಮೂರಧಿಕೆಂಬ ಸುಗುಣಗುಣಾಶ್ರಮ11 ಧರೆಮೂರು ತಲೆಬಾಗಿ ಪರಮಾದರದಿ ಪಾಡ್ವ ಹರಿನಾಮ ಕೀರ್ತನೆ ಪರಮಾದರದಿ ಪಾಡ್ವ 12 ಶಮೆಶಾಂತಿದಯೆಭಕ್ತಿ ವಿಮಲಗುಣಭೂಷಣತೆ ಸುಮನಸಸಮನಿಷ್ಠೆ ಅಮಿತಮತಿವರ ಶ್ರೀ 13 ಮಿಥ್ಯೆವರ್ಜಿತವಖಿಲ ಸತ್ಯತೆ ಸದಮಲ ನಿತ್ಯ ನಿರ್ಮಲವೆನಿಪ ತತ್ವದರ್ಥದ ವಿವರ 14 ತನುನಿತ್ಯ ಸ್ವಸ್ಥತೆ ಘನಕೆ ಘನತರವಾಗಿಮಿನುಗುವ ಘನಮುಕ್ತಿ ಮನುಮುನಿಗಳ ಪ್ರೇಮ ಶ್ರೀರಾಮ15
--------------
ರಾಮದಾಸರು
ಕೊಡು ನಿನ್ನ ಧ್ಯಾನ ಒಡೆಯ ಶ್ರೀರಮಣ ಎಡಬಿಡದಲೆ ತವಅಡಿಭಕ್ತಿಜ್ಞಾನ ಪ ವನವಸೇರಿರಲಿ ಮತ್ತನುಗಾಲ ಬಡತನ ವನುಭವಿಸುತಿರಲಿ ಘನಸುಖದಿರಲಿ 1 ಸತಿಯಳೊಂದಿಗೆ ಬಿಡದೆ ರತಿಕ್ರೀಡೆಲಿರಲಿ ಸತತದಿ ತವಭಕ್ತಿ ಹಿತಾಹಿತದ ಚಿಂತನೆಯನು 2 ಚಳಿ ಮಳೆಯೊಳು ಬಿದ್ದು ಕಳವಳಗೊಳ್ಳುತಿರಲಿ ಹುಲಿಯ ಬಾಯೊಳು ಸಿಲ್ಕಿ ಹಲುಬಿ ಎದೆಯೊಡೆದು 3 ಕೊಟ್ಟ ಒಡೆಯರು ಬಂದು ಕಟ್ಟಿ ಕಾದಲಿ ಜನ ಬೆಟ್ಟ ಬೇಸರಮಾಡಿ ಅಟ್ಟಬಡಿಯುತಿರಲಿ 4 ಬೇನೆಯೊಳ್ ಬಿದ್ದಿರಲಿ ಹಾನಿಯಾಗಲಿ ಮಾನ ಕಾಣದೆ ಸುಳ್ಳನೆಂದು ಹೀನನುಡಿಯಲಿ ಬಿಡದೆ 5 ಹಗೆಗಳು ಬಂದೆನ್ನ ಬಗೆ ಬಗೆ ನಿಂದಿಸಿ ನಗೆಗೇಡು ಮಾಡೆನ್ನ ಜಗದೆಳಡಾಡುತಿರಲಿ 6 ಅವ ಪರಿಯಲಿರಲಿ ದೇವ ಶ್ರೀರಾಮ ನಿನ್ನ ಸಾವಿರನಾಮ ಎನ್ನ ಭಾವದಿ ನುಡೀತಿರಲಿ 7
--------------
ರಾಮದಾಸರು
ಕೊಡು ಬ್ಯಾಗಭೀಷ್ಟವ ತ್ವರದೀ - ನೀ ಸನ್ಮನದೀ ಪ ಕೊಡುವೊದೆನುತ ನಿನ್ನಡಿಯನು ಭಜಿಸುವ ಬಡವನ ಕರವನು ಪಿಡಿದೀ ಕಾಲದೀ ಅ.ಪ ವಡೆಯ ನೀನೆನುತತಿ ಹರುಷದಲಿ ನಂಬಿದೆ ನಿನ್ನಾ ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ ಪಿಡಿದು ಭವಶ್ರಮ ಕಳಿಯುತಲಿ - ಬಹು ತೋಷದಲೀ ನುಡಿದ ವಚನವ ಚಿತ್ತಕೆ ತಂದು ಪತಿ ಗುರುರಾಯನೆ ನೀ 1 ನಮಿಪ ಜನರಿಗೆ ಸುರಧೇನು ಭಜಿಸುವ ಜನಕೆ ಸುಮನಸೋತ್ತಮ ವರತರು ನೀನು - ಚಿಂತಿಪ ಜನಕೆ ಅಮರೋತ್ತಮ ರತುನವು ನೀನು - ಎನುತಲಿ ನಾನು ಅಮಿತ ಮಹಿಮವ ತೋರುತಲೀಗ ಶ್ರಮವ ಕಳೆದು ಸುಖಸುರಿಸುತ ನೀ 2 ಭೂತಳ ಮಧ್ಯದಲತಿ ಖ್ಯಾತ - ನೆನಿಸಿದ ನಾಥ ಪಾತಕ ಕುಲವನ ನಿರ್ಧೂತಾ - ಮಾಡುತ ನಿಜಪದ ದೂತಜನ ತತಿಮನೋರಥ - ಪೂರ್ತಿಪ ದಾತಾ ವಾತ ಗುರುಜಗನ್ನಾಥ ವಿಠಲಗತಿ ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ3
--------------
ಗುರುಜಗನ್ನಾಥದಾಸರು
ಕೊಡು ಸುಖವ ಜಗಪಾಲಯ ಒಡೆಯ ವೈಕುಂಠದಾಲಯ ಪ ಕೊಡು ಸುಖ ನಿಮ್ಮಯ ಅಡಿಯದಾಸರ ಸೇವೆ ಸಡಗರ ಸಂಪದ ಎಡೆಬಿಡದೆ ಅ.ಪ ಜಡಮತಿಯನು ಕೆಡಿಸಿ ಜಡದೇಹಮೋಹ ಬಿಡಿಸಿ ಜಡಭವತೊಡರನು ಕಡೆಹಾಯ್ಸಿ ಅಡಿಗಡಿಗೆ ನಿನ್ನಡಿದೃಢ ಭಕುತಿ 1 ಸಾಗರಸಂಸಾರಭೋಗದ ಬಲುಘೋರ ನೀಗಿಸಿ ನಿಜಜ್ಞಾನ ಪಾಲಿಸಿ ಬೇಗನೆ ನೀಡು ತವದರುಶನವ 2 ಮನಸಿನ ಹರಿದಾಟ ಘನಘನ ದುಶ್ಚಟ ವನು ಪರಿಹರಿಸಿ ದಯಮಾಡು ಮನಶಾಂತಿ ಸದುಗುಣವ 3 ತನುತ್ರಯದಲಿ ನಿನ್ನ ನೆನಹನು ನಿಲಿಸೆನ್ನ ಬಿನುಗು ತ್ರಿದೋಷ ದೂರಮಾಡಿ ಜನನ ಮರಣಂಗಳ ಗೆಲಿಸಭವ 4 ಭೂಮಿಯೊಳಧಿಕೆನಿಪ ಸ್ವಾಮಿ ಶ್ರೀರಾಮಭೂಪ ನೇಮದಿ ಬೇಡುವೆ ವರ ನೀಡು ಆ ಮಹಕೈವಲ್ಯ ಪದವಿಯ 5
--------------
ರಾಮದಾಸರು
ಕೊಡು ಹರಿಯೇ ದಾಸರ ಸಂಗವನು ಪ ತವ ಮಂಗಳ ಚರಿತಾಮೃತ ದಡಿಯಾ | ಶ್ರವಣದಿ ಸವಿಸವಿದುಂಬುವಿ ರಂಗಾ 1 ಪೊಡವಿಲಿ ಭಜನಿಯ ದಾರಿಯ ದೋರೀ | ಬಿಡಿಸುವರು ಮುನ್ನಿನ ಮನದಂಗಾ 2 ಗುರುಮಹಿಪತಿ ಪ್ರಭು ಧನ್ಯನಾಗುವೆನು | ಪರಿ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೊಡುಕೊಡು ವರವನು ತಡವು ಮಾಡದೆ ಎ ನ್ನೊಡೆಯ ಶ್ರೀಹರಿ ಕೃಪೆ ಮಾಡಯ್ಯ ಪ ಬಿಡದಿರೆನ್ನನು ಜಗದೊಡತಿಯಾಣೆ ನಿ ನ್ನಡಿಗಳನೆಂದಿಗೂ ಬಿಡೆನಯ್ಯಾ ಅ.ಪ ಕ್ಷಿತಿಯೊಳಗತಿಶಯ ಪತಿತ ಪಾವನ ಶ್ರೀ ಪತಿ ನೀಗತಿ ಎನುತಿಹೆನಯ್ಯ ರತಿಪತಿಪಿತನೆ ಸುಮತಿಯನು ಪಾಲಿಸಿ ಗತಿಯನು ತೋರಿಪುದೆನಗಯ್ಯ1 ನಿನ್ನ ಪದವ ನಂಬಿ ನಿನ್ನವನೆನಿಸಿದ ಎನ್ನನುಪೇಕ್ಷಿಪರೇನಯ್ಯ ಸನ್ನುತ ನಿನ್ನನು ಮನ್ನಿಸಿ ಕೇಳುವ ಬಿನ್ನಪವಿನಿತೆ ಕೇಳಯ್ಯ 2 ಎಲ್ಲರ ಹೃದಯದೊಳಲ್ಲಿ ನೆಲೆಸಿರುವ ಫುಲ್ಲನಯನ ನೀ ಪೇಳಯ್ಯ ಕಲ್ಲುಮನದಿ ನೀನೊಲ್ಲದೊಡೀ ಜಗ ದಲ್ಲಿ ಪೋಪುದಿನ್ನೆಲ್ಲಯ್ಯ 3 ಪತಿಯಗಲಿದ ಪತಿವ್ರತೆಗೆ ಇತರರಲಿ ರತಿ ಸಂಜನಿಸುವದೇನಯ್ಯ ಗತಿಪತಿಯೆಲ್ಲರಪತಿ ನೀನೆನ್ನುತ ಶ್ರುತಿನುತಿಪುದು ಪುಸಿಯೇನಯ್ಯ 4 ಜಗದೊಳು ನಿನ್ನನೆ ಸುಗುಣಿಯು ಎನ್ನುತ ನಿಗಮವು ಪೊಗಳುತಲಿಹುದಯ್ಯ ಖಗಪತಿಗಮನನೆ ಬಗೆ ಬಗೆಯಲಿ ರತಿ ಸೊಗಯಿಸು ನಿನ್ನೊಳು ಎನಗಯ್ಯ 5 ಸೃಷ್ಟಿನಾಥಪದ ವಿಷ್ಟರ ಭಕ್ತಿಯ ಕೊಟ್ಟರಭೀಷ್ಟವು ಎನಗಯ್ಯ ಇಷ್ಟರ ಮೇಲಿನ್ನು ಲಕ್ಷ ಕೊಟ್ಟರೂ ಎನ ಗಿಷ್ಟವಲ್ಲ ಶ್ರೀ ಕೃಷ್ಣಯ್ಯ 6 ಚರಣಕಮಲದೊಳಗೆರಗುವೆ ಪುಲಿಗಿರಿ ವರದವಿಠಲ ದಯೆಯಿರಿಸಯ್ಯ ಚರಣಶರಣನಿಗೆ ಕರುಣಿಸದಿದ್ದರೆ ಕರುಣಿಗಳರಸರಿನ್ನಾರಯ್ಯ 7
--------------
ವೆಂಕಟವರದಾರ್ಯರು