ಒಟ್ಟು 7317 ಕಡೆಗಳಲ್ಲಿ , 130 ದಾಸರು , 4853 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನವ ಗೆದ್ದವರುಂಟೆ ಜನರೊಳಗೆ ಶ್ರೀನಿವಾಸ ಪ ಕನಸಿಲಾದರು ಬಿಡದು ಕನಕದಾಶೆಯು ಈಶ ಅ.ಪ. ಹೆಂಡತಿಯ ಬಿಡಬಹುದು ಮಂಡೆಬೋಳಿಸಬಹುದು ಕಂಡ ಕಂಡವರೀಗೆ ದಂಡ ಬೀಳಲಿ ಬಹುದು ಪುಂಡರೀಕಾಕ್ಷನಿಗೆ ತೊಂಡನಾಗಲಿ ಬಹುದು ದುಡ್ಡು ಕಾಸುಗಳನ್ನು ನೀಡಲಾಗದು ಮನಸು 1 ನಾಮ ಹಾಕಲಿಬಹುದು ನೇಮಮಾಡಲಿಬಹುದು ಹೋಮಮಾಡುತಲಿ ಬಹು ಕರ್ಮಿಷ್ಟನೆನಿಸಬಹುದು ನಾಮ ಪಾಡಲಿಬಹುದು ಧರ್ಮಪೇಳಲಿ ಬಹುದು ಹೇಮದಾಶೆಯು ಬಿಡದೂ ಶ್ರೀ ಮನೋಹರನೇ 2 ಜಪಮಾಲೆಧರಿಸುತಲಿ ಉಪವಾಸ ಮಾಡಬಹುದು ತಾಪಸನು ಎನಿಸುತಲಿ ಪುರಾಣಗಳ ಪೇಳಲಿಬಹುದು ಶ್ರೀಪತಿಯ ಸೇವಿಸುತ ಜಪತಪವ ನಡೆಸಬಹುದು ರೂಪಾಯಿ ಮಮತೆ ತಾ ಮುಪ್ಪಿನಲು ತೊಲಗದೈಯ್ಯ 3 ಯಾತ್ರೆಮಾಡಲಿಬಹುದು ಸ್ತೋತ್ರ ಘಟ್ಯಾಗಿ ಹೇಳಬಹುದು ನೀತಿ ಪೇಳಲಿಬಹುದು ಪೂತನೆನಿಸಬಹುದು ಮಾತು ಮಾತಿಗೆವೇದ ಎತ್ತಿ ಪೇಳಲಿಬಹುದು ಪ್ರೀತಿ ತಪ್ಪದೂ ಯೆಂದೂ ಆಸ್ತಿ ಧನಕನಕದಲಿ 4 ಲಜ್ಜೆಬಿಡುತಲಿ ಬೇಗ ಗೆಜ್ಜೆಕಟ್ಟಲಿ ಬಹುದು ಸಜ್ಜನನುಯೆಂದೆನಿಸಿ ಮೂರ್ಜಗದಿ ಮೆರೆಯಬಹುದು ಮಜ್ಜನಕ ಜಯತೀರ್ಥ ವಾಯು ಹೃದಯದಲಿರ್ಪಜ ಗಜ್ಜನಕ “ಶ್ರೀಕೃಷ್ಣವಿಠಲ”ನೆ ನೀವಲಿವ ತನಕ 5
--------------
ಕೃಷ್ಣವಿಠಲದಾಸರು
ಧನುರ್ಮಾಸದ ಸೇವೆಯ ಗೀತೆ ಧನುರ್ಮಾಸದ ಸೇವೆಯ ನೋಡುವ ಬನ್ನಿ ದಾನವಾಂತಕ ರಂಗನ ಪ. ಶ್ರೇಯೋನಿಧಿಗಳಿಗೆರಗಿ ಶ್ರೀವೇದಾಂತ ಗುರುಗಳಿಗೆ ವಂದಿಸಿ ಶ್ರೀ ಭಾಷ್ಯಕಾರ ಶಠಗೋಪರಿಗೆ ವಂದಿಸಿ ಶ್ರೀರಂಗೋತ್ಸವವ ಸಂಕ್ಷೇಪದಿಂ ಪೇಳುವೆ 1 ಮಾರ್ಗಶಿರ ಮಾಸದಲಿ ಮಹಾನುಭಾವ ಶ್ರೀರಂಗನಾಥನಿಗೆ ಮಹದುತ್ಸವವನ್ನು ನಡೆಸಬೇಕೆನುತಲೆ ಮಹಾಪುರುಷರು ಸಂಕಲ್ಪವ ಮಾಡಿದರು 2 ಕೇಶವ ಮಾಸದಲಿ ಎದ್ದು ದಾಸರು ಮೂರನೆ ಜಾವದಲಿ ಭೂಸುರರಿಗೆ ಎಚ್ಚರವಾಗಬೇಕೆಂದು ಬಾ ರೀಸಿದರು ಭೇರಿ ದುಂದುಭಿ ವಾದ್ಯಗಳ 3 ಕನಕಿ ಸುಜೋತಿ ಹೇಮಾವತಿಯ ಕಪಿಲೆ ಕಾವೇರಿ ತೀರ್ಥದಲಿ ಸ್ನಾನವ ಮಾಡಿ ತೀರ್ಥವ ತಂದು ನೇಮದಿ ನೀಲವರ್ಣನಿಗಭಿಷೇಕವ ಮಾಡಿದರು 4 ಛಳಿಗೆ ಕುಲಾವಿಯನಿಟ್ಟು ಶಾಲುಗಳ ಹೊದಿಸಿ ನಳಿನನಾಭ ರಂಗಗೆ ಪರಿಪರಿ ಪುಷ್ಪದ ಸರಗಳ ಧರಿಸಿಯೆ ಶ್ರೀಮೂರ್ತಿಯ ಸರವನು ಧರಿಸಿದರಾಗ 5 ತಾಪಹರವಾದ ಸೂಕ್ಷ್ಮದ ದಿವ್ಯ ಧೂಪವನು ಬೆಳಗಿದರು ವ್ಯಾಪಿಸುವ ತಿಮಿರವ ಪರಿಹರಿಸಿ ರಂಜಿಸುವ ದೀಪವ ಬೆಳಗಿದರು ಶ್ರೀಪತಿಗೆ 6 ಋಗ್ವೇದ ಯಜುರ್ವೇದವು ಸಾ ಮವೇದ ಅಥರ್ವಣವೇದಂಗಳು ದ್ರಾವಿಡವೇದ ಪುರಾಣಶಾಸ್ತ್ರಗಳನು ಬಾಗಿ ಲಾ ವೊಳಗೆ ನಿಂತು ಭಕ್ತರು ಪೇಳಿದರು 7 ವಾರಾಂಗನೆಯರಾಗ ವೈಯ್ಯಾರದಿಂದ ಆರತಿಗಳನೆ ತಂದು ವಾರಿಜನಾಭಗೆ ನೇಮದಿಂದಲೆ ಗುಂ ಭಾರತಿಗಳನೆತ್ತಿ ನೈವೇದ್ಯವ ತಂದರು 8 ಮುದ್ಗಾನ್ನ ಘಮಘಮಿಸುವ ಪಾಯಸ ದಧ್ಯೋದನಗಳು ಪರಿಪರಿ ಶಾಕಪಾಕವು ಆ ದಿವ್ಯ ಭಕ್ಷ್ಯನೈವೇದ್ಯವ ಪರಮಪುರುಷಗೆ [ಆದ್ಯರು] ಆರೋಗಣೆ ಮಾಡಿದರು 9 ಕಳಿಯಡಿಕೆ ಬಿಳಿಯೆಲೆಯು ಕರ್ಪೂರದ ಹಿಟ್ಟಿನ ಮಂಗಳಾರತಿಯನೆತ್ತಿದರಾಗ 10 ಆ ಮಹಾ ಶ್ರೀನಿವಾಸ ರಂಗ ನೈವೇದ್ಯವ ಶ್ರೀಮಧ್ರಾಮಾನುಜರ ಮತದಿ ನೇಮದಲಿ ವಿನಿಯೋಗವ ಮಾಡಲು ಪಾವ ನಾಮಾದೆವೆಂದೆನುತ ಪೋದರು ಎಲ್ಲ 11
--------------
ಯದುಗಿರಿಯಮ್ಮ
ಧನ್ಯ ಧನ್ಯ ದತ್ತಾ ದಿಗಂಬರಧನ್ಯ ಮಾನ್ಯ ದತ್ತಾ ಪಧನ್ಯ ಧನ್ಯ ಜಗಮಾನ್ಯ ದಿಗಂಬರಪುಣ್ಯ ಪುರುಷ ಕಾರುಣ್ಯನಿಧೇಅನ್ಯನಲ್ಲ ನಾ ನಿನ್ನವನಯ್ಯಾಎನ್ಯ ಕೈಪಿಡಿದು ಧನ್ಯನ ಮಾಡೋ 1ಗಾಲವಕ್ಷೇತ್ರ ನಿವಾಸ 'ಶೇಷಾಬಾಲ ಸೂರ್ಯ ಸಮಕಾಂತಿ ಪ್ರಕಾಶಕಾಷಾಯಾಂಬರ ಭೂತ ವೇಷಾಜಟಾಧಾರಿ ಪ್ರಭೊ ನಾ ತವದಾಸಾ 2ದತ್ತ ದಿಗಂಬರ ಶ್ರೀಪಾದವಲ್ಲಭಭೃತ್ಯ ನಾನು ಮೇಲೆತ್ತಿ ಉದ್ಧರಿಸೊಸತ್ಯಸಂಧನು ನೀನೆ ಮಹಾತ್ಮಚಿತ್ತದಿ ಭೂಪತಿ'ಠ್ಠಲನ ನಿಲಿಸೊ 34. ಯತಿವರ್ಯರುಶ್ರೀ ಜಯತೀರ್ಥರು
--------------
ಭೂಪತಿ ವಿಠಲರು
ಧನ್ಯ ಧನ್ಯ ಧನ್ಯ ಧನ್ಯ ಗುರುವರಾ ಧನ್ಯ ತಂದೆ ಮುದ್ದುಮೋಹನ್ನ ಗುರುವರಾ ಪ. ಮಾನ್ಯ ವಿಭುದ ಮಾನ್ಯ ಜಗದ್ಮಾನ್ಯ ಗುರುವರಾ ಅ.ಪ. ಪುಟ್ಟಿದಂದಿನಿಂದಿನ್ವರೆಗೆ ತೊಟ್ಟು ದಾಸತ್ವ ದೀಕ್ಷೆ ಕರ್ಮ ಜಪತಪಂಗಳಾ ಕರ್ಮ ಮಾಡಿ ಮುಗಿಸಿ ಶ್ರೇಷ್ಠ ಜ್ಞಾನ ಕವಚ ತೊಟ್ಟು ದಿಟ್ಟತನದಿ ಮೆರೆದ ಗುರುವು ಮುಟ್ಟಿದರೀಗ ಹರಿಯ ಪುರವ 1 ಭಕ್ತಿ ಭೂಷಣ ತೊಟ್ಟು ವಿರಕ್ತಿ ಖಡ್ಗ ವರೆಯಲ್ಲಿಟ್ಟು ಮುಕ್ತಿ ಮಾರ್ಗಕೆಲ್ಲ ದೀಕ್ಷೆ ಇತ್ತು ಸುಜನಕೆ ವ್ಯಕ್ತಾವ್ಯಕ್ತ ಮಹಿಮೆಯಿಂದ ವ್ಯಕ್ತಿತ್ವವನು ತೋರಿಕೊಳದೆ ಉಕ್ತಿಗೊಶರಮಾಡಿಕೊಂಡ ಶಕ್ತಿ ಪೇಳಲಳವೆ ಎನಗೆ 2 ಕರ್ಮ ಕುರುಹನರುಹಿ ನಮ್ಮ ಮಧ್ವಮತಕೆ ದಿವ್ಯ ಸಮ್ಮತವಾಗಿ ವಮ್ಮನದ ಸುಜ್ಞಾನ ಬೆಳಕು ತಮ್ಮ ನಂಬಿದರಿಗೆ ತೋರಿ ಬÉೂಮ್ಮನೈಯ್ಯನ ಪುರಕೆ ಸಾರ್ದ ನಮ್ಮ ಗುರುವರಾ 3 ದಾಸಕೂಟ ಸಭಾಸ್ಥಳದಿ ದಾಸ ಪ್ರಾಣರಾಯನ ನಿಲಿಸಿ ದಾಸಜನಕೆ ಮುಕ್ತಿ ಸ್ಥಾನ ಕರಿಗಿರಿ ಎನಿಸಿ ವ್ಯಾಸತೀರ್ಥರಿಂದ ಬಂದ ದಾಸಕೂಟ ನಿಜವೆಂದೆನಿಸಿ ದಾಸಜನರ ಮೆರಸಿ ನೃಹರಿ ದಾಸಕೂಟ ಸಭಾಸ್ಥಾಪಕ 4 ವ್ಯಾಳಶಯನನಾದ ಗೋಪಾಲಕೃಷ್ಣವಿಠ್ಠಲನ್ನ ಲೀಲೆಯಿಂದ ಯನ್ನ ಹೃದಯದಲ್ಲಿ ನಿಲ್ಲಿಸೀ ಕಾಲ ಕಾಲಕ್ಕೆ ಇತ್ತು ಪಾಲಿಸಿದಾ ಪರಮ ಪ್ರಿಯ ಕೃಪಾಳೂ ಗುರುವರಾ 5
--------------
ಅಂಬಾಬಾಯಿ
ಧನ್ಯ ಧನ್ಯವಾಯಿತು ಎನ್ನ ಜನುಮ ತನ್ನಿಂದ ತಾನೊಲಿದ ಘನ ಮಹಿಮ ಎನ್ನೊಳಗೆ ದೋರಿತಾನಂದೊ ಬ್ರಹ್ಮ ಕಣ್ಣಾರೆ ಕಂಡೆನು ಸದ್ಗುರು ಧರ್ಮ 1 ಬ್ರಹ್ಮಸುಖ ಹೊಳೆಯಿತು ಸಾಧುಸಂಗ ಚುಮು ಚುಮು ಕೊಡುತಿದೆಕೊ ಸರ್ವಾಂಗ ಧಿಮಿ ಧಿಮಿಗುಡುತ ತಾಲ ಮೃದಂಗ ಸಮಾರಂಭವಾಯಿತು ಬಾಹ್ಯಂತರಂಗ 2 ಎದುರಿಟ್ಟು ಬಂತು ಪುಣ್ಯ ಪೂರ್ವಾರ್ಜಿತ ಒದಗಿ ಕೈಗೂಡಿತೆನಗೆ ತ್ವರಿತ ಸಾಧಿಸಿತು ಮಹಿಪತಿಯ ಮನೋರಥ ಸದ್ಗುರು ಕೃಪೆಯಾಯಿತು ತಾ ಸದೋದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯ ಧನ್ಯಾ | ಜಗದೊಳವನೇ | ಧನ್ಯ ಧನ್ಯಾ | ಧನ್ಯ ಧನ್ಯ ಅವ ತನ್ನೊಳು ಸ್ವಹಿತದ | ಕಣ್ಣದೆರೆದು ಗುರುವಿನ್ನರಿತಿಹ ನಿಜ | ಸಣ್ಣ ದೊಡ್ಡದರೊಳು ಘನ್ನವ ನೋಡುತಾ | ಮನ್ನಿಸಿ ಶಾಂತಿಯಲಿನ್ನಿಳಿದವನೇ 1 ವಾದಗಳಳಿದು ಕ್ರೋಧವ ಕಳೆದು | ಸಾಧುರ ಕಾಣುತ ಪಾದಕ ಯರಗುತ | ಮೋದವ ಕುಡುವ ಬೋಧವ ಕೇಳುವ | ಸಾಧನ ನಾಲ್ಕರ ಹಾಧ್ಹಿಡಿದವನೇ 2 ಎಲ್ಲರಿಗೇ ಕಿರಿದೊಳ್ಳಿತೆನಿಸಿ | ಬಲ್ಲತನದ ಗರ್ವೆಲ್ಲವ ತ್ಯಜಿಸಿ | ಸಿರಿ ಫಲ್ಲನಾಭನ ಪದ | ದಲ್ಲೆವೆ ಮನರತಿ ನಿಲ್ಲಿಸಿದವನೇ 3 ಹಂಬಡೆಡಂಬಕ ನೊಬ್ಬರಕೂಡದೇ | ಒಬ್ಬರು ಹೊಗಳಿದರುಬ್ಬದೆ ಮನದಲಿ | ನಿಬ್ಬರ ಮಾತಿಗೆ ಉಬ್ಬಸಗೊಳ್ಳದೇ | ಕೊಬ್ಬಿದ ಹಮ್ಮುವ ಲೆಬ್ಬಿಸಿದವನೇ 4 ಒಂದೇ ನಿಷ್ಠಿಯು ಒಂದೇ ಮಾರ್ಗದಿ | ದಂದುಗ ವೃತ್ತಿಗಳೆಂದಿಗೆ ಹೊಂದದೆ | ತಂದೆ ಮಹಿಪತಿ ನಂದನ ಸಾರಿದ | ಬಂದದ ಸಾರ್ಥಕದಿಂದಿದ್ದವನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯ ಸತ್ಸಂಗ ಎನ್ನೊಳು ಹೊಳೆಯಿತು ಘನಲಿಂಗ ಧ್ರುವ ನೋಡಿದವನ ನೋಟ ಮಾಡಿತೆನ್ನೊಳು ಜೀವ ಶಿವಕೂಟ ನೀಡಿದಾಭಯದೂಟ ಗೂಢಗುರುತವಾಯಿತು ನೀಟ 1 ಹೇಳಿದವನ ಮಾತು ಹೊಳೆಯುವ ಸುಪ್ಪಾಣಿಯ ಮುತ್ತು ತಿಳಿಯಿತೆನ್ನೊಳು ವಸ್ತು ಅಳಿಯಿತು ಜನ್ಮ ಮೃತ್ಯು 2 ಸತ್ಸಂಗವ ಕೂಡಿ ಪತಿತಪಾವನವಾದನು ನೋಡಿ ಕ್ಷಿತಿಯೊಳು ನಿಜಗೂಡಿ ಗತಿಪಡೆದನು ಮಹಿಪತಿ ನೋಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯಗೈಸಿದೆನಗ ಗುರು ಮಹಿಪತಿ ತಾನು ಪ ವಿಜಯಗ್ಹೇಳಿದ ಹರಿಗೀತೆಯಲಿ | ಸುಜನ್ಮಾಹುದು ಸಂತರಲ್ಲಿ ದುರ್ಭರದ 1 ಕಿವಿಯೊಳು ಸುಜ್ಞಾನ ಗುಟ್ಟು 2 ದೊಡ್ಡದರೊಳಿಹ ಚಿದ್ಘನ ವಾ ದೋರಲಿ 3 ಇಂಬಾಗಿರಲು ಗುರುದಯ ಕಾಮಧೇನು 4 ಕಂದಗೊಲಿದನು ಇಹಪರಗತಿಯಾ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು¥ತಂದೆತಾುಯ ಸೇವೆ ಮಾಡಿಪುಂಡಲೀಕನ ಭಕ್ತಿಗೊಲಿದುಚಂದ್ರಭಾಗಾ ತೀರದಲ್ಲಿಬಂದು ನಿಂತ 'ಠ್ಠಲನ ಕಂಡು 1ವೆಂಕಟೇಶ ಅಲ್ಲಿರುವಶಂಖಚಕ್ರ ಪಿಡಿದ ಕರವಟೊಂಕದ ಮೇಲಿಟ್ಟುಕೊಂಡುನಿಂತು ಇಲ್ಲಿ 'ಠಲನಾದ 2ಕಡಗೋಲಿಂದ ಗಡಿಗೆ ಒಡೆದುತುಡುಗು ಮಾಡಿದ್ಹುಡುಗ ಬಂದಉಡುಪಿಯಲ್ಲಿ ಕೃಷ್ಣನಾಗಿಓಡಿಬಂದಿಲ್ಲಿ 'ಠಲನಾದ 3ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ 'ಠಲರೂಪದಿಂದಭಕ್ತಜನರಿಗಾಲಿಂಗನಭೆಟ್ಟಿ ಕೊಡುತ ನಿಂತುಬಿಟ್ಟ 4ಅನ್ನಬ್ರಹ್ಮ ಉಡುಪಿಯಲ್ಲಿಚಿನ್ನ ಬ್ರಹ್ಮ ಬೆಟ್ಟದಲ್ಲಿಸಣ್ಣ ತುಳಸಿಮಾಲೆ ಸಾಕುನಾದಬ್ರಹ್ಮ ಭೂಪತಿ'ಠಲಗೆ 5ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ
--------------
ಭೂಪತಿ ವಿಠಲರು
ಧನ್ಯನಾದೆನಯ್ಯ ನಾನು ಧನ್ಯನಾದೆನುಅನ್ಯಮಾರ್ಗವನುಳಿದು ನಿನ್ನ ಭಕ್ತ ಭಕ್ತನಾಗಿ ಪನಿನ್ನ ಮೂರುತಿಯ ನೋಡಿ ನಿನ್ನ ಗುಣವ ಕೊಂಡಾಡಿನಿನ್ನ ನಾಮಗಳ ಪಾಡಿ ನಿನ್ನ ಮುಂದೆ ಕುಣಿದಾಡಿ 1ಆವ ಜನ್ಮಾರ್ಜಿತ ಪುಣ್ಯ ತಾವೊದಗಿತೊ ನಾ ಕಾಣೆನೀವೊಲಿದರೆ ದುರ್ಲಭ ವಾವುದೀ ಮೂರು ಲೋಕದಿ 2ತಿರುಪತಿ ಕ್ಷೇತ್ರಾಧಿವಾಸ ಪರಮಪುರುಷ ವೆಂಕಟೇಶಗುರು ವಾಸುದೇವಾರ್ಯ ವೇಷ ಮರೆಯೊಕ್ಕೆ ನಾ ನಿನ್ನ ದಾಸ 3ಓಂ ಭೀಷ್ಮ ಮುಕ್ತಿಪ್ರದಾಯಕಾಯ ನಮಃ
--------------
ತಿಮ್ಮಪ್ಪದಾಸರು
ಧನ್ಯನಾದೆನೀದಿನ ನಿನ್ನ ಕಂಡ ಕಾರಣ ಪ. ಪನ್ನಗಾದ್ರಿವಾಸ ಸುಪ್ರಸನ್ನನಾದ್ದರಿಂದ ನಾ ಅ.ಪ. ವ್ರತನೇಮ ಜಪ ತಪ ಹಿತಮಾದುದೈ ಸುತಪ ಕೃತಿಪತಿ ತವ ಕೃಪಾಶತಧೃತಿಲೋಲುಪಾ 1 ವಿದಿಭವಾದಿಗಳಿಂದ ವಿನಮಿತ ವಿಶ್ವಾನಂದ ಪದುಮನಾಭ ಗೋವಿಂದ ಪವನನಯ್ಯ ಮುಕುಂದ 2 ಪ್ರೀಯ ತಪೋವಾಸನನೀಯುವ ದೇವರ ದಾನ ತೋಯಜಾಕ್ಷ ಲಕ್ಷ್ಮೀನಾರಾಯಣ ಪರಾಯಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಧನ್ಯನಾದೆನು ಗುರು ನಿಮ್ಮಯ ದಯದೀ ಪ ಹಿಂಗಿತು ಮುನ್ನಿನಂಗವದೋಷವು ಮಂಗಲವಾಗಲು ಇಂಗಿತ ಸುಖದಾ 1 ಸಾರಾಸಾರ ವಿಚಾರದ ತತ್ವದ ದಾರಿಯ ಸುಜನಕ ದೋರುತ ಕರುಣದಿ ಪ್ರೇರಿಸಿ ಸುಮತಿಯ ಶ್ರೀ ರಘುಪತಿ ಸಾ ಕಾರವ ತೋರಿಸಿ ತಾರಿಸಲಾಗಿ 2 ಕರುಣಿ ಅಭಿನವ ತೀರ್ಥ ಮುನಿಕರ ವಾರಿಧಿ ಶ್ರೀ ಸತ್ಯ ಪೂರಣ ಚಂದ್ರರ ಸಾರಲು ಹೋಯಿತು ಮೂರು ತಾಪಗಳು ದೋರಲು ಕಂದಗ ಪಾರದ ಸುಖವು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯನು ಶಚಿಪತಿ ಧನ್ಯಳು ಶಚಿಯು ಅ.ಪ ಚಂದ್ರನು ತನ್ನಯ ಸುಂದರ ಬಿಂಬದಿ ನಂದನ ವನದಲಾನಂದಪಡುತಿಹನು 1 ಮಂದಮಾರುತ ಸುಮಗಂಧವ ಬೀರುತ ಮಂದದಿಂದಲಿ ಸುಧೆ ಬಿಂದುಗಳೆಸವುದು 2 ಮಣಿಮಯ ತರುಗಳು ಎಣಿಕೆಗೆ ಬಾರವು ಕುಣಿಯುತಲಿದೆ ಎನ್ನ ಮನದಭಿಲಾಷೆಯು * 3 (ನಂದನವನವನ್ನು ಕಂಡಾಗ ಸತ್ಯಭಾಮೆಯ ಸಂತೋಷ)
--------------
ವಿದ್ಯಾಪ್ರಸನ್ನತೀರ್ಥರು
ಧರಣಿಪತಿ ನಿನ್ನಯ ಕರುಣವೆಂಬುದೆ ಸಾಕು ಪ ಉರಗಾದ್ರಿನಿಲಯ ವಾಸಾ ಧರೆ ನರಾಧಮರೆನ್ನ ಪರಿಪರಿ ಪೀಡಿಸಿ ಜರಿದುಗೈವರು ಪರಿಹಾಸ ಅ.ಪ. ಮಾನವನು ಬಿಡದೆ ಕಾಯ್ದ ಕಂದು ಗೊರಳನ ಬೆನ್ನಟ್ಟಿಬರೆ ರಕ್ಕಸನು ಪೆಣ್ಣಾಗಿಯವನುರುಹಿದಿ ನರನನುಡಿ ನಿಜಮಾಡಿದಿ ಗೀತವಾದಿ ಕೃಷ್ಣ 1 ಭರದಿಯವನುದ್ಧರಿಸಿದೀ ಪಾಂಡವರಿಗೊಲಿದು ಪೊಂದಿ ನಿಜ ಬೆರಳಿನಲ್ಲಿ ಗೋವರ್ಧನವ ಪಿಡಿದೆತ್ತಿ ಗೋವಿಂಡು ಸಂತೈಸಿದಿ ಕರುಣ ಶರಧೀ ಕೃಷ್ಣಾ2 ಉಣಿಸಿ ದೇಹವ ಬೆಳೆಸಿದೆ ಸುರಿದು ಆಯುಷ್ಯ ಗಳಿಸಿದೆ ವಿಷಯದಲ್ಯಭಿಮಾನ ತಾಳಿ ಮೆರೆದೆ ಕಲಿಯ ಬಾಧೆ ಕೃಷ್ಣಾ 3
--------------
ನರಸಿಂಹವಿಠಲರು
ಧರಣೆಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ಪ ರಾಜ್ಯಕೆ ದಂಡ ಹಾಕಿದರು ತೀರಿತೆಲ್ಲಿ ಪ್ರಜೆಗಳ ಬಾಳು ನಜರು ಕೊಡುವುದಾಯ್ತು ತೆರತೆರುವುದರಿಂದ ವರಹಕೊಂಡು ಬಂದು ಏರೆಯ ರೂಪಾಯಿಗಳನು ಎತ್ತಿ ದಂಡಿಗೆ ಕೊಡುವುದಾಯ್ತು 1 ಮತ್ತೆ ಸೇನಭೋಗರು ಶಿರಸ್ತೆದಾರರು ಸಾವಿರ ಸಾವಿರ ವೆತ್ತಿ ಜನಕೆ ಬೆದುಕಮಾಳ್ವ ಕರಣಿಕರಿಗೆ ಪತ್ತು ನೂರು ಮೂರು ಸಾವಿರವೆಂದು ದಂಡವನುಕಟ್ಟಿ ವಿತ್ತವನ್ನು ಸೆಳೆದರದುವೆ ಬಿತ್ತು ಬೇರೆ ಪ್ರಜೆಗಳ ಮೇಲೆ 2 ಸೂಳೆ ಮಾಲೆಯರನು ಕರೆಸಿ ಜನಕೆ ಸಾವಿರದಂಡಕಟ್ಟಿ ಕೂಳತಿನಲು ಬಿಡದೆ ತರುಬಿವಾಲೆ ಮೂಗುತಿ ನಾಣ್ಯಗೊಂಡು ಬೀಳು ಕೊಟ್ಟು ಮನೆಗೆ ಅಂಗಡಿ ಸಾಲುವಳಿಗೆಯರನು ಕಾಲನಂತೆ ದಣಿಸಿ ರೊಕ್ಕದ ಜಾಳಿಗೆಯನು ಕೊಂಡು ಮೆರೆವ 3 ಸುಲಿಗೆಯಾಗ ದುಳಿಯಲಿಲ್ಲ ಬೆಳೆದ ಬೆಳೆಯ ನುಣ್ಣಲಿಲ್ಲ ಹೊಳಲ ಸುಟ್ಟು ಬಿಟ್ಟುದೆಲ್ಲ ಕುಲಕೆ ಪಶುಗಳುಳಿಯಲಿಲ್ಲ ತಲೆಯ ಚಂಬುಹಾರಿತಲ್ಲ ಜನರು ಸತ್ತು ಹೋದುದೆಲ್ಲ ಮಲೆತ ರಿಪುಗಳನ್ನು ಕುಟ್ಟಿ ಪ್ರಜೆಗಳ ಕಾಯ್ದು ಕೊಳ್ಳಲಿಲ್ಲ 4 ತಿರುಕರಿಂಗೆ ಸುಖಿಗಳಿಂಗೆ ಹರುವೆ ಸೊಪ್ಪುಮಾರ್ವರಿಂಗೆ ತರುಣಿಯರನು ಬಿಟ್ಟು ತಲೆಯ ಹೆರೆಸಿ ಕೊಂಡಲೆಗಳರಿಂಗೆಗೆ ಹಿರಿದು ಕಿರಿದು ಎಂದು ಬಿಡದೆ ಮರುತ ಸುತನ ಕೋಣೆಲಕ್ಷ್ಮಿ ಯರಸ ರುದ್ರರೂಪಧರಿಸಿ ಜನರಿಗಿನಿತು ಮಾಡಿದ 5
--------------
ಕವಿ ಪರಮದೇವದಾಸರು