ಒಟ್ಟು 2406 ಕಡೆಗಳಲ್ಲಿ , 111 ದಾಸರು , 1903 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತು ಜಗದಾಧಾರ ಜಯತು ದೋಷ ವಿದೂರಕುಂದಕುಟ್ಮಲದಂತೆವದನಮಂದಹಾಸಇಂದಿರಾಲಯವಕ್ಷ ತುಲಸಿಮಾಲೆಸಿರಿಸ್ತಂಭ ಉರುಟುಕದಳಿಊರು ಜಾನುಜಂಘೆಶ್ರೀಪತಿ ಅನೇಕರೂಪನಾಗಿನಿಂದುಇಂದೀವರಾಕ್ಷಿಯರ ಮನದ ಹದನವನರಿತುಕೊಳ್ಳಲುಬಳಿಯಲೊಬ್ಬಳನೆ ನಿಲಿಸಿ ಹೆಗಲಲ್ಲಿಕರವಹಾಕಿಕುಳದಲ್ಲಿ (?) ಕೃಷ್ಣನ ಸ್ಥಳದಲ್ಲಿ ಹೆಜ್ಜೆಯೊಳುಘಲಕು ಘಲಕು ತಾಳಗತಿಗಳಿಂದಲಿ ಸುತ್ತಿದುಂದುಭಿವಾದ್ಯ ತಮ್ಮಿಂದ ತಾಂ ಬಾರಿಪವುಒಂದೊಂದು ದೋಷದಿಂದಿನ್ನು ಅಜಭವಸುರರುಶರಣು ಕರುಣಾನಿಧಿಯೆ ಶರಣು ಗುಣವಾರಿಧಿಯೆರಾಸಕ್ರೀಡೆಯಲಿ ತೋರಿಸಿದ ಗೋಪಿಯರ ಅಭಿ-
--------------
ಗೋಪಾಲದಾಸರು
ಜಲದನೀಲಗಾತ್ರ ಏತರ ಚೆಲುವ ರುಕ್ಮಿಣಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬಿಳಿಯ ಜಡೆಯ ಮೈಯ ಜೋಗಿಗೊಲೆದ ಪಾರ್ವತಿ ಪ.ಉದಕದೊಳಗೆ ವಾಸವೇಕೆ ಸದನವಿಲ್ಲವೆ |ಸುದತಿಸುಡುವ ಕಾಡಿಗಿಂತ ಲೇಸು ಅಲ್ಲವೆ1ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆ |ಗಂಗೆಯ ಶಿರದಿ ಪೊತ್ತವನ ಗುರುವ ಕೇಳಿದೆ 2ವಸುಧೆ ನೆಗಹಿ ಬೇರೆ ಮೆಲುವ ಅಶನವಿಲ್ಲವೆ |ಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ 3ಕರುಳ ಕೊರಳ ಸರವು ಏಕೆ ಸರವು ದೊರಕದೆ |ಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ 4ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆನರಕಪಾಲ ಪಿಡಿವ ಜಗದ ಕರ್ತೃವಲ್ಲವೆ 5ಮಾತೆಶಿರವ ಅಳಿದವನ ಮಾಲೆ ಕೇಳಿದೆಯಾ !ತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ 6ಕೋತಿಗಳನು ಕೂಡಲಿಕ್ಕೆ ಜಾತಿ ತನ್ನದೆ |ಭೂತಗಣಗಳಾಳುವುದಕೆ ಭೀತಿ ಇಲ್ಲವೆ 7ಹತ್ತಿರಿದ್ದ ವಾಜಿಬಿಟ್ಟು ಹದ್ದನೇರ್ವರೆ |ಎತ್ತಿನ ಬೆನ್ನ ನೇರಿದವರು ಉತ್ತಮರಾಹರೆ 8ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ |............... ಶಾಪ ಹತ್ತಲಿಲ್ಲವೆ 9ಹರಿಹರರೊಳು ಭೇದವೇನು ಹೇಳೆ ರುಕ್ಮಿಣಿಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ 10
--------------
ಪುರಂದರದಾಸರು
ಜೋ ಜೋ ಜೋ ಅಂಜನಿ ಕಂದಾ ಜೋ ಜೋಸಂಜೀವನ ತಂದಾ | ಜೋ ಜೋ ಸಾಧುಸಜ್ಜನ ವೃಂದಾ | ಜೋ ಜೋ ವಾಯು ಬಾಲಮುಕುಂದಾ ಜೋ ಜೋಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಭೂತೈದೆಂಬೊ ಕನ್ನಡಿ ಮಂಟಪದೊಳಗೆ |ಜ್ಯೋತಿ ದೀಪದ ಭಾಸ ಉನ್ಮನಿಯೊಳಗೆ |ಪ್ರೀತಿಂದ ಪ್ರಣವೆಂಬ ಮೇಲ್ಕಟ್ಟ ಕೆಳಗೆ ರಕ್ತಶ್ವೇತಶ್ಯಾಮನೀಲಖಿಡಕಿಯೊಳಗೆ ಜೋ ಜೋ1ಪಂಚ ಭೂತವೆಂಬ ಮಂಚವ ನಿಲಿಸಿ |ಪಂಚವಿಂಶತಿ ತತ್ತ್ವ ನವಾರ ಬಿಗಿಸಿ | ಪಂಚಕರಣವೆಂಬೋ ಹಾಸೀಗಿ ಹಾಸಿ | ಪಂಚ ಪ್ರಾಣವೆಂಬೋಲೇಪ ತೀವಿಸಿ ಜೋ ಜೋ2ಆರು ಚಕ್ರ ಮೀರಿದ ಸ್ಥಾನದಲ್ಲಿ |ಘೋರಘೋರಘೋಷ ಉನ್ಮನಿಯಲ್ಲಿ |ತುರ್ಯಾತೀತ ಶಂಕರ ತಾನೇ ಅಲ್ಲಿ |ಸೂರ್ಯಚಂದ್ರ ಅಗ್ನಿ ಮೂಜಗದಲ್ಲಿ ಜೋ ಜೋ3
--------------
ಜಕ್ಕಪ್ಪಯ್ಯನವರು
ತಂದೆ ತಾಯಿಮಿತ್ರನೀನೆ ಬಾಂಧವ ನೀನೆ ನಿನ್ನಿಂದ ಬಳಗಿಲ್ಲೆನಗೆ ಇಂದಿರಾಧವನೆ ಕಾಯೊ ಪ.ಹೊಲೆಯ ರಕ್ತದಿ ರೇತ ನಿಲಿಸಿದನೊರ್ವ ಪಿತನೆಲೆಸಿ ಗರ್ಭದೊಳು ರಕ್ಷಿಸಿದೆ ನೀನುಹಲವು ಯೋನಿಯ ತೋರಿ ತೊಳಲಿಸಿ ತುದಿಯಲ್ಲಿನೆಲೆಗೆ ನಿಲ್ಲಿಸುವಂಥ ಸುಲಭ ಜನಕನಲ್ಲೆ 1ನವಮಾಸ ಧರಿಸಿ ಸ್ತನ್ಯವನುಣಲಿತ್ತಳವ್ವೆತವಕದಿ ನಡೆ ನುಡಿಸುವೆಯೊ ನೀನುಆವ ಕಾಲಕಾಲದಲ್ಲಿ ತವಗರ್ಭದಲ್ಲಿ ಪೊತ್ತುಜೀವಕೆ ಚೈತನ್ಯಾಶನವೀವ ತಾಯಿ ನೀನಲ್ಲವೆ 2ಶ್ರೇಯಸನಾದರಿಸುವ ಪ್ರಿಯಸಖರೆಲ್ಲರು ನಿ:ಶ್ರೇಯಸದಿ ಸುಖಮುದದಾಯಕ ನೀನೆಮಾಯಪಾಶ ಬಂಧನದಿ ನೋಯುವರವರ್ಗಾಬಾಧೆಯನಟ್ಟಿ ಕಳೆವ ಚಿನ್ಮಯಮಿತ್ರನೀನಲ್ಲವೆ3ವಿತ್ತವಿರೆ ಸಹೋದರರಿತ್ತ ಬನ್ನಿ ಕೂಡ್ಯೆಂಬರುವಿತ್ತಶೂನ್ಯನಾದರೆ ನೀನುಪೇಕ್ಷಿಸೆ ಅಯ್ಯಒತ್ತಿ ಬಹದುರಿತವಿಪತ್ತುಗಳ ಸವರಿ ಸುಮುಕ್ತಿಯ ಪದವೀವಾನಿಮಿತ್ತ ಬಂಧು ನೀನಲ್ಲವೆ 4ಸಿರಿಯು ಪೋಗೆ ನಿಲ್ಲರು ಶರೀರ ಸಂಬಂಧಿಗಳಾತುರದ ದಾರಿದ್ರ್ಯ ಪಾಪಹರನು ನೀನೆಕರುಣಿ ಪ್ರಸನ್ನ ವೆಂಕಟರಮಣ ನಿನ್ನ ನಾಮಸ್ಮರಣೆ ಎನ್ನ ಜಿಹ್ವೆಗೆ ಮರೆಯದಿರಲಿ ಕಂಡ್ಯ 5
--------------
ಪ್ರಸನ್ನವೆಂಕಟದಾಸರು
ತಲ್ಲಣಿಸದಿರು ಕಂಡ್ಯ ತಾಳು ಮನವೆ ಸ್ವಾಮಿನಿಲ್ಲದಲೆ ರಕ್ಷಿಸುವಸಂದೇಹಬೇಡಪಬೆಟ್ಟದ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆಕಟ್ಟೆ ಕಟ್ಟುತ ನೀರ ಹೊಯ್ವರಾರುಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆಕೊಟ್ಟು ರಕ್ಷಿಸುವನು ಇದಕೆಸಂದೇಹಬೇಡ1ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆಅಡಿಗಡಿಗೆ ಆಹಾರವಿತ್ತವರದಾರುಪಡೆದ ಜನಿನಿಯಂತೆ ಸಾರಥಿಯಾಗಿ ತಾಬಿಡದೆ ರಕ್ಷಿಸುವನು ಇದಕೆ ಸಂದೇಹಬೇಡ 2ಕಲ್ಲೊಳಗೆ ಪುಟ್ಟಿ ಕೂಗುವ ಮಂಡೂಕಂಗಳಿಗೆಅಲ್ಲಿ ಹೋಗಿ ಆಹಾರವಿತ್ತವರದಾರುಬಲ್ಲಿದನು ಪುರಂದರವಿಠಲರಾಯನಿಲ್ಲದೇ ರಕ್ಷಿಪನು ಇದಕೆ ಸಂದೇಹಬೇಡ 3
--------------
ಪುರಂದರದಾಸರು
ತಲ್ಲಿಕಾರರು ನಿನ್ನ ಬಂಟರು ರಂಗನಿಲ್ಲಲೀಸರು ಸಂಸಾರಿಗಳನು ಕೃಷ್ಣ ಪ.ಮಳ್ಳಿದರಾಗಿ ಮಾತಾಡಿ ಬಲುಂಡುಟ್ಟುಇಲ್ಲದ ತಪ್ಪನೆಣಿಸಿ ಹೊರಿಸಿಸುಳ್ಳುಕಳವು ಹಾದರದ ಪಾಪಭವಬಳ್ಳಿಯ ಹರಿದು ಮೊಳೆಯನೊತ್ತಗೊಡರು 1ಕಾಂಚನವಿಡಿದು ಕಕ್ಕಸಬಟ್ಟು ಪೂರ್ವದಸಂಚಿತದಿ ನರಪಶುಗ್ರಾಸದಮುಂಚುವ ಬಣವೆಗೆ ಕಿಚ್ಚಿಕ್ಕಿ ಹುಡಿದೂರಿಪಂಚಾನನಂತೆ ಖೋ ಇಟ್ಟು ಕೂಗುವರು 2ಇದಿರೆದ್ದು ಕರೆದು ಮನ್ನಿಸಿ ಪೂಜಿಸಿಪಾದೋದಕ ಪ್ರೋಕ್ಷಿಸಿಕೊಂಡು ಮರೆಹೊಕ್ಕರೆಬದಿಯ ಸಂಪದ ಬಂದ ಕಬ್ಬು ಬಾಳೆÉ ನೆಲ್ಲುಗದ್ದೆಯ ಸಂಹರಿಸುವರುಪಕಾರಿಗಳು 3ಛಲದಿ ಮಂದಿರ ಹೊಕ್ಕು ಹರಿಸೇವೆ ಗೊಂದಣಗಳಲಿ ಬೇಡಿ ಚಾಮುಂಡೆರೋಡಿಸಿಹೊಲ ಮನೆ ಮಧ್ಯದ ಪಾಮರರ ಹಿಡಿ ತಂದುಬಲು ಕಾಸಿಸಿ ಮುದ್ರೆಯೊತ್ತದೆ ಬಿಡರು 4ಈಪರಿಭವಸುಖಸೂರ್ಯಾಡಿಎಳೆದೊಯ್ದುಶ್ರೀಪದಪುರದಿ ಸೆರೆಯಿಕ್ಕುವರುಶ್ರೀಪ್ರಸನ್ವೆಂಕಟಪತಿ ಮುಖ್ಯ ಪ್ರಾಣೇಶಈ ಪುಂಡರಿಗೆ ಹೇಳೊ ಇವರ ಸಾಕೆಂದು 5
--------------
ಪ್ರಸನ್ನವೆಂಕಟದಾಸರು
ತಾಂಡವಾಡಿದನಂದು ಯಶೋದೆಕಂದÀ ಪ.ಅಂದದಿ ಬೆಣ್ಣೆಯ ಪಿಡಿದು ಶುದ್ಧಗತಿಗಳಿಂದ ತಗಡಧಂ ಧಾಂ ಧಿಮಿಕಿಟ ಧಿಗಿ ಧಿಗಿ ಥೈಯೆಂದು 1ಕುಚಮಾಟದ ಗದ್ದಿಗೇಲಿ ಒಂದಡಿಯಿಟ್ಟ ತಾಳನಿಚಯದಿ ತತ್ತಂ ತಾಹಂ ಥರಿಕುಟ ತಕುಂದ ಕಿಡಿಕಿಟಿಲೆಂದು 2ಕಂಕಣ ಕುಂಡಲಹಾರ ಪದಕ ದಾಮಾಲಂಕೃತಕಿಂಕಿಣಿಕಿಣಿ ಝಣ ಎನೆ ವನಜನಯನನು3ಅಜಭವಾದ್ಯರು ತಾಳ ವೀಣೆ ಆವುಜ ಮೃದುಋಜು ಧಳಂ ಧಳಂ ಝೈಂ ಝೈಂ ಝಕಿಂ ನುಡಿಸೆ ಜಡಿಜಡಿದೆÉೂಡನೆ 4ಮಂದಹಾಸದಿ ನಂದವ್ರಜದ ಗೋವರ ಕೂಡತಂದೆ ಪ್ರಸನ್ನವೆಂಕಟಗಿರಿತಟಸ್ಫುಟಿದ್ಧಾಟಕನಿಲಯ5
--------------
ಪ್ರಸನ್ನವೆಂಕಟದಾಸರು
ತಾಳಬೇಕು - ತಕ್ಕ - ಮೇಳಬೇಕು - ಶ್ರೀ |ಯತಿ ಪ್ರಾಸವಿರಬೇಕು | ಗತಿಗೆ ನಿಲ್ಲಿಸಬೇಕು ||ಶ್ರುತಿಪತಿ ಕೇಳಬೇಕು | ರತಮುಖವಿರಬೇಕು 2ಹರಿದಾಸನಾಗಿರಬೇಕು | ಹರುಷ ಪಡುತಿರಬೇಕು |ಪುರಂದರವಿಠಲನಲಿ | ಸ್ಥಿರಚಿತ್ತವಿರಬೇಕು 3
--------------
ಪುರಂದರದಾಸರು
ತುತಿಸಲಳವೇ ಶ್ರೀ ವರದೇಂದ್ರನಾ ಅಮಿತ ಮಹಿಮ |ಕ್ಷಿತಿಸುರಗುರುಸುಗುಣ ಸಾಂದ್ರನ ಮುನಿಪನ ಪಭಾಗವತರ ಪ್ರಿಯನೆನಿಪನ ಪ್ರಣತ ಜನರ |ರೋಗ ಕಳೆದು ಸುಖ ಕೊಡುವನ ಕುಮತಗಳನು |ಬೇಗ ಗೆಲಿದು ಸುಮತಿ ಕೊಡುವನ ದಯಾ ಸಮುದ್ರ |ಯೋಗಿವರ್ಯರವಿಪ್ರಕಾಶನಾ ಅನಘನ 1ರಾಘವೇಂದ್ರರನುಗ್ರಹ ಪಾತ್ರನ ವೈಷಿಕದ ಕು |ಭೋಗತೊರೆದ ನಿಷ್ಪ್ರಪಂಚನ ದುರ್ಮತಿಗಳ |ಯೋಗಕೊಲಿಯದಿಪ್ಪ ಧೀರನಭವಭಯವನು |ನೀಗಿಹರಿಯ ಸದನವ ತೋರ್ಪನಾ ವರದನ 2ಕಲಿಮಲಾಪಹಾರ ಶಕ್ತನ, ಪ್ರಾಣೇಶ ವಿಠಲ |ನೊಲಿಸಿಕೊಂಡಮಿತ ಸಮರ್ಥನ ಮಾರುತ ಮತ ||ಜಲಧಿಪೆರ್ಚಿಸುತಿಹ ಚಂದ್ರನ ಬೃಹತ್ಸು ತಟ ನೀ |ನಿಲಯಶ್ರೀ ವಸುಧೇಂದ್ರ ಪುತ್ರನ ವಿರಕ್ತನ3
--------------
ಪ್ರಾಣೇಶದಾಸರು
ತೇರನು ನೀವು ನೋಡಿಲ್ಲ ತಿಳಿಪುವೆ ಸಡಗರವೆಲ್ಲಚಾರುಯೋಗಿಯು ನೋಡಿಲಿದು ಚಲನೆ ಮನುಜರಿಗೆ ಸಲ್ಲದುಪಆರು ಚಕ್ರದ ಆರುನೆಲೆ ಮೂರು ಅವಸ್ಥೆಗಳ ಮೂರುಗಾಲಿಕುಂಡಲಿಎಂಬುದುಕೀಲುಚದುರಿನ ದಳಪಟ್ಟಿ ಮೇಲು1ಸಹಸ್ರಾರವೇ ಕೊನೆಯ ಸ್ಥಾನ ಸ್ವಾಮಿಯ ಸಿಂಹಾಸನಸೋಹಂ ಎಂದೆನಿಸುವ ಶಿಖರ ಸೊಗಸಿಂದಲಿಹುದು ಸುಪ್ರಕಾರ2ಸ್ಥಾನ ಸ್ಥಾನಕೆ ಒಂದು ಬೊಂಬೆ ಸಡಗರ ಏನೆಂಬೆಅನುರಾಗವೇ ಎಂಬ ಫಲವು ಆಶ್ಚರ್ಯ ತೇರಿನ ನಿಲುವು3ಹೇಷೆ ಎಂಬುವೆ ಕೋಟಿ ಚಂದ್ರ ಹೊಡೆವ ನಾದವೆ ವಾದ್ಯಸಾಂದ್ರಬಲುಹು ಆನಂದ ಸಲ್ಲಲಿ ಭಾಪು ಎನಲಿ ಸುಖದಲಿ4ಇಡಾಪಿಂಗಳ ಮಿಣಿಗಳಿಂದ ಎಳೆವುದು ಗುರುದಯದಿಂದಮೂಡಲಿಂದ ಪಶ್ಚಿಮಕ್ಕೆಗುರುಚಿದಾನಂದನ ಸ್ಥಾನಕ್ಕೆ5
--------------
ಚಿದಾನಂದ ಅವಧೂತರು
ತೊಲ ತೊಲಗೆಲೊ ಕಲಿಯೆ ನಿಲ್ಲದಿಲ್ಲಿ ಪ.ತೊಲ ತೊಲಗೆಲೊ ಕಲಿಯೆ ಸಲೆಸಲುಗೆಯ ಬಿಡು ಸಲಿಲಜಾಕ್ಷನ ದಾಸರ ಅ.ಪ.ರಮೆರಮಣನ ಸಿರಿರಮಣೀಯ ನಾಮವಿರೆಯಮಗಿಮನಂಜಿಕೆ ಎಮಗುಂಟೆತಮ ತಮ ಮಹೋತ್ತಮ ಕುಲಗಳು ಮಹೋತ್ತ್ತಮತಮರೊಲುಮೆ ಮತ್ತವನ ಆಶ್ರಯವುಂಟು 1ಮನ ಮನೋಸಂಭವನ ಮನೆ ಹೊಕ್ಕರೆ ಸೈರಿಸಘನಜ್ಞಾನಿ ಪೂರ್ಣಗುರು ಜ್ಞಾನಿರಾಯತನು ತನಯಾಂಗನೇರು ತನ್ನವಸರಕಾರಿಲ್ಲಈ ನಯನ ಹರಿನಾರಾಯಣನಲ್ಲಿ ತೊಡಗಿರೆ 2ಬಿಡಬಿಡ ಭಟನೆಂದು ಬೇಡಿದಂತಾಭಯವೀವಪಡಿಪೊಡವಿಲಿ ಕೊಟ್ಟು ಪಿಡಿದ ಎನ್ನಒಡಒಡನೆ ರಕ್ಷಿಪ ಒಡೆಯ ಪ್ರಸನ್ವೆಂಕಟೇಶಅಡಿಯೆಡೆ ಸೇರಿದೆ ಬಾರೊ ಅಡಗಡಗೆಲೆಲೊ 3
--------------
ಪ್ರಸನ್ನವೆಂಕಟದಾಸರು
ತೋಳು ತೋಳು ತೋಳು ಕೃಷ್ಣ-ತೋಳನ್ನಾಡೈ |ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈಪಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋ-|ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋ-|ನೆಲುವು ನಿಲುಕದೆಂದೊರಳ ತಂದಿಡುವನೆ ತೋ-|ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋ- 1ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋ-|ಕಟ್ಟದ ಕರಡೆಯ ಕರುವೆಂದೆಳೆವನೆ ತೋ-||ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋ-|ಬಟ್ಟಲ ಹಾಲನು ಕುಡಿದು ಕುಣಿವನೆ ತೋ- 2ಅಂಬೆಗಾಲಿಲೊಂದೊರಳನ್ನೆಳೆವನೆ ತೋ-|ತುಂಬಿದ ಬಂಡಿಯ ಮುರಿಯಲೊದ್ದವನೆ ತೋ-|ಕಂಬದಿಂದಲವತರಿಸಿದವನೆ ನೀ ತೋ-|ನಂಬಿದವರನುಹೊರೆವಕೃಷ್ಣ ತೋ3ಕಾಲಕೂಟದ ವಿಷವ ಕಲಕಿದ ತೋ-|ಕಾಳಿಂಗನ ಹೆಡೆಯನು ತುಳಿದ ತೋ-||ಕಾಳೆಗದಲಿ ದಶಕಂಠನ ಮಡುಹಿದ ತೋ-|ಶಾಲಕ ವೈರಿಯೆ ಕರುಣಿಗಳರಸನೆ ತೋ 4
--------------
ಪುರಂದರದಾಸರು
ತ್ರಿಜಗದ್ವಾ ್ಯಪಕಹರಿಎನುವರು ಸುಜನರುನಿಜದಲಿ ಪೇಳಿವದಾರಕ್ಕಾಅಜಭವಾದಿಗಳಿಗರಸನಾದಹದಿನಾಲ್ಕು ಲೋಕಕೆ ದೊರೆ ತಂಗಿ 1ನೀರೊಳು ಮುಳುಗುತ ಮೀನರೂಪದಿಸಾರುವ ಮಯ್ಯವದಾರಕ್ಕನೀರೊಳು ಮುಳುಗಿ ವೇದವ ತಂದು ಸುತಗಿತ್ತಧೀರ ಮತ್ಸ್ಯಮೂರುತಿ ತಂಗಿ 2ಭಾರಬೆನ್ನಿಲಿ ಪೊತ್ತು ಮೋರೆ ಕೆಳಗೆ ಮಾಡಿನೀರೊಳು ವಾಸಿಪದಾರಕ್ಕವಾರಿಧಿಮಥಿಸಿದಮೃತ ಸುರರಿಗೆ ಇತ್ತಧೀರಕೂರ್ಮಮೂರುತಿ ತಂಗಿ3ಕೋರೆದಾಡಿಯಲಿ ಧಾರುಣಿ ನೆಗಹಿದಫೋರನೆನುವರಿವದಾರಕ್ಕಕ್ರೂರ ಹಿರಣ್ಯಾಕ್ಷನ ಕೊಂದು ಭೂಮಿಯ ತಂದಶೂರ ವರಹ ಮೂರುತಿ ತಂಗಿ 4ಕ್ರೂರರೂಪತಾಳುತ ಕರುಳ್ವನಮಾಲೆ ಹಾಕಿದವದಾರಕ್ಕಪೋರನ ಸಲಹಲು ಕಂಬದಿಂದುಸಿದನಾರಸಿಂಹ ಮೂರುತಿ ತಂಗಿ 5ಮೂರಡಿ ಭೂಮಿಯ ದಾನವ ಬೇಡಿದಹಾರ್ವನೆನುವನಿವದಾರಕ್ಕಧೀರ ಬಲಿಯ ಭಕ್ತಿಗೆ ಮೆಚ್ಚಿ ಬಾಗಿಲು ಕಾಯ್ದವಾಮನ ಮೂರುತಿ ಇವ ತಂಗಿ 6ಮೂರು ಏಳುಬಾರಿಧಾರುಣಿ ಚರಿಸಿದಶೂರನೆನುವರಿವದಾರಕ್ಕವೀರ ಕ್ಷತ್ರಿಯರ ಮದವನಡಗಿಸಿದ ಪರಶು-ರಾಮ ಮೂರುತಿ ತಂಗಿ 7ಕೋತಿಗಳೊಡನಾಡಿ ಸೇತುವೆ ಕಟ್ಟಿದ ಪ್ರ-ಖ್ಯಾತನೆನುವರಿವದಾರಕ್ಕಮಾತರಿಶ್ವನಿಗೆ ಒಲಿದಂಥ ದಶರಥರಾಮ ಚಂದ್ರ ಮೂರುತಿ ತಂಗಿ 8ಗೋಕುಲದೊಳು ಪಾಲ್ಬೆಣ್ಣೆ ಮೊಸರುನವನೀತಚೋರನಿವದಾರಕ್ಕಲೋಕಗಳೆಲ್ಲಾ ತಾಯಿಗೆ ಬಾಯೊಳುತೋರ್ದಗೋಪಾಲಕೃಷ್ಣ ಮೂರುತಿ ತಂಗಿ 9ತ್ರಿಪುರರ ಸತಿಯರ ವ್ರತಗಳನಳಿದನುಗುಪಿತನೆನುವರಿವದಾರಕ್ಕಕಪಟನಾಟಕ ಸೂತ್ರಧಾರಿ ಶ್ರೀ-ಹರಿಬೌದ್ಧ ಮೂರುತಿ ತಂಗಿ10ಅಶ್ವುವನೇರುತ ಹಸ್ತದಿ ಖಡ್ಗ ಪುರು-ಷೋತ್ತಮನೆನುವರಿವದಾರಕ್ಕಸ್ವಸ್ತದಿ ಕಲಿಯೊಳು ಸುಜನರ ಪಾಲಿಪಕರ್ತೃ ಕಲ್ಕಿ ಮೂರುತಿ ತಂಗಿ 11ಶಂಖು ಚಕ್ರ ಗದೆ ಪದುಮವು ಸಿರದಿ ಕಿ-ರೀಟಧಾರಿ ಇವದಾರಕ್ಕಪಂಕಜಾಕ್ಷಿ ಪದ್ಮಾವತಿಪತಿಶ್ರೀ-ವೆಂಕಟೇಶ ಮೂರುತಿ ತಂಗಿ 12ಮಮತೆಲಿ ಸುಜನರ ಶ್ರಮ ಪರಿಹರಿಸುವಕಮಲಾಪತಿ ಇವದಾರಕ್ಕಕಮಲಪತ್ರಾಕ್ಷ ಶ್ರೀ ಕಮಲನಾಭ ವಿ-ಠ್ಠಲ ಮೂರುತಿ ಕೇಳಿವ ತಂಗಿ 13
--------------
ನಿಡಗುರುಕಿ ಜೀವೂಬಾಯಿ
ತ್ವರಿತಾ ಬಾರಯ್ಯ ಹೇ ಶ್ರೀಯರಸ ವೆಂಕಟ ದೀನ |ಸುರತರುವೆ ದೇವೇಶವರಾಹಭೂಧರಧಾಮ|ಕರುಣಾ ಪಯೋದಧೆ ಸರ್ವ ರಕ್ಷಿ ಕಂಧರದೊಳ- |ಗಿರುತಿಹ ನರಗಜ ವದನನೇ ಪಇಳಿಪತಿಗಳ ಕೂಡ ಕಲಹ ಮಾಡಿ ತೋರೆಂದುಅಂಗಲಾಚಲಾ ಕುಂತೀದೇವಿ |ಗೊಲಿದಾಸೆ ಪೂರ್ತಿಸಿ ಅನಿಲಜನಾಗ ನಿನ್ನ ತೇರೊ-ತ್ತಲು ಹಿಂದಕ್ಕೆ ನೀ ನಗು- |ತ್ತಲೆ ಮುಂದಕ್ಕೆ ಬಂದಿ ದೂರಲಾಘವವಾದಿಂದಂದೀಗಹಲವು ಜನರು ಬಹು |ಬಲುವಿಂದ ರಥವನೆಳೆದರೂ ಬಾರದಿದುಖಲು ಸೋಜಿಗವೆಲೆ |ಹಲಧರನನುಜ ಕಡಲ ಮನೆ ಕಾರವಡಲ ರವಿದಶ ಧರಖಳವಿಪಿನದ್ವಿದಲ 1ಬರಬೇಡವೆಲವೊ ನಮ್ಮ ಮಂದಿರಾಕೆಂದು ಬಹಳಾ ಬೈ-ದರೂ ಮುದದಿಂದ ಗೋಪಿ- |ಯರ ಸದ್ಮಕೆ ಪೋಗುವೆಜರಿದುನಿನ್ನನು ತಾನಾತರಳನ ಕಾಯ್ವೆನೆಂದಾ |ನರನ ತಪ್ಪೆಣಿಸದೆ ಕರೆಯದಲೆ ಪೋದೆ ನಿ-ನ್ನರಮನೆಯ ತನಕಲಿ |ಎರಡೇ ಘಳಿಗೆಯೊಳು ಪರಿಪರಿ ಭಕುತ ಜನರುಗಳು ಬಿನ್ನೈ-ಪರು ಬೀದಿಗಳೊಳು |ಮೆರೆಯುತಲೀಗಲೆ ಸರಸರ ಬರುವದುಪರಮಾಯಾಸವೇ 2ಮೀನಾಕ್ಷಿ ಯಶೋದೆ ನಿನ್ನನು ಪೊತಾನೆಂದುನುಣ್ಣನೆ ತೊಟ್ಟಿಲೊಳಿಟ್ಟು |ತಾ ನುಡಿಯಲು ಜೋಗುಳಾನು ಕೇಳ್ವೆ ಕಿವಿಗೊಟ್ಟುನಾನಾಗಮ ಸಮ್ಮತ |ಗಾನ ಮಾಳ್ಪುದು ವಿದ್ವಾಂಸಾನೀಕವೀಗ ನಿನ್ನಧ್ಯಾನಕೆ ಬಾರದೆಯೇನು |ನಿನ್ನ ಬಗೆ ತಾನರಿಯಳು ಶ್ರೀಮಾನಿನಿಖಗವಹಶ್ರೀನಿಧೆ ಮೂರೊಂದು |ಹಾನಿರಹಿತ ಗದಾಪಾಣಿ ಹರಿಯೇ ಶ್ರೀ-ಪ್ರಾಣೇಶ ವಿಠಲನೆ 3
--------------
ಪ್ರಾಣೇಶದಾಸರು
ಥಟ್ಟನೆ ನಡೆ ಗೋಕುಲಕಕ್ರೂರಅಸುರಾವೇಶವ ತಾಳು |ಕೃಷ್ಣನಕರತಾ ಈ ಬಗೆಯಿಂದಲಿಪೇಳ್ವೆ ಉಪಾಯವ ಕೇಳು ಪಮಲ್ಲರಕುವಲಯಪೀಡಾ ಪಥÀದೊಳು |ನಿಲ್ಲಿಸಿಹನು ಎನಬೇಡ ||ಬಿಲ್ಲು ಹಬ್ಬಕೆ ಕರೆಸಿಹನೆನ್ನು |ಕೊಲ್ಲುವದುಸರಲಿ ಬೇಡ1ನಿಮ್ಮಾವನು ನಿನ್ನ ಕಾಣದೆ ಬಳಲುವ- |ವಮ್ಮಿಮ್ಮೆಲ್ಲವು ಎನ್ನು ||ಸುಮ್ಮನೆ ಆಲಸ್ಯಾತಕೆ ಹೋಗುವ |ಘಮ್ಮನೆ ಬಾ ಬಾ ಎನ್ನು 2ಪುಷ್ಟಿ ಮಾಡಿ ಮಾತುಗಳಿಂ ಮೆಚ್ಚಿಸಿ |ನೆಟ್ಟನೆ ಬಹಪರಿಮಾಡು|ಬಿಟ್ಟರೆ ನಿನ್ನ ಶ್ರಮ ಬಲ್ಲನು ಪ್ರಾಣೇಶ |ವಿಠ್ಠಲನೆವೇ ನೋಡು 3
--------------
ಪ್ರಾಣೇಶದಾಸರು