ಒಟ್ಟು 57925 ಕಡೆಗಳಲ್ಲಿ , 139 ದಾಸರು , 12496 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೆ ಒಣಭ್ರಾಂತಿ ತಿಳಿಯದು ಮೂರುದಿನದ ಸಂತಿ ನೀತಿಗೆಟ್ಟು ಸತಿಮೋಹದಿ ಕುಳಿತೆಮದೂತರೆಳೆಯುವಾಗೇನಂತಿ ಪ ಬರುವಾಗೊರ್ವಬಂದಿ ಬರುತಲೆ ಮಂದಿ ಮಕ್ಕಳೆಂದಿ ಇರು ಇರುತೆಲ್ಲ ನನ್ನದೆಂದಿ ಮರೆವಿನ ಆಲಯದೊಳು ನಿಂದಿ ಕರುಣವಿಲ್ಲದೆತುಸು ಹೆಡತಲೆಮೃತ್ಯು ಮುರಿದು ತಿನ್ನುವಾಗ್ಯಾರಿಲ್ಲ ಹಿಂದೆ 1 ತನುಜನರು ಇವರು ಧನಕನಕಿರುವತನಕ ಹಿತರು ಜನಕಜನನಿಯರು ಕೊನೆಗೆ ಸಂಗಡ ಬರರ್ಯಾರು ಕನಿಕರವಿಲ್ಲದೆ ಕಾಲದೂತರು ಘನಬಾಧೆಪಡಿಸಲು ಬಿಡಿಸರೋರ್ವರು 2 ಭೂಮಿ ಸೀಮೆಯೆಲ್ಲ ಈ ಮಹರಾಜ್ಯ ಭಂಡಾರ ಸುಳ್ಳು ಪಾಮರ ಸಂಸಾರ ಕಾಮಿಸಿ ಕೆಡಬೇಡೇಲೆ ಮಳ್ಳ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಭಜಿಸಿ ಭವಗೆಲಿದು ನೀ ಬಾಳೋ3
--------------
ರಾಮದಾಸರು
ಏತಕೆ ನೀ ಚಿಂತಿಸುವೆ ಹೇಡಿ ಜೀವವೇ ಪ ವೀತಮೋಹರಾಗನಾಗಿ ವಿಧಿಪಿತ ದಾತತಾನೆಂದು ತಿಳಿಯಲು ಹೃತ್ತಾಪನಾಶನಾ ಅ.ಪ ಹೊನ್ನು ಹೆಣ್ಣು ಮಣ್ಣು ಮೂರು ನಂಬಬ್ಯಾಡಲೊ ನಿನ್ನೊಳಿರುವ ಮೂರ್ತಿಯನ್ನು ಅರಿತು ಬಾಳೆಲೊ 1 ವಂದಿಸುತ ಸಜ್ಜನರ ಕಂಡರಾನಂದ ಪೊಂದುತ ಸಂದೇಹಗಳೆಲ್ಲ ತೊರೆದು ಸತತ ನಲಿಯುತ 2 ಆತ್ಮವತ್ ಸರ್ವಭೂತನೆಂಬೊ ವಚನವು ಆತ್ಮನಲ್ಲಿ ಸಮರ್ಪಿಸಿದರೆ ಪಡೆವೆ ಸೌಖ್ಯವು 3 ಸಾಮಜೇಂದ್ರ ವರದ ಶ್ರೀ ಗುರುರಾಮವಿಠಲನ ಪ್ರೇಮದಿಂ ನಿಷ್ಕಾಮನಾಗಿ ಸೇವಿಸುನುದಿನ 4
--------------
ಗುರುರಾಮವಿಠಲ
ಏತಕೆ ಬಾರದೊ ಹರಿಯೆ ನೀತವೆ ಇದು ಸರಿಯೆ ಪ ನಿಗಮ ಸಂಗೀತನಾಮ ಜಲ ಜಾತನಯನ ಬಹುಪ್ರೀತಿ ಮಾಡಿದರು ಅ.ಪ ಕುಂದರದನ ಕುರುವಿಂದಾಧರ ಪೂ ರ್ಣೇಂದು ವದನ ಮುನಿವಂದ್ಯ ಎಂದಿಗೆ ಈ ಭವಬಂಧ ಬಿಡಿಸಿ ದಯ ದಿಂದ ತೋರುವಿಯಾನಂದ ಕುಂದುಗಳೆಣಿಸದೆ ಚಂದದಿ ಸಲಹಲು ಎಂದೆಂದಿಗು ನೀ ಗತಿಯೆಂತೆಂದರು 1 ಮಾರಜನಕ ಗಂಭೀರ ಹೃದಯ ಸಂ ಚಾರ ಭಜಕ ಮಂದಾರ ತೋರು ನಿನ್ನ ಪದ ಸಾರಸವನು ಮುನಿ ನಾರದಾದಿ ಪರಿವಾರ ಘೋರ ಶರಧಿಯೊಳು ಸೇರಿದವರಿಗಿ ನ್ನಾರು ಬಂದು ಉದ್ಧಾರ ಮಾಡುವರು 2 ಶ್ರೀಶ ಯದುಕುಲಾಧೀಶ ಮೇಘ ಸಂ ಕಾಶ ರೂಪ ಸರ್ವೇಶ ಘಾಸಿಪಡಿಪ ವಿಷಯಾಸೆಗಳೆಲ್ಲವ ನಾಶಗೈಸೊ ಶ್ರೀನಿವಾಸ ದಾಸ ಜನರಿಗುಲ್ಲಾಸವ ಕೊಡುತಿಹ ವಾಸುದೇವವಿಠಲಯ್ಯನೆ ಎನ್ನೊಳು 3
--------------
ವ್ಯಾಸತತ್ವಜ್ಞದಾಸರು
ಏತಕೆ ಮರುಳಾದೆಯೋ ಆ ಹೆಣ್ಣಿನಿ-ನ್ನೇತಕೆ ಭ್ರಮಿಸಿದೆಯೋಜಾತಿನಾಯಕಿಯರೊಳ್ಕತೆಯೆನುತಲಿ ಬಿ-ಟ್ಟ ತರುಣೀ ಸುಮ್ಮನೇತಕೆ ಮನಸೋತಿನ್ ಏತಕೆ ಪ ರೂಪಿನೊಳಗೆ ಚಂದವೆ ಕಾಮಶಾಸ್ತ್ರ ಕ-ಲಾಪ ಬಲ್ಲವಳೇತಾ ಪತಿವ್ರತೆ ಪರರೆಲ್ಲಾ ಜಾರೆಯರೆನು-ತೀಪತಿ ಬೊಗಳುವ ಪಾಪಿ ಕುರೂಪನೀಂ 1 ಬಣಗು ಭಿಕಾರಿ ನೀಂ 2 ಬರಲಿದಿರೇಳುವಳೆ ಪದವ ತೊಳೆದುಸೆರಗಿನಿಂದೊರಸುವಳೇತರುಣಿಯರುಗಳ ಮನಸ ಕಂಡವರುಂಟೆದುರುಳೆಯೆಂಬುದನೆಲ್ಲಾ ರಾಮೇಶ ಒಲ್ಲ 3
--------------
ಕೆಳದಿ ವೆಂಕಣ್ಣ ಕವಿ
ಏತಕೆ ಸಂತತ ಚಿಂತಿಸುವೆ ಪ ಕೋತಿಗೆ ಮದ್ದಿಕ್ಕಿದ ರೀತಿಲಿ ಮನವೆಅ.ಪ ಹಾನಿ ವೃದ್ಧಿಗಳು ತಾನಾಗಿ ಬರುವುದು ಏನೇನು ಮಾಡಲು ಬಿಡಲೊಲ್ಲದು ಜ್ಞಾನವಿಲ್ಲದೆ ವೃಥಾ ಧೇನಿಸಿ ಧೇನಿಸಿ 1 ದೇಹಸಂಬಂಧಿಗಳ ಮೋಹ ಪಾಶಕ್ಕೆ ಸಿಕ್ಕಿ ಸಾಹಸ ಮಾಡುವುದೇನು ಫಲ ಊಹಿಸಿ ನೋಡಲು ಭ್ರಾಂತಿಯದಲ್ಲವೆ 2 ಪೂರ್ವ ಕರ್ಮಾನುಸಾರ ನಡೆಸುವನು ಗರ್ವವಿರಹಿತನು ಗುರುರಾಮವಿಠಲನು 3
--------------
ಗುರುರಾಮವಿಠಲ
ಏತರಿಂದ ಬ್ರಾಹ್ಮಣಿಕೆ ಪರಮಾತ್ಮನೆತಾನೆಂದು ತಿಳಿಯದ ನರನಲಿ ಪ ಜನಿವಾರ ನೋಡಿ ಬ್ರಾಹ್ಮಣ ನೆಂದರೆ ಸು-ಮ್ಮನೆ ಮರಕೆ ಬಳ್ಳಿ ಸುತ್ತಿಲ್ಲವೆಹಣೆಯ ಬಟ್ಟದ ನೋಡಿ ಬ್ರಾಹ್ಮಣ ನೆಂದರೆಹಾದಿ ಕಲ್ಲಿಗೆ ಸುಣ್ಣ ಬರೆದಿಲ್ಲವೆ1 ಜುಟ್ಟು ನೋಡಿ ಇವ ಬ್ರಾಹ್ಮಣ ನೆಂದರೆಜುಟ್ಟಿನ ಗುಬ್ಬಿಯು ತಾನಿಲ್ಲವೆಉಟ್ಟ ಧೋತ್ರವ ನೋಡಿ ಬ್ರಾಹ್ಮಣ ನೆಂದರೆಉಟ್ಟುದಿಲ್ಲವೆ ಮನೆಯ ನಡುಗಂಬ 2 ಬ್ರಾಹ್ಮಣನಾದರೆ ಬ್ರಹ್ಮ ಸರ್ವವು ಆಗಿಬ್ರಹ್ಮವಖಂಡದಿ ಭೇದವಿಲ್ಲದೆಬ್ರಹ್ಮ ಚಿದಾನಂದ ಗುರುನಾಥನಾಗಿಯೆಬ್ರಹ್ಮವ ಕಂಡವನೀಗ ಬ್ರಾಹ್ಮಣ3
--------------
ಚಿದಾನಂದ ಅವಧೂತರು
ಏನ ನೋಡಿದೆ ದೇವಿ ಏನ ನೋಡಿದೆ | ಹೀನ ಜನರು ಭಜಕರ ಮಾನಹಾನಿ ಮಾಡುವದನ ಪ ಸಿಂಧು ಎಂದು ನಂಬಿ ಇದ್ದೆ 1 ಖಳರ ನಾಲಿಗೆಯನ್ನು ಮತ್ತೆ | ಸೆಳೆದು ಸೀಳಿ ಬಿಸುಟುತಿರಲು |ಉಳಿವುದಿಲ್ಲ ಮತವು ಎಂದು | ತಿಳಿಯವಲ್ಲದೇನೆ ನಿನಗೆ 2 ಪಾದ ಇಂದು ತೋರು ಮಹಿಮೆಗಳನು 3
--------------
ಭಾವತರಕರು
ಏನ ಬಣ್ಣಿಪೆನಮ್ಮ ಪ. ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ಅ.ಪ. ಮಧ್ವಸರೋವರ ತೀರದ ಮುದ್ದುಕೃಷ್ಣನ ಪ್ರ-ಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ1 ಭವಬಂಧ ಮಾಯಿಗಳ ಕಾಲಲೊದ್ದು [ಮೂಲೆಲ್ಹಾಕಿ]ಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ 2 ಸಿರಿ ಹಯವದನನ ಚರಣಕಮಲವನುನಿರುತವಾಗಿ ಸೇವಿಸುವ ಅಚ್ಛಿನ್ನ ನಿಜದಾಸರ 3
--------------
ವಾದಿರಾಜ
ಏನ ಬೇಡಲಿ ನಾನು ಏನ ನೀಡುವೆಯೋ ನೀನು ನೀನೆನ್ನ ಪ್ರಭುವಾಗಿರೆ ಹೇಳೋ ರಂಗ ಪ ನಾನಿನ್ನ ವಂದಿಸಿ ಧ್ಯಾನವ ಗೈವಾಗ ಏನನೀ ಕೊಡಲಾರೆ ಹೇಳೋ ರಂಗಯ್ಯಅ.ಪ ಕರಣಕಾರಣ ನೀನು ಕೊರಡಬೊಂಬೆಯು ನಾನು ಕರವ ಪಿಡಿದು ಎನ್ನ ನಡೆಸುವೆ ನೀನು ಕಾನನ ಸಿರಿ ಸುಖ ಭೋಗವು ಸ್ಥಿರವಲ್ಲ ಹರಿ ನಿನ್ನ ಚರಣಸೇವೆಯೆ ಸಾಕೋ 1 ಬೇಡಿ ಬೇಡಿ ನಿನ್ನ ಕಾಡುವ ಮನವೀಯಬೇಡಯ್ಯ ನೀಡಯ್ಯ ಮಂಗಳನಾಮಂಗಳ ಪಾಡಿ ಕೊಂಡಾಡುತ ನಾಡೆ ವಂದನೆಗೈವ ರೂಢಿ ಒಂದಿರಲಿ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನ ಬೇಡಲೊ ನಿನ್ನ ದೇವಾಧಿ ದೇವ ಪ ಏನಹುದೊ ನಿನ್ನೊಳಗೆ ಮಹಾನುಭಾವ ಅ.ಪ ವನಧಿ ಹಾಸಿಗೆಯು ವಟಪತ್ರವನಿತೆಯರ ಬೇಡಲೆ ಬ್ರಹ್ಮಚಾರಿಘನ ಸಖ್ಯವನು ಬಯಸೆ ನೆನೆಯುವರ ಮನದಲಿಹೆತಿನುವುದಕೆ ಕೇಳುವೆನೆ ನವನೀತಚೋರ 1 ಒಡವೆಗಳ ಬಯಸೆ ಶಿಖಿಪಿಂಛ ತುಳಸಿ ಪತ್ರಕಡು ಸೈನ್ಯವನೆ ಬಯಸೆ ಗೋಪಾಲನುಬಿಡದೆ ರೂಪವÀ ಬಯಸೆ ನೀಲಮೇಘಶ್ಯಾಮಉಡುವುದಕೆ ಕೇಳುವೆನೆ ಸ್ತ್ರೀವಸನ ಚೋರ 2 ಶಕ್ತಿಯನು ಗೋಪಿಕಾ ಸ್ತ್ರೀಯರಲಿ ವ್ರಯಗೈದೆಭಕ್ತಿಯನು ಸತ್ಯವಂತರಿಗಿತ್ತಿಹೆಭಕ್ತರನು ವಂಚಿಸುತ ನೀನು ಬಚ್ಚಿಟ್ಟಿರುವಮುಕ್ತಿ ಕಾಂತೆಯ ಕೊಡು ಸುಖಿಪೆನೊ ಶ್ರೀಕೃಷ್ಣ3
--------------
ವ್ಯಾಸರಾಯರು
ಏನ ಮಾಡಲಿ ಎನ್ನ ರೋಗಕೆ ರಾಮ ಧ್ಯಾನದಮೃತವುಂಡು ಪೋಗ ಬೇಕಲ್ಲದೆ ಪ ಗೂಡಿನೊಳಗೆ ಜರೆ ಮುತ್ತಿತು ಅದಕೆ ಬಲ ಗೂಡಿ ರೋಗವು ಮತ್ತೆ ಪುಟ್ಟಿತು ಕಾಡಿನೌಷಧಿಯ ನಿತ್ಯ ಮಾಡುವ ಜಪತಪ ನಿಂತಿತು 1 ಯಾರಾರೇನೆಂದುದೆಲ್ಲವ ಮಾಚಿತು ಅದು ನಡೆಯೆಕಾಲುಬತ್ತಿತು ಶರೀರದೊಳಗೆ ಕ್ಷೀಣವಾಯಿತು 2 ವಾಂತಿ ಭ್ರಾಂತಿಗಳೆರಡಾಯಿತು ರೋಗ ಕಮಲಕಂಡಿತು ಕಾಲ ಬಂತೊ ಎಂಬಂತೆ ಮನವಾಯಿತು 3 ಹಿಂದೆ ಮಾಡಿದ ಪಾಪ ಬಂದಿತು ಈಗ ಮನದಿಹಂಬಲವಾಯಿತು ಇನ್ನು ಎಂದನೆಂದರೆ ದನಿ ಕುಂದಿತು 4 ಕಾಮನಯ್ಯನ ಚಿಂತೆ ಬಂದಿತು ರೋಗ ನಾಮಸ್ಮರಣೆಯಿಂದ ಹೋಯಿತು ಕ್ಷೇಮ ಕುಶಲಕೆಲ್ಲ ಭೀಮನ ಕೋಣೆ ಲಕ್ಷ್ಮೀರಮಣನಪ್ಪಣೆಯಿದ್ದಂತಾಯಿತು 5
--------------
ಕವಿ ಪರಮದೇವದಾಸರು
ಏನ ಹೇಳಲಿ ಈತನಿರವ ಭಕ್ತರ ಮನಾ- ಧೀನ ಹೆಳವನಕಟ್ಟೆ ರಂಗ ದೇವೋತ್ತುಂಗನ ಪ. ಹೊಳೆವ ಮೈಯ್ಯವ ಕಲ್ಲಹೊರುವ ಕಡಲೊಳಾಡುವ ತಿಳಿಯ ಎರಡಂಗನೆ ತಿರಿವ ಪರುಶುವಿಡಿವ ಕೋಡಗ ಕುಲವನಾಳುವ ಗೋವಕಾಯ್ವ ಕಾಂತೆಯರ ವ್ರತವ- ನಳಿವ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಜಲವಪೊಕ್ಕು ದೈತ್ಯನ ಸಂಹರಿಸಿ ಕಲಕಿ ಸಮುದ್ರವ ಕಾರಣಕಾಗಿ ನೆಲಗಳ್ಳನ ಮರ್ದಿಸಿ ಹಿರಣ್ಯಾಕ್ಷನ ಚಲುವ ಚೆಳ್ಳುಗುರಿಂದೊಡಲನೆ ಬಗಿದು ಸುಲಭನಾಗಿ ಶುಕ್ರನ ಕಣ್ಣಿರಿದು ಬಲುಸಾಹಸದಿ ಕ್ಷತ್ರಿಯರನು ಗೆಲಿದು ಗೆಲವ ತೋರಿ ಗೋಪಿಗೆ ಸುತನಾಗಿ ನಿಲುವ ದಿಗಂಬರಧರ ರಾವುತನಾಗಿ ಇಳೆಯೊಳು ಚರಿಸುವ ಈತ ಕಾಣೆ ಅಮ್ಮಯ್ಯ 1 ನಿಲ್ಲದಾಡುವ ನಗವ ಪೊರುವ ಮಣ್ಣಬಗೆವ ಕಲ್ಲ ಕಂಬವನೊಡೆವ ಇಳೆಯನಳೆವ ಭಾರ್ಗವ ವಲ್ಲಭನವರಗೆಲುವ ಲಜ್ಜೆನಾಚಿಕೆ- ಯಿಲ್ಲದೆ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಎಲ್ಲ ವೇದವನುದ್ಧರಿಸ್ಯಂಬುದಿಯ ಜಲ್ಲಿಸಿ ಧಾರುಣಿಯನು ತಂದಿರುಹಿ ತಲ್ಲಣಿಸುವ ಪ್ರಹಲ್ಲಾದನ ಪೊರೆÀದು ಬಲ್ಲಿದ ಬಲಿಯ ಬಂಧಿಸಿ ಪಿತನಾಜ್ಞೆಯ ಸಲ್ಲಿಸಿ ಮಾತೆಯ ಶಿರವ ಚೆಂಡಾಡಿ ಬಿಲ್ಲನ್ನೆತ್ತಿ ಭೂಮಿಜೆಯೊಡಗೂಡಿ ಮಲ್ಲರ ಮಡುಹಿ ಮುಪ್ಪುರದ ಬಾಲೆಯರ ಜಳ್ಳು ಮಾಡಿ ಧರ್ಮವ ಹೋಗ್ಯಾಡಿ ಹಲ್ಲಣಿಸುವ ತೇಜಿಯನೇರಿದ ಶಿರಿ ವಾಸುದೇವ ಕಾಣೆ ಅಮ್ಮಯ್ಯ 2 ಎವೆ ಇಕ್ಕ ಬೆನ್ನಲ್ಹೊತ್ತು ಗಿರಿಯಕೊ- ನೆವಲ್ಲ ಮಸೆವ ಸಮಯದಿ ಬಹವಿಪ್ರ ಮುನಿ ಭವ ಶ್ರೀರಾಘವ ನವನೀತಚೋರ ನಾರಿಯರ ಮೋಹಿಸಿ ತವಕದಿ ತುರಗವನೇರಿ ಮೆರೆವನ್ಯಾರೆ ಪೇಳಮ್ಮಯ್ಯ ತಮನ ಮರ್ದಿಸಿ ಸಾಮವನಜಗಿತ್ತು ಸುಮನಸರಿಗೆ ಸುಧೆಯನು ತಂದೆರದು ಅವನಿಗಳೆದ ಅಸುರನ ಸಂಹರಿಸಿ ಮಮತೆಯಿಂದ ಪುಟ್ಟ ಮಗುವನೆ ಸಲಹಿ ಗಮಕದೊಳಗಿದ್ದ ಬಲಿಯನು ಕೆಡಮೆಟ್ಟಿ ಸಮರಂಗದಿ ಸುರಧೇನುವ ತಂದು ದಿನಕರ ವಂಶೋದ್ಧಾರಕನಾಗಿ ಕಂಸ- ನ ಮಡುಹಿ ಮುಪ್ಪುರದ ಬಾಲೆಯರು ಭ್ರಮಿಸುವಂತೆ ಬೌದ್ಧಾವತಾರನಾದ ಕಲ್ಕಿ ಹೆಳವನಕಟ್ಟೆರಂಗ ದೇವೋತ್ತುಂಗನ 3
--------------
ಹೆಳವನಕಟ್ಟೆ ಗಿರಿಯಮ್ಮ
ಏನ ಹೇಳಲಿ ನರಹರಿ ನಿನ್ನ ಮಹಿಮೆಯ ಪ. ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ ಅ.ಪ. ಸಚ್ಚಿದಾನಂದನ ಪಾದಾರವಿಂದವಮೆಚ್ಚಿ ಹಸನಾಗಿ ಇರು ಎಂದೆಡೆಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಲಿಕಿಚ್ಚುಕಂಗೊಂಡು ಎನ್ನ ಕಾಡುತಿದೆ ರಂಗ 1 ವಾಸುದೇವನ ಗುಣಗಳ ಸ್ತುತಿಸದೆ ದು-ರಾಸೆಯೊಳು ಬಿದ್ದು ಕಾಡುತಿದೆಲೇಸಾಗಿ ನಾಯಿಬಾಲಕೆ ನಾರಾಯಣ ತೈಲಏಸುಬಾರಿ ತೀಡಿದರೆ ನೀಟಾಗುವುದೊ2 ಸಾಧು ಸಜ್ಜನರ ಸಂಗವ ಮಾಡಲೊಲ್ಲದೆಬಾಧಿಸುತಿದೆ ದುಷ್ಟಸಂಗದಿಂದಮಾಧವ ಭಕ್ತವತ್ಸಲ ಹಯವದನನೆನೀ ದಯಮಾಡಿ ನಿನ್ನಂತೆಮಾಡೆನ್ನ ಮನ 3
--------------
ವಾದಿರಾಜ
ಏನ ಹೇಳಲೆನ್ನ ಬುದ್ಧಿಹೀನತೆಯನಿಂದು ಹರಿಯೆ ಶ್ವಾನಕಿಂತ ನೀಚನಾದೆ ಧ್ಯಾನಿಸದೆ ಮರುಳಾದೆ ಪ. ಪಂಚವಿಂಶತ್ವದಲ್ಲಿ ಮಿಂಚುತ್ತಿರುವ ನಿನ್ನ ರೂಪ ಕಿಂಚಿತ್ತಾದರರಿಯದೆ ಕೀಳ್ಹಂಚಿನೊಳಸಂಚ ನಂಬಿ 1 ಮಾಯಾ ಶಕ್ತಿ ಪಾಶಬಂಧದಲ್ಲಿ ಸಿಲುಕಿ ಲೇಶ ಸ್ವಾತಂತ್ರ್ಯವರಿಯದಾಶೆಯೆಂಬ ಕಡಲೊಳಿಳಿದೆ 2 ಗಣನೆಯಿಲ್ಲದೆನ್ನ ಕೆಟ್ಟ ಗುಣಗಳೊಂದನೆಣಿಸದಿಂದು ಮೂರ್ತಿ ದೋರೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ಏನಗೈದೊಡೇನು ನಿನ್ನ ಬಿಡೆನು ನಾನೆಲೈ ಉದಧಿಶಯನ ಕೇಳೆಲೈ ಈ ಹದನ ಲಾಲಿಸೈ ಪ. ಎತ್ತ ಪೋದಡತ್ತ ನಿನ್ನ ಬೆನ್ನ ಹತ್ತುವೆ ನಿನ್ನ ಸುತ್ತಿ ಕಾಡುವೇ ನೀನೆತ್ತ ಪೋಗುವೆ 1 ಜಲಧಿಯಲ್ಲಿ ವಾಸಗೈದೆ ಬೇಸರಿಲ್ಲದೆ ಮೋದದೆ ನೀ ಏನಗೈದೆ 2 ಘೋರ ರೂಪಕಲಸದೆ ಕೆನ್ನೀರ ನೀಂಟಿದೆ ಕರುಳಮಾಲೆ ಧರಿಸಿದೆ ಕಪಟರೂಪ ತಾಳಿದೆ 3 ನಲಿದು ತಾಯ ತಲೆಯ ಕಡಿದು ಬಲಿದನೆನಿಸಿದೆ ಜಲಧಿಯನ್ನೆ ಕಟ್ಟಿದೆ ಛಲದಿ ದ್ವಿಜನ ಕೆಡಹಿದೆ 4 ಜಾರಚೋರನೆನಿಸಿ ಜಗವಗಾರುಗೊಳಿಸಿದೆ ಕುದುರೆಯೇರಿದೆ ಇನ್ನೇನು 5 ಇಷ್ಟು ಪಾಡುಪಟ್ಟ ನಿನ್ನ ಬಿಟ್ಟು ಪೋದೆನೆ ದಿಟ್ಟತನಕೆ ಭೀತಿಪಟ್ಟೆನೇ ನಿನ್ನ ಪಿಡಿಯದಿರ್ಪನೆ6 ಮೋಸಗಾರ ಶೇಷಶೈಲವಾಸನಹುದೆಲೈ ವಾಸಿಪಂಥವೇನೆಲೈ ಮೀಸಲಾಗಿ ಭಜಿಪೆ ನೋಡಲೈ7
--------------
ನಂಜನಗೂಡು ತಿರುಮಲಾಂಬಾ