ಒಟ್ಟು 7812 ಕಡೆಗಳಲ್ಲಿ , 132 ದಾಸರು , 3804 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ಥನರಸಿಯರು ಪ್ರಾರ್ಥಿಸಿ ಕೈಮುಗಿಯೆ ತೀರ್ಥಯಾತ್ರೆಗಳೆಲ್ಲಾ ಕ್ಷೇತ್ರ ಮೂರ್ತಿಗಳು ಗೆಲಿಸಲಿ ಪ. ರಾಮೇಶ್ವರ ಕಂಚಿ ಪ್ರೇಮದಿ ಕುಂಭಕೋಣಸ್ವಾಮಿ ಶ್ರೀ ರಂಗ ತೋತಾದ್ರಿಸ್ವಾಮಿ ಶ್ರೀ ರಂಗ ತೋತಾದ್ರಿಬೇಲೂರು ಚೆನ್ನನ ಮೊದಲೆ ಬಲಗೊಂಬೆ 1 ಅಹೋಬಲ ಮೊದಲಾದ ಆ ವೆಂಕಟಾದ್ರಿ ಅಲ್ಲಿರೊ ಅನಂತ ಅಳಗಿರಿಅಲ್ಲಿರೊ ಅನಂತ ಅಳಗಿರಿ ದರ್ಭಶಯನದೇವರ ಮೊದಲೆ ಬಲಗೊಂಬೆ 2 ದೇವ ಜನಾರ್ಧನ ಕಾಯೊ ಸಾರಂಗಪಾಣಿಭಾವ ಭಕ್ತಿಲೆ ನಮಿಸೇವ ಭಾವ ಭಕ್ತಿಯಲೆ ನಮಿಸೇವ ಚಕ್ರಪಾಣಿ ಬೇಗ ಗೆಲಿಸೆಂದು 3 ಅಕ್ಕ ಶ್ರೀಮುಷ್ಣಿವಾಸ ಮುಖ್ಯಚಲುವರಾಯದೇವಕ್ಕಳಿಗೆ ವರವ ಕೊಡುವೋಳುದೇವಕ್ಕಳಿಗೆ ವರವ ಕೊಡುವೋಳು ಕನ್ಯಾಕುಮಾರಿ ಮುಖ್ಯಳ ಮೊದಲೆ ಬಲಗೊಂಬೆ4 ಛಾಯಾಭಗವತಿ ನಮ್ಮ ಕಾಯೆ ಕರುಣಾಂಬುಧೆಸಹಾಯವಾಗಮ್ಮ ಕಾಲಕಾಲಸಹಾಯವಾಗಮ್ಮ ಕಾಲಕಾಲಕೆಬ್ರಮ್ಹನ ತಾಯ ಗೆದ್ದು ಬರಬೇಕು 5 ಸುಬ್ರಹ್ಮಣ್ಯ ಸಾಸಿ ಒಬ್ಬ ಶ್ರೀ ಕೃಷ್ಣರಾಯ ನಿರ್ಭಯದಿ ಸ್ವಾದಿ ನಿಲಯನೆನಿರ್ಭಯದಿ ಸ್ವಾದಿ ನಿಲಯನೆ ತನುಮನಉಬ್ಬಿ ವಂದಿಸುವೆ ಕರುಣಿಸು6 ಹಂಪಿವಿರೂಪಾಕ್ಷದಿ ನಿಂತು ಪೂಜೆಯಗೊಂಬಯಂತ್ರೋದ್ದಾರಕಗೆ ಒಲಿದವನೆಯಂತ್ರೋದ್ದಾರಕಗೆ ಒಲಿದ ರಾಮೇಶನಕಾಂತೆಯರ ಗೆದ್ದು ಬರಬೇಕು 7
--------------
ಗಲಗಲಿಅವ್ವನವರು
ಪಾರ್ಥಸಾರಥಿ ಪಾಲಿಸೆನ್ನ ಶ್ರೀಹರಿಯೆ ಪ ಅಂದು ಗಜನು ತಾನು ಬಂದು ತಾ ಬಂಧು ಬಳಗವ ಕೂಡಿ ಸೊಂಡಿ- ಲಿಂದ ನೀರನು ಕಲಕಲಾಕ್ಷಣ ಒಂದು ಮಕರ್ಹಲ್ಲಿಂದ ಪಿಡಿಯೆ ಮು- ಕುಂದ ನೀನೆ ಗತಿಯೆಂದರಾಕ್ಷಣ ಬಂದು ಒದಗಿದ್ಯೊ ಸಿಂಧುಶಯನನೆ 1 ದುರುಳಾಸುರನು ತನ್ನ ಕರುಳ ತನ ಕರುಳನಿಟ್ಟುರಿಯಲ್ಲಿ ಗರಳ ಹಾಕಿ ಬಾಧಿಸಲು ಖಳನು ಕಾರಣ ಕಂಬದಲಿ ಬಂದೆಳೆದು ಅವನುರ ಕರುಳ ಮಾಲೆಯ ಕರಾಳವದನವ ತೆರೆದು ತನ್ನಯ ಕೊರಳಲ್ಲಿರಿಸಿದ ಕೋಮಲಾಂಗನೆ 2 ಪಿತನ ತೊಡೆಯಲಿದ್ದ ಸುತನ ಕಂಡು ಸುತನ ಸುರುಚಿಯು ತಾನಾಗ ಹಿತದಂತ್ವಾಕ್ಯಗಳನು ನುಡಿಯಲು ಅತಿಬ್ಯಾಗದಲಜಸುತನ ನುಡಿ ಕೇ ಳುತಲಿ ತಪವನು ಚರಿಸಲಾಕ್ಷಣ ಪತಿತಪಾವನ ಪರಮ ಕರುಣದಿ ಸುತ ಧ್ರುವಗೆ ಸುಖವಿಟ್ಟ ಶ್ರೀಹರಿ3 ಬಾಡಿ ಬಳುಕುವ ದ್ವಿಜನ ನೋಡಿ ತಾ ನೋಡಿ ತಂದವಲಕ್ಕಿ ಬೇಡಿ ಆಡಿ ಭಕ್ತನ ಕೂಡ ನಯನುಡಿ ಮಾಡಿ ಕರುಣವ ತನ್ನ ದಯ ಸೂ- ರ್ಯಾಡಿ ಸಖಗೀಡಿಲ್ಲದರ್ಥವ ನೀಡಿದ್ಯೊ ಬಹು ರೂಢಿಗಧಿಕನೆ 4 ಕಡುಚÉಲ್ವೆಕರೆಯಲುಟ್ಟುಡುಗೆ ಉಟ್ಟ ಉಡುಗೆ ಸೆಳೆಯಲು ಕೃಪ್ಣೆ(ಯಿ)ದ್ದೆಡೆಗೆ ನಡೆದಸುರ ಪಿಡಿದೆಳೆಯೆ ಸೀರೆಯ ಕಡೆಯ ಕಾಣದೆ ಖಳನು ಧರೆಯೊಳು ಯುಡುಗೆಗಕ್ಷಯ ನುಡಿದ ಕೃಷ್ಣನೆ 5 ಸಿಂಧುಶಯನಾರವಿಂದನಯನಾರ- ವಿಂದ ನಯನ ಅಸುರರಿಗತಿ ಭಯಂಕರನಾ- ಗೆಂದಿಗಾದರು ನಿನ್ನ ನಾಮಸುಧೆ ಯಿಂದ ಸುಖ ಸುರಿವಂತೆ ಮಾಡು ಮು- ಕುಂದ ಭೀಮೇಶಕೃಷ್ಣ ನಿನ್ನ ಪ- ದಾಂಬುಜವ ತೋರಾನಂದದಿಂದಲಿ 6
--------------
ಹರಪನಹಳ್ಳಿಭೀಮವ್ವ
ಪಾರ್ವತೀಪತಿಯೆ ಎನ್ನಪಾಲಿಸುವುದು ಪ ದೂರು ನೋಡದೇ ಗುರುವ ಸಾರುವುದು ಸತತಾ ಅ.ಪ ಭಜಕರ ಸರ್ವಕಾವನ ನಿಜದಾಸರೊಳ್ಕೂಡಿಸಿ ಭಜನೆಯ ಮಾಡಿಸೋಬೇಗ ಭುಜಗಭೂಷಣನೆನೀನು 1 ನಂದಿ ವಾಹನನೆ ಎನ್ನಾ ಮಂದಮತಿಗಳ ಹರಿಸಿ ಕಂದುಗೊರಳನೆ ನೀನು ಆನಂದದಿಂದಲಿ ಕಾಯೋ 2 ಇಂದು ಗರ್ವವ ಬಿಡಿಸಿ ಕಾರಣಕರ್ತಹರಿಯೆ ಶ್ರೀರಮಣನ ತೋರೋ 3 ಭೂತನಾಥನೆ ನೀನು ಮಾತನು ಲಾಲಿಸುವುದು ದಾತಾನೆ ಸಲಹೊ ಎನ್ನಾ ಪಾತಕವನು ಹರಿಸಿ 4 ಶುದ್ಧಭಕುತಿಯನೆ ಕೊಟ್ಟುಸದ್ವೈಷ್ಣವರ ಪ್ರೀಯನೆ ಮಧ್ವಾಂತರ್ಗನಾದ ಮುದ್ದುಮೋಹನವಿಠಲನ ತೋರು 5
--------------
ಮುದ್ದುಮೋಹನವಿಠಲದಾಸರು
ಪಾಲನುತ ಶ್ರೀಶೈಲಮಂದಿರ ಮಲ್ಲಿಕಾರ್ಜುನ ರಕ್ಷಿಸು ಪ ಏಳುಕೊಳ್ಳಗಳೇಳು ನೆಲೆಗಳ ಮೇಲೆ ತೋರ್ಪ ಲಿಂಗನೆ ಕಾಲಕಾಲದಿ ಬಾಲನೆಂದೆನ್ನ ಮಲ್ಲಿಕಾರ್ಜುನ ರಕ್ಷಿಸು 1 ಶೀಲ ಭಕುತರ ಪಾಲಿಸಲು ಪಾತಾಳಗಂಗೆಯ ನಿರ್ಮಿಸಿ ಪಾಲಿಸಿದಿ ಬುವಿ ಪಾಲಿಸಿ ವರ ಮಲ್ಲಿಕಾರ್ಜುನ ರಕ್ಷಿಸು 2 ಸಾರಸೌಖ್ಯ ನೀಡುದ್ಧಾರ ಮಾಡಿದ ಮಲ್ಲಿಕಾರ್ಜುನ ರಕ್ಷಿಸು 3 ಅಂಗಜಹರ ಗಂಗಾಧರ ಗುರುಲಿಂಗಜಂಗಮಾತ್ಮಕ ಭವ ಮಲ್ಲಿಕಾರ್ಜುನ ರಕ್ಷಿಸು 4 ಕಾಲಕಾಲ ಕಾಲಕೇಶ್ವರ ಶೂಲಪಾಣಿಯೆ ನಂಬಿದೆ ಕಾಲನ ಮಹದಾಳಿ ಗೆಲಿಸೆನ್ನ ಮಲ್ಲಿಕಾರ್ಜುನ ರಕ್ಷಿಸು 5 ಕಳೆದೆ ದಿನಗಳ ಇಳೆಯ ಸುಖಮೆಚ್ಚಿ ತಿಳಿಯದೆ ತವಮಹಿಮೆಯ ಒಲಿದು ಕ್ಷಮಿಸೆನ್ನ ಬಾಲನೆಂದೆತ್ತಿ ಮಲ್ಲಿಕಾರ್ಜುನ ರಕ್ಷಿಸು 6 ಅಷ್ಟವರ್ಣ ವಿಶಿಷ್ಟಭಕ್ತಿಯ ಕೊಟ್ಟು ಕುರಣಾದೃಷ್ಟಿಯಿಂ ಅನುದಿನ ಮಲ್ಲಿಕಾರ್ಜುನ ರಕ್ಷಿಸು 7 ದುಷ್ಟಭವಕಿನ್ನು ಹುಟ್ಟಿಬರುವಂಥ ಕೆಟ್ಟ ಬವಣೆಯ ತಪ್ಪಿಸು ಇಷ್ಟದಾಯಕ ಮುಟ್ಟಿಪೂಜಿಪೆ ಮಲ್ಲಿಕಾರ್ಜುನ ರಕ್ಷಿಸು 8 ಪರಕೆ ಪರತರ ಪರಮಪ್ರಕಾಶ ವರದ ಶ್ರೀರಾಮಮಿತ್ರನೆ ಮರೆಯ ಬಿದ್ದೆನು ಕರುಣಿಸಿ ಮುಕ್ತಿ ಮಲ್ಲಿಕಾರ್ಜುನ ರಕ್ಷಿಸು 9
--------------
ರಾಮದಾಸರು
ಪಾಲಯಾ ಉರಗಾರಿ ಗಮನಾ | ಶ್ರೀ ಲಕ್ಷುಮಿ ರಮಣಾ | ಭಂಜನ ಸಾಗರ | ಕೀಲನ ಫಣಿಶಯನಾ | ಭಾಲಲೋಚನ ವಂದಿತ ಚರಣಾ | ತ್ರಿಲೋಕ ಜೀವನಾ | ವಾಲಿ ಮರ್ದನ ಶರಣಾಗತ ಜನ | ಕಮಲ ನಯನಾ 1 ವಾರಜಾನನ ವಾರಿಜ ಭ್ರಮರಾ | ಕರಿಭಯ ನಿವಾರಾ | ನೀಲ - ಶರೀರಾ | ಕೇಶವ ಕೇಯೂರ ಕೌಸ್ತುಭಧಾರ | ನೀರಜಾಸನನುತ ಯದುವೀರಾ | ಶ್ರೀರಂಗ ಗದಾಧರಾ | ಸುಜನ | ಹೃದ್ವನಜ ವಿಹಾರ ಧರಣೀಧರಾ 2 ಮಂದರೋದ್ದರ ಪತಿತ ಪಾವನ | ಕುಂದ ಕುಟುಲಮರದನಾ | ಸ್ಯಂದ ಜನಕ ಸಖಸ್ಮರಪಿತಹರಿ | ಗೋವಿಂದ ಧುರಿತ ಹರಣಾ | ನಂದಕಿಶೋರ ಶ್ರೀ ನಾರಾಯಣಾ | ಸುಂದರ ವದನಾ | ಮಂದರಕುಲರಿಸಹೋದರ ಮಹಿಪತಿ | ನಂದನ ಪ್ರಭು ಕೃಷ್ಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಪರೊಬ್ಬರಿಲ್ಲ ಪ ದಂಡಾದಿ ರಾಜ್ಯವು ಕೆಟ್ಟು ಪೋಕ ಪುಂಡರು ಹೆಚ್ಚಿ ಮಾರ್ಗವತೋರಿ ಕೊಟ್ಟು ಪೆಂಡಾರರಿಗೆ ಸುಲಿಗೆ ಕೊಟ್ಟು ಭೂ ಮಂಡಲದೊಳಗಣ ಜನರೆಲ್ಲ ಕೆಟ್ಟು 1 ಎತ್ತು ಮುಟ್ಟುಗಳೆಲ್ಲ ಹೋಗಿ ಬೀಳು ಬಿದ್ದು ಗದ್ದೆಯ ಪೈರು ನಿಸ್ಥಳವಾಗಿ ತುತ್ತುರಿಗಳು ಸುಟ್ಟು ಹೋಗಿ ದಂಡು ನಿತ್ತು ಪ್ರಜೆಗೆ ಮನೆ ಮುಖವಿಲ್ಲದಾಗಿ 2 ಕರಿದೋ ಬಿಳಿದೋ ಕಾಣೆ ಕ್ಷೀರ ಕೊಡುವ ತರುಗಳಿಲ್ಲವು ಮರ ಒಣಗಿ ಅರಮನೆ ಯತ್ತಣಿಂ ಘೋರ ಕರೆ ಕರೆಯೊಳು ಬಂದಿತಯ್ಯ ಗ್ರಹಚಾರ 3 ಗಂಜಿ ಗಾಸ್ಪದವಿಲ್ಲವಾಯ್ತು ಮೂರು ಸಂಜೆಯ ದೀಪಕೆ ಕೊಳ್ಳಿ ಬೆಳಕಾಯ್ತು ಅಂಜನ ಪಾತ್ರೆ ಹೆಚ್ಚಾಯ್ತು ಬದುಕಲು ನಾಲ್ಕು ವರ್ಣ ಒಂದಾಯ್ತು 4 ಕಾಲಗತಿಯು ಬಲು ಬಿರುಸು ಮುಂದೆ ಬಾಳುವ ಜನರಿಗೆ ನೃಪರಿಂದ ಹೊಲಸು ಶೂಲಿ ಸಾಯುಜ್ಯವ ಬಯಸು ಲಕ್ಷ್ಮೀ ಲೋಲನ ನಾಮವ ಮನದೊಳುಚ್ಚರಿಸು 5
--------------
ಕವಿ ಪರಮದೇವದಾಸರು
ಪಾಲಿಸಬೇಕಯ್ಯ ಪವಮಾನ ದೂತಾ ಪ. ಬಾಲಕನು ಮಾಡಿರುವ ಅಪರಾಧವೆಣಿಸದೆಲೆ ಅ.ಪ. ಕಾಲ ಶಿಷ್ಟರೊಡೆಯಮುಟ್ಟಿ ಭಜಿಸುವ ನಿನ್ನ ಘಟ್ಟಿ ಜ್ಞಾನಮೃತವಕೊಟ್ಟು ಸಲಹಲಿ ಬೇಕು ದಿಟ್ಟ ಪುರುಷ 1 ಮಧ್ವ ದಾಸರೊಳ್ ನಿಂದು ತಾರತಮ್ಯ ಪಂಚಭೇದಪದ್ಧತಿಗಳನುಸರಿಸಿ ತಿದ್ದಿ ತಿಳುಹಿದೆಯೋ ಶ್ರೀಮಧ್ವರಾಯರೇ ಜಗಕೆಲ್ಲ ಗುರುವೆಂಬಶ್ರದ್ಧೆಯನು ಪುಟ್ಟಿಸಿದೋ ಶೇಷಪದ ಯೋಗ್ಯ 2 ಮಂದಮತಿಯೆಂದು ನಾ ನಿಂದ್ಯ ಮಾಡದೆ ಮನಮಂದಿರದಿ ಛಂದದಲಿ ಪೊಳೆಯಬೇಕುಮಂದರೋದ್ಧರನ ಪದ ಕುಂದದಲೆ ಭಜಿಸುವಸಿಂಧುಶಯನ ತಂದೆವರದವಿಠಲದಾಸ 3
--------------
ಸಿರಿಗುರುತಂದೆವರದವಿಠಲರು
ಪಾಲಿಸು ದಯಾಕರನೆ ನೀಲಮೇಘಶ್ಯಾಮ ಪಾಲಿಸು ದಯಾಕರನೆ ಪ ಪಾಲಿಸು ಎನ್ನ ಕರುಣಾಳು ವ್ಯಾಲಮಾಲ ಬಾಲನ ದಯದಿಂ ಮಾಲತುಲಸೀವನ ಅ.ಪ ಬಂದುಬಿದ್ದೆನಯ್ಯ ಸಂಸಾರ ದಂದುಗ ವೆಂಬ ಮಾಯಬಲೆಯೊಳು ನೊಂದು ಕಾಯ ಬಂಧನಿವಾರಿಸಯ್ಯ ನೊಂದಿಸಿ ಅರ್ಥವ ತಂದು ಸತಿಯು ಸುತ ರೆಂದು ಸಲಹಿ ಯಮ ಬಂಧಕೀಡಾದೆನು ಮುಂದೆ ಇಂಥ ಬವಣಿಂದೆ ತಾರದೆನ್ನ 1 ರಿಣವೆಂಬ ಸೂತಕಿದು ಎನ್ನಗೆ ಘನವಾಗಿ ಕಾಡುವುದು ಇನ್ನಿದು ಜನು ಜನುಮದಿ ಬಿಡದು ಬೆನ್ನತ್ತಿ ಬರ್ಪುದು ಗನ್ನಗತಕನಾಗಿನ್ನು ಭವಭವಂಗ ಬನ್ನ ಬಡಲಿಬೇಕೊ ಮನ್ನಿಸಿ ದಯದಿಂ ನಿನ್ನ ಕೃಪೋದಕ ವನ್ನು ತಳೆದು ಬೇಗೆನ್ನ ಶುದ್ಧಮಾಡು 2 ಆಗಿಹೋದದ್ದ್ಹೋಯ್ತು ಮುಂದಿಹ್ಯ ಭೋಗ ಬೇಡ ಜಗತ್ತು ಪಾಲನೆ ಬಾಗುವೆ ಮನವರಿತು ಚರಣಕೆ ಶಿರವಿತ್ತು ಭೋಗಭಾಗ್ಯದಾಸೆ ನೀಗಿಸಿ ಈ ಭವ ಸಾಗರ ದಾಂಟಿಸು ಯೋಗಿಗಳರಸನೆ ನಾಗಶಯನ ದಯಮಾಡಿ ದಾಸನ ದು ರ್ಭೋಗ ದೂರಮಾಡು ಜಗಮೋಹ ಶ್ರೀರಾಮ 3
--------------
ರಾಮದಾಸರು
ಪಾಲಿಸು ನಮ್ಮಮ್ಮ ಮುದ್ದು ಶಾರದೆ ನಮ್ಮ ನಾಲಿಗೆ ಯೊಳು ತಪ್ಪುಬಾರದೆ ನೀಲ ಕುಂತಳೆ ತಾಯೀ ನಿನ್ನ ನಂಬಿದೆ ಕಾಯೆ ಪ ಅಕ್ಷರಾಕ್ಷರ ವಿವೇಕಿಯೇ ನಿಮ್ಮ ಕುಕ್ಷಿಯೊಳೀರೇಳು ಲೋಕವೆ ಸಾಕ್ಷಾತ್ ಸ್ವರೂಪಿಣಿ ಮೋಕ್ಷದಾ ಯಕಿಯೆ ತಾಯೆ ಪಾಲಿಸಮ್ಮಮ್ಮ 1 ಸರ್ವಾಲಂಕಾರ ಮೂರ್ತಿಯ ಚರಣ ಭಜಿ ಸುವೆ ಕೀರ್ತಿಯ ಗುರುಮೂರ್ತಿ ಪರಮಾ ನಂದದೊಳ್ ಪಾಲಿಸಮ್ಮಮ್ಮ 2 ಶೃಂಗಪುರದ ನೆಲೆವಾಸಿಯೆ ನಿಮ್ಮ ಸಂಗೀತ ಶಾಸ್ತ್ರ ವಿಶಾಲಯ ಭೃಂಗ ಕುಂತಳೆ ತಾಯೆ ಭಳಿರೆ ಬ್ರಹ್ಮನರಾಣಿ ಪಾಲಿಸಮ್ಮಮ್ಮ 3
--------------
ಕವಿ ಪರಮದೇವದಾಸರು
ಪಾಲಿಸು ಶ್ರೀಶನೆ ಪರಮ ಪವಿತ್ರನೆ ಪಾವನ್ನ ಚರಿತನೆ ಪಾಲಿಸೆನ್ನ ಪ ಕಾಲಕಾಲಕೆ ನಿನ್ನ ಮಹಿಮೆಯ ತೋರಿಸಲಹುದು ಸರ್ವವ್ಯಾಪಕ ಮಾಯಾದೇವಿಯರಮಣ ಶ್ರೀಪತೆ ಕಾಯೊ ಶ್ರೀಹರಿವಾಸುದೇವನೆಅ.ಪ ವಾಸುದೇವನೆ ನಿನ್ನ ಸೋಸಿಲಿ ಭಜಿಪರ ಕ್ಲೇಶಗಳ್ಹರಿಸಿ ಸಂತೋಷವಿತ್ತು ದೋಷದೂರನ ನಾಮ ಆಸೆಯಿಂದ ಭಜಿಪರಸಂಗವನೂ ನೀಡೆನುತ ಬಿನ್ನೈಸುವೆನೂ ಎನ್ನೊಡೆಯ ನೀನೆಂದೆನುತ ಅಡಿಗಳಿಗೆರಗುವೆನೂ ಧೃಡಭಕುತಿ ನಿನ್ನೊಳಗಿರಿಸಿ ರಕ್ಷಿಪುದೆಂದು ಬೇಡುವೆನೂ ನುಡಿನುಡಿಗೆ ನಿನ್ನಯ ನುಡಿಗಳನು ನುಡಿವಂಥ ಭಕ್ತರ ಅಡಿಗಳಾಶ್ರಯ ಕೊಟ್ಟು ಕಾಯ್ವುದು ಬಡವನೆನ್ನಲಿ ಬೇಡ ಎನ್ನನು ಬಡವರಾಧಾರಿ ಶ್ರೀಹರಿ 1 ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ ಬಿಂಕದಿಂದಲಿ ನಿಂತು ನೋಡುತಲಿ ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ ಉದಯ ಭಾಸ್ಕರನಂತೆ ಪೊಳೆಯುತ್ತ ಮುದದಿ ಸಿರದಿ ಕಿರೀಟ ಹೊಳೆಯುತ್ತ ಸದಮಲಾತ್ಮಕ ಸತ್ಯಮೂರುತಿ2 ಹೃದ್ಗೋಚರನಾಗು ಪದ್ಮಾನಾಭ ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ ಮನ್ಮನದ ಭಯಗಳವದ್ದು ಬಿಸುಡುತ ಸಲಹೊ ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ- ಪಾದಕೆ ನಮಿಪೆ ಶ್ರೀಹರಿಯೆ ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ ತೋಯಜಾಕ್ಷನೆ ತೋರು ನಿನ್ನಯ ಚಾರು ಚರಣಕೆ ಬಾಗಿ ನಮಿಸುವೆ ಕಾಯ್ವುದೆನ್ನನು ಕಮಲನಾಭವಿಠ್ಠಲನೆ ಶ್ರೀಹರಿ ವಾಸುದೇವನೆ 3
--------------
ನಿಡಗುರುಕಿ ಜೀವೂಬಾಯಿ
ಪಾಲಿಸೆ ಎನ್ನ ನಾಮಗಿರಿಯಮ್ಮ ಹರಿಗುರುಗಳ ಕೃಪಾಬಲ ಎನ್ನಲ್ಲಿರುವಂತೆ ಪ ಕರುಣದಿ ನೋಡೆ ನಾಮಗಿರಿಯಮ್ಮ ಇಂದಿರೆ ಎನ್ನ ಸುಖಿಯನ್ನೆ ಮಾಡೆ ವಾರಿಜಮುಖಿ ನರಪಾಲಾಧಮರ ದುರ್ಮುಖವ ನೋಡಿಸದಂತೆ 1 ಸುಖಚಿದಾಕಾರೆ ಎನ್ನ ಮನೆಗೆ ದಯವಿಟ್ಟು ಬಾರೆ ನಾರೆಯರಲ್ಲಿ ಸರಿ ನಿನಗಾರೆ ಪಂಕಜನೇತ್ರೆ ಕಿಂಕರನೆಂದು ಆತಂಕ ಬಿಡಿಸೆ ತಾಯೆ 2 ಚರಣಾರವಿಂದ ಸೇವಕನಲಿ ಕೃಪೆಯಿಟ್ಟು ಮಂದಹಾಸದೆ ಬಂದು ಸುಖಬುದ್ಧಿಯಿಂದ ಇಂದಿರಾದೇವಿ ಚಂದ್ರವದನೆ ಎನ್ನ ಮಂದಿರದೊಳಗಿದ್ದು 3 ಶ್ರಿತ ಸುರಧೇನು ದೇವಿ ನೀನೆಂದು ಇಂದಿರೆ ಇಷ್ಟುಪೇಕ್ಷೆ ನಿಂಗೇನು ಕಷ್ಟಗಳೆಲ್ಲ ನಷ್ಟವಾಗುವ ಪರಿ ದೃಷ್ಟಿ ಎನ್ನೊಳಗಿಟ್ಟು 4 ನರಹರಿ ಜಾಯೆ ನಾಮಗಿರಿಯಮ್ಮ ಬಂದು ನೀ ಕಾಯೇ ಪೇಳುವುದೇನು ಸರ್ವಜ್ಞ ತಾಯೇ ವಾರಿಜಮುಖಿ ನಿಜ ವರ್ಣಾಶ್ರಮಧರ್ಮ ಚ್ಯುತಿ ಎಂದೂ ಬರದಂತೆ 5
--------------
ವಿದ್ಯಾರತ್ನಾಕರತೀರ್ಥರು
ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾರಿಗೆ ಬಂದೆನುಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ ಪ. ಆದಿ ಬ್ರಹ್ಮನರಾಣಿಯೆ ವೇದಕ್ಕ ಭಿಮಾನಿಯೆಮೋದ ಗಾಯನ ಕುಶಲಳೆಮೋದ ಗಾಯನ ಕುಶಲಳೆ ಸರಸ್ವತಿ ನೀ ದಯಮಾಡಿ ಮತಿಯ ಕೊಡು 1 ಹೊನ್ನವರೆ ಹೊಸ ಕಪ್ಪು ಬೆನ್ನಿನ ಮ್ಯಾಲಿನ ಹೆರಳುಕಿನ್ನರಿ ನಿನ್ನ ಬಲಗೈಯಕಿನ್ನರಿ ನಿನ್ನ ಬಲಗೈಯ್ಯಲಿ ಹಿಡಕೊಂಡುಖನಿ ಬಾ ನಮ್ಮ ವಚನಕ್ಕೆ 2 ಮಿತ್ರಿ ಸರಸ್ವತಿಗೆ ಮುತ್ತಿನ ಉಡಿಯಕ್ಕಿಮತ್ತೆ ಮಲ್ಲಿಗೆಯ ನೆನೆದಂಡೆಮತ್ತೆ ಮಲ್ಲಿಗೆಯ ನೆನೆದಂಡೆ ತಂದಿದ್ದೆಪ್ರತ್ಯಕ್ಷವಾಗ ಸಭೆಯೊಳು3 ಅರಳು ಮಲ್ಲಿಗೆ ನೆನೆದಂಡೆ ತಂದಿಹೆತಡೆಯದೆ ನಮಗೆ ವರವ ಕೊಡು 4 ಗುಜ್ಜಿ ಸರಸ್ವತಿಗೆ ಗೆಜ್ಜೆ ಸರಪಳಿಯಿಟ್ಟು ವಜ್ರಮಾಣಿಕ್ಯ ದಾಭರಣವಜ್ರಮಾಣಿಕ್ಯ ದಾಭರಣ ಭೂಷಿತಳಾಗಿನಿರ್ಜರೊಳುತ್ತಮಳೆ ನಡೆ ಮುಂದೆ 5 ಹರದಿ ಸರಸ್ವತಿ ಸರಿಗೆಸರಪಳಿಯಿಟ್ಟುಜರದ ಸೀರೆಯನೆ ನಿರಿದುಟ್ಟು ಜರದ ಸೀರೆಯನೆ ನಿರಿದುಟ್ಟು ಬಾರಮ್ಮದೊರೆ ರಾಮೇಶನ ಅರಮನೆಗೆ6
--------------
ಗಲಗಲಿಅವ್ವನವರು
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ಪ. ಶೀಲಗುಣ ನಿನ್ನ ಏನು ಬೇಡುವುದಿಲ್ಲೊ ಕಾಲರೂಪನೆ ನಿನ್ನನು | ಇನ್ನು ಅ.ಪ. ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ ಒಂದು ಮನೆಯೊಳಗೆ ಇದ್ದು ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ ಒಂದೊಂದರಲಿ ಇರುವ ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ ಒಂದೆರಡು ಮಾಳ್ಪ ಜಗವ ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ ಒಂದೊಂದು ಮನಕೆ ತೋರೋ | ಸ್ವಾಮಿ 1 ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ ಎರಡು ವಿಧ ಸಮ ತಿಳಿದರೆ ಎರಡು ರೂಪಗಳನು ಒಂದಾಗಿ ಭಾವಿಸುತ ಎರಡೊಂದು ಜೀವ ತಿಳಿದು ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ ಎರಡು ವಿಧ ಕರ್ತನೆಂದು ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ ಎರಡು ರೂಪದಲಿರುವ ಪೊರೆವ 2 ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ ಮೂರು ಮಾರ್ಗದಲಿ ನಡೆದು ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ ಮೂರಾರು ವಿಧ ಭಕ್ತಿಯಲಿ ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ ಮೂರು ಶುದ್ಧಿಯಲಿ ಗೆದ್ದು ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ ಮಾರುತಿಯ ಮತದಿ ನೆಲಸಿ | ತಿಳಿಸಿ 3 ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ ದಾನಯಾಚಕ ಭಾರ್ಗವ ವಾನರರಿಗೊಲಿದನೆ ವೇಣುಹಸ್ತರೂಪಿ ಮಾನವಿಲ್ಲದ ಕಲ್ಕಿಯೆ ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು ನಾನು ವರ್ಣಿಸಲು ಅಳವೆ ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ ಭಾನುಪ್ರಕಾಶ ಹರಿಯೆ | ಸಿರಿಯೆ 4 ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು ಮೆರೆವ ಕುಂಡಲದ ಕದಪು ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು ಕರದಲ್ಲಿ ಆಯುಧಗಳು ಸಿರಿ ಭೂಮಿ ಎಡಬಲದಿ ಸುರನದಿಯ ಪೆತ್ತಪಾದ ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ ಪರಿ ಪರಿಯ ರೂಪ ತೋರೊ ಸ್ವಾಮಿ 5
--------------
ಅಂಬಾಬಾಯಿ
ಪಾಲಿಸೆನ್ನ ಪಾರ್ವತಿ ರನ್ನಾ ಪ ಪಾರ್ವತಿ ಪರ್ವತ ರಾಜಕುಮಾರಿಯೆ ಘನ್ನ ಅ.ಪ. ಸತಿ ಸುಮ್ಮನೆ-ದೊಳಗಿದ್ದು ಪರಿಪಾಲಿಸೆ ಬೊಮ್ಮನ ಸೊಸಿಯೆ 1 ಸತಿ ಅಂಬಕೇಶನ ಜನನಿ ಜಗದಂಬೆ ಭವಾನಿಯೆ 2 ಪಾದ ಸತಿ 3
--------------
ತಂದೆವರದಗೋಪಾಲವಿಠಲರು
ಪಾಲಿಸೆನ್ನನು ಪಂಪಾಕ್ಷೇತ್ರವಾಸ ಫಾಲಲೋಚನ ಶಂಭೋ ವ್ಯೋಮಕೇಶ ಪ ನೀಲ ಲೋಹಿತ ವೀತ | ಚೈಲ ಭೂಷಿತ ಭಸಿತ ಕಾಲಾರಿ ಶಿವ ದ್ರೌಣಿ | ಶೂಲ ಪಾಣಿ || ಕಾಲ ಕೂಟವ ಮೆದ್ದು ಕೊಂಡ ಮೇತೌಷಧವನಿತ್ತು 1 ವ್ಯಾಧರೂಪದಿ ರಣದಿ ಕಾದು ಪಾರ್ಥಗೆ ಸೋತು ನೀದಯದಿ ದಿವ್ಯಾಸ್ತ್ರ ಕರುಣಿಸಿದೆಯೋ ಮೇದಿನೀಶಗೆ ಶಾಸ್ತ್ರ ಬೋಧಿಸಿದ ಮುನಿವರ್ಯ ವೇದನಂದನ ನಿನ್ನ ಪಾದಕ್ಕೆ ನಮಿಸುವೆನು 2 ಕಾಮಾರಿ ಸುಪವಿತ್ರ | ಸೋಮಾರ್ಕಶಿಖಿ ನೇತ್ರ ಶಾಮಸುಂದರವಿಠಲ ಸ್ವಾಮಿ ಮಿತ್ರ ಭೀಮ ಪಾವನಗಾತ್ರ ಪ್ರೇಮಾಬ್ಧಿ ಸುಚರಿತ್ರ ಕಳತ್ರ | ಮಹಿಮ ಚಿತ್ರಾ 3
--------------
ಶಾಮಸುಂದರ ವಿಠಲ