ಒಟ್ಟು 16359 ಕಡೆಗಳಲ್ಲಿ , 135 ದಾಸರು , 7416 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಾಲದಾಸರ ಸ್ಮರಣೆ | ಬಹುತಾಪತ್ರಯದ ನಿವಾರಣೆ ಪ ಶ್ರೀಪತಿ ವೇಂಕಟೇಶನ | ಸಾಪರೋಕ್ಷದಿ ಕಂಡುಹಿಗ್ಗುತವ್ಯಾಪ್ತದರ್ಶಿಗಳಾಗಿ ಭಕ್ತಿಲಿ | ಆಪರಂತಪನೊಲುಮೆಗಳಿಸಿದ ಅ.ಪ. ಬಾಲ್ಯತನದಿ ವೇದಮಾತಾ | ಎಂಬಗಾಯತ್ರಿ ಮಂತ್ರವು ಜಪ್ತಾ |ಸೂರ್ಯಾಂತರ್ಗತನಾದ | ಹರಿಯನ್ನು ಕಾಣುತಾಕಾರ್ಯೋನ್ಮುಖನು ಆದ | ಪ್ರಶ್ನೆಗಳ ಪೇಳಲು 1 ಇರಲೊಂದು ಕಾಲಕ್ಕೆ ವಿಜಯಾ | ದಾಸರ್ ಬರವಾಯ್ತು ಕೇಳಿರಿ ಚರ್ಯಾ || ವರ ವಿಜಯ ದಾಸಾರ್ಯರೆಂಬರ | ಪ್ರತಿಭೆಯಾವರಣ ಮುಸುಕಿಲಿನಿರುತ್ತರರು ಆಗಿಹರ್ | ಪ್ರಶ್ನೋತ್ತರಗಳ ಕೇಳಲು2 ಮೂಷಕ | ವರಸುವಾಹನನಂಶ ಸಂಭವ 3
--------------
ಗುರುಗೋವಿಂದವಿಠಲರು
ಗೋಪಾಲವಿಠ್ಠಲ ನಿನ್ನ ಪೂಜೆ ಮಾಡುವೆನು ಕಾಪಾಡೊ ಈ ಮಾತನು ಪ ಅಪರಾ ಜನುಮದಲಿಡುವನೆ ಮ್ಯಾಲೆ ನೀ ಪ್ರೀತಿಯನು ಮಾಡಿ ನಿಜದಾಸರೊಳಿದು ಅ.ಪ ಶ್ರುತಿಶಾಸ್ತ್ರ ಪುರಾಣ ಮಿಕ್ಕಾದ ಗ್ರಂಥಗಳ ಸತತ ಅಭ್ಯಾಸ ಮಾಡಿ ದಾನ ವ್ರತಗಳನೆ ಬಿಡದೆ ಮಾಡಿ ತೋಪಾಸನಗಳನು ಮಾಡಿ ಮಾಡಿದೆನು ಚ್ಯುತಿದೂರ ನಿನ್ನ ಕೊಂಡಾಡಿದೆ 1 ಕ್ಷೋಣಿಯೊಳಗೆ ನಡಿಸುತ ಮೇಣು ಧನ್ಯನ್ನ ಮಾಡು ಪರಿ ಕೀರ್ತಿ ತುಂಬಿರಲಾಗಿ ಧ್ಯಾನದಲಿ ಅಮರರಿಗೆ ಬೆಡಗುಗೊಳಿಸುವ ದೇವಾ2 ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ ಕಿಂಕರಗೆ ಲೌಕಿಕದ ಡೊಂಕು ನಡತೆಯ ಬಿಡಿಸಿ ಮಂಕು ಜನುಮ ಜನುಮದಲ್ಲಿದ್ದ ಪಂಕವಾರವ ತೊಲಗಿಸಿ ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು ನೀನೆ ವಿಜಯವಿಠ್ಠಲಯೆಂದು ಅಂಕುರವ ಪಲೈಸಿ ಫಲಪಾಪ್ತಿಯಾಗದೊ3
--------------
ವಿಜಯದಾಸ
ಗೋಪಿ ಚಂದನದಿಂದ ಎ ನ್ನೊಡೆಯ ಮಧ್ವಾರ್ಯ ಹೃದಯವಾಸಾ ಕೃಷ್ಣ ಪ. ಮೃಡಸಖ ನಿನ್ನಯ ರೂಹವ ತೋರೆ ಕಡಲಿಂದೊಡನೆ ಬಂದೆ ಆನಂದತೀರ್ಥರ ಮುಂದೆ ನಿಂದೆ ಅ.ಪ. ಗೆಜ್ಜೆ ಕಾಲ್ ಕಡಗ ಸಜ್ಜಿನಿಂದಿಟ್ಟು ಮಜ್ಜಿಗೆ ಕಡಗೋಲು ನೇಣು ಸಹ ಸಜ್ಜನರ ಸಲಹಲು ಮಧ್ವಾರ್ಯರ ಮುಂದೆ ಗೆಜ್ಜೆ ಧ್ವನಿ ಮಾಡಿ ಕುಣಿಯುತ ಕೃಷ್ಣ 1 ಉಟ್ಟ ಪೀತಾಂಬರ ಉಡಿಗೆಜ್ಜೆ ವಡ್ಯಾಣ್ಯ ಇಟ್ಟು ಕೌಸ್ತುಭಹಾರ ತುಳಸಿಮಾಲಾ ಕೊಟ್ಟು ಅಭಯ ಹಸ್ತ ಸಲಹುವೆನೆಂಬಾ ಬಿರುದಿಟ್ಟು ಕಂಕಣ ತೊಟ್ಟು ಶ್ರೀ ಕೃಷ್ಣ 2 ಮಕರಕುಂಡಲ ಕಿರೀಟ ಶೋಭಿಸುತಲಿ ಅಕಳಂಕ ಚರಿತ ಶ್ರೀ ಶ್ರೀನಿವಾಸ ನಿಖಿಲ ಬ್ರಹ್ಮಾಂಡದೊಳೆಲ್ಲೆಲ್ಲು ಕಾಣೆ ಸಕಲ ದೇವರ ದೇವಾ ಶ್ರೀ ಕೃಷ್ಣ ಪ್ರಭುವೆ 3
--------------
ಸರಸ್ವತಿ ಬಾಯಿ
ಗೋಪಿ ನಿನ್ನ ಬಾಲನ ಮಾಡುವ ಆಟದ ಪರಿಯನು ಪ ತುಡುಗಿಲಿ ಗೋರಸ ಕುಡಿವಾ | ಅವ | ಘಡಿಸಲು ಕಣ್ಣನೆ ಬಿಡುವಾ | ಹಿಡಿಯಲು ಬರೆ ಬೆನ್ಗೊಡುವ | ಅಡಿ | ಇಡುತಲಿ ತಿರುಗದೆ ಓಡುವನವ್ವಾ 1 ಕೊಡಮಸರಿಗೆ ಬಾಯ್ದೆರೆವಾ | ತಾ | ಬೇಡುವ ಪಸರಿಸಿ ಕರವಾ | ಕೊಡಲಿ ದಣಿಯದೆ ಸುರಿವಾ | ನ | ಟ್ಟಡವಿಲಿ ನಿಂದು ಹೊರೆವನವ್ವಾ 2 ಕೊಳಲನೂದಿ ಹೊಳೆವಾ | ಹೆಂ | ಗಳೆಯರ ಸನ್ಮತಿಗಳೆವಾ | ಅಳುಕದೆ ವಾಜಿಲಿ ನಲಿವಾ | ಇಳೆ | ಯೊಳು ಮಹಿಪತಿ ಸುತ ಪ್ರಭು ಲೀಲೆವ್ವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ನೋಡಮ್ಮಾ ಪ ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ| ದೇವಿಮಗನಾಗಿ ಬಂದಿಹನೆ ನರರಂದದಿ ನಮ್ಮಾ ಭಾವಿಸಿ ಬ್ರಹ್ಮನ ಜನಕನ ಶಿಶುವೆಂದು ಮುದ್ದಾಡಿಸುವಾ ಸಂಭ್ರಮಾ1 ಮುಖಸಾರಭೋಕ್ತನಿಗೆ ಮೊಲೆ ಹಾಲನುಣಿಸಿ| ಮಜ್ಜನ ಗೈಸಿ| ಪ್ರಕಟಿದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ| ಸುಖಯೋಗ ನಿದ್ರೆಯುಳ್ಳಂಗೆ ಮಲಗೆಂದು ಜೋ ಜೋ ಎಂಬಳಾಕೆ 2 ಆವ ಯೋಗ ಮಾಯದಲಿ ಮೂಜಗವಾಡಿಸುವ| ಆವ ಮುಂಜರಗ ಸಿಡಿದು ಬೆಣ್ಣೆ ಬೇಡುತ ಕುಣಿವಾ| ಗೋಪಿ ಕೈಯೊಳಾಡುವಾ| ಆವನಲಿ ಮಹಿಪತಿ-ಸುತ ಪ್ರಭು ಲೀಲೆಯ ಕಣ್ಣಲಿ ನೋಡಿ ಸುಖಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ಬಾಲನೇ ಪ ಮುದ್ದು ಕುಂಡಲಧರ ಮಿದ್ದು ಚಪ್ಪಿರವನು1 ಎತ್ತಿಕೊಳಲು ಉಗುರೊತ್ತುವ ನೆದಿಯಲಿ 2 ಗುರುಮಹಿಪತಿ ಪ್ರಭು ಚರಿತವ ತಿಳಿಯದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ಜನಪಾಲ ಪಾವನ ತರಲೀಲ ಲಕ್ಷ್ಮೀಲೋಲ ಕಾಲನಮಿತ ಸುರಜಾಲ ಸೇವಿತ ಶೌರಿ ಪ ವಂದಿತ ಸುರಮುನಿ ವೃಂದ ಭಕುತಜನ ಬಂಧುವಾಗಿರುವ ಗೋವಿಂದ ಗೋಪಾಲದೇವ ಮಂದಹಾಸ ಬಲಿ ಬಂಧನ ಮುರಹರ ಸಿಂಧು ಶಯನ ಗೋಪಿಕಂದ ಮುಕುಂದ 1 ಕಂಸಾರಿ ಕರುಣಾಭ್ದಿ ಶೃಂಗಾರಿ ಸುಜನ ಮನೋರಥ ಸುರತರು ಹಾರ ಹೀರ ಗಂಭೀರ ವೈಯಾರ 2 ಅಂಬುಜ ಭವನುತ ಶಂಬರಾರಿಯಪಿತ ಜಂಭಾರಿ ನಮಿತ ಹೇರಂಬ ಜನಕಪ್ರೀತ ಕಂದರ ಕಮಳಾಂಬಕ ರಮಣ 3 ರಾಗಿ ಜನರ ಭವರೋಗ ಹರಣಹರಿ ನಗಧರ ಸಗರ ವಂಶೋದ್ಧಾರ ಖಗವರ ಗಮನ ಸುಗುಣ ಗಂಭೀರ 4 ದುರಿತ ಸಂಹಾರಿ ಕರದಿ ಚಕ್ರಧಾರಿ ಸುರರ ಸಿರಿ ಧುರ ಧೀರ ಚಿಪ್ಪಳಿವಾಸ ವೇಣುಗೋಪಾಲ 5
--------------
ಕವಿ ಪರಮದೇವದಾಸರು
ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಪ ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ | ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ || ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು | ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ 1 ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ | ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ || ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ | ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ 2 ರಕ್ಕಸರ ಗಂಡ ನಮ್ಮ ರಾಜ್ಯದೊಳಗಿವಗಿನ್ನು | ತಕ್ಕ ಬುದ್ದಿಯ ಪೇಳುವರದಾರು ಮೀರಿದ ಗೋಪಗೆ || ಸಿಕ್ಕ ಪಿಡಿದೇವೆಂದರೆ ಸಿಕ್ಕನಮ್ಮ ಇವ ಗುಡಿವಡ್ಡಿ ಬೇಡವೇ | ಕಕ್ಕಸದಲಿ ಬಲು ಕಕ್ಕಲಾತಿಯಲಿ 3 ಬಿರಬಿರನೆ ತಾ ಬಂದು ಬೆದರಿ ಎನಗಂದು | ಹರವಿಯ ಹಾಲು ಕುಡಿದಾ ತಾ ಎತ್ತ ಓಡಿದನೆ || ವಾರಿಗಣ್ಣಿನಿಂದಲಿ ನೋಡಿ ಒದಗಿ ಬಳಿಗೆ ಬಂದು | ತೋರವಾದ ಕುಚಗಳ ಪಿಡಿದಾನೆ ಬಲಿದನೇನೆ 4 ಹಾರ ಪದಕವು ಹಿಡಿ ಹಿಡಿ ಎಂದು ಎನ್ನ ಕೂಡ | ಸರಸವನಾಡಲಿಕ್ಕೆ ಅರಸನೇನೆ ನಮಗೆ ಪುರುಷನೇನೆ || ಪುರುಷರು ಕಂಡರೆನ್ನ ಪರಿಪರಿ ಬಾಧಿಸ್ಯಾರು | ತರಳನ ಕರೆದ್ಹೇಳು ತಿದ್ದಿ ನೀನು ಇವಗೆ ಬುದ್ಧಿ5 ಚಂಡನಾಡುತಲಿ ಚಿಕ್ಕ ಮಿಂಡಿಯರ ಕಂಡು ತಾನು | ಚಂಡು ಅಂತ ಕುಚಗಳ ಪಿಡಿದಾನೆ ಇಂಥದುಂಟೇನೆ || ಭಂಡು ಮಾಡತಾನೆ ಭಂಡಿಯ ಗೋವಳಗಿಂದು | ದಂಡಿಸವ್ವಾ ದಂಡವನು ಕೊಡು ನೀನು 6 ಚಂಡ ಪ್ರಚಂಡನಿವನು ಗೋಪಿಕೆಯರಿಗೆಲ್ಲ | ಉದ್ದಂಡನಿವನು ತಂಡ ತಂಡದಲಿ ತುರು- || ಹಿಂಡುಗಳ ಕಾಯುವ ಗೊಲ್ಲಬಾಲಕನಮ್ಮಾ |ಪಾಂಡುರಂಗ ವಿಜಯವಿಠ್ಠಲರಾಯ ಬಲು ದಿಟ್ಟನಿವನು7
--------------
ವಿಜಯದಾಸ
ಗೋಪಿನಾಥ ವಿಠಲ | ನೀ ಪಾಲಿಸಿವಳಾ ಪ ಶ್ರೀಪತಿಯೆ ಕರುಣಾಳು | ಕೈ ಪಿಡಿದು ಸಲಹೊ ಅ.ಪ. ನಿತ್ಯ ಮಂಗಳನೆಯುಕ್ತಿಯಲಿ ನಿನ್ನಿಂದ | ಸ್ವಪ್ನ ಸೂಚಿಸಿದಂತೆಇತ್ತಿಹೆನು ಅಂಕಿತವ | ಸಾರ್ಥಕವ ಪಡಿಸೊ 1 ಶೃಂಗಾರ ಮೂರುತಿಯೆ | ಮಂಗಳಾಂಗನೆ ದೇವಹೆಂಗಳೀಗೆ ಸುಜ್ಞಾನ | ಭಕ್ತಿಯನೆ ಇತ್ತೂಅಂಗನಾಮಣಿಯಂತೆ | ಸಿಂಗರಿಸುತಿವಳನ್ನುಭಂಗಗೈ ಅಜ್ಞಾನ | ಭ್ರಾಂತಿ ಜ್ಞಾನವನು 2 ಭಾಗವತರೊಡನಾಟ | ಯೋಗಕರುಣಿಸು ದೇವನಾಗಾರಿವಾಹನನೆ | ಯೋಗಿಜನವಂದ್ಯಾಆಗುಹೋಗುಗಳೆಲ್ಲ | ನೀನಿಚ್ಛೆ ಸಂಕಲ್ಪಆಗು ಮಾಡೈ ದೇವ | ಮನದಭೀಷ್ಟಗಳಾ 3 ತತ್ವ ಪತಿಗಳಿಗೆಲ್ಲ | ಮರುತನೆ ಅಧಿಕೆಂಬತತ್ವವನೆ ತಿಳಿಸುತ್ತಾ | ಕಾಪಾಡೊ ಇವಳಾಪ್ರತ್ಯಹತ್ ತವನಾಮ | ಸಂಸ್ತುತಿಯ ಕರುಣಿಸುತಉತ್ತಾರಿಸೋ ಭವವನ್ನು | ಪ್ರತ್ಯಗಾತುಮನೆ 4 ಗೋವುಗಳ ಪರಿಪಾಲ | ಗೋವರ್ದನೋದ್ದರನೆಗೋಪಿಜನಪ್ರಿಯ | ಗೋಪಾಲ ಬಾಲಾಗಾವಲ್ಗಣೀವರದ | ಬಿನ್ನಪವ ಸಲಿಸಯ್ಯಕಾವುದಾನತರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗೋಪೀಮಾನ ರಂಜನ ಶ್ರೀಪತಿ ಕರುಣಾಳು ವ್ಯಾಪಿಸಿಕೊಂಡಿಹ ಮಾಮಕ ತಾಪವ ವೋಡಿಸು ಸುಲಭದಿ ಪ. ಸೌಂದರ್ಯಾಮೃತ ಸಾರಾನಂದಾತ್ಮಕ ದೇಹ ವೃಂದಾರಕ ಗಣ ನಯನಾ ನಂದನ ನಿಖಿಳಾತ್ಮಾತ್ರಯ ನಿತ್ಯಾವ್ಯಯ ಸತ್ಯಾವರ ಭಕ್ತಾಸ್ಪದ ಸುಮುಖ 1 ಸುಭಗಾಂಬುದನಿಭ ಗೋವರ ಋಭುಗಣನುತ ಚರಣಾ ಇಭರಾಟ್ಕøತ ಕರುಣಾಖಿಳ ವಿಭವಾಶ್ರಯ ತರುಣಿಗಣ ಶುಭ ಸಂಚಯ ಕರುಣಾ ನಿಜಭರಣಾದೃತ ಕರಣಾ 2 ಶೃಂಗಾರ ವಿಲಾಸಿನಿಜಾಪಾಂಗಾಹೃತ ಗೋಪಕತ ಸ್ವಂಗೀಕೃತ ಪ್ರೇಮಭವಾಲಿಂಗಿತ ಶುಭಮೂರ್ತಿ ಅಂಗಜಜನಕಾದ್ಭುತ ಸಾರಂಗ ಮಮತ ಶೇಷಗಿರಿ ಶೃಂಗಾಧಿಷ್ಟಿತ ಕರುಣಾಪಾಂಗವ ದಯಮಾಡೆನುತಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋಪೀಶ ವಿಠ್ಠಲನೆ | ನೀ ಪಾಲಿಸಿವಳಾ ಪ ನೀ ಪೊರೆಯದೇ ಇನ್ನು | ಕಾಪಾಡು ನರಹರಿಯೆಗೋಪಗೋಪಿಯರೊಡೆಯ | ಗೋಪಾಲ ಕೃಷ್ಣಾ ಅ.ಪ. ಹೇ ದಯಾಂಬುಧಿ ಹರಿಯೆ | ಭೇದ ಪಂಚಕ ಜ್ಞಾನಮೋದದಲಿ ಕರುಣಿಸುತ | ಸಾಧನವ ಗೈಸೀಶ್ರೀಧರಾ ದುರ್ಗೇಶ | ಕಾದುಕೋ ಈ ಶಿಶುವಸಾಧುವಂದಿತ ಹರಿಯೆ | ಸಾಧ್ಯ ನೀನಲ್ಲೇ 1 ಭೋಗಿ ಭಾಗವತ ಪ್ರೀಯಾ 2 ಹರಿಗುರೂ ಸದ್ಭಕ್ತಿ | ಹಿರಿಯರ ಸತ್ಸೇವೆನಿರತ ಪಾಲಿಸುತಿವಳ | ಪೊರೆಯಬೇಕೊ |ಮರುತಾಂತರಾತ್ಮ ಗುರು | ಗೋವಿಂದ ವಿಠ್ಠಲನೆಕರುಣಿಸೆನೆ ಬಿನ್ನಪವ | ನಿರತ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ಗೋವಿಂದ ಈ ವಿಧ ಸಂಭ್ರಮ ನೋಡುವುದಾನಂದ ಪ ನೋಡಿ ಈ ವಿಧ ಚಂದ ನೋಡಬಾರದೊ ಬೇರೊಂದ ಅ.ಪ ಉತ್ತಮ ಕಲ್ಪದ ಮುತ್ತುರತ್ನಗಳು ಹತ್ತಾರೆಡೆಗಳಲಿ ಉತ್ತಮ ತೀರ್ಥರ ಚಿತ್ತದ ಮೂರುತಿ ಪುತ್ಥಲಿ ರೂಪದಿ ಮತ್ತೆಲ್ಲಿರುವುದೊ 1 ಕಾಲ ನಿಯಾಮಕ ಕಾಲದ ಗತಿಯನು ಪಾಲಿಸುವುದೇ ತರವು ಮೂಲೆ ಮೂಲೆ ಕ್ಷೇತ್ರಗಳನೆ ಬಿಟ್ಟು ಈ ಮೂಲ ಮಂದಿರಕೆ ಬಂದಿರುವಂತಿದೆ 2 ಚಂದ್ರನ ಕುಲದಲಿ ಜನಿಸಿದ ದೇವಗೆ ಚಂದ್ರಿಕೆಯಲ್ಲವೆ ಪ್ರಿಯತಮವು ಚಂದ್ರಿಕಾ ಸೊಬಗಿಲಿ ಮೆರೆದು ನಲಿದ ಶ್ರೀ ಚಂದ್ರಿಕಾಚಾರ್ಯ ಪ್ರಸನ್ನನ ವೈಭವ 3
--------------
ವಿದ್ಯಾಪ್ರಸನ್ನತೀರ್ಥರು
ಗೋವಿಂದ ಗೋವಿಂದ ಎನ್ನಲರಿಯದೆ - ವೃಥಾನೋವಿಂದ ಭಂಗವ ಪಡುವುದುಚಿತವೆ ? ಪ ಕ್ಷೀಣ ಶಾಸ್ತ್ರಾರ್ಥವನು ಪರಿಗ್ರಹಿಸಿ ನಿಖಿಲ ಕುರಿಕೋಣಗಳ ತಲೆಚೆಂಡ ಕುಟ್ಟಿಸುತಪ್ರಾಣ ಹತ್ಯವ ಮಾಳ್ಪುದಾವ ಸತ್ಕರ್ಮ - ನಾರಾ-ಯಣನ ನಾಮಸ್ಮರಣೆ ಮಾಡು ಮನವೆ 1 ಖಂಡವನು ಕೊಯ್ದು ಕೊಡಬೇಡ ದಳ್ಳುರಿಯಗ್ನಿಕುಂಡವನು ಹೊಕ್ಕು ಹೊರಡುವುದುಚಿತವೆಭಂಡರಂದದಿ ಬತ್ತಲೆಯೆ ಬರುವುದಾವಾಟಪುಂಡರೀಕಾಕ್ಷನ ನೆನೆ ಕಂಡ್ಯ ಮನವೆ 2 ಕುಟ್ಟಿಕೊಳ್ಳದಿರಿ ಜಟ್ಟಿ ಗುಂಡಿನಲಿ, ಶಸ್ತ್ರವನುಚಿಟ್ಟಿ ಕೊಳ್ಳದಿರಿ, ಬೆನ್ನಲಿ ಸಿಡಿಯನುಕಟ್ಟಿ ತೂಗಿಸಿಕೊಳ್ಳದಿರಿ ಕರಟಕದಂತೆಗುಟ್ಟಿನಲಿ ಗೋಪಾಲಕನ ಸ್ಮರಿಸು ಮರುಳೆ 3 ತೊಗಲ ಬಿಲ್ಲೆಗಳ ಕೊರಳಲ್ಲಿ ಕಟ್ಟಿಕೊಂಡುಹಗಲಿರುಳು ಅನ್ನಪಾನಕೆ ಹೋಗದೆಮೃಗವೈರಿಯಂತೇಕೆ ಕಿಸುಕೆಲೆವ ರಂಪಾಟಜಗದಾಧಿಪತಿಯ ನಾಮ ಸ್ಮರಿಸು ಮರುಳೆ 4 ಉತ್ತಮರು ಸುರೆಯನೀಂಟುವರೆ ತರಹರಿಸಿ ಮದೋ-ನ್ಮತ್ತರಾಗಿ ಅಸಭ್ಯ ಶಬ್ದವ ನುಡಿವರೆಸತ್ತ ಹೆಣದಂತೆ ಬಿದ್ದಿಹುದಾವ ನೀತಿ ಪುರು-ಷೋತ್ತಮನ ನಾಮ ಸ್ಮರಣೆಯ ಮಾಡು ಮನವೆ 5 ವೇದೋಕ್ತ ಪೂಜೆಯಲಿ ತೃಪ್ತಿಪಟ್ಟರೆ ನೀವುಅದರಿಂದ ಫಲವೇನು ಪೇಳಿರಯ್ಯನಾದವನು ಕೇಳ್ದ ಹರಿಣದಂದದಿ ಕೆಡದೆ ಮಧುಸೂದನನ ನಾಮ ಸ್ಮರಣೆಯ ಮಾಡು ಮರುಳೆ 6 ನಿಂದಾಪವಾದ ಘಟಿಸುವುದೈಸೆ ಇದರಿಂದಮುಂದೆ ಮುಕ್ತಿಯು ನಿಮಗೆ ಸಾಧ್ಯವಹುದೆತಂದೆ ಶ್ರೀ ಕಾಗಿನೆಲೆಯಾದಿಕೇಶವ ನಾಮಒಂದೇ ವೈಕುಂಠ ಪದವನೈದಿಪುದಯ್ಯ 7
--------------
ಕನಕದಾಸ
ಗೋವಿಂದ ಗೋವಿಂದ ಗೋಕುಲಾನಂದ ದೇವೇಶ್ವರಾನಂದ ಪಾದಾರವಿಂದ ಪ ಲಾವಣ್ಯ ಪರಿಪೂರ್ಣ ಸಚ್ಚಿದಾನಂದ ಶ್ರೀವೇಣುಗೋಪಾಲ ಶೌರೇ ಮುಕುಂದ ಅ.ಪ ನೀನೇ ಗತಿ ನೀನೇ ಮತಿ ನೀನೆನ್ನ ಪ್ರೇಮಾ ನೀನೆನ್ನ ತಾಯ್ತಂದೆ ಲೋಕಾಭಿರಾಮಾ ನೀನೆನ್ನ ಕರುಣದಲಿ ಕಾಯೋ ಶ್ರೀರಾಮ 1 ಮಂಗಳಾಂಗನು ನೀನು ಕಮಲಾಯತಾಕ್ಷ ಮಂಗ ಮೂಢನು ನಾನು ಸಿರಿದೇವಿ ಪಕ್ಷ ಶೃಂಗಾರ ಪೂರ್ಣನೀ ಕಾಮ್ಯಾರ್ಥದಕ್ಷ ಮಾಂಗಿರಿಯ ರಂಗ ಭಕ್ತಾಳಿ ಸಂರಕ್ಷ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋವಿಂದ ಗೋವಿಂದ ಗೋವಿಂದನೆನ್ನಲು ಪ ಏನೆಂದು ಪೇಳಲಿ ಆನಂದವನು ನಾ ಅ.ಪ ಹಸಿವು ತೋರದೆನಗೆ ತೃಷೆಯು ತೋರದೆನಗೆ ಪರಿ ನಾಮರಸವ ಸೇವಿಸುತಿರೆ 1 ದ್ವೇಷವು ತೋರದು ರೋಷವು ತೋರದು ಶೇಷಶಯನ ನಿನ್ನ ಹರುಷದಿ ಪೊಗಳಲು 2 ಭಯವು ತೊಲಗುವುದು ಜಯವು ತೋರವುದು ನಯನಗಳಲಿ ಸುಖ ಜಲವು ಸುರಿಯುವುದು 3 ಎಂದಿನ ಪುಣ್ಯವೊ ಇಂದರಿತೆನು ಗೋ- ವಿಂದನಾಮ ಮಕರಂದದ ಸವಿಯನು4 ನಿನ್ನ ಸುಕರುಣದ ಚಿನ್ಹೆ ಕಾಣಿಸಿತು ಪ್ರ ಸನ್ನನಾಗುವಿಯೆಂದು ಚೆನಾÀÀ್ನಗಿ ಅರಿತೆನು5
--------------
ವಿದ್ಯಾಪ್ರಸನ್ನತೀರ್ಥರು