ಒಟ್ಟು 36720 ಕಡೆಗಳಲ್ಲಿ , 136 ದಾಸರು , 10408 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕೇಶವರಾಯನ ನಂಮಾ ಪುಂಡರೀಕಾಕ್ಷನನ್ನಾ ಪ ನೀರಜಾಸನ ಪಿತನಾ ನಂಮಾ ಶ್ರೀ ರಂಗ ಶ್ರೀಹರಿಯಾ ಮಾರನ ಪಡೆದವನಾ ನಂಮಾ ಶೂರ ವಿಶ್ವಂಭರನಾ 1 ಕಾಮಿತ ಫಲದಾತನಾ ಭಕ್ತರ ಪ್ರೇಮದಿ ಪೊರೆವವನಾ ಭೀಮ ಪರಾಕ್ರಮನಾ ತುಲಸೀ ಧಾಮ ವಿಭೂಷಣನಾ 2 ಶರಣರ ಸಲಹುವನಾ ದಾಸರ ಮರುಸವತರಿವವನಾ ಗಿರಿಪುರ ಮಾಧವನಾ ದೂರ್ವಾ ಪುರದ ಶ್ರೀ ಕೇಶವನಾ 3
--------------
ಕರ್ಕಿ ಕೇಶವದಾಸ
ಕಂಡೆ ಗುರುರಾಯನಾ ಸುರಮನೋಪ್ರಿಯನಾ ಪ ತೊಂಡವತ್ಸಲ ಧರ - ದಂಡ ಕಮಂಡಲ ಪಂಡಿತಾಗ್ರಣಿಗಳೊಳು - ದ್ದಂಡ ಮಹಿಮನ ಅ.ಪ ಮಣಿ ವಿಭವಾ ವ್ರತತಿಜೋಪಮ ಯುಗನಯನ ಸಂಪಿಗಿನಾಸವಾ ಕಪೋಲ ಯುಗ ಭಾಸವಾ ವದನಾಬ್ಜದೊಳೊಪ್ಪುವ ಕಿರಿಹಾಸವಾ ಹಾ-ಹಾ- ಹಾ 1 ಕುಂದ - ಕುಟ್ಮಿಲ - ದಂತ ಪಂಕ್ತಿಯಾ ಅರುಣ ಪೊಂದಿ ಪೊಳೆವೊದದರ ಛವಿಯಾ ಸುಂದರ ದರೋಪಮ ಕಂಧರಾಂಕಿತ ಬಾಹುದಂಡವಾ ಭುಜದಳೊಪ್ಪುವ ಮುದ್ರನಾಮವ ಹೃದಯ - ಮಂಡಲ ಮುದ್ರನಾಮವ ಹಾ-ಹಾ-ಹಾ 2 ಚಲುವ ಸುಳಿನಾಭೀ ಪುಳಿನ ಪೋಲುವೊ ನಿತಂಬವಾ ಕದಳಿ ಸ್ತಂಭವಾ ಮಾಡುವ ಚರ್ಯ ವಿಡಂಬವಾ ಹಾ - ಹಾ - ಹಾ 3 ಕರಿರದೋಪಮ ಜಂಘೆಗಳಾ - ಗುಲ್ಫ ವರರತ್ನ ಪಾದಾಂಗುಲಿ ಸಂಫÀಗಳ ಸ್ಮರಿಸುವೊ ಜನರಿಗೆ ಸುರವರತರು ಪೋಲುವಾ ದುರಿತ ನಿರುತ ನೀಡುವೋ ನಭೀಷ್ಟವಾ ಭಕುತರೊಳಗೆ ತಾನಾಡುವಾ ಹಾ - ಹಾ - ಹಾ 4 ನೀತ ಗುರುಜಗನ್ನಾಥಾ ವಿಠಲಪಾದ ಪ್ರೀತಿಪೂರ್ವಕ ಭಜಿಸುತ ಭೂತ ಪ್ರೇತದ ಭಾಧೆUಳನೆಲ್ಲ ಕಳೆಯುವಾ ಸಕಲ ಸೌಖ್ಯನೀಡುವಾ ನಂಬಿದರೀತ ಪೊರೆಯುವಾ ತೋರಿಪನಾಗಯ್ಯ ಮಹಿಮವಾ ಹಾ - ಹಾ - ಹಾ 5
--------------
ಗುರುಜಗನ್ನಾಥದಾಸರು
ಕಂಡೆ ನನ್ನನು ಕಾಯ್ವನೆಂಬುದ ಕಂಡೆ ಪಾವನನಾದುದಪುಂಡರೀಕದಳಾಯತಾಕ್ಷನೆ ಗಂಡುಮಾಡುವ ಗೂಢವ ಕಂಡೆಕಂಡೆ ಪ.ಮಲಿನವೆಂಬುದು ಮನಕೆ ತೋರಲು ಮಲಿನ ಹೇತುವು ಮೂಡಲುಮಲಿನಕಳುಕುತಲಿದ್ದ ಸಮಯಕೆ ಬಲುಹಿನರಿಕೆಯ ಬೀರಲುಮಲಿನವೇ ಹುಸಿಯೆಂಬ ನಿಶ್ಚಯ ಬಲಿದು ಬಲು ಹುರಿಯಾಗಲುಕಲಕಿ ಸಂಶಯ ಕಡೆಗೆ ಜಾರಲು ನಿಲುಕಿ ನೀನಿದಿರಾಗಲು 1ಶುದ್ಧವೆಂಬುದಶುದ್ಧವೆಂಬುದು ಬುದ್ಧಿಕಲ್ಪಿತಮಾತ್ರವುಇದ್ದು ಸುತ್ತಲು ಈಶನಂತಿರೆ ಹೊದ್ದುವನ್ಯವದಾವದುಶುದ್ಧ ಶ್ರೀಹರಿ ಪೂರ್ಣ ಮಿಕ್ಕಿನ ಬದ್ಧನೆಂಬುದೆ ಭ್ರಾಂತಿಯುಅದ್ವಯಾನಂದಾಬ್ಧಿ ಯೆಂಬೀ ನಿರ್ಧರವ ನೆರೆ ತೋರಲು 2ಅಳುಕದಿರು ನಾ ವಿಶ್ವವಾಗಿಯೆ ಹೊಳೆದು ತೋರಿದೆನೊಬ್ಬನೇಬಳಸಬೇಡತಿಭೀತಿಯೆಂಬುದ ತಿಳಿದು ನೋಡೆಂದರುಹಿದೆಹುಳುಕು ತಾನದು ಹೊಂದದೆಂದಿಗು ಸುಳಿದು ಶುದ್ಧನ ಮಾಡಿದೆಒಳಗೆ ನೀನಿಹೆ ನಲಿದು ತಿರುಪತಿ ನಿಳಯ ವೆಂಕಟನಾಥನೆ 3ಕಂ||ಇಂತೀ ಭಾವನೆಗೈಯುವುದೆಂತೊದಗಿದುದೆನಲು ಸದ್ಗುರುವ ಕರುಣವು ತಾಬಂತೆನಗೆ ತಿರುಪತೀಶನೆಸಂತೋಷದಿ ವಾಸುದೇವ ಯತಿಯಾರ್ಗೀಯಲ್‍ಓಂ ದಯಾನಿಧಯೇ ನಮಃ
--------------
ತಿಮ್ಮಪ್ಪದಾಸರು
ಕಂಡೆ ನಾ ಕಣ್ಣಾರೆನಾ | ಕಂಡೆನಾ ಪ ಕಂಡೆನು ಕರುಣಾಸಾಗರನ | ಕರ ದಂಡ ನಾಮಕೊಲಿದವನ | ಆಹಾ ದಂಡ ಧಂಡದ ಲೀಲೆ ತೋಂಡರೊಡನಾಡು ಮೂರ್ತಿ 1 vಟಿಟತಮತ್ಕೋಟಿ ಸನ್ನಿಭನ | ದೇವ | ತಟಿನಿಯ ಪದದಿ ಪೆತ್ತವನ | ಚಾರು ಕರವ ನಿಟ್ಟವನ | ನಿಜ ಭಟ ಜನರಿಗೆ ಮುಕ್ತಿ ಪ್ರದನ ||ಆಹಾ || ಜಠರದಿ ಜಗವಿಟ್ಟು ವಟದೆಲೆಯೊಳು ಮಲಗಿ ವಟುರೂಪದಲಿ ಪಾದಾಂಗುಟವನು ಮೆಲುವನ 2 ಭುವನದೊಳು ಸಂಚರಿಸುವನ | ಕೂರ್ಮ ಮಾನವ ಪಂಚಮುಖನ | ಋಷಿ ಕುಮಾರ ಕುವರರ ಕಡಿದವನ ಮಹಿ ಕರವ ಕುವಲಯ ಸಖ ಕುಲೋಧ್ಭವ ಭವಮಾರ್ಗಣ ಬವರದಿ ಹಯವೇರಿ ಯವನರ ಬಡಿದನ 3 ಲ್ಮೊಗನ ನಾಭಿಲಿ ಪಡೆದವನ | ರವಿ ಮಗನಿಗೆ ಮಗನಾದವನ ತನ್ನ ಪೊಗಳುವಂಥರಫÀ ಕಳೆಯವವನ ಆಹಾ ಜಗನ್ನಾಥದಾಸರಿಗೆ | ಸೊಗಸಾದ ಮೃಷ್ಟಾನ್ನ ಬಗೆ ಬಗೆ ಉಣಿಸಿದ ಖಗಪತಿ ಗಮನನ4 ಸಾಸಿರನಯನನುಜನ | ಮಹಿ ದಾಸ ಕಪಿಲದತ್ತಾತ್ರೇಯನ ವೇದ ವ್ಯಾಸ ವೃಷಭ ಹಯಮುಖನ ಭಾರ ಶ್ರೀಶ ಮಾನಸಮಂದಿರ ||ಆಹಾ || ಶ್ರೀಶ ತಂದೆ ವೆಂಕಟೇಶ ವಿಠಲಂಘ್ರಿ ದಾಸರ ಸತ್ಯಹವಾಸದಿಂದಲಿಯಿಂದು 4 ತಂದೆ ತಾಯ್ಗಳ ಸುಕೃತವೊ | ನಮ್ಮ ಒಂದೂರಾರ್ಯರ ಅನುಗ್ರಹವೋ | ಸ್ತಂಭ ಮಂದಿರ ರಾಯರ ದಯವೊ | ದಾಸ ವೃಂದ ಕೃತಾಶೇಷ ಫಲವೊ | ಆಹಾ ಇಂದು ಭಾಗದಿ ಭಕ್ತಾವೃಂದಕೆ ದರುಶನಾ ನಂದಗರೆವ ಶಾಮಸುಂದರ ವಿಠಲನ 5
--------------
ಶಾಮಸುಂದರ ವಿಠಲ
ಕಂಡೆ ನಾ ಕಣ್ಣೆದುರಲಿ ಕೃಷ್ಣನಾ ಪ ಕಂಡೆ ನಾನೀಗ ಬ್ರಹ್ಮಾಂಡದೊಡೆಯ ತಾ ತಾಂಡವಾಡಿ ಭೂಖಂಡದಿ ಮೆರೆದನ ಅ.ಪ ಜಯಮುನಿಹೃತ್ಕುಮುದಾಲಯದಿ ಸುಲೀ- ಲೆಯಾಡುತಿಹ ವಾಯ್ವಂತರ್ಗತ ಕೃಷ್ಣ ಜಯಜಯಜಯ ಶ್ರೀ ವಿಜಯಸಾರಥಿ ಭವ- ಭಯಹಾರಿ ಭಕ್ತರಭಯಪ್ರದಾಯಕ ದಯವನಧಿಯೆ ಮನದಾಮಯ ಕಳೆದು ನಿ- ರ್ಭಯ ದೊಳು ಕಾಯುವ ಜಗದೊಡೆಯಾ ಧೇಯವು ನಿನಗಿದು ಸದ್ಭಕುತರಾಶ್ರಯ ತಟಿತಕೋಟಿ ನಿಭಕಾಯ ಶ್ರೀಭೂಕಾಂತ ದೈತ್ಯಕೃತಾಂತ ಜಗದಾದ್ಯಂತ ನಿಂತು ಜೀವರಾದ್ಯಂತ ಕೃತ್ಯಗಳ್ ಸಂತತನಡೆಸುವ ಕಂತುಪಿತನ ನಾ 1 ಶ್ರೀಕಳತ್ರ ಪರಲೋಕೈಕನಾಥ ಜಗ- ದೇಕವಂದ್ಯನೆ ನರಲೋಕದ ಕ್ರೀಡೆಯೊಳ್ ಭೀಕರಿಲ್ಲದೆ ಬಕಶಕಟಾಕಂಸಾದಿಗಳ ಏಕಘಳಿಗೆ ಯೊಳು ನೀ ಕೊಂದು ನಲಿದು ನಿಂದೆ ಪಾಕಶಾಸನ ದಿವೌಕಸವಂದ್ಯನೆ ಪ್ರಕಟನಹುದೊ ನಿಪ್ಕುಟಿಲರಿಗೆ ದಿಟ್ಟತನದಿ ಹೃತ್ತಟದಲಿ ಧೇನಿಸೆ ತಟಿತದಂದದಲಿ ಒಳಗೇ ಭಟಜನರುಗಳಾ ಕಂಟಕದೆಡರಾಕಟಕಪರಿಹರ ವಿಟ್ಟು ಕರುಣಾಕಟಾಕ್ಷದಿಂದ ಸಂತ ವಿಟ್ಟು ನಟಿಸುವಾ ಸೃಷ್ಟಿಕರ್ತನ ನಾ 2 ರಂಗಾ ನಿನ್ನವರುಗಳಿಂಗಿತದಂತೆ ಮಾ- ತಂಗವರನ ನಿನ್ಹಾಂಗೆನಡೆಸಿ ಶುಭಾಂಗ ಸದ್ಭಕ್ತಕೃ- ಪಾಂಗ ಮಂಗಳಾಂಗ ತುಂಗಮಹಿಮ ಸ- ಪ್ತಾಂಗ ಏಕೋನವಿಂಶತಿ ಮಂಗಳವಿಶ್ವನೆ ಕಂಗಳಲಿದ್ದು ಜಗಂಗಳ ಕಾರ್ಯಂಗಳಿಗೀವೆ ಹಿಂಗಿಸಿ ಅಂಗದ ಕಾರ್ಯವ ನೀ ಮನ ಕಂಗಳಿಗಿತ್ತು ಎಂದಿಗು ಪೊರೆವಾ ಮಂಗಳ ಪ್ರಾಜ್ಞಭೋಗಂಗಳ ಪ್ರಜ್ಞ ಆಗದುಸೂಜ್ಞ ರಂಗನಾಥ ಹೃದ್ರಂಗದಿ ನಲಿಯುತ ಹಾಂಗೆ ನಿಂದಿಹ ಈ ಶ್ರೀವೇಂಕಟೇಶನ ನಾ 3
--------------
ಉರಗಾದ್ರಿವಾಸವಿಠಲದಾಸರು
ಕಂಡೆ ನಾ ಬ್ರಹ್ಮಾಂಡಯೊಡೆಯ ಶ್ರೀ ವೆಂಕಟೇಶನ ಪ ಕಂಡೆ ನಾ ಭಕುತರ ಹಿಂಡುಗಳು ನೆರೆ ಕೊಂಡಾಡುತಲಿದೆ ಪದಪುಂಡರೀಕವ ನಾ ಅ.ಪ ತುಂಗ ಮಹಿಮ ಸತ್ಸಂಗವಿತ್ತು ಮನದಂತರ ವರಿ- ತಾಂಗೀರಸದೀ ಮಂಗಳ ಪೌರ್ಣಿಮೆಭಾರ್ಗವವಾಸರದಿ ಭಾರ್ಗವಿಪತಿ ನಿನ್ನನು ಗ್ರಹದಿ ನಗದೊಡೆಯ ಭಕ್ತ- ರಘಹರಿಸುತ ಪನ್ನಗಗಿರಿಯೊಡೆಯ ನಿನ್ನಯ ಗುಡಿಯನ್ನು ಬಗೆ ಬಗೆ ಸುತ್ತಿಪರ ಹಿಂಡನ್ನು ನಾ ಕಂಡೆನೋ ಜಾಗು ಮಾಡದೆ ಬಾಯಿಬೀಗವ ಕೈಕೊಂಡು ಸಾಗಿ ಕಾಸಾರದಿ ಸ್ನಾನ ಮಾಡಿಕೊಂಡು ಬಾಗಿ ವರಾಹದೇವರ ವಂದಿಸಿ ಬೇಗದಿ ಹರಕೆ ಕೈಕೊಂಡಿಹ ದೇವನ 1 ಮುಕ್ತರೊಡೆಯ ಪುರುಷೋತ್ತಮ ನಿನ್ನಯ ಭಕ್ತರ ವಿಪತ್ತುಗಳೆಲ್ಲ ಹರಿಸಿಶಕ್ತ್ಯಾನುಸಾರ ತ್ವ- ದ್ಭಕ್ತರೆಸಗುವ ಅತ್ಯಲ್ಪಭಕ್ತಿಯ ಸ್ವೀಕರಿಸಿ ಭಕ್ತಿಯಿಂದ ಪ್ರಾಕಾರದಿ ಸುತ್ತಲು ಹೊತ್ತಗಂಡದೀಪಸಾರುತಲಿ ನಿತ್ಯನೂತನ ನಿನ್ನ ಸ್ತುತಿಸುತಲೀ ಮತ್ತೆ ಉರುಳುತಲೀ ಉತ್ತಮಗತಿಪ್ರದ ವ್ಯಕ್ತನಹುದೊ ತ್ವ- ದ್ಭಕ್ತರ ಮನೋರಥ ಪೂರ್ತಿಮಾಡುವ ಭಕ್ತವತ್ಸಲನೆಂಬ ಬಿರುದು ಪೊತ್ತ ಸ- ರ್ವೋತ್ತಮ ಶ್ರೀ ಪುರುಷೋತ್ತಮ ನಿನ್ನನು2 ಬೊಮ್ಮಜನಕ ಪರಬೊಮ್ಮನೆ ನಿನ್ನಯ ಸನ್ಮಹಿಮೆಯ ನಾ ಒಮ್ಮನದೀ ಒಮ್ಮೆಯಾದರು ಮನ್ಮನದಲಿ ನಿನ್ನಯ ಸನ್ಮಂಗಳರೂಪವ ನಿಲ್ಲಿಸದೆ ಸುಮ್ಮನೆಕುಳಿತು ಇಮ್ಮನನಾಗಿರೆ ಘಮ್ಮನೆ ಎನ್ನನು ಒಳಕ್ವೈದೆ ಕಣ್ಮನದೆದುರಲಿ ನೀ ನಿಂದೆ ನೀನೆನ್ನಯ ತಂದೆ ಸನ್ಮುದದಿಂದೆ ಪಾಮರನೆಂದೆನ್ನ ಪ್ರೇಮದಿ ಕರುಣಿಸಿ ಸನ್ಮಹಿಮೆಯ ತೋರ್ದೆ ಜಗದೀಶ ಕಾಮಿತಜನರ ಕಲ್ಪದ್ರುಮ ನೀನೆಲೊ ಈ ಮೇಲುಗಿರೀಶ ಶ್ರೀ ವೆಂಕಟೇಶಾ ನಿನ್ನ3
--------------
ಉರಗಾದ್ರಿವಾಸವಿಠಲದಾಸರು
ಕಂಡೆ ನಾಕಂಡೆ ನಾಕಂಡೆ ಕಾಳಿಂಗನ ಮಂಡೆಯಮೇಲೆ ಕುಣಿವ ಕೃಷ್ಣನ್ನ ಪ ತಕ ತಕ ಧಿಮಿ ಧಿಮ್ಮಿ ಧಿಮ್ಮಿ ಧಿ- ಮ್ಮಿಕೆಂದು ಕುಣಿವ ಕೃಷ್ಣನ್ನ ನಾಕಂಡೆ ಅ.ಪ ಹೆಡೆಯ ಮೇಲೆ ತಾ ಎಡಗಾಲಿರಿಸಿ ಎಡಗೈಯಲಿ ಬಾಲ ಹಿಡಿದವನ ಬಿಡದೆ ಅಭಯಹಸ್ತವ ತೋರೊ ಒಡೆಯ ಕೃಷ್ಣಮೂರುತಿಯ ನಾಕಂಡೆ ಸ್ವಪ್ನದಲಿ ನಾಕಂಡೆ ಕಂಡೇನೊ ಸಂಪನ್ನಮೂರ್ತಿಯ ಕಂಡೇನೊ 1 ಗೋವಲರ ಮನೆಯ ಪಾಲುಂಡವನ ಗೋವುಗಳ ಕಾಯ್ದ ಗೋಪಾಲನ್ನ ಗೋವಿಂದನೆಂಬ ದೇವರದೇವನ್ನ ಓವಂತೆ ನಾನು ಕಂಡೇನು ಕಂಡೇನು ಕುಣಿಯುತ ಬಂದ ಕೃಷ್ಣನ್ನ ತಣಿಯುವ ಹಾಗೆ ನೋಡಿದೆನು 2 ಗೋವಿಂದನಾಗಿ ತಲೆಕಾಯ್ವವನ ಗೋವರ್ಧನವನೆ ಕೊಡೆಯಾದವನ ಗೋವನಿತೆಯರ ಮಾಮಾಯನನ್ನ ಅವ್ವಯ್ಯ ಚೆನ್ನಾಗಿ ಕಣ್ತುಂಬ ಕಂಡೆ ಆ ಮುದ್ದು ಬಾಲಕೃಷ್ಣನ್ನ ಕಂಡೆ ಸಾಮುದ್ರಿಕಾ ಸಿರಿಯನ್ನಕಂಡೆ 3 ಅಸುರ ಕಂಸನ ಅಸುವನ್ನು ನೀಗಿದನ ಬೆಸೆದ ಕುಬ್ಜೆಯ ಡೊಂಕ ತಿದ್ದಿದವನ ಅಸುತೆಗೆಯ ಬಂದವಳ ಅಸುವನೆ ಹೀರಿದನ ಮಿಸುಕದಂತೆ ಕಂಡೆ ನಾಕಂಡೆ ನಾಕಂಡೆ ಜಾಜಿಪುರೀಶನ ಕಂಡು ಧನ್ಯನಾದೆ ಸಾಜದಿ ದಾಸಾನುದಾಸನಾದೆ 4 ಪಾಪಿನಾ ಕರುಣೆಯ ತೋರಿ ಸಲಹೊ ಭಾಪುರೆ ಗಟ್ಟಿಸುವ ಪುಟ್ಟಪಾದವಿಟ್ಟು ಮೋಪಾಗಿ ಮೆರೆವ ದುಷ್ಟರ ಮೆಟ್ಟೊ ಪುಂಡರ ಪುಂಡರಿಗೆ ಪುಂಡನಾದವನೆ ಪುಂಡರೀಕಾಕ್ಷ ಚನ್ನಕೇಶವನೆ 5
--------------
ನಾರಾಯಣಶರ್ಮರು
ಕಂಡೆ ನಾನೊಂದು ಕೌತುಕವ ಧ್ರುವ ಆಯಿ ಅಜ್ಜನ ನುಂಗಿದ ಕಂಡೆ ನಾಯಿ ಲಜ್ಜೆಯ ಹಿಡಿದುದ ಕಂಡೆ ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ ಪ್ರದಕ್ಷÀಣೆ ಮಾಡುದು ಕಂಡೆ 1 ಇರುವೆ ವಿಷ್ಣುನ ನುಂಗಿದ ಕಂಡೆ ನರಿಯು ರಾಜ್ಯನಾಳುದ ಕಂಡೆ ಅರಿಯು ಮರಿಯ ನುಂಗಿದ ಕಂಡೆ ಕುರಿಯಿಂದ ಪರಲೋಕಯೆಯ್ದಿದು ಕಂಡೆ 2 ಇಲಿಯು ಯುಕ್ತಿಯದೋರುದು ಕಂಡೆ ಹುಲಿಯು ಭಕ್ತಿಯು ಮಾಡುದು ಕಂಡೆ ಇಳೆಯೊಳು ಮಹಿಪತಿ ಕಳೆವರದೊಳಿನ್ನು ಮುಕ್ತಿ ಸಾಧನದೊಂದು ಬೆಡಗವು ಕಂಡೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆ ನಾನೊಂದು ಕೌತುಕವ ಧ್ರುವ ಭೂಮಿಯ ವೇದನೋದುದ ಕಂಡೆ ರಾಗಭೆÉೀದ ಮಾಡುದಕಂಡೆ ಪಾಡುದು ನಾಕಂಡೆ 1 ಆಕಾಶ ಮಾತುಕೇಳುದು ಕಂಡೆ ಪುರಾಣ ದೃಷ್ಟಿಸುವದು ಕಂಡೆ ಶಬ್ದ ಭೇದಗ್ರಹಿಸುದು ಕಂಡೆ ಪುಣ್ಯ ಶ್ರವಣವು ಕೇಳುದುಕಂಡೆ 2 ಖಣಿಯವಾದುದು ಕಂಡೆ ನಿರ್ಮಿತವಾಗಿಹ ರೂಪವ ಕಂಡೆ 3 ಅಗ್ನಿ ದೃಷ್ಟಿಸುವದು ಕಂಡೆ ಸೃಷ್ಟಿನೆಲ್ಲ ನೋಡುವದು ಕಂಡೆ ದೈವದ್ಯಾವರ ನೋಡುದು ಕಂಡೆ 4 ಗಾಳಿ ಘ್ರಾಣಿಸುವದು ಕಂಡೆ ಪರಿಪರಿವಾಸನೆ ಕೊಂಬುದುಕಂಡೆ ಬೀಜಾಕ್ಷರವು ನುಡಿವದು ಕಂಡೆ 5 ಎರಗಿತು ಪುಣ್ಯಶ್ರೀ ಚರಣದಲಿ ತ್ರಾಹಿಯೆಂದು ಪೊಡವಿಯಲಿ 6 ಬೆರಗಾದನು ಗುರುಕರುಣದಲಿ ಬೆಡಗವ ಕಂಡಿನ್ನು ಬೆರದಾದೆನಯ್ಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆ ನಿಂದಾನಂದೋಬ್ರಹ್ಮನ ಮಂಡಲೇಶನ ಧ್ರುವ ಪಿಂಡ ಬ್ರಹ್ಮಾಂಡ ತಂಡಕ ಜಡದ ಖಂಡಿತವಾಗ ಸುಪಂಡಿತರಾತ್ಮನ 1 ಸನ್ಮಾರ್ಗ ಸದ್ಗತಿ ಸಾಧನ ಸದ್ಗುರು ನಿಧಾನ ಸದ್ಬ್ರಹ್ಮಾಕರ ಸದ್ವಾಸನೆ ಪೂರಿಸಿ ಸದ್ಗೈಸುವ ಸದ್ಭಾವ ಬೋಕ್ತನ 2 ನಿಜಸುಖ ಭಾಸುವ ಮಹಿಪತಿಗೋಸುಗ ಭಾಸ್ಕರ ಕೋಟಿ ಪ್ರಕಾಶನ ಕಂಡೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆ ಫಂಡರಿರಾಯನ ಸಿರಿಮನ ಪ್ರಿಯನಾ ಪ ಚಂಡವಿಕ್ರಮ ಕರದಂಡ ಮುನಿಪನೊಲಿ ದಂಡಜಾಧಿಪ ಪ್ರಕಾಂಡ ಸುಪೀಠನ ಅ.ಪ. ಮಣಿಮಯ ಮಕುಟ ಮಧುಪನವಿರಪ್ಯರೇ ಪಣೆಯೊಳಿಟ್ಟ ಕಸ್ತೂರಿ ತಿ¯ಕಾ ವನÀರುಹ ಉಪಮ ಲೋಚನಯುಗ ಚಂಪಕ ಸುನಾಸ ವಕುಂಡಲವ ವಿಕಾಸವ ಕದಪಿನ ವಿಲಾಸವ ಮೊಗದ ಮಂದಹಾಸವ 1 ಕುಂದ ಕೋರಕ ದಶನಾವಳಿಯ ಬಿಂಬಾ ಅಧರ ಕಳೆಯ ಕಂಧರ ತ್ರಿವಳಿ ಪುರಂದರ ಇಭಕರ ಪೋಲುವ ಭುಜಯುಗ ವಿಶಾಲವಾ ಕರತಳರಸಾಲವ ನಖರ ಮಲ್ಲಿಕಾಸವ 2 ಅತಿವಿಸ್ತøತ ವಕ್ಷಸ್ಥಳವಾ ಸಿರಿ ಸತಿ ಸದನಾರ್ಕನಂದದಿ ಪೊಳೆವಾ ಕೌಸ್ತುಭ ದೀಧಿತಿ ವಿಲಸಿತ ವೈಜಯಂತಿಯ ಉದರ ರೋಮ ಪಂಕ್ತಿಯಾ ಕುಕ್ಷಿತ್ರಿವಳಿ ಕಾಂತಿಯಾ ನಾಭಿವಲ್ಮೀಕ ದಂತಿಹ 3 ಮುಂಬಿಸಿಲಿನಂತೆ ಕನಕ ಚೈಲಾ ಸುನಿ ತಂಬದಿ ಪೊಳೆವ ಗೋಲಿಯ ಚೀಲಾ ಕುಂಬು ಕೋಕನದ ವಿಡಂಬ ಮೇಖಲ ಕದಂಬವ ಊರು ಕದಳೀ ಜಾನುಗಳಿಂದು ಬಿಂಬನಾ ಆಚರಿಪ ವಿಡಂಬನಾ 4 ಮಾತಂಗಕರವ ಜಂಘೆಗಳ ಗುಲ್ಫ ಜಾತಿಮಣಿಕಾಂಗುಲಿ ಸಂಘಗಳ ಜ್ಯೋತಿ ಬೆಳಗೆ ಜಗನ್ನಾಥ ವಿಠಲ ನಂಘ್ರಿ ಪುಷ್ಕರಾ ಉದಿತ ಶತ ಭಾಸ್ಕರಾ ಗಭಸ್ತಿ ತಿರಸ್ಕರ ಸುಜನರಿಗೆ ಶ್ರೇಯಸ್ಕರ 5
--------------
ಜಗನ್ನಾಥದಾಸರು
ಕಂಡೆÀನೀಗ ರಂಗನಾಥನ ಕಾರುಣ್ಯನಿಧಿಯ ಪ. ಮಂಡಲದೊಳುದ್ದಂಡ ಮೂರುತಿ ಹಿಂಡು ದೈತ್ಯರ ತಂಡ ತಂಡದಿ ತುಂಡು ತುಂಡು ಮಾಡಿದ ಸ್ವಾಮಿಯ ಅ.ಪ. ಕೌಸ್ತುಭ ನಾಮವ ನೇಮದಿಂದ ಧರಿಸಿದಾತನ ಹೇಮ ಮಂಟಪದೊಳಗೆ ಕುಳಿತು ಕಾಮಿಸಿದ ಭಕ್ತರಿಗೆ ಕಾಮಿತಾರ್ಥ ಕೊಡುವ ಸ್ವಾಮಿಯ 1 ಗರುಡವಾಹನವೇರಿ ಗಗನದಿ ಚರಿಸುತ್ತ ಬಂದು ಸರಸಿಯೊಳು ಕರಿಯ ಸಲಹಿದೆ ಪರಮಭಕ್ತರ ಕಾವದೇವ ಕರುಣವಾರಿಧಿ ಕಮಲನಯನ ಉರಗಶಯನ ಉದ್ಧಾರಿ ನಿನ್ನ ಮರೆಯಹೊಕ್ಕೆ ಕಾಯೊ ಎನ್ನ2 ಇಂದುಧರನ ಸಖನೆ ಕೇಳಯ್ಯ ಬಂದಂಥ ದುರಿತ ಹಿಂದು ಮಾಡಿ ಮುಂದೆ ಸಲಹಯ್ಯ ಇಂದು ಹೆಳವನಕಟ್ಟೆ ರಂಗ ಆ-ನಂದ ಪಡಿಸೊ ರಾಮಲಿಂಗ ಹೊಂದಿದೆನು ನಿನ್ನ ಚರಣ3
--------------
ಹೆಳವನಕಟ್ಟೆ ಗಿರಿಯಮ್ಮ
ಕಡೆಗಣ್ಣಲಿ ನೀ ನೋಡದಿರೆನ್ನಯ್ಯ ಬಿಡಬೇಡವೊ ಕೈಯ್ಯ ಬಡವರ ಬಂಧು ಬಹುಕೃಪಾಸಿಂಧು ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ ಪ. ಶತ ಅಪರಾಧವ ಮಾಡಿದೆನಯ್ಯ ಸೇರಿದೆ ನಾ ನಿನ್ನ ಬೆನ್ನ ಅತಿಪಾತಕಿ ಅಜಾಮಿಳನ ಉದ್ಧರಿಸಿದೆ ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ 1 ನೆಲೆಗಾಣದೆ ನಾನಾಪರಿ ಚಿಂತೆಗೆ ಒಳಗಾದೆನೊ ನಾಹೀಗೆ ಬಳಲಿಸಬ್ಯಾಡವೊ ಭಕ್ತಕುಟುಂಬಿ ನಳಿನದಳಾಂಬಕ ನೀ ಸಲಹೆನ್ನನು 2 ಹೇರೊಪ್ಪಿಸಿದ ಮೇಲ್ಯಾತರ ಸುಂಕವು ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯ 3
--------------
ಹೆಳವನಕಟ್ಟೆ ಗಿರಿಯಮ್ಮ
ಕಡೆಗೋಲ ತಾರೆನ್ನ ಚಿನ್ನವೆ- ಮೊಸರೊಡೆದರೆ ಬೆಣ್ಣೆಬಾರದು, ಮುದ್ದುರಂಗ (ಮಗುವೆ ಪಾ) ಅಣ್ಣನ ಒಡಗೊಂಡು ಬಾರೈಯ-ಸವಿಬೆಣ್ಣೆಯ ಮುದ್ದೆಯ ಮೆಲುವಿರಂತೆಬಣ್ಣದ ಸರವನ್ನು ಕೊರಳಲ್ಲಿ ಹಾಕುವೆಚಿಣ್ಣರೊಡನೆ ಆಡಕಳುಹುವೆ ರಂಗ 1 ಪುಟ್ಟ ಬಚ್ಚಿಯ ತಂದು ನಿನ್ನಯ ಚಿನ್ನದತೊಟ್ಟಿಲ ಕಾಲಿಗೆ ಕಟ್ಟಿಸುವೆಬಟ್ಟಲು ತುಂಬಿದ ಸಕ್ಕರೆ ನಿನಗೀವೆಕಟ್ಟಾಣಿ ಮುತ್ತಿನ ಸರವನೀವೆ 2 ಬಡವರ ಭಾಗ್ಯದ ನಿಧಿಯೆ ಗೋಕುಲ-ದೊಡೆಯನೆ ಮಾಣಿಕ್ಯದ ಹರಳೆಕಡುಮುದ್ದು ಉಡುಪಿನ ಬಾಲಕೃಷ್ಣಯ್ಯದÀುಡುಕು ಮಾಡುವರೇನೊ ಪೆಂಗಳೊಳುರಂಗ3
--------------
ವ್ಯಾಸರಾಯರು
ಕಂಡೆನಮ್ಮಾ ಕೌತುಕದಾ ಗಾರುಡಿಗನಾ | ಕೊಂಡಾಡಲಳವಲ್ಲ ಹೇಳಲೇ ನಾ ಪ ಬೋಧದನಾಗರ ನೂದುವನಾ 1 ಭಕ್ತರುದ್ದೇಶಕ ಬಂದ ಜವದಿ 2 ಸಕಲ ತೇಜದ ಬಬ್ಬುಳಿಯೋ ರೂಪ ನೆಲಿಯಾ | ಪ್ರಕಟ ತಿಳಿಯದು ನಿಜ ಕಳಿಯನಾ 3 ಅರಿಶಿಕ್ಷಾ ಭಕುತರ ಪಕ್ಷಾವೆಂಬ ನಾನಾ | ಬಿರುದು ಕಟ್ಟಿಹ ಮಹಿಮನಾ 4 ಕಾಳ ಸರ್ಪದ ನಿಜ ಮುಖ ಬಂಧವನ ಮಾಡಿ | ಜಾಳಿಸಿದನು ಭಯ ಈಡ್ಯಾಡಿ 5 ಹಮ್ಮಿನ ಗಾವ ಗುಂಡ ಗಜದಂತ ಶರಣರಿಗೆ | ವಮ್ಮಿಲೆ ಕಲೆಗಳ ದೋರುದೀಗನಾ 6 ತಂದೆ ಮಹಿಪತಿ ಸುತ ಸ್ವಾಂಮಿ ದುರ್ಲಭದಾ | ನಂದವ ತೋರಿದಾ ದಯದಿಂದಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು