ಒಟ್ಟು 4310 ಕಡೆಗಳಲ್ಲಿ , 119 ದಾಸರು , 2738 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರುತ ಒಲಿದವಗೆ ಮಾರಮಣನು ಒಲಿವಾ ಪ ಭಾರತೀರಮಣ ಮುನಿಯೆ ಭವಹರ ಹರಿ ಮುನಿವ ಅ.ಪ. ಸುಗ್ರೀವನು ಬಂದು ಹನುಮನ್ನ ಅನುಸರಿಸೆಶೀಘ್ರದಿಂದ ಹರಿ ವಾಲಿಯ ಕೊಂದನು ||ವಿಗ್ರಹದೊಳಗೆ ಕರ್ಣನ ಗೆದ್ದ ಅರ್ಜುನನುಅಗ್ರಜನ ಕೃಪೆ ಇದ್ದ ಕಾರಣಾ1 ಹನುಮಗ್ಹರಿ ಒಲಿಯಲು ರಾವಣನ ಒಂದುಕ್ಷಣದೊಳಗೆ ಹರಿ ಖಂಡಿಸಿದನು ||ಅನುಮಾನವಿಲ್ಲದೆ ಅವನನುಜ ವಿಭೀಷಣಗೆಘನ ಪದವಿಯನಿತ್ತ ಹನುಮ ಬೋಧಿತ ಹರಿ2 ದಾತ ದಾತ 3
--------------
ಮೋಹನದಾಸರು
ಮಾರ್ಗ ನಡಿಬೇಡಾ ಪ ಸೇವೆಯ ಮಾಡಬೇಡ ಮಾಡದಿರಬೇಡ 1 ನೀ ಬೀಳಬೇಡ ಒಳಗಾಗಿ ಕೆಡಬೇಡ 2 ಜ್ಞಾನಿಗಳ ಸಂಗ ಬಿಡಬೇಡ ಅಜ್ಞಾನಿಯ----ಇರಬೇಡ ಮನ್ನಿಸದಿರಬೇಡ 3 ತಪ್ಪಿನಡೆ ನುಡಿಬೇಡಾ ಹಿರಿಯರ ಬುದ್ಧಿ ಬಿಡಬೇಡಾ 4 ಅನ್ಯಜಾತಿಗೊಳಗಾಗಬೇಡಾ ನಿನ್ನ ಜಾತಿಧರ್ಮ ಬಿಡಬೇಡಾ ಸ್ಮರಿಸದಿನಿರು ಬೇಡಾ 5
--------------
ಹೆನ್ನೆರಂಗದಾಸರು
ಮಾಲಕೌಸ್ತುಭ ಸತ್ಯಭಾಮಲೋಲ ನೀಲಶಾಮಸುಂದರ ಕಾಲಕಾಲದಿ ಬಿಡದೆ ಎನ್ನ ಪಾಲಿಸಭವನೆ ಪ ಭುವನವೀರೇಳು ಸೂತ್ರಧಾರ ಭವದರೋಗಕ್ವೈದ್ಯ ಭಕ್ತಭಯ ಪರಿಹಾರ ಸತ್ಯ ಬುವಿಜಾಮನೋಹರ 1 ಕೋಮಲಾಂಗ ಭಜಕಜನರ ಕಾಮಿತಾರ್ಥ ಕೊಡುವ ಸುರ ಕಾಮಧೇನು ಕಲ್ಪವೃಕ್ಷ ಸ್ವಾಮಿ ದಯಾಕರ 2 ಸಾರ ಮಾಯಾಮೋಹವಿದೂರ ಕೇಶವ 3 ಪರಕೆ ಪರಮ ಪರಾತ್ಪರ ಮರಣರಹಿತ ಮಾರಮಣ ಉರಗಶಾಯಿ ಪರಮಪುರುಷ ಶರಣು ಸುಖಕರ 4 ನಿಗಮವೇದ್ಯ ನಿರುಪಮಾತ್ಮ ಅಗಣಿತಗಣಿತಗಮ್ಯಚರಿತ ಸುಗುಣ ಶಾಂತಾಕಾರ ಮೂರು ಜಗದ ಪಾಲಯಾ 5 ಸಕಲವಿಘ್ನದೂರ ನಿನ್ನ ಭಕುತಿಯಿಂದ ಭಜಿಸಿಬೇಡ್ವೆ ಮುಕುತಿಸಂಪದ ನೀಡಿ ಸಲಹು ಭಕ್ತವತ್ಸಲ 6 ಕಂದಮಾಡಿದಪರಾಧಗಳ ತಂದೆ ದಯದಿ ಕ್ಷಮಿಸಿ ಬಂದ ಬಂಧಗಳನು ಪರಿಹರಿಸಯ್ಯ ಸಿಂಧುಮಂದಿರ 7 ನಾನಾಯೋನಿಯೊಳಗೆ ಪುಟ್ಟಿ ಜ್ಞಾನಗೆಟ್ಟು ಬಳಲುವಂಥ ಹೀನ ಬವಣೆ ತಪ್ಪಿಸಯ್ಯ ದೀನಪಾಲ 8 ನಿರುತ ನಿನ್ನ ಚರಣದೆಡೆಗೆ ಬರುವ ಸುಲಭಮಾರ್ಗ ಆವು ದ್ವರವ ಪಾಲಿಸೊಲಿದು ಎನಗೆ ಕರುಣಸಾಗರ 9 ದೋಷದಾರಿದ್ರ್ಯಗಳೆಲ್ಲ ನಾಶಗೈದು ಹರಿಯೆ ನಿಮ್ಮ ದಾಸನೆನಿಸುದ್ಧಾರಮಾಡು ದೋಷನಾಶನ 10 ಮರೆಯಬಿದ್ದ ತರಳನನ್ನು ಕರುಣದೃಷ್ಟಿಯಿಂದ ನೋಡಿ ಸರ್ವಭಯ ಪರಿಹಾರಮಾಡು ಹರಿಸರ್ವೋತ್ತಮ 11 ನಿನ್ನ ಒಲವು ಬಲವು ಎನಗೆ ಅನ್ಯಬಲವ ಒಲ್ಲೆಸ್ವಾಮಿ ಮನ್ನಿಸಬೇಕಿನ್ನು ಮಗನ ಸನ್ನುತಾಂಗನೆ 12 ನಂಬಿ ಭಜಿಪ ಬಕ್ತಜನರ ಇಂಬುದಾಯಕ ನೀನು ಇಂಬುಗೊಟ್ಟು ಸಲಹು ಎನ್ನ ಅಂಬುಜಾಕ್ಷನೆ 13 ಏನುತಪ್ಪು ಇರಲು ನೀನೆ ದಯದಿ ಕ್ಷಮಿಸಿ ಇನ್ನು ನಾನಾಬೇನೆ ಕಳೆದು ಕಾಯೊ ಜಾನಕೀಶನೆ 14 ಚಾರುವೇದ ಪೊಗಳುವಂಥಪಾರ ನಿನ್ನ ದಿವ್ಯಮೂರ್ತಿ ತೋರಿಧನ್ಯನೆನಿಸು ಎನ್ನ ನಾರಸಿಂಹನೆ 15 ಭಾರ ನಿನ್ನದಯ್ಯ ಬಂದ ಘೋರ ತಾಪತ್ರಯಂಗಳಿಂದ ಪಾರುಮಾಡಿ ಕಾಯುವುದು ಕಾರುಣ್ಯ ನಿಧೆ 16 ಪ್ರಾಣಹಾರಿ ಹೋಗಲು ನಿನ್ನ ಧ್ಯಾನವಗಲದಂತೆ ಎನಗೆ ತ್ರಾಣಪಾಲಿಸಯ್ಯ ಮೊದಲು ಧ್ಯಾನದಾಯಕ 17 ದಾಸನರಿಕೆ ದಯದಿ ಪೂರೈಸಿ ಕಾಯಬೇಕು ದೇವ ಘಾಸಿಗೈಯದೆ ರಕ್ಷಿಸಯ್ಯ ದಾಸಪ್ರಿಯನೆ 18 ಕೆಟ್ಟಶಕುನರಿಷ್ಟ ಸ್ವಪ್ನ ತಟ್ಟಬೇಕೆ ನಿನ್ನ ಪಾದ ನಿಷ್ಠೆಯಿಂದ ಭಜಿಪರ್ಗೆ ಸೃಷ್ಟಿಕರ್ತನೆ 19 ನಿತ್ಯ ನಿರ್ಮಲಾತ್ಮ ನಿನ್ನ ನಿತ್ಯಭಕ್ತಿ ಸುಖವನಿತ್ತು ಸತ್ಯಸಂಧನೆನಿಸು ಎನ್ನ ಸತ್ಯರಾಧಾರ 20 ಮರವೆ ತರಿದು ಹರಿಯೆ ನಿಮ್ಮ ಕರುಣ ನೀಡಿ ಮರಣ ಭಯವ ಪರಿಹರಿಸಯ್ಯ ಸಿರಿಯವಲ್ಲಭ 21 ಭಾನುಕೋಟಿಪ್ರಕಾಶ ನಿನ್ನ ಧ್ಯಾನಿಸಿ ಮರೆಹೊಕ್ಕೆ ನಾನಾಬೇನೆ ಗೆಲಿಸಿ ಕಾಯೊ ದಾನವಾಂತಕ 22
--------------
ರಾಮದಾಸರು
ಮಾವಿನಕೆರೆ-2 ಏತಕೆ ಗಿರಿಯಲ್ಲಿ ನೆಲೆಸಿದೆಯೊ | ರಂಗ || ಪ ಭಂಗ ಅ.ಪ ದಾನಿ ನೀನೆನ್ನುತಲಿ ದಿನದಿನವು ಲಕ್ಷಾಳಿ ದೀನ ಮನುಜರು ಬಂದು ಬಾಧಿಸುವರೆಂದೂ ಕಾನನಾಂತರದಲ್ಲಿ ನೆಲೆಸಿದೆಯೊ ನಾಕಾಣೆ ನೀನೆಲ್ಲಿ ಪೋದೊಡಂ ಬಿಡೆನೈಯ ರಂಗ 1 ಜನನಿಬಿಡ ಪುರವೆಂದು ಮನಕೆ ಬೇಸರವಾಗಿ ವನದೊಳಗೆ ಚರಿಸಬೇಕೆನುತಲಿಹೆಯೋ ಮನುಜರ ಅನ್ಯಾಯ ದುಷ್ಕಾರ್ಯಗಳ ನೋಡಿ ಮನಕರಗಿ ಗಿರಿಯನ್ನು ಸೇರಿದೆಯೊ ರಂಗ 2 ದೇಹದಂಡನೆಯಿಂದ ಇಹಪರದ ಸುಖವೆಂಬ ರಹಸ್ಯ ತತ್ವಾರ್ಥವನು ತಿಳಿಸಲಿಹೆಯೋ ಶ್ರೀಹರಿಯೇ ನಿನ್ನ ವೈಚಿತ್ರ್ಯವಸದಳವಯ್ಯ ದೇಹಧಾರಿಗೆ ಅಳವೆ ವರ್ಣಿಸಲು ನಿನ್ನಾ 3 ಬೇವ ಮಾವನು ಗೈದೆ ಮಾವಬೇವನು ಗೈದೆ ಶಿವರೂಪದೆ ನಿಂದು ಕೇಶವನು ಎನಿಸಿದೆ ಭಾವುಕರು ಗೈಯದಾ ದೇವಾಲಯವ ಗೈದೆ ಮಾವಿನಕೆರೆರಂಗ ನಿನಗಾರು ಸಮರೋ 4 ವನಜನಾಭನು ಎಂಬ ಅನುಮತಿಯನೀಯಲ್ಕೆ ಹನುಮದೇವನ ಪೂಜಿಸಿ ಮನವೊಲಿಸಿದೇ ಸನುಮತದಿ ಕಾಯೆನ್ನ ರಾಮದಾಸಾರ್ಚಿತನೆ ಅನುವಿಂದ ನೀನೆನ್ನ ಮನದೊಳಿರು ಹರಿಯೇ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮೀರಲುಬಹುದೆ ದೈವ ಸಂಕಲ್ಪವ ಪ ಮಾರಮಣನ ಘನ ಮನಕೆ ಬಂದುದನು ನಿ ವಾರಿಸಿ ನಡೆಯಲಾ ಆರಿಗೆ ಸಾಧ್ಯವು ಅ.ಪ. ಪುತ್ರರÀ ಬಯಸಲು ಮತ್ತೆ ವಂದ್ಯಳು ಸತಿ ವಿತ್ತ ಬಯಸೆ ಶುಕ್ಲ ವೃತ್ತಿಯೆ ಗತಿಯು 1 ಆಲಯದೊಳು ಜನನ ಆಗಬೇಕೆಂದರೆ ಕಾಲನಾಮಕನಿಚ್ಛೆ ಅನ್ಯತ್ರವಿಹುದು 2 ಜನನ ಮರಣಗಳು ಜಗದೀಶನಾಧೀನ ವನಜನಯನ ಶ್ರೀ ಕರಿಗಿರೀಶನ ಚಿತ್ತ 3
--------------
ವರಾವಾಣಿರಾಮರಾಯದಾಸರು
ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಪ ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ ಹರಿಯ ಗುಣಂಗಳ ಕೊಂಡಾಡುತ ಪರಮ ಉತ್ತಮರು ಬರಲು ಬನ್ನಿ ಬನ್ನೆಂದು ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ 1 ನಾನು ನೀನು ಎಂದು ಜ್ಞಾನವನೆ ತಿಳಿಕೊಂಡು ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ ಈ ನಾಡಿನೊಳಗಿವ ಹೀನವನು ಎಂಬರ್ಥ ಈ ನುಡಿ ಎನಿಸಿಕೊಂಬುದೆ ತಮಸು 2 ಒಂದರೊಳಾನಂತ ಅನಂತದಲಿ ಒಂದು ಒಂದೊಂದು ಅನಂತ ಹರಿಪ್ರೇರಕ ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ ನಿಂದಕವಾಗಿ ಬಾಳುವದೆ ಮುಕ್ತಿ 3 ಅನ್ನದಾ ಸಮಯ ಇಲ್ಲದೆ ಕಂಡಲ್ಲಿ ತಿನ್ನಲೋಡಿ ಸಮಯವೆನ್ನದೆ ಅನ್ಯರ ಬದುಕ ಪಹರಿಸುವ ಖಲು ಗನ್ನ ಫಾತಕನೆನಿಸಿಕೊಂಬುವದೆ ತಮಸು 4 ಮೀಸಲಾ ಮನದಲ್ಲಿ ವಾಸುದೇವನ ನಿಜ ವಾಸರದಲ್ಲಿ ಜಾಗರಾ ಮಾಡುವಾ ಆಶೆಬಡಕನಲ್ಲ ದೇಶದೊಳಗೆ ಹರಿ ದಾಸನೆಂದು ಪೇಳುವುದೆ ಮುಕ್ತಿ 5 ವ್ರತವಿಲ್ಲ ವಾವಿಲ್ಲ ಮತಿ ಮೊದಲು ಇಲ್ಲಾ ಕಥಾಶ್ರವಣ ಒಂದು ಕೇಳಲಿಲ್ಲ ಪಿತ ಮಾತರನ್ನ ಬೊಗಳುವ ನಾಯಿ ಕು ತ್ಸಿತನು ಎಂದೆನಿಸುವದೆ ತಮಸು 6 ಗುಣ ಒಳ್ಳೇದು ನೀತಿ ಮನ ಒಳ್ಳೇದು ಅಜ ತೃಣ ಜೀವಾದಿಯ ಭೇದಬಲ್ಲನಿವ ಗಣನೆಮಾಡ ವಿಜಯವಿಠ್ಠಲನಲ್ಲದೆ ಕ್ಷಣ ಹೀಗೆ ಎಂದೆನಿಸುವದೆ ಮುಕ್ತಿ 7
--------------
ವಿಜಯದಾಸ
ಮುಕ್ಕೋಟ ದ್ವಾದಶಿಯ ದಿವಸ (ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ) ರಂಭೆ : ಮತಿವಂತೆ ಪೇಳೀತನ್ಯಾರೆ ದೇವ ವ್ರತತಿಯಧಿಪನಂತೆ ನೀರೆ ತೋರ್ಪ ಅತಿಶಯಾಗಮ ಬಗೆ ಬ್ಯಾರೆ ರತ್ನ ದ್ಯುತಿಯಾಭರಣವ ಶೃಂಗಾರ ಆಹಾ ಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ- ಗತಿ ಸ್ಮøತಿ ತತಿಗಳ ಮತಿಗಗೋಚರನಂತೆ 1 ಊರ್ವಶಿ : ಲಾಲಿಪುದೆಲೆಗೆ ಪೇಳುವೆನು ನೂತನವ ಲೋಲ ಲೋಚನನ ನಾಟಕ ಸತ್ಕಥನವ ಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿ ಬಾಲಾರ್ಕಸದೃಶನೀತನು ಇರ್ಪನಲ್ಲಿ ನೀಲನಿಭಾಂಗನು ನೆನೆವರ ಪಾಪವ ಘೋಲುಘಡಿಸಲೆಂದೆನುತಲಿ ಭಾರ್ಗವ ಕೋಲಿಂದೆಸಗಿದ ಧರಣಿಗೆ ಬಂದು ಸ- ಲೀಲೆಗಳೆಸಗುವ ಜಾಲವಿದೆಲ್ಲ 2 ಸರಸಿಜಗಂಧಿ ಕೇಳ್ ದಿಟದಿ ತನ್ನ ಅರಮನೆಯಿಂದ ಸದ್ವಿಧದಿ ಈರ್ವ- ರರಸಿಯರ್ ಸಹಿತ ಮಿನಿಯದಿ ಅತಿ ಭರದಿಂದ ಸೂರ್ಯನುದಯದಿ ಆಹಾ ಉರುತರ ಹೇಮಪಲ್ಲಂಕಿಯೊಳಡರಿ ತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ3 ಊರ್ವಶಿ : ಮದ್ದಾನೆಗಾತ್ರೆ ಲಾಲಿಸಿ ಕೇಳು ಮಾತ ಬದ್ಧ ನೀ ಪೇಳ್ದ ಮನದ ಶಂಕಾವ್ರಾತ ತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳು ಸೂರ್ಯ ಉದಯ ಕಾಲದೊಳು ಭದ್ರಭವನವನು ಪೊರಟು ವಿನೋದದಿ ಅದ್ರಿಧರನು ಸಜ್ಜನರೊಡಗೂಡಿ ಉ- ಪದ್ರಿತ ಪಾಪವ ಛಿದ್ರಿಪ ಸ್ನಾನಕೆ ರೌದ್ರಿತ ರಾಮಸಮುದ್ರದ ಬಳಿಗೆ 4 ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿ ಪರಮ ಮಹಿಮೆನೆಂದ ಮೇರೆಗೆ ಘನ- ತರ ಸ್ನಾನವೇನಿದು ಕಡೆಗೆ ವೃತ ದಿರವೋ ಉತ್ಸವವೋ ಪೇಳೆನಗೆ ಆಹಾ ತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈ ಪರಿಗಳ ಸಾಂಗದಿಂದರುಹಬೇಕೆನಗಿನ್ನು 5 ಊರ್ವಶಿ : ಅಕುಟಿಲೆ ಬಾಲೆ ಯೌವನವಂತೆ ಕೇಳೆ ಸಕಲಾಂತರ್ಯಾತ್ಮನೀತನು ಸತ್ಯಶೀಲೆ- ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿ ಭಕುತವತ್ಸಲನು ಉತ್ಸವಿಸುವನಲ್ಲಿ ವಿಕಳಹೃದಯ ನರನಿಕರಕಸಾಧ್ಯವೆಂ ದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿ ಅಖಿಳೋತ್ಸವ ಮಸ್ತಕಕಿದು ವೆಗ್ಗಳ ಮುಕುಟೋತ್ಸವವೆಂದೆನುತಲಿ ರಚಿಸುವ 6 ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನ ವೊಲವಿಂದ ಗೈದ ಮೇಲಿವನು ತನ್ನ ರಮಣಿಯರ್ಸಹಿತಂದಣವನು ಏರಿ ನಿಲುನಿಲುತ್ಯಾಕೆ ಬರುವನು ಆಹಾ ಪೊಳಲೊಳಗಿಹ ಜನನಿಳಯದ ದ್ವಾರದಿ ಕಳಕಳವೇನಿದ ತಿಳುಪೆನಗೀ ಹದ7 ಊರ್ವಶಿ : ಕುಂದರದನೆ ಬಾಲೆ ಚದುರೆ ಸೈ ನೀನು ಮಿಂದು ತೋಷದಿ ಅಂದಣವನ್ನೇರಿ ತಾನು ಇಂದೀ ಪುರದೊಳಿರ್ಪ ಜನರ ದೋಷಗಳ ಕುಂದಿಸಲೆಂದವರವರ ದ್ವಾರದೊಳು ನಿಂದಿರುತಲ್ಲಿಯದಲ್ಲಿ ಆರತಿಗಳ ಚಂದದಿ ಕೊಳುತೊಲವಿಂದ ಕಾಣಿಕೆ ಜನ- ವೃಂದದಿ ಕೊಡುತಾನಂದ ಸೌಭಾಗ್ಯವ ಒಂದಕನಂತವ ಹೊಂದಿಸಿ ಕೊಡುವ 8 ರಂಭೆ : ಸರಸಿಜಾನನೆ ಮತ್ತೇನಿದನು ತನ್ನ ಅರಮನೆಯಲ್ಲಿ ಭೂದ್ವಿಜನರನು ಸರ್ವ ಪುರಜನ ಸಹಿತೊಳಗಿವನು ನಾನಾ ತರದಿ ಮೆರೆವ ಭೋಜನವನು ಆಹಾ- ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ- ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9 ಊರ್ವಶಿ : ಮಂಗಲಾನನೆ ಲೇಸು ನುಡಿದೆ ಕೇಳ್ ನೀನು ಗಂಗಾಜನಕ ತನ್ನ ಗೃಹದಿ ವಿಪ್ರರನು ಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿ ಸಂಗಾತದಲಿ ಆರೋಗಣೆ ಗೈದು ಮೆರೆಸಿ ಅಂಗಣದಲಿ ರಾತ್ರೆಯಲಿ ವಿನೋದದಿ ಕಂಗೊಳಿಸುವ ಉರಿದರಳ ಸಮೂಹಕೆ ರಂಗಪೂಜೆಯನುತ್ತಂಗವಿಸುವ ನಿಗ- ಮಂಗಳೊಡೆಯನು ವಿಹಂಗಮಾರೂಢ 10 ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ- ಕುಮುದಾಪ್ತ ಠಾವಿನ ವೋಲು ಬಂದು ಆದರಿಸಲಿದರ ಮಧ್ಯದೊಳು ತನ್ನ ರಮಣಿಯರ್ ಸಹಿತ ತೋಷದೊಳು ಆಹಾ ವಿಮಲವನ್ನೇರಿನ್ನೆಲ್ಲಿಗೈದುವನೆಂಬಾ- ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11 ಊರ್ವಶಿ : ಥೋರ ಕನಕುಂಭಕುಚಭಾರೆ ಕೇಳೆ ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆ ಚಾರು ಈ ಹೂವಿನ ತೇರನೇರುತಲಿ ಕೇರಿ ಕೇರಿಯೊಳಾರತಿಗೊಳ್ಳುತಲಿ ಭೋರಿಡುತಿಹ ವಾದ್ಯಧ್ವನಿ ಘನತರ ಭೇರಿ ಮೃದಂಗಾದ್ಯಖಿಳ ವಿನೋದದಿ ಸ್ವಾರಿಗೆ ತೆರಳುವ ಕ್ರೂರ ನರರ ಆ- ಘೋರ ಪಾಪ ಜರ್ಝರಿಸಲೆಂದು 12 ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನ ಅರಮನೆಯಿದಿರು ರಥವನು ತಾನು ಭರದೊಳಗಿಳಿದಂದಣವನು ಏರಿ ಮೆರೆವಾಲಯದ ಸುತ್ತುಗಳನು ಆಹಾ ತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ- ಭರಿತ ಗಾಯನ ಭೇರಿ ಧ್ವನಿಗಳೇನಿದ ಪೇಳೆ13 ಊರ್ವಶಿ : ಕೃಷ್ಣಾಂಕ ವದನೆ ಕೇಳೆಲೆ ಪೇಳ್ವೆ ನಿನಗೇ ದುಷ್ಟಮರ್ದನ ರಥವಿಳಿವುತ್ತಲಾಗೇ ಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆ ಅಷ್ಟಾವಧಾನವ ರಚಿಸುತ್ತ ಕಡೆಗೆ ಶ್ರೇಷ್ಠನು ರತ್ನಾಸನದಿ ಗ್ರಹದಿ ಪರ ಮೇಷ್ಟಜನಕೆ ಸಂತೋಷಾನಂದದಿ ಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತ ಇಷ್ಟವನೀವ ಯಥೇಷ್ಟ ದಯಾಬ್ಧ 14 ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನು ಹರಿ ಏಕರೂಪನೆನ್ನುತಲಿ ಲಕ್ಷ್ಮೀ ಕರವೆನಿಸುವ ಕಾರ್ಕಳದಲಿ ಭಾಗ್ಯೋ- ದಯ ದೇವಾಲಯದ ಮಧ್ಯದಲಿ ಆಹಾ ತ್ವರಿತದಿ ನುತಿಸಿರೊ ಗುರು ನಾರಸಿಂಹ ಶ್ರೀ- ಕರ ವೆಂಕಟೇಶನ ಚರಣಕಮಲಗಳ 15
--------------
ತುಪಾಕಿ ವೆಂಕಟರಮಣಾಚಾರ್ಯ
ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಪ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು ಅ.ಪ. ಮಧುವಿರೋಧಿಯಮಲ ಗುಣವ ನಲಿದು ಪಾಡುವವನು 1 ಕೇಶವಗೆ ರಮಾಬ್ಜಭವ ಸದಾಶಿವ ಶಕ್ರಾದಿ ಸುರರು ದಾಸರು ಎವೆ ಇಡುವ ಶಕ್ತಿ ಲೇಶವಿಲ್ಲವೆಂಬ ನರನು 2 ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯವ ಸಮ ಬಂಧಗೈಸಿ ವೈಷಯಿಕ ಸುಖ ತಂದು ಕೊಡುವನೆಂಬ ನರನು 3 ಈ ಪರಿಯಲಿ ತಿಳಿದು ಪುಣ್ಯ ಪಾಪಕರ್ಮ ದುಃಖಸುಖ ಜ ಯಾಪಜಯ ಮಾನಾಪಮಾನ ಶ್ರೀಪ ಕೊಡುವನೆಂಬ ನರನು 4 ವೇದ ಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ ಮೋದ ತೀರ್ಥರುಕ್ತಿಯಿಂದ ಶೋಧಿಸುತಲಿ ಸುಖಿಪ ನರನು 5 ಕರ್ಮ ವಿಹಿತ ಅಸಜ್ಜನರು ಮಾಳ್ಪ ವಿಹಿತವಾದ ಕಾಲಕದು ಅವಿಹಿತವೆಂದು ತಿಳಿಯುವವನು6 ಸ್ವರ್ಗ ಭೂಮಿ ಕರ್ಮ ಹರಿಸುವ ಹರಿಯೆಂಬ ನರನು7 ಪರಮ ಪುರುಷಗರ್ಪಿಸುತಲಿ ಹರುಷ ಬಡುತಲಿಪ್ಪ ನರನು 8 ಈ ಶರೀರದರಸು ಶ್ರೀನಿವಾಸಾ ಮಾತೆ ಪ್ರಾಣ ಪಾರ್ವ ತೀಶರಿಹರು ಎಂದೀ ದೇಹ ಪೋಷಿಸುತಲಿ ತೋಷಿಸುವನು 9 ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರೀಯನೆಂದು ಅನ್ಯ ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನ 10 ಶತ್ರುತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣ ತುತಿಪ ನರನು11 ಬಿಂಬನೆನಿಸಿ ಸರ್ವರ ಹೃದಯಾಂಬರದೊಳಗಿದ್ದು ಜನವಿ ಡಂಬನಾರ್ಥ ಕರ್ಮಗಳ ಆರಂಭ ಮಾಳ್ಪೆನೆಂಬ ನರನು 12 ಅಕ್ಷರೇಢ್ಯ ಬ್ರಹ್ಮ ವಾಯು ತ್ರ್ಯಕ್ಷಸುರಪ ಸುರರೊಳಗ ಧ್ಯಕ್ಷ ಸರ್ವ ಕರ್ಮಗಳಿಗೆ ಸಾಕ್ಷಿಯೆಂದು ಸ್ಮರಿಸುವವನು 13 ಅಂಬುಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ ತಂಬಿನಿ ಸಹ ಸರ್ವರೊಳಗೆ ತುಂಬಿಹನೆಂದರಿತ ನರನು 14 ಅದ್ವಿತೀಯನಪೇಕ್ಷ ಭಕ್ತ ಹೃದ್ವನಜ ನಿವಾಸಿಯೆನಿಸಿ ಕದ್ದೊಯ್ದವರಘವನುಣಿಪನದ್ವಯತನೆಂಬ ನರನು 15 ಜಾಂಬವತೀರಮಣ ವಿಷಯ ಹಂಬಲವನು ಬಿಡಿಸಿ ತನ್ನ ಕಾಂಬ ಸುಖವನಿತ್ತು ನಿಜ ಕುಟುಂಬದಿಡುವನೆಂಬ ನರನು 16 ಅಣು ಮಹತ್ಪದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ ಜನಿಸಿ ಪುಣ್ಯ ಪಾಪ ಫಲಗುಳುಣದೆ ಉಣಿಪನೆಂಬ ನರನು 17 ಕರ್ಮ ಸುದತಿಯರೊಡಗೂಡಿ ಸಮಾ ಶೂನ್ಯ ಮಾಳ್ಪನೆಂದು ಪದೇ ಪದೆಗೆ ಸ್ಮರಿಸುವವನು18 ಸ್ವಾತಿವರುಷ ವಾರಿಕಣವ ಚಾತಕ ಹಾರೈಸುವಂತೆ ಶ್ವೇತವಾಹನ ಸಖನ ಕಥೆಯ ಪ್ರೀತಿಯಿಂದ ಕೇಳ್ಪ ನರನು 19 ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ ಲೋಕರಂತೆ ಲೋಕದೊಳು ವಿಶೋಕ ಮಾಳ್ಪನೆಂಬ ನರನು20 ಶಾತಕುಂಭವರ್ಣ ಜಗನ್ನಾಥ ವಿಠಲನೆಂಬ ಮಹ ದ್ಭೂತ ಬಡಕರಾವು ಇವನ ಭೀತಿ ಬಿಡದು ಎಂಬನರನು 21
--------------
ಜಗನ್ನಾಥದಾಸರು
ಮುಕ್ತನಾವನೋ ಜೀವನ್ಮುಕ್ತನಾವನೋ ಪ ಮುಕ್ತನಾವನಿವರ ಪಾದಾಸಕ್ತನಾಗಿ ಸರ್ವಕರ್ಮ ಭಕ್ತಿಯಿಂದ ನೀಡಿ ವಿಷಯಾಸಕ್ತನಾಗದವನಿಗಿನ್ನ ಅ.ಪ ಉದಯಕಾಲದಲ್ಲಿ ಎದ್ದು ನದಿಯಸ್ನಾನಮಾಡಿ ಇವರ ಪದುಮಸಮಪಾದಯುಗಳ ಹೃದಯದಲ್ಲಿ ಭಜಿಪಗಿನ್ನ 1 ವನಿತೆ ಧಾನ್ಯ ಧನುವು ತನಯ ಪ್ರಾಣ ಇವರ ಪಾದವನಜಕರ್ಪಿಸಿರುವಗಿನ್ನ 2 ಊಟ ಕೂಟ ನೋಟಮಾಟ ಪಾಠ ಆಟ ಕಾಟ ಇವರ ಉದಧಿ ದಾಟುವಾವಗಿನ್ನಮತ್ತೆ 3 ಉಕ್ತ ಕರ್ಮದಲ್ಲಿ ಮನ ಸಕ್ತನಾಗಿ ಹರಿಯ ಪಾದ ಭಕ್ತಿಯಿಂದ ಭಜಿಸಿ ಪಾಪಮುಕ್ತನಾಗುವವಗಿನ್ನ 4 ಶಕ್ತಿ ಇದ್ದರೊಳಗೆ ಹರಿಯ ಭಕ್ತಜನರ ಭಜಿಸಿ ಸರ್ವೋ ವಿಭೂತಿ ಮನದಿ ವ್ಯಕ್ತಮಾಡಿದವಗಿನ್ನ 5 ಮೋದತೀರ್ಥ ಶಾಸ್ತ್ರಸಾರ ಸ್ವಾದ ಮನದಿ ತಿಳಿದು ಅವರ ಹಾದಿಹಿಡಿದು ಬುಧರ ದಿವ್ಯ ಪಾದಯುಗಳ ಭಜಿಪಗಿನ್ನ 6 ಶಿರದಿ ಇದ್ದ ಹರಿಯ ರೂಪ ಅರಿದು ಮನಸಿನಿಂದ ನಿತ್ಯ ಶಿರದಿ ಕಾರ್ಯಮಾಡಿ ತಾನು ಹಿರಿದು ಹಿಗ್ಗುವಗಿನ್ನ 7 ನೇತ್ರಮೊದಲಾದ ಸರ್ವಗಾತ್ರದಲ್ಲಿ ಇರುವ ತೀರ್ಥ ಕ್ಷೇತ್ರಮೂರ್ತಿ ತಿಳಿದು ತನ್ನ ಗಾತ್ರನಿರ್ಮಲ ಮಾಳ್ಪಗಿನ್ನ 8 ಈಶ ಹರಿಯು ಸರ್ವ ಜೀವ ದಾಸರೆಂದು ತನ್ನ ಹೃದಯೋ ಪಾಸನಾವ ಮಾಡಿ ವಿಷಯ ಆಶೆಬಿಟ್ಟು ಇರುವಗಿನ್ನ 9 ಎನು ಮಾಳ್ಪ ಕರ್ಮವೆಲ್ಲ ಶ್ರೀನಿವಾಸ ಮಾಳ್ಪನೆಂದು ಜ್ಞಾನದಿಂದ ಸರ್ವರಲ್ಲಿ ಧ್ಯಾನಮಾಳ್ಪ ಮನುಜಗಿನ್ನ 10 ಶ್ವಾನ ಗೋವು ದ್ವಿಜ ಮತ್ತೆ ಅನಿ ಮೊದಲು ಸರ್ವರಲ್ಲಿ ಜ್ಞಾನಗಮ್ಯ ತಾನು (ತಾನೆ) ಸಮಾನನೆಂದವಗಿನ್ನ 11 ಅಮೃತ ವಿಷವು ಎಲ್ಲ ಸ್ವಾದು ಸಮವೆಂದು ಅಲ್ಲಿ ಇಚ್ಚೇ ಮಾಡದವಗಿನ್ನ 12 ವೃತ್ರಸೂದನನುಜ ಸರ್ವಕರ್ತೃ ಎಂಬವಗಿನ್ನ 13 ಪಾದ ದೂತ ನಾನು ಎಂದು ನಿತ್ಯ ಪಾತಕಾರ್ಯ ಮಾಡಿದಾಗ್ಯು ಪೂತನೆನಿಪನವನಗಿನ್ನ 14 ಸಿಟ್ಟು ಶೋಕ ಹರ್ಷ ಮೋಹ ಸುಟ್ಟು ಗುರುಜಗನ್ನಾಥ ವಿಠಲನ್ನ ಭಜಿಸಿ ಜಗದಿ ಶಿಷ್ಟ ನಾಗಿರುವಗಿನ್ನ 15
--------------
ಗುರುಜಗನ್ನಾಥದಾಸರು
ಮುಕ್ತಿ ದೊರಕಿತು ಗುರುಕೃಪೆಯಿಂದಲಿ ಪ ಒಮ್ಮನದಿಂದಲಿ ವಿವರಿಸಿ ನೋಡಲುಕರ್ಮ ಬ್ರಹ್ಮಾಗಿ ತೋರಿತಕ್ಕ |ಅಮ್ಮಾ ಅಮ್ಮಾ ಈ ಮಾತು ಏನಂತ ಹೇಳಲಿನಿರ್ಮಳ ನಿಜ ವಸ್ತು ಕಾಣ ಬಂತಕ್ಕ 1 ಮಾತು ಮಾತಿನಲಿ ಸಪ್ತಧಾತುವಿನಲಿಮತ್ತೊಂದು ತೋರಿದ ಭುವನದಲಿ |ಎತ್ತ ನೋಡಿದರತ್ತ ವಸ್ತುವೇ ಪರಿಪೂರ್ಣವಿಚಾರದಿಂದಲಿ ಅನುಭವದಿಂದಲಿ2 ಇಂದು ಜ್ಞಾನಬೋಧಗೆ ಆನಂದವಾಯಿತುಸಂದೇಹ ಹೋಯಿತು ಮನಸಿನಲಿ |ಎಂದಿಗೂ ಅಳಿಯದ ಸೌಭಾಗ್ಯ ದೊರಕಿತುತಂದೆ ಗೋವಿಂದನ ವಾಕ್ಯದಲಿ 3
--------------
ಜ್ಞಾನಬೋದಕರು
ಮುಗಿವೇನು ಕೈಯ್ಯಾ ಶಾಂತೇಶರಾಯಾ ರಘುರಾಮಾ ಪ್ರೀಯಾ ಪಾಲಿಸೆನ್ನ ಜೀಯಾ ಪ ಶರಧಿಯ ದಾಟಿ ಮುದ್ರೆಯನು ಕೊಟ್ಟೀ ದುರುಳರ ಮೆಟ್ಟಿ ಪುರಲಂಕೆ ಸುಟ್ಟೀ 1 ಭಂಡಿ ಅನ್ನವನುಂಡೂ ದೈತ್ಯನ ಚಂಡಾಪರಿ ಹಿಡಿಂಬನನು ಮುರಿದಿ 2 ದುಷ್ಟಮತವನು ಸುಟ್ಟೀ ಜ್ಞಾನತೀರ್ಥ ಧಿಟ್ಟ ಶ್ರೀ ಹನುಮೇಶವಿಠಲನ ದೂತಾ 3
--------------
ಹನುಮೇಶವಿಠಲ
ಮುಂಜಾನೆ ಎದ್ದು ಮುರಹರನ ಸ್ಮರಿಸೆಲೆ ಮನವೆ ಅಂಜುವ ಭವದುರಿತ ಹಿಂಗಿಸುವನು ಧ್ರುವ ಕ್ಲೇಶ ಪರಿಹರಿಸುವನು ಭವ ನಾರಾಯಣೆನಲು ಮೀಸಲು ಮನದಲೊಮ್ಮೊ ಮಾಧವೆಂದೆನಲು ತಾ ಭಾವಿಸುವ ಹೃದಯದೊಳು ಗೋವಿಂದನು ವಾಸನೆಯ ಪೂರಿಸುವ ವಿಷ್ಣು ಯೆಂದೆನಲು ತಾ ದೋಷ ಛೇದಿಸುವ ಮಧುಸೂದನೆನಲು ಲೇಸುಗೈಸುವ ಜನುಮ ವಾಮನೆನಲು 1 ಸಿರಿ ಸಕಲ ಪದವೀವ ಶ್ರೀಧರಂದೆನಲು ತಾ ಹರುಷಗತಿನೀವ ಹೃಷೀ ಕೇಶನೆನಲು ಪಾತಕ ದೂರ ಪದ್ಮಾನಾಭೆಂದೆನಲು ಭಂಜನ ದಾಮೋದರೆನಲು ಸುರಿಸುವ ಅಮೃತವ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವೆನಲು ಪರಿಪರಿಯ ಸಲುಹುವ ಪ್ರದ್ಯುಮ್ನನೆಂದೆನಲು ಅರಹುಗತಿನೀವ ಅನಿರುದ್ದನೆನಲು 2 ಪೂರಿಸುವ ಭಾವ ಪರುಷೋತ್ತಮೆಂದೆನಲು ತಾ ತಾರಿಸುವ ಜನುಮ ಅಧೋಕ್ಷಜೆನಲು ನರಜನ್ಮುದ್ಧರಿಸುವ ನಾರಸಿಂಹೆಂದೆನಲು ಕರುಣ ದಯ ಬೀರುವ ಅಚ್ಯುತನೆನಲು ಜರಿಸುವ ದುವ್ರ್ಯಸನ ಜನಾರ್ದನೆನಲು ಊರ್ಜಿತಾಗುವುದು ಉಪೇಂದ್ರ ಎನಲು ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿಯೆನಲು ಕರುಣದಿಂದದೊಗುವ ಗುರುಕೃಷ್ಣನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುದದಿ ಹರಿಯ ಧ್ಯಾನ ಮಾಡಿ ಸಾಧಿಸೊ ಸದಯ ಹೃದಯರಾದ ಸಂಗದೊಳಗೆ ನೀನು ಬೆರೆದು ಪ --ಕರ್ತನಾದ ದೇವ ಸದ್ಪಿಲಾಸನಾ ನಿಖರವಾಗಿ ಹೃದಯದಲ್ಲಿ ನಿಲ್ಲಿಸುವೆನಾ ಪ್ರಕಟಮಾಡಿ ಸ್ತುತಿಸುತಿರುವ ಬಿಡದೆ ಅನುದಿನ ಭಕುತಿಯಿಂದ ಕ--------ಭಕ್ತ ಜನರಕೂಡಿ 1 ಯೋಗಿಜನರ ಹೃದಯದೊಳು ನಿಖರವಾಗಿಇರುವ ಭೋಗಿಶಯನನಾಗಿ ಇರುವ ಪುಣ್ಯ ಪುರುಷನಾ ಸಾಗರಾನಸುತಿಯರಾಳ್ವ ಸಾರ್ವಭೌಮನ ಬೇಗ ಭಜಿಸಿ ಗತಿಯು ಕಾಣ್ವ ಭಾಗವತರ ಸಂಗದಲ್ಲಿ 2 ದುಷ್ಟ ಜನರ ಸಂಗವೆಂಬುದು ದೂರಮಾಡೋ ನೀ ಶಿಷ್ಟ ಜನರ ಪಾದ----------ಯಾಗೋ ನೀ ಇಷ್ಟದಿಂದ ವಿಷ್ಣು ಚಿಂತನೆ ಹಿತದಿ ಮನದಿ ನೀ ನಿಷ್ಠೆಯುಳ್ಳವನು ಆಗಿ ಕೃಷ್ಣ ಹೊನ್ನ ವಿಠ್ಠಲರಾಯನಾ 3
--------------
ಹೆನ್ನೆರಂಗದಾಸರು
ಮುದ್ದು ಮೋಹನರೇಯ | ಅಸ್ಮದ್ಗುರೋರ್ಗುರುಮುದ್ದು ಮೋಹನ ಪ್ರೀಯ | ಲೋಕೈಕ ವಂದ್ಯನೆಮಧ್ವಮುನಿ ಸಂಪ್ರೀಯ | ಕಾಯಯ್ಯ ಜೀಯ ಪ ಉದರ ವಾಸಿತ ಸೃಜ್ಯ ಜೀವರ | ಸದಯದಿಂದಲಿ ಸೃಜಿಸಲೋಸುಗಮುದದಿ ಬಯಸುತ ಶ್ರೀಧರ ಹರಿ | ವದಗಿ ಚತುರ ವ್ಯೂಹ ರಚಿಸಿದ ಅ.ಪ. ಮಾಧವಗೆ ಪ್ರಿಯೆ ಅಂಭ್ರಣೀ | ಪ್ರಲಯಾಬ್ದಿ ಶಯನನಆದರದಿ ತ್ರಯಕಭಿಮಾನಿ | ತುತ್ತಿಸಲು ಜಗವನುಮೋದದಲಿ ಸೃಜಿಸುವ ಹವಣೀ | ಶ್ರೀಹರಿಯು ತಾನುಗೈದು ರೂಪ ಸುಧಾರಣೀ | ವಾಸುದೇವಭಿಧಾನಿ ||ಆದಿ ಸೃಷ್ಟಿಯ ಮಾಡಲೋಸುಗ | ಆದಿ ಮಾಯಾತ್ಮಿಕೆಯು ಲಕ್ಷ್ಮಿಯಮೋದದಿಂದಲಿ ಕೂಡುತಲೆ ತಾ | ಸಾಧಿಸಿದ ತಾರತಮ್ಯ ಸೃಷ್ಟಿಯ 1 ಕೃತಿ ಕೃತಿ ಶ್ರದ್ಧೆಯರಾಗ ಸೃಜಿಸಿದ 2 ಸೂತ್ರ ಶ್ರದ್ಧೆಯರಿಂದ | ಕಾಲಮಾನಿಯ ನಂದಗರುಡನ್ನ ಸೃಜಿಸುತ ನಂದ | ಬೆರೆದು ಶಾಂತಿಯಲಿಂದ ||ಧೀರ ಗುರು ಗೋವಿಂದ ವಿಠಲನು | ಶೂರ ಅನಿರುದ್ದಾಭಿಧಾನದಿನಾರ ವಾಣಿ ಬ್ರಹ್ಮರಿಂದಲಿ | ಮೂರು ವಂದರ ವ್ಯೂಹ ರಚಿಸಿದ 3
--------------
ಗುರುಗೋವಿಂದವಿಠಲರು
ಮುನಿಯು ನೀನಾದದ್ದು ಮನದೊಳು ನಾಬಲ್ಲೆಮುನಿ ಜನ ಮನ ಮಂದಿರಾ - ಸುರೇಂದ್ರಾ ಪ ಅನುಮಾನ ತೀರ್ಥರ ಮಾನ ಮೇಯದ ಸಾರಘನವಾಗಿ ತಿಳಿಸಿದುದಾರಾ - ಸುರೇಂದ್ರಾ ಅ.ಪ. ಗಜ ವೈರಿ ಮಧ್ಯದಭುಜಗ ವೇಣಿಯರ ಕೂಡೀ - ಸುರೇಂದ್ರಾ ||ಅಜನೀನೇ ಎನ್ನುತ | ಭುಜಿಸೆ ಅನ್ನವ ನೀಡಿಯಜನಾದಿಗಳ ಮಾಡಲೂ - ಸುರೇಂದ್ರಾ ||ಗಜ ವರದನು ಬಂದು | ಭುಜಿಸಲು ಅನ್ನವತ್ಯಜಿಸಿ ಬಂದೆಯೊ ಸುರಪುರವಾ - ಸುರೇಂದ್ರಾ 1 ವ್ರಜ || ಸುರರನೆಲ್ಲರ ಕಾಯ್ದಹರಿಯ ಮೊಗವ ನೋಡೆ ನಾಚುತಲೀ - ಸುರೇಂದ್ರಾ 2 ವಾಸುಕಿ | ಅಂದ ನೇಣನ ಮಾಡಿಮಂಥಿಸಿ ಶರಧಿಯನ್ನಾ - ಸುರೇಂದ್ರಾ ||ಅಂದು ನೀನಮೃತವ ನುಂಡ ಕಾರಣದಿಂದಇಂದಿಲ್ಲಿ ಸುರರಿಗುಣಿಸೆ ಬಂದ್ಯೋ - ಸುರೇಂದ್ರಾ 3 ಮಧ್ವ ಶಾಸ್ತ್ರವೆಂಬ | ದುಗ್ದಾಬ್ದಿಯನೆ ನೀನುಶ್ರದ್ಧೆಯಿಂದಲಿ ಮಥಿಸೇ - ಸುರೇಂದ್ರಾ ||ಉದುಭವಿಸಿದ ನ್ಯಾಯ | ಸುಧೆ ಎಂಬ ಅಮೃತವವಿದ್ವಜ್ಜನಕೆ ಉಣಿಸೇ - ಸುರೇಂದ್ರಾ ||ತ್ರಿದಶ ಲೋಕವ ತ್ಯಜಿಸಿ | ಉದಿಸಿದೆ ಧರೆಯೊಳುಸಾಧು ವೇಷವನ್ನೆ ಧರಿಸೀ - ಸುರೇಂದ್ರಾ 4 ನಾಕಪತಿಯೆ ನಿನ್ನಾ | ನೇಕ ಚರಿತೆಯಲ್ಲಿನಾಕೇಳಿ ಪೊಗಳಲಳವೇ - ಸುರೇಂದ್ರಾ ||ಲೋಕಾ ಲೋಕದೊಳು | ಟೀಕಾರ್ಯರೆಂಬವಾಕು ಕೇಳೀ ಬಲ್ಲೆನೋ - ಸುರೇಂದ್ರಾ ||ನಾಕಜ ಪಿತ ಗುರು ಗೋವಿಂದ ವಿಠಲನನೇಕ ಬಗೆಯಿಂದ ಸ್ತುತಿಸಿದೆಯೋ - ಸುರೇಂದ್ರಾ 5
--------------
ಗುರುಗೋವಿಂದವಿಠಲರು