ಒಟ್ಟು 3265 ಕಡೆಗಳಲ್ಲಿ , 123 ದಾಸರು , 2408 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸನ್ಹಿಂಗದವನ ಬಲುಮಡಿ ಮೀಸಲ್ಯಾಕೆ ಆಸೆಬಿಡದವನ ಹರಿದಾಸತ್ವವ್ಯಾಕೆ ಪ ಚಿತ್ತಶುದ್ಧಯಿಲ್ಲದವನ ತತ್ವ ಉಪದೇಶವ್ಯಾಕೆ ಕುತ್ತಿಗೆಯ ಕೊಯ್ವವನ ಭಕ್ತಿಭಾವ್ಯಾಕೆ ಹೆತ್ತವರ ಬಯ್ವವನ ಸತ್ಯರೊಡನಾಟವ್ಯಾಕೆ ಉತ್ತಮರ ಹಳಿವವನ ನಿತ್ಯನೇಮವ್ಯಾಕೆ 1 ಭೇದಕಡಿಯದವನ ಪರಸಾಧನೆಯು ಯಾತಕ್ಕೆ ವಾದಬಿಡದವನ ಸುವೇದ ಓದ್ಯಾಕೆ ಕ್ರೋಧದೊಳುರುಳುವನ ಸಾಧುತ್ವ ಯಾತಕ್ಕೆ ಜಾದುಗಾರನ ಸುಬೋಧವದು ಯಾಕೆ 2 ನಾನೆಂಬುದಳಿಯವ ಜ್ಞಾನಭೋದ್ಯಾಮೃತವ್ಯಾಕೆ ಹೀನಗುಣ ಬಿಡದವನ ಮೌನತ್ವವ್ಯಾಕೆ ದೀನರನು ಬಾಧಿಪರ ದಾನಧರ್ಮವು ಯಾಕೆ ನಾನಾ ಬಯಕ್ಯುಳ್ಳವನ ಧ್ಯಾನವು ಯಾಕೆ 3 ಕುಟಿಲತ್ವ ಸುಡದವನ ಜಟೆ ಕೌಪೀನ್ಯಾತಕೆ ಸಟೆಬೊಗಳಿ ಬದುಕುವನ ಪಟ್ಟೆನಾಮವ್ಯಾಕೆ ದಿಟವರಿಯದಧಮನ ನಿಟಿಲದಲಿ ಭಸಿತ್ಯಾಕೆ ದಿಟ್ಟೆಯರಿಗೆ ಸೋಲುವನ ಹಠಯೋಗವ್ಯಾಕೆ 4 ಯತಿಗಳನು ನಿಂದಿಪನ ಸ್ಮøತಿಶಾಸ್ತ್ರ ಯಾತಕ್ಕೆ ಸತಿಗಳುಕಿ ನಡೆಯುವನ ಅತಿಜಾಣ್ಮೆ ಯಾಕೆ ಸತತ ಖಲು ಕುಹಕನಲಿ ಅತಿಸ್ನೇಹ ಯಾತಕೆ ಕ್ಷಿತಿಯೊಳ್ ಶ್ರೀರಾಮನ ನುತಿಸದವನ್ಯಾಕೆ 5
--------------
ರಾಮದಾಸರು
ವಾಸಿಷ್ಠ ಕೃಷ್ಣ ವಿಠಲ | ನೀ ಸಲಹೊ ಇವನಾ ಪ ಮೇಶ ಮಧ್ವೇಶ ನಿನ್ನಡಿಯ | ದಾಸ್ಯವನುಆಶಿಸುವ ಭಕ್ತಗೆ ಪ | ರಾಶರಾತ್ಮಜ ಒಲಿದೂ ಅ.ಪ. ವೇದವ್ಯಾಸನೆ ನಿನ್ನ ಆದರದಿ ಧಾನಿಸುತಮೋದದಲಿ ಶ್ರುತತತ್ವ | ಪಾದಾರ್ಪಣೆನ್ನೇ |ನೀದಯದಿ ಮರೆಯಾಗಿ | ತೋರ್ದೆ ಗುರು ಬಿಂಬವನುವೇದಾಂತ ವೇದ್ಯ ಹರಿ | ಹೃದಯ ಗಹ್ವರದೀ 1 ಕ್ಲೇಶಗಳ ದಹಿಸಿ ಸ | ರ್ವೇಶ ಸದ್ಭೋದಗಳಲೇಸಾಗಿ ಅರುಹುತಲಿ | ಶ್ರೀತ ಕೈ ಪಿಡಿಯೋ |ತೋಷ ಕ್ಲೇಶಂಗಳು ರ | ಮೇಶ ನಿನ್ನಿಂದೆಂಬಭಾಸುರದ ಜ್ಞಾನ ಪ್ರ | ಕಾಶ ಕೊಡು ಇವಗೆ 2 ಮೋದ ಅದ್ವೈತ ಪಾದ ನಂಬಿಹನೋ 3 ಪರಿ ಲೀಲೆಗಳ ತೋರಿ ಇವನಲ್ಲೀಪರಿಹರಿಸೊ ಭವಬಂಧ | ಮರುತಾಂತರಾತ್ಮಕನೆಎರಗಿ ತವ ಪದದಲ್ಲಿ | ಮೊರೆಯ ಬಿದ್ದವಗೇ 4 ಸಾವಧಾನದಿ ಧ್ಯಾನ | ಭಾವ ವೃದ್ಧಿಯಗೈಸಿದೇವ ತವ ರೂಪವನು | ಆವ ಹೃದ್ಗುಹಡೀಓವಿ ಕಾಂಬುವ ಹದನ | ನೀವೊಲಿದು ಪಾಲಿಪುದುಗೋವುಗಳ ಪಾಲ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾಸುಕೀಶಯನ ವಿಠಲ ನೀನಿವಳ ಕಾಪಾಡಬೇಕೋ ಹರಿಯೇ ಪ ಭಾಸುರಾಂಗನೆ ದೇವ ಸರ್ವೇಶ ಸರ್ವವಿಧದಲಿ ಕಾಯೊ ಹರಿಯೇ ಅ.ಪ. ಜಗದೀಶ ಜಗಜನ್ಮಾದಿಕಾರಣನೆ ಶ್ರೀಹರಿಯೆಹಗರಣಗಳಾ ಕಳೆದು ಮಿಗೆ ಭಕುತಿ ಸುಜ್ಞಾನವಿತ್ತು |ಬಗೆಬಗೆಯ ಮಹಿಮೆಗಳ ನೀತೋರಿ ನಿನವ್ಯಾಪ್ತಿಮಿಗಿಲಾಗಿ ತಿಳಿಸುತ್ತ ಸಲಹ ಬೇಕಿವಳಾ 1 ಮಧ್ವಮತ ದೀಕ್ಷೆಯನು ಉದ್ಧರಿಸಿ ಇವಳಲ್ಲಿಸದ್ಧರ್ಮ ಪದ್ಧತಿಯ ಶ್ರದ್ಧೆಗಳ ನಿತ್ತೂ |ಮಧ್ವೇಶ ಶ್ರೀಹರಿಯೆ | ಸರ್ವೋತ್ತುಮನೆಂಬಶುದ್ದ ಬುದ್ಧಿಯನಿತ್ತು ಸಲಹ ಬೇಕಿವಳಾ 2 ಚಾರು ಮೂರುತಿಯ |ಬಾರಿಬಾರಿಗೆ ಹೃದಯ ವಾರಿಜದಿ ಕಾಂಬಂಥಚಾರು ಮಾರ್ಗವ ತೋರಿ ಕಾಪಾಡೊ ಹರಿಯೇ 3 ಲೌಕೀಕ ಮಾರ್ಗಗಳು ವೈದೀಕ ವಾಗ್ವಪರಿನೀ ಕರುಣಿಸಿ ಕಾಯೊ ಕಮಲಾಯ ತಾಕ್ಷ |ನೀ ಕಾಯದಿರಲಿನ್ನು ಕಾಯ್ವರ್ಯಾರಿಹರಯ್ಯಮಾಕಾಂತ ಸಲಹಯ್ಯ ಗೋಕುಲಾನಂದ 4 ಕಂದರ್ಪ ಜನಕ ಮನ ಮಂದಿರದಿ ನೀತೋರಿನಂದವನೇ ನೀನಿತ್ತು ಇಂದಿರೇಶನೆ ಕಾಯೊತಂದೆ ಎನ ಬಿನ್ನಪವ ಛಂದದಲಿ ಮನ್ನೀಪುದುನಂದ ನಂದನ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾಸುದೇವ ಹೃದಯನಮೋ ನಮೋ ನಂದಾಭ್ಯುದಯ ನಮೋ ನಮೋ ಗೋಪಿಕಾ ಪ್ರಿಯ ಪದೀನಜನಾವನಲೋಲ ದಾನವಶಿಕ್ಷಕ ಕಾಲಭಾನುಶತಾಭಜಾಲ ಶ್ರೀ ನಿಜಭೋಗವಿಶಾಲ 1ಮುರಹರ ಮುಚುಕುಂದ ಸೇವ್ಯ ಭಾವ್ಯ 2ಪರಮ ಪುರುಷ ಶ್ರೀ ರಮಣ ಶರಧಿಶಯನ ನಿರಾವರಣದುರಿತತಿಮಿರಹರಚರಣ ತಿರುಪತಿ ವೆಂಕಟರಮಣ 3ಓಂ ಇಳಾಪತಯೇ ನಮಃ
--------------
ತಿಮ್ಮಪ್ಪದಾಸರು
ವಾಸುದೇವ ನಿನ್ನ ಮರ್ಮಕರ್ಮಂಗಳದೇಶದೇಶದಲ್ಲಿ ಪ್ರಕಟಿಸಲೊ ಪ ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದೀಯೊ ಅ.ಪ. ತರಳತನದಲಿದ್ದು ದುರುಳನಾಗಿ ಬಂದುಒರಳಿಗೆ ಕಟ್ಟಿಸಿಕೊಂಡುದನುತುರುವ ಕಾಯಲಿ ಹೋಗಿ ಕಲ್ಲಿಯೋಗರವನುಗೊಲ್ಲರ ಕೂಡೆ ನೀ ಉಂಡುದನುನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯಅರಿಯದಂತೆ ಕದ್ದು ಮೆದ್ದುದನುಕೇಳಿಸಿದೆಯಾದರೆ ಒದರುವೆ ಎಲೊ ನರ -ಹರಿ ಎನ್ನ ಬಾಯಿಗೆ ಬಂದುದನು 1 ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿಬೆಟ್ಟವ ಪೊತ್ತದ್ದು ಹೇಳಲೊಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿಹೊಟ್ಟೆಯ ಹೊರೆದದ್ದು ಹೇಳಲೊದುಷ್ಟ ಹಾವಿನ ಹೆಡೆಯನು ತುಳಿದಾಡಿದದುಷ್ಟತನವನು ಹೇಳಲೊನೆಟ್ಟುನೆ ಅಂಬರಕೆತ್ತಿದನ ಹೊಯ್ದುಹಿಟ್ಟುಕಟ್ಟಿಟ್ಟುದ ಹೇಳಲೊ 2 ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟಬೆಡಗತನವನಿಲ್ಲಿ ಹೇಳಲೊಹಿಡಿಯ ಬಂದ ಕಾಲಯವನಿಗಂಜಿ ಕಲ್ಲಪಡೆಯ ಹೊದ್ದುದ ಹೇಳಲೊಮಡಿದ ಮಗನ ಗುರುವಿಗೆ ಕೊಡಬೇಕೆಂಬಸಡಗರತನವಿಲ್ಲಿ ಹೇಳೆಲೊಮಡದಿ ಮಾತಿಗೆ ಪೋಗಿ ನೀ ಪಾರಿಜಾತವತಡೆಯದೆ ತಂದದ್ದು ಹೇಳಲೊ 3 ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲಮಾನವ ಕೊಂಡದ್ದು ಹೇಳಲೊತಾನಾಗಿ ಮೊಲೆಯನೂಡಿಸ ಬಂದವಳನ್ನುಪ್ರಾಣವ ಕೊಂಡದ್ದು ಹೇಳಲೊಕಾನನದೊಳು ತುರುವಿಂಡುಗಳನು ಕಾಯ್ದಹೀನತನವನಿಲ್ಲಿ ಹೇಳಲೊಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯಹಾನಿಯ ಮಾಡಿದ್ದು ಹೇಳಲೊ 4 ಧರಣಿಮಗನ ಕೊಂದು ತರುಣಿಯರನುದುರುಳತನವನಿಲ್ಲಿ ಹೇಳಲೊಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿಶರಧಿಯ ಪೊಕ್ಕದ್ದು ಹೇಳಲೊಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿಸ್ಥಿರವಾಗಿ ನಿಂತದ್ದು ಹೇಳಲೊಶರಣಾಗತರ ಕಾವ ರಂಗವಿಠಲನ್ನಪರಮ ದಯಾಳೆಂದು ಹೇಳಲೊ 5
--------------
ಶ್ರೀಪಾದರಾಜರು
ವಾಸುದೇವ ಹರಿ ವಿಠಲಾ | ಪೋಷಿಸುವುದಿವನಾ ಪ ನೀಸಲಹದಿರೆ ಅನ್ಯ | ಆಶ್ರಯಗಳುಂಟೇ ಅ.ಪ. ದಾಸವೃತ್ತಿಯಲಿದ್ದು | ಮೀಸಲಳಿಯದೆ ಇರುವದಾಸದೀಕ್ಷಾಂಕಿತವು | ಲೇಸು ದೊರೆಯದಲೇ |ಘಾಸಿ ಪಡುತಲಿ ಮನದಿ | ಆಶ್ರಯಿಸಿ ಎನ್ನ ಸುಪ್ತೀಶ ಸೂಚ್ಯಪರಿ ಉಪ | ದೇಶವಿತ್ತಿಹೆನೋ 1 ಒಂದೊಮ್ಮೆ ಇವನಮ್ಮ | ಬಂಧುವೆಂದೆಣಿಸಿಹನೊಇಂದಿರಾಪತಿ ಹರಿಯೆ | ಕಂದರ್ಪಜನಕಾತಂದೆತಾಯಿಯು ನೀನೆ | ಕುಂದುನೆಣಿಸದೆ ಇವನಾಛಂದದಲಿ ಸಲಹೊ ಹರಿ | ನಂದ ಮುನಿವಂದ್ಯಾ 2 ತಾರತಮ್ಯಜ್ಞಾನ ಮೂರೆರಡು ಭೇದಗಳವಾರವಾರಕೆ ತಿಳಿಸಿ | ಕಾಪಾಡೊ ಹರಿಯೇ |ಮಾರಪಿತಮುರಮೈರಿ | ವೈರಾಗ್ಯ ಭಾಗ್ಯಕ್ಕೆದಾರಿತೋರುತ ಪೊರೆಯೊ | ವಾರಿಜಾಂಬಕನೇ 3 ಉತ್ತಮಾನುಷ್ಠಾನ | ಇತ್ತು ಈತಗೆ ನೀನುಚಿತ್ತದೊಳು ವ್ಯಾಪ್ತ ಸ | ರ್ವತ್ರ ಸ್ಮøತಿಯಿತ್ತು |ಎತ್ತು ಭವವನಧಿಯಿಂ | ಕೃತ್ತಿವಾಸನ ತಾತಮತ್ತನ್ಯ ಬೇಡೆ ನಿನ | ಚಿತ್ತದೊಲ್ಲಭನೇ 4 ದೇವ ದೈತ್ಯರು ದೇಹ | ಆವಾಶಿವಿಹರೆಂಬಭಾವಗಳ ತಿಳಿಸುತ್ತ | ತೀವ್ರುಪಾಸನವಾ |ದೇವ ಇವಗಿತ್ತು ಸಂ | ಭಾವಿಪುದು ಶ್ರೀಹರಿಯೆಗೋವಿಂದಾಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾಸುದೇವನ ಪುರಕೆ ತೆರಳಿದಾರು |ಶ್ರೀಶನಾ ಪ್ರಿಯ ಗುರು ಪ್ರಾಣೇಶ ದಾಸಾರ್ಯ ಪ ಮೂರ್ತಿ ಧ್ಯಾನಮಾಡೀ ತತ್ವ |ಮಾನಿಗಳೊಳೊಂಮ್ಮಿಂದೊಮ್ಮೆ ಆನಂದದಿಂದಲೀ 1 ಹರಿಯೆ ಸರ್ವೋತ್ತಮಾ ತದ್ರಾಣಿ ಶಿರಿಬೊಮ್ಮ |ಮರುತ ದೇವರೆ ಗುರುವು, ತಾರತಮ್ಯ ||ವರಪಂಚಭೇದ ಜ್ಞಾನವನರಿತು ಮನದಿ ಹರಿ |ಪುರದೊಳಿಹ ಪರಮ ಭಕ್ತರ ಕಾಣಬೇಕೆನುತ 2 ಮೋಕ್ಷರೌದ್ರೀ ಅಬ್ಧಮಾಘದರ್ಶಾ ಪೂರ್ವಭಾದ್ಧರಾ |ನಕ್ಷತ್ರ ಸೋಮವಾರದಿದ್ದವ ದ್ವಿತಿಯ ಯಾಮದೀ |ಲಕ್ಷಿ ಇಟ್ಟೂ ಲಯದ ಚಿಂತನೆಯ ಗೈಯುತಲಿ |ಪಕ್ಷಿವಾಹನ ಶ್ರೀಶಪ್ರಾಣೇಶ ವಿಠಲೆನುತ 3
--------------
ಶ್ರೀಶಪ್ರಾಣೇಶವಿಠಲರು
ವಾಸುದೇವನ ಭಜಿಸೊ ಪ ವೇಷಹಾಕಿದರೇನು ವೇದಾರ್ಥ ತಿಳಿದೀತೆ ಅ.ಪ ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ ತುದಿಮೊದಲಿಲ್ಲದ ದೋಷಕೆ ಗುರಿಯಾಗಿ ಸದಮಲನೆಂದರೆ ಸರ್ವರು ನಗರೇನೊ 1 ದುರಿತ ಪರಿಹರವೆಂದು ಆಡುತಲಿದೆ ಶೃತಿಯು ಕರಣತ್ರಯವು ಶುದ್ಧಿಯಿರ ಬೇಕದಕೆ ಮುಖ್ಯ ಕಾರಣ ಬಾಯಿಂದ ನುಡಿದರೇನಾಯಿತು2 ಪಂಚಸದ್ವರ್ಣಾವು ಪರಮಾತ್ಮನ ನಾಮ ವಂಚನೆ ಇದರೊಳಿಲ್ಲಾ ಸರ್ವರು ನುಡಿವರು ಗರ್ವವೇತಕೆ ನಿನಗೆ 3 ಕಾಲಕಾಲಕೆ ಹರಿಯೋಲಗವ ಮಾಡಿ ವೇಳೆಗೆ ದೊರೆತದ್ದು ಭುಂಜಿಸುತಲಿ ಲಕ್ಷ್ಮೀ- ಲೋಲನ ಕಂಡ ಕಂಡಲಿ ಸ್ಮರಣೆಗೈದೂ 4 ಹೊರಗೆ ಡಂಭವ ಬಿಡು ಒಳಗೆ ನಿಶ್ಚಲನಾಗು ಪರರಿಗೆ ಹಿತವ ತೋರು ಗುರುರಾಮವಿಠಲನು ಕರುಣದಿ ಕೈಪಿಡಿದು ಪರಮಸೌಖ್ಯವನೀವ ನಿಜಭಕ್ತನಾದರೆ 5
--------------
ಗುರುರಾಮವಿಠಲ
ವಾಸುದೇವನನಾ ಶ್ರೈಸದಿಹ ಉಪಾಸನ್ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ಧ್ರುವ ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲೀಹ್ಯ ವಸ್ತುಗಾಣದ ಜ್ಞಾನವ್ಯಾತಕೆ ಉದರ ಕುದಿಯು ಶಾಂತ ಹೊಂದದ ಸಾಧನ್ಯಾತಕೆ ಬುಧರ ಸೇವೆಗೊದಗದೀಹ ಸ್ವಧನವ್ಯಾತಕೆ 1 ಭಾವ ನೆಲಿಯುಗೊಳ್ಳ ದೀಹ್ಯ ಭಕುತಿದ್ಯಾತಕೆ ಕಾವನಯ್ಯನ ಕಾಣದೀಹ್ಯ ಯುಕತದ್ಯಾತಕೆ ದೇವದೇವನ ಸೇವೆಗಲ್ಲದ ಶಕುತ್ಯದ್ಯಾತಕೆ ಹ್ಯಾವ ಹೆಮ್ಮೆ ಅಳಿಯದೀಹ್ಯ ವಿರುಕಿತ್ಯಾತಕೆ 2 ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದ ಲಾಚರಿಸದಿಹ್ಯ ಕವಿತ್ಯವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತ ಆಶೆಯು ಅಳಿಯದಿಹ ಸಿದ್ಧತ್ವವ್ಯಾತಕೆ 3 ನೀತಿಮಾರ್ಗವರಿಯದೀ ಹ ರೀತ್ಯದ್ಯಾತಕೆ ಮಾತುಮಿತಿಗಳಿಲ್ಲದವನು ಧಾತುವ್ಯಾತಕೆ ಅಮೃತ ಊಟವ್ಯಾತಕೆ ಜ್ಯೋತಿ ತನ್ನೊಳರಿಯದಲೆ ಉತ್ತಮದ್ಯಾತಕೆ 4 ನಿತ್ಯ ಶ್ರವಣವ್ಯಾತಕೆ ನೆನವು ನೆಲೆಯಾಗೊಳ್ಳದಿಹ ಮನನವ್ಯಾತಕೆ ತನುವಿನಲ್ಲಿ ಘನವು ಕಾಣದನುಭವ್ಯಾತಕೆ ದೀನಮಹಿಪತಿಸ್ವಾಮಿಗಾಣದ ಜನಮವ್ಯಾತಕೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಾಸುದೇವಯನ್ನ ಸಲಹೋ ವಾರಿಜಾಸನ ಈಶವಾಸವಾರ್ಚಿತ ಚರಣ ವನಜೋದರ ಭಾಸುರಾಂಗ ಕೋಟಿ ಪ್ರಭಾಕರ ಪ್ರಕಾಶ ಮಂದಹಾಸ ಕಮಲಾಚಲನಿವಾಸ ಶ್ರೀ ಜಗದೀಶ ಪ ತಾಪಸೋತ್ತಮ ಸತಿಗೆ ಕೋಪದಿಂದ ಪಾಷಾಣರೂಪವಾಗಿ ಬಿಟ್ಡೆನುತ ಶಾಪಕೊಡಲು ಕೋಪನಾಮಣಿ ಬಲು ಪ್ರಲಾಪಿಸುತ ಮನದಿ ನಿಷ್ಪಾಪರರ ನುಡಿಯಂತೆ ಧರಿಯಲಿಬಿದ್ದಿರಲು ಪಾದ ಸ್ಪರ್ಶಿಸಲಾಕ್ಷಣ ಸೀತಾಪತಿಯ ಸೇವೆಯಿಂದ ಸುಂದರಿಯಾದಳು ತ್ವರದಿ 1 ಪಾಪಗಳು ಮಾಡಿದವನಂತ್ಯ ಕಾಲದಲಿ ಸುತನ ನಾರಗೆಂದು ಕರಿಯೇ ಗತಿ ತೋರಿದಿ ಹಿತದ ಲಾಮರಾಮರೆಂಬ ನಿನ್ನ ಹರುಷದಲಿ ಪೊರೆದೆ ಕ್ಷಿತಿ ನಾಥ ಹರಿ ಮಹೋನ್ನತ ಚರಿತನೆ ಪತಿತ ಪಾವನ ಬಿರುದು ಪರಮಾತ್ಮ ನಿನಗಿರಲು ಸ್ತುತಿಸುವೆನು ಗೋವಿಂದ ಶುಭಕರ ಶ್ರೀ ಮುಕುಂದ 2 ಶರಧಿ ಗಂಭೀರ ಹಾಟಕಾಂಬರ ಶೋಭಿತ ಪುರುಷೋತ್ತಮಾನಂತ ಮುರವೈರಿ ಮುರಲೀರವ ವಿನೋದ ಗರುಡಗಮನ `ವರ ಹೆನ್ನೆಪುರನಿಲಯ' ಪರಮಪಾವನ ನೃಹರೆ ಉರಗೇಂದ್ರಶಯನ ಮಂದರಧರ ಕೃಪಾಂಬುಧೆ3
--------------
ಹೆನ್ನೆರಂಗದಾಸರು
ವಾಹನ ನರಜನ ಪ್ರೇಮಾ | ಹರಿ ಸಾರ್ವಭೌಮ ಪ ಯೋಗಿ ಮಧ್ವಮತದಾಗಮ ವಂದಿತಭಾಗವತಾಗ್ರಣಿ ಶ್ರೀಗುರುಗಳ ಕೈ ಅ.ಪ. ಪ್ರಳಯ ಕಾಲದಲಿ ಹರಿ ನೀನಂದು | ಶ್ರೀ ಭೂ ದುರ್ಗಾತ್ಮಕಜಲದಾಲದೆಲೆಯಲಿ ತೊಟ್ಟಿಲಲಂದೂ | ಕತ್ತಲೆಯೊಳಗಂದೂಎಲ್ಲಾ ಜೀವರ ಪೊಕ್ಕಳ ಎಡಬಲ ತಂದೂ | ದೀನ ಜನರ ಬಂಧೂ ||ಥಳಥಳ ಪೊಳೆಯುವ ಮಣಿಯ ತೊಟ್ಟಿಲೊಳುಲಲನೆ ಸಹಿತ ಎಡಬಲ ವೈಭೋಗದಿ 1 ಗೋಕುಲದೊಳೊ ಗೋಪಿಯರಿಂದ ತೂಗಿಸಿಕೊಂಡುಸಾಕಾಗಲಿಲ್ಲೇ ಎಲೊ ಮುಕುಂದ | ಕೌಸಲ್ಯಾದೇವಿಯುಬೇಕೆಂದು ಮುದ್ದಿಸಿ ಮೋಹದಲಿಂದಾ | ಆದ ಕಾರಣದಿಂದಾ ||ಏಕ ಮನಸಿನಲಿ ಈ ಪರಮುನಿಪಗೆಬೇಕೆಂದೊಲಿದು ಪರಾಕನು ಕೊಳ್ಳುತ 2 ಮೋದ | ಸತ್ಯಬೋಧಾರ್ಯರ ||ಮತಿಗೆ ನೀ ಮರುಳಾದೆ ಮಧುಸೂದನನೆ ಪತಿತ ಪಾವನನೆ ವ್ಯಾಸ ವಿಠಲ ನೀನೇ 3
--------------
ವ್ಯಾಸವಿಠ್ಠಲರು
ವಿಘ್ನೇಶಾ - ಪಾಲಿಸೊ - ಎನ್ನ - ವಿಘ್ನೇಶಾ ಪ ವಿಘ್ನೇಶ ಪಾಲಿಸೊ ಯೆನ್ನಾ | ದೋಷಭಗ್ನವ ಗೈಸಯ್ಯ ಮುನ್ನಾ | ಆಹಲಗ್ನವಾಗಲಿ ಯೆನ್ನ ಮನ ಆದೀಂದ್ರಿಯಗಳುಯಜ್ಞೇಶ ಶ್ರೀಹರಿ ಪದದ್ವಯ ವನಜದಿ ಅ.ಪ. ಶಿರಿವ್ಯಾಸ ಹೃದ್ಗತ ಅರ್ಥಾ | ನೆರೆಅರಿತು ಲಿಖೀಸಿದೆ ಗ್ರಂಥಾ | ನೋಡುಕರುಣಾಳು ಹರಿಕೃಪಾ ಪಾತ್ರಾ | ಬಾಗಿಶರಣೆಂಬೆ ತಿಳಿಸ್ಯದರರ್ಥಾ | ಅಹತಾರಕಾಂತಕನನುಜ | ವೀರ ವೈಷ್ಣವ ನಿನ್ನಪರಮಾನುಗ್ರಹವನ್ನ | ಕರುಣಿಸಿ ಕಾಯೆನ್ನ 1 ಚಾರುದೇಷ್ಣನ ನಾಮದಲ್ಲೀ | ಅವತಾರ ಮಾಡಿದೆ ರುಕ್ಮಿಣೀಲಿ | ಸಿರಿಅರಸನಾಜ್ಞೆಯ ಪೊತ್ತು ಅಲ್ಲೀ | ದೈತ್ಯದುರುಳರ ತರಿದ್ಯೋಧುರದಲ್ಲೀ | ಅಹಧರೆಯ ಭಾರವ ನಿಳುಹಿ | ಮೆರೆದಂಥ ಗುರುವರಪರಮ ಕಾರುಣ್ಯದಿ | ಹರಿಸೆನ್ನ ಭವತಾಪ 2 ಶೇಷಶತ ದೇವೋತ್ತಮಾ | ಬಾಪುಶ್ರೀಶನ ನಾಭಿಯೆ ಧಾಮಾ | ವಿಶ್ವೋಪಾಸಕ ಖೇಶ ನಿಸ್ಸೀಮಾ | ಪ್ರಾಣಾವೇಶಯುತನೆ ಗುಣಧಾಮಾ | ಅಹಮೂಷಕ ವರವಾಹ ಭೇಶ ಗರ್ವಹರಶ್ರೀಶನ್ನ ಹೃದಯಾವ | ಕಾಶದಲಿ ತೋರೊ 3 ಪರಿ | ಶುದ್ಧ ಭಕ್ತಿಯನಿತ್ತು 8 ಸಿರಿ ರಮಣನಾ | ಗುರು ಗೋವಿಂದ ವಿಠಲಾಭಿಧನ್ನಾ | ನಿಲ್ಲಿಸಿಅವಿರತವನ ಧ್ಯಾನವನ್ನಾ | ಆಹಗೈವಂಥ ಸೌಭಾಗ್ಯ | ಪಾಲಿಸೊ ವಿಘ್ನೇಶಶ್ರೀವರನಂಘ್ರಿ ಸರೋಜ | ಭೃಂಗನೆ ಕರುಣೀ 5
--------------
ಗುರುಗೋವಿಂದವಿಠಲರು
ವಿಜಯ ದಾಸರ ಭಜಿಸಿರೋ | ಸುಜನರೆಲ್ಲ ನೀವೂ ಪ ವಿಜಯ ದಾಸರ ಭಜಿಸೇ | ಕುಜನ ಮರ್ದನ ನಮ್ಮವಿಜಯ ವಿಠಲ ತಾನೇ | ನಿಜವ ತೋರುವ ಮನದೀ ಅ.ಪ. ಮುನ್ನ ಸುರಲೀಲಾ ನೆನಿಸಿ ತಾ |ಜನಿಸಿದ ತ್ರೇತಾಯುಗದಿ |ವನಧಿಜೆ ರಮಣ ಶ್ರೀ | ಹನುವ ಸೇವಿತನಾದಶ್ರೀನಿವಾಸನ ಚರಣ | ವನಜವ ಸೇವಿಸಿದಾ 1 ಸಕಲ ಸದ್ಗುಣ ಆಕರಾ |ನಿಖಿಲ ಲೋಕದ ಧಾರಕಾ |ಪಾಕಶಾಸನ ಪೂಜ್ಯ | ಗೋಕುಲರೊಡೆಯನನಿಕಂಪಾನೆನಿಸಿ ಜನಿಸಿ | ಕೃಷ್ಣನ್ನ ಪೂಜಿಸಿದ 2 ಸುರ ಪುರ ಮುನಿ ನಾರದಾ |ವರಕಲಿಯಲ್ಲಿ ಜನಿಸೇ |ತುರುಕರುವಾಗಿ ಅವರಾ | ಚರಣವ ಸೇವಿಸಿದಮರಳಿ ಅವರ ಪುತ್ರಾ | ಗುರುಮಧ್ವಪತಿ ಭೃಗುವಾ 3 ಪದಪಂಚ ಲಕ್ಷ ಗ್ರಂಥಕೇ |ಪಾದವೇ ನ್ಯೂನವಿರಲೂ | ಪದಪದ್ಯ ಸುಳ್ಹಾದಿಯಲಿ |ಪಾದ ಪೂರ್ತಿಯ ಮಾಡೆಮೋದದಲುದಿಸಿದಾ | ಬುಧನು ದಾಸಪ್ಪ ನೆನಿಸೀ 4 ಪರಮ ಕಾರುಣ್ಯ ಗುರುವೇ |ಕರವ ಪಿಡೀರಿ ಎನ್ನಾ |ಮರುತಾಂತಾರಾತ್ಮಾ ಗುರು | ಗೋವಿಂದ ವಿಠ್ಠಲನಚರಣವ ತೋರಿಸೀ | ಕರುಣದಿ ಪೋಷಿಸಿ5
--------------
ಗುರುಗೋವಿಂದವಿಠಲರು
ವಿಜಯರಾಯರ ದಿನದಿ ವಿಜಯ ಪಯಣವ ಮಾಳ್ಪೆ ನಿಜದಾಸಕೂಟ ಪಥದಿ ಪ. ವಿಜಯಸಖಪ್ರಿಯ ತಂದೆ ಮುದ್ದುಮೋಹನ ಗುರು ವಿಜಯವಿತ್ತುದ್ಧರಿಸಲಿ ದಯದಿ ಅ.ಪ. ಧರೆಯಲ್ಲಿ ಪುಟ್ಟಿ ಮುವ್ವತ್ತಾರು ವತ್ಸರವು ಸರಿದುದೀ ಬಹುಧಾನ್ಯಕೆ ವರಗುರು ಉಪದೇಶ ಅಂಕಿತವು ಲಭಿಸಿ ಎಂ ಟೊರುಷವಾಗಲಿಂದಿಗೆ ಪರಮಕೃಪೆಯಿಂದ ದಾಸತ್ವ ಸಿದ್ಧಿಸಲೆಂಬ ಕಾಲ ಒದಗೆ ನರಹರಿಯೆ ನಿನ್ನ ಚರಣವೆ ಎನಗೆ ಗತಿ ಎಂದು ನೆರೆ ನಂಬಿ ಪೊರಟೆನೀಗ ಬೇಗ 1 ಸರುವ ವಸ್ತುಗಳಲ್ಲಿ ಇರುವ ಅಭಿಮಾನ ಶ್ರೀ ಹರಿ ನಿನ್ನ ಪದದಲಿರಿಸು ವರ ಗುರು ಚರಣದಲಿ ಸದ್ಭಕ್ತಿ ಸರ್ವದಾ ಸ್ಥಿರವಾಗಿ ನೆಲೆಯಗೊಳಿಸು ಹೊರಗೊಳಗೆ ಹಿಂದುಮುಂದರಘಳಿಗೆ ಬಿಡದೆ ನೀ ನಿರುತದಲಿ ಸಂರಕ್ಷಿಸು ಹರಿದಾಸ ಮಾರ್ಗದಲಿ ಹರುಷದಲಿ ನಲಿವಂತೆ ವರಮತಿಯ ದಯಪಾಲಿಸು ಹರಿಯೆ 2 ಗುರುಕರುಣ ಕವಚ ತೊಟ್ಟಿರುವ ಎನಗಿನ್ನಾವ ಪರಿಯ ಭಯವಿಲ್ಲವೆಂದು ಸ್ಥಿರವಾಗಿ ನಂಬಿ ಪೊರಮಡುವೆನೀ ಶುಭದಿನದಿ ಗುರುವಾರ ಗುರು ಕೃಪೆಯಲಿ ಪರಿಪರಿಯ ದುಷ್ಕರ್ಮ ಪರಿಹರಿಸಿ ಕಾಯುವೊ ಗುರುಚರಣ ಧ್ಯಾನಬಲದಿ ಮರುತಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಕರುಣದಲಿ ಒಲಿದು ಪೊರೆಯೊ ಹರಿಯೆ 3
--------------
ಅಂಬಾಬಾಯಿ
ವಿಠಲ ನಮೋ ವಿಠಲ ಮುಟ್ಟಿಭಜಿಪ ದೀನನಿಷ್ಟಾರ್ಥ ಪಾಲಿಸು ಪ ಹೇಸಿಪ್ರಪಂಚದಿ ನಿಂದು ಮಹ ಕ್ಲೇಶಪಂಚಕದಲಿ ಬೆಂದು ಕೆಟ್ಟ ವಾಸನತ್ರಯದಿಂದ ನೊಂದು ಬಲು ಘಾಸಿಯಾದೆ ದಯಾಸಿಂಧು ಆಹ ದೋಷದೂರನೆ ಎನ್ನ ದೋಷನಾಶನ ಗೈದು ಪೋಷಿಸು ಅನುಮೇಶ ದಾಸನೊಳ್ದಯವಾಗಿ 1 ಮರವೆಯೆಂಬುವ ಕವಚ ತೊಟ್ಟು ಬಲು ದುರುಳತನಕೆ ಮನಗೊಟ್ಟು ಮಹ ದರಿವಿನ ಅರಮನೆ ಸುಟ್ಟು ಆಹ ಪರಮದುರಿತದಿ ಬಿದ್ದು ಮರುಳನಾಗಿ ನಿಮ್ಮ ಚರಣಸರೋಜಕ್ಕೆ ಮರೆಹೊಕ್ಕೆ ಕರುಣಿಸು 2 ಹೊಂದಿ ಭಜಿಪೆ ನಿನ್ನ ಬೇಡಿ ಎನ್ನ ಮಂದಮತಿಯ ಕಡೆಮಾಡಿ ನಿಜಾ ನಂದ ಸುಜ್ಞಾನಪದ ನೀಡಿ ಭವ ಬಂಧ ಸಂಕೋಲೆ ಗಡ ಕಡಿ ಆಹ ಸಿಂಧುನಿಲಯ ಬೇಗ ದಂದುಗ ಪರಿಹರಿಸಿ ಕಂದನ್ನ ಉದ್ಧರಿಸು ತಂದೆ ಶ್ರೀರಾಮಯ್ಯ 3
--------------
ರಾಮದಾಸರು