ಒಟ್ಟು 761 ಕಡೆಗಳಲ್ಲಿ , 84 ದಾಸರು , 637 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಶ್ರೀ ರಾಮನ ಜಾನಕಿ ಪ್ರೇಮನ ಅನುದಿನ ಪ ಶುಭ ಕಲ್ಯಾಣನ ಮಾಧವ ಮುಕುಂದನ 1 ವಿಶ್ವ ಪ್ರಕಾಶನಾ --ನಂದದಿ ಹೃದಯ ಗೋವಿಂದನ ಬಿಡದಿನ್ನು 2 ಕಂದರ್ಪ ಜನಕನ ಕರಿರಾಜ ವರದನ ಸಿಂಧುಶಯನ ಹರಿ ಶ್ರೀ ಜಗನ್ನಾಥನ 3 ಸೌಂದರ್ಯ ರೂಪನ ಪುರುಷೋತ್ತಮನ ಕುಂದರದನ ಹರಿ ಕೋಮಲಾಂಗನ 4 ಪರಮ ಪುರುಷನ ಪತಿತಪಾವನನ ನರಹರಿರೂಪನ ನಾರಾಯಣನ 5 ಗರುಡಾರೂಢನ ಕರುಣಾಸಾಗರನ ಉರದಲಿ ಲಕ್ಷ್ಮಿಯ ಧರಿಸಿ ಕೊಂಡಿಹನ 6 ಉರಗಾದ್ರಿ ವಾಸನ ವಸುದೇವಸುತನಾ ಭವಪಾಪ ಸಂಹಾರನ 7 ಶರಣರ ಕಾಯುವನ ಶ್ರೀನಿವಾಸನ ಉರಗಶಯನನ ಹರಿವಾಸುದೇವನಾ 8 ಮಂಗಳಮೂರುತಿ ಮಹಾನುಭಾವನ ಗಂಗೆಯ ಪಡೆದನ ಘನ ಗಂಭೀರನ9 ಶೃಂಗಾರ ಭೂಷಣನ ಸುಗುಣ ಪ್ರತಾಪನ ಅಂಗನೆಯರೆಡ ಬಲದಲಿರುವನ 10 ರಂಗನಾಯಕನ ರಾಜಾಧಿರಾಜನ ಮಂಗಾರಮಣನ ಮಧುಸೂದನನಾ 11 ರಂಗವುಳ್ಳ ಪೀತಾಂಬರ ಧರನಾ ಕಂಬು ಕಂಧರನಾ 12
--------------
ಹೆನ್ನೆರಂಗದಾಸರು
ಜಲಜಾಕ್ಷ ಯಾಚಿಸುವೆ ಚಲುವ ಚರಣ ತೋರೋ ಸುಲಭದಿ ಹಯವದನ ಪ [ಶಶಿಯೊಲಿರುವದರಿಧರ] ಅಕ್ಷ ಸುಬೋಧ ಪುಸ್ತಕಧರ ವಸುಮತಿ ರಮಣನೆ ನಿನ್ನ ಸಾಸಿರ ನಾಮದಲಿ ಸೋಸಿಲಿ ನಾ ಪ್ರಾರ್ಥಿಸುವೆ 1 ವರವಾದಿ ಜಯದ ವಿಮುಕ್ತಿ ಪ್ರದಾತ ಅನುದಿನ ನಿನ್ನ ಆರೆರಡು ಅ ಕ್ಷರದ ಮಂತ್ರವನೂ ಪ್ರೇಮದಿ ನಾ 2 ಮುಖದೊಳ್ ಸಕಲಾಗಮ ವಿದ್ಯಾ ಸುಘೋಷ ಮಾಡಿ ಆ ಕಮಲಜ ಭವಮುಖರಿಂದ ಅಮೃತದಲಿ [ಸ್ತುತಿಸಿಹ ಅಭಿಷಿಕ್ತನೆ] ನೀನೆನಿಸಿ ನರಹರೆ 3
--------------
ಪ್ರದ್ಯುಮ್ನತೀರ್ಥರು
ಜವದಿ ಪಾಲಿಸೊ ಪ್ಲವಗೋತ್ತುಮ ಮರುತಾ ನಂಬಿದೆ ನಿರುತಾ ಪ ಅವನಿಶಾರ್ಚಿತ ಪವನಾತ್ಮಜ ಹನುಮಾ ಭವಸುರನುತ ಭೀಮಾ ಅ.ಪ ಮಾರುತಿ ಅಂಜನ ಗರ್ಭದೊಳುದವಿಸಿ ವಾರಿಧಿಯುತ್ತರಿಸಿ ಧಾರುಣಿ ಸುತೆಗತಿ ಹರುಷವಗೊಳಿಸಿದಿ | ನೀ ದ್ವಾಪರ ಯುಗದಿ ನಾರಿಯ ಮೊರೆ ಕೇಳಿ ದುರುಳನ ಶಿರ ತರಿದಿ ಆ ನಾರಿವೇಷದಿ 1 ಅದ್ವೈತರ ನೀನಳಿಸುವಲೋಸುಗದಿ | ಸದ್ಗುರುವರ ಜಗದಿ ಮಧ್ಯಾಸದನ ಸತಿಯುದರದಿ ಜನಿಸಿದಿ | ಸದ್ವೈಷ್ಣವರ ಪೊರೆದಿ ಸಿದ್ಧಾಂತವ ಸ್ಥಾಪಿಸಿ ಬದರಿಗೆ ನೀಪೋದೆ | ಮದ್ವಾಭಿದಾನದಿ 2 ನಂಬಿದೆ ವೃಕೊಜಠರಾ ದಶಶಿರ ಪುರನಾಥಾ ಪತಿ ಶಶಿಕುಲಸಂಜಾತಾ 3
--------------
ಶಾಮಸುಂದರ ವಿಠಲ
ಜಾಗಿಸಬೇಕು ಜಗದ್ಗುರುವಿನ ಕೃಪೆಯಿಂದ ಧ್ರುವ ಜಾಗಿಸದಲ್ಲದೆ ಖೂನ ಸುಗಮ ಸುಪಥದೋರದು ನಿಧಾನ ಯೋಗಿಜನರ ನಿಜಧನ ಆಗುದು ಸ್ವಾಧೀನ 1 ಜಾಗಿಸಿ ನೋಡಲು ಸ್ವಸುಖ ಬಗೆಬಗೆದೋರುತದೆ ಅನೇಕ ಅಗಣಿತಗಮ್ಯಾಲೋಲಿತ ಶ್ರೀಗುರು ಕೌತುಕ 2 ಝಗಿಝಗಿಸುವ ಜಗಜ್ಯೋತಿ ಜಾಗಿಸಿದ ಶ್ರೀ ಸದ್ಗುರುಮೂರ್ತಿ ಸಾಗಿ ಭವನಿದ್ರೆಯವಾರ್ತಿ ನೀಗಿದ ಮಹಿಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಾನಕಿರಾಮ ಜಾನಕಿರಾಮ ಪ ನೃತ್ಯವನಾಡೊ ವರಗಳ ನೀಡೋ 1 ವಾರಿಧಿ ಬಂಧ ವಸುದೇವ ಕಂದ ಸ್ವಾರಸ್ಯ ತಂದ ಸತ್ಕರುಣದಿಂದ 2 ಶಿರಿವಾಸ ಸಿರಿದೇವಿ ತೋಷ ಉದ್ಧವ ಘೋಷ3
--------------
ವಿಜಯದಾಸ
ಜಾಹ್ನವಿ ದೇವಿ ಜಯ ಭಕುತ ಸಂಜೀವಿ ಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ ಪ ಅಜನ ಸಭೆಯಲಿ ವರುಣಗೆ ಶಾಪವು ಬರಲು ಪ್ರಜಪಾಲನಾದ ಶಂತುನ ನಾಮದೀ ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ1 ಸಗರರಾಯನ ವಂಶವನ್ನೆ ಉದ್ಧಾರೆ ಅಗಣಿತೋದಯ ಪಾರಂವಾರೆ ಶುಭಶರೀರೆ ಮುಗುವೆನು ಕರವೆತ್ತಿ ಸಂತತ ವಾರಂವಾರೆ 2 ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು ನೀನುಬ್ದಿ ಪೊರದೆ ಉತ್ಸಾಹದಿ ಮೆರೆದೆ ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿಜ್ಞಾನಪೂರ್ವಕ ವೊಲಿದು ಭಕುತಿ ಕೊಡು ಎನಗೆ 3
--------------
ವಿಜಯದಾಸ
ಜೋ ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ಜೋ ರಣಭೀಮ ಪ ಜೋ ಜೋ ಭಕ್ತರ ಕಷ್ಟನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ ಅ.ಪ. ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ1 ಸರಸಿಜೋದ್ಭವ ಸರಸ್ವತಿ ಭಾರತಿಗರುಡಶೇಷ ರುದ್ರರಿವರ ಸತಿಯರುಸುರರ ಕಿನ್ನರರು ಕಿಂಪುರುಷ ನಾರದರುಪರಿಪರಿ ಗೀತದಿ ತುತಿಸಿ ಪಾಡಿದರು 2 ವಸುದೇವಸುತನಾದ ಮುದ್ದುಮುರಾರಿಅಸುರೆ ಪೂತನಿಯ ಪ್ರಾಣಾಪಹಾರಿಅಸಮ ಸಾಹಸಮಲ್ಲ ದೈತ್ಯರ ವೈರಿಶಿಶುವಾಗಿ ದೇವಕೀಗಾನಂದ ತೋರಿ 3 ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿನಿಗಮಗೋಚರ ನಿತ್ಯಾನಂದನೆ ತ್ರುವ್ವಿ ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ 4ತಮನ ಮರ್ದಿಸಿ ವೇದತತಿಗಳನು ತಂದೆಸುಮನಸರಿಗಾಗಿ ಮಂದರಪೊತ್ತು ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ 5 ತರಳನಾಗಿ ಬಲಿಯ ದಾನವ ಬೇಡ್ದೆಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ ರಾವಣನ ಶಿರವ ಚೆಂಡಾಡಿದೆಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ 6 ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲಪದ್ಮನಾಭ ಸರಿ ಭಕ್ತವತ್ಸಲನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ 7
--------------
ಶ್ರೀಪಾದರಾಜರು
ಜೋ ಜೋ ದೇವಕಿಕಂದ ಮುಕುಂದ ಜೋ ಜೋ ಗೋಪಿಯಾನಂದ ಗೋವಿಂದಾ ಪ ಜೋ ಜೋ ಜೋ ಭಕ್ತಮನಕಾನಂದ ಜೋ ಜೋ ಜೋ ಗೋಪಿಕಾವೃಂದ ಅ.ಪ ಗೋಕುಲಬಾಲಾ ಮುರಳೀಲೋಲಾ ಶ್ರೀಕರಶೀಲಾ ತುಳಸೀಮಾಲಾ ರಾಕಾಚಂದ್ರ ಸಮಾನಕಪೋಲ ಗೋಕುಲ ಬೃಂದಾವನ ಸಲ್ಲೀಲಾ 1 ದೇವದೇವೋತ್ತಮ ಭಾನುಪ್ರಕಾಶ ಭಾವಜಪಿತ ಸರ್ವಸುರ ಮುನಿಪೋಷಾ ಶ್ರೀವನಿತಾಪ್ರಿಯ ದನುಜವಿನಾಶ ಪಾವನ ಮಾಂಗಿರಿನಿಲಯ ರಂಗೇಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜೋಜೋ ಪದುಮದಳಾಕ್ಷ ಉಪೇಂದ್ರ ಪ ಜೋಜೋ ವೇದವಂದಿತ ನಿತ್ಯಾನಂದ | ಜೋಜೋ ಆದಿಮೂರುತಿ ಶ್ರೀಗೋವಿಂದ ಅ.ಪ ಉದಿಸಿದೆ ವಸುದೇವನರಸಿಯೊಳಂದು 1 ದೇವ ರೋಹಿಣಿ ನಕ್ಷತ್ರದೊಳು ಧರೆಗಿಳಿದೆ 2 ಕೌಸ್ತುಭ ಸಕಲ ಲೋಕೇಶ ಶೋಭಿಸುವೆ ಸಂಭ್ರಮದಿ3 ಪರಿಪರಿ ಶೋಭಿಸಿ ಮೆರೆವೆ ಆನಂದ 4 ಲೀಲಾವಿನೋದವ ಮಾಳ್ಪೆ ಸಂತಸದಿ 5 ಒಂದಾಗಿ ಸುಮವೃಷ್ಟಿ ಸುರಿವ ಸಂಭ್ರಮದಿ 6 ನಾರದ ಮುನಿಪನ ವೀಣಾಗಾನಗಳು | ನಾರಿ ಲಕ್ಷ್ಮಿಯು ರತ್ನದಾರತಿಯೆತ್ತುವಳು 7 ಗಿರಿಜೇಶಪ್ರಿಯನೆ ತ್ರೈಜಗದುದ್ಧಾರಿ8 ತ್ರುವಿತ್ರುವಿ ಶಂಖಚಕ್ರಗದಾಪದ್ಮ ಹಸ್ತ 9 ತ್ರುವಿತ್ರುವಿ ಪರತರ ಪಾವನರಾಮ 10 ನಂತರ್ಯದೊಳಗಿಟ್ಟು ಪೊರೆವೆನಿನ್ನೇನು 11 ಗುರು ದಾಮೋದರ ಶ್ರೀನಿವಾಸ ಆಗಿರುವೆ 12
--------------
ಸದಾನಂದರು
ಜ್ಞಾನವನೆ ಕೊಟ್ಟು ಸಲಹೊ ಶ್ರೀ ಪ್ರಾಣರಾಯಾ ಪ ವಿಜ್ಞಾನ ಮಸ್ತಕ ಘನ ಗಿರೀಶಗೆ ರಾಜನೇ ಅ.ಪ. ಅಂಜನೆ ಕಂದನೆನಿಸಿ ರಘುಕುಲೇಂದ್ರನ ನಾಮದುಂಗುರ ಇಂದುಮುಖಿಯಳಿಗಿತ್ತು ಖಳನಂದನನ ಮಡುಹಿದ ಧೀರವಿಜ್ಞಾ£ À 1 ಭವಭಯಕೆ ನಿರ್ಭೀಕರಾನೆನಿಸಿ ಭಾನುಸುತನಾಶ್ರಯಿಸಿದವ ಭೇದವಿಲ್ಲದೆ ಬಹುಬಾಧೆ ಬಿಡಿಸಿ ಭೂಭಾರನಿಳುಹಿದೇ ಭಾವಿ ಬ್ರಹ್ಮ ಸುಜ್ಞಾನ 2 ದಾಸರೆಲ್ಲರೂ ಮಹಿಮ ದಾಸರಾಗುತಿರೆ ಸಮಯ ಸೂಸುತ ಶಶಿಯಂತೆ ವಸುಧಿಗಿಳಿದು ಪೋಷಿಸಿದೆ ತಂದೆವರದಗೋಪಾಲವಿಠಲನ ದಾಸಾ 3
--------------
ತಂದೆವರದಗೋಪಾಲವಿಠಲರು
ಜ್ಞಾನಾನಂದ ಸ್ತುತಿ ಜ್ಞಾನಾನಂದ ಅನಂತರೂಪ - ಆನಮೋ ನಮೋ ತ್ವಂಪಾಲಯಮಾಂ ಪ. ಮತ್ಸ್ಯ ಸುರೂಪ ಮಂದರೋದ್ಧಾರ ಕಚ್ಛಪರೂಪ 1 ಭೂಧರಕೋಲ ನರಹರಿರೂಪ ಅದಿತೇಃ ಸೂೀನೋ - ಗಂಗಾಜನಕ 2 ಕೃನೃಪಾಹರಿ ರಾಮಪರಶ್ವಿ ಹನೂಮತೇವ್ಯ ರಮಸ್ತ ಸೀತಾ 3 ದೇವಕಿಪುತ್ರ ಪಾಂಡವಬಂಧೋ ದೇವ ಶ್ರೀಕೃಷ್ಣ ರುಕ್ಮಿಣೀನಾಥ 4 ದೈತ್ಯವಿಮೋಹ ದೇವಸುಬೋಧ ಬುಧ್ಧಸ್ವರೂಪ - ದೇಹಿಮೇ ಜ್ಞಾನಂ 5 ದರ್ಜೇನ - ಹಂತಾಧರ್ಮಸ್ವರೂಪ ಸಜ್ಜನಪಾಲ ದೇಹಿಮೇ ಭಕ್ತಿಂ 6 ಪದ್ಮಜಿತಾತ ಪ್ರಸನ್ನ ಶ್ರೀನಿವಾಸ ಪದ್ಮೇಶ ಶರಣಂ ಪಾಹಿ 7
--------------
ಪ್ರಸನ್ನ ಶ್ರೀನಿವಾಸದಾಸರು
ಜ್ಞಾನಾನಂದ ಸ್ವರೂಪ ಭಾನುಕೋಟಿ ಪ್ರದೀಪ ನಾನಾದೋಷ ನೀರ್ಲೇಪ ಮೀನ ರೂಪ ಪ ಏನು ಅರಿಯದ ದೀನ ಭಕುತನಿಗೆ ಸಾನುರಾಗದಿ ಜ್ಞಾನವನೀಯೋ ಅ.ಪ ನಿಗಮಗಳೆಲ್ಲವು ಬಗೆ ಬಗೆಯಿಂದ ನಿನ್ನ ಅಗಣಿತ ಗುಣಗಳ ಪೊಗಳುತಲಿದ್ದರು ಸಿಗದ ನಿನ್ನ ನಾನು ಪೊಗಳಲಳವೆ ಪೇಳೊ ಸಿರಿಯರಸನೆ ನಿನ್ನ ಚರಣಕಮಲದಲಿ ಪರತರ ಭಕುತಿಯ ದೊರಕಿಸೆಲೊ ಸರಸಿಜ ಜನಕನೆ ಮರೆತಪರಾಧವ ಕರುಣದಿಂದಲಿ ಎನ್ನ ಕರಗಳ ಪಿಡಿಯೋ 1 ಒಂದು ದಿನವು ಸುಖ ಗಂಧವನರಿಯದೆ ಭವ ಸಿಂಧುವದನನೆ ತೊಂದರೆ ಪಡುತಿಹೆ ಸುಂದರ ವದನನೆ ತಂದೆ ಎನಗೆ ನೀನೆ ಬಂಧುವೆನಗೆ ನೀನೆ ಮಂದ ಬುದ್ಧಿಯಲಿ ನಿಂದ್ಯನಾದೆನಗೆ ಕುಂದು ಸಹಸ್ರವು ಸಂಧಿಸಿತು ಇಂದು ಮನಕೆ ಆದ ತಂದುಕೊಳ್ಳದೆಲೆ ಮಂದಹಾಸದಲಿ ಬಂದೆನ್ನ ಪೊರೆಯೋ 2 ಹಿತವೆಂದು ಭವವನು ಅತಿ ಮೋಸಹೋದೆನು ಮತಿಗೆಟ್ಟು ನಿನ್ನನು ಸ್ತುತಿಸಲಿಲ್ಲವೊ ನಾನು ಮಿತಿಮೀರುತಿರಲೆನ್ನ ಸ್ಥಿತಿಯ ನೀನರಿಯುತ ಮತಿ ಬೇರೆ ಮಾಡಿ ಮರೆತೆಯೇನೊ ಶ್ರೀಪತೆ ಕ್ಷಿತಿಯೊಳೆನಗೆ ಗತಿ ಇತರರ ಕಾಣೆನÉೂೀ ಪತಿ ನೀನಿರೆ ವಸುಮತಿಯೊಳಗೆ ಪತಿತಪಾವನನೆ ಪ್ರಸನ್ನನಾಗಿ ದಿವ್ಯ ಸತತ ಸುಖಕೆನಗೆ ಪಥವನು ತೋರೊ 3
--------------
ವಿದ್ಯಾಪ್ರಸನ್ನತೀರ್ಥರು
ಜ್ವರಹರಾಹ್ವಯನೆ ಶ್ರೀನಾರಸಿಂಹಪೋರನಾಮಯ ಕಳೆದು - ಆರೋಗ್ಯವೀಯೊ ಪ ಭೋಗಿ ಭೋಗಿ ಶಯನನೆ ದೇವರೋಗ ಹರಿಸುವುದರಿದೆ _ ರೋಗಾರ್ತ ಶಿಶುಗೇ 1 ಯೋಗಿ ಭಾಗವತ ಪ್ರಿಯ 2 ಈ ವಸುಮತಿಯ ಸಕಲ - ಜೀವರಂತರ್ಯಾಮಿದೇವ ನರಹರಿ ಜ್ವರ ಹ - ರಾಹ್ವಯನು ಯೆನಿಸೀ |ಕಾವುತಿರೆ ಭಯವೇನು _ ತೀವ್ರ ಪಾಲಿಪುದಿವನಗೋವ ಪಾಲಿಪ ಗುರು - ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ತಂಗಿ ಮೊಸರ ಸುತ್ತ ಚೆಲ್ಲಿದ ಮುದ್ದುರಂಗ ಬೆಣ್ಣೆಯ ಮೆದ್ದ ಬಲ್ಲಿದ ಪ. ಪುಟ್ಟ್ಟಿದಾಗಲೆ ಮೂಲರೂಪವ ತೋರಿಅಟ್ಟಿದ ಸುಜನರ ತಾಪವಕೊಟ್ಟ ನಮಗೆ ಜ್ಞಾನದೀಪವ ಕೃಷ್ಣತೊಟ್ಟ ದುರ್ಜನರೊಳು ಕೋಪವ1 ಯಶೋದೆಯ ಮೊಲೆವಾಲನುಂಬಾಗ ನಸುಬಿಸಿನೀರನೆ ಎರೆಸಿಕೊಂಡಾಗಶಿಶುವು ಪೂತಣಿಯ ಕೊಂದಿತೆಂಬಾಗ ರ-ಕ್ಕಸರಿಗೆ ಇವ ಬಲುದಿಮ್ಮಿಗ 2 ಇಂದಿರೆಯನು ಬಿಗಿದಪ್ಪಿದ ಸಖವೃಂದಾರಕರೊಳಗೊಪ್ಪಿದಕಂದರ ಕಲ್ಲಿಂದ ಜಪ್ಪಿದ ತಾಯಿಹಿಂದಟ್ಟಿ ಬರಲೋಡಿ ತಪ್ಪಿದ3 ಪುಟ್ಟ ಕೃಷ್ಣನ ಕಟ್ಟಬೇಕೆಂದು ತಂ-ದೊಟ್ಟಿ ಹಗ್ಗಗಳ ತಂದುಬೆಟ್ಟವಾಗಿರಲು ದುರ್ಜನರ ಕೊಂದು ಈಗಗಟ್ಟಿಮಾಡಿದಳಿವ ಹರಿಯೆಂದು4 ಒರಳನೆಳೆದ ಬಲುಮತ್ತಿಯ ದೊಡ್ಡಮರನ ಕಿತ್ತಿದ ನೋಡಿವನರ್ಥಿಯತರಳಾಕ್ಷಿ ಕೃಷ್ಣನ ನೆತ್ತಿಯ ಬೆಣ್ಣೆಸುರಿಯೆ ಪಾಡಿದಳವನ ಕೀರ್ತಿಯ5 ಗಗನಕೆ ಏರಿ ವಾತನ ಕೊಂದ ನೀರೊ-ಳಗೆ ಪೊಕ್ಕು ತಂದೆಯ ಕರೆತಂದಖಗನಂತೆ ಕಡಹದಮರದಿಂದ ಹಾರಿವಿಗಡ ಸರ್ಪನ ಹೆಡೆಯೇರಿ ನಿಂದ6 ತುಳಿದಹಿತಲೆಯನು ಬಿಚ್ಚಿದನಾಗಲಲನೆಯರುಕ್ತಿಗೆ ಮೆಚ್ಚಿದ ಅಲರು ಮಳೆಯ ಸುರಿಯ ಹಚ್ಚಿದ ಕೃಷ್ಣಖಳರಳಕೆಗಳ ಕೊಚ್ಚಿದ 7 ನಂದನ ರಾಣಿಗೆ ಮೆಚ್ಚಿದ ತಾಯಚಂದದ ಕೈಗಳಿಂದುಚ್ಚಿದಇಂದೆನ್ನ ಮನೆಯೊಳು ಸಚ್ಚಿದಾ-ನಂದ ಹಿಡಿಯೆ ಕೈಯ್ಯ ಕಚ್ಚಿದ 8 ಕಣ್ಣೊಳು ಪಾಲನುಗುಳಿ ಪೋದ ಈಚಿಣ್ಣಗೆ ನೋಡಿದೆ ವಿನೋದಮಣ್ಣಮೆದ್ದಖಿಳವ ತೋರಿದ ಕೃಷ್ಣಸಣ್ಣ ಬಾಯನು ಮುಚ್ಚಿ ಮಗುವಾದ 9 ಕುಸುಮವೆತ್ತ ಖಡುಗ ವೆತ್ತ ಈಹಸುಗೂಸು ಎತ್ತ ಪರ್ವತವೆತ್ತಹಸಿವು ತೃಷೆಯ ಬಿಟ್ಟು ಗಿರಿಯ ಪೊತ್ತ ಈಶಶಿಮುಖಿ ಜನಕಿವನು ಸುಖವಿತ್ತ10 ಮೂರು ಲೋಕವಾಳುವ ಸಖಿಯರ ಗಂಡ ನೀಲ-ವರ್ಣನು ತೊಂಡರತೊಂಡ ಬಾಲಕನೀತಸರ್ವೇಶ ಕಂಡಾ ಇವಕೀಳೆಂದವ ಜಗದಲಿ ಭಂಡ 11 ಅರಳೆಲೆ ಮಾಗಾಯಿ ಮುಂಗೈಯ್ಯಲಿಟ್ಟುಸರಭಂಗಿ ಕೂಡಿ ತ್ರಿಭಂಗಿಯವರವೇಣುವನು ತನ್ನಂಗೈಯಲಿಟ್ಟ-ಧರದಲ್ಲೂದಿದ ನಮ್ಮ ರಂಗಯ್ಯ12 ಪಶುಪಕ್ಷ್ಷಿಗಳು ತರತರದಲ್ಲಿಎಸೆವ ಗೀತವ ಕೇಳಿ ವನದಲ್ಲಿಹಸುಳೆಯ ನೆನೆಯುತ್ತ ಮನದಲ್ಲಿ ಪರ-ವಶವಾದುವು ಆಕ್ಷಣದಲ್ಲಿ13 ಕೊಳಲೂದಿ ಸುರರನ್ನು ಸೋಲಿಸಿದ ರಾಗಕಲೆಗಳಿಂದೆಲ್ಲವ ಒಲಿಸಿದಇಳೆಯೊಳು ಗೀತವ ಕಲಿಸಿದ ಇಂತುಒಲಿದು ವಿಠಲ ನಮ್ಮ ಪಾಲಿಸಿದ14 ತÀರುಲತೆಗಳು ಪುಳಕಿತವಾಗೆ ಈಚರ ಪ್ರಾಣಿಗಳೆಲ್ಲ ಸ್ಥಿರವಾಗೆಹರಿಯ ವೇಣುನಾದ ಹೊಸಬಗೆ ಅತಿಹರುಷವ ನೋಡಲೈದಿದೆವೀಗ 15 ಚೆಲ್ಲಿದ ಕೈಯಿಂದಮಲ ನೀರ ನಮ್ಮೆಲ್ಲರ ನೀರಿಗಂಜನು ಧೀರನಲ್ಲ ನಾವಂದ ಮಾತನು ಮೀರನಿವಸುಲಭನೊಮ್ಮೆ ಮೊಗವ ತೋರ 16 ಪಾಲನೊಲೆಯೊಳಿಟ್ಟು ಪೋದೆವು ಈಕಾಲಭೂಷಣ ಕೈಗಾದವುಬಾಲರ ಕೆಲರು ಮರೆತು ಪೋದೆವು ಗೋ-ಪಾಲ ಸಂಗಕ್ಕೆ ಮರುಳಾದೆವು 17 ಉಂಬುವರಿಗೆ ಬಡಿಸಲಿಲ್ಲ ಪತಿಎಂಬುವನಾಜ್ಞೆಯೊಳಗೆ ನಿಲ್ಲದೆನಂಬಿದೆವು ನಾವು ಹರಿಯಲ್ಲದೆ ಅನ್ಯರೆಂಬುದು ಭಕ್ತ ವರ್ಗಕೆ ಸಲ್ಲದೆ18 ಧೇನು ಮಾತ್ರದಿಂದ ಫಲವೇನು ಕಾಮ-ಧೇನು ಶ್ರೀಕೃಷ್ಣನ್ನ ಕರೆದೆನುಮಾನಿನಿ ಮೊದಲು ಕರೆವಧೇನು ಬಿಟ್ಟುಜಾಣೆ ಸೇರಿದಳು ಕೃಷ್ಣನ ಪದವನು 19 ಶಿಶುವ ಬಿಟ್ಟೊಬ್ಬಳು ನಿಜಕನ್ಯೆತನದೆಸೆಯ ತೋರಿಸಬಂದಳಚ್ಚುತನ್ನಎಸೆವ ಶ್ರೀಪತಿ ತನ್ನ ರಮಣನು ಎಂದುಸುಟಳು ಮೊದಲಾಳ್ದ ಗಂಡನ 20 ಲಲನೆ ಕಣ್ಣಂಜನವಬಿಟ್ಟಳು ಜ್ಞಾನಚೆಲುವನಂಜನಕೊಡಂಬಟ್ಟಳುಒಲೆಯಪಾಲಗ್ನಿಗೆ ಕೊಟ್ಟಳು ಕೃಷ್ಣ-ಗೊಲಿದಧರ ಮನವಿಟ್ಟಳು21 ಇಂತು ತೊರೆದು ವಿಷಯಂಗಳ ಆ ಶ್ರೀ -ಕಾಂತನೆ ಕಾವ ಜಗಂಗಳಚಿಂತೆಯ ತೊರೆದೆವು ಮಂಗಳ ಲಕ್ಷ್ಮೀ -ಕಾಂತನೆ ಕಾಯೊ ಜಗಂಗಳ 22 ಕೇಶಿಯೆಂಬ ದೈತ್ಯನ ಕೊಂದ ಖಳನಾಶದಲಿ ಸದಾ ಮುಕುಂದಆ ಸಮಯದಲಿ ಅಕ್ರೂರ ಬಂದ ಅವಂಗೆಲೇಸÀಪಾಲಿಸಿ ಕೃಷ್ಣ ನಡೆತಂದ 23 ಮಧುರೆಯಲಿ ಮಲ್ಲರ ಸೋಲಿಸಿದ ತನ-ಗಿದಿರಾದ ಕಂಸÀನನೊರೆಸಿದಕದನಕೋಲಾಹನೆನಿಸಿದ ನಮ್ಮಮದನಶರಕೆ ಗುರಿಮಾಡಿದ24 ಎಲ್ಲ ದೇವರನಿವ ಮೀರಿದ ಸಖಿಬಲ್ಲವರಿಷ್ಟವ ಬೀರಿದಕಲ್ಲಕಂಬದಿ ಬಂದು ತೋರಿದ ಖಳರೆÉಲ್ಲಿದ್ದರಲ್ಲಿಗೆ ಹಾರಿದ 25 ದಯದಿಂದ ಸಖನಮಗಾದವ ಚೆಲ್ವಹಯವದನ್ನ ಕೃಪೆಯಾದವನಯದಿ ಜಲವ ಪೊಕ್ಕು ಪೋದವ ವೈ-ರಿಯ ಕೊಂದು ವೇದವ ಕಾಯ್ದವ 26
--------------
ವಾದಿರಾಜ
ತತ್ವಸುವಾಲಿಗಳು ಓಂಕಾರ ಪ್ರತಿಪಾದ್ಯ ಶ್ರೀಕಾಂತನೇ ನಿನ್ನ ಭವ ಭಂಗವ ಗೈಸಿ ಶುಭಾಂಗನೆ ಕಾಯಯ್ಯ ಶ್ರೀರಂಗ 1 ಕಾಲತÀ್ರಯಕೃತ ವಿಕಾರವಿಲ್ಲದೆ ನೀನೆ ಮೂಲರೂಪನೆ ಬಹು ರೂಪ-ಬಹುರೂಪ ಸ್ವಗತಭೇದ ವಿವರ್ಜಿಕನೆ ಸಲಹಯ್ಯ 2 ಆವಕಾಲಕು ನೀನೆ ಚತುರ ರೂಪದೊಳಿದ್ದು ಜೀವ ನಿಯಾಮನು ನೀನಾಗಿ-ನೀನಾಗಿ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ3 ಶುಭ ವಿಷಯಂಗಳಾ ಮಾಡಿ ಉಣಿಸುವೆ 4 ವಿಶ್ವದಲಿ ವ್ಯಾಪಿಸಿಹೆ ವಿಶ್ವನಂಬೋರು ನಿನ್ನ ನಾಶರಹಿತನೆಂದೂ ನರನೆಂದೂ-ನರನೆಂದೂ ನಿನ್ನ ವೈಶ್ವಾನರನು ಎಂದು ಪೇಳ್ವಾರೊ 5 ಹರಿ ನಿನ್ನ ವಿಶ್ವನೆಂದು ಉಪಾಸನೆಯನು ಮಾಡಿ ಹೇರಂಬ ನಿನ್ನ ಒಲಿಸಿದಾ-ಒಲಿಸಿದಾ ಗಜವಕ್ತ್ರನಾಗಿ ನಿನ್ನ ಸ್ತುತಿಪಾನೋ 6 ದೇಹದೊಳು ಸ್ವಪನದಲಿ ನೀ ನೀಡಿ-ನೀ ನೀಡಿ ಜೀವರುಪಭೋಗಿಸುವ ಸಾರವನು ರಕ್ಷೀಪೆ 7 ತೈಜಸನೆ ವಾಸನಾಮಯವೆಲ್ಲ ತೋರೀಪೆ8 ತತ್ವಗಳ ವ್ಯಾಪಾರವೇ ವ್ಯಾಪಾರ9 ಸುಪ್ತಕಾಲದಿ ಜೀವ ಸ್ವರೂಪಕೆ ತಕ್ಕ ಕ್ಲುಪ್ತ ಅಜ್ಞಾನ ಮೊದಲಾದ-ಮೊದಲಾದ ಕಾಲವನನುಸರಿಸಿ ಜೀವನಿಗೆ ತನ್ನ ತಿಳಿಯಗೊಡದೆ 10 ಪ್ರಾಜ್ಞಮೂರುತಿ ನೀನೆ ಹೃದಯಸ್ಥಾನದೊಳಿದ್ದು ಅಜ್ಞಾನಿ ಜೀವನ ಕಾಲಾವ-ಕಾಲಾವ ನನುಸರಿಸಿ ಜೀವ ಸ್ವರೂಪಾನಂದವÀನು ನೀನೀವೆ11 ಸ್ವಪನ ಜಾಗ್ರತ ಜ್ಞಾನವಿನಿತಿಲ್ಲವೆಂದು ಕೂಡುವ ಜೀವ ಆನಂದ ಹಿಂದೆಂದೂ ಕಾಣನೊ12 ಘನ ಬಹಿ ಪ್ರಾಜ್ಞ ತೈಜಸಾಂತ ಪ್ರಾಜ್ಞ ಘನ ಪ್ರಾಜ್ಞ ಮೂರುತಿ-ಮೂರುತಿ ಗಳುಪಾಸನೆ ಮಾಳ್ವ ಬುಧರೇನು ಧನ್ಯರೊ 13 ನಾಗಿ ನೀ ಕೊಡುತಿರುವೆ ಮುಕ್ತರಿಗೆ ಆನಂದ 14 ಮುಕ್ತರಿಗೆ ದೃಷ್ಟನೋ ಅದೃಷ್ಟನೋ ಅ- ಗುರುಪ್ರಾಣನನುಗ್ರಹದಿ ಲಭ್ಯನಹುದಯ್ಯಾ ಹೇ ಜೀಯ 15 ಕಣ್ಮನ ಹೃದಯ ತ್ರಿಧಾಮಗಳಲ್ಲಿ ಇದ್ದು ಉಣಿಸೂವೇ ಜೀವರಿಗೆ ಫಲಭೋಗ-ಫಲಭೋಗವು ವಿಶ್ವತೈಜಸ ಪ್ರಾಜ್ಞ ಸ್ಥಿತಿಯೊಳು 16 ಸರ್ವರೂಪವು ಪೂರ್ಣ ಸರ್ವಗುಣ ಸಂಪೂರ್ಣ ಸರ್ವೋತ್ಪಾದಕ ಸುಖರೂಪಿ-ಸುಖರೂಪಿ ಸರ್ವಲೋಕ ಜೀವರೊಳಿದ್ದು ನಿರ್ಲಿಪ್ತಾ 17 ವರ್ಣತ್ರಯಯುತ ಓಂಕಾರದೊಳಾದ್ಯವರ್ಣ ವಿಶ್ವ ನೀನೆ-ವಿಶ್ವನು ನೀನೆ ಉಕಾರವೇ ತೈಜಸನು ಮಕಾರ ವಾಚ್ಯನೇ ಶ್ರೀಪ್ರಾಜ್ಞ 18 ನಾದದೊಳು ನೀ ವಾಚ್ಯ ತುರ್ಯರೆಂಬೋರು ನಿನ್ನ ಸದನವಾಗಿಹುದೈ ಶಿರಸ್ಥಾನ-ಶಿರಸ್ಥಾನ ನಾಶಿಕಾಗ್ರದಿ ಊಧ್ರ್ವ ದ್ವಾದಶಾಂಗುಲದಲ್ಲಿ ನೆಲೆಸಿರ್ಪೆ 19 ತೈಜಸನೊಡಗೂಡಿ ವಾಸನಾ-ವಾಸನಾಮಯ ಕಳೆವ ಅಜ್ಞಾನಿ ಜೀವನನ್ನಾಡಿಸುವೆ ಶ್ರೀಪ್ರಾಜ್ಞ 20 ಸರ್ವಶಕ್ತನು ನೀನೆ ಸರ್ವಕತರ್Àನು ನೀನೆ ಸವೋತ್ತಮನು ನೀನೆ ಸರ್ವಜ್ಞ-ಸರ್ವಜ್ಞ ಪೂರ್ಣಪ್ರಜ್ಞಾಂತರ್ಯಾಮಿ ಸಲಹಯೈ21 ಪಲವಿಲ್ಲ ವಾಸುದೇವನೆ ನಿನ್ನ ದಯ ಬೇಕೊ 22 ನೀ ಸುಮ್ಮನಿರದೆ ಎನ್ನನೂ-ಎನ್ನನು ಪ್ರೇರಿಸುವೆ ಲೇಸುಮನ ನಿನ್ನಲ್ಲಿ ನೆಲೆಸಲೋ 23 ಕಂಡಕಂಡಲ್ಲಿ ನಾ ಉಂಡುಂಡು ಓಡಾಡಿ ಧಾಂಡಿಗನಾಗಿ ಬೆಳೆದೆನೊ-ಬೆಳೆದೆನೊ ಪುಂಡರೀಕಾಕ್ಷ ನಿನ್ನ ಮರೆತೆನೋ24 ಅವಾವ ಕಾಲದೊಳು ನೀನಿದ್ದು ಉಣಿಸುವೆ ಜೀವಕೃತ ಕರ್ಮಫಲಗಳ-ಫಲಗಳ ಶ್ರೀ ವೇಂಕಟೇಶ ನೀನಿತ್ತು ಸಲಹೂವೇ 25 ವಂದನೆಯು ಒಂದೆ ಮನದಿಂದೆ-ಮನದಲಿ ನಿನ್ನ ಪಾದಾರವಿಂದವ ತೋರಯ್ಯ26 ಬಂಧುಗಳು ಹಿತರೆನ್ನೆ ಬಂಧಕರಾಗಿಹರು ಬಂಧನಕೆ ನಾ ಇನ್ನು ಸಿಲುಕಿದೆ 27 ಘನವಾಗಿ ತನು ಬೆಳೆಸಿ ಹಿತದಿಂದ-ಹಿತದಿಂದ ಮುಂದೆ ಪರಗತಿಯ ಕಾಣುವುದೆಂತೊ ಗೋವಿಂದ28 ವಿತ್ತಾಪಹಾರಕರು ಹೃತ್ತಾಪಕಳೆವರೆ ಉತ್ತಮಗತಿಯ ತೋರಿಸು29 ಹರಿಕಥಾಪುರಾಣಶ್ರವಣ ನಿತ್ಯದೀ ಮಾಡೀ ಪರಿಯಿಂದ ನಿಜತತ್ವವರಿಯಾದೆ-ಅರಿಯಾದೆ ಬರಿದೇ ವಿಪರೀತ ಜ್ಞಾನಕೆ ವಶನಾದೆ30 ಮದ್ಯ ತುಂಬಿದ ಭಾಂಡ ಗದ್ಗುಗೆಯ ಮೇಲಿಟ್ಟು ಶ್ರಧ್ದೆಯಿಂದಲಿ ಅದನ ಪೂಜಿಸೆ-ಪೂಜಿಸೆ ಪೂತÀ ದುರ್ಗಂಧ ಫಲವದು ಬಿಟ್ಟೀತೆ 31 ಮಂದಹಾಸದಿ ಜನರ ಸಂದೋಹದಲಿ ಕುಳಿತು ನಿಂದೆ ಮಾತುಗಳಾಡಿ ಮದತುಂಬೀ-ಮದತುಂಬಿಬಿದಾ ದುರ್ಮ ದಾಂಧರಿಗೆ ಗತಿಯು ಮುಂದೆ ಇನ್ನೆಂತೊ32 ಕಂಡಕಂಡವರಲ್ಲಿ ಕೊಂಡೆ ಮಾತುಗಳಾಡಿ ಪುಂಡರೀಕಾಕ್ಷ ನಿನ್ನ ಸ್ಮರಿಸಾದೆ-ಸ್ಮರಿಸದಲೆ ಪರದಿ ಯಮದಂಡಕ್ಕೆ ಗುರಿಯಾದೆ33 ಹಿಂದೆ ಮಾಡಿದ ಪುಣ್ಯದಿಂದ ಇಂದಿನ ಭಾಗ್ಯ ವೆಂದು ತಿಳಿದು ಮುಂದೆ ನಡೆಯಾದೆ-ನಡೆಯಾದೆ ತಿಳಿಗೇಡಿ ಬುದ್ಧಿಯಿಂದ ಕುಂದುಪೊಂದುವೆ 34 ಬಾಯಿಮಾತಲ್ಲ ಶ್ರೀ ತೋಯಜಾಕ್ಷನ ಭಕ್ತ- ರಾಯತನ ತಿಳಿವುದು ಶ್ರಮಸಾಧ್ಯ-ಶ್ರಮಸಾಧ್ಯ ವನು ಸದುಪಾಯದಿಂದ ತಿಳಿದು ನಲಿದಾಡೊ 35 ನಿಂದಕರ ನುಡಿಯಿಂದ ಹಿಂದೆ ಮಾಡಿದ ಪಾಪ ಒಂದೊಂದು ಪರಿಯಲ್ಲಿ ಪರಿಹಾರ-ಪರಿಹಾರವಾಗಿ ನಿಂದಕರು ಬಂಧನಕೆ ಬೀಳ್ವಾರೋ 36 ಸ್ಮøತಿಯುಕ್ತಿಯನೆ ಬಿಟ್ಟು ಯುಕ್ತಿಮಾತುಗಳಿಂದ ಹೊತ್ತು ಕಳೆಯುತ ಉನ್ಮತ್ತನೆನಿಸಿ-ಉನ್ಮತ್ತನೆನಿಸಿದವ ಇ- ನ್ನೆತ್ತÀ್ತ ಭವಶರಧಿಯ ದಾಟÀುವ 37 ಅರೆಘಳಿಗೆ ಕಳೆದುದಿಹ ನರಜನ್ಮ-ನರಜನ್ಮ ಬಂದುದು ನರಕಯಾತನೆಗಲ್ಲದಿನ್ನಿಲ್ಲ 38 ಪರಿಯಂತ ಉದರಭರಣಕಾಗಿ ಉದಧಿಶಯನ ನಾ ನಿನ್ನ ಭಜಿಸಾದೆ-ಭಜಿಸಾದೆ ಮದದಿಂದ ಬುಧಜನರ ನಿಂದೆಯ ಮಾಡೀದೆ39 ಇನ್ನಲ್ಲ ಪರಗತಿಯ ಸಾಧನ-ಸಾಧನವು ತನ್ನೊಳು ತÀನ್ನಿರವರಿತು ಸುಮ್ಮನಿರುವುದು ಅದು ನಿಧಾನ40 ಭಿನ್ನಧರ್ಮಂಗಳ ಗ್ರಹಿಸಾದೆ-ಗ್ರಹಿಸಾದೆ ನೀನೆಣಿಸಿದೆ ತನ್ನಗುಣಧರ್ಮದಂತನ್ಯರಿಹನೇನೊ 41 ಕಾಯವೇ ತಾನೆಂದು ಮಾಯಕೆ ಒಳಗಾಗಿ ಕಾಯಯಾತನೆಗೊಂಡು ನೋಯುವಾ 42 ವಚನ ವಚನವು ಸರ್ವ ಉಚಿತ ದೇಹದ ಕಾರ್ಯ ನಿಚಯದೊಳು ಹರಿ ಪ್ರಚುರನಾಗಿ-ಪ್ರಚುರನಾಗಿ ಕಾಯಕುಪಚಯವಿತ್ತು ಸಲಹೂವ 43 ದೇಹ ಕಾಯದ ಕಾರ್ಯಪ್ರಕ್ರಿಯವ ತಿಳಿಯಾದೆ ಮಾಯೆಗೊಳಗಾಗದಿರು ಹೇ ಮಾನವಾ-ಮಾನವನೆ ತಿ- ಳಿಯೊ ಮಾಯಾರಮಣನ ಬಿಂಬಕ್ರಿಯವಾ44 ಅನ್ಯರೊಳು ನೀ ಹೋರಾಡಬಲ್ಲೆಯ-ಬಲ್ಲೆಯಾ ನಿನ್ನ ವೈರಿಗಳ ಜಯಿಸಲರಿಯದ ಖೂಳ ರಣಹೇಡಿ 45 ಕೊಳೆತು ನಾರುವ ದೇಹದೊಳಗಿರುವ ಹುಳುಕುಗಳ ಕೊಳೆಯ ಕಳೆಯದ ಮನುಜ ನೀನೆಂತೊ-ನೀನೆಂತೊ ಕೊಳೆತÀ ಸಗಣಿಯೊಳಗಿಹ ಹುಳುವೆ ನಿನ್ನ ಗತಿಯೆಂತೊ46 ಆದದ್ದು ಆಯಿತು ಯತ್ನ ತಪ್ಪಿತು ಎಂದು ಹೆದ್ದಾರಿ ಹಿಡಿದು ಪರಮಾರ್ಥ-ಪರಮಾರ್ಥವ ಬುದ್ಧಿ ತಿದ್ದಿಕೊಳ್ಳಲು ಮುಂದೆ ಅನುವಾಗೊ47 ತತ್ತ ್ವದೇವತೆಗಳು ತತ್ತತ್ವಕಾರ್ಯಜಿ- ವೋತ್ತಮನಾಜ್ಞೆಯಿಂ ತಾವ್ ಗೈವರೊ-ತಾವ್‍ಗÉೈ ಯುತ್ತಲಿರೆ ನಾನೆತ್ತ ಮೃತ್ತಿಕಾಪ್ರತಿಮೆಯೋ48 ಒಂದೊಂದು ರೀತಿಯಿಂ ಚೆಂದಾಗಿ ಯೋಚಿಸು ಮಂದಮತಿಯು ನೀನು ಹಿಂದೆಂತೂ-ಹಿಂದೇನು ವಂದನೆಯೊಂದಲ್ಲದಿನ್ನಿಲ್ಲ49 ಡಾಂಭಿಕತನ ಬಿಟ್ಟು ಡಿಂಬದೊಳು ಸರ್ವದಾ ಅಂಬುಜನಾಭನೇ ಇಂಬಾಗಿ-ಇಂಬಾಗಿ ಸರ್ವತ್ರ ತುಂಬಿಕೊಂಡಿಹನೆಂದು ನಲಿದಾಡೋ 50 ತುಷ್ಟಿಯಾಗಿರು ನೀನು ಕೊಟ್ಟಷ್ಟು ಲಾಭಕ್ಕೆ ದುಷ್ಟವಿಷಯಗಳಿಗೆ ಎರಗಾದೆ-ಎರಗಾದೆ ಇರಲು ಸಂ- ತುಷ್ಟ ನಾಗುವನಯ್ಯ ಶ್ರೀಕೃಷ್ಣ51 ಕಾಯ ನಿನ್ನದು ಅಲ್ಲ ಮನವು ಅಧೀನವಲ್ಲ ಹೇಯವಿಲ್ಲದೆ ಮಾಯಕೊಳಗಾಗಿ ಮರುಳಾಗದಲೆ-ಮರುಳಾಗದಲೆ ಮಾಯಾರಮಣನ್ನ ನೆನೆಯೊ ನಿರ್ಭಯದಿಂದ 52 ಹಲವು ಶಾಸ್ತ್ರವ ನೋಡಿ ತಲೆಹರಟೆಯ ಬಿಟ್ಟು ಅಲವಬೋಧರ ತತ್ತ ್ವಸುಧೆಯನ್ನು- ಸುಧೆಯನ್ನು ಸವಿದು ನಿ-
--------------
ಉರಗಾದ್ರಿವಾಸವಿಠಲದಾಸರು