ಒಟ್ಟು 509 ಕಡೆಗಳಲ್ಲಿ , 73 ದಾಸರು , 360 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಿಯ ಹಯಾಸ್ಯವಿಠಲ | ದಯದಿ ಪೊರೆ ಇವನಾ ಪ ನಯವಿನಯದಿಂ ಬೇಡ್ವ | ದಾಸತ್ವ ದೀಕ್ಷಾ ಅ.ಪ. ದಾಸರಾಯರ ಕರುಣ | ಪಾತ್ರ ನಿರುವನು ಈತಸೂಸಿದತಿಭಕುತಿಯಿಂ | ಸೇವೆಯನು ಗೈವಾ |ಏಸೊ ಜನ್ಮದ ಪುಣ್ಯ | ರಾಶಿ ಬಂದೊದಗುತಲಿಆಶಿಸುತ್ತಿರುವನೂ | ದಾಸದೀಕ್ಷೆಯನು 1 ಅಂಕಿತವ ನಿತ್ತಿಹೆನೊ | ಪಂಕಜಸನ ವಂದ್ಯಶಂಕೆಯಿಲ್ಲದೆ ಸ್ವಪ್ನ | ಸೂಚ್ಯದಂತೇವೆಂಕಟೇಶನೆ ಇವನಾ | ಮಂಕುಮತಿಯನೆ ಕಳೆದುಬಿಂಕದಿಂ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 2 ಶ್ರದ್ಧೆಯಿಂದಲಿ ಇವನು | ಮಧ್ವಮತ ದೀಕ್ಷೆಯಲಿಬದ್ಧವಾಗಲಿ ಹರಿಯೆ | ಸಿದ್ದ ಮುನಿವಂದ್ಯಾಶುದ್ದ ತತ್ವಗಳೆಲ್ಲ | ಬುದ್ದಿಗೇ ನಿಲುಕಿಸುತಶುದ್ದೋದ ನೀನು ತವ | ಪ್ರಧ್ವಂಸಗೊಳಿಸೊ 3 ಹರಿಯರಲಿ ಸದ್ಭಕ್ತಿ | ಕರುಣಿಸುತ ತೋಕನಿಗೆ ಪರಿಪರಿಯಲಿಂ ಕೀರ್ತಿ | ಸಂಪನ್ನನೆನಿಸೋಮರುತಂತರಾತ್ಮ ಹರಿ | ದುರಿತಾಳಿ ಪರಿಹರಿಸಿಕರುಣದಿಂ ಕೈಪಿಡಿದು | ಉದ್ದರಿಸೊ ಹರಿಯೇ 4 ಕೈವಲ್ಯದರಸಾಗಿ | ಭಾವಮೈದುನಗೊಲಿದುಬೋವ ಬಂಡಿಗೆ ಆದೆ | ಶ್ರೀವರನೆ ಹರಿಯೇಗೋವತ್ಸದನಿ ಕೇಳಿ | ಆವು ಧಾವಿಸುವಂತೆನೀವೊಲಿದು ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಬಂದನು ಹನುಮಂತ ಗೃಹಕೇ | ಕಾರ್ಯಸಂಧಿಸಲು ಅನುಗ್ರಹಕೇ ಪ ಮಂದಿರವು ಒಂಟೀಲು ವಂಶ ಸಿ | ಕಂದರಾಬಾದಿನಿಂದಲಿಸುಂದರನು ಬಹುನಂದ ವೀಯುತ | ಮಂದವಾರದಿ ಬಂದ ಹನುಮ ಅ.ಪ. ಮಾಸ | ವೈಶಾಖ ನಿಜ ವಿಶಾಖಾಭಾದಾಸನ ಮನೆಗತಿ ಪ್ರಭಾ | ಯುತ | ಆ ಸಮೀರನು ಅಸ್ಮಲ್ಲಾಭಾ ||ಹರ್ಷದಲಿ ಹನುಮಂತರಾಯರ | ವಶದಿ ಇದ್ದವನಲ್ಪ ಕಾಲದಿವಶವ ಪಡಿಸಲು ವೆಂಕಟಾರ್ಯಗೆ | ನಸುಕಿಲೀ ನಸನಗುತ ಬಂದ 1 ಪರಿ ಮಣಿ |ವರ ಖಚಿತ ರತ್ನ ವಿಶಾಲಾಪರಿ ಪರಿಯ ಆಭರಣ ಭೂಷಿತ | ಸುರ ವಿರೋಧಿಗಳ್ಹನನ ಶಕುತನೆರೆ ಸುವಾನರ ಸೈನ್ಯ ಪರಿವೃತ | ಹರಿಯಲಿಂ ಪಟ್ಟಾಭಿಷಕ್ತ 2 ಭೃತ್ಯ ನಿತ್ಯ ಸೇವಾಸಕ್ತ ಮಾರುತ 3
--------------
ಗುರುಗೋವಿಂದವಿಠಲರು
ಬಂದೆನಿಲ್ಲಿಗೆ ಸಂದರುಶನಕ್ಕೆ ಬಂದೆನಿಲ್ಲಿಗೆನ್ನ ಮನದಿ ಬಂದು ನಿಲ್ಲೆಂದು ನಿನ್ನ ವಂದಿಸ್ವರವ ಬೇಡುವೆ ನಾ ನಂದನ ಸುಂದರ ಕೃಷ್ಣ ಬಂದೆನಿಲ್ಲಿಗೆ ಪ ಪಾಲಶರಧಿ ಆಲದೆಲೆಯಲ್ಯೋಗನಿದ್ರೆ ಮಾಡಿ ನಿನ್ನ ನಾಭಿಕಮಲನಾಳದಿಂದ ಆಗ ಅಜನ ಪಡೆದ ಹರಿಯೆ 1 ಸಾಗರವ ಬಿಟ್ಟು ನಾಗಶಯನ ಶೂರಸುತನಲ್ಲುದಿಸಿ ಯೋಗಿಗಳ ಹೃದಯಕಮಲ ಆಲಯವ ಮಾಡಿದ್ದ ದೊರೆಯೆ2 ಕಂದನಾಗಿ ಬಂದು ಕಾಳಿಂದಿ ದಾಟಿ ನಂದಗೋಕುಲ ವೃಂದಾವನದಿ ಗೋವುಕಾಯ್ದ ಇಂದಿರೇಶ ಅಜನಪಿತನೆ 3 ಅಷ್ಟಮಠದ ಯತಿಗಳಿಂದ ಮುಟ್ಟಿಪೂಜೆಗೊಂಬುವಂಥ ಶ್ರೇಷ್ಠರೊಳಗೆ ಶ್ರೇಷ್ಠ ನಿನ್ನುತ್ಕøಷ್ಟಮಹಿಮೆ ನೋಡಲೀಗ4 ಧ್ವಜ ವಜ್ರಾಂಕುಶ ರೇಖವುಳ್ಳ ಪದುಮಪಾದ ನೋಡಲೀಗ5 ದೊಡ್ಡ ಮುತ್ತು ವಜ್ರದ್ಹರಳಿನಡ್ಡಿಕೆ ಉಡಿದಾರ ಹೊಳೆಯೆ ಒಡ್ಯಾಣವನೆಯಿಟ್ಟ ಜಂಘÉ ಜಾನುದ್ವಯವ ನೋಡಲೀಗ6 ಉದರದಲ್ಲೀರೇಳುಲೋಕ ಅಡಗಿಸಿದನಂತಶಯನ ಪದುಮ ಪೊಕ್ಕಳಿಂದ ಬ್ರಹ್ಮನ ಪಡೆದ ಪರಮಾತ್ಮನ್ನ ನೋಡ7 ವಂಕಿ ಬಾಹುಪುರಿಗಳಿಂದ ಕಂಕಣ ಭೂಷಣಗಳೊಪ್ಪೆ ಕರವ ನೋಡ8 ನೀಲವರಣ ನಿನ್ನ ಬೆರಳು ಸಾಲು ಮಾಣಿಕ್ಯ ಮುದ್ರಿಕಿಂದ್ಹೊಳೆಯೆ ಲೀಲೆಯಿಂದ ಗಿರಿಯೆತ್ತಿದ ಗೋಪಾಲಕೃಷ್ಣ ನಿನ್ನ ನೋಡ 9 ವೈಜಯಂತಿ ತೋರ ಮುತ್ತಿನೆಳೆÀಗಳ್ಹೊಳೆವೋ ಶ್ರೀದೇವೇರಿಗಾಶ್ರಯವಾಗಿದ್ದಿ ್ವಶಾಲ ವಕ್ಷಸ್ಥಳವ ನೋಡ10 ಪಚ್ಚೆಪದಕ ಪಾರಿಜಾತ ಅಚ್ಚ ಮಲ್ಲಿಗೆ ತುಳಸಿಮಾಲೆ ಶ್ರೀ- ಕೌಸ್ತುಭ ಶೃಂಗಾರ ಕೊರಳ ಸಿರಿಯರಸು ನಿನ್ನ ನೋಡ11 ಮಧ್ವರಾಯರು ಕೈಯ ಬೀಸೆ ಎದ್ದು ಬಂದು ಹಡಗದಿಂದಿ ಲ್ಲಿದ್ದಾನುಡುಪಿಕ್ಷೇತ್ರದಿಯೆಂದು ಮುದ್ದುಕೃಷ್ಣನ ಮುಖವ ನೋಡ12 ಕ್ರೂರಕಂಸನ(ಅ)ಪ್ಪಳಿಸಿ ದ್ವಾರಾವತಿಯಲ್ಲಿದ್ದ ಅಷ್ಟಭಾರ್ಯೇರಿಂದ್ವಿ- ಹಾರ ಮಾಡಿದ್ವಾರಿಜಾಕ್ಷನ್ವದನ ನೋಡ 13 ಚಂದ್ರನಂತೆ ಹೊಳೆವೊ ಮುಖದಿ ದುಂಡು ಮುತ್ತಿನ ಮೂಗುತಿನಿಟ್ಟು ಕುಂದಣದ್ವಜ್ರ ಬಿಗಿದ ಕರ್ಣಕುಂಡಲವನ್ನು ನೋಡಲೀಗ14 ಕೇಸರಿ ಗಂಧ ಕಸ್ತೂರಿಯ ನಾಮ ತಿಲಕ ಒಪ್ಪೋವಜ್ರದರಳೆಲೆ ದೇವಕೀಸುತನ (ನೋಡ) 15 ಬಾಲಭಾಸ್ಕರ ಕೋಟಿಲಾವಣ್ಯರೂಪಗೆಲುವ ಕಾಂತಿ ಸಾಲುದೀವಿಗೆ ಸೊಬಗು ಕಮಲದಳಾಯತಾಕ್ಷ ಹರಿಯ ನೋಡ16 ಕೆಂಪುಹರಳು ಝಗ ಝಗಿಸುವೊ ಪಂಚರತ್ನದ ಕಿರೀಟ ಚಂಚಲಾಕ್ಷ ಹರಿಯ ಶಿರದಿ ಮುಂಚೆ ನೋಡಿ ಮುಗಿವೆ ಕೈಯ17 ಅಸುರರ್ವಂಚಿಸಮೃತ ಬೀರಿ ಪಶುವಾಹನಗೆ ಮೋಹ ತೋರಿ ಮೋಸದಿಂದ ಭಸ್ಮಾಸುರನ ನಾಶಮಾಡಿದ ನಾರಿ ನೋಡ18 ಲವಣಶರಧಿತೀರ ಮಧ್ವ ಸರೋವರದಲಿ ಶುದ್ಧಸ್ನಾನ ಪರಮ ಮಂತ್ರ ಜಪಿಸೋ ನಿನ್ನ ಶರಣು ಸುಜನಜನರ ನೋಡ19 ಉತ್ತಮ ವೈಕುಂಠ ಬಿಟ್ಟೀ ಉಡುಪಿಯಲ್ಲಿ ವಾಸವಾಗಿ ಭಕ್ತಜನರಭೀಷ್ಟಕೊಡುವೋ ನಿತ್ಯಮುಕ್ತ ನಿನ್ನ ನೋಡ20 ಶ್ರೀಶನೊಲಿಸಿದ್ಹನುಮ ಭಾರತೀಶನಾದ ಮಧ್ವರಾಯರ ದಾಸರ ದಾಸತ್ವಕೊಡು ಭೀಮೇಶಕೃಷ್ಣಂದಯದಿ ನೋಡ 21
--------------
ಹರಪನಹಳ್ಳಿಭೀಮವ್ವ
ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ಪ ಭಂಗ ಪಡಿಸಿದೆ ನಿನಗೆಣೆ-ಯಿಲ್ಲ ಶನೈಶ್ಚರನೆ ಅ ಹರಿಹರ ಬ್ರಹ್ಮಾದಿಗಳ ಭಂಗಪಡಿಸಿದೆ ಕರುಣವಿಲ್ಲವೆ ನಿನಗೆ ಹರಿಶ್ಚಂದ್ರ ನಳಚಕ್ರವರ್ತಿ ಷೋಡಶ ಮಹಾರಾಯ ಪಾಂಡ್ಯರ ದಣಿಸಿ ತೋರಿಸಿದೆ ಮನೆ ಮನೆ ವಾರ್ತೆಗಳೆಲ್ಲವ ತಿರಿದುಂಡು ಮರುಳುಗೊಂಡು ಪರರ ಪೀಡಿಸಿ ಭ್ರಮೆಪಟ್ಟು ಲಜ್ಜೆಗೆಟ್ಟು ತಿರುಗುವಂದದಿ ಮಾಡಿದೆ 1 ಕಟ್ಟಿದ ಪಶು ಕರೆಯದು ತಾನಾಡಿದ ಮಾತು ಕಟ್ಟದು ಸಭೆಯೊಳಗೆ ಮೆಟ್ಟಿದ ನೆಲ ಮುನಿವುದು ಹೊನ್ನ ಹಿಡಿದರೆ ಬಕ್ಕಟ್ಟೆ ಬಯಲಹುದು ಉಟ್ಟದ್ದು ಹಾವಾಗಿ ಹರಿವುದು ಸಾಲಿ-ಗರಟ್ಟುಳಿ ಘನವಹುದು ಮುಟ್ಟ ಹೇಸುವರು ಕುರುಹ ನಾರಿಯರು ನೆಂಟರಿಷ್ಟರೆ ಕಾಣರು 2 ಸತಿ ಬದ್ಧದ್ವೇಷದಿ ಬೈವಳು ಇದ್ದ ಮನುಜರ ಪಾಡೇನು ನೀ ಬಂದು ಹೊದ್ದಿದ ಮಾತ್ರದಲಿ ನಿದ್ದೆ ಹಸಿವು ಬಳಲಿಕೆ ದಟ್ಟ-ದಾರಿದ್ರ್ಯವು ಕೈಗೊಂಬುದು 3 ಒಳ್ಳೆದಾಗಿದ್ದ ಸಂಗಾತಿಯ ಸ್ನೇಹವೆಲ್ಲವನು ಬಿಡಿಸಿ ಅಲ್ಲಲ್ಲಿ ಕೊಡುವ ದಾನಿಗಳ ಮನದಿ ಪೊಕ್ಕು ಇಲ್ಲಿಲ್ಲ ಹೋಗೆನಿಸಿ ಇಲ್ಲದ ಅಪವಾದ ಭಾಳ ಕಂಟಕ-ರೋಗದಲ್ಲಿ ನೋಯಿಸಿ ಒಲ್ಲೆನೀ ಜನ್ಮವೆಂದೆನಿಸಿ ಸಾಧಿಸಿ ಕಡೆಯಲ್ಲಿ ಗುಣ ತೋರಿಸಿ4 ದೇಶದೇಶದ ರಾಯರ್ಗಳನೆಲ್ಲರನು ಪರದೇಶಿಗಳನು ಮಾಡಿದೆ ವಾಸವನೆ ಬಿಡಿಸಿ ತಿರುಗಿಸಿ ಗಾಸಿ-ಯಿಂದಲೆ ನೋಯಿಸಿ ಶೇಷಶಯನ ಸರ್ವೇಶ ದೇವೇಶನೆ ಲೇಸು ಪಾಲಿಸೊ ಎನಗೆ ದೇಶದಂತರ್ಯಾಮಿ ನೆಲೆಯಾದಿಕೇಶವತೋಷದಿ ಸಲಹೊ ಎನ್ನ 5
--------------
ಕನಕದಾಸ
ಬಾ ಬಾ ರಾಘವ ಬಾ ವೀರ ರಾಘವ ಪ ಮತ್ಸ್ಯರೂಪನಾಗಿ ಹೆಚ್ಚಿದ ದೈತ್ಯನ ಇಚ್ಛೆಯಿಂದಲಿ ಕೊಂದ ಅಚ್ಯುತರಾಯನೆ 1 ಕೂರ್ಮರೂಪನಾಗಿ ಅಮರರಿಗೊಲಿದು ನೀ ಕಾಮಜನಕ ಸುಪ್ರೇಮಾವನಿತ್ಯಂತೆ4 2 ವರಹರೂಪನಾಗಿ ಧರಣಿಯ ಚೋರನ ಶಿರವ ತಂದು ನೀ ಜಗವ ಪೊರೆದ್ಯಂತೆ 3 ದುರುಳ ರಕ್ಕಸನ ಕರುಳ ತೆಗೆದು ನಿನ್ನ ಕೊರಳೊಳಗಿಟ್ಯಂತೆ 4 ಚೆಲುವತನದಿ ಪೋಗಿ ಬಲಿಯದಾನವ ಬೇಡಿ ಕಲುಷ ಹರಿಸಿ ಅವನ ಪಾತಾಳಕ್ಕೊತ್ತಿದ್ಯಂತೆ 5 ಕೊಡಲಿಯ ಪಿಡಿಯುತ ದುಗುಡ ರಾಯರುಗಳ ಸೊ ಗಡು ಮುರಿದು ನೀ ಸಡಗರ ಪಟ್ಯಂತೆ 6 ಸೀತೆಗೋಸ್ಕರ ಪೋಗಿ ಸೇತುವೆಯನೆ ಕಟ್ಟಿ ಭೂತ ರಾವಣನ ಖ್ಯಾತಿಯಿಂದಲಿ ಕೊಂದ 7 ವಾರಿಜಾಕ್ಷಿಯರ ಕೂಡಿ ನೀರಾಟದೊಳು ಪೊಕ್ಕು ನೀರೆಯರ1 ಮನ ಅಪಹಾರಮಾಡಿದ ಕೃಷ್ಣ 8 ಚಿತ್ತಜಪಿತ ನೀನು ಬತ್ತಲೆಯೊಳು ಬಂದು ಉತ್ತಮ ಸ್ತ್ರೀಯರ ವ್ರತಗಳಳಿದ್ಯಂತೆ 9 ಸುಂದರ ವಾಜಿಯ ಚೆಂದಾದಿಂದೇರುತ ಮಂದಗಮನೆಯರ ನಂದವಳಿದ್ಯಂತೆ 10 ದೋಷರಹಿತ ನಮ್ಮ ಶೇಷವಿಠ್ಠಲನೆ ಬ್ಯಾಸರವಿಲ್ಲದೆ ಪೋಷಿಸಿ ಸಲಹಲು 11
--------------
ಬಾಗೇಪಲ್ಲಿ ಶೇಷದಾಸರು
ಬಾಯಂದು ಕರೆವೆನೊ ದೇವನಿನ್ನ ವೈರಿ ಮಧ್ವರಾಯರ ಪ್ರೀಯನೆ ಪ ರಾಮ ನಿರಾಮಯ ಮಾಮನೋಹರ ಶೌರಿ ಸೋಮಧತಾರ್ಚಿತ ಸಾಮನುತಾ ಭೂಮಿಜ ಸಾಮಜ ಪಾಲ ಬಾರೊ ಕಾಲ ಪ್ರೇಮದಿ 1 ಬಿಸಿಜಾಭಾಸ್ಪಜನ ಮಾನಸಗೆ ಅಸುರ ವೈರಿ ಕುಸಮಶರ ಪಿತ ಸುಮನಸ ವಂದಿತಾ ಅಸಮ ಶೂರ ಬಾರೊ ವಸುಧಿಧರ ಬಾರೊ ವೈರಿ ಕುಶಲದಿ 2 ಇಂದಿರೆ ಮಂದಿರ ಸುಂದರ ಶಿರಿಗೋವಿಂದ ವಿಠಲ ಮಂದರಧರ ಬಾರೋ ಚಂದಿರ ಮೊಗ ಬಾರೊ ಛಂದದ ದೈವ ಬಾರೊ ಇಂದಿನ ಯನ್ನ ಮನಸಿಗೆ 3
--------------
ಅಸ್ಕಿಹಾಳ ಗೋವಿಂದ
ಬಾಯಿ ತೆರೆದ ಬಗಿಯೇನೊ ದೇವದೇವ ತೋಯಜದಳ ನೇತ್ರನೆ ನೀಯೆನಗಿದು ಪೇಳೈ ನಿಜವಾಗಿ ಲಕ್ಷ್ಮೀನಾ ರಾಯಣ ನರಸಿಂಹನೆ ಪ ಅಸುರನ ಉದರವ ಹಸನಾಗಿ ಬಗೆವಾಗ ಬಾಯ ತೆರೆದಿಯಾ ಬಿಸಜ ಭವಾಂಡವು ಬಸುರೊಳಗಿದ್ದ ಉ- ಬ್ಬಸಿಗೆ ಬಾಯ ತೆರೆದಿಯೊ 1 ಮಡದೀಯ ರೂಪಕ್ಕೆ ಮರುಳಾಗಿ ಅದರಿಂದ ಬಿಡದೆ ಬಾಯ ತೆರೆದಿಯಾ ದೃಢದಿ ಪ್ರಹ್ಲಾದನ ಒಡೆಯ ರಕ್ಷಿಸೊ ನುಡಿಗೆ ಬಾಯ ತೆರೆದಿಯೊ 2 ಗುರು ಸತ್ಯಬೋಧರಾಯರ ನಿತ್ಯಭಜನೆಗೆ ಬರಿದೆ ಬಾಯ ತೆರೆದಿಯೊ ವರ ಕದರುಂಡಲಗಿ ಹನುಮಯ್ಯನೊಡೆಯನೆ ಕರವ ಮುಗಿವೆ ಕರುಣಿಸೊ 3
--------------
ಕದರುಂಡಲಗಿ ಹನುಮಯ್ಯ
ಬಾರಪ್ಪ ನೀ ಬಾರಪ್ಪಾ ಭಾರತಿರಮಣಾ ಮುಖ್ಯಪ್ರಾಣಾಗೋ'ನದಿನ್ನಿ ಹಣ್ಣಮಪ್ಪಾ ನೀ ಗಾಲವ ಕ್ಷೇತ್ರಕೆ ಬಾರಪ್ಪಾ ಪಗಾಲವಕ್ಷೇತ್ರಕ್ಕೆ ಬಾರಪ್ಪಾ ನೀ ಹೋಳಿಗೆತುಪ್ಪಾ ಹೊಡೆಯಪ್ಪಾಕೃಷ್ಣವೇಣಿಯ ತಟದ ಶಿಲೆಯೊಳು ಒಡಮೂಡುತ ನೀ ಇದ್ದೆಪ್ಪಾ1ಶಿಷ್ಟರಾದ ಶ್ರೀ ಉಮರ್ಜಿ ಆಚಾರ್ಯರ ನಿಷ್ಠೆಗೆ ಒಲಿದು ಬಂದೆಪ್ಪಾಶರಧಿಗೆ ಜಿಗಿದು ಸೀತಾದೇ'ಗೆ ರಾಮಮುದ್ರಿಕೆಯ ಕೊಟ್ಟೆಪ್ಪಾದುರುಳ ರಾವಣನ ಲಂಕಾಪಟ್ಟಣ ಸುಟ್ಟ ಕಪಿವರನು ನೀನಪ್ಪಾದುಷ್ಟ ಕೌರವನ ತೊಡೆಯ ಒಡೆದು ಗದೆಪಿಡಿದ ಭೀಮ ನೀ ಹೌದಪ್ಪಾ 2ದುಃಶಾಸನನ ಕರುಳ ಬಗೆದು ನರಸಿಂಹನ ಪ್ರೀತಿ ಪಡೆದೆಪ್ಪಾಹರಿಯದ್ವೇಗಳ ದುರ್ಮತಗಳನು ಮುರಿದು ಮಧ್ವಯತಿ ಆದೆಪ್ಪಾರಾಶಿ ರಾಶಿ ಸದಗ್ರಂಥ ರಚಿಸಿ ನೀ ವ್ಯಾಸರ ಸನ್ನಿಧಿ ಪಡೆದೆಪ್ಪಾಕೃಷ್ಣವೇಣಿತಟ ನರಾಹರಿ ಇರುವನು ರಾಯರು ಇರುವರು ಬಾರಪ್ಪಾ 3ಎಲ್ಲಿ ನರಹರಿ ಎಲ್ಲಿ ರಾಯರು ಅಲ್ಲಿ ನೀ ಇರಬೇಕಪ್ಪಾಪಾಪಿಷ್ಠರ ಗತಿಭಯಂಕರನು ನೀಪುಣೈವಂತರಿಗೆ ಸುಲಭಪ್ಪಾಭೂಪತಿ'ಠ್ಠಲನ ಭಕ್ತರ ಪೊರೆಯಲು ನೀ ಗಾಲವ ಕ್ಷೇತ್ರಕೆ ಬಾರಪ್ಪಾ 4ರುದ್ರದೇವರು
--------------
ಭೂಪತಿ ವಿಠಲರು
ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿ ರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ ಪ ಅರಸುಧರ್ಮಜ ಭೀಮ ಪಾರ್ಥ ನಕುಲ ಸಾದೇವ ಸರಸವಾಡಿ ಕುಳಿತಾರೆ ಸಂತೋಷದಿಂದಲಿ 1 ಪುತ್ಥಳಿ ಚಂದ್ರಹಾರ ಪದಕವು ಆಣಿ ಮುತ್ತಿನ ಸರಗಳು ಕಟ್ಟಾಣಿ ಹೊಳೆಯುತ 2 ವಂಕಿ ನಾಗಮುರಿಗೆ ಸರಿಗೆ ಕಂಕಣ ದ್ವಾರ್ಯವು ಕುಂಕುಮ ಗಂಧ ಪರಿಮಳ ಅಲಂಕಾರವಾಗಿ 3 ಹೆರಳುಬಂಗಾರ ಚೌರಿ ಚಂದ್ರ ಗೊಂಡ್ಯ ರಾಗಟೆಯು ಅರಳು ಮಲ್ಲಿಗೆ ಪಾರಿಜಾತ ಮುಡಿಯಲ್ಲೊ ್ಹಳೆಯುತ 4 ಗೆಜ್ಜೆ ಅಡ್ಡಿಕೆ ವಜ್ರದೋಲೆ ಬುಗುಡಿ ಬುಲಾಕು ಮುದ್ದು ಮೋರೆಗೆ ಮುತ್ತುಕೆಂಪಿನ ಮುಕುರ್ಯ ಜಾಣೆ 5 ಜರದನಿರಿಗ್ವಜ್ಜರದÀ ಪಟ್ಟಿ ಥಳಕೆಂದ್ಹೊಳೆಯುತ ಚರಣದುಂಗುರ ಪೈಜಣ ರುಳಿಯು ಘಲುಘಲೆನ್ನುತ 6 ಕೋಮಲಾಂಗಿ ಬಂದು ಭೀಮೇಶಕೃಷ್ಣನ ತಂಗಿಭೀಮ ಧರ್ಮರ ಮುಂದೆ ಕುಳಿತಳು ಪಾರ್ಥನರ್ಧಾಂಗಿ7
--------------
ಹರಪನಹಳ್ಳಿಭೀಮವ್ವ
ಬಿದ್ದೆ ನಿಮ್ಮಯ ಪಾದದಲ್ಲಿ ನಾ ಪ ಮಧ್ವರಾಯರ ಮನದಲ್ಲಿ ಇದ್ದು ವಲಿವ ವೇದವ್ಯಾಸ ಅ.ಪ. ವೇದ ಓದದ ಶುದ್ಧ ಕಳ್ಳನಾ ಮೆದ್ದು ಮೆಲ್ಲುತ ವೃದ್ಧನಾದೆ ಭಲ್ ಗದ್ದ ದಾಸಗೆ ಕರುಣದಿ ತೋರಿ ಉದ್ಧರಿಸುವ ಬಗೆ ಬಲ್ಲೀ 1 ಅನ್ಯದೇವರ ನಾ ನೊಲ್ಲೆ ನಿನ್ನ ಪಾದವ ಬಿಡಲೊಲ್ಲೆ ಘನ್ನಕರುಣಿ ನೀನು ಬಲ್ಲೆ ನಿನ್ನ ಬಿಡಲು ಜಗಕಲ್ಲೇ 2 ಉತ್ತಮೋತ್ತಮ ದೇವ ಸತ್ಯ ಭೃತ್ಯಜೀವನು ಎಂಬೆನಿತ್ಯ ಭಕ್ತ ಪ್ರಥಮ ಪ್ರಾಣನೀನೇ ಮುಕ್ತಿನಿನ್ನಾಧೀನವೇನೇ 3 ವಿಧಿ ಪರಿವಾರ ಎಂದೆಂದಿಗೂ ಭಿನ್ನರೇನೇ ಎಂದೆಂದು ಅಧೀನರೇನೇ 4 ಶ್ರೀಕೃಷ್ಣವಿಠಲ ಏಕ ಸಕಲ ದೋಷ ವಿದೂರ ಪೊರೆಯೋ ಎಂದು ಕೂಗಿ 5
--------------
ಕೃಷ್ಣವಿಠಲದಾಸರು
ಬೆಳಗುಝಾವದಿ ಬಾರೊ ಹರಿಯೆ ನಿನ್ನ ಚರಣತೊಳೆದು ತೀರ್ಥ ಪಾನ ಮಾಡುವೆ ನಾ ಪನೀರುಬಿಟ್ಟು ಮೇಲೆ ಬಾರೋ ಬೆನ್ನ ಭಾರವನು ಕೆಳಗಿಟ್ಟು ಬಾರಯ್ಯಾ ಹರಿಯೆಕೋರೆದಾಡಿಯ ತೋರ ಬಾರೋ ನಿನ್ನಧೀರ ಗಂಭೀರ ನರಹರಿ ರೂಪ ತೋರೊ1ಪುಟ್ಟ ಬ್ರಾಹ್ಮಣನಾಗಿ ಬಾರೊ ಆ-ದುಷ್ಟ ಕ್ಷತ್ರಿಯರನ್ನು ತಿರಿದವನೆ ಬಾರೋಸತ್ಯಸಂಧ ರಾಮ ಬಾರೋ ಬಲುಸಿಸ್ತಾಗಿ ಕೊಳಲನೂದುತ ಕೃಷ್ಣ ಬಾರೋ 2ಬುದ್ಧ ಪ್ರಬುದ್ಧನಾಗಿ ಬಾರೊ ಬಲುದೊಡ್ಡ ತೇಜಿಯನೇರಿ ಭರದಿಂದ ಬಾರೋಮುದ್ದು ಭೂಪತಿ 'ಠ್ಠಲ ಬಾರೋ ನಮ್ಮಮಧ್ವರಾಯರಿಗೊಲಿದ ಕೃಷ್ಣಯ್ಯ ಬಾರೋ 3
--------------
ಭೂಪತಿ ವಿಠಲರು
ಬೇಗ ಪಾಲಿಸೊ ಬ್ರಹ್ಮಣ್ಯತೀರ್ಥ | ಕರುಣಿಸು ಇಷ್ಟಾರ್ಥ ಪ. ಯೋಗಿವರ ಶ್ರೀ ಅಬ್ಬೂರು ನಿಲಯ | ಸದ್ಭಕ್ತರಿಗತಿ ಪ್ರಿಯ ಅ.ಪ. ಸತ್ವಗುಣನೆ ಸರ್ವೋತ್ತಮ ಹರಿ ಪ್ರಿಯ | ಪಾವನ ಶುಭಕಾಯ ಚಿತ್ತದಲಿ ಹರಿ ಚಿಂತನೆ ಮಾಡುತಲಿ | ವರಗಳ ನೀಡುತಲಿ ಆತ್ಯಧಿಕದ ಕಣ್ವ ನದಿಯ ತೀರ ವಾಸ | ನಿನ್ನಲಿ ಹರಿ ವಾಸ ಸುಜನರುಗಳ ಪೊರೆವೆ 1 ಪ್ರೇಮದಿ ನೀ ಕೊಳಲು ಗೋಕ್ಷೀರವನೆರೆದೆ ಆಗಮಗಳ ಕಲಿಸಲು ಮೌಂಜಿಯ ಕಟ್ಟಿ | ಶ್ರೀಪಾದರಲಿ ಬಿಟ್ಟೆ ಯೋಗಿ ವ್ಯಾಸರಾಯರು ಎಂದ್ಹೆಸರಿಟ್ಟು | ಸನ್ಯಾಸವನೆ ಕೊಟ್ಟು 2 ಪಾಪಿ ಜನರ ಪಾವನಗೈಯುತಲಿ | ಶ್ರೀನಿಧಿ ಧ್ಯಾನದಲಿ ಕಾಪಾಡು ಸಧ್ಭøತ್ಯರ ದಯದಿಂದ | ತಪಸಿನ ಶಕ್ತಿಂದ ಶಿಷ್ಟರ ಪೊರೆಯುತಲಿ ಗೋಪಾಲಕೃಷ್ಣವಿಠ್ಠಲನನು ಹೃದಯದಲಿ | ನಿತ್ಯದಿ ಕಾಣುತಲಿ 3
--------------
ಅಂಬಾಬಾಯಿ
ಭಕ್ತಜನ ಸಂರಕ್ಷಣ ಪ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು - ತರುವೆ ಚಿಂತಾಮಣಿಯೆ ಪೊತ್ತ ತಿಮ್ಮಪ್ಪ ಏಳೊಅ.ಪ. ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ಸರಸಿಜಾಂಬುಕ ಮಂಚದಿಂದೇಳೊ 1 ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉರಗ ಪೆಡೆಯೆತ್ತಿದನು ಭಯದಿಂದ ಅಡಗಿದರು ದಶದಿಕ್ಕಿನೊಳಗೆ ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ ಧಂ ಧಂ ಧಣಾ ಸರಿಗಮಪದನೀ ಯೆಂದೆನುತ ತುರೆಸಿದರು ಸದಮಲಾನಂದ ತಿಮ್ಮಾ 2 ನಾರಿಯರು ಬಂದು ಅಂಗಳ ಬಳಿದು ಗಂಧದಾ ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ- ಮಕರ ಕನ್ನಡಿ ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ- ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ ಕಂಸಾರಿ ಕೋನೇರಿವಾಸ 3 ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ ನೋಡುತ್ತಿದಾರೆ ಸರ್ವೇಶ4 ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ ಹೇಮ ಪಾದುಕಾ ಪಟ್ಟುವಸನ ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು ಮುಂದೆ ಆದಿಹರಿ ಪರಮಪುರುಷ 5 ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು ಬೊಮ್ಮಾಂಡ ಕಟಹÀ ಬಿಚ್ಚುವಂತೆ ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ- ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ 6 ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ- ಸೂರ್ಯ ಚಿತ್ತದಲಿ ಮುಖ್ಯರಾದ ವಿಶ್ವ - ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ 7 ನಿಚ್ಚ ಏಳುವ ಸಮಯ ಮೀರಿತೋ ಇಂದೀಗ ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ ಮೆಚ್ಚಿಸಿದ ಮಹಸರಸವೆ ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ ಸೊಲ್ಲು ಕರ್ಣಕೆ ಬೀಳದಾಯಿತೆ ಕಾಣೆ ಸಚ್ಚಿದಾನಂದಾತ್ಮಕ 8 ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ- ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ- ಮುದ್ರ ರಾಣಿಯ ಪಡೆಯೊ ರಾಯರಾಯರ ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ- ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ ವೆಂಕಟಕಾದ್ರವೇಯ ಹಾಸಿಗೆಯಿಂದೇಳು 9
--------------
ವಿಜಯದಾಸ
ಭಕ್ತರುದ್ಧಾರಕ ದಾಸರಾಯರಿವರ್ಯಾರೇ ಪೇಳಕ್ಕ ಪ. ಮುಕ್ತಿಗೊಡೆಯನ ಮಾರ್ಗತೋರಿ ಭವ ಮುಕ್ತಿಗೊಳಿಪ ಶ್ರೀ ಗುರುವೆಲೆ ತಂಗಿ ಅ.ಪ. ಕಂದರಂದದಿ ಪೊಂದಿದವರ ಪೊರೆಯುವರ್ಯಾರೇ ಪೇಳಕ್ಕಯ್ಯ ನಂದಕಂದನ ಅಂಕಿತ ಕೊಡುವವರ್ಯಾರೇ ಪೇಳಕ್ಕಯ್ಯ ಸಿಂಧುಶಯನನ ತೋರುವೆನೆಂಬುವರ್ಯಾರೇ ಪೇಳಕ್ಕಯ್ಯ ಬಿಡಿಸುವ ದಾಸೋತ್ತಮರೆಲೆ ತಂಗಿ 1 ಭಾವಜನಯ್ಯನ ಭಾವಿಸಿ ಭಜಿಸುವರ್ಯಾರೇ ಪೇಳಕ್ಕಯ್ಯ ಸಾವಕಾಶವಿಲ್ಲದೆ ತತ್ವವನೊರೆಯುವರ್ಯಾರೇ ಪೇಳಕ್ಕಯ್ಯ ಪಾವನಮಾನಿಗತಿ ಪ್ರಿಯರೆಂದೆನಿಸುವರ್ಯಾರೇ ಪೇಳಕ್ಕಯ್ಯ ನಾಮಾತ್ಮಕರಲೆ ತಂಗಿ 2 ಮಂದಮತಿಗಳ ಬಂದು ಕಾಯ್ವರಿವರ್ಯಾರೇ ಪೇಳಕ್ಕಯ್ಯ ಗಂಧಾಕ್ಷತೆ ಪದ್ಮಾಕ್ಷಿಯ ಧರಿಸಿಹರ್ಯಾರೇ ಪೇಳಕ್ಕಯ್ಯ ಬಂದು ಸ್ವಪ್ನದಿ ಅಭಯ ಕೊಡುವರಿವರ್ಯಾರೇ ಪೇಳಕ್ಕಯ್ಯ ಪೊಂದಿ ಭಜಿಸಿದ ಮಹಿಮರೆ ತಂಗಿ 3 ಕಷ್ಟವ ಬಿಡಿಸಿ ಉತ್ಕøಷ್ಟವ ತೋರಿದರ್ಯಾರೇ ಪೇಳಕ್ಕಯ್ಯ ಸೃಷ್ಟೀಶ ನಿತ್ಯಾನಂದನ ತೋರಿದರ್ಯಾರೇ ಪೇಳಕ್ಕಯ್ಯ ತುಷ್ಟಿಬಡಿಸಿ ವಚನಾಮೃತ ಕರೆಯುವರ್ಯಾರೇ ಪೇಳಕ್ಕಯ್ಯ ಶ್ರೇಷ್ಠ ದಾಸರೆಂದೆನಿಸಿ ಗೋಪಾಲಕೃಷ್ಣವಿಠಲಗತಿ ಪ್ರ್ರಿಯರೆ ತಂಗಿ4
--------------
ಅಂಬಾಬಾಯಿ
ಭಜಿಸಿ ಬದುಕಿರೋ _ ಭರದಿ ಸುಜನ ರೆನಿಸಿರೋ ಪ ಸುಜನ ರಾಜ ರಾಘವೇಂದ್ರರಾ ಅ.ಪ ಸುಜನ ಮಲಿನ ಕಳಿಯಲು ಒಲಿದು ಭವಿಯೊಳು _ ಬಂದ ಅಲವ ಮಹಿಮರ 1 ವೇಧ ದೂತರ _ ಪ್ರಹ್ಲಾದರೆಂಬರ ಸಾಧು ಸೇವ್ಯರ _ ದುರ್ಬೋಧೆ ಕಳಿವರ 2 ನಾರಸಿಂಹನ ಕರುಣ ಸೂರೆ ಪಡದಿಹ ಭಾರಿ ಭಕ್ತರ ದೇವರ್ಷಿ ಛಾತ್ರರ 3 ವ್ಯಾಸರಾಯರ _ ಶ್ರೀನಿವಾಸ ಯಜಕರ ಶೇಷದೇವರ ಆವೇಶ ಯುಕ್ತರ 4 ರಾಜ ಗುರುಗಳು ಕವಿರಾಜ ಮಾನ್ಯರು ನೈಜ ತೇಜರು ನಿವ್ರ್ಯಾಜ ಪ್ರೇಮರು 5 ಹರಿಯ ತರಿಸಿದಾ ಮುರಹರನ ಕುಣಿಸಿ ದಾ ಮುರವ ಹರಿಸಿದಾ ಧೊರೆಗೆ ಹರುಷ ಸುರಿಸಿದಾ 6 ಮಾನವಂತರಾ ಬಹುಜ್ಞಾನವಂತರಾ ದಾನ ಶೀಲರಾ ಅನುಮಾನ ರಹಿತರ 7 ಭ್ರಾಂತಿ ವಾದವ ವಿಶ್ರಾಂತಿ ಗೊಳಿಸಿದ ಶಾಂತಿ ಸಾಗರ ವೇದಾಂತ ಭಾಸ್ಕರ 8 ಶ್ರೀ ಸುಧೀಂದ್ರರ ವಿಶ್ವಾಸ ಪುತ್ರರ ದೋಷದೂರರ _ ಗುರು ದೋಷ ಕಳಿವರ 9 ಮಂತ್ರ ಸಿದ್ಧರು ಬಹು ಗ್ರಂಥ ಕರ್ತರು ತಂತ್ರ ಮಲ್ಲರು ಹರಿ ಮಂತ್ರಿ ಸಚಿವರು 10 ಭವ ರೋಗ ವೈದ್ಯರ ರಾಗ ರಹಿತರ ವೈರಾಗ್ಯ ಭಾಗ್ಯರ 11 ವಾದಿ ಭೀಕರ ಶ್ರೀವಿಜೀಂದ್ರ ಪೌತ್ರರ ನಿತ್ಯ ಮಿಂದು ಮೀಯ್ವರ 12 ತರ್ಕದಿಂದಲು ಹರಿಯು ಶಕ್ತಿಯಿಂದಲು ಯುಕ್ತಿಯಿಂದಲು ಒಲಿಯ ಭಕ್ತಿ ಇಲ್ಲದೆ 13 ಶ್ರೀಶ ದಾಸರ ಪದ ಪಾಂಶು ಧರಿಸದೆ ದೇಶ ತಿರುಗಲು ಬರಿಘಾಸಿ ಸಿದ್ಧವು 14 ಭಕ್ತರೊಲಿಯದೆ ನಿಜ ಭಕ್ತಿ ಸಿಕ್ಕದು ಪಕ್ವವಾಗದೆ ಭಕ್ತಿ ದಕ್ಕ ಶ್ರೀ ಹರಿ 15 ಇವರ ಮಂತ್ರವ ಭಕ್ತ ಜವದಿ ಜಪಿಸಲು ಅವಗೆ ಕರಗತ ಸಿದ್ಧ ಭವದಿ ವಾಂಛಿತ 16 ಶ್ರೀನಿವಾಸನ ಭಕ್ತ ಶ್ರೇಣಿ ಸೇರುವ 17 ಅಲ್ಪ ಸೇವೆಯೆ ಮೇರು ಕಲ್ಪ ವಾಹುದೊ ಕಾಕು ಸ್ವಲ್ಪ ತಟ್ಟದೊ 18 ನಿಖಿಳ ಯಾತ್ರೆಯಾ ಫಲ ಭಕ್ತ ಪಡೆಯುವ ಸಂದೇಹ ಸಲ್ಲದೊ 19 ಪುತ್ರ ನೀಡುವ ಸಂಪತ್ತು ದೊರಕಿಪ ವೃತ್ತಿ ಕಲ್ಪಿಪ ಆಪತ್ತು ಕಳಿಯುವ 20 ರಾಮ ನರಹರಿ ಕೃಷ್ಣ ಬಾದರಾಯಣ ದಿವಿಜ ಸ್ತೋಮ ವೆಲ್ಲವು 21 ಸೇರಿ ಇವರಿಗೆ ಕೀರ್ತಿ ಸೂರೆ ಕೊಡುತಿರೆ ಪಾರವಿಲ್ಲವು ಸತ್ಯ ಮಹಿಮೆ ಗೆಂಬುವೆ 22 ಕರ್ಣ ವಿದಿತರು ವಿಘ್ನ ಕಳಿವರು ಶ್ರೀ ಸತ್ಯ ಸಂಧರು 23 ಗುರುವು ಒಲಿದರೆ ತಾ ಹರಿಯು ಒಲಿಯುವ ಗುರುವು ಮುನಿದರೆ ಯಾರು ಪೊರೆವರಿಲ್ಲವೊ 24 ಶುದ್ಧ ಭಕ್ತಿಲಿ ಈ ಪದವ ಪಠಿಸಲು ಸಿಧ್ಧಿ ಸತ್ಯವು ಸರ್ವತ್ರ ವಿಜಯವು25 ಸಾರಿ ಸಾರುವೆ ಕೇಳಿ ಕ್ರೂರ ಕಲಿಯಲಿ ದೂರ ಸಾಧನೆ ಇವರ ಸೇರ ದಿರ್ಪಗೆ26 ಜಿಷ್ಣು ಸೂತ ಶ್ರೀ ಕೃಷ್ಣ ವಿಠಲನ ಶ್ರೇಷ್ಟ ಭಕ್ತರ ಶ್ರೀ ರಾಘವೇಂದ್ರರ27
--------------
ಕೃಷ್ಣವಿಠಲದಾಸರು