ಒಟ್ಟು 290 ಕಡೆಗಳಲ್ಲಿ , 23 ದಾಸರು , 258 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೃಡ ನೀನಾದೆನಡುವೆ ಜಡನಾದೆನ್ನ ಮೃಡನ ಮಾಡಯ್ಯ 1ತನುವೆರಡರೊಳಗಿರುವ ತತ್ವ ಗಣವೆನಿಸುವದುತನುಗಣಕೆ ನೀ ಸ್ವಾ'ುಯಾಗಿರಲು ಬಳಿಕಜನರೆಲ್ಲ ನಿನ್ನಡಿಯ ತನು'ನಲಿ 'ಘ್ನಗಳಕೊನೆಗಂಡು ಮನದಭೀಷ್ಟವ ಪಡೆಯುತಿಹರು 2'ಘ್ನೇಶನೆಂಬೊಂದು ಪದಕೆ ವರ್ಣತ್ರಯವು'ಘ್ನವೆಂಬೆರಡು ವರ್ಣದಿ ಜ್ಞಾನವೊಂದು'ಘ್ನಹತಿಯದಕೀಶ 'ಘ್ನೇಶ ನೀನೆ ನಿರ್'ಘ್ನದಿಂ ಜ್ಞಾನವನು ಕೊನೆಗಾಣಿಸಯ್ಯ 3ಮೊದಲ ವರ್ಣವೆ ಸಾಕ್ಷಿಯದರ ಕಡೆಯದು ಮಾಯೆುದಕೊಡೆಯನೆನುತಿಹುದು ಮೂರನೆಯ ವರ್ಣಅದರಿಂದ ಕರಣಪ್ರೇರಕನೆಂಬ ಹದನಾಗಿವೊದಗಿದುದು 'ಘ್ನೇಶನೆಂಬ ನಿನ್ನ ನಾಮ 4ಪರಮಾತ್ಮ ನೀನೆಂದು ನೆರೆ ತಿಳಿದು ನಿನ್ನಡಿಗೆಎರಗಿದೆನು ವ್ಯವಹಾರ ದೆಸೆುಂದಲೀಗತಿರುಪತಿಯ ವೆಂಕಟನೆ ವರದ ಗಣಪತಿಯೆಂದುಮೆರೆಯುತಿಹೆ ರಾಮೇಶನಾಲಯಾವಾಸ 5
--------------
ತಿಮ್ಮಪ್ಪದಾಸರು
ಮೋಜು ಮಾಡಿದಿರ ರುಕ್ಮಿಣಿ ಭಾಮೆಮೋಜು ಮಾಡಿದಿರರಾಜಪುತ್ರರ ವಾಜಿಗಾಣುತಸೋಜಿಗಾಗೇದರಾಜ ರಾಜರ ಪ. ಚದುರೆ ದ್ರೌಪದಿದೇವಿ ಮುದದಿ ಮುಯ್ಯವ ತಾರೆಇದುರಿಗೆ ಬಾರದೆ ಕದವನಿಕ್ಕಿ ಬಹಳೆ1 ಚಿಕ್ಕ ಸುಭದ್ರಾತಾ ಅಕ್ಕರದಿ ಬರುವಾಗಹೊಕ್ಕು ಒಳಗೆ ಕದವ ನಿಕ್ಕಿಕೊಂಡು ಬಹಳೆ2 ವಸುಧೆರಾಯರು ನಿಮ್ಮ ಕುಶಲಕ್ಕೆ ಬೆರಗಾಗಿಮುಸು ಮುಸು ನಗುತಾರೆ ಮುಸುಕಿನೊಳಗೆ ಬಹಳೆ3 ಕತ್ತಲೆಗಂಜುತ ಮಿತ್ರೆಯರು ನಿಂತೆವುಪೃಥ್ವಿರಾಯರು ನಿಮ್ಮ ಅರ್ಥಿಗೆ ನಗುತಾರೆ ಬಹಳೆ 4 ಕೃಷ್ಣ ರಾಮೇಶನ ಪಟ್ಟದರಾಣಿಯರುಎಷ್ಟು ಶಾಣೇರೆಂದು ಅಷ್ಟ್ಟೂರು ನಗುತಾರೆ ಬಹಳೆ5
--------------
ಗಲಗಲಿಅವ್ವನವರು
ಯಾಕಿಷ್ಟು ದಯವಿಲ್ಲ ಎನ್ನಮೇಲೆನೀ ಕರುಣಿಸಿದರಾಗದ ಕಾರ್ಯವುಂಟೆ ಪ ಬಾಲೆಗೊಲಿದು ಹಾಲಕುಡಿದವನೆಂದೆನೆಸೂಳೆಯ ಮನೆಗೆ ನಾ ಹೋಗೆಂದೆನೆಲೋಲಾಕ್ಷಿಯ ಕುಚದೊಳೆ ಮಾತಾಡೆಂದೆನೆಚೋಳನಂತೆ ಹೊನ್ನ ಮಳೆಯ ಕರೆಯೆಂದೆನೆ1 ಊರುಗಲ್ಲೊಳು ಕನ್ನವ ಕೊಯಿದನೆಂದನೆಊರನೆ ಕೈಲಾಸಕ್ಕೊಯಿಯೆಂದೆನೆಕ್ರೂರ ಬಾಣನ ಬಾಗಿಲ ಕಾಯ್ದನೆಂದೆನೆನೀರ ಮಂಡೆಯೊಳು ಪೊತ್ತವನೆಂದು ಪೇಳ್ದೆನೆ 2 ಮಲ್ಲಗಾಳಗವನು ಮಾಡಿದನೆಂದೆನೆಬಿಲ್ಲಿನಿಂ ಬಡಿಸಿಕೊಂಡವನೆಂದೆನೆಎಲ್ಲರರಿಯೇ ತಿರಿದುಂಡವನೆಂದನೆಕಲ್ಲುಮನವೇ ಕೆಳದಿರಾಮೇಶ್ವರಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ನಮ್ಮ ಸರಿಯೇನೊ ಕೋಲಸಾಕು ನೀನಮ್ಮ ಸರಿಯೇನೊ ಬಲಿಯ ಮನೆಯ ಬಾಗಿಲ ಕಾಯ್ದು ಬದುಕಿದಿ ಕೋಲ ಪ. ಚಿಕ್ಕಂದಿನಾರಭ್ಯ ವತ್ಸಗಳನೆ ಕಾಯ್ದು ತುಚ್ಛನಾಗಿದ್ಯೊ ಜನರೊಳು ತುಚ್ಛನಾಗಿದ್ಯೊ ಜನರೊಳು ರುಕ್ಮಿಣಿಯಕೂಡಿ ಹೆಚ್ಚಿನವನೆಂದು ಹೆಸರಾದ್ಯೊ ಕೋಲ1 ಜನಿಸಿದಾಕ್ಷಣದಲ್ಲಿ ಜನನಿ ಜನಕರನಗಲಿದಿದನಗಳ ಕಾಯ್ದ್ಯೊ ವನವನ ದನಗಳ ಕಾಯ್ದ್ಯೊ ವನವನ ತಿರುಗಿದ್ದುಮನಕೆ ತಾರಯ್ಯ ಮರೆಯದೆ ಕೋಲ 2 ಬಡಿವಾರ ಬಂದ ಬಗಿ ಹೇಳೊ ಕೋಲ3 ಸತ್ಯಭಾಮೆ ನಿನ್ನ ಹೊಸ್ತಿಲ ಹೊಗಲಿಕ್ಕೆಅತ್ಯಂತ ಪದವಿ ಒದಗಿತುಅತ್ಯಂತ ಪದವಿ ಒದಗಿತು ಕೃಷ್ಣ ನಿನ್ನ ಹೆತ್ತವರ ಭಾಗ್ಯ ಅರಿವೆಯೆ ಕೋಲ4 ಹೆಂಡಿರ ಪುಣ್ಯದಿಂದ ಕಂಡೆಯಾ ಈ ಭಾಗ್ಯವ ಪಾಂಡಿತ್ಯವೆಲ್ಲೊ ಬಲವೆಲ್ಲೊಪಾಂಡಿತ್ಯವೆಲ್ಲೊ ಬಲವೆಲ್ಲೊ ಕೃಷ್ಣ ನಿನ್ನ ಪಂಡಿತರು ಕೇಳೋ ಹುಸಿಯಲ್ಲ ಕೋಲ5 ನಾರಿಯರ ಪುಣ್ಯದಿ ಏರಿದ್ಯೋ ರಥವಾಜಿ ಧೀರತನದಿಂದ ಗಳಿಸಿದ್ಯೊಧೀರತನದಿಂದ ಗಳಿಸಿದ ಗಳಿಕೆಯ ತೋರೊ ರಾಮೇಶ ನಮಗಿನ್ನು ಕೋಲ 6
--------------
ಗಲಗಲಿಅವ್ವನವರು
ಯಾದವೇಂದ್ರ ಪರಿಮೋದವ ಸೂಸುತ ಹಾದಿಯ ಹಿಡಿದಾನು ತಾಗುಣ ಸಾಂದ್ರ ಯಾದವೇಂದ್ರ ಪ. ಛತ್ರ ಚಾಮರದವರು ಜತ್ತಾಗಿ ನಡೆದರುಚಿತ್ತಜನೈಯನ ಹತ್ತಿರ ಕೆಲರು1 ಆನೆ ಅಂಬಾರಿಯವರು ಶ್ರೀನಿವಾಸನ ಮುಂದೆ ನಾನಾ ಭೂಷಿತರಾಗಿ ಮಾನದಿ ತೆರಳಿ 2 ರಾಜಪುತ್ರರು ದಿವ್ಯ ವಾಜಿಗಳೇರುತ ಬಾಜಾರದೊಳು ವಿರಾಜಿಸಿ ನಡಿಯೆ3 ಮಂದಗಮನೆಯರ ರಥ ಮುಂದಾಗಿ ನಡೆದವುಇಂದಿರೆ ಅರಸನ ಸಂದಣಿ ನೋಡ 4 ಎಲ್ಲೆಲ್ಲಿ ನೋಡಿದರೆ ಪಲ್ಲಕ್ಕಿ ಸಾಲಾಗಿ ಫುಲ್ಲನಾಭನ ಮುಂದೆ ನಿಲ್ಲಿಸಿ ನಡಿಯೆ5 ನೋಡ ಬಂದವರೆಲ್ಲ ಗಾಡಿ ವಯಲುಗಳೇರಿರೂಢಿಗೊಡೆಯನ ಮುಂದೆ ಓಡಿಸಿ ನಡಿಯೆ 6 ತಂದೆ ರಾಮೇಶನು ಬಂದ ಬೀದಿಯ ಸೊಬಗುಇಂದಿರೆವಶವಲ್ಲ ಚಂದಾಗಿ ರಚಿಸೆ 7
--------------
ಗಲಗಲಿಅವ್ವನವರು
ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ಹಿಡಿಸುತ ರಮಣಿ ಪ. ಮುತ್ತಿನ ತುರಾಯಿಯವರು ಹತ್ತಿವಾಜಿಮ್ಯಾಲೆ ಚಿತ್ತ ಚಲಿಸದಲೆ ಬರತಾರೆಚಿತ್ತ ಚಲಿಸದಲೆ ಬರತಾರೆರುಕ್ಮಿಣಿ ಅಚ್ಯುತನ ನೋಡೊ ಭರದಿಂದ ರಮಣಿ1 ರಥಿಕಾ ರಥಿಕರು ತಮ್ಮ ರಥವ ಮುಂದಕ್ಕೆ ಹಾಕಿ ಅತಿ ವೇಗದಿಂದ ಬರುತಾರೆ ರಮಣಿಅತಿ ವೇಗದಿಂದ ಬರುತಾರೆ ದೇವಕಿಯಸುತ ನಂಘ್ರ್ರಿನೋಡೊ ಭರದಿಂದ ರಮಣಿ2 ನಲ್ಲೆಯರು ಮುತ್ತಿನ ಪಲ್ಲಕ್ಕಿ ಮಂದಕೆ ಹಾಕಿನಿಲ್ಲದಲೆ ಬೇಗ ಬರತಾರೆನಿಲ್ಲದಲೆ ಬೇಗ ಬರತಾರೆ ಲಕ್ಷ್ಮ್ಮಿವಲ್ಲಭನ ನೋಡೊ ಭರದಿಂದ 3 ತೇರಿನ ಬೀದಿಲೆ ಭೋರೆಂಬೊ ರಭಸಿಗೆಊರಜನವೆಲ್ಲ ಬೆರಗಾಗಿಊರಜನವೆಲ್ಲ ಬೆರಗಾಗಿಉಪ್ಪರಗಿ ಏರಿ ನೋಡುವವರು ಕಡೆಯಿಲ್ಲ4 ಬೀಡುಬಿಟ್ಟಿದ್ದ ಬೈಲು ಗಾಡಿ ಏರಿದವರು ಓಡಿಸಿ ಬೇಗ ಬರತಾರೆಓಡಿಸಿ ಬೇಗ ಬರತಾರೆಹರಿಪಾದ ನೋಡಬೇಕೆಂಬ ಭರದಿಂದ5 ಮದ್ದು ಬಾಣಬಿರಸು ರಥಿಣಿರಭಸಿಗೆ ಎದ್ದು ಜನೆರೆಲ್ಲ ಬೆರಗಾಗಿಎದ್ದು ಜನೆರೆಲ್ಲ ಬೆರಗಾಗಿ ಮುಯ್ಯದ ಸುದ್ದಿ ಕೇಳುವರು ಹರುಷದಿ 6 ಮಿತ್ರಿ ತಿಲೋತ್ತಮಾ ಮತ್ತೆಮೇನಕೆಯರುಥೈ ಥೈ ಎಂದು ಕುಣಿಯುತಥೈ ಥೈ ಎಂದು ಕುಣಿಯುತ ಬರುವಾಗಹತ್ತು ದಿಕ್ಕುಗಳು ಬೆಳಗೋವೆ7 ರಂಭೆ ಊರ್ವಸಿಯರು ಸಂಭ್ರಮದಿ ಕುಣಿಯಲುತುಂಬಿತು ನಾದ ಧರೆಯೊಳುತುಂಬಿತು ನಾದ ಧರೆಯೊಳುರುಕ್ಮಿಣಿ ಬಂದವರಾರೆಂದು ಬೆರಗಾಗಿ ರಮಣಿ8 ವಜ್ರ ಹಚ್ಚಿದ ಮನೆಗಳುಜತ್ತು ದೀವಿಗೆಯ ಸೊಬಗಿನ ಜತ್ತು ದೀವಿಗೆಯ ಸೊಬಗಿನ ಮನೆಯೊಳುಮಿತ್ರೆಯರು ನೋಡಿ ಬೆರಗಾಗಿ 9 ಕುಂದಣ ರಚಿಸಿದ ಅಂದಣವನೇರಿಕೊಂಡುಸಂದಣಿಸಿ ಬೇಗ ಬರುತಾರೆಸಂದಣಿಸಿ ಬೇಗ ಬರುತಾರೆ ನಮ್ಮ ಮುಕುಂದನ ಮನೆ ಎದುರಿಗೆ 10 ಧೀರ ಧೀರರು ತಮ್ಮ ತೇರು ವಾಜಿಯ ಇಳಿದುವೀರ ರಾಮೇಶನ ಮನೆ ಮುಂದೆವೀರ ರಾಮೇಶನ ಮನೆ ಮುಂದೆ ಹೇಳಲಿನಾರಿ ಒಬ್ಬಳನ ಕಳುಹೆಂದ ರಮಣಿ 11
--------------
ಗಲಗಲಿಅವ್ವನವರು
ರಂಗನ ಮೇಲೆ ಚಲುವೆಯರು ಬುಕ್ಕಿಟ್ಟು ಪ. ಸುಂದರೆಯರು ಇಂದಿರೇಶಗೆ ಎರಗಿ ಬಂದು ಪ್ರಾರ್ಥನೆಮಾಡಿ ಆನಂದವ ಸೂಸುತ 1 ಒಪ್ಪ ಹೇಳಿ ಪ್ರಾರ್ಥನೆಮಾಡಿ ಬಹಳ ಉತ್ಸುಕದಿಂದ 2 ಹಸ್ತಗಳ ಮುಗಿದು ಮಾತುಗಳನ್ನಾಡಿದರು3 ಹರದಿ ರುಕ್ಮಿಣಿ ಭಾವೆಗೆ ಎರಗಿ ದ್ರೌಪತಿ ಭದ್ರಾ ಆದರದಿ ಮಾಡಿದರು ಪ್ರಾರ್ಥನೆ ಕರಗಳ ಮುಗಿದು 4 ಚಲುವ ರಾಮೇಶನ ವಲ್ಲಭೆಯರಿಗೆ ಭದ್ರಾಅಲ್ಲೆ ಪ್ರಾರ್ಥನೆ ಮಾಡಿ ಎಲ್ಲರ ಕರೆಯಲು 5
--------------
ಗಲಗಲಿಅವ್ವನವರು
ರಂಗನಂಗದ ಸಂಗ ಸುಖ ನೋಡ ಅಂಗನೆಲಕುಮಿಯ ಸಂಗದುರ್ಲಭವೆಈಅಂಗನೆಯರು ಮಾಡಿದ ಸುಕೃತವಂತೆ ಪ. ಗುಂಗುರಗೂದಲ ಮ್ಯಾಲೆ ಭೃಂಗದ ಮರಿಗಳು ರಂಗನ ಮುಖದ ರಸವನೆರಂಗನ ಮುಖದ ರಸವನೆ ಸÀವಿದುತಮ್ಮಂಗವ ಮರೆತು ಕುಳಿತಾರೆ ಬ್ರಹ್ಮಾದಿ ವಂದ್ಯ1 ಪಂಕಜನಾಭಗೆ ವಂಕಿ ಬಾಪುರಿ ಇಟ್ಟುಕಂಕಣ ಕಡಗ ಮೊದಲಾಗಿಕಂಕಣ ಕಡಗ ಮೊದಲಾಗಿ ರಂಗಗೆಅಲಂಕಾರ ಮಾಡಿ ಕೆಲದೆಯರು2 ಪಂಚಬೆರಳಿಗೆ ತಕ್ಕ ಮಿಂಚು ಮುದ್ರೆಗಳಿಟ್ಟುಪಂಚರತ್ನದಲಿ ರಚಿಸಿದಪಂಚರತ್ನದಲಿ ರಚಿಸಿದ ವಡ್ಯಾಣಕೆಂಚೆಯರು ಇಟ್ಟು ನಡುವಿಗೆ 3 ಶ್ರೀದೇವಿ ಅರಸಗೆ ಕ್ಯಾದಿಗೆ ಮುಡಿಸುತಊದಿನ ಕಡ್ಡಿಪರಿಮಳಊದಿನ ಕಡ್ಡಿಪರಿಮಳ ಮೂಸುತಮೋದ ಬಡುವವರು ಕಡೆಯಿಲ್ಲ4 ನೀಲವರ್ಣನ ಮುಂದೆ ಸಾಲು ದೀವಿಗೆಯಿಟ್ಟುಮ್ಯಾಲೆ ಚಾಮರವ ಸುಳಿಸುತಮ್ಯಾಲೆ ಚಾಮರವ ಸುಳಿಸುತಶಿರಮ್ಯಾಲೆ ಪೂಮಳೆಯ ಗರೆದಾರು 5 ಚಲ್ವ ರಂಗನ ಮುಂದೆ ಜಲಪಾತ್ರೆಯನ್ನಿಟ್ಟುಎಲೆಅಡಕಿ ತಬಕ ಫಲಗಳು ಎಲೆಅಡಕಿ ತಬಕ ಫಲಗಳ ತಂದಿಟ್ಟುಕೆಲದೆಯರು ಕೈಯ ಮುಗಿದಾರು 6 ಅಪಾರ ಮಹಿಮಗೆ ಧೂಪಾರತಿಯನೆತ್ತಿಭೂಪರಾಮೇಶ ಸಲುಹೆಂದುಭೂಪರಾಮೇಶ ಸಲುಹೆಂದುಗೋಪಾಲಕೃಷ್ಣಯ್ಯನ ಎದುರಲಿ ನಿಂತಾರು 7
--------------
ಗಲಗಲಿಅವ್ವನವರು
ರತಿಸಮಯಕೈದುತಿಹ ಸತಿರಚಿಸಿದುದ ಪೇಳ್ವೆಮತಿವಂತೆ ಅದರ ಭಾವವ ತಿಳಿದು ಪೇಳೆ ಪ ಕರಯುಗದಿ ವಜ್ರಮಯ ಕಂಕಣವ ಧರಿಸಿದಳುಅರಗಿಣಿಯ ನವಿಲ ಸೆರೆಯನು ಬಿಟ್ಟಳುಭರದಿ ಸಾಕಿ (ಸೆನಗಳ ?) ಕರೆದು ಕಳುಹಿದಳುಸರಸದಿಂ ದೀಪವನೆ ಮರೆಯೊಳಿರಿಸಿದಳು 1 ಯುವತಿ ಕೇಳ್ನಸುಗುತ ಕರ್ಣದೊಳೆ ಧರಿಸಿರ್ದಕುವಲಯವ ತೆಗೆದು ದೂರದೊಳಿಟ್ಟಳುತವೆ ಮಲ್ಲಿಕಾಮಂದಹಾಸವನೆ ಬೀರಿದಳುನವಮಣಿಹಾರವನೆ ಕೊರಳ್ಗೆ ಧರಿಸಿದಳು 2 ಭಾರ ಪಸರಿಸಲಾಗವರ ಕೆಳದಿ ರಾಮೇಶನಡಿಯ ಸ್ಮರಿಸಿದಳು 3
--------------
ಕೆಳದಿ ವೆಂಕಣ್ಣ ಕವಿ
ರಾಜ ರಾಜರ ಗಂಡ ರಾಜಗೋಪಾಲ ಪ. ಅರ್ಥಿಲೆ ಏರಿ ಕುಳಿತ ಮತ್ತೆ ಗೋಪಾಲ 1 ಬಂದ ಜನರ ಸಹಿತ ತಂದೆ ಗೋಪಾಲ 2 ವಿಪ್ರರಿಂದಲೆ ಕುಳಿತ ಅಪ್ಪ ಗೋಪಾಲ3 ಬೆಳಕು ತುಂಬಿಸಿ ತಾನು ಕುಳಿತ ಗೋಪಾಲ 4 ಅರ್ಥಿಲೆ ಏರಿ ಕುಳಿತ ಮತ್ತೆ ಗೋಪಾಲ5 ಮೂರ್ತಿ ಗೋಪಾಲ 6 ಬಂದ ಜನಕೆ ಆನಂದವ ಪಡಿಸುತ ಚಂದ್ರನಂತಲೆ ಕುಳಿತ ಬಂದು ರಾಮೇಶ 7
--------------
ಗಲಗಲಿಅವ್ವನವರು
ರಾಮಲಿಂಗ ಶಿವಶಂಕರ ಪಾರ್ವತಿರಮಣಾ ನಿನಗೆ ನಮೊ ನಮೊ ಪರಾಮನಾಮ ಪ್ರಿಯ ರಾಮೇಶ್ವರ ತವಚರಣಕಮಲಕೆ ನಮೊ ನಮೊ ಅ.ಪಗಜಚರ್ಮಾಂಬರ ಭುಜಗಭೂಷಣತ್ರಿಜಗ ವಂದ್ಯತೇ ನಮೊ ನಮೊಭಜಕಾಮರ ಕುಜ ಕುಜನಭಂಜನಾ'ಜಯಸಾರಥಿಸಖ ನಮೊ ನಮೊ 1ನೀಲಕಂಠ ತ್ರಿಶೂಲ ಡಮರು ಧರಫಾಲನಯನತೇ ನಮೋ ನಮೋಪ್ರಳಯಕರ್ತ ಕೈಲಾಸವಾಸ ಶ್ರೀಶೈಲಾಧಿಪತೆ ನಮೋ ನಮೋ 2ಕಾಶಿ 'ಶ್ವೇಶ್ವರ ಕೇದಾರೇಶ್ವರಮಹಾಬಲೇಶ್ವರ ನಮೋ ನಮೋದ್ವಾದಶ ಜೋತಿರ್ಲಿಂಗಾಂತರ್ಗತಉಮಾಮಹೇಶ್ವರ ನಮೋ ನಮೋ 3ಕೃಷ್ಣವೇಣಿ ತಟ ಚಿಕ್ಕಗಲಗಲಿವಾಸರಾಮೇಶ್ವರ ನಮೋ ನಮೋಮೃತ್ಯುಂಜಯ ಭೂಪತಿ'ಠಲಪ್ರಿಯಚಂದ್ರಮೌಳಿ ತೇ ನಮೋ ನಮೋ 4ಪಾರ್ವತಿ ದೇ'
--------------
ಭೂಪತಿ ವಿಠಲರು
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
--------------
ಕೆಳದಿ ವೆಂಕಣ್ಣ ಕವಿ
ರಾಮೇಶ್ವರನ ನೋಡೋ ಹೇ ಮಾನವ ರಾಮೇಶ್ವರನ ನೋಡೋ | ನೇಮದಿ ಕೊಂಡಾಡೊ ನೀಮಾಡಿದಂಥ ಪಾಪ | ಸ್ತೋಮಗಳೀಡ್ಯಾಡೋ ಪ ವಾರಿಧಿ ನಾರಶೂರ ರಘುವೀರನು ಸ್ಥಾಪಿಸಿದ 1 ಚಿತ್ತಶುದ್ದಿಲಿ ಬಂದ | ಭೃತ್ಯಜನರ ಬಹ್ಮ ಹತ್ಯಾದಿ ದೋಷ ಕಳೆದು | ಉತ್ತಮಗತಿ ಕೊಡುವ 2 ಶ್ರೀ ಶಾಮಸುಂದರ | ದಾಶರಧಿ ಮಹಿಮೆ ಲೇಸಾಗಿ ಸತಿಗೆ ಪೇಳ್ದ | ಭೇಶ ಶೇಖರನಾದ 3
--------------
ಶಾಮಸುಂದರ ವಿಠಲ
ರಾಯ ಕಳುಹಿದ ರಂಗ ರಾಯ ಕಳುಹಿದ ಪ್ರಿಯಭಾವೆ ರುಕ್ಮಿಣಿಯರಪ್ರೇಮಭಾಳೆ ನಿಮ್ಮ ಮ್ಯಾಲೆ ಪ. ಕೇಳೋರಾಯ ನಿಮ್ಮ ಮ್ಯಾಲಿ ಬಹಳ ಪ್ರೇಮಕೃಷ್ಣರಾಯ ಹೇಳಲ್ಪಶವೆಮುಯ್ಯ ತಂದು ಏಳು ದ್ವಾರ ದಾಟಿ ಬಂದು1 ಚಂಚಲಾಕ್ಷಿ ಅರಸಿಯರು ನಿಮಗೆ ಪಂಚಪ್ರಾಣ ಕೃಷ್ಣರಾಯ ಕೆಂಚಿ ರುಕ್ಮಿಣಿಮುಯ್ಯ ತಂದುಮುಂಚಿ ಬಾಗಿಲಮನೆಯೊಳು ಇಳಿದರು 2 ಕುಂತಿದೇವಿಯರ ಅರಮನೆಗೆ ಚಿಂತಾಮಣಿಯ ತಾನೆ ಬಂದ ಎಂಥ ಸುಕೃತರಾಯ ನಿಮ್ಮಇಂಥ ಭಾಗ್ಯ ಎಲ್ಲಿ ಕಾಣೆ 3 ಸುದ್ದಿ ಕೇಳಿ ಧರ್ಮರಾಯ ಗದ್ಗದಿ ನುಡಿಯನೆ ನುಡಿದಾನಮುದ್ದು ಮುಖವ ನೋಡಿಪಾದಕೆ ಬಿದ್ದು ಧನ್ಯರಾದೆವಮ್ಮ 4 ಅಂದ ಮಾತು ಕೇಳಿರಾಯ ನಂದ ಬಟ್ಟು ನಂದ ಭಾಷ್ಪಬಿಂದು ಉದುರಿ ಬಿಗಿದು ಕಂಠಛಂದದಿ ರೋಮಗಳು ಉಬ್ಬಿ 5 ಇಂದು ಭದ್ರೆ ದ್ರೌಪತಿಗೆ ತಂದರಮ್ಮ ರುಕ್ಮಿಣಿ ಮುಯ್ಯಆನಂದದಿಂದ ಭಾವೆ ಕೃಷ್ಣಇಂದು ನಿಮ್ಮ ಅರಮನೆಗೆ 6 ಎಷ್ಟು ಸುಕೃತರಾಯ ನಿಮ್ಮ ಧಿಟ್ಟ ರಾಮೇಶತಾನೆ ಬಂದ ಅಷ್ಟ ಸೌಭಾಗ್ಯದ ಮುಯ್ಯ ಶ್ರೇಷ್ಠ ತೋರೋದಮ್ಮ ಸಭೆಯು 7
--------------
ಗಲಗಲಿಅವ್ವನವರು
ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ಅಪ್ಪಣೆಯ ಬೇಡಿ ಎರಗಿ ನಿಂತಳು ಪ. ಹರಿಯ ಬದಿಯಲಿ ಹೋಗಿ ನೀನು ಪರಮ ಪ್ರೇಮದಿಂದಲೈವರು ಬರುವರು ಈ ಕ್ಷಣದಲಿ ಎಂದು ಎರಗಿ ಹೇಳಮ್ಮ1 ಚಿತ್ತಜನೈಯನ ನೋಡಿ ಚಿತ್ತಹರುಷ ಬಡಿಸೆವಮ್ಮವೃತ್ತಾಂತವ ಹೋಗಿ ಹೇಳೆ ಕೀರ್ತಿವಂತಗೆ2 ಮಿತ್ರೆ ದ್ರೌಪತಿಯು ದೂತೆಗೆ ತೃಪ್ತಿಪಡಿಸಿ ಭೋಜನಾದಿಮುತ್ತು ರತ್ನದ ವಸ್ತ ವಸ್ತ್ರಗಳೆ ಕೊಟ್ಟಳು 3 ಅಂಬುಜಾಕ್ಷೆ ದ್ರೌಪತಿಯುತಾಂಬೂಲ ಅಡಿಕೆ ಕೊಟ್ಟುಸಂಭ್ರಮದಿ ಆನೆ ಅಂಬಾರಿ ಕೊಟ್ಟಳು 4 ಕುಂತಿದೇವಿ ಮೊದಲಾದವರುಕಾಂತೆಯರ ಪರಿವಾರ ಸಹಿತ ಕಂತುನೈಯನ ಕರೆಯ ಬರಲು ನಿಂತಾರಂತ್ಹೇಳೆ 5 ಪಂಚ ಪಾಂಡವರ ಮಡದಿ ಪಾಂಚಾಲಿ ದೇವಿಯುತಾನು ಕೆಂಚೆಯರಿಂದ ಕೂಡಿಮುಂಚೆ ಬಾಹೋರಂತ್ಹೇಳೆ6 ಪನ್ನಂಗ ಶಯನನ ನೋಡದೆ ಅನ್ನ ಸೊಗಸವಮ್ಮ ನಮಗೆ ಚನ್ನರಂಗಯ್ಯನ ಮುಂದೆ ಇನ್ನು ನೀ ಹೇಳೆ 7 ಮುದ್ದು ರಂಗನಮುಖವ ನೋಡದೆ ನಿದ್ರೆ ಬಾರದಮ್ಮ ನಮಗೆ ಹದ್ದು ವಾಹನನ ಮುಂದೆ ಸುದ್ದಿ ನೀ ಹೇಳೆ 8 ವೀತ ದೋಷ ರಾಮೇಶನ ಪ್ರೀತಿ ಇರಲಿ ಅಂತೆ ಹೇಳಮ್ಮಆತನ ಕಾಣದೆ ಒಂದು ಮಾತು ಸೊಗಸದು 9
--------------
ಗಲಗಲಿಅವ್ವನವರು