ಒಟ್ಟು 604 ಕಡೆಗಳಲ್ಲಿ , 87 ದಾಸರು , 537 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾನವಗಿರಿಕುಲಿಶಾ ನರಸಾರಥಿ ದಶರಥ ಸುಕುಮಾರ ಪ ಕುಂಭಿನಿಜಾರಮಣ ನಂಬಿದೆ ನಾನಿನ್ನ 1 ಕಮಠ ವರಾಹ ನರಹರಿ ವಾ- ಮನ ಭಾರ್ಗವ ರಾಮ ಭಂಜನ ಜಿನಸುತ ಕಲ್ಕಿಯೆ ದೀನ ಜನ ಪ್ರೇಮಾ 2 ತಿರುಪತಿಯಲಿ ನೆಲಸಿರುವೆ ಭಕ್ತಸುರ- ತರುವೆ ವೆಂಕಟೇಶ ಗುರುರಾಮವಿಠಲ ಕೋರಿದ ವರಗಳ ಕೊಡುವ ಶ್ರೀನಿವಾಸ 3
--------------
ಗುರುರಾಮವಿಠಲ
ದಾಸರಾಗಿರೊ ವೈಷ್ಣವ ದಾಸರಾಗಿರೊ ದಾಸರಾಗಿ ಬಯಲಾಸೆಯ ನೀಗಿ ರ- ಮೇಶನ ಗುಣವಾರಾಶಿಯೊಳಿರಿಸುವ ಪ. ಸುಂದರ ಮಾನಾನಂದತೀರ್ಥಮತ ಸಾಂದ್ರ ಸುಖಾಂಬುಧಿಮಿಂದ ಮಹಾತ್ಮರ 1 ದಿವ್ಯಲೋಕಜನ ಭವ್ಯೋಭಯವಿಧ ಕಾವ್ಯರಚನ ಲಾತವ್ಯಯತೀಂದ್ರರ 2 ಸೀತಾಪತಿ ರಘುನಾಥನ ಮನದೊಳ- ಗಾತು ಭಜಿಪ ಗಣನಾಥ ಜನಕನ 3 ಶ್ರೀ ಮಹೇಶ ವಟು ವಾಮನ ಪದಯುಗ ಸಾಮಜವಾಹನ 4 ಕಾಕರಟನದೊಳ ಭೀಕರ ಮತವ ನಿ- ರಾಕರಿಸಿರುವ ಸುಧಾಕರ ಮೂರ್ತಿಯ 5 ತಂತ್ರ ದೀಪಿಕಾ ಯಂತ್ರವ ರಚಿಸಿದ ಮಂತ್ರಾಲಯವರ ಮಂತ್ರದೇವತೆಯ 6 ಗೋಪಿನಾಥನೆ ಭೂಪನೆಂದು ಸಂ- ತಾಪವ ಬಿಡಿಸುವ ಶ್ರೀಪಾದರ ಪದ 7 ಮಂದಕಲಿಯ ಕಾಲಿಂದಲೊರಿಸಿದ ಪು- ರಂದರದಾಸರ ಹೊಂದಿ ಹರಿಯ ನಿಜ8 ಸುಜನ ಹೃದಂಬುಜ ಸುಖಕರ ದಿನಮಣಿ ವಿಜಯರಾಜ ಪದ ಭಜನೆಯ ಮಾಡುತ 9 ಭಂಗುರ ಭವಭಯ ಭಂಗದ ಸುಗುಣ ತರಂಗನ ಒಲಿಸಿದ ಮಂಗಳ ಮಹಿಮರ 10 ಹರಿಕಥಾಮೃತದ ತೆರೆಗಳೊಳಾಡುವ ಪರತರಸಾರವ ಸುರಿದ ಮಹಾತ್ಮರ 11 ಸಿಡುಕರ ಸಂಸ್ಕøತಿ ಕಡಲೊಳು ಮುಳುಗಲು ಬಿಡದಲೆ ಕೈಪಿಡಿದೊಡೆಯನ ತೋರ್ಪರ 12 ಅರಿಷಡ್ವರ್ಗವ ತರಿದು ಬಿಸುಟು ಶ್ರೀ- ವರನ ಕೃಪಾರಸ ಸುರಿಸಿದ ಧನ್ಯರ 13 ಮೂಕನ ವಾಗ್ಮಿಯ ಮಾಡಿ ಮುರಾರಿಗೆ ಸಾಕ ಕೊಟ್ಟಿ ದೀನಾಕರದಾಸರ 14 ಮಾತಿಗೆ ಕಂಸಾರಾತಿನಲಿಯೆ ಜಗ ನ್ನಾಥರೆಂ¨ ವಿಖ್ಯಾತಿ ಪಡೆದವರ 15 ತಾಪತ್ರಯಗಳ ತಪ್ಪಿಸಿ ವೆಂಕಟ ಭೂಪನ ಸದಯಾರೋಪಗೈದವರು 16
--------------
ತುಪಾಕಿ ವೆಂಕಟರಮಣಾಚಾರ್ಯ
ದಿನಗಳ ಕಳೆವುದೆ ಸಾಧನವು ಶ್ರವಣ ಮನನ ನಿಧಿಧ್ಯಾಸನಗಳಲಿ ಪ ಉದಯದಿ ಸ್ನಾನ ನದಿನದಗಳಲಿ ಸದಮಲ ಹರಿಯ ಪಾದೋದಕ ಪಾನ ಹೃದಯದಿ ಕೃಷ್ಣನ ಮೂರ್ತಿಯ ಧ್ಯಾನ ವಿಧಿಯಲಿ ಜಪತಪ ಪ್ರವಚನಗಳಲಿ 1 ಪ್ರೇಷ್ಟತಮರ ತಂತ್ರಸಾರದ ಕ್ರಮದಲಿ ಅಷ್ಟಮಹಾ ಮಂತ್ರಗಳನು ಜಪಿಸಿ ವೃಷ್ಣಿವರೇಣ್ಯನ ವೈಭವದಿಂದಲಿ ತುಷ್ಟಿಗೊಳಿಸಿ ಬಲು ಶಿಷ್ಟರ ಸಂಘದಿ 2 ತ್ರಿಭುವನ ಗುರುಗಳ ಶುಭಕರ ಶಾಸ್ತ್ರವ ಪ್ರವಚನಗೈಯುತ ಪ್ರತಿಕ್ಷಣಗಳಲಿ ವಿಬುಧ ಪ್ರಸನ್ನನ ಗುಣಗಳ ಸಜ್ಜನ ಸಭೆಯಲಿ ಪಾಡುತ ನಿರ್ಭಯರಾಗಿ 3
--------------
ವಿದ್ಯಾಪ್ರಸನ್ನತೀರ್ಥರು
ದಿನಗಳನು ಕಳೆವ ಜನರೆ ಸುಜನರು ವನಜನಾಭನ ದಾಸರ ಸಮಾಗಮದಿಂದ ಪ. ಅರುಣೋದಯದಲೆದ್ದು ಆಚಮನ ಕೃತಿಯಿಂದ ಪರಿಶುದ್ಧರಾಗಿ ಇಹಪರಗಳಿಂದ ಎರಡುವಿಧ ಸುಖವೀವ ಗುರುಮಧ್ವಮುನಿವರನ ಪರಮಮತವಿಡಿದು ಹರಿಕಥಾಮೃತ ಸವಿದು 1 ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ- ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು ಭಾನುನಾಮಕನಾದ ಪರಮಾತ್ಮನಂಘ್ರಿಯನು ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2 ವಾಸುದೇವ ಅಡಿಗಡಿಗೆ ನೆನೆದು ಪಾವಕಗೆ ಪ್ರಾತರಾಹುತಿಯನಿತ್ತು ಭಾವಜ್ಞರಲಿ ಸಕಲಪುರಾಣಗಳ ಕೇಳಿ ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3 ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ- ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ4 ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ ದೇವಪೂಜೆಯ ಮಾಡಿ ದೇವೇಶಗೆ ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ- ದೇವ ಬಲಿಹರಣ ಅತಿಥಿ ಪೂಜೆಗಳಿಂದ 5 ಪರಮ ಹರುಷದಿಂದ ದೇವ ಪ್ರಸಾದವನು ವರ ಮಾತೃ ಪಿತೃ ಸೋದರರು ಸಹಿತ ಪರಮ ಸಖರ ಪಂಙÂ್ತ ಪಾವನರೊಡಗೂಡಿ ನರಹರೆ ಎನುತ ಭೋಜನ ಮಾಡಿ ಮೋದಿಸುತ 6 ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ ಶ್ರೀಯರಸನಂಘ್ರಿ ಸೇವೆಯನು ಮಾಡಿ ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ- ರಾಯಣನ ಗುಣಗಳನು ಪೊಗಳುತಲಿ 7 ತನುಮನವÀ ಶ್ರೀಹರಿಯಾಧೀನವ ಮಾಡಿ ಅನುಸರಿಸಿ ಭಾಗ್ಯಬಡತನ ಎಣಿಸದೆ ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ8 ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ ಪಾವನ ಚರಿತ್ರ ಹಯವದನನ ನೆನೆದು 9
--------------
ವಾದಿರಾಜ
ದುರಿತ ತ್ಯಜಿಸೋ | ವರ ಮಾನವಿ ಪುರದಿ ಮೆರೆವ ಪ ಆದಿಯಲ್ಲಿ ಪ್ರಹ್ಲಾದನ ಸಹೋದರನೀತ | ಯೋಧ ಶಲ್ಯ ದ್ವಾಪರದಿ ರಾಧೇಯಗೆ ಸೂತ | ಪುರಂದರ ದಾಸಾರ್ಯರ ಪ್ರೀತ | ಸಾಧುರಂಗವೊಲಿದ ಭಾಗವತರತಿ ಖ್ಯಾತ 1 ತ್ವರವಾಟದಿ ಕರುಣಿಕ ನರಸಾರ್ಯರಪುತ್ರ | ಧರೆಸುರ ಪರಿಪಾಲಕ ವರದೇಂದ್ರ ಛಾತ್ರ ತುರ ರಕ್ಷಕ ದಾಸರಾಯರ ಕರುಣಕೆ ಪಾತ್ರ ದುರಿತಾಟವಿ ವೀತಿ ಹೋತ್ರ ಘನ ಸುಚರಿತ್ರ 2 ಸೀಮದಿಂದ ಭಜಿಸುವರ ಕಾಮಿತ ಫಲವಾ | ಪ್ರೇಮದಿಂದ ಗರೆಯಲು ಸ್ತಂಭ ದೊಳಿರುವಾ || ಶಾಮಸುಂದರ ಸ್ವಾಮಿಯ ಕಥೆಪೀಯೂಷರಸವ | ಭೂಮಿ ವಿಬುಧ ಸ್ತೋಮಕೆರೆದ ಮಹಾನುಭಾವ 3
--------------
ಶಾಮಸುಂದರ ವಿಠಲ
ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಪ ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಪುರಹರ ಮೂವನ ಬಲ್ಲಿದರೀ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ 1 ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ ಹರಿಹರಿದಾಡುತ ಕುಣಿದವ ಉತ್ತಮ ಗುಣದವ ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ ಮಾಯವ ಬಿಡೋ ಎಲೆ ಮನುಜಾ2 ಭವಾಬ್ಧಿ ದಾಟಿದವ ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ ಸಂಭ್ರಮ ತಾಳ ಕಟದವ ಊಟದವ ಸುರರೊಡನೆ ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ ನೀ ಸುಖದಲಿ ಬಾಳೊ ಎಲೆ ಮನುಜಾ 3 ಬೇಸರದಲೆ ಹೇಳಿ ಏಕಾದಶಿಯ ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು ಚರಣಕೆ ಏರಿಸಿದನಿವ ಬೆರೆದು ಎಲೆ ಮನುಜಾ4 ಗೋಪಾಳವನು ಬೇಡಿ ನಿತ್ಯಸುಖಿಯಾಗಿ ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ ಸಿರಿ ಪದ್ಮವ ಪೊಂದಿದ ಭಜಕರು ಒಂದೇ ಗೇಣೊ ಎಲೆ ಮನುಜಾ 5
--------------
ವಿಜಯದಾಸ
ದೂರ ಮಾಡುವರೇ ಶ್ರೀಶ ಪ ದೂರ ಮಾಡುವರೇದೂರ ಮಾಡುವರೇನೋ ಶ್ರೀಶದಾರಿ ಕಾಣದೆ ಮೊರೆಯನಿಡುವೆಆರು ಕಾಯುವರಿಲ್ಲ ಶ್ರೀಶಸಾರಸಾಕ್ಷ ಸಲಹೆ ಬೇಡುವೇ ಅ.ಪ. ಸಕ್ತಿ ಇಲ್ಲವೋ | ನಿನ್ನೊಳಾಸಕ್ತಿ ಇಲ್ಲವೋ |ಸಕ್ತಿ ನಿನ್ನಲ್ಲಿಲ್ಲದೇಲೇಮುಕ್ತಿ ಇಲ್ಲವೆಂದು ಶೃತಿಯಉಕ್ತಿ ಕೇಳಿ ಕೇಳಿದಾಗ್ಯೂ ವಿ-ರಕ್ತಿ ಪುಟ್ಟಲಿಲ್ಲ ಎನಗೆ ಭಕ್ತಿಮಾರ್ಗ ದೂರವಾಯ್ತೊ 1 ದುಷ್ಟ ವಿಷಯದೀ | ಮನವುಅಟ್ಟಿ ಪೋಗೋದೋ |ಎಷ್ಟು ಪೇಳಿದಾರೂ ಮನವುನೆಟ್ಟಗಾಗೋ ಪರಿಯ ಕಾಣೆಸೃಷ್ಠಿಗೀಶ ಮನವ ಅಭಿಧಸೊಟ್ಟ ಮನವ ಸರಿಯ ಪಡಿಸಿ | ಶ್ರೇಷ್ಠ ನನ್ನ ಮಾಡದ್ಹಾಂಗೆ 2 ಕೈಯ್ಯ ಬಿಡುವರೇ | ದಯಾಳು ವಿಷಯಧುಯ್ಯಲು ಕಳೆಯದೇ |ಪ್ರೇರ್ಯ ಪ್ರೇರಕನಾಗಿ ನೀನುಮಯ್ಯ ಮರೆಸಿ ಧೈರ್ಯಗೆಡಿಸೆಆರ್ಯರಿದನ ಸಯ್ಯೆಂಬೊರೇನೋಅಯ್ಯ ಕೈಯ್ಯ ಬಿಡದೆ ಕಾಯೋ | ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ ಪ ಅನಂತ ಜನುಮದೊಳೊಂದೆ ಜನುಮಅನಂತ ಕ್ಷಣದೊಳಗೊಂದೆ ಕ್ಷಣಅನಂತ ನಾಮದೊಳೊಂದೇ ನಾಮವಮುನಮುಟ್ಟಿ ನೆನೆದರೆ ಬೆನ್ಹತ್ತಿ ಬಿಡನೈಯ 1 ಅನಂತರೂಪದೊಳೊಂದೆ ರೂಪಅನಂತ ಗುಣದೊಳಗೊಂದೆ ಗುಣಅನಂತ ಜೀವರೊಳಗಾವನಾದರುಂ ಕನಸಿಲಿ ನೆನೆದರೆ ಋಣಿಯಾಗಿಪ್ಪನೈಯ 2 ಒಂದೆ ಹೂವು ಒಂದೆ ಫಲವೊಂದೆಬಿಂದು ಜಲವೊಂದೆ ತುಳಸಿಒಂದೇ ವಂದನೆಯೊಂದೆ ಪ್ರದಕ್ಷಿಣೆಒಂದನರ್ಪಸಿದೊಡಂ ಕುಂದದಾನಂದವೀವನೈ 3 ಹರಿ ಚಿನ್ಹಾಂಕನ ಹರಿದಿನದುಪವಾಸನೆರೆಯೂಧ್ರ್ವ ಪುಂಡ್ರ ತುಳಸಿಮಾಲೆಹರಿಯುತ್ಸವ ಸೇವೆ ಹರಿದಾಸರ ಸಂಗದುರಿತಾಬ್ಧಿಗೆ ಕುಂಭಸಂಭವನಲ್ಲವೆ 4 ಹರಿಪಾದ ತೀರ್ಥವು ಹರಿಯ ನಿರ್ಮಾಲ್ಯವುಹರಿ ಆರತಿ ಧೂಪ ಶೇಷಂಗಳುಹರಿಯ ಪ್ರಸಾದ ಶಂಖೋದಕ ಪ್ರತ್ಯೇಕದುರಿತ ರಾಸಿಗಳನ್ನು ಸೋಕಲು ಸುಡದೆ 5 ಒಮ್ಮೆ ಪಾಡಿದಡಂ ಒಮ್ಮೆ ಪೊಗಳಿದೊಡಂಒಮ್ಮೆ ಬೇಡಿದಡಂ ಒಮ್ಮೆ ನೋಡಿದಡಂಒಮ್ಮೆ ಸಾರಿದಡಂ ಮತ್ತೊಮ್ಮೆ ಕರೆದಡಂನಮ್ಮಾತನಿವನೆಂದು ಕೈಯ ನೀಡುವನೈಯ 6 ತನ್ನಲ್ಲಿಪ್ಪನಾಗಿ ದೂರನಲ್ಲ ನರಹೊನ್ನು ಬೇಡ ಲಕುವಿರಮಣಗೆ ಅನ್ಯವ್ಯಾತಕ್ಕೆ ಈ ಪರಿಪೂರ್ಣಾನಂದಗೆನಿನ್ನವನೆಂದರೆ ತನ್ನನೀವನು ಕೃಷ್ಣ7
--------------
ವ್ಯಾಸರಾಯರು
ದೂರಮಾಡು ದೂರಮಾಡು ದುರ್ಜನ ನೆರೆಯ ಸಾರಸಾಕ್ಷನೆ ಬೇಗ ದುಷ್ಟಸಂಗತಿಯ ಪ ಸೇಂದಿ ಸೆರೆ ಕುಡಿದು ಮನಬಂದಂತೆ ಕುಣದಾಡಿ ನಿಂದಿಸಿ ಕಂಡವರಿಂ ತಿಂದು ಲತ್ತೆಯನು ಮಂದಿಯೋಳ್ಮುಖದೋರ್ವ ಹಂದಿಮನುಜರ ದರ್ಶ ನೆಂದೆಂದು ಬೇಡೆನಗೆ ಮಂದರಾದ್ರಿನಿಲಯ 1 ನೂತನದ ಮಾತಾಡಿ ಖ್ಯಾತಿಯಿಂ ತೋರ್ಪಡಿಸಿ ಮಾತುಮಾತಿಗೆ ವಂಚಿಸಾತುರಕೆ ಪರರ ಘಾತಗೈಯುವ ಮಹಪಾತಕರ ಸಂಗ ಮಮ ದಾತ ಜಗನ್ನಾಥ 2 ಧ್ಯಾನದಾಸರ ಕಂಡು ಜ್ಞಾನವಿಲ್ಲದೆ ತುಸು ಹೀನಮಾತುಗಳಾಡಿ ಏನುಕಾಣದಲೆ ಶ್ವಾನನಂದದಿ ಚರಿಪ ಮಾನಹೀನರ ನೆರಳು ಏನಿರಲುಬೇಡ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು
ದೃಷ್ಟಿ ತಾಕಿತೆ ನಿನಗೆ ಶ್ರೀರಾಮ ಸುಂದರತರ ಮುಖ ಚಂದ್ರನ ನೋಡುತಲಿ ಸುಂದರಿಯರೆಲ್ಲ ಬಂದು ಕಂದ ನಿನ್ನ ಮುದ್ದಿಡಲು 1 ನೀಲ ಶುಭಕುಂತಲವ ನೀಲ ವೇಣಿಯರು ತಿದ್ದಿ ಲಾಲಿಸಿದ ಕಾರಣದಿಂ 2 ಮಂಗಳವಾದ ನಿನ್ನ ಕಂಗಳ ಢಾಳವನ್ನು ಅಂಗನೆಯರೆಲ್ಲ ನೋಡಿ ಹೆಂಗಿಸಿದ ಕಾರಣದಿಂ 3 ಮಾರಸುಂದರ ಸುಕು ಮಾರವರ ರೂಪವನು ಸಾರಸಾಕ್ಷಿಯರು ಕೂಡಿ ಮೀರಿಮಾತನಾಡಿದರಿಂ 4 ಮಾನವ ವಂದಿತನೆ ಮೌನಿಕುಲ ಸೇವಿತನೆ ಧೇನುಪುರ ವೆಂಕಟೇಶ ಶ್ರೀನಿವಾಸ ಪಾಲಿಸಲಿ 5
--------------
ಬೇಟೆರಾಯ ದೀಕ್ಷಿತರು
ದೇವರ ಪೂಜೆಯ ಮಾಡಿರೋ ಮಾಡಿ ಬಿಟ್ಟರು ಬಿಡಿ ಭೂದೇವರ ಪೂಜೆ ಮಿಗಿಲು ಬಿಡಬೇಡ ಪ ಉಂಬೋ ದೇವರ ನೋಡಿ ಕರೆತಂದೊಯ್ಯನೆ ಶಂಭು ಶ್ರೀಹರಿ ಎಂದು ಮನತಂದು ಕರು ಪಾದ ತೊಳೆದು1 ಮಾತನಾಡುವ ದೇವನಿವನೆಂದು ಸಂಪ್ರೀತಿಯಿಂದಲೆ ಈತ ಶಿವನೆಂದು ಜಾತಿ ಶ್ರೀ ಗಂಧ ಪುಷ್ಪವ ತಂದುಮನ ವೊತು ಪೂಜೆಯನು ಮಾಡಿರೋ ಎಂದು 2 ಎಡೆಮಾಡಿ ಷಡುರಸಾನ್ನವ ನಂದು ಉಣ ಬಡಿಸೆ ನಾರಿಯರಟ್ಟುದನುತಂದು ಕಡುಬು ಕಜ್ಜಾಯ ಘೃತವನಂದು ಜಗ ದೊಡೆಯ ನುಂಡನು ಸಾಕು ಬೇಕೆಂದು 3 ಹಸ್ತವ ತೊಳೆದ ಮೇಲ್ವೀಳ್ಯವ ಕೊಟ್ಟು ಮತ್ತೇನಾ ಪೋಪೆನೆಂದರೆ ಪೊಡಮಟ್ಟು ಚಿತ್ತೈಸಿ ಮರಳಿಬರಬೇಕು ದಯವಿಟ್ಟು ಎಂದು 4 ಪ್ರತಿಮೆಗಿಕ್ಕಿದರಲ್ಲೆ ಇಹುದು ಮತ್ತೆ ಕ್ಷತಿಗೆ ಹಾಕಲುಬೇಕು ಬೇಡೆನ್ನಾದಿಹುದು ಅತಿಥಿಗಿಕ್ಕಲು ಸಾಕು ಬೇಕೆನ್ನುತಿಹನು ಲಕ್ಷ್ಮೀ ಪತಿಗಿದು ಪೂಜೆ ಸಂಪೂರ್ಣವಾಗಿ 5
--------------
ಕವಿ ಪರಮದೇವದಾಸರು
ದೇಶಾಧಿಪತಿ ನರಹರಿಯೆ ನಿನ್ನಯ ಪಾದದಾಸರ ದಾಸನೆಂದೆನಿಸಬೇಕೆನ್ನ ಪ ರಜತಮೋಗುಣ ಪ್ರವರ್ತಕ ಮೂಲಾಂತರದಿಂಯಜಮಾನತನದಹಂಕಾರವನು ಒಲ್ಲೆಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜರಜ ಭಜಕರ ಭಜಕನೆಂದೆನಿಸೆನ್ನ1 ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ-ಸ್ತೂರಿ ತಿಲಕವನಿಡುವುದ ನಾನೊಲ್ಲೆಸಿರಿ ಊಧ್ರ್ವಪುಂಡ್ರ ದ್ವಾದಶನಾಮವಿಡುವವರಪರಿಚಾರಕರ ಪರಿಚಾರಕನೆನಿಸೆನ್ನ 2 ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನುಆದರದ ಅಮೃತಾನ್ನ ಉಣುವುದನೊಲ್ಲೆಬೋಧೆಯನು ಹೇಳುವ ಕೇಳುವ ಹರಿದಾಸರಪಾದತೀರ್ಥ ಪ್ರಸಾದವನುಣಿಸೆನ್ನ3 ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿಶೀಲರಹಿತ ಬ್ರಾಹ್ಮಣನಾಗಲೊಲ್ಲೆಕೀಲನರಿತು ಹರಿಭಕುತಿಯನು ಮಾಳ್ಪ ಪರಚಾಂ-ಡಾಲನ ಮನೆ ಬಾಗಿಲ ಕಾಯಿಸೆನ್ನ 4 ಕ್ರೂರಶಾಸ್ತ್ರವನೋದಿ ಕುರಿ ಕೋಣವನೆ ಕಡಿದುಘೋರ ನರಕದಿ ಬೀಳುವುದನು ನಾನೊಲ್ಲೆವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯದ್ವಾರಪಾಲಕನೆಂದೆನಿಸೆನ್ನ 5 ಪಟ್ಟೆಪಟ್ಟಾವಳಿ ದಿವ್ಯ ದುಕೂಲ ಮಿಂ-ಚಿಟ್ಟ ವಸ್ತ್ರ ಉಡುವುದನೊಲ್ಲೆನೆಟ್ಟನೆ ಕಾವಿ ಕಾಷಾಯಾಂಬರಗಳನುಉಟ್ಟವರ ಬಂಟನೆಂದೆನಿಸೆನ್ನ 6 ಅರ್ಥ ವಿಷಯಂಗಳ ಫಲಾಪೇಕ್ಷೆಯಿಂ ಪುಣ್ಯತೀರ್ಥಯಾತ್ರೆಯ ಮಾಡಲೊಲ್ಲೆದೈತ್ಯ ಮರ್ದನ ಬಾಡದಾದಿಕೇಶವ ನಿನ್ನಕೀರ್ತನಗೈವರ ಸ್ತುತಿಕನೆನಿಸೆನ್ನ 7
--------------
ಕನಕದಾಸ
ದೇಹವ ದಂಡಿಸಲೇಕೆ ಮನುಜ ಪ ಶ್ರೀ ಹರಿನಾಮವ ಸ್ನೇಹದಿ ಭಜಿಸೆಲೊ ಅ.ಪ ಭಕುತಿಯೆ ಸಾಧನ ಹರಿಯ ಪ್ರಸಾದಕೆ ಮುಕುತಿಗೆ ಹರಿಯ ಪ್ರಸಾದವೆ ಸಾಧನ ರುಕುಮಿಣೀರಮಣನು ಪೂರ್ಣ ಸ್ವರಮಣನು ಭಕುತಿಗೆ ಸಜ್ಜನ ಸಂಘವೆ ಸಾಧನ 1 ವಾದÀ ವಿವಾದವು ಆಗಿ ಮುಗಿಯಿತೊ ಮೋದತೀರ್ಥರ ಮತ ಸಾಧನ ಕೈಪಿಡಿ ಓದಿ ನೀ ಸುಲಭದಿ ತತ್ವಗಳರಿಯುತ ಮಾಧವನಂಫ್ರಿಯ ಹರುಷದಿ ಭಜಿಸೆಲೊ 2 ಹೃದಯವು ನಿರ್ಮಲವಾಗುವ ತನಕ ಮದ ಮತ್ಸರಗಳ ಸದೆ ಬಡಿಯುತಲಿ ಎದೆಯಗೆಡದೆ ಸದಾ ಹರಿಯ ಭಜಿಸೆಲೊ ಸದಮಲಗುಣನು ಪ್ರಸನ್ನನಾಗುವನು 3
--------------
ವಿದ್ಯಾಪ್ರಸನ್ನತೀರ್ಥರು
ಧನ್ಯನಲ್ಲವೇ ಇವನು ಧನ್ಯನಲ್ಲವೇ ಪ ಧನ್ಯನಲ್ಲವೇ ಪನ್ನಂಗಶÀಯನ ನುನ್ನತ ಮಹಿಮೆ ತನ್ನೊಳ್ತಿಳಿದವ ಅ.ಪ ಕರಿ ಮೊಸಳಿಗೆ ಸಿಲ್ಕಿ ಪೊರೆಯೊ ಹರಿಯೆನಲು ಕರುಣದಿಂದಲಿ ಬಂದು ಪೊರೆದನೆಂದರಿತವ 1 ದುರುಳ ದುಶ್ಯಾಸನನು ಸೀರೆ ಸೆಳೆಯುತಿರೆ ತರುಣಿಗ್ವರದ ಶ್ರೀಪರಮನೆಂದರಿತವ 2 ಬಲಿಯನು ರಸಾತಳಕಿಳಿಸಿ ತಾ ಪಾದದಿ ಒಲಿದು ಮನೆಯ ಬಾಗಿಲ ಕಾಯ್ದೆಂದರಿತವ 3 ಮಲತಾಯಿ ಧ್ರುವನೊದೆದು ಛಲದಿ ನೂಕಲು ಕಂದ ನಳಿನಾಕ್ಷ ಗತಿಯೆನಲು ಒಲಿದು ಸಲಹಿದ್ದರಿತವ 4 ನೀನೆಗತಿಯೆನಗೀ ಭುವನದಾರು ಗತಿಯಿಲ್ಲ ಪಾದ ನೆನವಿನೊಳಿರ್ದವ 5
--------------
ರಾಮದಾಸರು
ಧಾಮ ನಿರ್ಮಲನಾಮ ಪ ದುರಿತ ಸಂಹಾರಕ ಸುರವರಪಾಲಕ ವರರಮಾನಾಯಕ 1 ಶ್ರೀತಾಂಬುನಮಕರ ಪ್ರೀತ ಕುಸುಮಧರ 2 ಕಾಮಿತ ಫಲದಾತ ಕೋಮಲಕರಯುತ | ರಾಮದಾಸಾರ್ಚಿತ ಪ್ರೇಮರಸಾನ್ವಿತ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್