ಒಟ್ಟು 212 ಕಡೆಗಳಲ್ಲಿ , 63 ದಾಸರು , 189 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು
ಕೃಷ್ಣಲೀಲೆಅಕ್ಕ ನಂದಗೋಪನ ಅರಮನೆಯೊಳಗೊಬ್ಬ |ಅಕ್ರೂರ ಬಂದನಂತೆ ಪಹೊಕ್ಕು ಬಳಕೆಯಿಲ್ಲ ಹೊಸಬನು ಇವನಂತೆ |ಇಕ್ಕೋ ಬಾಗಿಲ ಮುಂದೆ ಈಗ ರಥವ ಕಂಡೆ ಅ.ಪಮಧುರಾ ಪಟ್ಟಣವಂತೆ ಮಾವನ ಮನೆಯಂತೆ |ನದಿಯ ದಾಟಲುಬೇಕಂತೆ ||ಎದುರು ಅರಿವಿಲ್ಲದಂತೆ ಏನೆಂಬೆ ಏಣಾಕ್ಷಿ |ಉದಯದಿ ಪಯಣವಂತೆ 1ಒಳ್ಳೆ ವೇಳೆಗಳಂತೆ ಬಿಲ್ಲುಹಬ್ಬಗಳಂತೆ |ಎಲ್ಲಾ ಬೀದಿ ಸಿಂಗರವಂತೆ ||ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆ |ಅಲ್ಲೆ ತಾಯ್ತಂದೆಗಳ ಕಾಲಿಗೆ ನಿಗಳವಂತೆ 2ಮತ್ತೆ ಪಾಂಡವರಂತೆ ಮೋಹದ ಸೋದರರಂತೆ |ಅತ್ತೆಯ ಮಕ್ಕಳಂತೆ ||ಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆ |ಚಿತ್ತಜನಯ್ಯನ ಚಿತ್ತ ಎರಡಾಯ್ತಂತೆ 3ಅಲ್ಲಿ ಪುಟ್ಟಿದನಂತೆ ಅರಸನಳಿಯನಂತೆ |ಇಲ್ಲಿಗೆ ಬಂದನಂತೆ ||ಕಳ್ಳಕಪಟನಂತೆ ಎಂದಿಗೂ ಹೀಗಂತೆ |ನಿಲ್ಲದೆ ಯಶೋದೆಗೆ ಕಣ್ಣ ನೀರಂತೆ 4ತಾಳಲಾರೆವು ನಾವು ಪುರಂದರವಿಠಲನ |ಕಾಣದೆ ನಿಲಲಾರೆವೆ ||ಕಾಲದಲೊಂದಾಗಿ ಕಾಮಿನಿಯರು ಕೂಡಿ |ಆಲಸ್ಯವಿಲ್ಲದೆ ಆಣೆಯಿಡುವ ಬನ್ನಿ
--------------
ಪುರಂದರದಾಸರು
ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆಕ್ಲೇಶ ಪಾಶಗಳ ಹರಿದು ವಿಳಾಸದಿ ದಾಸರ ನುತಿಗಳ ಪೊಗಳುತ ಮನದೊಳು ಪ.ಮೋಸದಿ ಜೀವಿಯಘಾಸಿ ಮಾಡಿದ ಫಲಕಾಶಿಗೆ ಹೋದರೆ ಹೋದೀತೆದಾಸರ ಕರೆ ತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆಭಾಷೆಯ ಕೊಟ್ಟು (ನಿ) ರಾಸೆಯ ಮಾಡಿದಫಲ ಮೋಸವು ಮಾಡದೆ ಬಿಟ್ಟೀತೆಶಶಿವದನೆಯ ಅಧರಾಮೃತ ಸೇವಿಸಿ ಸುಧೆಯೆಂದಡೆ ನಿಜವಾದೀತೆ 1ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನಮನಸಿಗೆ ಸೊಗಸೀತೆಹೀನ ಮನುಜನಿಗೆ ಜಾÕನವ ಭೋಧಿಸೆ ಹೀನ ವಿಷಯಗಳು ಹೋದಿತೇಮಾನಿನಿ ಮನಸು ನಿಧಾನವು ಇಲ್ಲದಿರೆಮಾನಭಿಮಾನ ಉಳಿದೀತೆಭಾನುವಿಕಾಸನ ಭಜನೆಯ ಮಾಡದ ದೀನಗೆ ಮುಕುತಿಯು ದೊರಕೀತೆ 2ಸತ್ಯದ ಧರ್ಮವ ನಿತ್ಯವು ಭೋಧಿಸೆ ತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಯ ಮನಸಿಗೆ ತಿಳಿದೀತೆಪುತ್ಥಳಿ ಬೊಂಬೆಯ ಚಿತ್ರದಿ ಬರೆದಿರೆ ಮುತ್ತುಕೊಟ್ಟರೆ ಮಾತಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯುತೋರದೆ ಇದ್ದೀತೆ 3ನ್ಯಾಯವ ಬಿಟ್ಟು ಅನ್ಯಾಯ ಪೇಳುವ ನಾಯಿಗೆ ನರಕವು ತಪ್ಪೀತೆತಾಯಿ ತಂದೆಗಳ ನೋಯಿಸಿದ ಅನ್ಯಾಯಿಗೆ ಮುಕ್ತಿಯು ದೊರಕೀತೆಬಾಯಿ ಕೊಬ್ಬಿನಿಂದ ಬೈಯುವ ಮನುಜಗೆ ಘಾಯವುಆಗದೆ ಬಿಟ್ಟೀತೆಮಾಯಾವಾದಗಳ ಕಲಿತಾ ಮನುಜಗೆ ಕಾಯಕಷ್ಟ ಬರದಿದ್ದೀತೆ 4ಸಾಧು ಸಜ್ಜನರನು ಬಾಧಿಸಿದಾ ಪರವಾದಿಗೆ ದೋಷವು ತಪ್ಪೀತೆಬಾಧಿಸಿ ಬಡವರ ಅರ್ಥವ ಒಯ್ವವಗೆ ವ್ಯಾಧಿ ರೋಗಗಳು ಬಿಟ್ಟೀತೆಬದ್ದ ಮನುಜ ಬಹು ಕ್ಷುದ್ರವ ಕಲಿತರೆಬುದ್ದಿ ಹೀನನೆಂಬುದು ಹೋದೀತೆಕದ್ದು ಒಡಲ ತಾ ಪೊರೆವನ ಮನೆಯೊಳಗೆಇದ್ದುದು ಹೋಗದೆ ಇದ್ದೀತೆ 5ಅಂಗದ ವಿಷಯಂಗಳನು ತೊರೆದಾತಗೆ ಅಂಗನೆಯರಬಗೆ ಸೊಗಸೀತೆಸಂಗ ಸುಖಂಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆಇಂಗಿತವರಿಯುವ ಸಂಗ ಶರೀರ ವಜ್ರಾಂಗಿಯಾಗದೆ ಇದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದ ಭಂಗಗೆ ಮುಕ್ತಿಯು ದೊರಕೀತೆ 6ಕರುಣಾಮೃತದಾ ಚರಣವ ಧರಿಸಿದ ಪರಮಗೆ ಸರಳಿ ಬಂದೀತೆಕರಣ ಪಾಶದುರವಣೆ ತೊರೆವಾತಗೆ ಶರಣರ ಪದ್ಧತಿ ತಪ್ಪೀತೆಆರುಶಾಸ್ತ್ರವನು ಮೀರಿದ ಯೋಗಿಗೆತಾರಕ ಬ್ರಹ್ಮವು ತಪ್ಪೀತೆವರದ ಪುರಂದರವಿಠಲನ ಚರಣಸ್ಮರಿಸುವವನಿಗೆ ಸುಖ ತಪ್ಪೀತೆ * 7
--------------
ಪುರಂದರದಾಸರು
ಕೇಳೆಗೋಪಿಗೋಪಾಲ ಮಾಡಿದ ಬಲು |ದಾಳಿಯ ಗೋಕುಲದಿ ಪತಾಳೆಲಾರೆವೆ ತವಕದಲಿ ಕಂದಗೆ ಬುದ್ಧಿ |ಹೇಳೆ ಕೃಷ್ಣವ ಕರೆದು ಅ.ಪಸರಿರಾತ್ರಿಯೊಳು ಸರಸರನೆ ಮನೆಗೆ ಬಂದು |ಸುರಿದು ಪಾಲ್ಪೆಣ್ಣೆಗಳ ||ಉರೋಜಗಳಿಗೆಕರಸರಿಸಿ ಕಣ್ಗಳನು |ತೆರೆದು ನೋಡುವನೆ ನಮ್ಮ 1ಗಂಡನು ಮನೆಯೊಳಗಿರಲು ಬಂದು ಕೃಷ್ಣ |ಭಂಡ ಮಾತುಗಳ ಬಹು ||ತುಂಟತನದಲಾಡಿಉದ್ದಂಡಕಠಿಣಕಾಯ |ದುಂಡುಕುಚವ ಪಿಡಿದ 2_______ವದ ಮೇಲಿರಲು ತಾ |ಸೀರೆಯ ಸೆಳೆವ ನೋಡೆ ||ಆರಿವರೆಂದು ವಿಚಾರಿಸಿ ನೋಡಲು |ಮೋರೆಯ ಬಾಗಿದನೆ 3ಕೇರಿಯೊಳಗೆದಧಿಮಾರುತಿರಲು ಕೃಷ್ಣ |ಸಾರಿ ಬಂದು ಮೊಸರ ||ಸೂರೆಗೊಂಡು ಪರನಾರಿಯರ ನೆರೆದು ತಾ |ಘೋರರೂಪದಿ ಮೆರೆದ 4ಆಡಲೇತಕೆ ನಮ್ಮ ಬಾಗಿಲಂಗಳದೊಳು |ಬೇಡುವ ಜಲ ದೈನ್ಯದಿ ||ನೀಡುವೆ ಜಲ ಜಲಜಾಕ್ಷ ಬಾಬಾ ಎನೆ |ಮಾಡುವರತಿಎಂಬನೆ5ಹುಡುಗನೆಂದು ಕೈಯ ಪಿಡಿಯ ಪೋಗಲು ನಮ್ಮ |ಉಡೆಮುಡಿ ಪಿಡಿದ ನೋಡೆ ||ಪಡೆದವಳಿಗೆ ಪೇಳುವೆ ನಡೆ ಎನೆ ಮಚ್ಚ |ಕೊಡಲಿ ತೋರುವನೆಗೋಪಿ6ಮಡದಿಯರೆಲ್ಲರು ಮಿಯುತಲಿರೆ ಮೈ |ಉಡುಗೆಯ ತೆಗೆದುಕೊಂಡು ||ಸಡಗರದಲಿ ಬೇಡಿಕೊಳ್ಳೆ ವಸ್ತ್ರಗಳನು |ಕೊಡದೆ ಅಡವಿಗೆ ನಡೆದ 7ಬೆಣ್ಣೆಯ ತಿಂದು ತಮ್ಮಣ್ಣಗೆ ತಾ ಕೊಟ್ಟು |ಚಿಣ್ಣರ ಬಡಿವ ನೋಡೆ ||ಬಣ್ಣಿಸಿ ನಮ್ಮ ಬಾಯಿಗೆ ಬೆಣ್ಣೆ ತೊಡೆಯುತ |ಬೆಣ್ಣೆಯ ತಿಂದಿರೆಂಬ 8ಏಣಲೋಚನೆ ಸರ್ಪವೇಣಿ ನಮ್ಮ ಮನೆ |ಓಣಿಯೊಳಗೆ ಪೋಗುತ ||ಕಾಣದಂತೆ ಚಕ್ರಪಾಣಿ ನಮ್ಮೊಳು ತನ್ನ |ತ್ರಾಣವ ತೋರಿದನೆ 9ಪದುಮನಾಭನು ಪುರದ ಚದುರಿಯರಿಗೆ ತಾನು |ಮದನಶಾಸ್ತ್ರವ ಪೇಳುತ ||ಮುದದೊಳಗಿರಲವರೊಡೆಯ ಬರಲು ಕೃಷ್ಣ |ಕುದುರೆಯ ನೇರಿದನೆ 10ಎಷ್ಟುಪದ್ರವ ಕೊಟ್ಟರು ಗೋಕುಲದೊಳು |ಬಿಟ್ಟವನಿರಲಾರೆವೆ ||ಸೃಷ್ಠಿಯೊಳಗೆ ಸರ್ವಾಭಿಷ್ಟದ ಪುರಂದರ-|ವಿಠಲ ಸಲಹುವನೆ 11
--------------
ಪುರಂದರದಾಸರು
ಖ್ಯಾತಿಯಿಂದಪುರುಹೂತಸಹಿತ ಸುರ |ವ್ರಾತವು ನಿನ್ನನು ಒತ್ತಿ ಓಲೈಸಲು ||ಭೂತಳದೊಳು ಸಂಪ್ರೀತಿಗೆ ಸಿಲುಕಿ ನೀ |ಪಾರ್ಥನ ರಥಕೆ ಸೂತನಾದ ಮೇಲೆ 2ಪರಮಪುರುಷ ಪರಬೊಮ್ಮ ನೀನೆನುತಲಿ |ನಿರುತದಿ ಶ್ರೂತಿಯು ಕೊಂಡಾಡುತಿರೆ ||ವರಪಾಂಡವರರ ಮನೆಯೊಳುಊಳಿಗ|ಕರೆಕರೆದಲ್ಲಿಗೆ ಪೋದಪೋದ ಮೇಲೆ 3ಧುರದಲಿ ಪಣೆಯನೊಡೆದ ಭೀಷ್ಮನ ಸಂ- |ಹರಿಪೆನೆನುತ ಚಕ್ರವ ಪಿಡಿಯೆ ||ಹರಿನಿನ್ನ ಕರುಣದ ಜೋಡು ತೊಟ್ಟಿರಲವ- |ನಿರವ ಕಾಣುತ ಸುಮ್ಮನೆ ತಿರುಗಿದ ಮೇಲೆ 4ತರಳನು ಕರೆಯಲು ಭರದಿ ಕಂಬದಿ ಬಂದು |ನರಮೃಗರೂಪ ಭಕ್ತರ ತೆತ್ತಿಗನೆ ||ವರದ ಪುರಂದರವಿಠಲರಾಯ ನಿನ |ಸ್ಮರಿಪರ ಮನದಲಿ ಸೆರೆಯು ಸಿಕ್ಕಿದ ಮೇಲೆ 5
--------------
ಪುರಂದರದಾಸರು
ಘಾತಕರಿನ್ನೇಕೆ ಪರಮಾರ್ಥ ಶ್ರವಣನೀತಿವಂತರೆ ನಿಮಗೆ ಪರನಿಂದೆ ಏಕೆ ? ಪ.ಕೋತಿಗಂದಣವೇಕನಾಥನಿಗೆ ಮುನಿಸೇಕೆ ?ಹೋತು ಕಾಳಗವಾಡೆ ಖ್ಯಾತಿಯೇಕೆ ?ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ?ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ? 1ದಯವಂತನಲ್ಲದಾ ದೊರೆಯ ಸೇವೆಯು ಏಕೆ ?ಭಯವು ಉಳ್ಳವಗೆ ರಣರಂಗವೇಕೆ ?ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆವ್ಯಯವಾದ ಧನಕಿನ್ನು ಚಿಂತೆಯೇಕೆ ? 2ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆಬಲ್ಲಧಿಕ ಜ್ಞಾನಿಗೆ ದ್ವೇಷವೇಕೆ ?ಚೆಲ್ವ ಶ್ರೀಪುರಂದರ ವಿಠಲನ ದಯವಿರಲುಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ? 3
--------------
ಪುರಂದರದಾಸರು
ಚಿತ್ತಶುದ್ಧಿಯಿಲ್ಲದವನವ ಜ್ಞಾನಿಯೆ - ಪುಣ್ಯಪಾತಕಗಳನರಿಯದವ ಮನುಜನೆ ಕೃಷ್ಣ ಪ.ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ?ಊರೊಳಗಿನಾ ಕಳ್ಳ ಅವ ಸುಜನನೆ ?ಜಾರತನವೆಸಗುವಳು ಕುಲವನಿತೆಯಹುದೆ - ಸಂಸಾರದೆಚ್ಚವಿಲ್ಲದವ ಸುಗಣನೆ ? 1ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ?ಕಾನನದೊಳಿಹ ಕಾಗೆ ವನವಾಸಿಯೇ ?ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕಧ್ಯಾನವನು ಮಾಡಲದು ಮೌನವೇ ಕೃಷ್ಣಾ ? 2ತೋಳ ಅಡವಿಯಲಿರಲು ಅದು ದಿಗಂಬರನಹುದೆ ?ಗಾಳಿಯಂಬುವ ಉರುಗ ಉಪವಾಸಿಯೇ ?ಆಲವದು ಜಡೆಬಿಡಲುಪರಮ ಋಷಿಯಹುದೆ - ಬಲುಕಾಲಉಳಿದ ಹದ್ದು ತಾ ಹಿರಿಯದೆ ?3ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ?ಸಿಂಧುಜವು ಎನೆ ವಿಷಯ ಶೀತಕರನೆ ?ಅಂಧಕನು ಕಣ್ಮಚ್ಚಲದು ಧ್ಯಾನವೇ, ಗಜವುಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ? 4ಮರಣಕ ಗಂಟಲನು ಮಾಡಲದು ಮಂತ್ರವೆ ?ಗಂಡು ನೀರಲಿ ಮುಳುಗಲದು ಸ್ನಾನವೇ ?ಪುಂಡರೀಕಾಕ್ಷ ಶ್ರೀ ಪುರಂದರವಿಠಲನತೊಂಡನಾಗದ ನರನ ಬಾಳು ಬಾಳುವೆಯೆ ? 5
--------------
ಪುರಂದರದಾಸರು
ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ? ಪ.ಆದರಣೆಯಿಲ್ಲದೂಟ ಅಮೃತಾನ್ನವಾದರೇನುವಾದಿಸುವಸತಿ - ಸುತರಿದ್ದು ಫಲವೇನು ?ಕ್ರೋಧ ಬಳೆಸುವ ಸಹೋದರರು ಇದ್ದರೇನುಮಾದಿಗರ ಮನೆಯೊಳೆ ಮದುವೆಯಾದರೇನು ? 1ನಾಲಿಗಿಲ್ಲದ ಪÀದವು ಸಂಚಿತುಂಬ ಇದ್ದರೇನುದೇವಾಂಕಿತವಿಲ್ಲದ ಕವಿತ್ವವೇನು ?ಹೇಮವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನುಹಾವಿನ ಘಣಿಯೊಳಗೆ ಹಣವಿದ್ದರೇನು ? 2ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನುತನ್ನ ತಾನರಿಯದ ಜ್ಞಾನವೇನು ?ಎನ್ನುತ ಪುರಂದರವಿಠಲನ ನೆನೆಯದವಸಂನ್ಯಾಸಿಯಾದರೇನು ಪಂಡಿತನಾದರೇನು ? 3
--------------
ಪುರಂದರದಾಸರು
ದೂತ ಸಂವಾದ ದೇವಿಯೊಡನಾದುದು ಪ್ರೀತಿಯಲಿ ಕೇಳಿರೆಲ್ಲದಾತೆ ಶುಂಭನ ಯುದ್ಧಕೆತಾಯೆಂದಟ್ಟಿ ಮಾತ ಮುಗಿಸಿದಳಲ್ಲಪತೆರೆಕಣ್ಣ ಮುಚ್ಚಿದ್ದಿ ಯಾಕೆ ಕಾಡೊಳಗಿರುವೆ ಕೇಳೆಲೆ ಮಹಾದೇವಿಪುರುಷರು ನಿನಗಾರು ಓರ್ವಳೆ ಮಾತಾಡು ಕೇಳೆಲೆ ಮಹಾದೇವಿಕರೆಯಲು ಬಂದೆ ಹಿಮಾಚಲಕೆ ನಿನ್ನ ಕೇಳೆಲೆ ಮಹಾದೇವಿಅರಸ ಶುಂಭನ ದೂತ ಸುಗ್ರೀವ ನಾನೀಗ ಕೇಳೆಲೆ ಮಹಾದೇವಿ1ಕಣ್ಣ ತೆರೆದು ನುಡಿದಳು ದೇವಿ ಖಳನಿಗೆ ಕೇಳೆಲೋ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವನಿನ್ನಧಿಕಾರವದೇನು ಶುಂಭನಾರು ನೀನಾರು ಕೇಳೆಲೊ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವ2ನಂಬೆನ್ನ ಮಾತನು ಕಪಟವೇನಿಲ್ಲ ಕೇಳೆಲೆ ಮಹಾದೇವಿಶುಂಭನ ಭಾಗ್ಯ ಹೇಳಲಿಕಳವಲ್ಲ ಕೇಳೆಲೆ ಮಹಾದೇವಿತುಂಬಿವೆ ಮನೆಯೊಳು ದಿವ್ಯ ರತ್ನವು ಕೇಳೆಲೆ ಮಹಾದೇವಿಶುಂಭಗೆ ನೀನು ಕಡೆರತ್ನ ದೊರಕಲು ಕೇಳೆಲೆ ಮಹಾದೇವಿ3ಕರುಣದಿ ಕಪಟವಿಲ್ಲದಲೆ ನೀನು ಕೇಳ್ವೊಡೆ ಕೇಳೆಲೋ ಸುಗ್ರೀವಇರಬಾರದು ಸುಮ್ಮಗಿದ್ದುದನಾಡಿವೆವು ಕೇಳೆಲೋ ಸುಗ್ರೀವಪುರುಷರು ಇಂದಿನವರೆಗಿಲ್ಲ ನಾ ಸ್ವತಂತ್ರ ಕೇಳೆಲೋ ಸುಗ್ರೀವಪುರುಷರಿಗೋಸ್ಕರ ನಾನು ತಪವನು ಮಾಡುವೆ ಕೇಳೆಲೋ ಸುಗ್ರೀವ4ಶುಂಭನು ಶೀಘ್ರದಿ ಕರೆತಾರೆಂದನು ನಿನ್ನ ಕೇಳೆಲೆ ಮಹಾದೇವಿಶುಂಭನ ಭಾಗ್ಯ ದೊರಕಿದಡೆ ನೀ ಕೃತಾರ್ಥೆ ಕೇಳೆಲೆ ಮಹಾದೇವಿಶುಂಭಗೆ ನಿನಗೆ ಸಕ್ಕರೆ ಹಾಲು ಬೆರೆತಂತೆ ಕೇಳೆಲೆ ಮಹಾದೇವಿಶುಂಭಗೆ ಚಾಕರ ನಿನಗೆ ಚಾಕರ ನಾನು ಕೇಳೆಲೆ ಮಹಾದೇವಿ5ಮಾಡಬಾರದ ಪ್ರತಿಜೆÕಯ ಮಾಡಿಹೆನು ಕೇಳೆಲೋ ಸುಗ್ರೀವಆಡಲಿ ಏನ ಅದೃಷ್ಟಹೀನೆಯು ಕಂಡ್ಯಾ ಕೇಳೆಲೋ ಸುಗ್ರೀವಖಾಡಾ ಖಾಡಿಯಲಿ ಜಯಿಸಿದವನೆ ಭರ್ತನೆಂದೆನೆ ಕೇಳೆಲೋ ಸುಗ್ರೀವಕೂಡಿ ಬರುವೆ ಮಾಡಿದ ಭಾಷೆಯ ಹುಸಿಯದೆ ಕೇಳೆಲೋ ಸುಗ್ರೀವ6ಕರೆಯಲು ಬಿಗಿಯಲು ಬೇಡವೆ ನೀನೀಗ ಕೇಳೆಲೆ ಮಹಾದೇವಿಥರಥರ ಸಾಲು ಸಾಲಿನ ಛತ್ರಿ ನಿನ್ನವು ಕೇಳೆಲೆ ಮಹಾದೇವಿಇರುವನು ನೀ ಹೇಳಿದಂತ ಶುಂಭನು ಕೇಳೆಲೆ ಮಹಾದೇವಿದೊರೆವುದು ನಿನಗೆ ತ್ರೈಭುವನದರಸುತನ ಕೇಳೆಲೆ ಮಹಾದೇವಿ7ಕಂಡುದಿಲ್ಲವೋ ಈವರೆಗೆನ್ನ ಜಯಿಸಿದವರನ್ನು ಕೇಳೆಲೋ ಸುಗ್ರೀವದಿಂಡುಗಡೆದರು ಎನ್ನೆದುರು ನಿಂತವರೆಲ್ಲ ಕೇಳೆಲೋ ಸುಗ್ರೀವಗಂಡನ ಪಡೆದಿರೆಶುಂಭಜಯಿಸುವನೆನ್ನ ಕೇಳೆಲೋ ಸುಗ್ರೀವಗಂಡನಾವನಿಲ್ಲದಿರೆ ಏನ ಮಾಡುವೆ ಕೇಳೆಲೋ ಸುಗ್ರೀವ8ಚಾರ್ವಾಕರ ಮಾತಾಡಲು ಬೇಡ ಕೇಳೆಲೆ ಮಹಾದೇವಿಬರ್ವಳು ನಿನ್ನ ಮಾತಿಗೆಶುಂಭಬಹನೇ ಕೇಳೆಲೆ ಮಹಾದೇವಿಉರ್ವಿಗೆ ಕರ್ತನ ಎದುರಿಗೆ ನೀ ನಿಲ್ಲುವೆಯ ಕೇಳೆಲೆ ಮಹಾದೇವಿಗರ್ವವ ಮಾಡಲು ಮುಂದಲೆ ಹಿಡಿದೊಯ್ವರು ಕೇಳೆಲೆ ಮಹಾದೇವಿ9ಎನ್ನ ಪ್ರಾರಬ್ಧವು ಇದ್ದಂತೆ ಆಗುವುದು ಕೇಳೆಲೋ ಸುಗ್ರೀವನಿನ್ನ ಮೇಲೇನು ಮಾತಿಲ್ಲವೋ ಕೇಳೆಲೋ ಸುಗ್ರೀವಎನಗೆ ಹಿತಕಾರಿ ನೀನು ಅಹಿತ ನಾನೇ ಕೇಳೆಲೋ ಸುಗ್ರೀವಇನ್ನು ಮಾತಾಡಬೇಡವೋ ಕರೆತಾನಡಿ ಕೇಳೆಲೋ ಸುಗ್ರೀವ10ಇಂತು ವಿಳಾಸ ಮಾತನಾಡಿಯೆ ಖಳನನು ಕಳುಹಿದಳು ಪರಾಂಬೆಎಂತು ಹೇಳ್ವನೋ ಶುಂಭನಾವಾಗ ಬರುವನೋ ಎನುತಲಿ ಜಗದಂಬೆಚಿಂತೆ ಹರಿಪೆ ಸುರರನು ಶುಂಭನನುಕಟ್ಟಿಎನುತಲಿ ಸರ್ವಾಂಬಚಿಂತಯಕ ತಾನಾದ ಚಿದಾನಂದ ಕರುಣೆಯು ಬಗಳಾಂಬ11
--------------
ಚಿದಾನಂದ ಅವಧೂತರು
ನಡುಮನೆಯೊಳಗೊಂದು ನಾಲ್ಕು ತೆಂಗಿನಮರ -ಹೇ ಗಿಣಿ - ಹೇ ಗಿಣಿಯೇ |ಕಡೆಮೊದಲಿಲ್ಲದೆ ಅದುಕಾತು ಹಣ್ಣಾಯ್ತ - ಹೇಗಿಣಿಪ.ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ - ಹೇ ಗಿಣಿತಲೆಯೆಲ್ಲದವ ಬಂದು ಹೊತ್ತು ಕೊಂಡುಹೋದ - ಹೇ ಗಿಣಿ 1ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ - ಹೇ ಗಿಣಿಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ - ಹೇ ಗಿಣಿ 2ಬಲೆಯ ಹಾಕಿದರು ಬಲೆಯದಾಟುವದಯ್ಯ - ಹೇ ಗಿಣಿಚೆಲುವ ಪುರಂದರವಿಠಲನೇ ಬಲ್ಲ - ಹೇ ಗಿಣಿ 3
--------------
ಪುರಂದರದಾಸರು
ನಾರಾಯಣ ನಿನ್ನ ನಾಮವನು ನೆನೆದರೆ |ಹಾರಿಹೋಹುದು ಪಾಪ ಜನ್ಮಜನ್ಮಾಂತರದಿ |ಶ್ರೀ ರಮಣ ನಿನ್ನ ಕೃಪೆಯಿತ್ತೆಮಗೆ ಮುಕ್ತಿಯ -ದಾರಿ ತೋರಿಸೊ ಮುರಾರಿ ಪಸಕಲ ವೇದ ಪುರಾಣ _ ಶಾಸ್ತ್ರವನು ತಿಳಿದೋದಿ |ತಿಯಿಂಭಕುತ ತಾಯ್ತಂದೆಗಳ ಚಿತ್ತವಿಡಿದರ |ರಕುಷಣೆಯ ಮಾಡಿ ಜಗದೊಳಗೆ ವಿಖ್ಯಾತ ಸುಕು -ಮಾರ ತಾನೆಸಿಸಿಕೊಂಡ1ಪ್ರಕೃತಿಯಲಿ ಹೋಮಕೋಸ್ಕರ ಸಮಿಥೆ ತರಹೋಗಿ |ಶುಕರುಮಗಳಿಂದ ಚಾಂಡಾಲಿಲೆಯ ಕಂಡು ತಾ - |ಮೂಕನಾಗಿನಿಂದು ಮೈಮರೆದು ಪಾತಾಕಿಯ ಬಹ -ದುರಿತವನು ತಾನರಿಯದೆ 2ನಿಲ್ಲು ನಿಲ್ಲೆಲೆ ಕಾಂತೆ, ನಿನಗೊಲಿದೆ ನೀನಾರೆ |ಸೊಲ್ಲಿಸೆನ್ನೊಡನೆ ಸತಿಯರ ಕುಲಕೆಕಟ್ಟಾಣಿ |ಚೆಲ್ಲೆನ್ನ ಮೇಲೆ ಕರುಣವನಿಂತು ಕೋಮಲೆಯೆನಿಲ್ಲೆಂದು ಸೆರಗ ಪಿಡಿದ 3ಎಲೊವಿಪ್ರ ಕೇಳು ನಾ ಕುಲಹೀನೆ ನಮ್ಮ ಮನೆ |ಹೊಲನೆನದು ಗೋಮಾಂಸ ಚರ್ಮದಾ ಹಾಸಿಕೆಯು |ಎಲುವಿನಾ ರಾಶಿ ಒದರುವ ನಾಯ ಹಿಂಡುಗಳು -ಬಹು ಘೋರಘೋರ ವಿಹುದು 4ಬಲೆಗೆ ಸಿಲ್ಕಿದ ಪಕ್ಷಿ ಬೇಟೆಗಾರನದಲೇ ? |ಕುಲವನ್ನು ಕೂಡೆ ನಾ ಕಾಮಿನೀರನ್ನಳೆ |ಚಲದಿಂದ ಬದುಕುವೆನು ಸುಖದಿಂದಲಿರುವೆ ನೀಒಲವು ನನಗೊಂದೆ ಎಂದ 5ವ್ಯರ್ಥ ಎನ್ನೊಡನೆ ಮಾತೇತಕೆಲೊ ಹಾರುವಾ |ಚಿತ್ತ ನನ್ನಲ್ಲಿ ಇದ್ದರೆ ಹೋಗಿ ನೀ ನಿನ್ನ |ಹೆತ್ತ ತಾಯ್ತಂದೆಯರ ಕೇಳು ಸಮ್ಮತಿಸಿದರೆ -ಮತ್ತೆ ನಿನಗೊಲಿವೆನೆನಲು 6ಅತ್ತ ಕಾಮಿನಿಯ ಒಡಗೊಡಿ ತನ್ನಯ ಪಿತನ |ಹತ್ತಿರಕೆ ಹೋಗಿ ಕೇಳಿದರೆ ಆತನು ಎಂದ |ಉತ್ತಮದ ಕುಲವನೀಡಾಡಿ ಈ ಪಾತಾಕಿಯ -ಹಸ್ತಕೊಳಗಾಗದಲಿರೈ 7ಆಗದಾಗದು ನನ್ನ ಕುಲಬಂಧು - ಬಳಗವನು |ನೀಗಿ ನಿನ್ನೊಡನೆ ಕೂಡುವೆನೆಂಬ ಮತವೆನಗೆ |ನಾಗಭೂಷಣನ ಪಣೆಗಣ್ಣಿಲುರಿದನ ಬಾಣತಾಗಿತೆನ್ನೆದೆಗೆ ಎಂದ 8ಕೂಗಿ ಹೇಳುವೆ ನಿನ್ನ ಕುಲವಳಿಯದಿರು ಎಂದ |ಹೋಗಿ ಕೂಡದೆ ನಿನ್ನ ಹೆತ್ತ ತಾಯ್ತಂದೆಗಳಿ - |ಗಾಗದಿದ್ದರೆ ಆಚೆಯಾ ಮನೆಯೊಳಗೆ ಹೋಗಿಇಬ್ಬರೂ ಇರುವೆವೆಂದ 9ಹಾಲಂತ ಕುಲವ ನೀರೊಳಗದ್ದಿ ಪೂರ್ವದಾ |ಶೀಲವನ್ನಳಿದು ಸತಿಯಳ ಕೂಡಿ ತಾನು ಚಾಂ - |ಡಾಲಿತಿಗೆ ಹತ್ತು ಮಕ್ಕಳನು ಪಡೆಕೊಂಡವರಲೀಲೆ ನೋಡುತಲಿ ಹಿಗ್ಗಿ 10ಬಾಳಿನಲ್ಲೀ ರೀತಿ ಅಜಮಿಳನು ಇರುತಿರಲು |ಕಾಲ ಬಂದೊದಗಿತ್ತು ಕರೆಯಿರೆವೆ ಪಾತಕನ |ಜೋಲುದುಟಿಡೊಂಕು ಮೋರೆಯ ಅಬ್ಬರದಿ ಯಮನ -ಆಳುಗಳು ಬಂದರಾಗ 11ಎಡಗೈಯೊಳಗೆಪಾಶ ಹಿಡಿದು ಚಮ್ಮತಿಗೆಗಳ |ಒಡನೆ ಜಾವಳಿನಾಯಿ ವಜ್ರಮೋತಿಯ ಕಾಯಿ |ತುಡಿಕಿರೋ ಕೆಡಹಿ ಕಟ್ಟಿರೋ ಪಾತಕನನೆಂದುಘುಡುಘುಡಿಸಿ ಬಂದರಾಗ 12ಗಡಗಡನೆ ನುಡುಗಿ ಕಂಗೆಟ್ಟು ಅಜಮಿಳನು ತಾ |ಕಡೆಯ ಕಾಲಕೆ ಅಂಜಿ ಮಗನ ನಾರಗನೆಂದು |ಒಡನೊಡನೆ ಕರೆಯಲ್ಕೆ ಯಮನಾಳ್ಗಳೋಡಿದರುಮುಟ್ಟಿದುದು ಹರಿಗೆ ದೂರು 13ಕೊರಳ ತುಳಸಿಯ ಮಾಲೆಯರಳ ಪೀತಾಂಬರದ |ವರಶಂಖ ಚಕ್ರದ್ವಾದಶನಾಮಗಳನಿಟ್ಟ |ಹರಿಯ ದೂತರು ಅಂಜಬೇಡ ಬೇಡನ್ನುತಲಿಹರಿದೋಡಿಬಂದರಲ್ಲಿ 14ಪುಂಡರೀಕಾಕ್ಷನೀ ಭೃತ್ಯನನು ಬಾಧಿಸುವ |ಲಂಡಿರಿವರಾರು ನೂಕಿರಿ ನೂಕಿರೆಂತೆಂದು |ದಂಡವನು ತೆಗೆದು ಬೀಸಾಡಿ ಯಮನವರಿಗು - |ದ್ದಂಡರಿವರೆಂದರಾಗ 15ತಂದೆ ಕೇಳಿರಿ ಒಂದು ಭಿನ್ನಪವ ಲಾಲಿಸಿರಿ |ಒಂದು ದಿನ ಹರಿಯೆಂದು ಧ್ಯಾನವನ್ನರಿಯ ನಾವ್ - |ಬಂದಾಗ ಆತ್ಮಜನ ನಾರಗನೆ ಎಂದೆನಲುಕುಂದಿದುವೆ ಇವನ ಪಾಪ ? 16ಹಂದೆ - ಕುರಿಗಳಿಗೆ ನಿಮಗಿಷ್ಟು ಮಾತುಗಳೇಕೆ |ನಿಂದಿರದೆ ಹೋಗಿ ನಿಮ್ಮೊಡೆಯನಿಗೆ ಪೇಳೆನಲು |ಸಂದಲಾ ಯಮಭಟರು ಅಜಮಿಳನ ಹರಿಭಟರುತಂದರೈ ವೈಕುಂಠಕೆ 17ಮದ್ಯಪಾನವ ಮಾಡಿ ಪೆಂಗಳನು ಒಡಗೂಡಿ |ಅದ್ದಿದೆನು ನೂರೊಂದು ಕುಲವ ನರಕದೊಳೆಂದು |ಹದ್ದಿನಾ ಬಾಯೊಳಗಿನುರಗನಂತಜಮಿಳನುಇದ್ದನವ ನೆರೆಮರುಗುತ 18ವಿಪ್ರಕುಲದಲಿ ಹುಟ್ಟಿ ವೇದಶಾಸ್ತ್ರವನೋದಿ |ಮುಪ್ಪಾದ ತಾಯಿ - ತಂದೆಗಳೆಲ್ಲರನು ಬಿಟ್ಟು |ಒಪ್ಪಿ ಧಾರೆಯನೆರೆದ ಕುಲಸತಿಯ ಬಿಟ್ಟು ಕಂ -ದರ್ಪನಾ ಬಲೆಗೆ ಸಿಕ್ಕಿ 19ವಿಪ್ರ ನಾನಾದರೂ ಜಗದಿ ನಿಂದ್ಯನು ಆಗಿ |ಇಪ್ಪೆ ನೀ ಪರಿಯೊಳೆನ್ನಂಥ ಪಾತಕಿಯಿಲ್ಲ |ತಪ್ಪಲಿಲ್ಲವೊ ಹಣೆಯಬರೆಹವಿದು ಭುವನದೊಳುಬೊಪ್ಪರೇ ವಿಧಿಯೆಂದನು 20ಇಳೆಯೊಳಗೆ ಶ್ರೀಪುರಂದರ ವಿಠಲನಾಮವನು |ನೆಲೆಯರಿತು ನೆನೆವರಿಗೆ ಯಮನ ಬಾಧೆಗಳಿಲ್ಲ |ಸುಲಭದಿಂದಲ್ಲಿ ಸಾಯುಜ್ಯಪದವಿಯು ಸತ್ಯಬಲುನಂಬಿ ಭಜಿಸಿ ಜನರು21
--------------
ಪುರಂದರದಾಸರು
ನಿನಗೆ ನಾ ಬಯ್ಯಲಿಲ್ಲೊ ಕೃಷ್ಣಯ್ಯಅಣುಗರು ಹುಯ್ಯಲಿಡುವರನು ಬಯ್ದೆ ಪ.ಮರುಳು ಮಗನೆ ನಿನಗೆ ಗೋಗಾಯ್ವದುರುಳರ ಸಂಗ ಸೊಬಗೆತರಳನಿನಗೆ ಕಳ್ಳ ಹರಳಿಗನೆಂದರೆಬೆರಳಿಟ್ಟೆ ಕಿವಿಯೊಳಗೆ ಹರಿಹರಿ 1ಠವಳಿಕಾರರು ನಾರೇರು ನಿನ್ನೊಳು ಕಂದಹವ್ವಳಿಸುತಿಹ ಜಾರೇರುಗೋವಳರಾಯನೆ ನಿನಗವರ ಸಂಗತಿ ಹೀನಪವಳ ಚೆಂದುಟಿಯ ಕೂಸೆ ಹರಿಹರಿ 2ಹುಸಿನುಡಿದರು ತಾರೊ ನನ್ನ ಕಂದಕೃಶನಾದೆ ಮುದ್ದು ತಾರೊನಸುನಗೆಯಲಿ ಮುನಿಯದೆ ಮನೆಯೊಳಗಿರೊಪ್ರಸನ್ವೆಂಕಟ ಕೃಷ್ಣಯ್ಯ ಹರಿಹರಿ 3
--------------
ಪ್ರಸನ್ನವೆಂಕಟದಾಸರು
ಪತಿಭಕುತಿಯಿಲ್ಲದಿಹ ಸತಿಯ ಸಂಗವ್ರತಗೆಟ್ಟು ಸುಖ ಪಡೆಯಲಿಲ್ಲವೊ ರಂಗ ಪ.ಗಂಡ ಬಂದರೆ ಎದ್ದುನಿಲ್ಲದೆ ಆ ಕ್ಷಣದಿಕಂಡಾಡಿ ಏಕವಚನಂಗಳನಾಗಅಂಡಲೆದು ಮಾರ್ಮಲೆಂದು ಕಾಡಿಬೇಡುವ - ಇಂಥಭಂಡುದೊತ್ತಿನ ಕೂಟ ಏಳುನಾಗರ ಕಾಟ 1ಒಂದು ತಂದರೆ ಮನೆಗೆ ಹತ್ತಾಗಿ ಭಾವಿಸದೆತಂದರೆ ಹತ್ತು ಮನೆಯೊಳಗೊಂದ ಮಾಡಿಇಂದಿಗೆ ಇಲ್ಲವೆಂದು ಮುಖವ ತಿರುಹುತಲಿ ಮದದಿಂದ ಹೋಹಳು ನಾರಿ ಬಹು ದೊಡ್ಡಮಾರಿ2ಮಕ್ಕಳಿಗೆ ಇಡಲಿಲ್ಲ ಮರಿಗಳಿಗೆ ತುಡಲಿಲ್ಲಇಕ್ಕುವಡೆ ಬೆಳ್ಳಿ - ಬಂಗಾರವಿಲ್ಲಚಿಕ್ಕವಳು ನಾ ನಿನ್ನ ಕೈಪಿಡಿದು ಕೆಟ್ಟೆನೆಂಬಮೂರ್ಖ ತೊತ್ತಿನ ಸಂಗ ಕುಲಕೆಲ್ಲಭಂಗ3ತಾಯನು ಹೊರಡಿಸು ತಂದೆಯನು ತೆರಳಿಸುದಾಯಾದಿಯನು ಮನೆಯಲಿರಿಸಬೇಡಬಾಯಿನ್ನುಮನೆ ಕಟ್ಟಿ ಬೇರಿರುವ ನಾವೆಂಬಮಾಯಾಕಾತಿಯ ಸಂಗ ಅಭಿಮಾನಭಂಗ4ಇಷ್ಟನೆಲ್ಲವ ಬಿಟ್ಟು ಕೆಟ್ಟೆನೈ ನಾನಿಂದುಕಷ್ಟ ಸೆರೆಯೆನುವೆನೆ ಈ ಪರಿಯಲಿಸ್ಪಷ್ಟಿಗಾಧಿಕನಾದ ದಿಟ್ಟ ಶ್ರೀಪುರಂದರವಿಠಲ ಪಶ್ಚಿಮದ ರಂಗಧಾಮ 5
--------------
ಪುರಂದರದಾಸರು
ಪರಾನ್ನವೇತಕೆ ಬಂತಯ್ಯ - ಎನಗೆಇಂದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಪರಾನ್ನವೇತಕೆ ಬಂತಯ್ಯ ? ಪ.ಪರಾನ್ನವೇತಕೆ ಬಂತು ಪರಮೇಷ್ಟಿಜನಕನ |ಪರನೆಂದು ತಿಳಿಸದೆ ಪರಗತಿ ಕೆಡಿಸುವ ಅಪಸ್ನಾನ ಮಾಡಿಕೊಂಡು - ಕುಳಿತು ಬಹು |ಮೌನದಿಂದಿರಲೀಸದು ||ಶ್ರೀನಿವಾಸನ ಧ್ಯಾನಮಾಡದೆ ಮವಿದು |ತಾನೆ ಓಡುವದು ಶ್ವಾನನೋಪಾದಿಯಲಿ 1ಜಪವ ಮಾಡುವ ಕಾಲದಿ - ಕರೆಯ ಬರೆ |ವಿಪರೀತವಾಗುವುದು ||ಸ್ವಪನದಂತೆ ಪೊಳೆದು ನನ್ನ ಮನಕೆ ಬಲು |ಸುಪಥವ ತಪ್ಪಿಸಿ ಅಪಗತಿ ಕೊಡುವಂಥ 2ಪ್ರಸ್ಥದ ಮನೆಯೊಳಗೆ - ಕರೆಯದೆ ಪೋಗಿ |ಸ್ವಸ್ಥದಿ ಕುಳಿತುಕೊಂಡು ||ವಿಸ್ತಾರವಾಗಿ ಹರಟೆಯನೆ ಬಡಿದು ಪ್ರ |ಶಸ್ತವಾಯಿತು ಎಂದು ಮುಸ್ತಕ ತಿರುವುವ 3ಯಜಮಾನನು ಮಾಡದ - ಪಾಪಂಗಳ |ವ್ರಜವು ಅನ್ನದೊಳಿರಲು ||ದ್ವಿಜರು ಭುಂಜಿಸಲಾಗಿಅವರ ಉದರದೊಳು ||ನಿಜವಾಗಿ ಸೇರುವುದು ಸುಜನರು ಲಾಲಿಸಿ 4ಮಾಡಿದ ಮಹಾಪುಣ್ಯವು - ಓದನಕಾಗಿ - |ಕಾಡಿಗೊಪ್ಪಿಸಿ ಕೊಡುತ |ರೂಢಿಗಧಿಕನಾದ ಪುರಂದರವಿಠಲನ |ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ 5
--------------
ಪುರಂದರದಾಸರು
ಪೂಜೆಯ ಮಾಡುವೆನೊ ಸದ್ಗುರುವಿನ |ಪೂಜೆಯ ಮಾಡುವೆನು ||ಮಾಜದೆ ತನು ಮನ ಧನವೆಲ್ಲ ಅರ್ಪಿಸಿ |ಪೂಜೆಯ ಮಾಡುವೆನುಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗಣಪತಿ ಹರಿಹರರಾ ನಿಜಶಕ್ತಿ ದಿನಪತಿ ನಿಜಭಾಸವು |ತನುವೆಂಬ ಅಷ್ಟಕಂಬದ ಮನೆಯೊಳು ನಾಲ್ಕುಗುಣದ ಚೌಕಿಯನಿಡುವೆ1ವೃತ್ತಿಉದಾಸೀನಕೆ ನಿರ್ಗುಣವಾದಸುತ್ತ ರೇಖೆಯ ಬರೆದು | ಚಿತ್ತವೆಂಬಷ್ಟದಳದಕಮಲದೊಳಿಷ್ಟಮೂರ್ತಿಯ ಧ್ಯಾನಿಸುವೆ2ವೇದಾದಿ ಕಾರಣದಿ ಉಪನಿಷದಾದಿಅರ್ಥದಿ ಶಿರಸಾಮೇದಿನಿ ಮೊದಲಾದತತ್ತ್ವಭೂಷಣದಿಂದ ಆದಿನಾಥನ ಪೂಜೆಯ3ಪ್ರವೃತ್ತಿ ಸ್ಥಾನದಲ್ಲಿ ಫಣಿಯಲ್ಲಿ ನಿವೃತ್ತಿ ವಿಭೂತಿಯುನಿರ್ವಂಚನೆಯಾದ ಆಚಮನ ಕೊಡುವೆನುಸರ್ವಾತ್ಮ ಗುರುಮೂರ್ತಿಗೆ4ಭಕ್ತಿಯ ಜಲದಿಂದಲಿ ಸದ್ಗುರುವಿನನಿತ್ಯಚರಣತೊಳೆದು |ಮುಕ್ತಿಯ ಪಾವನ ಮಾಡುವ ಗುರುಪಾದ ತೀರ್ಥವಂದಿಸಿಕೊಂಬುವೆ5ಸದ್ವಾಸನೆ ಗಂಧವ ಶ್ರೀಗುರುವಿಗೆ ಚಿದ್ ವೃತ್ತಿಯಕ್ಷತೆಯು |ಸದ್ಭಾವದಿಂದಲಿ ತೋರುವ ಪರಿಮಳಮದ್ಗುರುವಿನ ತನುವಿಗೆ6ಮೂರು ಮಾತ್ರೆಯ ಹೊಸೆದು | ನಿರ್ಗುಣವಾದ ಧಾರವಶಿವಸೂತ್ರಕ್ಕೆ | ತೋರುವ ವಿಶ್ವಚರಾಚರ ಪುಷ್ಪದ ಹಾರಕೊರಳಿಗೆ ಹಾಕುವೆ7ನಾನೆಂಬ ಧೂಪ ಸುಟ್ಟು ಸದ್ಗುರುವಿಗೆ ಜ್ಞಾನದೇಕಾರತಿಯು |ಬೋನ ನೈವೇದ್ಯ ಜೀವದ ಭಾವವರ್ಪಿಸಿ ಜ್ಞಾನಕರೋದ್ವರ್ತಿಯ8ವಾಚ್ಯಾರ್ಥ ತಂಬೂಲವಾ ಸದ್ಗುರುವಿಗೆ |ಲಕ್ಷ್ಯಾರ್ಥವೆ ದಕ್ಷಿಣಾ ಲಕ್ಷ್ಯಾತೀತಗೆ ಮಂಗಳಾರತಿಬೆಳಗುವೆಅಕ್ಷಯಮಂತ್ರಪುಷ್ಪ9ಸಂತ ಸನಕಾದಿಕರೂ ಸುರರೆಲ್ಲ ಅಂತರಿಕ್ಷದಿ ಬಂದರು |ತಂತಿ ಮದ್ದಳಿ ತಾಳ ಗೀತ ಶಂಖದ ವಾದ್ಯತಿಂತಿಣಿಯಲಿ ಕುಣಿಯುತ10ಅದ್ವೈತಸಾಷ್ಟಾಂಗವಾ ಸದ್ಗುರುವಿಗೆ | ಚಿದ್ಬೋಧದಿಎರಗಲು ಶುದ್ಧಿ ಸಿದ್ಧಿಗಳೆಂಬ ಚರ್ಯವ ತೋರುವಮುದ್ರೆ ಶ್ರೀ ಗುರುಗಿಟ್ಟೆನು11
--------------
ಜಕ್ಕಪ್ಪಯ್ಯನವರು