ಒಟ್ಟು 274 ಕಡೆಗಳಲ್ಲಿ , 71 ದಾಸರು , 256 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನುಜಾ ಹಿಡಿ ದಾರಿ ದಾರಿ ದಾರಿ ದಾರಿ | ಪ್ರಾಣಿ ಹಿಡಿ ದಾರಿ ದಾರಿ ದಾರಿ ದಾರಿ ಪ ದೃಢಭಾವದಿಂದಾ | ಪಡೆದು ಸದ್ಬೋಧಾ | ಒಡನೆ ಸದ್ಗುರು ಪಾರಾ | ಸಾರಿ ಸಾರಿ ಸಾರಿ ಸಾರಿ 1 ಚಾರು ಭಕುತಿಯಾ | ದಾರಿ ನಿಶ್ಚಯಾ | ಆರು ಅರಿಗಳ ಕೈಯ್ಯಾ | ಮೀರಿ ಮೀರಿ ಮಮೀರಿ ಮೀರಿ 2 ತನುಧನ ಬೆರೆದು | ಋಣವೆಲ್ಲ ಮರೆದು | ಕ್ಷಣದೊಳೆಲ್ಲಡಗುವದು | ತೋರಿ ತೋರಿ ತೋರಿ ತೋರಿ 3 ಸ್ವಾನಂದ ವಿರಹಿತಾ | ದಿನಗಳೆವರೆ ವ್ಯರ್ಥಾ| ಮಾನವಜನ್ಮದಿ ಮತ್ತೆ | ಬಾರಿ ಬಾರಿ ಬಾರಿ ಬಾರಿ 4 ಸಾರಥಿ | ತೋರಿ ತೋರಿ ತೋರಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಹಿಮೆ ನೋಡಿರೈ ರಾಯರ ಮಹಿಮೆ ಪಾಡಿರೈ ಪ ಜಲಜನಾಭನೊಲುಮೆ ಪಡೆದು ಇಳೆಯೊಳು ಪ್ರಖ್ಯಾತರಾದ ಅ.ಪ ರಾಘವೇಂದ್ರ ಯತಿಗಳೆಂದು ಬಾಗಿ ನಮಿಸುವವರ ಮನದ ರಾಗ ದ್ವೇಷಾದಿಗಳ ಕಳೆದು ನೀಗಿಸುವರೊ ಭವದ ಬಂಧ 1 ತಾಳ ತಂಬೂರಿಪಿಡಿದು ಭೋಗಶಯನನನ್ನು ಭಜಿಸಿ ಕೂಗಿ ಪಾಡುತಿರಲು ನಲಿದು ಬೇಗ ಪಾಲಿಸುತಲಿ ನಲಿವ2 ದೇಶದೇಶದವರು ಬಹಳ ಕ್ಲೇಶಪಡುತ ಬರಲು ಅವರ ಕ್ಲೇಶಗಳನು ಕಳೆದು ಪರಮ ಉ- ಲ್ಲಾಸ ನೀಡಿ ಪೊರೆಯುವಂಥ 3 ಸೀತಾಪತಿಯ ಪೂಜಿಸುತಲಿ ಖ್ಯಾತರಾದ ಯತಿಗಳನ್ನು ಪ್ರೀತಿಯಿಂದ ಸೇವಿಸುವರ ಪಾತಕಗಳ ಕಳೆದು ಪೊರೆವ 4 ಗಳದಿ ಹೊಳೆವ ತುಳಸಿ ಮಾಲೆ ಹೊಳೆವ ನಗೆಯ ಮುಖದ ಭಾವ ಕಮಲನಾಭ ವಿಠ್ಠಲನೊಲಿಸಿ ಹಲವು ವಿಧದಿ ಪೂಜಿಸುವರು5
--------------
ನಿಡಗುರುಕಿ ಜೀವೂಬಾಯಿ
ಮಾಕಾಂತೆಯರಸನ ತೋರೆನಗಮ್ಮ ಸಾಕುವ ಸರಸನ ತೋರೆ ಪ. ಕಣ್ಣೆರಡು ಸಾಸಿರುಳ್ಳವನಂಗದಿ ಕಣ್ಣಮುಚ್ಚಿ ಮಲಗಿಪ್ಪನ ಹೊನ್ನು ಮಣ್ಣಿನ ರಾಶಿಯಿಂದ ಕೂಡಿಪ್ಪನ ಮಣ್ಣ ಕೂಡಿದ ದಿವ್ಯಕಾಯನ 1 ಮಣ್ಣಿನ ದೇವರ ಮುಖದಿಂದ ಮಣ್ಣಿಗೆ ಸೆಣಸುವರ ಭುಜದಿಂದ ಮಣ್ಣ ಪಾ(ನಾ?)ಡುವರ ತೊಡೆಯಲ್ಲಿ ಮೂಡಿ ಮತ್ತೆ ಮಣ್ಣ ಚರಣದಿ ಪುಟ್ಟಿಸಿದನ 2 ಕಣ್ಣ ಮುಚ್ಚದನ ಕಣ್ಣ ತೋರದನ ಹೆಣ್ಣಾಳಿನುರುಬಿನಲಿ ಮುಕ್ಕಣ್ಣನ ಮಣ್ಣನಳೆದು ಮಣ್ಣಿನರಸನೊರೆಸಿದ ಮಣ್ಣಿನ ಮಗಳನಾಳಿದನ 3 ಮಣ್ಣ ಪೊತ್ತನಧರಿಸಿದ ಚಿಣ್ಣನ ಮಣ್ಣ ಮೆದ್ದ ಸಣ್ಣ ಬಾಯೊಳು ಮಣ್ಣನೆ ತೋರಿದ ನಂದನರಾಣಿಗೆ ತಲ್ಲಣ ಹಬ್ಬವ ಕೊಟ್ಟ ಧೀರ4 ಕನ್ನಗಳ್ಳರ ಕೊಂದು ಕಣ್ಣಿಲ್ಲದವರಿಗೆ ಕಣ್ಣ ತರಿಸಿಕೊಟ್ಟ ಚದುರನ ಕಣ್ಣಿಲ್ಲದವನಿಗೆ ಕಣ್ಣ ಕೊಟ್ಟನಂತ ಕಣ್ಣುಳ್ಳ ರೂಪವ ತೋರ್ದನ 5 ಹೆಣ್ಣ ಮೋಹಿಸುವನ ಸುಟ್ಟುರಿ- ಗಣ್ಣನ ಮರುಳು ಮಾಡಿದನ ಹೆಣ್ಣನುಂಗುಟದಿ ಪಡೆದು ತಮ್ಮಣ್ಣನ ಮಣ್ಣಿನೊಡೆಯ ಮಾಡಿಸಿದನ 6 ಮಣ್ಣಿಗಾಗಿ ಬಂದ ಮಣ್ಣನಾಳಿದ ದುರ್ಜನ ದಾನವರ ಕೊಂದನ ಹೆಣ್ಣು ಮಣ್ಣೊಲ್ಲದ ವಾದಿರಾಜನಿಗೆ ಪ್ರಸನ್ನನಾದ ಹಯವದನನ 7
--------------
ವಾದಿರಾಜ
ಮಾಡಲೋ ಹರಿಪಾದ ಭಜನಿ| ಮನವೇ ನೀ| ಪಾತಕ ಓಡಿಸಿ ಕಳೆವದು| ಕಾಡಿಗೆ ಕೊಂಡಾ ವಾಡಬನಂತೆ ಪ ಸಿಕ್ಕದು ನರದೇಹಲಿಂದು|ಜನಿಸಿ ಬಂದು| ಪುಕ್ಕಟೆ ನೀಗುವದು ಕುಂದು| ಅಕ್ಕರದಲಿ ವಿಷಯಕ್ಕೆಳಿಸುತಾ|ಭವ| ದಿಕ್ಕಲು ಸಾರುತ ಠಕ್ಕಿಸಿ ಕೊಂಬರೆ 1 ಸಂತರ ಸಹವಾಸ ಮಾಡೀ|ಕರುಣ ಬೇಡಿ| ಅಂತರ ಸುಖವನು ಕೂಡಿ| ತಂತು ವಿಡಿದು ನಿಶ್ಚಿಂತದಿ ಘನ|ವಿ| ಶ್ರಾಂತಿ ಪಡೆದು ಅನಂತನ ಪಾಡುತ2 ಭಕುತಿಯ ಸವಿಸಾರವೆಲ್ಲಾ|ಬಲ್ಲವನೇ ಬಲ್ಲಾ| ಮುಕುತಿಯೊಳಗೆ ಸುಖವಲ್ಲಾ| ಪ್ರಕಟದಿ ಮಹಿಪತಿ ಮಗುವಿಗೆ ಭೋಧಿಸಿ| ತಗಬಗಿ ಬಿಡಿಸಿದ ನಗೆ ಮೊಗದಿಂದ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾತಾನ್ನಪೂರ್ಣೆ ಮಾಮಮಾಪರ್ಣೆ ಪ ಪಾತಕವನು ಕಳೆದು ಪಾದಸೇವೆಯ ನೀಯೆ ಅ.ಪ ಮಾನಸವನು ನಿರ್ಮಲ ಮಾಡಿ ಕೈಪಿಡಿಯೇ 1 ಧನ್ಯನ ಮಾಡೇ ಕರುಣದಿ ನೋಡೇ ಅನ್ಯರಿಗೀಪರಿ ಬನ್ನಪಡಲಾರೆನು 2 ರಾಯ ಶಂಕರನು ಭವಜಲಧಿಯೊ ಳಾಯಾಸಪಡುತಲಿ ನೋಯುತಲಿರುವೆನು 3 ಭೂಸುರವಿನುತೆ ದೇವಾಸುರ ಪೂಜಿತೆ 4 ಪ್ರೇಮದಿ ಭಿಕ್ಷ ನಿನ್ನಿಂದ ಪಡೆದು ತಾಮರಸಾಕ್ಷ ಬಲಿಯ ಗೆದ್ದವಾಮನ ಶ್ರೀ ಗುರುರಾಮ ವಿಠಲ ಸ್ವಾಮಿ 5
--------------
ಗುರುರಾಮವಿಠಲ
ಮಾನವ ಜನುಮ ನಾನು ಯಾರೆಂಬ ಖೂನವಿಲ್ಲದೆ ಪ ಕಾಲನಾಜ್ಞೆಯನ್ನು ಪಡೆದು ಸೂಳ ಎಣಿಸಿ ಜಗಕಿಳಿದು ಜಾಲಹಾಕಿ ಜವನಗೊಲಿದು ಶೂಲಕ್ಹಾಕುವ ಮಾರಿಗೊಲಿದು 1 ತಂದ ಪುಣ್ಯವನ್ನು ಕೆಡಿಸಿ ಮಂದಿಮಕ್ಕಳನ್ನು ಬಿಡಿಸಿ ಮಂದನೆನಿಸಿ ಕುಂದುಹೊರೆಗೆ ಬಂಧಕ್ಕೆಳೆವ ರಂಡೆನ್ಹೊರೆಸಿ2 ಜನನಿಜನಕರನ್ನು ಜರೆದಿ ಮನೆಯ ಹೆಂಡಿರ ಮಾನ ಕಳೆದಿ ಬಿನುಗು ಸೂಳೆಗೆ ವಶನಾದಿ ಬಿನುಗರೊಳಗೆ ಬಿನುಗನಾದಿ 3 ನೀಗಿದಿ ಕುಲಶೀಲತೆ ಮುದಿ ಗೂಗೆಯಂದದಿ ದಿನಗಳೆದಿ ಭಾಗವತದ ಭಾಗ್ಯ ಮರೆದಿ ಕಾಗೆನುಂಗಿದ ಹೊಲೆಯನಾದಿ 4 ಸಾಧು ಸುಜನಬೋಧ ಜರೆದಿ ವೇದವಾಕ್ಯ ಮೀರಿ ನಡೆದಿ ಶೋಧಿಸಿ ಸಮಯ ತಿಳಿಯದ್ಹೋದಿ ಆದಿ ಶ್ರೀರಾಮಗ್ಹೊರತಾದಿ 5
--------------
ರಾಮದಾಸರು
ಮಾನವ ನಿನ್ನಾ | ಪಡೆದು ಕೊ ಸದ್ಗತಿಯನು ಪ ತಡಿಯದೇ ಸದ್ಗುರು ಅಡಿಗಳ ಪೂಜಿಸಿ | ಒಡನೆ ಭವಾಂಭವಾಂಬುಧಿ ಥಡಿಯವ ಸಾರೆಲೋ ಅ.ಪ ಪತ್ರೇಂದ್ರವಾಹನನು | ಮಣಿಗಣ ಸೂತ್ರದಂದದಿ ಜೀವನು | ಚಿತ್ರ ವಿಚಿತ್ರದಲಿ ಅಡಿಸುವ | ಗು | ಣತ್ರಯ ವಾದಲಿ | ಕಳತ್ರ ಸುಮಿತ್ರ ಸಮಂಧ | ಧತ್ರಿಲಿ ಮಾಯ ಚರಿತ್ರವಿದೆಂದು 1 ತಾನಾರು ತನುವಾರದು ತನುವಿನ | ತಾನೀ ಸಂಮಂಧವಾರದು | ಜ್ಞಾನಿಗಳನು ಮತದಿ ತಿಳಿದು ನೋಡು | ಸ್ವಾನುಭವದ ಬೋಧದೀ | ಹಾನಿ ಯಶ _ ಸುಖ ಮಾನಾಪಮಾನವು | ಮಾನವರಿಗೆ ಪ್ರಾಚೀನ ಫಲೆಂದು 2 ಹಿಂದಾದ ನೆನಹಿಸದೇ ವಾಸನೆಗಳ | ಮುಂದೇನು ಕಾಮಿಸದೇ | ಕ | ನಸಿನಾನಂದ ವಿದೆಂದು ಭಾವಿಸೀ | ತಂದೆ ಮಹಿಪತಿ ಕಂದಗ ಸಾರಿದ | ದ್ವಂದ್ವಗೆಲಿದು ಗೋವಿಂದ ನೆನೆಯುತ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾನವಜನುಮ ಖೂನವರಿಯದೇನು ಏನುಕೆಡುವಿಯೋ ಏನುಕೆಡುವಿಯೋ ಜ್ಞಾನವಿಲ್ಲದೆ ಪ ನಾನಾವಿಧದಿ ಅನ್ಯರನ್ನು ಏನುಕಾರಣ ಜರೆದು ಸುಳ್ಳೆ ಹಾನಿಯಾಗಿ ಪೋಗುವಿಯೋ ಅ.ಪ ಅವನ ಸಂಪದ ನಿನಗೇನು ನಿನ್ನಪದವಿ ಅವನಿಗೇನೋ ಅವನ ಇವನ ಭವನ ಸುದ್ದಿ ನೆವನಗೈದು ದಿವನಿಶಿಯು ಸವೆಯದಾಡಿ ಭುವನಸುಖವ ಸವಿಯದೆ ಜವನ ಭವನ ಕಾಣುವಿ 1 ಶೀಲಜನರ ಸಂಗಡಾಡೋ ಮೂಲತತ್ವವಿಚಾರಮಾಡೋ ಕೀಳನಾಗಿ ಹಾಳು ಭ್ರಮೆಯೊಳು ಬಿದ್ದು ಮೂಳನಾಗಿ ಕಾಲನಾಳಿನ ದಾಳಿಗೆ ಸಿಲ್ಕಿ ಗೋಳಿನೊಳು ಬೀಳುವಿಯೊ 2 ಪಾಮರನಾಗಬೇಡೆಲವೋ ಪಾಮರ ಮನದ ಮಲವತೊಳೆಯೋ ಪ್ರೇಮ ಮೋಹಗಳನು ತುಳಿದು ಕಾಮಜನಕ ಸ್ವಾಮಿಶ್ರೀರಾಮಮಂತ್ರ ಪಠಣಮಾಡಿ ಆ ಮಹಾ ಮುಕ್ತಿ ಪಡೆದು ಬಾಳೊ 3
--------------
ರಾಮದಾಸರು
ಮಾಯಾ ನೋಡಮ್ಮ ಶ್ರೀಯರಸ ನೀಲಮೇಘ ಛಾಯ ಕೃಷ್ಣರಾಯ ತನ್ನ ಪ. ಕಾಶೀಶ ಮೃತ್ಯುಂಜಯಾಯಿ ವಿಷವಲ ಭಂಜನಾದಿಗಳೀತನಿಗಂಜಿ ಕೊಂಬುವರು ಮಂಜುಳಾತ್ಮ ನಿಜಕರಕಂಜದಿಂದ ಪಾದವೆತ್ತಿ ನಿರಂಜನ ತಾ ಲೀಲೆಯಿಂದ 1 ಪುಟಿತಹಾಟಕ ಮಣಿಘಟಿತ ಕಂಕಣಾಂಗದ ಕಟಿಸೂತ್ರಗಳನಿಟ್ಟು ನಟನಂದದೀ ವಟಪತ್ರಶಾಯಿವೋಷ್ಠಪುಟದಿ ಪಾದವನಿಕ್ಕಿ ಕಟಬಾಯೊಳಮೃತವಾ ಸ್ಫುಟವಾಗಿ ಸುರಿಸುತ 2 ಲಿಂಗದೇಹಭಂಗತಾಗಿನಂಗವನ್ನು ದೂರಗೈಸಿ ತುಂಗಮತಿವಂತ ಋಷ್ಯ ಶೃಂಗಾದಿಗಳು ನಿತ್ಯ ಮಂಗಳ ದೇವಿಯರ ಗಂಗೆಯ ಪಡೆದು ಶಿವಂಗ ಶುದ್ಧಿಗೈಸಿ 3 ಗೋಪಿ ಗೃಹ ಕರ್ಮರತಳಾಗಿರಲು ಒಮ್ಮನದಿಂದ ಅಮ್ಮರ ಗಣಾರಾಧಿತ ಕ್ಷಮೆಯನಳದ ಪಾದ ಸುಮ್ಮಗೆ ಕರದೊಳೆತ್ತಿ ಖಮ್ಮಗಿಹದೆಂದು ತನ್ನ 4 ಕರಪಲ್ಲವಾಧೃತ ಲೋಕವಂದ್ಯರೂಪ ಫಣಿ- ಶೇಖರಾದ್ರಿವಾಸ ಭಕ್ತನಾಕ ಭೂರುಹ ನೀಕರಿಸಿ ದುರಿತವ ಸೋಕದಂತೆ ನಮ್ಮನೀಗ ಸಾಕುವ ಪರಮ ಕರುಣಾಕರ ಶ್ರೀ ಕೃಷ್ಣ ತನ್ನ 5
--------------
ತುಪಾಕಿ ವೆಂಕಟರಮಣಾಚಾರ್ಯ
ಯತಿರಾಜ ಯತಿರಾಜ ಮಾಧವೇಂದ್ರ ಗುರು ಸಾರ್ವಭೌಮ ಪ್ರಭು ಪ ಧಾರುಣಿಯೊಳಗಪಾರವಾದ ವಿದ್ಯಾ ವಾರಿಧಿಚಂದ್ರಮ ವೈರಾಗ್ಯಮೂರುತಿ1 ಶಿಷ್ಟಶಿರೋಮಣಿ ಕಟ್ಟಳೆಯಿಂದ ಬಲು ದಿಟ್ಟತನದಿ ಯತಿಪಟ್ಟವೇರಿದನೀತ 2 ಭೇದದಿಂದತಿಶಯ ವಾದಿಪ ಮಹದು ರ್ವಾದಿಗಳನು ಗೆದ್ದು ನೀ ಸಾಧಿಸಿದಧಿಕಾರ 3 ಅಧಮರ ಉಪಟಳಕೆದೆಪೊಡೆಯದೆ ನಿಜ ಸದಮಲ ವೈಕುಂಠಪದವಿಗೆ ನಡೆದನು 4 ಮಧ್ವಶಾಸ್ತ್ರ ಪ್ರಸಿದ್ಧ ಪದ್ದತಿಗಳ ಸಿದ್ಧಿಪಡೆದು ಪರಿಶುದ್ಧನೆನಿಸಿಕೊಂಡ 5 ಗುರುವೆಂದೆನಿಸಿ ಭೂಸುರರನುದ್ಧರಿಸೀತ ಸ್ಥಿರವಾಗಿ ನಿಂತನು ಮೆರೆವ ಬುದ್ಧಿನ್ನಿಯೊಳು 6 ಪರಮಭಕ್ತಿಯಿಂದ ನಿರುತ ಸೇವೆಗೈದು ವರವ ಬೇಡಿರೆಲೋ ಭರದಿ ಕೊಡುವ ಮೆಚ್ಚಿ 7 ಆಸೆರಹಿತನನುಮೇಷ ಪೂಜಿಸಿರೊ ದೋಷ ದಾರಿದ್ರ್ಯವ ನಾಶಮಾಡುವನು 8 ಸ್ವಾಮಿ ಕೃಷ್ಣ ಶ್ರೀರಾಮನಾಮಾಮೃತ ಪ್ರೇಮದಿಗರೆಯುವ ಕಾಮಧೇನು ಸತ್ಯ 9
--------------
ರಾಮದಾಸರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ
ಯಾತರಸುಖ ಸುನೀತಿಯಿಲ್ಲದ ಮಹ ಪಾತಕ ಹೊಲೆಯರಿಗೆ ಪ ಭೂತಳದಲಿ ಬಂದ ರೀತಿಯನರಿಯದೆ ಆತುರದಲಿ ಬಿದ್ದ ನೀತಿಗಡುಕರಿಗೆ ಅ.ಪ ಉತ್ತಮರ್ವಚನದ ಅರ್ಥವನರಿಯದೆ ಕತ್ತೆಯಂತೆ ಕೂಗಿ ಚಿತ್ತಕ್ಕೆ ಬಂದಂತೆ ವರ್ತಿಸಿ ಭವದಿ ಅನರ್ಥಕ್ಕೆ ಗುರಿಯಾಗಿ ಸತ್ಯಜನಕೆ ಕುಂದುತ್ತರಗಳನ್ನಿತ್ತು ಮೃತ್ಯು ಬಲೆಗೆ ಬೀಳ್ವ ಕತ್ತೆ ಮನುಜರಿಗೆ 1 ನಶಿಸಿ ಪೋಗೋ ಮಾಯ ವಿಷಯಲಂಪಟವೆಂಬ ಮುಸುಕಿನೊಳಗೆ ಸೊರಗಿ ನಿಶಿದಿವಯೆನ್ನದೆ ಪುಸಿಯ ಸಂಸಾರವೆಂಬ ವ್ಯಸನದೊಳಗೆ ಕೊರಗಿ ವಸುಧೆಸುಖಕೆ ಮೆಚ್ಚಿ ಮಸಣ ಬುದ್ಧಿಯಿಂದ ಪುಸಿಯ ಬಳಸಿ ಕಾಲನೊಶವಾಗುವವರಿಗೆ 2 ಶೋಧಿಸಿ ನಿಜಪದ ಸಾಧನೆಯೊಳಗಿರ್ದು ಸುಜನ ಸು ಬೋಧ ಪಡೆದು ಭವಬಾಧೆ ರಹಿತರಾಗಿ ಭೇದರಹಿತ ಮಹದಾದಿ ಶ್ರೀರಾಮನ ಪಾದ ನಂಬಿ ಮುಕ್ತಿ ಸಂಪಾದಿಸದವರಿಗೆ 3
--------------
ರಾಮದಾಸರು
ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ ಬೇಗ ವಿಷ್ಣುಪದವ ತೋರುಸುತ್ತ ಬಂತಿದೆಕೊ ಪ ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತ ವಾಯುಗತಿಯಂತೆ ಗಮಿಸುತಲಿ ಹೇಯ ಕಾಮಾದಿಗಳೆಂಬ ರಜವನಡಗಿಸುತ ನಾಯಕನುಪೇಂದ್ರನಾಜ್ಞೆಯ ಪಡೆದು 1 ಅಂಗಜನಯ್ಯನೆ ಪರನೆಂದು ಫುಡಿಫುಡಿಸುತ್ತ ಕಂಗಳೆಂಬ ಮಿಂಚನೆ ನೆರಹಿ ಲೋಕದಿ ಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯ ಭಂಗಿಸಿ ಸುರಪಥವ ತೋರಿಸುತ್ತ 2 ಸಿರಿಯರಸನ ಸಮ್ಯಕ್ಜ್ಞಾನವೆಂಬ ಪೈರಿಗೆ ಬೇರುಬಿಡಿಸಿ ಹರಿಕಥೆಯೆಂಬ ಮಳೆಗರೆದು ನೆರೆ ಶಿಷ್ಯಮನವೆಂಬ ಕೆರೆತುಂಬಿಸಿ ಕರಗಳೆಂಬ ಭರಕೋಡಿ ಹರಿಸುತ ವಿಜಯೀಂದ್ರನ ಗುರು 3
--------------
ವಿಜಯೀಂದ್ರತೀರ್ಥರು
ರಂಗವಲಿದ ಗುರುರಾಯರ ನೀ ನೋಡೋ | ಅಂತರಂಗದಿ ಪಾಡೋ ಭಂಗ ಬಡಿಪ ದುರಿತಂಗಳ ಈಡ್ಯಾಡೋ ಸತ್ ಸಂಗವ ಬೇಡೋ ಅ.ಪ ಹಿಂದೆ ಮೂರೊಂದವತಾರ ಧರಿಸಿದಾತ ಇದು ಹಿರಿಯರು ಮಾತ | ಬಂದ ಮರಳಿ ಮಹೀತಳದಿ ಜಗನ್ನಾಥ ದಾಸಾರ್ಯ ಪ್ರಖ್ಯಾತ || ತಂದೆ ನಮಗೆ ತಿಳಿ ಎಂದೆಂದಿಗು ಎಂದೆಂದಿಗು ಈತ ಆನಂದ ಪ್ರದಾತ 1 ಬಣ್ಣಿಸಲೆನಗಿನ್ನೊಶವೆ ಇವರ ಚರಿಯ ಕಣ್ಣುಗಳಿಂದಲಿ ಕಾಣುತ ಪೂರ್ಣಯ್ಯತಾನಾಗಿ ವಿಧೇಯ ಧನ್ಯನೆನಿಸಿ ಸತ್ಪುಣ್ಯ ಪಡೆದುದರಿಯ ಪುಸಿಯಲ್ಲವೊ ಖರಿಯ 2 ದಾಸವರ್ಯರಾ ವಾಸಗೈದ ಸ್ಥಾನ ಗಯಕಾಶಿ ಸಮಾನ ಲೇಸು ಭಕ್ತಿಯಲಿ ಸೇವಿಸಲನುದಿನ ಕೊಡುವುದುಸುಜ್ಞಾನ ಶ್ವಾನ | ಯಾತಕೆ ಅನುಮಾನ 3 ಸಾರ ನಿರ್ಮಿಸಿರುವ ದೇಹಾಖ್ಯ ರಥವ ಸೊಗಸಿಲಿಂದ ತಾನೇರಿ ನಗುತ ಬರುವ ಚತುರ್ದಿಕ್ಕಿಲಿ ಮೆರೆವ ಮಿಗೆ ವಿರೋಧಿಸುವ ಪಾಪಿಗೆ ಪಲ್ಮುರಿವ ಪೊಗಳುವರಷತರಿವ 4 ಶಾಮಸುಂದರನ ಸುಕಥಾಮೃತಸಾರ | ರಚಿಸಿದ ಬಹುಚತುರ ಪಾಮರ ಜನರ ಪ್ರೇಮದಿ ಉದ್ಧಾರ ಮಾಡಲು ಗಂಭೀರ ಶ್ರೀಮಾನ್ ಮಾನವಿಕ್ಷೇತ್ರನೆ | ನಿಜಾಗಾರವೆಂದೆನಿಸಿದ ಧೀರ 5
--------------
ಶಾಮಸುಂದರ ವಿಠಲ
ರಥವನೇರಿದ ರಥಿಕನಾರೇ ಪೇಳಮ್ಮಯ್ಯ ಕಥಿತಧ್ಯಾತ ಸಂಸ್ತುತ ವಿತತಾನತ ಹಿತಕರ ದಿವಿಷÀತ್ಪತಿ ಕಾಣಮ್ಮ ಪ ಕೋಟಿ ಭಾಸ್ಕರ ಪ್ರಭಾಟೋಪದಿ ರಾಜಿಸುವ ಪೇಳಮ್ಮಯ್ಯ ಅ.ಪ. ತಾಟಂಕಯುತ ವಧೂಟಿಯರಿಕ್ಕೆಲದಲಿಹ ನೋಡಮ್ಮಯ್ಯ ಆಟದೆ ಕುರುಜ ಮಹಾಟವಿ ಸವರಿ ಕಿ ರೀಟಯ ಸಲಹಿದ ಖೇಟವಾಹನನೇ ಕೇಳಮ್ಮಯ್ಯ 1 ಭುಜಗರಾಜ ಫಣಿಮಣಿ ಮಂಡಲ ಮಂಡಿತನೇ ನೋಡಮ್ಮಯ್ಯ ವಿಜಯವರದ ಅರಿಗದಾಂಬುಜಧರ ಭುಜನೇ ನೋಡಮ್ಮಯ್ಯ ಗಜಚರ್ಮಧರಾದ್ಯನಿಮಿಷಗಣಸೇವಿತನ ನೋಡಮ್ಮಯ್ಯ ಅಜನ ನಾಭಿಯಲಿ ಪಡೆದು ಚರಾಚರ ಸೃಜಿಸಿ ಪೇಳ್ದ ನೀರಜಲೋಚನ ಕಾಣಮ್ಮ 2 ಏತಾದೃಶ ಮಹಾಮಹಿಮ ರಮಾವಲ್ಲಭನೆ ಪೇಳಮ್ಮಯ್ಯ ಶ್ವೇತ ದ್ವೀಪಾನಂತಾಸನ ವೈಕುಂಠನುಳಿದು ಪೇಳಮ್ಮಯ್ಯ ವೀತಭಯ ಜಗನ್ನಾಥವಿಠಲ ಬರಲೇಕೆ ಪೇಳಮ್ಮಯ್ಯ ಭೂತಳ ಜನರಭಿಲಾಷೆ ಸಲಿಸಲು ವಾತಾಶನ ಗಿರಿಗಿಳಿದ ಕಾಣಮ್ಮಯ್ಯ 3
--------------
ಜಗನ್ನಾಥದಾಸರು