ಒಟ್ಟು 212 ಕಡೆಗಳಲ್ಲಿ , 64 ದಾಸರು , 193 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕು ಸಾಕು ಇನ್ನು ಕಷ್ಟ ಅನೇಕಾ ಬೇಕು ಬೇಕು ನಿನ್ನ ಕರುಣ ಪ ಹಿಂದಿನಿಂದ ಎನ್ನ ಹೊಂದಿಬಂದ ದೋಷದಿಂದ ನಾನು ಬಹು ಬಳಲುತಲಿ ----------------------- ಎಂದು ಎಂದು ನಿಮ್ಮಂದ ದ್ವಯಪಾದ ಹೊಂದುವೆ ನಾನೆಂದೆನುತಲಿ----- ಬೆಂದುನೊಂದು ಈ ಚಂದದಿ ಈ ಪರಿಯಿಂದ ನಿನ್ನನಾ ಹೊಗಳುತಲಿ--- ಬೆಂದು ನೊಂದೆ ನಿನ್ನ ಮಂದಿರ ಸೇವಕನೆಂದು ಬಹಳ ಗೋವಿಂದ ಕೃಪಾಳು 1 ಘೋರ ರಾಕ್ಷಸ----ರಿದ ಅವರ ಸಂಹಾರವ ಮಾಡಿದ ಬಲವಂತ ------------------ ವೀರಶೂರ ಗಂಭೀರ ಕೃಪಾಕರ ವಾರಿಜೋದ್ಭವನ ಪಡೆದಂಥಾ ಸಾರಿಸಾರಿ ನಿಮ್ಮ ಸ್ಮರಿಸುವವರಿಗೆ ಸರ್ವ ಸಂಭ್ರಮವು ಮಾಡುವಂಥಾ ಕೀರುತಿ-----ರನು ಯನುತಲಿ ------ನಿಮ್ಮ ಸರ್ವೋತ್ತಮನಂಥಾ 2 ಗಾಧೆ ಬೋಧೆ ಗೊಳಗಾದೆ ಈ ಪರಿ ವೇದಾಂತ---ದೊಂದರಿಯೆ ಸಾಧು ಸಾಧಕರ ಬೋಧೆಗಳೆಂಬುವ ಸದಾ ಕರ್ಣದಿ ಕೇಳರಿಯೆ----ದರೆ ಮಾಧವ ಮಧುಸೂದನ ಧೊರಿಯೆ ವೇದ ಆದಿ ಅಗಾಧ ಗೋಚರನೆ ಪತಿ 'ಹೆನ್ನ ವಿಠ್ಠಲ’ ಹರಿಯೆ 3
--------------
ಹೆನ್ನೆರಂಗದಾಸರು
ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಪ ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಅ ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ - ರಿಕ್ತಹಸ್ತದಿಂದ ಮನೆಯ ಸೇರುವೆ - ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ - ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ 1 ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ - ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ2 ಮಾಧವ - ರಂಗಯ್ಯ ರಂಗ3
--------------
ಕನಕದಾಸ
ಸಾಕೆಲೊ ಶ್ರೀರಂಗನಾಥ ಲೋಕದಾಟವೂ ಪ ಬೇಕು ನಿನ್ನಪಾದ ಭಜನೆಯೇಕದಾಟವೂ ಅ.ಪ ಕಾಕು ಮನುಜರೊಡನೆಯೆನ್ನಾ ನೂಕಲ್ಯಾತಕೋ ನೀ ನೇಕನಾಥನೆಂಬೊ ಬಿರುದು ಬೇಕು ಮಾಡಿಕೊಳ್ಳೊ 1 ಅಂಧಕಾರವಾಧೀತಲ್ಲೋ ಚೆಂದವೇನೆಲೊ ನಾ ನೊಂದೆನಲ್ಲೋ ಬಂದು ಕಾಯೊ ಇಂದಿರಾಪತಿ2 ಆರುಗಿರಿಯ ದಳದ ತುದಿಯೊಳಿರುವೊ ಶ್ರೀಗುರು ದಾರಿ ತೋರೋ ತುಲಶೀರಾಮ ದಾಸದಾಸನೂ 3
--------------
ಚನ್ನಪಟ್ಟಣದ ಅಹೋಬಲದಾಸರು
ಸಿಂಧು ಶಾಯಿವಾಸುದೇವ ನೊಂದೆನಯ್ಯ ತಾಪತ್ರಯದಿ | ಪಾಲಿಸಯ್ಯ ಹರಿಯೇ ಪಾಲಿಸಯ್ಯ ಪ ಧ್ಯಾನ ವರಿಯೆ ಜ್ಞಾನವರಿಯೆ | ಮೌನವರಿಯೆ ನಾ ನಾನಂಬಿದೆ ಹರಿಯೆ ನಾನಂಬಿದೆ 1 ಸಾರವೆಂಬೊ ಸಂಸಾರ | ಶರಧಿಯಲ್ಲಿ ಮುಳುಗಿರುವೆ ನಾರಾಯಣ ಶ್ರೀಮನ್ನಾರಾಯಣ 2 ಆಸೆಯೆಂಬ ಪಾಶಕಡಿಯೊ | ದಾಸನೆಂದು ನೀ ಎನ್ನ | ಫೋಷಿಸಯ್ಯ ಹರಿಯೆ ಪೋಷಿಸಯ್ಯ 3
--------------
ಶಾಮಸುಂದರ ವಿಠಲ
ಹರಿಯೇ ದಯಮಾಡು ಮಾಡು ಮಾಡು ಮಾಡು ಪ ಮರೆತು ಭವಾಟವಿಯಲ್ಲಿ ಬಹು ನೊಂದೆನು | ಕರುಣ ಕಟಾಕ್ಷದಿ ನೋಡು ನೋಡು ನೋಡು | ನೋಡು 1 ಹರಿಸಿ ತ್ರಿತಾಪವ ಸ್ವಸುಖ ಬೀರುವಾ | ಚರಣದ ಭಜನೆಯ ನೀಡು ನೀಡು ನೀಡು ನೀಡು 2 ಹೃದಯ ಮಂದಿರದೊಳಗಾಡು ಆಡು ಆಡು ಆಡು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿವಾಯುಗಳು ಮೂರಕ್ಕರದ ದೇವ ಮೂರು ವಸ್ತುವ ಬೆರಸಿ ಮೂರು ಮೂರಾಗಿಸೆಯೆ ಪಾಲಿಸುವ ನಮ್ಮ ಎರಡು ವಸ್ತುವು ಸೇರಿ ದೇಹಕ್ಕೆ ಚಲನೆಯದು ಹರಿವಾಯುಗಳ ಒಲುಮೆ ದೇಹ ರಕ್ಷಕವು4 ಅವ್ಯಾಕೃತಾಕಾಶ ರೂಪದಲಿ ತಾನಿಹನು ವಿಶ್ವಂಭರಾತ್ಮಕನು ದೇವ ನಿಜದಿಂದ ಸೃಷ್ಟಿಗವನೇ ಮೂಲ ವಾಸುದೇವಾತ್ಮಕನು ಮಧ್ವಹೃದಯನಿವಾಸಿ ಸರ್ವಮೂಲನವ 5 ಪೃಥಿವಿಯಪ್ ತೇಜಸ್ಸು ಮೂರು ಭೂತಾಣುಗಳು ತುಂಬಿಯಾಗಸದಲ್ಲಿ ವ್ಯಾಕೃತವದಹುದು ತುಂಬಿ ವಾಯುವಿನಣುಗಳ್ ಒಂದೆಡೆಯೆ ತಾನಹುದು ವ್ಯಾಕೃತಾಕಾಶ 6 ಆಗಸದಿ ವಾಯುವಿನ ಪರಮಾಣು ಒತ್ತಡವೆ ದೃಶ್ಯವಾಯುವು ತಾನೆ ಹರಿವುದಾಗಸದಿ ದೃಶ್ಯವಾಯುವಿನ ಪರಮಾಣುವೊತ್ತಡದಿ ನಿಜ ತೇಜವುದಯಿಸುವುದದರಲ್ಲಿ ಮೂರಿಹವು 7 ತೇಜದಿಂದಲೆ ನೀರು ಜಗಕೆಯಾಧಾರವದು ನೀರಿನಿಂದಲೆ ಭೂಮಿ ಉದಯಿಸುವದದರಿಂ ಪಂಚಭೂತಂಗಳಿವು ಭೂಮಿಯಲಿ ತೋರುವವು ಪಂಚಭೂತಾತ್ಮದ ಪ್ರಕೃತಿಯಿದು ಸತ್ಯ 8 ಇವುಗಳಿಗೆ ಒಡತಿಯಾ ಪ್ರಕೃತಿದೇವಿಯು ಸತ್ಯ ಪ್ರಕೃತಿಯೆದೆಯಲ್ಲಿರುವ ದೇವರೂ ಸತ್ಯ ಪ್ರಕೃತಿ ಪುರುಷರ ಲೀಲೆ ಮಧ್ವಮತದಾ ತಿರುಳು ಮಧ್ವ ಸದ್ಗ್ರಂಥಗಳು ಸರ್ವಮೂಲಗಳು 9 ಭೂತಕೃತ್ತೂ ಅವನೆ ಭೂತಪಾಲಕನವನೆ ಭೂತಭಾವದಲಿದ್ದು ಪ್ರೇರಕನು ಅವನೆ ಆತ್ಮಾಂತರಾತ್ಮವೆಂದೆರಡು ರೂಪಗಳವಗೆ ಹೃದಯದಾಕಾಶದಲಿ ವಾಸವಾಗಿಹನು 10 ಪಂಚಭೂತಗಳು ಪಂಚೇಂದ್ರಿಯಗಳು ಪಂಚ ಕರ್ಮೇಂದ್ರಿಯಗಳ ರಚಿಸಿ ಹರಿಯು ಪಂಚಾತ್ಮಕನು ದೇವ ಪಂಚವಾಯುಗಳಿಂದ ಪಂಚತನ್ಮಾತ್ರಗಳ ಜ್ಞಾನವೊದಗಿಪನು11 ಸುಖ ರತಿ ಪ್ರೇರಕನು ತಾನಾಗಿ ಸಿರಿವರನು ಶಾರೀರ ಪುರದಲ್ಲಿ ನೆಲೆಯಾಗಿ ಇಹನು ಬೆಳಗುತ್ತ ದೇಹವನು ಬೆಳಗಿಸುವ ದೇವತೆಗ ಳವನ ಬಳಿಯಿದ್ದು ಸೇವೆಯ ಗೈಯುತಿಹರು 12 ವಿಶ್ವ ದರ್ಶನಕಾಗಿ ವಿಶ್ವಜನರೊಳು ಕಣ್ಣಿನಲ್ಲಿ ನೆಲೆನಿಂತು ವಿಶ್ವಸಾಕ್ಷಿಯು ಸೂರ್ಯನಲ್ಲಿಯೂ ತಾನಿದ್ದು ವಿಶ್ವವನು ಬೆಳಗಿಸುತ ಜ್ಞಾನವೊದಗಿಪನು 13 ಸೂರ್ಯನೊಂದೆಡೆಯಿದ್ದು ತಾನ್ ಬೆಳಗಿ ಲೋಕವನು ತನ್ನ ಕಿರಣಂಗಳಿಂ ಬೆಳಗಿಸುವ ತೆರದಿ ಕಣ್ಣು ಮೊದಲಾದಿಂದ್ರಿಯಗಳಲಿ ತಾನಿದ್ದು ಅವುಗಳನು ಬೆಳಗಿಸುತ ರಕ್ಷಿಪನು ನಮ್ಮ14 ತೈಜಸದ ದೇವನವ ತೇಜದಾರೂಪದಲಿ ಕಂಠಗತನಾಗಿದ್ದು ದೇಹದಲಿ ಬೆಳಗಿ ಹುಲಿ ಕರಡಿ ಮೊದಲಾದ ಜಂತುಗಳ ಸೃಷ್ಟಿಸುತ ಸ್ವಪ್ನಲೋಕವನು ಮಾನಸಕೆ ತೋರಿಸುವ 15 ಪ್ರಾಜ್ಞರೂಪದ ದೇವನಪ್ಪಿ ಜೀವಾತ್ಮನನು ಮಾಯೆಯಾ ಮುಸುಕಿನಿಂದಜ್ಞಾನಬರಿಸಿ ಜೀವನಿಗೆ ತೋರದುದರಿಂದ ಪ್ರಾಜ್ಞನದಾಗಿ ಜಗಕೆ ತನ್ನಯ ಮಾಯೆಯನು ತೋರಿಸುವನು 16 ನಾಲ್ಕನೆಯ ರೂಪವದು ತುರ್ಯ ನಾಮದಲಿಹುದು ಮುಕ್ತರಿಗೆ ಮಾತ್ರವೇ ತೋರುವುದು ಪೇಳ್ವೆ ಜಾಗರಾದಿಯವಸ್ಥೆಗಳ ನಾಲ್ಕು ಪೇಳಿದನು ಮಾಯಾವಿ ಪರಮಾತ್ಮನದು ಲೀಲೆಗಳಿವು 17
--------------
ನಿಡಂಬೂರು ರಾಮದಾಸ
ಹಿಡಿ ಜ್ಞಾನಾ ಹಿಡಿ ಜ್ಞಾನಾ | ಬಿಡು ಬಿಡು ಬಿಷಯದ ಧ್ಯಾನಾ ಪ ಉತ್ತಮ ಮನುಷ್ಯ ಜನ್ಮಕೆ ಬಂದೆ |ಸತ್ಯ ಮಿಥ್ಯಾ ತಿಳಿಯದೆ ನೊಂದೆ 1 ಎರವು ಮಾಯಾ ಮರವು2 ಗುರುಭವತಾರಕ ಭಕ್ತನ ಪಾದಾ | ಪೂಜಿಸಿ ಆಲಿಸು ಬೋಧದ ನಾದಾ 3
--------------
ಭಾವತರಕರು
ಹುಟ್ಟಿ ಹುಟ್ಟಿ ಹೊಂದಲಾರೆನಯ್ಯ ಕೃಷ್ಣನೆ ುೀಕಷ್ಟವನ್ನು ಬಿಡಿಸಿ ಕಾಯಬೇಕು ಕೃಷ್ಣನೆ ಪಇಷ್ಟು ದಿವಸ ನಿನ್ನನರಿಯದಿದ್ದೆ ಕೃಷ್ಣನೆ ನೀನುದ್ಟೃುಟ್ಟು ಹುಟ್ಟದಂತೆ ಮಾಡು ಕೃಷ್ಣನೆಅ.ಪಗರ್ಭದೊಳು ನವಮಾಸ ಸಿಕ್ಕಿ ಕೃಷ್ಣನೆ ನೊಂದೆನರ್ಭಕತ್ವದಲ್ಲಿ ಮುಗ್ಧನಾದೆ ಕೃಷ್ಣನೆನಿರ್ಬಂಧವಾುತು ವಿದ್ಯದಲ್ಲಿ ಕೃಷ್ಣನೆ ಮತ್ತೆನಿರ್ಭರದ ಪ್ರಾಯದಲ್ಲಿ ಬೆರೆತೆ ಕೃಷ್ಣನೆ 1ಮದಗಳೆಂಟರಿಂದ ಮೈಯ ಮರೆತೆ ಕೃಷ್ಣನೆ ಬೇಗಹುದುಗಿ ಕ್ಲೇಶವೈದರಲ್ಲಿ ಬಿದ್ದೆ ಕೃಷ್ಣನೆವೊದಗಿ ಪಾಶವೆಂಟರಿಂದ ಬಿಗಿದೆ ಕೃಷ್ಣನೆ ಹಮ್ಮುಇದಕೆ ಮೂಲವಾುತು ಕರ್ಮದಿಂದ ಕೃಷ್ಣನೆ 2ಅರಿಗಳರುವರಿಂದ ಕೊರಗುತಿಹೆನು ಕೃಷ್ಣನೆ ಮುಂದನರಿಯದವರ ಸಂಗವನ್ನು ಮಾಡಿ ಕೃಷ್ಣನೆಉರುಳಿಬಿದ್ದೆ ವಿಷಯಕೂಪದಲ್ಲಿ ಕೃಷ್ಣನೆ ುದನುಪರಿವ ಶಕ್ತಿಯನ್ನು ಕಾಣೆನಯ್ಯ ಕೃಷ್ಣನೆ 3ಮಾಯಾಕಾರ್ಯ ದೇಹವೆನ್ನದೆಂದು ಕೃಷ್ಣನೆ ಅದುಹೇಯವೆಂದು ಕಾಣದಾದೆನಯ್ಯ ಕೃಷ್ಣನೆ ನೋಯದಂತೆ ಪೋಷಣೆಯ ಮಾಡಿ ಕೃಷ್ಣನೆ ುೀಗ ನೋಯಲಾಗಿ ಭಯವು ಜನಿಸಿತಯ್ಯ ಕೃಷ್ಣನೆ 4ಹರಿವ ನದಿಯ ನಡುವೆ ಪರ್ಣ ಸಿಕ್ಕಿ ಕೃಷ್ಣನೆ ಸುಳಿಯಬೆರಸಿ ತಡಿಯ ತಾನು ಸೇರದಂತೆ ಕೃಷ್ಣನೆಕುರುಡ ಕೂಪವರಿಯದುರುಳುವಂತೆ ಕೃಷ್ಣನೆ ಕಾಲಶರಧಿಯಲ್ಲಿ ಮುಳುಗಿ ನೆಲೆಯ ಕಾಣೆ ಕೃಷ್ಣನೆ 5ಇರುಹೆ ಕಡೆಯು ಬ್ರಹ್ಮನಾದಿಯಾಗಿ ಕೃಷ್ಣನೆ ಲೋಕಮರುಳುಗೊಂಡು ಮಾಯೆುಂದ ಮರುಗಿ ಕೃಷ್ಣನೆ ಕೊರಗುತಿದೆ; ಮಾಯೆಯನ್ನು ದಾಟಿ ಕೃಷ್ಣನೆ ಬೇಗಪರಮನೊಳು ಬೆರೆಸಿ ಕೊರಗ ಬಿಡಿಸು ಕೃಷ್ಣನೆ 6ರಜ್ಜು ಸರ್ಪನಾಗಿ ತೋರಿ ಬೆದರೆ ಕೃಷ್ಣನೆ ಅದರಬೆಜ್ಜರವ ಪರಿವ ಮಂತ್ರವುಂಟೆ ಕೃಷ್ಣನೆರಜ್ಜುವೆಂದು ತಿಳಿವುದೊಂದೆ ಮಂತ್ರ ಕೃಷ್ಣನೆ ಹಾಗೆರಜ್ಜು ಸ್ಥಾನ ನಿನ್ನ ನಿಜವ ತೋರು ಕೃಷ್ಣನೆ 7ಕರ್ಮವೆ ಜನ್ಮಕ್ಕೆ ಹೇತುವೆನಲು ಕೃಷ್ಣನೆ ಅಂದುಬ್ರಹ್ಮವತ್ಸಪಾಲರಪಹರಿಸೆ ಕೃಷ್ಣನೆಕರ್ಮವಿತ್ತೆ ಬದುಲ ನಿರ್ಮಿಸಲು ಕೃಷ್ಣನೆ ಹಾಗೆಕರ್ಮವೆನ್ನದೀಗಲೆನ್ನ ಸಲಹು ಕೃಷ್ಣನೆ 8ದುರಿತ ದುಃಖದಿಂದ ನೋವ ಜನರ ಕೃಷ್ಣನೆ ಅವರದುರಿತಗಳ ನೂಕಿ ನಿನ್ನೊಳಿರಿಸು ಕೃಷ್ಣನೆತಿರುಪತೀಶ ದೇವ ವೆಂಕಟೇಶ ಕೃಷ್ಣನೆ ಮಾಯಾತೆರೆಯ ತೆಗೆದು ನಿನ್ನ ನಿಜವ ತೋರು ಕೃಷ್ಣನೆ 9ಓಂ ಸತ್ಯಸಂಕಲ್ಪಾಯ ನಮಃ
--------------
ತಿಮ್ಮಪ್ಪದಾಸರು
ಹೋಗುತಿದೆ ಹೊತ್ತು ಬರಿದೆ ವ್ಯರ್ಥವಾಗಿಹರಿಗುರುಗಳ ನೆನೆಯದೆ ಪ. ನರರ ನೂರಮೂವತ್ತೆರಡುಕೋಟಿವರುಷ ದಿವಸವೊಂದೆ ಬೊಮ್ಮಗೆಪರೀಕ್ಷಿಸಲು ಬ್ರಹ್ಮಕಲ್ಪಸಾಸಿರ ಕೋಟಿನರಕದೊಳಗೆ ಬಿದ್ದು ಮರಳಿ ಭವದಿ ಬಂದು1 ಒಂದೊಂದಕೆ ಇಪ್ಪತ್ತೊಂದುಲಕ್ಷ ಯೋನಿಎಂದೆನಿಸುವ ಸ್ವೇದಜ ಉದ್ಬಿಜಬಂದು ಜರಾಯುಜಾಂಡಜ ಕುಲದಿ ಪುಟ್ಟಿನೊಂದೆ ಎಂಬತ್ತುನಾಲ್ಕುಲಕ್ಷ ಯೋನಿಯಲಿ 2 ಮಾಸ ಒಂಭತ್ತು ಮತಿಗೆಟ್ಟು ಗರ್ಭದಿಹೇಸದೆಬಂದು ಜೀವಿಸಿ ಬಳಲಿಮೋಸವನರಿಯದೆ ಮುನ್ನಿನ ಕರ್ಮದಿಘಾಸಿಯಾದೆನೊ ಯೌವನಮದದಿ ಸೊಕ್ಕಿ 3 ಕೆಲಹೊತ್ತು ಚದುರಂಗÀ ಪಗಡೆ ಆಟಗಳಿಂದಕೆಲಹೊತ್ತು ಹಸಿವೆ ನಿದ್ರೆಗಳಿಂದಲಿಕೆಲಹೊತ್ತು ಕಾಕಪೋಕರ ಕತೆಗಳಿಂದಕೆಲಹೊತ್ತು ಪರನಿಂದೆ ಪರವಾರ್ತೆಗಳಿಂದ 4 ಕಾಲವು ಕಡೆಯಾಗಿ ಹರಿ ನಿಮ್ಮನರ್ಚಿಸೆವೇಳೆಯಿಲ್ಲದೆ ಹೋಯ್ತು ಬಂಜೆಯಾಗಿಜಾಲಿಸಿಹೋಗುತಿದೆ ಈ ವಿಧದಿ ಹೊತ್ತು ಬೇಗನೆಪಾಲಿಸಿ ದಯಮಾಡೊ ಸಿರಿಹಯವದನ 5
--------------
ವಾದಿರಾಜ
ಹ್ಯಾಗೆ ಕಾಂಬೆ ನಿನ್ನ ಪಾದವ ಶ್ರೀನಿವಾಸ ಯೋಗಿ ಗಮ್ಯ ರೂಪ ಮಾಧವಾ ರಾಗ ರೋಗ ಸಾಗರಸ್ತನಾಗಿ ಮುಳುಗಿ ಬಾಯ ಬಿಡುವೆ ನಾಗರಾಜಗೊಲಿದ ತೆರದಿ ಬೇಗಲೊದಗಿ ಬಂದು ಕಾಯೊ ಪ. ಮನಸು ಎನ್ನ ವಶಕೆ ಬಾರದೆ ಭಕ್ತಿ ಸಾ- ಧನಗಳೆನಗೆ ಸೇರಿ ಬಾಹದೆ ನೆನಸಿಕೊಳುವ ಕಾರ್ಯ ದೊರೆಯದೆ ಸರ್ವಕಾಲ ತನುವ ಕೆಡಿಸಿ ವ್ಯರ್ಥಮಾಡಿದೆ ಕನಲಿ ಕೂಗುತಿರುವ ಶಿಶುವ ಜನನಿ ಕರದೊಳೆತ್ತುವಂತೆ ಮೂರ್ತಿ ದೋರೊ 1 ಕಲಿಯ ಬಾಧೆಯಿಂದ ನೊಂದೆನು ಮಲಿನ ಮೋಹದೊಳಗೆ ನಿಂದೆನು ತ್ಯಾಜ್ಯವಾದ ಫಲಗಳೆಲ್ಲ ತಂದು ತಿಂದೆನು ಗಾಳಿಗೆ ಸಿಲುಕಿದೆಲೆಯ ತೆರದಿ ಹೊರಲುಗಾಣೆನೀ ದೇಹ ಪಾದ ನೆಳಲ ಬಯಸಿ ಬೇಡಿಕೊಳುವೆ 2 ಗಣನೆಯಿಲ್ಲವಾದ ಮರಗಳು ಇರಲು ಪುರು ತನುವಿನಂತೆ ಮುಖ್ಯವಾವದು ಅನುಭವಾತ್ಮ ಸುಖವನೀವದು ಆದರೇನು ಕನಸಿನಂತೆ ಕಾತಿರುವುದು ಪಾದ ವನಜಯುಗವನಿತ್ತು ಎನ್ನ ಮನದೊಳದಯವಾಗು ಮಾರಜನಕ ಮೂಡಲದ್ರಿವಾಸ3
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದುನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲಇಂದಿರೇಶ ನಿನ್ನ ನೆನೆವ ಮತಿಯ ನೀಡೊ ಮನ್ನಿಸಿ ನೋಡೊ ಪ.ಕುಚ್ಛಿತ ಕರ್ಮವಾಚರಿಸಿ ಕಶ್ಮಲ ಜನ್ಮನುಭವಿಸಿದುಶ್ಚಿತ್ತದಿ ಬಾಳ್ದೆನಯ್ಯ ದೂರಾದೆ ನಿಮಗೆ ದಮ್ಮ್ಮಯ್ಯಅಚ್ಚುತ ನಿನ್ನಿಚ್ಛೆಯಿಂದೆ ಆದಿವರ್ಣದವನಾದೆಸ್ವಚ್ಛಿತ ಭಕ್ತಿಯನಿಲಯ ಸುಜನಬಂಧು ಸುಗುಣಸಿಂಧು 1ಹೊಟ್ಟೆಯ ಹೋರಟೆಗಾಗಿ ಹೊತ್ತಾರೆದ್ದು ತಿರುಗಿ ತಿರುಗಿಕೆಟ್ಟ ವೃತ್ತಿಯನ್ನು ಹಿಡಿದೆ ಕೀಳುಮನುಜರೊಳಾಡಿದೆಬಿಟ್ಟೆ ನಿಮ್ಮ ಪೂಜೆಯನ್ನು ಬಿದ್ದೆ ಭವಾಂಬುಧಿಯನ್ನುವಿಠ್ಠಲ ಎನ್ನುದ್ಧರಿಸೊ ವಿದ್ವದ್ಹøದ್ಯ ವೇದವೇದ್ಯ 2ವೇದಶಾಸ್ತ್ರಾಭ್ಯಾಸವಿಲ್ಲ ವೇದಜÕರರ್ಚಿಸಲಿಲ್ಲಬೋಧವನು ಕೇಳಲಿಲ್ಲ ಬುದ್ಧಿ ಎನ್ನೊಳು ಚೂರಿಲ್ಲಸಾಧನವ ತಿಳಿಯಲಿಲ್ಲ ಸಾಧುಮಾರ್ಗವ ಕಾಣಲಿಲ್ಲಭೇದಜÕರೊಳ್ ಕೂಡಿಸೆನ್ನ ಭೀಮಪಾಲಾಭಿನವಲೀಲ 3ಕಾಂತೇರ ಕುಚೇಷ್ಟೆಗಳಿಗೆ ಕೀಳುಚ್ಚಾರದ ಮಕ್ಕಳಿಗೆಭ್ರಾಂತನಾಗಿ ಸ್ನೇಹ ತೋರ್ದ ಬಲೆಯೊಳ್ ಸಿಲುಕಿದೆಸಂತರಂಘ್ರಿ ಸಖ್ಯವನೊಲ್ಲೆ ಸತ್ಕಥೆಯನಾಲಿಸಲೊಲ್ಲೆಅಂತು ಮದವನಿಳಿಸಿ ಕಾಯೊಅಂಗಜಪಿತನೆ ಅಘರಹಿತನೆ4ಬಳಲಿಸಿದೆ ತನುವನು ಬಯಸಿ ಖಳರಾರ್ಥವನ್ನುನಳಿನಾಕ್ಷ ನಿನ್ನ ಬೇಡದೆ ನಾಸ್ತಿಕರಿಗೆ ಕೈಯನೊಡ್ಡಿದೆಹೊಳೆವ ಸುರಭಿಯ ಬಿಟ್ಟು ಹುಲಿಪಾಲಿಗಾಯಾಸಬಟ್ಟೆಕಳೆದೆನನಘ್ರ್ಯಾಯುಷ್ಯವ ಕುಚೇಲಮಿತ್ರ ಕರುಣನೇತ್ರ 5ವಿಷ್ಣು ತತ್ವವರಿಯದೆ ಧೀರ ವೈಷ್ಣವನೆನಿಸದೆಭ್ರಷ್ಟಮನವ ತೊಳೆಯದೆ ಬಹಿಛ್ಛಿನ್ನದಲ್ಲೆ ಮೆರೆದೆಶಿಷ್ಯ ಗುರುಗಳ ಜರಿದೆ ಶಠರನು ಅನುಸರಿಸಿದೆದುಷ್ಟವೃತ್ತಿಯನು ಬಿಡಿಸೊ ದುರ್ಗುಣಧಾಮನ ದುರಿತಶಮನ 6ಇಂದ್ರಿಯಗ್ರಾಮ ನಿನ್ನದು ಇಷ್ಟ ಬಳಗವು ನಿನ್ನದುಸೌಂದರ್ಯ ಸುಖ ನಿನ್ನದು ಸ್ವರೂಪ ಸ್ವಾತಂತ್ರ್ಯ್ರನಿನ್ನದುಮಂದಮತಿಯಿಂದ ಅಹಂಮತಿಯಲ್ಲಿ ನೊಂದೆ ಬಹುಕುಂದನೋಡದೆನ್ನ ಸಲಹೊ ಕುಂಜರವರದ ಕುಶಲಪದದ7ನಿನ್ನ ಕಥಾಮೃತವು ಕಿವಿಗೆ ನಿನ್ನ [ಕೀರ್ತನೆ ನಾಲಗೆಗೆ]ನಿನ್ನ ಲಾವಣ್ಯವು ಕಣ್ಣಿಗೆ ನಿನ್ನ ಸೇವೆ ಸರ್ವ ಇಂದ್ರಿಯಕ್ಕೆಎನಗೆ ಬೇಗ ಕರುಣಿಸಿ ಎಲ್ಲ ದುರಿಚ್ಛೆಗಳ ನೂಕುಇನ್ನು ದಾಸದಾಸ್ಯವು ಬೇಕೊ ಋಷಿಕುಲೇಶ ಹೃಷಿಕೇಶ 8ಅಚ್ಯುತಾನಂತಗೋವಿಂದ ಆದಿಪುರುಷ ಮುಕುಂದಸಚ್ಚಿದಾನಂದಸರ್ವೇಶ ಸುಚರಿತ್ರ ಕರಿವರದನೆಚ್ಚಿದೆ ತವ ಪಾದಾಂಬುಜ ನಮೊ ಬೊಮ್ಮಾದ್ಯರ ದೇವನಿಚ್ಚಪ್ರಸನ್ವೆಂಕಟ [ನಿನ್ನ ನೆನೆವ ಮ್ಮತಿಯನೀಡೊಮನ್ನಿಸಿ ನೋಡೊ] 9
--------------
ಪ್ರಸನ್ನವೆಂಕಟದಾಸರು
ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ |ಫುಲ್ಲನಾಭನೆ ನೀನಿದ್ದಲ್ಲಿ ಇರಿಸೆನ್ನ ಪಮರಳಿ ಮರಳಿ ಜನ್ಮ ಮರಣವನೊಲ್ಲೆ |ದುರುತ ಕೋಟಲೆಯ ಸಂಸಾರವನೊಲ್ಲೆ ||ತುರುಕಾದು ಕೊಳಲನೂದುವ ಮುರಮರ್ದನ |ಚರಣಕಮಲಗಳ ಸ್ಮರಣೆಯೊಳಿರಿಸೆನ್ನ 1ಬಂದು ಸಂಸಾರದ ಬೇನೆಯೊಳಗೆ ಬಿದ್ದು |ನೊಂದೆನು ಕಡುಮೋಹದಿಂದ ನಾ ಬೆಂದು ||ನಂದಗೋಪನ ಕಂದ ವೃಂದಾವನಪ್ರಿಯ |ಎಂದೆಂದು ತವಪಾದ ಸ್ಮರಣೆಯೊಳಿರಿಸೆನ್ನ 2ಪುತ್ರ-ಪೌತ್ರರು ಬಂಧು-ಮಿತ್ರ ಬಾಂಧವರೆಂದು |ಕತ್ತಲೆಯೊಳು ಕಡುನೊಂದೆನಯ್ಯ ||ಸತ್ಯಮೂರುತಿ ಶ್ರೀ ಉಡುಪಿಯ ಶ್ರೀ ಕೃಷ್ಣ |ಭಕ್ತವತ್ಸಲ ಶ್ರೀಪುರಂದರವಿಠಲ 3
--------------
ಪುರಂದರದಾಸರು
ಉಪಕಾರ ಮರೆವುದುಚಿತವಲ್ಲೋ |ತಪನಾಪ್ತಾಕ್ಷನೆ ನಮ್ಮ ಹಿರಿಯರಂದು ಮಾಡಿದಾ ಪಹರಿಯೆ ನಿನ್ನವರಿಗಮೃತವ ನೀಡುವೆನೆಂದು |ಭರದಿಂದ ಮಥÀನ ಮಾಡಿಸಿದೆ ಕಡಲ ||ಗರಳವುದ್ಭವಿಸಲು ದಿವಿಜರಂಜಲು ಆಗ |ತ್ವರದಿಂದದರಭಯ ಪರಿಹರಿಸಿದರಾರೊ 1ಆರಣ್ಯದೊಳು ನೀನಿರಲು ನಿನ್ನೊಲ್ಲಭಿಯ |ಆ ರಾವಣನೊಯ್ಯಲು ಕಪಿಗಳೆಲ್ಲ ||ಹಾರಲಾರೆವೊ ಸಮೂದ್ರಾ ಎನ್ನಲು ಬೇಗ |ಭಾರತೀ ರಮಣನೇ ಪೋಗಿ ವಾರ್ತೆಯ ತಂದ 2ಶರಧಿಕಟ್ಟುವುದಕ್ಕೆ ರೋಮ ರೋಮದಿ ಗುಡ್ಡ |ಧರಿಸಿ ತಂದನು ನೊಂದೆನೆನ್ನದಲೆ |ಹರಿಜಿತು ಶರದಿಂದ ಬಿಗಿಯೆ ಪ್ಲವಗರೆಲ್ಲಾ |ಧರಣಿ ಹೊಂದಲು ಸಂಜೀವನ ತಂದು ಉಳುಹಿದ 3ವಸುದೇವಜನಾಗಿ ನೀಂ ಜರಿಜನ ಭಯದಿಂದ |ವಸುಧೆಯೊಳಗೆ ನಿಲ್ಲಲಾರದಿದ್ದೆ ||ಶಶಿಕುಲದಲ್ಲಿವಾತಜನಿಸಿ ಅವನ ಕೊಂದು |ಕುಸುಮನಾಭನೆ ನಿನ್ನ ಭಯ ಬಿಡಿಸಿದನಲ್ಲೋ 4ಮಣಿಮಂತಜಗದೊಳು ನಿನ್ನ ಮಹಿಮೆಯನ್ನು |ಮುಣುಗಿಸಿದನು ತ್ವರಿತ ನಮ್ಮ ಗುರುವು ||ಘನಶಾಸ್ತ್ರಂಗಳ ರಚಿಸಿ ದುರ್ಮತವ ಸೋಲಿಸಿ |ಮನಸಿಜಪಿತನೇ ಪರನೆಂದು ಮೆರೆಸಿದ5ಇಷ್ಟು ಸೇವೆಯ ಮಾಡಿ ಮೆಚ್ಚಿಸಿದನು ಗೇಣು |ಬಟ್ಟೆಬೇಡಿದನೇನೋ ಆತ ನಿನ್ನ ||ಬಿಟ್ಟದ್ದಾನಾದಿತು ನಮ್ಮ ವಂಶಕರಿಗೆ |ಕೊಟ್ಟು ರಕ್ಷಿಸುವನು ಸ್ವಾಮಿ ಒಳ್ಳೆವನೆಂದು 6ಈಸು ಪರಿಯಿಂದ ನಮ್ಮ ಭಾರತೀಕಾಂತ |ತಾ ಸೋತಿರಲು ನಿನಗೆ ನಮ್ಮನೀಗ ||ಘಾಸಿಮಾಡದೆ ಸಲಹುವದುಚಿತವೋ ಶ್ರೀ ಪ್ರಾ- |ಣೇಶ ವಿಠ್ಠಲರೇಯ ಅಪಕೀರ್ತಿ ಕೊಳಬೇಡ7
--------------
ಪ್ರಾಣೇಶದಾಸರು
ಎಂದಿಗೆ ನಾನಿನ್ನು ಧನ್ಯನಹೆನೊಎಂದಿಗೆ ನಿನ್ನ ಚಿತ್ತಕೆ ಬಹೆನೊ ಅಚ್ಯುತನೆ ಪಪುಲು ಮರವು ಗಿಡ ಬಳ್ಳಿ ಕುಲದಲಿಪ್ಪತ್ತು ಲಕ್ಷಜಲ ಜೀವದೊಳಗೆ ಒಂಬತ್ತು ಲಕ್ಷ ||ಅಳಲಿ ಏಕಾದಶ ಲಕ್ಷ ಕ್ರಿಮಿ ಕೀಟದಲಿತೊಳಲಿ ಬಳಲಿದೆನಂಡಜದೊಳು ದಶಲಕ್ಷ 1ಚರಣನಾಲ್ಕರಲಿ ಮೂವತ್ತು ಲಕ್ಷ ಜೀವಿಸಿನರನಾಗಿ ಚರಿಸಿದೆನು ನಾಲ್ಕು ಲಕ್ಷ ||ಪರಿಪರಿಯ ಭವದಿಂದ ಬಲು ನೊಂದೆನೈ ನಿನ್ನಸರಸಿಜಸಂಭವನ ಕಲ್ಪದಲ್ಲಿ2ಎಂಬತ್ತು ನಾಲುಕು ಲಕ್ಷಯೋನಿಗಳಲ್ಲಿಅಂಬುಜನಾಭ ನಿನ್ನ ಲೀಲೆಗಾಗಿ ||ಕುಂಭಿನಿಯೊಳು ಬಂದು ನೊಂದೆನಯ್ಯಾ ಸ್ವಾಮಿಕಂಬುಕಂಧರಸಿರಿಪುರಂದರವಿಠಲ3
--------------
ಪುರಂದರದಾಸರು
ಎಂದೆಂದಿಗೂ ನಿನ್ನ ಪಾದವೆ ಗತಿಯೋ ಗೋವಿಂದ ಬಾರೈ ಎನ್ನ ಹೃದಯ ಮಂದಿರಕೆ ಪಮೊದಲಿಲ್ಲಿ ಬರಬಾರದು ನಾ ಬಂದೆತುದಿಮೊದಲಿಲ್ಲದ ಭವದಿಂದ ನೊಂದೆ ||ಇದರಿಂದ ಗೆದ್ದು ಹೋಗುವುದೆಂತು ಮುಂದೆಪದುಮನಾಭನೆ ತಪ್ಪುಕ್ಷಮೆಮಾಡುತಂದೆ1ಹೆಣ್ಣು ಹೊನ್ನು ಮಣ್ಣಿನಾಶೆಗೆ ಬಿದ್ದುಪುಣ್ಯ ಪಾಪಂಗಳ ನಾನರಿತಿದ್ದು ||ಅನ್ಯಾಯವಾಯಿತು ಇದಕೇನು ಮದ್ದುನಿನ್ನ ಧ್ಯಾನವ ಕೊಡು ಹೃದಯದೊಳಿದ್ದು 2ಹಿಂದೆ ನಾ ಮಾಡಿದ ಪಾಪವ ಕಳೆದುಮುಂದೆನ್ನ ಜನ್ಮ ಸಫಲ ಮಾಡಿ ಪೊರೆದು ||ತಂದೆ ಶ್ರೀಪುರಂದರವಿಠಲ ನೀನಿಂದುಬಂದು ಸಲಹೊ ನನ್ನ ಹೃದಯದಿನಿಂದು3
--------------
ಪುರಂದರದಾಸರು