ಒಟ್ಟು 255 ಕಡೆಗಳಲ್ಲಿ , 56 ದಾಸರು , 220 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರು ನಾಮಗಳ ಧರಿಸಿರುವ ಕಾರಣವೇನು ಸಾರಿ ಪೇಳಲೊ ಈಗಲೆ ಪ. ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ. ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು ಕರವ ಮುಗಿದು ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು ಮಧ್ವಮತ ದೈವವೆಂದಿನ್ನು ತಿಳಿಯುವರೆ 1 ಮೂರುರೂಪನು ನಾನು ಮೂರು ಲೋಕಗಳಿಹವು ಮೂರು ಮಾಳ್ಪೆನು ಜಗವ ಮೂರು ಗುಣದಿ ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ ಪಾರು ಮಾಡುವೆನೆಂದು ತೋರುವ ಸೊಬಗೊ 2 ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ ಪಾಲಸಾಗರಶಾಯಿ ಚಲುವಮೂರ್ತಿ ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3 ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು ತೋರುವನು ನಿಜರೂಪ ಭಕ್ತಗೆಂದು ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ ಮೂರುನಾಮವೆ ಗತಿ ಎನ್ನುವ ಬಗೆಯೊ 4 ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ ಈ ಲೀಲೆ ಬಗೆಯನು ಅರಿವವರ್ಯಾರೊ ವ್ಯಾಳಶಯನ ವೆಂಕಟೇಶ ಎನ್ನ ಮನದಿ ಕಾಲಕಾಲಕೆ ನಿನ್ನ ರೂಪವನೆ ತೋರೋ 5
--------------
ಅಂಬಾಬಾಯಿ
ಮೋತಂಪಲ್ಲಿ ಪ್ರಾಣದೇವರ ಸ್ತೋತ್ರ ಏನು ಕರುಣವೊ ನಿನಗೆ ಮೋತಪಲ್ಲಿಶಾ ||ದೀನ ದ್ವಿಜಗೊಲಿದು ಬಂದಿಲ್ಲಿ ನಿಂತೇ ಪ ವಿಪ್ರವರ ತಪಗೈಯ್ಯೆ | ನೀನೊಲಿದು ಅವನಿಗೆಕ್ಷಿಪ್ರದಿಂ ಕಿಂಪುರುಷ | ಖಂಡದಿಂಧ್ಹೊರಟೂ |ಅಪ್ರತಕ್ರ್ಯೊರು ಸ | ದ್ಗುಣ ಪೂರ್ಣ ಹರಿದೂತಸುಪ್ರಸನ್ನನು ಆಗಿ ಬಂದಿಲ್ಲಿ ನಿಂತೇ 1 ಸುಜನ ಜನರಂದೂ 2 ಪಾದ | ಪದ್ಮಯುಗವಾ ||ದ್ವಿಜಗುರೂ ಪ್ರಾಣಪತಿ | ತೈಜಸನು ತಾನಾಗಿ |ಭಜಕರಿಗೆ ಪೇಳಿದನು | ಸ್ವಪ್ನ ಸೂಚಿಸುತಾ 3 ಭಿನ್ನವಾಗಿದ್ದಂಥ | ಅಂಗಗಳ ಜೋಡಿಸುತನನ್ನೆಯಿಂ ತೈಲವನು | ಪೂಸೆನ್ನುತಾ |ತನ್ನ ಸದನದ ಕದವ | ನಾಲ್ವತ್ತು ಮತ್ತೊಂದುದಿನ್ನ ತೆಗೆಯದೆ ಲವಣ | ವ್ರತ ಮಾಳ್ಪುದೆಂದಾ 4 ಸದನ | ಕದ ತೆಗೆಯುತಿರಲೂ |ನೇಮ ಮೀರಿದ ಫಲವು | ತೋರುವನೊ ಎಂಬಂತೆಕೀಮು ರಕ್ತವ ಸ್ರವಿಸೆ | ವಕ್ಷದಲಿ ಕಂಗಳಲೀ 5 ತಪ್ಪು ತಪ್ಪೆಂದವನು | ದವಡೆಯನೆ ತಟ್ಟುತ್ತಅರ್ಪಿಸಲು ತನುಮನವ | ಭಕುತಿಯಿಂದಾ |ವಪ್ಪಿಕೊಳ್ಳುತ ಹನುಮ | ಸ್ವಪ್ನದಲಿ ಪೇಳಿದನುಅರ್ಪಿಸುವುದಲ್ಲಿಲಿ | ಶಾಲಿಗ್ರಾಮಗಳಾ6 ಹರಿಮಹಿಮೆ ಕೊಂಡಾಡಿ | ಬರದಂತೆ ತಾವ್ ಮಾಡಿನರಸಿಂಹ ವಸುದೇವ | ಸುತ ಶಾಲಿಗ್ರಾಮಗಳಾ |ಸ್ಥಿರಪಡಿಸಲಲ್ಲಿಲಿ | ಕರುಣದಿಂದಲಿ ದಿವ್ಯವರ ರೂಪದಿಂ ನಿಂತೆ | ಗುರು ಮಾರುತೀಶಾ 7 ಮಾಸ | ಎಂಟೈದನೇ ದಿನದಿನೆಂಟರೆಲ್ಲರು ಸೇರಿ | ಬಹು ಉತ್ಸವಗಳಾ |ಭಂಟರಾಮರ ನಿನಗೆ ಉಂಟು ಮಾಡಲು ಭಕ್ತಕಂಟಂಕಗಳ ನೀಗಿ | ವಾಂಛಿತವ ನೀನೇ 8 ಗುರುಗೋವಿಂದ ವಿಠಲ | ಪರಮ ಸೇವಕ ಹನುಮಪರಿ ಪರೀಯಲಿ ನಿನ್ನ | ಚರಣ ಯುಗ್ಮಗಳಾ |ಪರಮ ಭಕ್ತಿಲಿ ಸೇವೆ | ನೆರೆ ಮಾಳ್ಪ ಸುಖವಿತ್ತುಪರಮ ಪುರುಷನ ಕಾಂಬ | ವರ ಮಾರ್ಗ ತೋರೋ 9
--------------
ಗುರುಗೋವಿಂದವಿಠಲರು
ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ಧ್ರುವ ನೀರ ಥೆರಿಯ ಕಡಿದು ಹೃದಯದಕರ ಚರಣದಿ ಭರದಿ ಮುಣಗಿ ನೀರ ನಡಿಗಿ ದಣದೇನಯ್ಯ 1 ವಾರಿಧಿಮಥನದಿ ಮೇರುಪರ್ವತವನ್ನು ಭಾರ ಬೆನ್ನಲಿ ಪೊತ್ತು ಬೆವರಿ ದಣಿದೇನಯ್ಯ2 ಧರಿಯ ಕದ್ದಸುರನ ಕೋರೆದಾಡಿಂದ ಸೀಳಿ ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ 3 ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ ಕರಳೊನಮಾಲಿಯ ಧರಿಸಿ ದಣಿದೇನಯ್ಯ 4 ಧರಿಯು ಮೂರಡಿ ಮಾಡಿ ಎರೆದು ದಾನವ ಬೇಡಿ ನರನ ಪಾತಾಳಕೊತ್ತಿ ಬಳೆದು ದಣಿದೇಯನಯ್ಯ 5 ಹಿರಿಯಳ ಶಿರವನು ಹರಿದು ಕತ್ತರಿಸಿನ್ನು ಕರದಲ್ಲಿ ಪರಶುವ ಪಿಡದು ದಣಿದೇನಯ್ಯ 6 ಶಿರಗಳ ಚೆಂಡಾಡಿ ರಾವಣೀಂದ್ರ ಜಿತನ ಶರದಿ ಕುಂಭಕರ್ಣನ ಎಚ್ಚದು ದಣಿದೇನಯ್ಯ 7 ಷತುರುಗಳ ಕಾಯಿದು ಉರುಗನ ತುಳದಿನ್ನು ಗಿರಿಯ ಬೆರಳಲೆತ್ತಿ ತೋರಿ ದಣಿದೇನಯ್ಯ 8 ಬರಿಯ ಬತ್ತಲೆ ಅಗಿ ಅರಿಯದೆ ತ್ರಿಪುರವ ಸೇರಿ ನಾರೇರ ವ್ರತವಳಿದು ದಣಿದೇನಯ್ಯ 9 ಏರಿ ಕುದುರಿಯ ತಿರುಹು ರಾಹುತನಾಗಿ ಪರಿ ರೂಪವ ತಾಳಿ ದಣಿದೇನಯ್ಯ 10 ಸರ್ವಾಪರಧವು ಕ್ಷಮೆಯಿಂದ ಮಹಿಪತಿಯ ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾಕೋ ಶ್ರೀಹರಿಯೇ ನೀನೂ ಲೋಕನಾಯಕ ಭಕ್ತರೊಡೆಯನೆಂಬ ಬಿರುದು ಬೇಕಿಲ್ಲವೇನು ನಿನಗೆ ಪ ಹಿತವೇನೋ ನಿನಗೆ ಇನ್ನು ರಕ್ಷಿಸದ ಬಗೆ ಶಬ್ದಾವು ತೋರು ಇನ್ನು ಶ್ರೀಮಂದರಾದ್ರಿಧರ 1 ಸಾಧುಜನರ ಪೋಷಕಾ ಸಕಲರ ಪೊರೆಯದಿರೆ ಶುಕಮುನಿ ವಂದಿತ ಶ್ರೀ ರುಕ್ಮಿಣೀ ಪ್ರಿಯಹರೆ 2 ಗತಿನೀನೆಯಂದು ಇರಲು ಪಾದ ಅತಿ ಕಷ್ಟಕೊಡದಿರಲು ಹೀಗೆ ಕೆಡುವುದಿನ್ನು ಪತಿತಪಾವನ ಶ್ರೀಪತಿ `ಹೆನ್ನೆವಿಠ್ಠಲ' ಪಾಲಿಸದ ನೇಮ 3
--------------
ಹೆನ್ನೆರಂಗದಾಸರು
ರುಕ್ಮಿಣೀಶ ವಿಠಲ | ಕಾಪಾಡೊ ಇವನಾ ಪ ವಿಖನ ಸಾಂಡದ ದೊರೆಯೆ | ಅಖಳಂಕ ಮಹಿಮಾ ಅ.ಪ. ಸುಪಥದಲಿ ನಡೆವಂತ | ನಿಪುಣತರ ನಿವನೀಗೆಉಪದೇಶವಿತ್ತಿಹೆನೊ | ಅಪವರ್ಗದಾತಾ |ಕೃಪಣ ವತ್ಸಲ ನಿನ್ನ | ಕೃಪೆ ದೃಷ್ಟಿಯಲಿ ನೋಡಿಅಪೇಕ್ಷಿತವನಿತ್ತು | ನೀ ಪೋಷಿಸಿವನಾ 1 ಜ್ಞಾನವಿಜ್ಞಾನದಲಿ | ನೀನಿರುವ ತತ್ವವನುನೀನಾಗಿ ತಿಳಿಸುತ್ತ | ಕಾಪಾಡೊ ಹರಿಯೇ |ಶ್ರೀನಿವಾಸನೆ ದಯಾ | ಪೂರ್ಣ ನೀನಾಗುತ್ತಜ್ಞಾನಭಕ್ತಿಯನಿತ್ತು | ಕಾಪಾಡೊ ಹರಿಯೆ 2 ಎಲ್ಲೆಲ್ಲು ನೀನಿರುವೆ | ಸೊಲ್ಲನ್ನು ಅನುಭವಕೆಉಲ್ಲಾಸದಲಿ ಇತ್ತು | ಬಿಲ್ಲಾಳು ಎನಿಸೋಬಲ್ಲಿದರ ಕೂಟದಲಿ | ಬಿಲ್ಲಿ ನಂತರಿಸುತ್ತಮಲ್ಲಮರ್ದನಕೃಷ್ಣ | ಕಾಪಾಡೊ ಇವನ 3 ಸತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂದೆಂಬಮತಿಯನೇ ಕರುಣಿಸುತ | ಅತಿಶಯವ ತೋರೀಮತಿಮತಾಂವರರಂಘ್ರಿ | ರತಿಯನ್ನೆ ಕರುಣಿಸುತಮತಿವಂತ ನೆನಸಿವನ | ಮಾರುತನ ಮತದೀ 4 ದೇವತವ ಮಹಿಮೆಗಳು | ಭಾವದಲಿ ಪೊಳೆಯಲ್ಕೆಕೋವಿದರ ಸಂಗವನು | ನೀ ವೊಲಿದು ಈಯೋ |ನೀ ವೊಲಿಯದಿನ್ನಿಲ್ಲ | ಗೋವುಗಳ ಪರಿಪಾಲದೇವ ದೇವೇಶ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀ ಮನೋಹರ ವಿಠಲ | ರಕ್ಷಿಸೋ ಹರಿಯೇ ಪ ಲಕ್ಷಿಸದಲೇ ಇವಳ | ಲಕ್ಷಾಪರಾಧಾ ಅ.ಪ. ತೈಜಸ ಮೂರ್ತಿದರುಶನವ ತಾನಿತ್ತು | ಹರುಷ ಪಡೆಸಿಹನೋಹರಿದಾಸ್ಯಕೇ ಮಾರ್ಗ | ವರಸೂಚಿ ಎಂಬಂತೆಪರಮ ಸಿದ್ಧತೆ ತೋರ್ದೆ | ವರಸತೀ ಮಣಿಗೇ 1 ಕಾರುಣಿಕ ನೆಂ | ದರಿತು ಬೇಡುವೆ ಹರಿಯೆಸರುವ ಕಾರ್ಯದಿ ನಿನ್ನ | ಸ್ಮರಣೆ ಸುಖವೀಯೋ 2 ಎರಡು ಮೂರ್ಭೇಧಗಳ | ಅರಿವನೀಕೆಗೆ ಇತ್ತುಎರಡು ನಾಲ್ಕರ ವರ್ಗ | ದೂರಗೈಸೋಮರುತಾಂತರಾತ್ಮ ನಿ | ನ್ಹೊರತು ಕಾಯುವರಾರೊಎರಡೇಳು ಭುವನಗಳ | ಅರಸಿಯೂ ಕಾಣೇ 3 ವಿಶ್ವ ಕರ್ಮ | ಸತ್ಶ್ರವಣ ಕೊಡುತಾ 4 ಭೂವಿ ಬುಧ ಹೆದ್ದೈವ | ಮಾವಿನೋದಿಯೆ ಹರಿಯೆನೀವೊಲಿಯ ದಿನ್ನಿಲ್ಲ | ಮಾವ ಕಂಸಾರೀದೇವ ದೇವೇಶ ಗುರು | ಗೋವಿಂದ ವಿಠ್ಠಲ್ಲಭಾವದೊಳು ಮೈದೋರಿ | ಕಾವುದೀಕೆಯನೂ 5
--------------
ಗುರುಗೋವಿಂದವಿಠಲರು
ಲಕ್ಷ್ಮೀವಲ್ಲಭ ವಿಠಲ | ಪೊರೆಯ ಬೇಕಿವಳಾ ಪ ಅಕ್ಷಯ್ಯ ಫಲದ ಕೃ | ಪೇಕ್ಷಣದಿ ನೋಡಿಅ.ಪ. ಸಂಸಾರ ವಿರಸತರ | ಅಂಶವನೆ ತಿಳಿಸೊ ಹರಿಕಂಸಾರಿ ನಿನ್ನ ಪದ | ಪಾಂಸು ಭಜಿಸುತ್ತಾ ಸಂಶಯ ರಹಿತ ಹರಿ | ಹಂಸನಾಮಕ ಸೇವೆಶಂಸಾರ್ಯ ಸರ್ವಧಿಕ | ಸವೋತ್ತಮೆನುತಾ 1 ಹರಿನಾಮ ಕವಚವನು | ಸರ್ವದಾ ಧರಿಸುತ್ತಾದುರಿತನಾಳುಟ್ಟಳಿಯ | ಪರಿಹಾರ ಮಾರ್ಗಅರಿವಿನಿಂದಲಿ ಹರಿಯ | ವರನಾಮ ಸ್ಮರಿಸುತ್ತಕರಗತವು ಆಗಲಿಯೊ | ವರಮುಕ್ತಿಪಥವು 2 ಎರಡು ಮಾರ್ಭೇದಗಳು | ಅರಿವಾಗಲೀಕೆಗೇತರತಮಂಗಳು ಮನಕೆ | ಬರುತಿರಲಿ ಸರ್ವದಾಸಿರಿವಾಯು ಮತ ದೀಕ್ಷೆ | ಗೆರಗಲೀಕೆಯ ಮನಸುಹರಿಯ ಮಮ ಕುಲದೈವ | ಉದ್ದರಿಸೊ ಇವಳಾ 3 ಸಾಧನಕೆ ಸತ್ಸಂಗ | ನೀದಯದಿ ಕೊಟ್ಟಿವಳಮೋದ ಬಡಿಪದು ದೇವ | ಆದಿ ಮೂರುತಿಯೇ |ಮಾಧವನೆ ಬಿನೈಸೆ | ಆದರಿಸುತಿವಳೀಗೆಕಾದುಕೊ ಬಿಡದಲೆ | ಹೇ ದಯಾ ಪೂರ್ಣ 4 ದೇವದೇವೊತ್ತಮನೆ | ಕಾವದೇವನೆ ಹರಿಯಭಾವದಲಿ ಮೈದೋರಿ | ಪೊರೆಯೊ ಇವಳಾಕಾವ ಕರುಣೆಯ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಿಲ್ಲ | ಈ ವಾಣಿ ಬಲುಸತ್ಯ 5
--------------
ಗುರುಗೋವಿಂದವಿಠಲರು
ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ. ಲಕ್ಷ್ಮೀಶ ಪಾಲಿಸೊ ಎನ್ನ | ಜಗ ದ್ರಕ್ಷಕ ಪರಮಪಾವನ್ನ ಈಕ್ಷಿಸು ಕರುಣ ಕಟಾಕ್ಷವ ಬೀರುತ ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ. ನಾಗರಾಜನ ಗಿರಿವಾಸ | ಭೋಗ ಆಗುಮಾಡೆಲೊ ಸರ್ವೇಶ | ನಿನಗೆ ಬಾಗಿ ನಮಿಸುವೆ ಜಗದೀಶ | ಭವ ರೋಗ ಹರಿಸು ಕ್ಲೇಶನಾಶ | ಆಹ ಕೂಗಿದರು ನಿನಗೀಗ ಕೇಳಿಸದೇನೊ ಜಾಗುಮಾಡದೆ ನೀಡೊ 1 ಸೃಷ್ಟಿಗೆ ಎನ್ನನು ಕರೆದೆ | ಭವ ಕಷ್ಟದಿ ಬಂಧಿಸಿ ತಂದೆ | ಇನ್ನು ಘಟ್ಯಾಗಿ ಕಾಪಾಡು ಎಂದೆ | ಮೊರೆ ಮುಟ್ಟದೆ ನಿನಗಿನ್ನು ತಂದೆ | ಆಹ ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2 ಕರ್ಮಬಂಧನಗಳ ಕಡಿಯೊ | ಶ್ರೀಶ ನಿರ್ಮಲರೂಪ ಕೈಪಿಡಿಯೊ | ಬೇಗ ಧರ್ಮ ಅಧರ್ಮವ ತಿಳಿಯೊ | ಜಗ ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3 ಶ್ರೀನಿವಾಸ ಬಾರೊ ಬೇಗ | ನಿನ್ನ ನಾನು ನಂಬಿದೆನೊ ಶ್ರೀ ಭೋಗ | ನೀಗು ನೀನೆ ತ್ರಿಕರ್ಮದ ಭೋಗ | ಬೇಗ ಭವ ರೋಗ | ಆಹ ಪೋಗುತಲಿದೆ ದಿನ ಜಾಗುಮಾಡಲು ಸಲ್ಲ ನಾಗಶಯನ ಎನ್ನ ಬೇಗನೆ ರಕ್ಷಿಸೊ 4 ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ ಬೆನ್ನ ಭಾರವಿದಿನ್ನೇನು | ಕೋರೆ ಮಣ್ಣು ಆರ್ಭಟಿಸುವೆ ನೀನು | ವಟು ಚಿಣ್ಣ ಭಾರ್ಗವ ನೀನು | ಆಹ ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ ಬಣ್ಣಗೆಟ್ಟು ಹಯವನ್ನೇರಿದ ಧೀರ 5 ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ ತತ್ವಾಧಿಪತಿಗಳು ಮುದದಿ | ಜಗ ತ್ಕರ್ತನೆ ಕಾಯ್ವ ದಯದಿ | ಬೇಗ ಇತ್ತು ಮತಿಯ ಸಲಹೊ ದೃಢದಿ | ಆಹ ಸತ್ಯರೂಪನೊ ನೀ ಸತ್ಯ ಸಂಕಲ್ಪನೊ ನಿತ್ಯ ನಿಂತು ಕಾಯೊ 6 ಗೋಪಾಲಕೃಷ್ಣ ವಿಠ್ಠಲ | ಭವ ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ ರಾಪು ಮಾಡುವುದುಚಿತಲ್ಲ | ಜಗ ದ್ವ್ಯಾಪಕ ಭಕ್ತವತ್ಸಲ | ಆಹ ಈ ಪಯೋಜಜಾಂಡದಿ ರೂಪ ರೂಪಾಂತರದಿ ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
--------------
ಅಂಬಾಬಾಯಿ
ಲಾಲಿಪುದೆನ್ನ ಸೊಲ್ಲ ಲಕುಮಿಯ ನಲ್ಲ ನೀಲ ನೀರದ ನಿಭ ನಿರುಪಮ ಮಲ್ಲ ಪ. ಉದಯದೋಳೇಳುತ ಉಚಿತ ಕರ್ಮಗಳ ಸದರದಿ ಮಾಡದೆ ಸಾಧುಪೂಜೆಗಳ ಮದ ಮುಖತನದಿಂದ ಮನೆಯಲ್ಲಿ ತಿರುಗುವೆ- ನಿದನು ನಿನ್ನಯ ಸೇವೆಯೆಂಬ ಭಾವನೆಯಿತ್ತು 1 ಕೀಟಕೆ ಸಾಮ್ರಾಜ್ಯ ಪದವಿಯನಿತ್ತಿ ಹಾಟಕಕಶಿಪನ ಮಗನ ಮೇಲೆತ್ತಿ ಆಟದ ನೆವದಿಂದ ಶಕಟನ ತರಿದಿ ಕಿ- ಭವ ದಾಟುವಂದದಿ ತೋರಿ2 ಪಾದ ವನರುಹಗಳನು ನೆನೆದು ಪೂಜಿಸುವದಕನುಕೂಲಗಳನು ಮನೆಗಧಿಪತಿ ನೀನು ಮಾಡಿ ರಕ್ಷಿಪುದಿನ್ನು ವನಜ ಭವಾರ್ಚಿತ ವೆಂಕಟಾಚಲನಾಥ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು
ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆಪ ಹಿಂದೆ ಮುಂದೆ ಎಂದೆಂದಿಗು ಎನ್ನಯ ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ ಅಪರಾಧಿಯು ಎಂದು ತಿಳಿದರು ಗುಪಿತದಿ ಸಲಹುವದು ಅಪಮೃತ್ಯುವು ಪರಿಹಾರಕೆ ನಿಮ್ಮಯ ಉಪದೇಶದ ಮಂತ್ರವೆ ಪರಮೌಷಧಿ 1 ಕಾಯಕ್ಲೇಶದಿಂದ ಮನಸಿನ ಹೇಯ ವ್ಯಥೆಗಳಿಂದ ಕಾಯಜ ಪಿತನಂಘ್ರಿಯ ಸೇವಿಸದಲೆ ಆಯಾಸದಿ ಮನ ಕಳವಳಗೊಳುತಿದೆ 2 ಆರು ಮಂದಿ ಇಹರು ಮಾಯಾ ಪಾಶಾದಿ ಬಂಧಕ ಪಡಿಸುತ ಹಾಯಲೀಸರೊ ಹರಿ ಅಂಘ್ರಿಗಳಲಿ 3 ಆರಿಗುಸುರಲೇನು ಮಾಡಿದ ಕಾಂiÀರ್iವು ಮುಂದಿನ್ನೂ ಆನಂದಮಯ ವಿಠ್ಠಲದಾಸರ ಕೂಡಿ ಆದರುಸುವುದಿನ್ನೂ ಮುನ್ನೂ4 ಕಮಲನಾಭ ವಿಠ್ಠಲನೊಲುಮೆಯು ಸುಲಭದಿ ಪಡೆವುದಕೆ ಅನುದಿನ ಪ್ರಾರ್ಥಿಸುತ5
--------------
ನಿಡಗುರುಕಿ ಜೀವೂಬಾಯಿ
ವಂದಿಸುವೆ ಗಣರಾಜ ನೀ ದಯದಿಂದ ಪಾಲಿಸುವುದು ಪ ಸದ್ಗುಣಭರಿತನೇ ದುರ್ಗುಣರಹಿತನೇ ವಿಘ್ನವಿನಾಶಕನೇ ಭಗ್ನಗೈಸೋ ಎನ್ನ ಅವಗುಣಗಳ ನೀ ವಿದ್ಯಾದಾಯಕನೇ 1 ಶ್ರೀಶನಂಘ್ರಿಸರೋಜಭೃಂಗ ಮಹೇಶನ ವರಸುತನೇ ವ್ಯಾಸಕರುಣಾಪಾತ್ರನೇ ಮನದಾಸೆ ಪೂರೈಸುವವನೇ 2 ಪಾಶಪಾಣಿಯೆ ಪ್ರಾರ್ಥಿಸುವೆ ನೀ ಲೇಸು ಕೊಡುವುದಿನ್ನಾ ಶ್ರೀಶ ಶ್ರೀ ಹನುಮೇಶವಿಠಲನ ದಾಸನೇ ಅನುದಿನಾ 3
--------------
ಹನುಮೇಶವಿಠಲ
ವನಜಾಕ್ಷಿ ಕೇಳೆನ್ನ ಮನದನ್ನನಂದವನು ಮನನಲಿದು ಪೇಳುವೆನು ಮಹಿಮೆಯನ್ನು ತುಚ್ಛಮಾಗಿರುತಿರ್ಪ ಕಚ್ಛಪಾಕಾರದೊಳು ಇಚ್ಛೆಗೊಂಡವನಿವನೆ ಮಚ್ಚನಯನೆ ಹೆಡ್ಡತನದಲಿ ಬಂದು ದೊಡ್ಡ ಮಡುವೊಳು ನಿಂದು ಗುಡ್ಡವನು ಪೊತ್ತಿಹನೆ ದಡ್ಡನಿವನೆ ಸುರುಚಿರಾಂಗವನಿಂತು ಮರೆಗೈದು ಮುಸುಕಿನಿಂ ಪರಮಸಂಭ್ರಮವಾಂತು ಮೆರೆಯುತಿಹನೆ ಕ್ಷೋಣಿಯೊಳಗಿಂತಹರ ಕಾಣೆನಿನ್ನು ಪ್ರಾಣೇಶನಾಗಿನಾಂ ಪಡೆದೆನಿವನಂ ಏಣಾಕ್ಷಿ ನಡೆದುದಿನ್ನಾಡಲೇನು ಜಾಣ ಶೇಷಾದ್ರೀಶನಾಣ್ಮನಹನು
--------------
ನಂಜನಗೂಡು ತಿರುಮಲಾಂಬಾ
ವರಗಡದಿನ್ನೀಶೇಷ ವಿಠಲ ಪೊರೆ ಇವನ ಪ ನಿರುತ ತವ ಚರಿತೆಗಳ | ಸ್ಮರಿಸುತ್ತ ಭಕ್ತಿಯಲಿಮರುತಾಂತರಾತ್ಮ ತವ | ಚರಣಕರ್ಪಿಪನ ಅ.ಪ. ಭವ | ಬಂಧದೊಳು ಸಿಲ್ಕಿ ಬಹುನೊಂದವಗೆ ಕರುಣದಲಿ | ಕುಂದನೆಣೆಸದಲೇಮಂದ ಹಾಸವ ಬೀರಿ | ಸಂಧಿಸೋ ಸಂತೋಷಇಂದಿರಾರಾಧ್ಯ ಪದ | ಮಂದರೋದ್ಧಾರೀ 1 ಉತ್ತಮ ಸುಸಂಸ್ಕøತಿಯ | ಪೊತ್ತು ಜನಿಸಿಹನಿವನುಮತ್ತೆ ದಾಸರ ಕರುಣ | ಪಾತ್ರನಿರುವಾಅರ್ಥಿಯಲಿ ದಾಸತ್ವ | ಪ್ರಾರ್ಥಿಸುತ್ತಿಹಗೆ ನಾ-ನಿತ್ತಿಹೆನೊ ಅಂಕಿತವ | ಸುಪ್ತೀಶನಾಜ್ಞಾ2 ಮೋದ ತೀರ್ಥರ ತತ್ವ | ವಾದಾನುವರ್ತಿ ಇವಭೋಧಿಸೀ ಪರತಮವ | ಭೇದ ಪಂಚಕನಆದರದಿ ಕೈ ಪಿಡಿದು | ಉದ್ಧರಿಸ ಬೇಕೆಂದುವೇದ ವೇದ್ಯನೆ ನಿನ್ನ | ಪ್ರಾರ್ಥಿಸುವೆ ಹರಿಯೇ 3 ಶ್ರವಣ ಮನಕಾನಂದ | ಭುವನ ಪಾವನವೆನಿಪತವಮಹಿಮೆ ಪೊಗಳಲ್ಕೆ | ಕವನ ಶಕ್ತಿಯನೂನೀವೊಲಿದು ಅಭಿವೃದ್ಧಿ | ಗೈವುದಿವನಲಿಯೆಂದುಪವನಾಂತರಾತ್ಮ ಬಿ | ನ್ನವಿಪೆನೋ ದೇವಾ4 ಭಾವಕ್ರಿಯೆ ದ್ರವ್ಯದೊಳು | ಅದ್ವಿತಿಯ ನೀನೆಂಬಭಾವದನುಭವವಿತ್ತು | ನೀ ವೊಲಿಯೊ ಇವಗೇಕಾವರನ್ಯರ ಕಾಣೆ | ಗೋವರ್ಧನೋದ್ಧರನೆಕೋವಿದರ ಒಡೆಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾಜಿ ವದನ ವಿಠಲ ಕಾಪಾಡೊ ಇವಳಾ ಪ ತೈಜಸೀ ರೂಪದಲಿ | ಆಶಿಷವನಿತ್ತೇ ಅ.ಪ. ಕಾಮಿತಾರ್ಥದನೆ ಸ | ತ್ಕಾಮ ಫಲಿಸುತಲಿವಳಕಾಮ ಜನಕನೆ ದೇವ | ಕಾಪಾಡೊ ಹರಿಯೇ |ಕಾಮ ಮದ ಮಾತ್ಸರ್ಯ | ಶತ್ರು ವರ್ಗವ ಕಡಿದುಕಾಮಿನಿಯ ಕೈ ಪಿಡಿದು | ಕಾಪಾಡೊ ಹರಿಯೇ 1 ಜ್ಞಾನಾನು ಸಂಧಾನ | ಪಾಲಿಸುತಲಿವಳೀಗೆಪ್ರಾಣೇಶ ತವನಾಮ | ಸತತ ಸ್ಮರಿಸೂವಾ |ಜಾಣೆ ಎಂದೆನಿಸಿ ಸಂ | ಧಾನ ಸುಖವೀಯೊ ಹರಿಮಾನನಿಧಿ ಮಧ್ವಾಖ್ಯ | ಪ್ರಾಣಸನ್ನುತನೇ 2 ನೀವೊಲಿಯದಿನ್ನಿಲ್ಲ | ದೇವ ದೇವನೆ ಹರಿಯೆಗೋವತ್ಸದನಿ ಕೇಳಿ | ಆವು ಬರುವಂತೇ |ಧಾವಿಸೀ ಬಾರೋ ಗುರು | ಗೋವಿಂದ ವಿಠ್ಠಲನೆಭಾವುಕಳ ಪೊರೆಯಲ್ಕೆ | ದೇವ ಹಯವದನಾ 3
--------------
ಗುರುಗೋವಿಂದವಿಠಲರು