ಒಟ್ಟು 279 ಕಡೆಗಳಲ್ಲಿ , 15 ದಾಸರು , 230 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡು ನಿನ್ನೊಳು ನಿನ್ನುಗಮ ಮನವೆ ಧ್ರುವ ನೋಡು ಒಡನೆ ಖೂನ ಬಿಡದೆ ಸಾರುತದೆ ನಿಗಮಾ ದೃಢ ಭಾವದಲಿ ಪಡೆದು ಸದ್ಗುರು ದಯ ವಿಡಿದು ಸೆರಗ ಕುಡುವದಿದು ಸುಗಮ 1 ಉಗಮಸ್ಥಾನದ ಉದ್ಭವ ತಿಳಿಯದೆ ಬಿಗಿದ್ಹೆಮ್ಮಿಲಿಹುದ್ಯಾಕೆ ಬಗೆ ಬಗೆ ಸಾಧನ ಶ್ರಮಗೊಂಡು ಜಗಜಾಲದಿ ಭ್ರಮಿಸುವುದಿದೇಕೆ 2 ನಿರ್ಮಳ ನಿಶ್ಚಳ ನಿಜಘನವರಿತು ಕರ್ಮ ಬಂಧನವ ಗೆಲಿಯಾ ಮರ್ಮಿಲಿ ಮಹಿಪತಿ ಗುರುಯೋಗಧರ್ಮದಿ ನಿರ್ಮನದಲಿ ನಿಜಗೂಡ ಮನವೇ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡುವ ಬನ್ನಿ ಸ್ವಾಮಿಯ ಅಂತರ್ಯಾಮಿಯ ಭಕ್ತಿಯ ದೃಢಯುಕ್ತಿಯ 1 ದೇವದೇವನ ಪೂರ್ಣ ನೋಡುವ ಸೇವೆಮಾಡುವ ಸರ್ವದಾ ಕೊಂಡಾಡುವ ನವವಿಧ ಭಕ್ತಿಯ ಮಾಡುವ ಭಾವವಿಡುವ 2 ತನು ಮನಧನ ಅರ್ಪಿಸಿ ಬಿಡುವ ಮನಗೂಡುವ ಪ್ರಾಣಾಯಾಮ ಮಾಡುವ ಅನುದಿನ ಸಾಧಿಸಿ ನೋಡುವ ಘನಗೂಡುವ 3 ಇಡಾಪಿಂಗಳ ಮಧ್ಯ ನೋಡುವ ನಡೆವಿಡುವ ನಡುಹಾದಿಗೂಡುವ ಒಡನೆ ಸ್ವಸುಖ ಪಡೆವ ಗೂಢ ನೋಡುವ 4 ಸವಿಸುಖಸಾರ ಸುರುತದೆ ದ್ರವಿಸುತದೆ ಠವಠವಿಸುತದೆ ರವಿಕೋಟಿಪ್ರಭೆ ಭಾಸುತದೆ ಆವಾಗಲ್ಯದೆ 5 ಏನೆಂದನಬೇಕನುಭವ ಖೂನದೋರುವ ಘನ ಮಳೆಗರೆವ ಸ್ವಾನುಭವದಲಿ ಸೇವಿಸುವ ಅನುಸರಿಸುವ 6 ಜಾಗಿಸುತ್ತದೆ ವಸ್ತುಮಯ ಬಗೆಬಗೆಯ ಯೋಗ ಇದೆ ನಿಶ್ಚಯ ಸುಗಮಸಾಧನ ಮಹಿಪತಿಯ ಸುಜ್ಞಾನೋದಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರ ಅಕ್ಷರವ ಧ್ರುವ ಕ್ಷರ ಅಕ್ಷರವ ಸೆÉರಗ ಪಿಡಿಯೋ ಗುರು ಮುಖದಲಿ ನೀ ಪೂರ್ಣ ಪರಮಾನಂದ ಸುಖದೋರುವ ಬಗೆ ಅರಿಯೋ ಕೂಟ ಸ್ಥಳದಲಿ ಪ್ರಾಣಿ 1 ರೇಚಕ ಪೂರ್ವಕದನುಭವ ತಿಳಿದು ಯೋಚಿಸಿ ನೋಡಲಿಂದ ಸೂಚಿಸಿ ತಾನೆ ಭಾಸುವ ಕ್ರಮವಿದು ಅಚರಿಸೋ ಅನುಭವದಲಿ ಪ್ರಾಣಿ 2 ಕ್ಷರ ಅಕ್ಷರವ ತಿಳಿಯದೆ ಬರೆÀವಾ ಅಕ್ಷರದಾ ಖೂನ್ಯಾಕ ಎರಡೇ ಮಾತಿನ ಅರಿವೇ ಅದರೆ ಪರಲೋಕಕ್ಕೆ ಸೋಪಾನವಿದು ಪ್ರಾಣಿ 3 ಇದೇ ಹೇಳಿದ ಗೀತೆಯಲ್ಲಿ ಶ್ರೀಕೃಷ್ಣನೆ ತಾಂ ಅರ್ಜುನಗೆ ಇದರಿಟ್ಟಿದು ಘನಸುಖ ಆ ಮಹಿಮನೆ ಇದರಿಂದಲಿ ತಿಳಿವದು ನೀ ಪ್ರಾಣಿ 4 ಇಡಾ ಪಿಂಗಳ ನಾಡಿ ನಡುವಿದು ಸಾಧಿಸಿ ಮಾತಿನ ಖೂನ ಎಡಬಲ ನೋಡದೆ ಪಡಕೋ ಮಹಿಪತಿ ಒಡನೆ ನಿನ್ನೊಳು ನಿಧಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪೂಜಿಮಾಡುವ ಬನ್ನಿ ರಾಜತೇಜೋನಿಧಿಯ ರಾಜಾಧಿರಾಜ ಮಹಾರಾಜ ಗುರುಮೂರ್ತಿಯ ಧ್ರುವ ಮನವೆ ಸುಮನಮಾಡಿ ಘನಗುರು ಪಾದÀಲಿಡಿ ಅನುಭವದಿಂದ ನೋಡಿ ಅನುದಿನವೆ ಕೊಂಡಾಡಿ 1 ಷೋಡಶೋಪಚಾರ ಮಾಡಿ ದೃಢ ವಿಚಾರ ನೋಡಿ ಮನೋಹರ ಒಡಿಯನೆ ಸಹಕಾರ 2 ಕಣ್ಣಿನೊಳಿಟ್ಟು ಖೂನ ಪುಣ್ಯನೋಡಿ ನಿಧಾನ ಚಿಣ್ಣಮಹಿಪತಿಪ್ರಾಣ ಧನ್ಯಗೈಸುವ ಸಾಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಂತೆಂದ್ಹಿಗ್ಗ ಬೇಡೆಲೊ ಖೋಡಿ ಹೋ ಯ್ತೆಂದಳಬೇಡೆಲೆ ಖೋಡಿ ಪ ಬಂತುಹೋಯ್ತೆಂಬುದರಂತರ ತಿಳಕೊಂ ಡಂದಕನನುವಿಗೆ ತ್ವರೆ ಮಾಡಿ ಅ.ಪ ಬಂದು ನಿನಗಾಗುವುದೇನೋ ಮತ್ತು ಹೋದರೆ ನಿಂತ್ಹೋಗುವುದೇನೋ ಮಂದನಾಗದೆ ನೀ ಬಂದ ಖೂನ ತಿಳಿ ದೊಂದಿ ಭಜಿಸಿ ಹರಿದಯ ಪಡಿ1 ಎಂಥಸಮಯವನು ನೀ ಪಡೆದು ಭವ ಸಂತೆಯೊಳಗೆ ನಿಂತಿ ಮೈಮರೆದು ಸಂತೆಯ ತಂತ್ರಕೆ ಸೋಲದೆ ಕಂತು ಪಿತನನೆನಿ ಲಗುಮಾಡಿ 2 ಕ್ಷಿತಿಯ ಸುಖವು ನಿನಗೊಂದಿಲ್ಲ ನಿಜ ಭವ ಮೂಳ ಸತತದಿ ಭಕುತಹಿತ ಶ್ರೀರಾಮನನ್ನು ನುತಿಸಿ ಮುಕ್ತಿ ಸುಖ ಪಡಿಬೇಡಿ 3
--------------
ರಾಮದಾಸರು
ಬರುದೆ ಭ್ರಮೆಯಗೊಂಡ್ಯೊ ಮರುಳ ಮನುಜ ನೀನು ಧ್ರುವ ಎರವ್ಹಿನ ಮನೆಯೊಳು ಮರಹು ಮರೆಯಗೊಂಡು ಗರವು ಹಿಡಿದು ನಿನ್ನ ಕುರುಹು ತಿಳಿಯಲಿಲ್ಲ ಹರೆದು ಭ್ರಾಂತಿಗೆ ಬಿದ್ದು ಸೊರಗಿ ದಣಿದೆಲ್ಲ 1 ಏನು ಮರುಳಗೊಂಡ್ಯೊ ಹೀನಯೋನಿಯ ಮುಖಕೆ ಕಾನನದೊಳು ಪೊಕ್ಕು ಖೂನ ತಿಳಿಯದೆ ನಿನ್ನ ಜನುಮಜನುಮ ಬಂದ್ಯೊ ಜ್ಞಾನಶೂನ್ಯದಲಿ 2 ನಾನು ನನ್ನದು ಎಂದು ಏನು ಗಳಿಸಿಕೊಂಡ್ಯೊ ಸ್ವಾನುಭವದ ಸುಖ ಅನುಭವಿಸದೆ ಹೋಗಿ ಸ್ವಾನ ಸೂಕರಯೋನಿ ಮುಖಸೋಸಿದೆಲ್ಲ 3 ಹೊನ್ನು ಹೆಣ್ಣಿನ ಸವಿಯು ಬಣ್ಣಿಸಿ ನೀ ಬಯಸಿದಲ್ಲ ಮಣ್ಣೇ ಮಾಣಿಕವೆಂದು ದಣ್ಣನೆ ದಣುವರೆ ಕಣ್ಣಗೆಟ್ಟರೆ ಬ್ಯಾಡೊ ತನ್ನೊಳರಿಯದೆ 4 ಮುತ್ತಿನಂಥ ಜನುಮ ವ್ಯರ್ಥಗಳಿಯಬ್ಯಾಡ ಪಾದ ಬೆರ್ತು ಮಹಿಪತಿ ಪೂರ್ಣ ಸಾರ್ಥಕ ಮಾಡಿಕೊಳ್ಳೊ ಗುರುತುವರಿತು ನೀ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲುಸೂಕ್ಷ್ಮ ಗುರು ಗೂಢವಿದ್ಯ ನೆಲೆವಂತಗಿದು ನಿಜವಾಗುದು ಸಾಧ್ಯ ಧ್ರುವ ಕಣ್ಣಿನ ಕೊನೆ ಮುಟ್ಟಿನೋಡಿ ನಿಜಖೂನ ಉನ್ಮನವಾಗಿ ಬೆರೆದಾಡುವ ನಿಜಸ್ಥಾನ ಚೆನ್ನಾಗ್ಯಾದಾನಂದ ಘನ ಭಿನ್ನವಿಲ್ಲದೆ ಮಾಡಿ ನಿಜಗುರು ಧ್ಯಾನ 1 ಜಾಗ್ರ ನಿದ್ರೆಯ ಮಧ್ಯ ಅರವಿನೊಳು ನಿಜಗೂಡಿ ಶೀಘ್ರ ಸಿದ್ಧಾಂತನುಭವಿಸಿ ತಾಂ ನಿಜಮಾಡಿ ಅಗ್ರ ಗುರುಪಾದವನು ಕೂಡಿ ಶುಕ ಮುನಿಗಳಿಗಿದೆ ನೋಡಿ 2 ಶಿರದಲಿ ಕರವಿಟ್ಟು ನೋಡಿ ನಿಜವರ್ಮ ಹರಿಸಿ ಅನೇಕ ಜನ್ಮಾಂತರದ ದುಷ್ಕರ್ಮ ತರಳಮಹಿಪತಿಗಿದೆ ಸುಬ್ರಹ್ಮ ಗುರು ಭಾಸ್ಕರಸ್ವಾಮಿ ಶ್ರೀಪಾದ ಧರ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾಗೋ ಬಾಗೋ ಜೀವನೇ ಸಾಗರನಿಲಯಗೆ ಪ ಬಾಗೋ ಮನಸಿನ ನೀಗಿ ಕಲ್ಮಷ ಬೇಗ ತಿಳಿದು ನೀಜೋಗಿವಂದ್ಯಗೆ ಅ.ಪ ಕನಸಿದು ಜಗಮೋಹ ಕಾಣು ಕಾಣೋ ನಿನಗೆ ವೈಕುಂಠ ಒಂದೇ ಗೇಣೋ ಚಿನುಮಾಯಾತ್ಮನ ತ್ವರ ಕಾಣು ಕಾಣೋ ತನುಮನವರ್ಪಿಸಿ ನೆನವು ನಿಲ್ಲಿಸಿ ನಿಜ ಘನಮಹಾತ್ಮನ ಹಿಡಿ ಖೂನ ಖೂನೋ 1 ಕಾಯ ಕಾಯ ಗುರುತಿಟ್ಟರಿಯಿದರ ನೆಲೆಯ ನೆಲೆಯ ಮರುಳನೆ ನರಕದ ಕುಣಿಯು ಕುಣಿಯೋ ನೆರೆದು ತೋರಿ ಸಂತೆ ಹರಿದು ಹೋಗುವಂತೆ ಧರೆ ನಿನಗೊಂದಿನ ಮಾಯ ಮಾಯ 2 ಬಂದದ್ದು ವಿಚಾರ ಮಾಡೋ ಮಾಡೋ ಇಂದಿನ ಸಮಯ ಕಳಿಬೇಡೋ ಬೇಡೋ ಬಂಧುರಸುಖಕೆ ಮನ ನೀಡೋ ನೀಡೋ ಇಂದು ನಾಳೆನ್ನದೆ ತಂದೆ ಶ್ರೀರಾಮನ ಬಂಧುರಚರಣವ ಪಾಡೋ ಪಾಡೋ 3
--------------
ರಾಮದಾಸರು
ಬಾರಯ್ಯ ಗುರು ಸ್ವಾಮಿ ಶ್ರೀಸದ್ಗುರು ಎನ್ನ ಮನೋಮಂದಿರಕೆ ಕರುಣಾನಂದದ ಸುಖ ಬೀರುತ ಬಾರೈ ಆತ್ಮಾನುಭವಕೆ ಧ್ರುವ ಕಣ್ಣು ಹಾರುತಿದೆÀ ಬಲದೆನ್ನ ಖೂನದೋರವ್ಹಾಂಗಿಂದು ಚೆನ್ನಾಗ್ಹೊಳಿಯುತಿ ಸುಚಿಹ್ನ ನೀನೊಲಿಯವ್ಹಾಂಗೆ ಬಂದು ಎನ್ನೋಳೀವ್ಹಾಂಗ ಸನಾತನ ಪಾಲಿಸಿದೆನಗೊಂದು ಧನ್ಯಗೈಸುವ ದಯಾಳು ನೀನಹುದೊ ಕೃಪಾಸಿಂಧು 1 ಏನೊಂದರಿಯೆ ಒಂದು ಸಾಧನ ಧ್ಯಾನಮೌನ ಹ್ಯಾಗೆಂದು ಖೂನಬಲ್ಲೆನೊ ನಿಮ್ಮ ಬಿರುದಿನ ದೀನನಾಥ ನೀ ಎಂದು ನ್ಯೂನಾರಿಸದೆನ್ನೊಳಗಿನ ನೀನೆ ಅನಾಥಬಂಧು ಎನಗುಳ್ಳ ಸ್ವಾಮಿ ಸದೋದಿತ ನೀನಹುದೊ ಎಂದೆಂದು 2 ತಾಯಿ ಶಿಶುಸ್ತನಪಾನಕೆ ಬಾಯಿಯೊಳಗಿಡುವ್ಹಾಂಗ ಸಾಯಾಸವಿಲ್ಲದೀಪರಿ ದಯಮಾಡುವದೆನಗೆ ಶ್ರೇಯಸುಖದಾಯಕೊಬ್ಬನು ನೀನೆ ಭಾನುಕೋಟಿ ಎನಗೆ ಅನುದಿನ ದೀನಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಬಾರೊ ಗುರುರಾಯ ತೋರಯ್ಯ ನಿಜಪ್ರಭೆಯ ಬೀರಿಸಯ್ಯ ನಿಮ್ಮದಯಕರುಣಿಸಯ್ಯಾನಂದೋದಯ ಧ್ರುವ ಇಂದು ಪುಣ್ಯಚರಣ ನೋಡೇನೆಂದು ಮನ್ನಿಸಯ್ಯ ಕೃಪಾಸಿಂಧು ಧನ್ಯಗೈಸಯ್ಯ ನೀ ಬಂದು 1 ಮನವು ನೆನವುತದೆ ನಿಮ್ಮ ಅನುವಾಗಿ ನೋಡೇನೊಮ್ಮೆ ಕನಗರಿಸೇಳುತ್ತದೆ ನಿಮ್ಮ ಅನುಕೂಲಾಗಾನಂದೋಬ್ರಹ್ಮ 2 ನೆವನಗೊಂಡಿದೆನ್ನಪ್ರಾಣ ಹವಣಿಸಿ ನೋಡಲು ಖೂನ ಭಾವಿಸುತಿದೆ ಜೀವನ ದೈವಾಗಿಬಾರಯ್ಯ ಪೂರ್ಣ 3 ಕಂದ ನಿಮ್ಮ ಮಹಿಪತೆಂದು ಬಂದು ಕೂಡೊ ಹೃದಯಲಿಂದು ತಂದೆ ತಾಯಿ ನೀನೆ ಬಂಧು ಎಂದೆಂದಗಲದಿರೊ ಬಂದು 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಿದ್ದ ಹುಣ್ಣು ಮಾಯವಲ್ಲದವ್ವಾ ಹ್ಯಾಂಗೆ ಸಹಿಸಲಸಾಧ್ಯ ಬೇನೆ ನಿದ್ರೆ ಬರದವ್ವಾ ಪ ಬಿದ್ದ ಹುಣ್ಣು ಮಾಯವಲ್ಲದು ಮುದ್ದು ಮುಖ ನಿನ್ನಪಾದ ಪದ್ಮಕೆ ಬಿದ್ದು ಬೇಡುವೆ ಸದ್ದು ಮಾಡದೆ ಅಬ್ದಿಶಯನನೆಂಬ್ವೈದ್ಯನ್ನ್ಹಿಡಿತಾ ಅ.ಪ ಮುತ್ಯ ಅಜ್ಜರನಳೀತು ಯೀ ಹುಣ್ಣು ಮತ್ತು ಎನ್ನ ಹೆತ್ತ ತಾತ ಮಾತಾ ಪಿತರನು ಹತ್ತಿಕೊಂಡು ಭ್ರಾತೃ ಬಂಧುವನು ಗೊತ್ತಿಗ್ಹಚ್ಚಿತು ಎತ್ತಪೋದರೊ ಪತ್ತೆಗಾಣೆನು ಅತ್ತು ಅತ್ತು ಇದರ ಬೇನೆಗೆ ಸತ್ತು ಸತ್ತು ಹೋದರೆಲ್ಲರು ಪುತ್ರ ಮಿತ್ರ ಕÀ ಳತ್ರರೆಲ್ಲರ ವ್ಯರ್ಥಕೊಲ್ಲಿ ಬೆನ್ಹತ್ತಿದೆನ್ನಗೆ 1 ಎಷ್ಟು ಬಂಧುಬಳಗವನೀ ಹುಣ್ಣು ನುಂಗಿಬಿಟ್ಟಿದೆ ಇಷ್ಟು ಖೂನಕ್ಕುಳಿಸಿಲ್ಲೋರ್ವರನು ಶಿಷ್ಟಜನರಿಗೆ ಮೃತ್ಯು ಕಾಣ್ಹುಣ್ಣು ಬಿಟ್ಟಿಲ್ಲಾರನು ಎಷ್ಟು ಪೇಳಲಿ ನಷ್ಟಸುದ್ದಿಯನು ದುಷ್ಟಶಿಷ್ಟರೆಂಬರೆಲ್ಲರ ಕಟ್ಟಿ ಮುರಿದು ಮುಟ್ಟಿಗಿಯಮಾಡಿ ಮೊಟ್ಟೆಕಟ್ಟಿ ಕೊಟ್ಟು ಮೃತ್ವಿಗೆ ಕಟ್ಟಕಡಿಗೆ ಬೆನ್ನಟ್ಟಿದೆನಗೆ 2 ಕುಂತೆನೆಂದರೆ ಕುಂದ್ರಗೊಡದಮ್ಮ ಸಂತಜನರೊಳು ನಿಂತೆನೆಂದರೆ ನಿಂದ್ರ ಗೊಡದಮ್ಮ ಸಂತಸೆಂಬುದು ಇನಿತು ಇಲ್ಲಮ್ಮ ಅಂತರಂಗದಿ ನಿಂತು ಸುಡುವುದು ತಾಳಲೆಂತಮ್ಮ ಅಂತ:ಕರಣದಿ ಪೋಗಿ ಎನ್ನಯ ಅಂತ್ಯಕ್ವೈದ್ಯನಾದಂಥ ಪ್ರಾಣದ ಕಾಂತ ಶ್ರೀರಾಮನನ್ನು ಕರೆತಂದು ಕಾಂತೆ ಈ ಹುಣ್ಣು ಮಾಯ್ಸೆ ಬೇಗನೆ 3
--------------
ರಾಮದಾಸರು
ಬೆಜ್ಜರವಿಡಿಯಲು ಗುರುಭಕ್ತಿಗೆ ತಾ ಹೆಜ್ಜೆಜ್ಜಿಗೆ ನಿಧಾನ ಸಜ್ಜನರನುದಿನ ಕೊಡುವರು ಸುಖ ಸಾಮ್ರಾಜ್ಯದ ಸುಸನ್ಮಾನ ಧ್ರುವ ಅಂಜಿಕೆಂಬುದು ಅಂಜನ ಕಣ್ಣಿಗೆ ಕಂಜನಾಭನ ಖೂನ ರಂಜಕವೆಂಬುದು ಇದೇ ಭಕ್ತರಿಗೆ ನಿಜತತ್ವದ ಸಾಧನ ರಂಜನೆದೋಲು ಒಣ ಭಂಜನೆ ತಾ ಪ್ರಾಂಜಳಾಗುರು ಙÁ್ಞನ ನಿರಂಜನ ಸೇವೆಯ ಮಾಡುದೆ ಪೂರ್ಣ 1 ಭಕ್ತಿಗೆ ಸಲಿಗಿ ಕೆಲಸಕೆ ಬಾರದು ಯುಕ್ತಿವಂತರು ನೋಡಿ ಶಕ್ತನಾದರೆ ಬಾಗಿರಬೇಕು ಅಹಂ ಭ್ರಮ ಈ ಡ್ಯಾಡಿ ಯುಕ್ತಿಗಿದೊಂದೇ ಕೀಲು ದೃಢ ಭಕ್ತಾಶ್ರಯ ಮಾಡಿ ಭೋಕ್ತಭಾವದ ಸದ್ಗುರುರಾಯ ತಾ ಬಾಹನು ಕೈ ಗೂಡಿ 2 ಅಂಜಂಜಿ ನಡೆದಮ್ಯಾಲೆ ಮಹಿಪತಿ ನಿಶ್ಯಂಕ ನೀನಾಗೊ ಅಂಜುವ ಭವಭಯ ನೀಗೊ ಗುಂಜಾಗಿಹ ಕರ್ಮದ ಬಾಧಿಯೊಳು ಸಿಲಕುವದೆಲ್ಲ ಸೋಂಗೊ ರಂಜಿಸುತಿ ಹ್ಯ ಸದ್ಗುರು ಪಾದಕೆ ನೀ ವಾಜಿಲಿ ಶರಣ್ಹೋಗೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೆಳಗಿನೊಳು ಬೆಳಗಾಯಿತು ನೋಡಿ ಥಳಥಳಿಸುತ ಮನದೊಳಗೆ ಝಳಿಸುತಿಹದು ಜಗದೊಳಗೆ ಧ್ರುವ ಬೆಳಗಾಯಿತು ಎನ್ನೊಳಗೆ ಸುಳಿವು ದೋರಿದ ಸದ್ಗುರು ಕೃಪೆಯ ಹೇಳಲಿನ್ನೇನದರ ಖೂನ ತಿಳಿದೇನೆಂದರೆ ಎಳೆಯು ಸಿಲುಕದು ಬಲು ಸೂಕ್ಷ್ಮ ಸುಜ್ಞಾನ ಹೇಳಿ ಕಿತ್ಯಾಡುವ ಮರುಳರಿಗೆ ತಿಳಿಯದಿದರನುಸಂಧಾನ ಕಳೆಯದ ಕಲ್ಪನೆ ಅನುಮಾನಿಗಳಿಗೆ ತಿಳಿಯುವುದೆ ಸದ್ಗತಿ ಸಾಧನ 1 ಬೆಳಗಿ ಬೆಳಗು ಬೆರೆದವನೆ ತಾ ಕುಲಕೋಟಿಗಳು ಧನ್ಯ ಮಳೆಮಿಂಚಿನ ಕಳೆಕಾಂತಿಗಳಿಡುತದೋರಿದ ಸದ್ಗುರು ಪುಣ್ಯ ಗುಹ್ಯ ತಾರ್ಕಣ್ಯ ಬೆಳಗು ಬೈಗಿಲ್ಲದ ಬೆಳಗಿನ ಪ್ರಭೆ ತಿಳಿದವನೆ ಮೂಲೋಕದೊಳಗೆ ಮಾನ್ಯ 2 ಬೆಳಗಿನೊಳು ಬೆರಗಾದನು ಮಹಿಪತಿ ಅತಿ ಆಶ್ಚರ್ಯವ ನೋಡಿ ತೊಳಲಿ ಬಳಲುವ ನಿದ್ರೆಯಗಳೆದನು ತಾ ಈ ಡ್ಯಾಡಿ ನಿಜ ಒಡಮೂಡಿ ಭವ ಪಾದವ ಕೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಡಿಕೋತೆ ಕೇಳಿ ನೋಡಿ ನಿಜಬಾಳಿ ಗೂಢಗುರುತವ ಮನಗಂಡು ನೆಲೆಗೊಳ್ಳಿ 1 ಒಂದಕೊಂದು ಮಾಡಿ ಒಂದು ಪಥಗೂಡಿ ಹಿಂದ ಮುಂದೆ ನೋಡುವ ಸಂದೇಹವೀಡಾಡಿ 2 ಅರ್ತುಕೊಳ್ಳಿ ಖೂನ ತ್ವರಿತ ಗುರುಜ್ಞಾನ ಕರ್ತು ಮಹಿಪತಿಸ್ವಾಮಿದೋರುವ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇರ್ಯದ ಭಾವ ಮುಕುತಿ ಸುವರ್ಮ ತೋರುವದೊಂದೇ ಸದ್ಗುರು ದಯಾಧರ್ಮ ಧ್ರುವ ನೆನವಿಗೆ ನೆಲೆಗೊಳದೆ ನಿಜಧ್ಯಾನ ಅನಕಾ ದೋರುವಾದ ಸದ್ವಸ್ತುದಾ ಖೂನಾ 1 ಮನದಿಂದಲಿ ಮನವಾಗದೆ ಉನ್ಮನ ತಾನಾಗುವದೆ ಸದ್ಗುರು ಕೃಪೆಜ್ಞಾನ 2 ದೀನ ಮಹಿಪತಿಗೆ ತೋರಿ ನಿಜಗುಟ್ಟು ಭಾನುಕೋಟಿ ತೇಜ ತಾನಾದ ಉಂಟು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು