ಒಟ್ಟು 208 ಕಡೆಗಳಲ್ಲಿ , 61 ದಾಸರು , 176 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳ್ಳೆಯದೊಳ್ಳೆಯದು ಪಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದುದು ಬಲ್ಲಿದತನವೆ ? ಅ.ಪಬಿಡೆನೊ ಬಿಡೆನೊ ಎನ್ನ ಒಡೆಯ ತಿರುಮಲ ನಿನ್ನ |ಉಡೆಯ ಪೀತಾಂಬರ ಪಿಡಿದು ನಿಲಿಸಿಕೊಂಬೆ 1ಅರಿವುಮರೆವು ಮಾಡಿ ತಿರುಗಿಸಿದೆಯಾ ಎನ್ನ |ಕೊರಳಿಗೆ ನಿನ್ನಯಚರಣಕಟ್ಟಿಕೊಂಬೆ 2ಅತ್ತೆಯ ಮಕ್ಕಳಿಗೆ ತೆತ್ತಿಗ ನಿನಗಾಗಿ |ಎತ್ತದ ರಾಶಿ ತಂದಿತ್ತ ಪರಿಯಲಿ 3ಅತ್ತಲಿತ್ತಲಿ ನೋಡಿನ್ನೆತ್ತ ಪೋಗಲಿ ನಿನ್ನ |ಚಿತ್ತದಲ್ಲಿ ಹೊತ್ತು ಕಟ್ಟಿಕೊಂಬೆನು 4ಇರುಳು ಹಗಲು ಬಿಡೆದೆ ವರಪುರಂದರಗೊಲಿದೆ |ಅರಿದುಏನು ಇಷ್ಟು ಪುರಂದರವಿಠಲನೆ 5
--------------
ಪುರಂದರದಾಸರು
ಗಣೇಶ ಪ್ರಾರ್ಥನೆ1ಲಂಬೋದರ ಪಾಹೀ ಪಾಹೀ ಜಗದ್ಗುರು|ಶಂಭುನಂದನ ಸುರಸುತ ಪಾದಾ ಪಯೋಗೀಶಾರ್ಚಿತ ಶ್ರೀ ಪಾರ್ವತಿ ಪುತ್ರ ನತಮಿತ್ರಾ |ಆಗಸವಾಳ್ದಮೂಷಕರೂಢಾ ||ನಾಗಶಯನನಪಾದಧ್ಯಾನದಲ್ಲಿಡು ನಿತ್ಯಾ |ಶ್ರೀ ಗಣಪತಿ ನಿನ್ನ ಬಲಗೊಂಬೆ 1ಶ್ರೀವರ ಶ್ರೀರಾಮಚಂದ್ರ ಧರ್ಮರಾಯಾ |ದೇವೇಂದ್ರಾ ನಿನ್ನ ಪೂಜಿಸಿದಾರೋ ||ಕೇವಾಲಾಕಲಿದುರ್ಯೋಧನ ಪೂಜಿಸದೆ ಕೆಟ್ಟಾ |ಶ್ರೀ ವಿಘ್ನೇಶ್ವರ ನಿನ್ನ ಬಲಗೊಂಬೆ 2ದನುಜಾರ ಮೋಹೀಸೂವದಕೆ ಸಂಕಟ ಚೌತಿ |ಮನಿಸೀ ಪೂಜಿಸಿಕೊಂಬೆ ಖಳರಿಂದಾ ||ಮುನಿ ವ್ಯಾಸ ಕೃತ ಗ್ರಂಥಾರ್ಥವ ತಿಳಿದು ಬರೆದಾ |ಗಣರಾಜಾ ನಿನ್ನ ಪಾದಾ ಬಲಗೊಂಬೆ 3ಶಂಬು ಚಕ್ರಾಂಕಿತಾ ಪಾಶಧಾರನೇ ರಕ್ತ |ಅಂಬರಾದ್ವಯ ಭೂಷಾ ನಿರ್ದೋಷಾ ||ಶಂಬರಾರಿಪುಶರಾ ವಿಜತಾಮೃದ್ಭವ ಗಾತ್ರಾ |ಅಂಬಾರಾಧಿಪ ನಿನ್ನ ಬಲಗೊಂಬೆ 4(ಅಂಬೂಜಾಲಯಜಾನೆ ಬಲಗೊಂಬೆ)ಏಕವಿಂಶತಿಪುಷ್ಪಾನ ಮನ ಮೋದಕ ಪ್ರೀಯ |ನೀ ಕರುಣಿಪುದೂ ನಿನ್ನವಾನೆಂದು ||ಸಾಕು ವಿಷಯ ಸುಖಾ ಸುಜನಾರೋಳಾಡಿಸೊ |ಏಕಾದಂತನೆ ನಿನ್ನ ಬಲಗೊಂಬೆ 5ಏನು ಬೇಡುವೊದಿಲ್ಲಾ ಏನು ಮಾಡುವೊಕರ್ಮ|ಶ್ರೀನಿವಾಸನೆ ಮಾಡಿಸುವನೆಂಬೊ ||ಜ್ಞಾನಾವೆ ಯಂದೆಂದಿಗಿರಲಿ ತಾರಶಾಂತ- |ಕಾನುಜಾ ನಿನ್ನ ಬಲಗೊಂಬೆ 6ಪ್ರಾಣಸೇವಕ ಚಾಮೀಕರವರ್ಣ ಗಜಮುಖ |ಪ್ರಾಣೇಶ ವಿಠಲನಾ ಸುಕುಮಾರಾ ||ನೀನೊಲಿದೆಮಗೆ ವಿಘ್ನವ ಪರಿಹರಿಸುತ |ಪೋಣಿಸು ಸನ್ಮತೀ ಬಲಗೊಂಬೆ 7
--------------
ಪ್ರಾಣೇಶದಾಸರು
ಚಿಹಿಹಳಿ- ಥೂಖೋಡಿಪಾಪಿ ಮನವೇ ಇಂಥ-|ಕುಹಕಬುದ್ಧಿಯ ನೀ ಬಿಡು ಕಾಣೋ ಮನವೇಪಬಣ್ಣದ ಬೀಸಣಿಕೆಯಂತೆ ಹೆಣ್ಣು ತಿರುಗುವುದು ಕಂಡು |ಕಣ್ಣ ಸನ್ನೆಮಾಡಿ ಕೈಯ ಹೊನ್ನ ತೋರಿಸಿ ||ತಣ್ಣೀರು ಹೊಯ್ದ ಹೊಸ ಸುಣ್ಣದಂದದಿ ಕುದಿದು ಕುದಿದು |ಕಣ್ಣಿನೊಳು ಮಣ್ಣ ಚೆಲ್ಲಿ ಕೊಂಬರೇ ಮನವೆ 1ಪಗಡೆ ಚದುರಂಗ ಲೆತ್ತವನಾಡೆ ಕರೆದರೆ |ನಿಗುರಿದುವು ಕರ್ಣಗಳು ಮೊಚ್ಚೆಯಂತೆ ||ಜಗದೀಶ್ವರನ ದಿನದಿ ಜಾಗರಕೆ ಕರೆದರೆ |ಮುಗಿಲ ಹರಿದು ಧರೆಗಿಳಿದಂತೆ ಮನವೇ 2ವಾಸುದೇವನ ಪೂಜೆ ಒಮ್ಮೆ ಮಾಡೆಂದರೆ |ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ||ಆ ಸಮಯದಲೊಬ್ಬ ಕಾಸು ಕೊಡಲು ಅವನ |ದಾಸಿಯ ಮಗನಂತೆ ಬೆಂಬಿಡದೆ ಮನವೇ 3ನೆರೆಮನೆ ಹೊರಮನೆ ಪ್ರಸ್ತವಾದರೆ ಅವರು |ಕರೆಯದ ಮುನ್ನವೆ ಹೊರೆಹೊರಟೆ ||ಬರಿಗಂಟು ಬರಿಮಾತು ಸುಳ್ಳುಸುದ್ದಿಯ ಹೇಳಿ |ಹಿರಿಯ ಮಗನಂತೊಡಲ ಹೊರಕೊಂಬೆ ಮನವೆ 4ಬಿಂದು ಮಾತ್ರವೆ ಸುಖ-ದುಃಖ ಪರ್ವತದಷ್ಟು |ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ||ಎಂದೆಂದಿಗೂ ನಮ್ಮ ಪುರಂದರವಿಠಲನ |ಹೊಂದಿಹೊಂದಿ ನೀ ಸುಖಬಾಳೊ ಮನವೆ 5
--------------
ಪುರಂದರದಾಸರು
ಜಯ ಜಯವೆಂದರುಸುರರುಇಂಥ ವೈಭವದಾಟ ಕಾಣುತಲೆಅಮರರುಪ.ಗಂಧದ ಓಕುಳಿಯನ್ನೇಕಲೆಸಿತಂದು ಮಂದಗಮನೆಯರೆಲ್ಲ ಜೀಕುಳಿತುಂಬಿಇಂದಿರೇಶನ ಮ್ಯಾಲೆ ಸುರಿಸಿಆನಂದ ದಿಂದಲೆ ಕೈ ಹೊಡೆದು ಚಪ್ಪಳಿಸಿ 1ಕೇಶರ ದೋಕುಳಿಯತುಂಬಿಸರ್ವೇಶನೀ ಚಿಮ್ಮುವ ಕುಚಗಳ ಅಪ್ಪಿಕೊಂಬೆಈ ಸುಖ ನೀ ಎಲ್ಲೆ ಕಾಂಬೆಆಭಾಸ ಮಾಡಲುಅದು ನೀ ಒಪ್ಪಿಕೊಂಬೆ 2ಬತ್ತಲೆ ಜಲವ ಪೊಕ್ಕಿಹರುಸೀರೆ ಎತ್ತಿಕೊಂಡ್ಹೋಗಿ ಪುಗಡೆನ್ಹಾಕುವರುಎತ್ತಿಕರವಜೋಡಿಸುವರುಮರವಸುತ್ತಿ ಚಪ್ಪಾಳೆಯನಿಕ್ಕಿ ಸಿದಿಯಲ್ಲೊ ನೀನು 3ಚಂದದ ಸೀರೆಯನುಟ್ಟುಗಂಧ ಕಸ್ತೂರಿ ಕುಂಕುಮ ಕೇದಗೆಯನಿಟ್ಟುಆನಂದವ ಬಟ್ಟರು ಅಷ್ಟುಗೋವಿಂದನಂಘ್ರಿ ಕಮಲದಿ ಮನಸಿಟ್ಟು 4ಅವರಒಲ್ಲಭರೆಲ್ಲ ಸೊಲ್ಲುಗಳೆತ್ತದ್ಹಾಂಗೆಚಲ್ವನ ಪ್ರಾರ್ಥಿಸಿದರೆಲ್ಲಹೀಂಗೆರಮಿನಲ್ಲನ ದಯದಿಂದ ಇದ್ದರು ಮೊದಲಿನ್ಹಾಂಗೆ 5
--------------
ಗಲಗಲಿಅವ್ವನವರು
ದಾರಿ ಏನಿದಕೆ ಮುರಾರಿ - ನೀ ಕೈಯ ಹಿಡಿಯದಿದ್ದರೆ-|ದಾರಿ ಏನಿದಕೆ ಮುರಾರಿ? ಪಕಷ್ಟ-ಕರ್ಮಂಗಳ ಎಷ್ಟಾದರು ಮಾಳ್ಪೆ |ಎಷ್ಟಾದರೂ ನುಡಿದೆ ಗುರುಹಿರಿಯರ ||ದುಷ್ಟರ ಸಂಗವ ಬಹಳ ಮಾಡಿದರಿಂದ |ಶಿಷ್ಟರ ಸೇವೆಯೆಂದರಾಗದೆನಗೆ 1ಪರರ ದೂಷಣೆ ಪರಪಾಪಂಗಳನೆಲ್ಲ |ಪರಿಪರಿಯಲ್ಲಿ ಆಡಿಕೊಂಬೆ ನಾನು ||ಹರಿನಾಮಾಮೃತವ ಹೇಳದೆ ಕೇಳದೆ |ಹರಟೆಯಲ್ಲಿ ಹೊತ್ತುಗಳೆದೆ ನಾ ಹರಿಯೆ 2ಪಾತಕಕರ್ಮಗಳ ಮಾಡಿದಜಾಮಿಳಗೆ |ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ? ||ನೂತನವೇಕಿನ್ನುಸೂರ್ಯಮಂಡಲ |ರೀತಿಯಾದನು ಸಿರಿಪುರಂದರವಿಠಲ 3
--------------
ಪುರಂದರದಾಸರು
ದಾರಿ ಯಾವುದಯ್ಯ ವೈಕುಂಠಕೆದಾರಿ ತೋರಿಸಯ್ಯಾ ಪದಾರಿ ಯಾವುದಯ್ಯಾ ದಾರಿ ತೋರಿಸು ಆಧಾರ ಮೂರುತಿ ನಿನ್ನಪಾದಸೇರುವುದಕ್ಕೆಅ.ಪಬಲುಭವದನುಭವದಿ ಕತ್ತಲೆಯೊಳುಬಲು ಅಂಜುತೆ ನಡುಗಿ ||ಬಳಲುತ ತಿರುಗಿದೆ ದಾರಿಯ ಕಾಣದೆಹೊಳೆಯುವ ದಾರಿಯ ತೋರೊ ನಾರಾಯಣ 1ಪಾಪವ ಪೂರ್ವದಲಿ ಮಾಡಿದುದಕೆಲೇಪವಾಗಿರೆಕರ್ಮಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆಶ್ರೀಪತಿ ಸಲಹೆನ್ನ ಭೂಪ ನಾರಾಯಣ 2ಇನ್ನು ನಾ ಜನಿಸಲಾರೆ ಭೂಮಿಯ ಮೇಲೆನಿನ್ನ ದಾಸನಾದೆನೊ||ಪನ್ನಗಶಯನ ಶ್ರೀಪುರಂದರವಿಠಲಇನ್ನು ಪುಟ್ಟಿಸದಿರೊ ಎನ್ನ ನಾರಾಯಣ 3
--------------
ಪುರಂದರದಾಸರು
ದಾಸನ ಮಾಡಿಕೊ ಎನ್ನ - ದಿವ್ಯಸಾಸಿರ ನಾಮದ ವೆಂಕಟಭೂಪರನ್ನ ಪಭವಭಯ ದುಃಖವ ಬಿಡಿಸೋ- ನಿನ್ನಕರುಣವಿದ್ಯೆಯನೆನ್ನ ಅಂಗಕ್ಕೆ ತೊಡಿಸೋ ||ಆವಾಗಲೂ ನಿನ ನಾಮ ನುಡಿಸೋ - ನಿನ್ನಚರಣಕಮಲದಲ್ಲಿ ಆರಡಿಯೆನಿಸೊ1ಗಂಗೆಯ ಪಡೆದಂಥಪಾದವರಶೃಂಗಾರ ಲಕ್ಷ್ಮಿ ಸ್ಮರಿಸುವಂಥಪಾದ||ಬಂಗಾರ ರಂಜಿತಪಾದ-ಹರಿಮಂಗಳ ಸದ್ಗತಿಗೆ ಚಂದಿರನಾದ 2ಸೆರಗೊಡ್ಡಿ ನಾ ಬೇಡಿಕೊಂಬೆ - ನಿನ್ನಹರವಾಣದೆಂಜಲ ನಾನು ಉಂಡೇನೆಂದೆ ||ಬಿರುದು ನಿನ್ನದುಹುಸಿಮಾಡದೆ - ನಮ್ಮಪುರಂದರವಿಠಲ ದಯಮಾಡೊ ತಂದೆ3
--------------
ಪುರಂದರದಾಸರು
ನಲಿನಲಿದು ಬಾ ತ್ರಿಜಗದಾಂಬೆ ಪ.ಮಾನಸದೊಳು ಸುಜ್ಞಾನಬೋಧಳಾಗಿಆತನದೇವಕದಂಬೆ ಅ.ಪ.ವಿದ್ಯಾ ಬುದ್ಧಿ ವಿನಯ ಮಂಗಳಗಳಸಾಧ್ವಿ ನಿನ್ನಲಿ ಬೇಡಿಕೊಂಬೆ 1ನಲಿದೆನ್ನಯ ಜಿಹ್ವಾಗ್ರದಿ ನೆಲಸುತಸುಲಭದೋರೆಯೆ ಸುಲಲಿತವ ಶಿವೆ 2ಧೀರ ಲಕ್ಷ್ಮೀನಾರಾಯಣಾಶ್ರಿತೆ-ಪರಮೇಷ್ಠಿಪರಿರಂಭೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಿಲ್ಲಬೇಕಯ್ಯಾ ನೀನು ಕೃಷ್ಣಯ್ಯಾನಿಲ್ಲಬೇಕಯ್ಯಾ ನೀನು ಪನಿಲ್ಲಬೇಕಯ್ಯಾ ನೀಮಲ್ಲಮರ್ದನಸಿರಿವಲ್ಲಭಎನ್ನ ಹೃದಯದಲಿ ಸತತಅ.ಪಸುಪ್ಪಾಣಿಮುತ್ತಿಟ್ಟು ನೋಡುವೆ ನಿನ್ನಚಪ್ಪಾಳಿ ತಟ್ಟುತ ನಾ ಪಾಡುವೆ ||ಅಪ್ಪ ಶ್ರೀ ಕೃಷ್ಣ ನಿನ್ನನೆತ್ತಿ ಮುದ್ದಿಸಿಕೊಂಬೆಸರ್ಪಶಯನ ಕೃಪೆ ಮಾಡೆಂದು ಬೇಡುವೆ 1ಚೆಂದದ ಹಾಸಿಗೆ ಹಾಸುವೆಪುನಗುಗಂಧದ ಕಸ್ತೂರಿಯ ಪೂಸುವೆ ||ತಂದು ಮುದದಿ ಮುತ್ತಿನ ಹಾರ ಹಾಕುವೆಅಂದದಿಂದಲಿ ನಿನ್ನನೆತ್ತಿ ಮುದ್ದಿಸಿಕೊಂಬೆ 2ನೀಲದ ಕಿರೀಟವನಿಡುವೆ ಬಲುಬಾಲಲೀಲೆಗಳನು ಪಾಡುವೆ ||ಚೆಲ್ವ ಶ್ರೀಪುರಂದರವಿಟ್ಠಲರಾಯನೆನಿಲ್ಲು ಎನ್ನ ಮನದಲಿ ಒಂದೇ ಗಳಿಗೆ 3
--------------
ಪುರಂದರದಾಸರು
ನೀ ದಯದಿ ನೋಡಿದರೆ ನಾ ಧನ್ಯ ಶ್ರೀರಂಗನೀ ಮುಖವ ತಿರುವಲು ನಾ ಪರದೇಶಿ ವಿಮಲಾಂಗ ಪವನಜಾಕ್ಷ ನೀ ಕೊಡಲು ಧನವಂತನೆನಿಸಿಹ್ಯದೀಜನರೊಳಗೆ ಘನವಂತನೆನಿಸಿಕೊಂಬೆಅನುಗಾಲ1ಹರಿನಿಮ್ಮ ವರಚರಣಕರುಣವಿರೆ ಧರೆಮೇಲೆದುರುವಾದಿಗಳ ಜೈಸಿ ನಿರುತನೆನಿಪಿಅನವರತ2ವರವೇದಸ್ಮøತಿಶಾಸ್ತ್ರ ಸ್ಥಿರದರಿವು ನಿಜಜ್ಞಾನವರಮುಕ್ತಿ ಲಭ್ಯತವಕರುಣದಿಂ ಶ್ರೀರಾಮ 3
--------------
ರಾಮದಾಸರು
ನೀನೆ ರಕ್ಷಿಸೋ ಎನ್ನ ಓ ಶ್ರೀನಿವಾಸದಾನವಾಂತಕ ದೀನಪಾಲ ಲಕ್ಷ್ಮೀಶಾ ಪಮೌನಿ ಹೃದಯಾ ಸುಮವಾಸಾ ಸರ್ವೇಶಾಮೌನದಿಂದಿರಲೇನೋ ಕಾಣೆ ವಿಶೇಷಾಮೌನ ಮಂತ್ರವು ಸ್ನಾನಾ ಧ್ಯಾನಾವನರಿಯೆದೈನ್ಯ ಭಕ್ತಿಯೊಳ್ ಬೇಡಿಕೊಂಬೆ ಶ್ರೀಹರಿಯೆ 1ಲೋಕನಾಥನೆಜವಶೋಕವಿಹಾರಾಏಕರೂಪನೆ ಸರ್ವ ಲೋಕ ಸಂಚಾರಾನಾಕಸುಖವ ನಾನು ಬಯಸುವನಲ್ಲಬೇಕಾದ ಸೌಭಾಗ್ಯವೆನಗಿತ್ತೆ ಎಲ್ಲಾ 2ಮಂದರೋದ್ಧರ ಅರವಿಂದ ಲೋಚನನೇಇಂದಿರೆಯರಸ ಮುಕುಂದ ಮಾಧವನೇವಂದಿಸೂವೆನು ದಂದಶೂಕ ಶಯನನೇಸುಂದರಮೂರ್ತಿ ಗೋವಿಂದದಾಸನನೇ 3
--------------
ಗೋವಿಂದದಾಸ
ಬಂದ ಜನರುಬ್ಯಾಗಏಳಿರೀಗಗೋವಿಂದ ತೆರಳಿದದೇವ ದುಂದುಭಿಯಾದವು ಪ.ಭೇರಿಬಡಿದವು ತುತ್ತೂರಿಗಳ್ಹಿಡಿದವುವಾರಿಜಗಂಟೆ ಮೊದಲಾಗಿವಾರಿಜಗಂಟೆ ಮೊದಲಾಗಿ ಸಾರಿದವುಏರಿದನು ಕೃಷ್ಣ ರಥವೊಂದ 1ಜೇಷ್ಠ ಬಹುಳ ಉತ್ಕøಷ್ಠ ಪಂಚಮಿತಿಥಿಶ್ರೇಷ್ಠವಾಗಿದ್ದ ಬುಧವಾರಶ್ರೇಷ್ಠವಾಗಿದ್ದ ಬುಧವಾ7ರ ಈ ಕವನಶ್ರೀ ಕೃಷ್ಣಗರ್ಪಿಸಿದೆ ಹರುಷದಿ 2ಭಾವಸಂವತ್ಸರದಿ ದೇವಾಧಿದೇವನಪಾವನವಾದ ಚರಿತೆಯಪಾವನವಾದ ಚರಿತೆಯ ರಚಿಸಿದೆದೇವ ಮಧ್ವೇಶಕೊಳ್ಳೊ 3ಮುದ್ಗಲ್ಲವಾಸನಶುದ್ಧನಾಮದವರುಮುದ್ದು ಪಾದಗಳ ಸ್ಮರಿಸುತಮುದ್ದು ಪಾದಗಳ ಸ್ಮರಿಸುತ ರಚಿಸಿದೆಅಪದ್ಧನೋಡದಲೆ ಹರಿಕೊಳ್ಳೊ4ಮೂಢಳು ನಾನೊಂದು ಬೇಡಿ ಬಯಸಿಕೊಂಬೆಮಾಡಿದೆ ರಚನೆ ಮನ ಉಬ್ಬಿಮಾಡಿದೆ ರಚನೆ ಮನ ಉಬ್ಬಿ ರಮಿಯರಸುಕೂಡಿಸೊ ನಿನ್ನವರ ಚರಣದಲಿ 5
--------------
ಗಲಗಲಿಅವ್ವನವರು
ಬಾಲಗಜಾನನ ಬಾ ಗುಣಸದನಪಾಲಿತ ತ್ರಿಭುವನ ಬಾಲ ಜಗಜ್ಜೀವನ ಪ.ರಾಧಾದೇವಿಯಾರಾಧಿಸಿದಳು ನಿನ್ನಆದಿಯೊಳ್ ಕೈಕೊಂಬೆ ಮೋದದಿಂದ ಪೂಜನ 1ವಿಘ್ನವಿಭಂಜನ ವಿಧಿಸುರ ರಂಜನಅಗ್ನಿ ಗರ್ಭನಗ್ರಜ ಅಖುವಾಹನ ಮೋಹನ 2ಪ್ರಿಯ ಶ್ರೀ ಲಕ್ಷುಮಿನಾರಾಯಣಶರಣಕಾಯೊ ಕಾಮಿತಫಲದಾಯಕ ಸುಮನ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಭಾಗ್ಯದ ಲಕ್ಷ್ಮೀ ಬಾರಮ್ಮಾ - ನಮ್ಮಮ್ಮಾ ನೀ ಸೌ-ಭಾಗ್ಯದ ಲಕ್ಷ್ಮೀ ಬಾರಮ್ಮಾ ಪಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ |ಗೆಜ್ಜೆಯ ಕಾಲಿನ ಧ್ವನಿಯ ಮಾಡುತ ||ಸಜ್ಜನ ಸಾಧು ಪೂಜೆಯ ವೇಳೆಗೆ |ಮಜ್ಜಿಗೆಯೊಳಗಿನ ಬೆಣ್ಣೆಯಂತೆ 1ಕನಕವೃಷ್ಟಿಯ ಕರೆಯುತ ಬಾರೆ |ಮನಕೆ ಮತಿಯ ಸಿದ್ದಿಯ ತೋರೆ ||ದಿನಕರಕೋಟಿ ತೇಜದಿ ಹೊಳೆಯುತ |ಜನಕರಾಜನ ಕುಮಾರಿ ಸೀತೆ 2ಸಂಖ್ಯೆಯಿಲ್ಲದಾ ಭಾಗ್ಯವ ಕೊಟ್ಟು |ಕಂಕಣ ಕೈಯಾ ತಿರುವುತ ಬಾರೆ ||ಕುಂಕುಮಾಂಕಿತೇ ಪಂಕಜಲೋಚನೆ |ವೆಂಕಟರಾಯನ ಮೋಹದ ರಾಣಿ 3ಅತ್ತಿತ್ತಗಲದೆ ಭಕ್ತರ ಮನೆಯಲಿ |ನಿತ್ಯಮಂಗಲವುನಿತ್ಯಮಹೋತ್ಸವ ||ಸತ್ಯವ ತೋರುವ ಸಜ್ಜನರಿಗೆ ನೀ |ಚಿತ್ತದಿ ಹೊಳೆಯುವ ಪುತ್ಥಳಿಗೊಂಬೆ 4ಸಕ್ಕರೆ ತುಪ್ಪದ ಕಾಲವೆ ಹರಿಸಿ |ಶುಕ್ರವಾರದ ಪೂಜೆಯ ಕೊಂಬೆ ||ಆಕ್ಕರವುಳ್ಳ ಅಳಗಿರಿ ರಂಗನಶಕ್ತಪುರಂದರವಿಠಲನ ರಾಣಿ5
--------------
ಪುರಂದರದಾಸರು
ಭಾರತೀ ದೇವೀ ನಿನ್ನನು ದಿನಾ | ಸಾರುವರ ಕಾಯ್ವೀ ||ಮಾರಮಣನಪಾದವಾರಿಜಯುಗದಲೀ |ಚಾರುಭಕುತಿ ಕೊಡು ನಾರೀ ಶಿರೋಮಣಿ ಪಇಂದ್ರಸೇನಳೆವಿಪ್ರಕನ್ನಿಕೆ | ಚಂದ್ರೇ ಶ್ರೀಕಾಳೆ |ನೊಂದೆನೆ ಬಹಭವ| ಬಂಧನದೊಳು ವೇಗಾ |ದಿಂದ ಕಾಯೆ ಕರುಣಾಸಿಂಧುದ್ರೌಪದಿ ದೇವಿ 1ಮಾತೆ ಕೇಳೆಲೆ ಭವಟವಗೆ | ವೀತಿಹೋತ್ರಳೆ ||ಮಾತು ಮಾತಿಗೆ ಜಲಜಾತನಾಭನ ಸ್ತುತೀ |ಆತುಕೊಂಡಿರಲೆ ಶ್ರೀ | ಮಾತರಿಶ್ವನಾ ರಾಣೀ 2ಪತಿತ ಪಾವನೆ | ಶಿವ ಕನ್ಯಾ ಜಗದ್ವಿತತೆ ಜೀವನೆ ||ನುತಿಸಿಬೇಡಿಕೊಂಬೆನೆ | ಕ್ಷಿತಿಯೊಳೆಲ್ಲರೂ ಸನು |ಮತವನೈದಿ ಈ ಕೃತಿಗೆ ಮಂಗಳವೀಯೆ 3ದೋಷ ದೂರಳೇ | ಹರಿಭಕ್ತಿಯಲ್ಲಿ ಮೋಸ ತೋರಳೆ ||ಕಾಶಿ ನಂದನೆಯನ್ನಾ | ಯಾಸ ಬಡಿಸದಲೀ |ಶ್ರೀಶನ ಕಥಿಗೆ ವಿಶೇಷ ಬುದ್ಧಿಯನೀಯೆ 4ಮಾನನಿನ್ನದೆ | ಸತತ ಪೇಳ್ವದೇನು ಮಾಣದೇ ||ಪ್ರಾಣೇಶ ವಿಠಲನ ಧ್ಯಾನದೊಳಿರುವಂತೆ |ಪೋಣಿಸುವದು ಮತಿ ಬಾಣ ವರದ ನುತೆ5
--------------
ಪ್ರಾಣೇಶದಾಸರು