ಒಟ್ಟು 2013 ಕಡೆಗಳಲ್ಲಿ , 111 ದಾಸರು , 1731 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾವಿಸಮೀರಶ್ರೀ ವಾದಿರಾಜ ಸ್ವಾಮಿ ಸ್ತೋತ್ರ108ಪಾಲಿಸೋ ಗುರುರಾಜ ಪಾಲಿಸೋಪಾಲಿಸೋಗುರುವಾದಿರಾಜ || ಪೊಗಳ-ಲಳವೇ ನಿನ್‍ಮಹಿಮೆ ಮಹೋಜ || ಅಹಹಂಸಹಯಾಸ್ಯವರಾಹಕೇಶವ ಪ್ರಿಯಹಂಸಾರೂಡ್ಯನೆ ನಮೋ ಶರಣು ಮಾಂಪಾಹಿ ಪವಾಗ್ವಿಭವನು ಗುರುವರ್ಯ || ಮಹಾಯೋಗಿವರನು ಯತಿವರ್ಯ || ಶಿರಿವಾಗೀಶಕರಪದ್ಮದುದಯ || ನಾಗಿಜಗತ್ತಲ್ಲಿ ಮಾಡಿ ದಿಗ್ವಿಜಯ || ಅಹಜಗವನಳೆದಮೂರ್ತಿತರಿಸಿ ನಿಲ್ಲಿರಿಸಿಪೊಗಳೆ ಮುಕ್ಕಣ್ಣಾದಿ ಸುರರೇಬಲ್ಲರು 1ಜೀವೋತ್ತಮವಿದ್ಯುತ್ಪತಿಯ ||ನಿತ್ಯಅವೇಶಯುತ ವ್ಯಾಸರಾಯ || ಮುನಿಸರ್ವಾಭೌಮರ ಸೇರಿ ದಿವ್ಯ || ವಾದಮಾಧ್ವ ವೈದಿಕ ಬ್ರಹ್ಮವಿದ್ಯ || ಅಹಸುವಿಚಾರ ಪ್ರವಚನರತನಾಗಿ ಭುವಿತತ್ವವಶ್ರುತಿಯುಕ್ತಿ ಯುಕ್ತದಿ ಬೋಧಿಸಿದ2ಕೂರ್ಮತೀರ್ಥವು ಧವಳಗಂಗೆ || ಅದರನಿರ್ಮಲ ಲಲಿತತರಂಗ|| ಲಿಪ್ತಚರ್ಮ ತೊಳೆದು ಪಾಪಭಂಗ || ಮಾಡಿಧರ್ಮ ಆಚರಣೆ ನಿಸ್ಸಂಗ || ಅಹ ||ಬುದ್ದಿಯ ಒದಗಿಸಿಗುರುಸೇವಾರತಿಯಿತ್ತುಮಧ್ವಾಂತರ್ಗತ ಶ್ರೀಶನಲಿ ಭಕ್ತಿ ತೋರ್ಪುದು 3ಧವಳಗಂಗೆಗೆ ಪೂರ್ವಾದೇಶ || ದಲ್ಲಿದೇವದೇವೋತ್ತಮ ವ್ಯಾಸ || ದೇವಅವಲೋಕಿಸುತ ಇಹ ಪಂಚ || ವೃಂದಾವನಮಧ್ಯದಲ್ಲಿ ಪ್ರವೇಶ || ಅಹ ||ಮಾಡಿದಿರಿ ತ್ರಿವಿಕ್ರಮನನಂತ ಗುಣಕ್ರಿಯದೃಢಧ್ಯಾನೋಪಾಸನ ಮಾಳ್ಪಮಹಂತ4ಪೂರ್ಣೇಂದು ಪೋಲುವ ಮುಖವ ||ಕಮಲಕರ್ಣಿಕೆವರ್ಣದಿ ಪೊಳೆವ ||ಗಾತ್ರಪೂರ್ಣಲಕ್ಷಣ ಸಂಯುತವ || ದಿವ್ಯಫಣಿಯಲ್ಲಿ ಪುಂಡ್ರವು ಊಧ್ರ್ವ || ಅಹಪೀತ ಸುವರ್ಣ ಸುರೇಶ್ಮಿವಸನಉಟ್ಟಪದ್ಮಜ ಪಾದಾರ್ಹನೆ ನಿನ್ನ ಕಂಡೆ ನಾ ಶರಣು 5ಗುರುವಾದಿರಾಜ ನಿನ್ ದೂತ || ವೀರಭದ್ರನೋಪಮ ಬಲವಂತ || ಬಾಧೆವಿದ್ರಾವ ಕ್ಷಣದಿ ಮಾಳ್ಪಂತ || ಅತಿಶೂರ ಅದ್ಬುತ ಶಕ್ತಿಮಂತ || ಅಹ ||ನಾರಾಯಣಾಹ್ವಯ ಭೂತರಾಜನು ಎನ್ನಸಂರಕ್ಷಿಸುವ ಗುರುರಾಜ ನಿನ್ ದಯದಿ 6ಒಡೆಯ ಶ್ರೀಪತಿಹಯವದನ || ತಾನೇಕಡಲೆ ಮಡ್ಡಿಯನ್ನು ನಿನ್ನ || ಕೈಯಿಂದಉಂಡದ್ದು ಚತುರ್ದೇಶಭುವನ|| ಖ್ಯಾತಿಈಡಿಲ್ಲ ಸ್ಮರಿಸೆಪಾವನ್ನ|| ಅಹ ||ಕುಸುಮಜಪಿತ ಉಕ್ತಅಭಯಪ್ರಸನ್ನ ಶ್ರೀನಿವಾಸನ್ನೊಲಿಸೋ ಎನಗೆ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಮಗನೆಂದಾಡಿಸುವಳು | ಮೊಗ ನೋಡಿ ನಗುವಳು ಪಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ.ಪಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯಿಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1ಬಣ್ಣದ ಸರಗಳಿಡೆ ರನ್ನದ ನೇವಳಹೊನ್ನ ಘಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2ಕುಕ್ಷಿಯೊಳೀರೇಳು ಜಗವನು ಸಲಹುವರಕ್ಷಿಪರುಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡೆನುತಲಿರಕ್ಷೆಯಿಡುವ ಪುಣ್ಯವೆಂತು ಪಡೆದಳಯ್ಯ 3ಶಂಕ ಚಕ್ರಗದಾ ಪದುಮಧಾರಕನಪಂಕಜಮಿತ್ರಶತಕೋಟಿ ತೇಜನನುಸಂಖ್ಯೆಯಿಲ್ಲದ ಆಭರಣಗಳ ತೊಡಿಸಿ ಅಲಂಕರಿಸುವ ಪುಣ್ಯವೆಂತು ಪಡೆದಳಯ್ಯ 4ಸಾಗರಶಯನು ಭೋಗೀಶನ ಮೇಲೆಯೋಗನಿದ್ದೆಯೊಳಿಪ್ಪ ದೇವನನುಆಗಮನಿಗಮಗಳರಸ ಕಾಣದ ವಸ್ತುತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 5ಪನ್ನಗಶಯನ ಉನ್ನಂತ ಮಹಿಮನಸನ್ನುತಭಕುತರ ಸಲಹುವನಪನ್ನಗಾರಿವಾಹನದೇವರ ದೇವಚೆನ್ನಕೇಶವನ ಪಡೆದಳಯ್ಯಾ * 6
--------------
ಪುರಂದರದಾಸರು
ಮಂಗಲ ಮೂರುತಿಗೇ ನಮೋ ನಮೋ ಹರೀಮಂಗಲ ಚರಿತಗೆ ನಮೋ ನಮೋಪರಂಗಾ ಕೃಪಾಂಗಾ ಶ್ರೀರಂಗಾ ನರಸಿಂಹಗೆಅಂಗಾ ಶೃಂಗಾರನಿಗೆ ನಮೋ ನಮೋಅ.ಪಶೇಷಶಯನ ವಿಧೀಶ ಸುರಾರ್ಚಿತಕೇಶವ ತ್ರೈಜಗದೀಶ ಜಲಜನಾಭದಾಸರ ಸಾಸಿರ ದೋಷ ವಿನಾಶನಶ್ರೀಶ ಸಂದೇಶಗೆ ನಮೋ ನಮೋ1ಮಾರಜನಕದೈತ್ಯಾರಿ ಚಕ್ರಾಂಕಿತಸಾರಸಾಕ್ಷ ಯತಿ ವಾರವಂದಿತಚರಣಹಾರಾ ಹೀರಾವಳಿ ಕೇಯೂರವ ಧರಿಸಿದಧೀರ ಉದಾರಿಗೆ ನಮೋ ನಮೋ2ಮಂದರೋದ್ಧರ ಭವಬಂಧ ವಿಮೋಚನಇಂದಿರೆಪತಿ ಮಂದಾಕಿನಿಪಿತ ದೇವಾಸಿಂಧುಮಂದಿರದಲಿ ನಿಂದ ಗೋವಿಂದಗೆನಂದನ PÀಂದಗೆ ನಮೋ ನಮೋ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಮಂಗಲಾ ಸ್ವಸಿದ್ದ ಸಿದ್ಧಗೆ ಮಂಗಲಾ ಸ್ವಶುದ್ಧ ಶುದ್ಧಗೆ |ಮಂಗಲಾ ಸ್ವಬುದ್ಧ ಬುದ್ಧಗೆ ಸದ್ಗುರೇಂದ್ರನಿಗೆಜಯ ಮಂಗಲಾಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಆದಿಮಧ್ಯಾವಸಾನವಿಲ್ಲದೆ ನಾದ ಬಿಂದು ಕಳಾ ವಿಹೀನಗೆ |ವೇದ ವೇದಾಂತದ ವಿಚಾರವ ತಿಳಿದ ನಿಶ್ಚಲಗೆ |ಸಾಧು ಸಂತ ಮಹಾನುಭವಿಗಳು ಸಾಧಿಸುವವರಬೋಧ ಬೋಧಗೆ | ವಾದ ಮನಬುದ್ಧ್ಯಾದಿ ಉದಯಾದಿಕವ ಲಕ್ಷಿಪಗೆ1ವಿಶ್ವತೋ ಮುಖ ವಿಶ್ವನೇತ್ರನು ವಿಶ್ವಪಾಣಿಪಾದಶೀರಿಷ | ವಿಶ್ವದೊಳಹೊರಗೇಕ |ಮಯನಾ ಸೂತ್ರನು ಮಣಿಯಂತೆ | ವಿಶ್ವವನ್ನುದ್ಧರಿಸ-ಲೋಸುಗ ವಿಶ್ವದೊಳಗವತರಿಸಿ ಸಾಕ್ಷಾದೀಶ್ವರನುಕಲಿಯುಗದಿ ವಿಶ್ವಾಮಿತ್ರ ಗೋತ್ರದೊಳು2ಪರಮಪುರುಷನು ಸ್ವಪ್ರಕಾಶನು ನರಾಕೃತಿಗೆತಾ ಬಂದು ಶಿಂಧಾಪುರದಿ ಗುರುನಾಥನು-ದರದಿ ಕರಣಿಕನ್ವಯದಿ | ಸರಸ ಲೀಲಾ ನಟನೆನಟಿಸುತ ತೆರಳಿ ಭ್ರಮರಾಪುರಕೆ ಸದ್ಗುರುವರಕೃಪೆಯತಾ ಪಡೆದು ಜಗದೊಳು ಖ್ಯಾತಿ ಪಡೆದಂಗೆ3ಅಂತು ಇಂತೆನಬಾರದಾ ನಿಶ್ಚಿಂತ ರೂಪನು ಬಳಿಕ | ಸಂತಮಹಾಂತನು ಸ್ತುತಿಸಲಾತ್ಮ ಸುಬೋಧ ಬೋಧಿಯಲಿ ||ಅಂತರಂಗದ ಭ್ರಮೆಯನಳಿದೇಕಾಂತ ಭಾವಿಕ ಭಕ್ತರಿಗೆ ವಿ-ಶ್ರಾಂತವಾದ ಸ್ವ-ಪದದೊಳುದ್ಧರಿಸಿದಾತಂಗೆ4ಸ್ಪರ್ಶ ದರ್ಶನದಿಂದೆ ಝಗ ಝಗ ಧರಿಸುತಲಿ ನಾನಾ ವಿ-ಚಿತ್ರಾಚರಣವನು ಚರಿಸುತ್ತ ಸದ್ಗುರು ರಾಯ ಕಡೆಯಲ್ಲಿ,ಪರಮಹಂಸಾಶ್ರಮವ ಕೈಕೊಂಡಿನಿತುಕೆಲಕಾಲದಲಿ ಶಿಂಧಾಪುರದಿಸ್ವ-ಸ್ಥಾನ ದೊಳು ಸಹಜಸಮಾಧಿಸ್ಥಳದಲ್ಲಿ5ಶಾಲಿವಾಹನ ಶಕೆಯ ಶತಕತಿ ಮೇಲೆ ಐವತ್ತಾಗೆ ಮೂರನು |ಕಾಲು ದಕ್ಷಿಣ ಅಯನ ಸಂವತ್ಸರ ವಿರೋಧಿಕೃತು |ಕಾಳ ದ್ವಿತಿಯಾಮಾಸ ಆಶ್ವೀನ ಮೇಲೆ ಶಿವ ಬುಧವಾರಕರ್ಣವಿಶಾಲಿ ಗರ್ಜಾ ಭರಣೆ ಪ್ರಥಮಪ್ರಹರಸಮಯದೊಳು6ಆ ಸುದಿನದೊಳಗಾ ಮಹಾ ಸಂತೋಷ ಕಾಲದಿಸುರರುಪೂಮಳೆ ಸೂಸುತಿರೆ ಬ್ರಹ್ಮಾದಿಕರು ಸ್ವಸುಖದಿನಲಿದಾಡಿ |ಏಸುಕಾಲದಸುಕೃತಫಲವಿದು ವಸ್ತುಕಣ್ಣಲಿ ಕಂಡೆವೈ ಉಲ್ಲಾಸವೆನುತ ಸಮಸ್ತ ಸುರಜಯ ಘೋಷ ಮಾಡುತಲಿ7ನಿಜ ಪರಂಧಾಮಕ್ಕೆ ಸದ್ಗುರು ಬಿಜಯಮಾಡಿದನೆಂಬ ಮಹಾಶಯ | ಸುಜನರೆಲ್ಲರುಬಲ್ಲರಿದನು ಲೋಕಕಿದು ಸತ್ಯ || ತ್ರಿಜಗವೇಪುಸಿಯೆಂಬ ಮಹಾತ್ಮಗೆ ತ್ಯಜನವೆಲ್ಲಿ ಉದಾರ ಮಹಿಮಗೆ |ನಿಜವು ಜಲ ದೊರೆತಿಲ್ಲ ತೋರಲು ಕರಗಲೆರಡಹುದೇ8ನಿರಾಕಾರಾಕಾರ ವ್ಯಕ್ತಿಗೆಚರಣಒಂದೆ ಭೇದ ಮಿಥ್ಯೆಯು |ಚರಣಯುಗಕೆರಡುಂಟೆ ಈಪರಿಶರೀರ ಶರಣಂಗೆ ||ಹಿರಿದ ಕಿರಿದ ದರದರ ಹಂಗನು ಹರಿದು ಬಿಸುಟುವಶ್ರೀ ಮಹಾಶಂಕರಾನಂದ ಸರಸ್ವತೀ ಯತಿವರ್ಯ ಗುರುವರಗೆಜಯ ಜಯ ಮಂಗಲಾ ಜಯ ಜಯ ಮಂಗಲಾ9
--------------
ಜಕ್ಕಪ್ಪಯ್ಯನವರು
ಮಂಗಳ ತ್ರಿವೆಂಗಳಪ್ಪ ಮಂಗಳಾಂಗ ರಂಗಗೆ ಶ್ರೀಮಂಗಳೆಯ ಸಂಗಗೆ ಜಗಂಗಳಾಂತರಂಗಗೆ ಪ.ಕಂಗಳಿಕ್ಕದಂಗೆ ನಿಖಿಳಾಂಗ ಕಪಟಂ ಕಮಠಂ? ಗೆ ಭೂವೆಂಗಳರಸಂಗೆ ನರಸಿಂಗದೇವನಿಗೆ 1ತಿಂಗಳೊಲಿದ್ದಗೆ ಖಳರ ಜಂಗುಳಿ ನಾದ್ದಂಗೆ ಕಲ್ಲವೆಂಗಳ ಮಾಳ್ಪಂಗೆ ಚೆಲ್ವ ಪೊಂಗೊಳಲೂದುವಂಗೆ 2ತುಂಗಮೋಹನಗೆ ಸತುರಂಗವಾಹನಂಗೆ ವಿಹಂಗಗೆ ಭುಜಂಗಶಯನ ಪ್ರಸನ್ನವೆಂಕಟಂಗೆ 3
--------------
ಪ್ರಸನ್ನವೆಂಕಟದಾಸರು
ಮಂಗಳ ಮಂಗಳಾತ್ಮಕಗೆ ಮಂಗಳ ಮಂಗಳಾನನಗೆಮಂಗಳ ಮಂಗಳದೇವಿಯರಸಗೆ ಪ.ಮಿಸುನಿಯ ಹರಿವಾಣದಲ್ಲಿ ಹೊಸಮುತ್ತಿನಾರತಿ ನಿಲಿಸಿಬಿಸಜಗಂಧಿಯರು ಶ್ರೀಹರಿಗೆ ಜಯವೆನ್ನಿ 1ಕುಂದಕುಟ್ಮಲರದನೆಯರು ಇಂದುಮಂಡಲವದನೆಯರುಸಿಂಧುಶಯನ ನಿತ್ಯನಿಗೆ ಜಯವೆನ್ನಿ 2ರಂಭಾಸ್ತಂಭೋರು ಅಂಬುಜಕುಚಯುಗಳೆಯರುಅಂಬುಜಶರಜನಕಗೆ ಜಯವೆನ್ನಿ 3ಪ್ರಾಗ್ಜೋತಿಷಧಿಪನರಿಗೆ ಪೂಗಣ್ಣಿಯ ಮನೋಹರಗೆನಾಗ್ಗನ್ನೆಯರ ದೇವಗೆ ಜಯವೆನ್ನಿ 4ಸೌಂದರ್ಯಾತಿಶಯ ಪೂರಣಗೆ ಸೈಂಧವಹನನಕಾರಣಗೆತಂದೆ ಪ್ರಸನ್ನವೆಂಕಟೇಶಗೆ ಜಯವೆನ್ನಿ 5
--------------
ಪ್ರಸನ್ನವೆಂಕಟದಾಸರು
ಮನವೆ ಚಂಚಲ ಮತಿಯ ಬಿಡು - ನಮ್ಮ |ವನಜನಾಭನ ಪಾದಭಜನೆಯಮಾಡುಪ.ಬಡಮನುಜಗೆ ಬಾಯಬಿಡುವ ದೈನ್ಯದಲವನ |ಅಡಿಗಳಿಗೆರಗಲು ಕೊಡುವನೇನೊ ||ಕಡಲಶಯನ ಜಗದೊಡೆಯನ ನೆನೆಯಕ್ಕೆ - |ಪಿಡಿದು ತಾ ಸಲಹುವ ಬಿಡದಲೆಅನುಗಾಲ1ಬಲ್ಲಿದ ಭಕುತರ ಬಲ್ಲವ ಬಹುಸಿರಿ |ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗುನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2ಮುಗಿಲು ಮೇಲದೆಗಡೆ ಅಗಣಿತವಾದಾಪ - |ತ್ತುಗಳು ಬಂದಡರಲು ನಗುತಲಿರು ||ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |ಪೊಗಳುತ ಬಾಳು ನೀ ಅಘಗಳ ಗಣಿಸದೆ 3ಆವಾವ ಕಾಲಕೆ ದೇವನಿಚ್ಛೆಯಿಂದ |ಆವಾವುದು ಬರೆ ನಿಜಸುಖವೆನ್ನು ||ಶ್ರೀವರ ಅನಾದಿಜೀವರ ಕ್ಲಪ್ತದಂತೆ |ಈವನು ನಿಜಸ್ವಭಾವ ಬಿಡದೆನಿತ್ಯ4ಕೇಶವಾಚ್ಯುತ ಶ್ರೀನಿವಾಸ ಮುರಾರೇ |ದೋಷರಹಿತ ದೀನ ಪೋಷಕನೆನ್ನು ||ಮೋಸಗೊಳಿಪ ಭವಪಾಶವ ಖಂಡಿಪ |ಶ್ರೀಶ ಪುರಂದರವಿಠಲನು ಜಗಕಿರೆ 5
--------------
ಪುರಂದರದಾಸರು
ಮರವೆ ಎಂಬುದು ಎಲ್ಲಿಹುದೋ ಯೋಗಿಗೆಮರವೆ ಎಂಬುದು ಎಲ್ಲಿಹುದೋಅರಿತು ಸರ್ವವ ಸರ್ವದಲಿ ಆತ್ಮ ತಾನಾಗಿರ್ದುನಿರುತ ಕಾಲದಿ ಮುಕ್ತಗೆ ಅವಗೆಪನಿರ್ವಿಕಲ್ಪಸಮಾಧಿನಿತ್ಯನಿತ್ಯಳವಟ್ಟುದುರ್ವಿಘ್ನಗಳೆಜರಿದುಗರ್ವದೂರವಾಗಿ ಗಾಢ ತೂರ್ಯದೊಳಿದ್ದುನಿರ್ವಹಿಸಿ ನಿಜಸುಖವನುಪರ್ವಿಪಸರಿಸಿ ತನಗೆ ಪ್ರತಿಗಾಣುತಿರುತಿಪ್ಪಸರ್ವಸಾಕ್ಷಿ ತಾನಾದವಗೆ1ನಾದದೊಳು ಕಿವಿಯಿಟ್ಟು ನಾಸ್ತಿಮನವಸಿಮಾಡಿಬೋಧೆ ಬಲಿದಾ ಲಹರಿಯಹಾದಿಯಂತುಟೋ ಅಂತು ಹರಿದಾಡುತಲಿ ತಾಭೇದಾ ಭೇದಗಳನುಳಿದುಸಾಧು ಸಂಗವ ಕೂಡಿ ಸಂತುಷ್ಟನಾಗಿಪ್ಪನಾದ ಮೂರುತಿಯಾಗೆ2ಪರಮಸಾರವ ತಿಳಿದು ಪರಿಪೂರ್ಣನಾಗಿರುತವರಚಿದಾನಂದ ಗುರುವೆಚರಣಸ್ಮರಣೆಯ ಮನದಿ ಚಲಿಸದಂತಾವಾಗಹಿಡಿದು ನಾಲಗೆಯೊಳಿರಿಸಿಗುರುವೆ ಗುರುವೆ ಎಂದು ತಾನಾಗಿರ್ದುನಿರತಿಶಯದ ಪರಮಗೆ3
--------------
ಚಿದಾನಂದ ಅವಧೂತರು
ಮರೆಯದಿರು ಮರೆಯದಿರು ಗುರುರಾಯನ |ಲೋಕ ಪರಿಪಾಲಿಸುವಗುರುಸಾರ್ವಭೌಮನ್ನಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಪರಮೇಶ್ವರನು ತಾನೆಪರಮಪ್ರೇಮದಿಂದಗುರುರೂಪವನುಧರಿಸಿ ಧರೆಗೆ ಬಂದು, ತ್ವರದಿಂದ ಮಾನವರ ಮರವೆಯನುಪರಿಹರಿಸಿ | ಸ್ಥಿರ ಮುಕ್ತಿ ಸುಖವಿತ್ತು ಪೊರೆವ ಗುರುವರನ1ಕರುಣದಿಂ ಜನರ ರಕ್ಷಿಸುವ ಸದ್ಗುರುವರನ | ಶರಣು ಪೊಕ್ಕರೆಕೃಪಾ ಸುಧೆಗರೆವನ | ನಿರುತದಲಿ ಭಕುತರಿಗೆ |ನಿರತಿಶಯಸೌಖ್ಯವನು ಸರಿದಂತೆ ವರವಿತ್ತು | ಮೆರೆವ ದೇಶಿಕನ2ಕುವರ ಬಾರೆಂದಭಯಕರವಶಿರದಲ್ಲಿರಿಸಿ |ನೆರೆಸುಬೋಧೆಯಗೈದು ನರಭಾವ ಕಳೆದು |ಮರಣ ಭಯ ಹರಸಿ | ಬಹು ಹರುಷದಿಂದಿರುಎಂದ ಚಿರ ಸಿಂಧುಗಿಯವಾಸ |ಗುರುಶಂಕರನಪಾದ3
--------------
ಜಕ್ಕಪ್ಪಯ್ಯನವರು
ಮರೆಯಬೇಡ ಮನವೆ ನೀನು |ಹರಿಯ ಚರಣವ ಪ.ಯಾಗ - ಯಜÕ ಮಾಡಲೇಕೆಯೋಗಿ - ಯತಿಯು ಆಗಲೇಕೆ |ನಾಗಶಯನ ನಾರದವಂದ್ಯನಕೂಗಿ ಭಜನೆಮಾಡುಮನುಜ1ಸತಿಯು ಸುತರು ಹಿತರು ಎಂದುಮತಿಯು ಕೆಟ್ಟು ತಿರುಗಲೇಕೆ |ಗತಿಯು ತಪ್ಪಿ ಹೋಗುವಾಗಸತಿಸುತರು ಬಾಹೊರೇನೊ ? 2ಹರಿಯ ಸ್ಮರಣೆ ಮಾತ್ರದಿಂದದುರಿತ ಘೋರವೆಲ್ಲ ನಾಶಪರಮಪುರುಷ ಪುರಂದರವಿಠಲಪರದಪದವಿಕೊಡುವನೊ3
--------------
ಪುರಂದರದಾಸರು
ಮಾತೆ ಸರಸ್ವತಿ ಮಂಜುಳ ಮೂರುತಿಚೇತನಾತ್ಮಕಿಭಾರತಿಪ.ಪ್ರೀತಿಯಿಂದೀವುದು ಪೀತಾಂಬರಧರನಸಾತಿಶಯದ ಭಕುತಿ ಅ.ಪ.ಗುರುಹಿರಿಯರ ಕಂಡು ಬಿರುನುಡಿ ನುಡಿಸದೆಕರುಣಿಸೆನಗೆಸನ್ಮತಿಪರಮಪಾವನ ವೈಷ್ಣವರ ಪಾದಾಂಬುಜ ಮಧು-ಕರದಂತಿರಲಿ ಮದ್ರತಿ 1ಶ್ರೀಶನಮೂರ್ತಿತಾರೇಶನಂದದಿ ಹೃದಯಾ-ಕಾಶದೊಳು ಕಾಣುತಿದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತಗೈಸಮ್ಮ ಹರಿಯ ಸ್ತುತಿ 2ಮನುಜರ ರೂಪದಿ ದನುಜರು ಭೂಮಿಯೊಳ್ಜನಿಸಿದರ್ಜಲಜನೇತ್ರಿಅನಘಲಕ್ಷುಮಿನಾರಾಯಣನ ದಾಸರಿಗೆಲ್ಲಜನನಿಯೆ ನೀನೆಗತಿ3ಭಾರತಿದೇವಿಯ ಸ್ತುತಿ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಮವ ಮಮ ಕುಲಸ್ವಾಮಿ ಗುಹನತಜನ ದುರಿತಾಪಹ ಪ.ಭೀಮವೀರ್ಯ ನಿಸ್ಸೀಮಪರಾಕ್ರಮಧೀಮತಾಂವರ ನಿರಾಮಯ ಜಯ ಜಯ ಅ.ಪ.ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನಪಾವನ್ನಮೀನಕೇತನಸಮಾನ ಸಹಜ ಲಾವಣ್ಯಗಾನಲೋಲ ಕರುಣಾನಿಧಿ ಸುಮನಸ-ಸೇನಾನಾಥ ಭಾವನಿಸುತ ಸುಹಿತ 1ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯನಿಟಿಲಾಕ್ಷತನಯ ನಿಗಮಜÕ ಬಾಹುಲೇಯಕುಟಿಲ ಹೃದಯ ಖಲಪಟಲವಿದಾರಣತಟಿತ್ಸಹಸ್ರೋತ್ಕಟರುಚಿರಮಕುಟ2ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾರಿತೋರೆ ನೀರೆ ಕರೆಯ ಬಾರೆ ಪ.ನಾಗವೇಣಿಯರು ನಿನ್ನ ಬಾಗಿಲಿಗೆ ಬಂದರೆಹ್ಯಾಂಗ ಮಾಡಲಿಯೆಂದುಹೋಗಿ ಕೋಣಿಯನ್ಹೊಕ್ಕೆ 1ಚದುರೆ ನಮ್ಮನೆಗೆ ಬಂದು ಒದರಿ ಆಣಿಯನಿಟ್ಟೆಒದರಿ ಆಣಿಯನಿಟ್ಟೆಕದನತೆಗೆದ್ಹೋಗಿ ಗದಗದ ನಡಗುವಿ2ವಾಸುದೇವರ ತಂಗಿ ಸೋಸಿಲಾಣಿಯನಿಟ್ಟುಸೋಸಿಲಾಣಿಯನಿಟ್ಟ ಶ್ರೀಶನಸತಿಯರು ದಾಸಿ ಎನಿಸುವರೇನ 3ಸರ್ಪಶಯನನ ತಂಗಿ ಒಪ್ಪಾಗಿ ಆಣಿಯನಿಟ್ಟುಒಪ್ಪಾಗಿ ಆಣಿಯನಿಟ್ಟು ಗಪ್ಪಾಗಿ ಕುಳಿತಿಯಾಕತಪ್ಪು ತಪ್ಪೆನ ಬಾರ 4ಉಲ್ಲಾಸದಿಂದ ಆಣೆಗುಲ್ಲು ಮಾಡುತ ಇಟ್ಟೆಗುಲ್ಲುಮಾಡುತಲಿಟ್ಟೆ ನಲ್ಲೆಯರು ಬರಲುಎದೆ ಝಲ್ಲು ಝಲ್ಲೆನುತಿರೆ 5ಚಿಕ್ಕ ಬುದ್ದಿಂದ ಆಣೆ ಇಕ್ಕಿ ಇಲ್ಲಿಗೆ ಬಂದೆಇಲ್ಲಿಗೆಬಂದ ಪುಟ್ಟ ಸುಭದ್ರಾಒಳಗೆ ಹೊಕ್ಕು ಹೊರಗೆ ಹೊರಡಲೊಲ್ಲೆ 6ಪೋರಬುದ್ದಿಯಿಂದ ಸಾರಿ ಆಣೆಯನಿಟ್ಟೆಸಾರಿ ಆಣಿಯನಿಟ್ಟೆನಾರಿರುಕ್ಮಿಣಿ ಬರಲು ಹಾರುತಿದೆ ಎದೆ 7ನಕ್ಕರೆಂಬೋ ಭೀತಿ ಇಕ್ಕಿ ಮೂಲೆಗೆ ಬಂದೆಇಕ್ಕಿ ಮೂಲೆಗೆ ಅಕ್ಕ ರುಕ್ಮಿಣಿಗೆಆಣಿಸೊಕ್ಕಿನಿಂದÀಲೆ ಇಟ್ಟೆ 8ರಮಿ ಅರಸನ ತಂಗಿ ಹೆಮ್ಮಿಲಾಣಿಯನಿಟ್ಟೆಆಣಿಯನಿಟ್ಟೆ ನಮ್ಮ ಕಾಣುತಒಳಗೆ ಗುಮ್ಮನಂತಡಗಿದಿ 9
--------------
ಗಲಗಲಿಅವ್ವನವರು
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮುಂದೋರುವನು ಮುರಾರಿಎಂದೆಂದು ಕುಜನಕೆ ದೂರನುಶೌರಿಪ.ಘನಭಾಗವತಶ್ರವಣವ ಮಾಳ್ಪರಿಗೆವನಜನಾಭನ ಸಂಕೀರ್ತನೆ ಕಾಮೇಷ್ಟರಿಗೆಮುನಿವಂದ್ಯ ಕೃಷ್ಣನ ಮನಸಲಿ ಮರಿಯದೆಗುಣಕರ್ಮನಾಮ ಸ್ಮರಣೆಯಲಿಹರಿಗೆ1ಶ್ರೀ ವಾಸುದೇವಾಂಘ್ರಿ ಸೇವಾಸಕ್ತರಿಗೆಶ್ರೀವರನರ್ಚನೆ ಸದ್ಭಾವಯುಕ್ತರಿಗೆಸಾವಿರಭಿದಾನದ ದೇವದೇವಗೆ ಸರ್ವದಾ ವಂದಿಸುವ ವ್ಯಾಸಂಗವಿಡಿದರಿಗೆ 2ಶೇಷಶಯನನ ಸದ್ದಾಸರಾದರಿಗೆದೋಷದೂರನ ಸಖರಹ ಸಜ್ಜೀವರಿಗೆಪ್ರಸನ್ವೆಂಕಟವಾಸಗೆ ತನ್ನನರ್ಪಿಸಿ ಮುಕುತಿ ಮನೆಯಾಸೆವಂತರಿಗೆ 3
--------------
ಪ್ರಸನ್ನವೆಂಕಟದಾಸರು