ಒಟ್ಟು 39871 ಕಡೆಗಳಲ್ಲಿ , 136 ದಾಸರು , 11580 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಪುಣ್ಯವ ಮಾಡಿದೆನೋ ಮುನ್ನೆ | ಧನ್ಯಗೈಸಿದ ಗುರು ಮಹೀಪತಿ ತಾನು ಪ ವಿಜಯಗ್ಹೇಳಿದ ಹರಿ ಗೀತೆಯಲಿ | ಸುಜನ ಸಂತರೊಳು ದುರ್ಲಭನೆನಲಿ 1 ಎನ್ನಯ ಸಿರದಲಿ ಅಭಯಕರವಿಟ್ಟು | ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2 ಕಣ್ಣುದೆರೆಸಿ ಭಕ್ತಿ ಮಾರ್ಗದಲಿ | ಸಣ್ಣವನೆಂದು ಚಿದ್ಭನದೋರಿಸಲಿ 3 ಇನ್ನೊಬ್ಬರಾಶೆ ಏತಕೆ ಎನಗಿನ್ನು | ಎನ್ನ ಹಂಬಲಿಸಿದಾಶೆಯ ಕಾಮಧೇನು 4 ತಂದೆ ತಾಯಿ ಗುರು ಬಂಧು ಬಳಗಾಗಿ | ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಪುಣ್ಯವ ಮಾಡಿದೆನೋ ಮುನ್ನೆ | ಧನ್ಯಗೈಸಿದ ಗುರು ಮಹೀಪತಿ ತಾನು ಪ ವಿಜಯಗ್ಹೇಳಿದ ಹರಿ ಗೀತೆಯಲಿ | ಸುಜನ ಸಂತರೊಳು ದುರ್ಲಭನೆನಲಿ 1 ಎನ್ನಯ ಸಿರದಲಿ ಅಭಯಕರವಿಟ್ಟು | ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2 ಕಣ್ಣುದೆರೆಸಿ ಭಕ್ತಿ ಮಾರ್ಗದಲಿ | ಸಣ್ಣವನೆಂದು ಚಿದ್ಭನದೋರಿಸಲಿ 3 ಇನ್ನೊಬ್ಬರಾಶೆ ಏತಕೆ ಎನಗಿನ್ನು | ಎನ್ನ ಹಂಬಲಿಸಿದಾಶೆಯ ಕಾಮಧೇನು 4 ತಂದೆ ತಾಯಿ ಗುರು ಬಂಧು ಬಳಗಾಗಿ |ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಪೇಳಲಮ್ಮಯ್ಯಾ ರಂಗನ ಕ್ರೀಡಾ ಏನು ದಂಡಿಸಲಮ್ಮಯ್ಯಾ ಶ್ರೀ ಕೃಷ್ಣನ್ನ ಪ ಪಿಡಿದು ನಿಂದಾ ದುರುಳ ದೈತ್ಯನ್ನೆಳದೊಡಲವೆ ಸೀಳಿದಾ ಬಲಿಯಲ್ದೈನ್ಯದಿ ದಾನಬೇಡಿ ತಾಯ ಶಿರವ ಕಡಿದು ತೋರಿದಾ ಕಲೆವೆಣ್ಣೈದ್ಮೊಲೆಯುಂಡು ಕಳದ್ವಟ್ಟೆ ಹಯವೇರಿದಾ 1 ಕಾನನದಾ ವರಹನಾದಾ ಆಗಲು ಪಂಚಾನನ ರೂಪನಾದಾ ಸೂನು ಪರಶುರಾಮನಾಗಿ ಜಾನಕಿವರನಾಗಿ ರಾವಣನಾಗಿ ಮಾನಬಿಟ್ಟು ವಾಜಿಯನೇರ್ದಾ 2 ನಿಗಮ ತೋರ್ದಾ ಬೆನ್ನಲಿ ಬೆಟ್ಟವಿರಿಸಿ ಸುರರಾ ಪೊರೆದಾ ಧರಾಲಲನೆಯನೆತ್ತಿ ತಂದಾ ದೈತ್ಯನ ಶೀಳಿ ತರಳನಳಲನು ಕಳೆದಾ ಸುರತಟಿನಿಯಂಗುಟದಿ ಜನಿಸೆ ಧರೆಯ ಪಾವನಗೊಳಿಸೆ ನರಲೋಕವುದ್ಧಾರ ಜನಕ ಸಿರಿಪಾವನ ನರಸಿಂಹವಿಠಲನ 3
--------------
ನರಸಿಂಹವಿಠಲರು
ಏನು ಪೇಳಲಿ ತೀರ್ಥಪತಿಯ ಮಹಿಮೆ ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ ಪ ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ ಈಶನುಪದೇಶದಿಂದಲಿ ವಿಗತ ಜನನಾಗಿ ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ 1 ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ ಪರಮಭೀತಿಯಿಂದ ಅವಳ ವಸನವ ತಂದು ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು 2 ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು ನಿಲ್ಲದೆ ಸನ್ಮುಕ್ತಿ ಧರನಾಗುವಾ ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ ಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ 3
--------------
ವಿಜಯದಾಸ
ಏನು ಪೇಳಲಿ ನಿನ್ನ ತನಯನ ಚರ್ಯವ ಮಾನಿನಿಮಣಿಯೆ ಯಶೋದೆಯ ಕೇಳೆ 1 ವಾರಿಧಿಯೊಳು ಪೊಕ್ಕು ವಿಹರಿಸುವನೆ ಮತ್ತು ಭಾರಿಯಾದ ಕ್ಷಿತಿಧರೆಯನೆ ಹೊರುವನೆ 2 ಕುಂಭಿಣಿಯನೆ ಅತಿ ಸಂಭ್ರಮದಲ್ಲಿ ತಂದು ಸ್ತಂಭವ ಭೇದಿಸಿ ಸಂಭವಿಸಿದನಲ್ಲಿ 3 ಮೂರು ಹೆಜ್ಜೆಯ ಭೂಮಿ ಬೇಡಿದನೇ ಏಳು ಮೂರು ಬಾರಿ ನೃಪತಿಗಳ ಭೇದಿಸಿದನು 4 ವಾನರರನು ಸೇರಿ ಜಾನಕಿಯನೆ ತಂದೆ ಮಾನವ ಕುಲಕೆ ಸನ್ಮಾನವ ತಂದನೆ 5 ಘೋರ ಪೂತನಿ ಪ್ರಾಣ ಹಾರ ಮಾಡಿದ ಜಾರ ಚೋರತನದಿ ಶೂರನಾದನೆ ನೋಡೆ 6 ಬತ್ತಲೆ ನಿಂತನೆ ಸಸ್ತಿಯನೇರಿದ ಮತ್ತು ನಾಮಗಿರಿ ನರಹರಿ ಇವನೆ 7
--------------
ವಿದ್ಯಾರತ್ನಾಕರತೀರ್ಥರು
ಏನು ಪೇಳಲಿ ಹರಿಯ ಚರ್ಯ ಎಂತು ಪೊಗಳಲಿ ಪ ಗಾನಲೋಲ ಜ್ಞಾನಪೂರ್ಣ ಶ್ರೀನಿವಾಸನ ಅ.ಪ ಭಾರ ಪೊತ್ತನ ಖಳನ ಮಡುಹಿ ವೇದರಾಶಿ ಅಜಗೆಯಿತ್ತನ 1 ಕರದಿಕೊಡಲಿ ಪಿಡಿದು ಅಡವಿ ಚರಿಸಿದಾತನ 2 ಪುಣ್ಯ ಮೂರುತಿ ಕಲ್ಕಿ ಗುರುರಾಮವಿಠಲನ 3
--------------
ಗುರುರಾಮವಿಠಲ
ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿಪ. ದಾನಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲಜ್ಞÁನವರಿತು ಹರಿಪೂಜೆ ಮಾಡಲಿಲ್ಲಜ್ಞಾನಿ ಸುಜ್ಞಾನಿಗಳಸನ್ನಿಧಿಯಲ್ಲಿರಲಿಲ್ಲ ನಿರ್ಮಲಮನದಲಿ ಒಂದುದಿನವಿರಲಿಲ್ಲ 1 ಸತಿ ಪುರುಷರು ನಾವು ಸಂತೋಷದಿಂದಿರಲಿಲ್ಲಯತಿಯಾಗಿ ತೀರ್ಥಯಾತ್ರೆ ಮಾಡಲಿಲ್ಲಶ್ರುತಿಶಾಸ್ತ್ರ ಪುರಾಣಗಳ ಕಿವಿಗೊಟ್ಟು ಕೇಳಲಿಲ್ಲಮೃತವಾಗೋಕಾಲ ಬಂತು ಬರಿದೆ ಮುಪ್ಪಾದೆನಲ್ಲ 2 ಉಂಡು ಸುಖಿ ಅಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲದುಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆಮೊಂಡಜೋಗಿಗುಣಂಗಳ ಬಿಡಿಸೊ ಹಯವದನ 3
--------------
ವಾದಿರಾಜ
ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ ಸಾನು ರಾಗದಿ ಹರಿಯ ಸೇವಿಸುತಲಿರುವಿ ಪ. ಕಂಕಣವು ನೀನಾಗಿ ಹರಿಗೆ ಭುಜಕೀರ್ತಿ ನೀನಾಗಿ ಶಂಕುಚಕ್ರ ಗದಾ ಪದ್ಮ ನೀನಾಗಿ ಶಂಕೆ ಇಲ್ಲದೆ ಕಿಂಕರಳು ನೀನಾಗಿ ಹರಿಸೇವೆಗೆ ಪಂಕಜಾನಾಭನ್ನ ಸೇವಿಸುತಲಿರುವಿ 1 ಅಕ್ಷರಳು ನೀನಾಗಿ ಹರಿಯ ವಕ್ಷಸ್ಥಳವನೇ ಸೇರಿ ಈ ಜುತ ಹರಿಯ ಪರಮ ಸಂತೋಷದಿಂದ ಲಕ್ಷ ಕೋಟಿ ಕೋಟಿ ಬ್ರಹ್ಮಾಂಡರೂಪದಲ್ಲಿರುವ ಪಕ್ಷಿವಾಹನನ ನೋಡಿ ವೆರಗಾಗುತಲಿರುವಿ 2 ರಾಮನಾ ಸತಿಯಾಗಿ ಪ್ರೇಮದಿಂದಲಿ ಈಗ ಕಾಮನಯ್ಯನ ಕಾರುಣ್ಯದಿಂದ ರಮಾವಲ್ಲಭವಿಠಲನ ತೊಡೆಯ ಮೇಲೆ ಕುಳಿತು ಸ್ವಾಮಿಗೆ ಸತಿಯಾಗಿ ಸೇವಿಸುತಲಿರುವಿ 3
--------------
ಸರಸಾಬಾಯಿ
ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿಮೀನು ಗಾಳವÀ ನುಂಗಿ ಮೋಸಹೋದ ತೆರನಂತೆ ಧ್ರುವ ಸತಿ ನನ್ನ ಸುತರೆಂದೆನಿಸಿಹೊನ್ನುಗಳ ಗಳಿಸಿ ಹೆಚ್ಚಾಗಿ ಹೋರ್ಯಾಡಿಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದುಅನ್ನ ಮೊದಲು ಕಾಣದೆ ಅಂತರ ಪಿಶಾಚಿಯಂತೆ 1 ಬಲುವೋದಿಕೆಯಲ್ಲಿ ಬಲ್ಲವರೆನಿಸಬೇಕೆನುತಹಲವು ಬುದ್ಧಿಯಲ್ಲಿ ಹಿರ್ರನೆ ಹಿಗ್ಗುತಮಲಿನ ಮನಸಿನಜ್ಞಾನದಲಿ ತಾನರಿಯದೆ 2 ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿಹೊಗದಲ್ಲಿ ಹೊಗುವರು ಹೂ ಬಿಟ್ಟು ತಿಳಿಯರುಖಗವಾಹನ ಮುದ್ದು ರಂಗವಿಠಲನ ನಾಮ ಸ್ಮರಿಸಲುವಿಗಡ ಸಂಸಾರ ಹಗರಣ ನೀರಗುಳ್ಳೆಯಂತೆ3
--------------
ಶ್ರೀಪಾದರಾಜರು
ಏನು ಮರುಳಾಗುವೆಯೇ ಎಲೆಮಾನವ ನಿನ್ನ ಮಾನಿನಿಯ ಗುಣಕೆ ನೀ ಹಿಗ್ಗಿ ಹಿಗ್ಗಿ ಪ ದಾನ ಧರ್ಮಗಳ ಕೊಡಬೇಕೆಂದರೊಡ ಬಡಲು ಹೀನ ಗುಣಗಳನೆ ತಾ ಸೇವಿಸುವಳು ಜ್ಞಾನ ಮೋಕ್ಷಾದಿಗಳ ಹಾದಿಯನುಕಟ್ಟಿ ಭವ ಕಾನನವನೆ ಹೊಗಿಸಿ ತೊಳಲಿಸುವಳು 1 ನರಕವನು ತನ್ನಲ್ಲಿ ನೆಲೆಮಾಡಿ ಕೊಂಡಿಹಳು ಪರಿಪರಿಯ ಮೋಹಗಳ ಬೀಸುತಿಹಳು ಸ್ಮರನ ಬಾಣವ ಮಾಡಿ ಸಾಲು ಗೊಲೆಕೊಲ್ಲುವಳು ಅರಿಯದವರಂತೆ ಮಿಣ್ಣಗೆ ಇರುವಳು 2 ತನ್ನಮನ ಬಂದಂತೆ ಚರಿಸುವಳು ಪಗಲಿರುಳು ಕನ್ನಗೊಯ್ಕರ ವೋಲು ಕೊರೆಯುತಿಹಳು ಭಿನ್ನಭಾವದಿ ನಡೆದು ಮನೆಯ ಪಾಲ್ಮಾಡುವಳು ಕಣ್ಣಿನೊಳು ಕಂಡೊಡವೆಗಳನಿರಿಸಳು 3 ಸುದತಿ ಯಾಕಾರೆ ಯಾಗಿಹಳು ನೋಯೆ ನುಡಿವಳು ಕಂಡ ಕಂಡವರೊಳು ಹೋಯೆಂದು ಕೂಗುವಳು ಶಿಕ್ಷಿಸಳು ನಿನ್ನನುರೆ ಬಾಯೊಳಗೆ ಭಯಬಿಡಿಸಿ ಹಾಗಿಸುವಳು 4 ಕಾಮ ಕ್ರೋಧಾದಿಗಳ ಕೀಲ ಬಲಗೊಳಿಸುವಳು ಪ್ರೇಮ ಗೆಡಿಸುವಳೆಲ್ಲ ಬಾಂಧವರನು ಭೂಮಿಯೋಳಗಧಿಕ ಭೀಮನ ಕೋಣೆ ಲಕ್ಷ್ಮೀಪತಿಯ ನೆನೆನೆನೆದು ಸಖಿಯಾಗು ಕಂಡ್ಯಾ 5
--------------
ಕವಿ ಪರಮದೇವದಾಸರು
ಏನು ಮಹಿಮರೊ ನಮ್ಮ ಶ್ರೀ ಗುರುಗಳು ಶ್ರೀನಿಧಿಗೆ ಪರಮ ಪ್ರಿಯರೆನಿಸಿ ಮೆರೆಯುವರು ಪ. ಶಾಂತತ್ವವೆಂತೆಂಬ ಕವಚವನೆ ತೊಟ್ಟಿಹರು ದಾಂತತ್ವದಾ ನಡುಕಟ್ಟು ಕಟ್ಟಿಹರು ಸಂತೋಷ ಸುಖದಲಿ ಅಂತರಂಗದಿ ಹರಿಯ ಚಿಂತನೆಯ ಮಾಡುತಲಿ ಮುಕ್ತಿಪೊಂದಿಹರು 1 ವೈರಾಗ್ಯವೆಂತೆಂಬ ಆಯುಧವ ಧರಿಸಿಹರು ಸೇರಿದವರನು ಪೊರೆವ ಕಂಕಣವ ಕಟ್ಟಿ ನಾರಸಿಂಹನ ನಾಮ ಕರ್ಣಭೂಷಣ ಧರಿಸಿ ನಾರಾಯಣನ ಗುಣದ ಹಾರ ಧರಿಸಿಹರು 2 ಪರರಿಗುಪಕಾರವನೆಸಗುವ ಭುಜದ ಕೀರುತಿಯು ವರತತ್ವ ಅರುಹುವ ವನಮಾಲಿಕೆಯು ಸಿರಿ ಭಕ್ತಿಗುಣಗಳೆಂತೆಂಬೊ ವಸನಗಳು ಧರಿಸಿರುವ ಮಹಿಮರ ಸರಿಗಾಣೆ ಜಗದಿ 3 ಕುಂದದೆ ಭಕ್ತರನು ಪೊರೆಯುವ ಭಾರದ ಅಂದದಾ ಮುಕುಟ ಶಿರದಲ್ಲಿ ಧರಿಸಿ ತಂದೆ ಮುದ್ದುಮೋಹನದಾಸರೆಂದೆನಿಸುತ ಮಂದಜ್ಞ ಮನ ಪಾಪ ಪಾದುಕೆಯ ಮೆಟ್ಟಿಹರು 4 ಎಷ್ಟು ಹೇಳಲು ಸಾಧ್ಯ ಶ್ರೇಷ್ಠ ಗುರುಗಳ ಚರಿತೆ ಪಟ್ಟವಾಳ್ವರು ಜ್ಞಾನ ಸಾಮ್ರಾಜ್ಯವ ಕೆಟ್ಟ ಭವರೋಗವನು ಸುಟ್ಟು ಭಸ್ಮವ ಮಾಡಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ತೋರ್ವರು5
--------------
ಅಂಬಾಬಾಯಿ
ಏನು ಮಾಡಲಯ್ಯ ಬಯಲಾಸೆ ಬಿಡದು ಪ ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ಅ ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನುಕಾತರಿಸಿ ಬೀಳುವ ಪತಂಗದಂದದಲಿಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ 1 ಅಂದವಹ ಸಂಪಗೆಯ ಅರಳ ಪರಿಮಳವುಂಡುಮುಂದುವರಿಯದೆ ಬೀಳ್ವ ಮಧುಪನಂತೆಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂಗಂಧ ವಾಸಿಸುವ ಘ್ರಾಣೇಂದ್ರಿಯಕೆ 2 ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡುಪ್ರಾಣಾಹುತಿಯೆಂದು ಸವಿವ ಮೀನಿನಂತೆಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದುಜಾಣತನದಲಿ ನಲಿವ ಜಿಹ್ವೇಂದ್ರಿಯಕೆ 3 ದಿಮಿದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ-ಣಮವೆಂದು ತೋಷಿಸುವ ಕರ್ಣೇಂದ್ರಿಯಕೆ 4 ತ್ವಕ್ಕು ಮೊದಲಾದ ಪಂಚೇಂದ್ರಿಯಗಳೊಳು ಸಿಕ್ಕಿಕಕ್ಕುಲಿತೆಗೊಂಬುದಿದ ನೀನು ಬಿಡಿಸೊಸಿಕ್ಕಿಸದಿರು ಸಿಕ್ಕಿಗೆ ಆದಿಕೇಶವರಾಯದಿಕ್ಕಾಗಿ ನಿನ್ನಂಘ್ರಿಯೊಳೆನ್ನ ಮನವನಿರಿಸೊ 5
--------------
ಕನಕದಾಸ
ಏನು ಮಾಡಲಿ ವಿಠಲ ಏನು ತಿಳಿಯದು ವಿಠಲ ಏನಿತ್ತು ಮೆಚ್ಚಿಸಲಿ ವಿಠಲಾ ಪ. ಜ್ಞಾನ ಮೊದಲೇ ಇಲ್ಲ ಧ್ಯಾನ ಮಾಡುವುದರಿಯೆ ನೀನಾಗೆ ವಲಿದೆನ್ನ ಸಲಹಯ್ಯ ವಿಠಲಯ್ಯ ಅ.ಪ. ತಂದೆತಾಯಿಯು ನೀನೆ ಬಂಧು ಬಳಗವು ನೀನೆ ತಂದವನುಭವದಲ್ಲಿ ಎನ್ನ ನೀನೆ ಮುಂದೆ ಪೊರೆವವ ನೀನೆ ಹಿಂದೆ ಪೊರೆದವ ನೀನೆ ಇಂದು ಪೊರೆಯುವನು ನೀನೇ ಒಂದರಿಯೆ ತವ ಪದದ್ವಂದ್ವವೆ ಗತಿ ಎಂದು ಇಂದು ಚರಣದಿ ಬಿದ್ದೆ ಪೊರೆಯಯ್ಯ ವಿಠಲಯ್ಯ 1 ಹಿಂದಿನಾ ಭಕ್ತರನು ಪೊರೆದ ಕೀರುತಿ ನೋಡೆ ಒಂದು ನಿಜವೆಂದರಿಯೆ ವಿಠಲಾ ಇಂದೆನ್ನ ಕರಪಿಡಿದ ಮುಂದಕ್ಕೆ ಕರೆದು ನೀ ಒಂದು ಮಾತನಾಡೆ ವಿಠಲಾ ಅಂದಿನಾ ಭಕ್ತವತ್ಸಲನೆಂಬ ಕೀರ್ತಿ ನಿಜ ವೆಂದು ತಿಳಿಯುತಲಿ ಆನಂದಿಸುವೆ ವಿಠಲಯ್ಯ 2 ಸಿರಿವಂತರಿಗೆ ವಲಿವ ಬಿರುದೊಂದು ಘನವೆ ಕೇಳ್ ಪರಿ ವಿಠಲಾ ಪರಿಪರಿಯಲಿ ನಿನ್ನ ಚರಣ ಪಿಡಿದಾಲ್ಪರಿಯೆ ಥರವೆ ಗರುವಿಕೆ ಪೇಳು ವಿಠಲಾ ತೆರದು ನೋಡದೆ ನೇತ್ರ ಕರದಭಯ ಪೇಳದಲೆ ಪರಿ ಕರುಣೆಗೆ ಸರಿಯೆ ಪೇಳ್ ವಿಠಲಯ್ಯ3 ಹಿಂದೆ ಕೆಲವರ ಕಾಯ್ದುದೊಂದೆ ಕೀರ್ತಿಯು ಜಗದಿ ಮಂದಿ ಹೊಗಳುವರದನೆ ಮತ್ತೆ ಮತ್ತೆ ಇಂದು ಮುಂದೆ ಅಂಥ ಬಂದ ಭಕ್ತರು ಇಲ್ಲೆ ಇಂದಿಲ್ಲವೇ ನಿನಗೆ ಆ ಶಕ್ತೀ ಇಂದಿನವರಲಿ ಅಂಥ ಭಕುತಿ ಇಲ್ಲವೆ ಪೇಳು ಇಂದಿರೇಶನೆ ಎನಗೆ ವಲಿಯದಿಹೆ ವಿಠಲಯ್ಯ 4 ಅಂತರಂಗದಿ ನಿಂತು ಶಾಂತತ್ವ ಕೊಡುವುದಕೆ ಚಿಂತೆ ಏತಕೆ ಪೇಳು ವಿಠಲಾ ಸಂತತದಿ ನಿನಧ್ಯಾನ ಚಿಂತನೆಯ ಕೊಡು ಎನಗೆ ಚಿಂತಿತಾರ್ಥಪ್ರದನೆ ವಿಠಲಾ ಕಂತುಪಿತ ಗೋಪಾಲಕೃಷ್ಣವಿಠ್ಠಲ ಗುರುಗ ಕರ ಪಿಡಿದು 5
--------------
ಅಂಬಾಬಾಯಿ
ಏನು ಮಾಡಲಿಯನ್ನ ಮನಸಿನಟ್ಟುಳಿ ಘನ | ನೀನೆ ನಿಲಿಸೋ ಹರಿಯೇ ದೊರೆಯೆ ಪ ಪರಮ ಪಾವನ ನಿನ್ನ ಚರಿತವ ಕೇಳದು | ಬರಡ ಮಾತಿಗೆ ಪ್ರೇಮಾ ನೇಮಾ 1 ಸಿರಿವರ ಮೂರ್ತಿಯನು ನೋಡಲೊಲ್ಲದು | ಸತಿಯರ ರೂಪಕೆಳಸುವದು ಹರಿದು 2 ಸಂತರ ಚರಣಕೆರಗಿ ಬಿಗಿದಪ್ಪದು | ಭ್ರಾಂತ ಜನರೊಳಗೆ ಸಂಗಾ 3 ಹರಿಯಂದೊದರಲು ನಾಲಿಗೆ ಬಾರದು | ಪರನಿಂದೆ ಜಪಿಸುವದು ಸರಿದು 4 ಸಿರಿ ಚರಣಾರ್ಪಿತ ತುಲಸಿಯ ಸೇರದು | ಪರಿಮಳದಲಿ ಬೋಗಿಲಿ ಸಾಗಿ 5 ಗುರು ಮಹಿಪತಿ ಪ್ರಭು ನಿನ್ನೆಚ್ಚರಿದಿ ಮನ | ವಿರಿಸಿಯನ್ನನುಳಹೋ ಸಲಹೋ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಮಾಡಲೀ ಮನ ಮಾತು ಕೇಳದೇನು ಮಾಡಲಿ ಶ್ರೀ ನರಹರಿಯ ನೆನೆಯದೆ ಕಂಡ ಹೀನ ವಿಷಯದಲ್ಲಿ ಶ್ವಾನನಂತೆ ಪೋಪರೇನು ಪ ಸಾಧು ಸಜ್ಜನರ ಬೋಧನೆಯ ಜರಿಸಿ ಮಾಧವನೆ ನಿನ್ನ ಪಾದಕೊಯಿರಿ ಮಾಳ್ಪೊದೇನು 1 ಕಾಯ ಬಾಂಧವರ ಮಾಯಪಾಶಕ್ಹಾಕೆ ತೋಯಜಾಕ್ಷ ಎನ್ನ ಬಾಯ ಬಿಡಿಸೊರೈಯ್ಯ 2 ಗಜ ಸಿಕ್ಕಿಬಿದ್ದು ನೈಜ ದಿಕ್ಕುಕಾಣದಂತೆ ಸಿಕ್ಕೆ ವಿಷಯದಲ್ಲಿ 3 ತಂದು ತಂದು ಗೋವಿಂದ ನಿನ್ನಲಿಡೆ ಸಂದುಗೊಂಡು ಬಿಡಿಸಿಕೊಂಡು ಪೋಪುದೈಯ್ಯ 4 ದೇಹಗೇಹದಲ್ಲಿ ಸ್ನೇಹ ಇಡಿಸಿ ಕೆಡಿಸಿ ಶ್ರೀ ಹಯವದನ ಮೋಹಪಾಶಕ್ಹಾಕೋದೇನು 5 ವಾಕು ಕೇಳೋ ತಂದೆ ಪಾದ ಒಂದೇ ಸಾಕಬೇಕೊ ಇಂದೆ 6 ಹೀನಬುದ್ಧಿಬಿಡಿಸಿ ಜ್ಞಾನ ನಿನ್ನಲಿರಿಸಿ ಗಾನಲೋಲ ಕಾಯೋ ಶ್ರೀ ನರಹರಿಯೆ 7
--------------
ಪ್ರದ್ಯುಮ್ನತೀರ್ಥರು