ಒಟ್ಟು 2759 ಕಡೆಗಳಲ್ಲಿ , 108 ದಾಸರು , 2014 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಗೆ ಶಿಷ್ಯನು ಬ್ರಹ್ಮ ಕಮಲಜಗೆ ಸನಕಾದಿ ವರಋಷಿಗಳವರನಂತರದಿ ದೂರ್ವಾಸಮುನಿ ಪ್ರಾಜ್ಞತೀರ್ಥರುಮವರಿಗೆ 1 ಘನ ತಪೋನಿಧಿಯೆನಿಸುವಚ್ಚುತ ಪ್ರೇಕ್ಷ್ಯರಾ ತ್ರಿವಿಧ ಜೀವಗುರುವೆನಿಸು ದಶಮತಿಯೆನಿಸುವ | ವನಜನಾಭಾಕ್ಷೋಭ್ಯಮಾಧವನೃಹರಿ ತೀರ್ಥ ರಿನಿತು ನಾಲ್ವರೊಳಗಕ್ಷೋಭ್ಯ ತೀರ್ಥಯತೀಂದ್ರ ಶ್ರೀಪಾದರಿಗೆ ಶಿಷ್ಯರು 2 ಆನಂದತೀರ್ಥವಿರಚಿತ ಗ್ರಂಥಗಳಿಗೆ ತ ತ್ವಾನುಸಾರಾರ್ಥಸುಧೆ ರಚಿಸಿದರ್ಜಯತೀರ್ಥ ಮೌನಿ ವಿದ್ಯಾಧಿರಾಜಂಬಳಿಕ ರಾಜೇಂದ್ರ ಗಾನಕ ಜಯಧ್ವಜಗುರುಪ್ರವರವರಶಿ ಪ್ರಸಾದದಿಂ 3 ವ್ಯಾಸಮುನಿರ್ಯರಾತರ್ವಾಯದಲಿ ಶ್ರೀನಿ ರಾಮಚಂದ್ರತೀರ್ಥರ್ | ಲೇಸಾಗಿ ಮುಂದೆ ಲಕ್ಷ್ಮೀವಲ್ಲಭಾಖ್ಯಯೋ ಶ್ರೀನಾರಾಯಣÁಖ್ಯ ಬಳಿಕ 4 ಜಗನ್ನಾಥ ಮುನಿಯವರ ಬಳಿಕ ಶ್ರೀನಾಥ ತೀ ರ್ಥಗೆ ಶಿಷ್ಯರಾದ ವಿದ್ಯಾನಾಥ ಯೋಗೀಂದ್ರರವರ್ಗೆ ವಿದ್ಯಾಪತಿಗುರು | ಜಗವರಿಯೆ ಮುಂದೆ ವಿದ್ಯಾವಲ್ಲಭಾಖ್ಯಯೋ ಗಿಗೆ ಶಿಷ್ಯನಾದ ವಿದ್ಯಕಾಂತ ಮುನಿವರ್ಯ ವಿದ್ಯಾಪೂರ್ಣರವರ ಬಳಿಕ 5 ವಿದ್ಯಾಸಮುದ್ರ ತೀರ್ಥರವರ್ಗೆ ಶಿಷ್ಯನಾ ತೀರ್ಥಯತೀಂದ್ರ ಶ್ರೀಪಾದರು ಶುದ್ಧ ಮನದಲಿ ಗುರುಪರಂಪರೆ ಸ್ತೋತ್ರವಂ ಪದ್ಮಾಕ್ಷ ಗುರುರಾಮವಿಠಲ ನುಡಿಸಿದ ತೆರದೊ ತಿದ್ದುವುದು ಕರುಣದಿಂ 6
--------------
ಗುರುರಾಮವಿಠಲ
ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ ಅರಿವೆ ಅನ್ನಾಭರಣ ದ್ರವ್ಯ ಸರ್ವವು ಶ್ರೀ ವರನೆ ಎಂಬ ಪ ನಿತ್ಯಾನಂದ ನಿತ್ಯಜ್ಞಾನಾನಿಮಿತ್ತ ಬಂಧು ಭಕ್ತರಿಗೆ ಇತ್ತದ್ದೆ ಸಂಪತ್ತು ಎಂದು ಕೀರ್ತಿಸುತ್ತ ನರ್ತಿಸುವ 1 ದೋಷದೂತರನೊಬ್ಬ ಪೋಷ್ಯ ಪೋಷಕಾಧಾರ ಧೇಯ ದೋಷಕಾರಿ ತ್ರೈ ಲೋಕ್ಯ ವಿಭೂಷಣ ವಿಭೂತಿದನೆಂಬ 2 ಎನ್ನ ಸ್ವಾಮಿ ಸರ್ವರಿಗೆ ಎನ್ನ ಬಿಂಬ ಎಲ್ಲರಿಗೆ ಮಾನ್ಯ ಮಾನದನು ಜಗದ್ಭಿನ್ನನೆಂದು ತುತಿಸುತಿಪ್ಪ 3 ಜನನೀ ಜನಕ ಲಕ್ಷ್ಮೀ ನಾರಾಯಣನೆ ಪುತ್ರಮಿತ್ರನೆಂದು ಕ್ಷಣಶ ಕೊಂಡಾಡುತನ್ಯರ ಗಣನೆ ಮಾಡದಿಪ್ಪ ನಿಜ4 ಹಾನಿ ಲಾಭ ಕೀರ್ತಿ ಅಪಮಾನ ಮಾನ ಪುಣ್ಯಪಾಪ ಶ್ರೀನಿವಾಸಗರ್ಪಿಸಿ ಮದ್ದಾನೆಯಂತೆ ಚರಿಸುತಿಪ್ಪ 5 ಅನಂತ ಜೀವರಿಗಿನ್ನು ಅನಾದಿ ಅನ್ನದನಾಗಿ ಅನಿರ್ವಿಣ್ಣ ನಾಮಕನೆಂದು ಸನ್ನುತಿಸಿ ಹಿಗ್ಗುತಿಪ್ಪ 6 ಸರ್ವ ಜೀವ ದೇಹಾಂತಸ್ಥ ಸರ್ವ ಜಗನ್ನಾಥ ವಿಠಲ ಸರ್ವರೂಪ ಸರ್ವನಾಮ ಸರ್ವವೇದೋದಿತನೆಂಬೊ 7
--------------
ಜಗನ್ನಾಥದಾಸರು
ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀ- ಹರಿಕೃಷ್ಣ ಶರಣೆನ್ನಿರೊ ಪ ಪರಿಪರಿ ದುರಿತಗಳಳಿದು ಪೋಗುವದೆಂದು ನಿರುತವು ವೇದಪುರಾಣ ಪೇಳುವದು ಶ್ರೀ ಅ.ಪ ಹರಿ ಎಂದ ಮಾತ್ರದಲಿ ಹತ್ತಿದ ಪಾಪ ಪರಿಹಾರಾಗುವುದು ಕೇಳಿ ಹರಿದಾಸರೊಡನೆ ಕೂಡಿ ಸತ್ಸಂಗದಿ ಹರಿ ಕೀರ್ತನೆಯನು ಪಾಡಿ ಹರಿಯ ಮಹಿಮೆಯ ಸ್ಮರಿಸುತಲಿ ಹಗ ಲಿರುಳು ಚಿಂತನೆ ಮಾಳ್ಪ ಸುಜನರ ಪರಮ ಕರುಣಾ ಸಾಗರನು ತನ್ನ- ವರೊಳಿರಿಸುತ ಪೊರೆವ ಸಂತತ 1 ಕರಿರಾಜ ಕಷ್ಟದಲಿ ಮೊರೆ ಇಡೆ ಕೇಳಿ ತ್ವರದಿ ಓಡಿ ಬರಲಿಲ್ಲವೆ ಹರಿ ನೀ ರಕ್ಷಕನೆನ್ನಲು ಪಾಂಚಾಲಿಗ- ಕ್ಷಯ ವಸ್ತ್ರವೆನಲಿಲ್ಲವೆ ತರುಳರೀರ್ವರ ಪೊರೆದು ರಕ್ಷಿಸಿ ಕರೆಯೆ ನಾರಗನೆಂದ ದ್ವಿಜನಿಗೆ ನರಕ ಬಾಧೆಯ ಬಿಡಿಸಿ ಸಲಹಿದ ಹರಿಗೆ ಸಮರು ಅಧಿಕರಿಲ್ಲ ಶ್ರೀ 2 ಬಡಬ್ರಾಹ್ಮಣನ ಸತಿಯು ನಯಭಯದಿಂದ ಒಡೆಯರ್ಯಾರಿಲ್ಲೆನಲೂ ಪೊಡವೀಶ ಶ್ರೀಪತಿಯು ಪರಮಾಪ್ತನೆನಲು ಹಿಡಿಯಗ್ರಾಸವ ಕೊಡಲು ನಡೆದು ದ್ವಾರಕ ದೊಡೆಯನಿಗೆ ಒ- ಪ್ಪಿಡಿಯ ಗ್ರಾಸವ ಕೊಡಲು ಭುಂಜಿಸಿ ಕೆಡದ ಸೌಭಾಗ್ಯವನೆ ನೀಡಿದ ಬಿಡದೆ ಕಮಲಾನಾಭ ವಿಠ್ಠಲನ 3
--------------
ನಿಡಗುರುಕಿ ಜೀವೂಬಾಯಿ
ಹರಿನಿನ್ನ ಕರುಣವಿರಾಲಾವ ಭಯವು ಸ್ಮರಣಿ ಮಾತ್ರದಿ ಸಕಲದುರಿತಗಳ ಪರಿಹರಿಪ ಪ ಸಣ್ಣ ವಯದಲಿ ಶ್ರೀ ಜಗನ್ನಾಥದಾಸಾರ್ಯ ಬನ್ನ ಬಡುತಿರೆ ವ್ಯಾಧಿ ಪೀಡೆಯಿಂದ ಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ - ಬಿನ್ನಪವನಾಲಿಸಿ ರೋಗಮೋಚನ ಗೈದ 1 ದಾಸಕುಲರತ್ನ ಪ್ರಾಣೇಶ ದಾಸಾರ್ಯರ ಆಸುವಂಶದ ತರುಳ ರೋಗದಿಂದಾ ಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನು ನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ 2 ವರದೇಂದ್ರ ಗುರುವರರ ಸುರುಚಿರಾಲಯದಲ್ಲಿ ಇರಳ್ಹಗಲು ನಿಮ್ಮ ನಾಮ ಸ್ಮರಿಸುವಂಥ ಪರಿ ಪೀಡಿಸುವದುಚಿತವೇನೊ ಶ್ರೀ ಹರಿ ವಿಚಾರಿಸಿ ನೀನೆಸಿದಯದಿಂದ ನೋಡೊ 3 ವಾಸವಾದ್ಯಮರನುತ ವಾಸುದೇವನೆ ನೀನು ಈ ಸಮಯದೊಳಗಿವನ ಕರುಣದಿಂದ ಪೋಷಿಸಲು ನಿನ್ನ ಪೊಂದಿರುವ ಸದ್ಭಕ್ತರ ದಾಸನೆಂದೆನಿಸಿ ಜೀವಿಸಲಿಯನವರತ 4 ನಿನ್ನನೇ ನಂಬಿರುವೆ ನಿನ್ನನೇ ಪ್ರಾರ್ಥಿಸುವೆ ಧನ್ವಂತ್ರಿ ನೀನೆನ್ನ ಮೊರೆಯಾಲಿಸೊ ಬನ್ನ ಬಡಿಸಲು ಸಲ್ಲ ಇನ್ನು ನೀ ಕರುಣಿಪುದು ವರದೇಶವಿಠಲ 5
--------------
ವರದೇಶವಿಠಲ
ಹರಿಬಾಬು ರಾಮಚಂದ್ರ ಶೀತಾಪತೇ ಪ ದಶರಥನುದರದೊಳ್ ಶಿಶುವಾಗಿ ಪುಟ್ಟಿದೆ ದಶಕಂಠನಾಶನೇ ನೀನೆವೋಹರಿ ಶೀತಾಪತೇ 1 ತಾಪತ್ರಯಗಳಿಂದ ಪಾಪಿಯಾಗಿಹೆ ನಾನು ತಾಪವಿದಾರನೇ ನೀನೇವೋಹರಿ ಶೀತಾಪತೇ 2 ವಾಸುದೇವನೇ ನೀನು ದಾಸರ ಸಲಹುವ ಭೂಷಣ ಪೋಷಿಪ ನೀನೇವೋಹರಿ 3 ಆಶಾಪಾಶಗಳಿಂದ ಘಾಶಿಯಾದೆನು ನಾನು ದೋಷವಿದಾರನೇ ನೀನೇವೋಹರಿ 4 ಶಾಂತಿಪದದಲಿ ವಿಶ್ರಾಂತಿ ಕೊಟ್ಟಿನ್ನಾ ಭ್ರಾಂತಿಯ ತೋರಿಸುವ ನೀನೇವೋಹರಿ ಶೀತಾಪತೇ 5
--------------
ಶಾಂತಿಬಾಯಿ
ಹರಿಭಜನವೇ ಬಹುಮಿಗಿಲು ನರನಿಗೆ ಧರೆಯಸುಖವೆಲ್ಲ ಸುಳ್ಳೊ ಸುಳ್ಳೋ ಪ ತಂದೆತಾಯಿಗಳು ಮಂದಿ ಮಕ್ಕಳು ಬಂಧುಬಳಗ ಒಂದು ಸಂಬಂಧವಿಲ್ಲ 1 ಕೋಟಿಕೊತ್ತಲ ಕೋಟಿಧನಬಲ ನೀಟಾದ ಮಹಲು ನಿಜವಿಲ್ಲ ಇಲ್ಲ 2 ರಾಜ್ಯಭಂಡಾರ ಪ್ಯಾಟೆ ತೇಜಿ ಆನೆ ಒಂಟಿ ರಾಜಿಪುದೆಲ್ಲ ಸುಳ್ಳ ಮುಷ್ಟಿಮುಷ್ಟಿ 3 ಸಿರಿ ಅಂದಣ ಭಾರಿ ನಂದಿಪೋಗುವುದೆಲ್ಲ ಹಾರಿ ಹಾರಿ 4 ವರದ ಶ್ರೀರಾಮನ ಚರಣಸ್ಮರಣಿಲ್ಲದ ನರರ ಜನುಮವೆಲ್ಲ ಹಾಳು ಹಾಳು 5
--------------
ರಾಮದಾಸರು
ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ ಪ ಪಂಕಜ ದಳ ಕೂಡಿತು ನೋಡು ಮುದರಿಕೊಂಡವು ಕುಮುದವೆಂಬೊ ಕಣ್ಣು ಪದುಮನಾಭನೆ ನಿನ್ನ ನಖವೆಂಬೊ ರವಿ ವದನವೆಂಬೊ ಚಂದ್ರÀಮಾ ಉದಿಸಲಿ 1 ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ ಕರ್ಣ ಮಂದಿರವೆ ತುಂಬಲಿ ಕಲಿ ಅಡಗಿ ಪೋಪಾ 2 ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು ಪೂಸಿದಾ ಗಂಧ ದಿವ್ಯವಾಸನೆ ಬರಲಿ ಲೇಸು ನಿನ್ನ ನಾಮರಸ ಸುರಿಸುವಂತೆ ಮಾಡು3 ನೀನಲ್ಲದೆ ತುಲಾ ಕಾವೇರಿಯೊಳಗೆ ಸ್ನಾನ ಜಪ ತಪಗಳು ಮಾಡುವದೇಕೆ ಸಿರಿ ಪ್ರಾಣರಿಗೆ ಪ್ರಾಣನಾದ ಬಲು ಮೋಹನಾ 4 ಈ ಕ್ರೋಧನಾಬ್ಧ್ದ ಆಶ್ವಿಜ ನಿನ್ನ ಪಕ್ಷದ ಏಕಾದಶಿ ರಾತ್ರಿಯೊಳು ಬಾ ಹೃದಯದೊಳಗೆ ಯಾಕೆ ಕೂಡದಯ್ಯ ಜೀಯಾ ಪೇಳೊ ಎನ್ನೊಡಿಯ ಲೋಕ ಚರಿಸುವದೇನು ನಿನ್ನ ಪೋಗಾಡಿ 5 ಧವಳಗಂಗಿಯೊಳಂದು ಬಿದ್ದು ಬಂದಾಗ ಕವಿ ವಾದಿರಾಜಗೊಲಿದು ಬರಲಿಲ್ಲವೇ ಅವರ ದಾಸಾನುದಾಸನು ಸತತ ನಾನು ತವಕದಿಂದಲಿ ಬಾರೊ ಭಕ್ತವತ್ಸಲಾ6 ಅರ್ಚಿಸಬಲ್ಲನೆ ದೇವ ನಿನ್ನನುದಿನಾ ಗಚ್ಚರಿತವಂದಲ್ಲವೆ ಮತ್ತಾವದರಿಯೆ ಅಚ್ಯುತದಾಸರ ಪ್ರೀಯ ವಿಜಯವಿಠ್ಠಲ ಬೆಚ್ಚಿಸಿದೋಪಾದಿಯಲ್ಲಿ ಪೊಂದಿ ಬಾರಯ್ಯ 7
--------------
ವಿಜಯದಾಸ
ಹರಿಯ ಚರಣ ನಿರುತ ಸ್ಮರಿಸಲೊ ಮೂಢ ಮನುಜ ನಿತ್ಯ ಪಾಡಿ ಭಜಿಸು ನರಕಭಯ ವಿಮುಕ್ತನಾಗೆಲೋ ಪ ಹಿಂಡುಬಳಗ ಕೂಡಿಹಾಕಿದಿ ಆಸಕ್ತನಾಗಿ ಬಂಡಿಹೊನ್ನು ಘಳಿಸಿ ಹೊಳಿದಿ ಬಗೆಬಗೆಯಲಿಂಡು ಬಂಡÀ ಬೆಳಸಿ ತುಂಡಗ್ವಾಣದಿ ತುಂಡಿನೇಗ ಜವನಭಟರು [?] ಬೆನ್ನ ಬಿಡವು 1 ಪಗಲು ಹರಟಿಯೊಳಗೆ ಪೋದಿತು ಆಯುಷ್ಯದೊಳಗೆ ಮಿಗಿಲು ರಾತ್ರಿ ವಿಷಯಗಳೆಯಿತು ಸುಗಂಧದ್ರವ್ಯ ಸೊಗಸಿನಿಂದ ಮೈಯ್ಯ ಮುಸುಕಿತು ಜಗದಿ ಘೂಳೆಯಂತೆ ಮೆರೆದಿ ಸೊಗಸಿನಂಗ ತೊಲಗಿತಲ್ಲಿ 2 ದುಷ್ಟತನಕೆ ದಾರಿ ಕೊಡದಿರು ಲೋಕದಲಿ ನೀನು ಭ್ರಷ್ಟನಾಗದೆ ತುಷ್ಟಿಯಿಂದಿರು ಕಷ್ಟಸುಖಗಳ್ಹರಿಗೆಯರ್ಪಿಸಿ ಸೃಷ್ಟಿಪರ ನರಸಿಂಹವಿಠಲನಷ್ಟ ವಿಧದಿ ಪೂಜೆಗೈದು ಇಷ್ಟ ಮುಕ್ತಿ ಸುಖ ಪಡೆಯೋ 3
--------------
ನರಸಿಂಹವಿಠಲರು
ಹರಿಯ ನೆನೆವಲ್ಲಿ ಮನವೆ ನೀ ಪ ಅರಿವು ತಿಳಿವಲ್ಲಿ ಹರಿದುಹೋಗುವ ದುರುಳ ಸಂಸಾರಕೆ ಮರುಳನಾಗಿ ನೀ ನರಕಕ್ಹೋಗುವಿಯಲ್ಲೋ ಅ.ಪ ಖೊಟ್ಟಿಗುಣಳಿವಲ್ಲಿ ಮನಸಿನ ಭ್ರಷ್ಟತ್ವ ಕಳಿವಲ್ಲಿ ಶಿಷ್ಟರಲ್ಲಿ ಮನವಿಟ್ಟು ಉಳಿಯದೆ ನೀ ಕಷ್ಟದೊಳಗೆ ಬಿದ್ದು ಕೆಟ್ಟು ಹೋಗುವಿಯಲ್ಲೋ 1 ಮರವೆ ಮಾಯವನ್ನು ಮರುಳೆ ನೀ ತರಿಯವಲ್ಲಿ ಇನ್ನು ಪರಿ ವಿಚಾರಿಸದೆ ದುರಿತದೊಳಗೆ ಬಿದ್ದು ಮರುಗುವಿಯಲ್ಲೋ 2 ಅಸೆ ನೀಗುವಲ್ಲಿ ಸಂಸಾರ ದ್ವಾಸನೆ ಕಡಿವಲ್ಲಿ ದಾಸರ ನಡೆನುಡಿ ಸೋಸಿಲಿಂ ತಿಳಿಯದೆ ನಾಶನಾಗುವಿ ಯಮಪಾಶದೊಳಗೆ ಬಿದ್ದು 3 ಸತಿಸುತರ ಮಾಯಮೋಹದಿ ಗತಿಸಿ ಪೋಗ್ವುದು ವಯ ಕೃತ್ರಿಮನೆ ಅತಿ ಮಂದಮತಿಯೊಳು ಬಿದ್ದು ಘನ ವ್ಯಥೆಯ ಬಡುವಿ ಮಹಗತಿಮೋಕ್ಷ ಪಡೆಯದೆ 4 ಮಂದಿ ಮಕ್ಕಳ್ಯಾರು ನಿನಗೀ ಬಂಧು ಬಳಗ ಯಾರು ಕುಂದುವ ಜಗಮಾಯದಂದ ತಿಳಿದು ಮಮ ತಂದೆ ಶ್ರೀರಾಮನ ಹೊಂದಿಕೊಳ್ಳವಲ್ಲಿ 5
--------------
ರಾಮದಾಸರು
ಹರಿಯೆ ನಿನಗನ್ಯ ದೈವರು ಸರಿಯೆ ಮೂರ್ಲೋಕ ದೊರೆಯೆ ಪ. ಭೂತಿದೇವತಿಯು ನಿನ್ನರಸಿಯು ಮೂರ್ಲೋಕದೊಳು ಖ್ಯಾತೆಯಾಗಿರುವ ಭಾರತಿ ಸೊಸೆಯು ಸುತೆ ಭಾಗೀರಥಿಯು ಭೂತೇಶನ ಪಡೆದವನಣುಗನು ಪುರು ಹೂತ ಮುಖ್ಯರು ಸಕಲೋತ್ತಮನೆಂಬರು 1 ನಿನ್ನ ಪೋಲುವ ಕರುಣಾಳುಗಳನ ಕಾಣೆನು ಮೋಹವ ಅನ್ಯಾಯ ಘಟಿತ ಕರ್ಮಗಳನ್ನ ಮಾಡುವ ಎನ್ನನ್ನ ಮನ್ನಿಸಿ ಪಾವನ ಮಾಡುವದನ್ನ ಅನ್ಯರು ತಿಳಿವರೆ ಸುರಗಣ ಮಾನ್ಯ 2 ಪಾತಕ ಬಂಧ ನಿರ್ಮೋಕಗೈವ ವಿತತಾಚಿದಾನಂದ ಮುಕುಂದ ಪಾಲಿಸು ಕೃಪೆಯಿಂದ ಕ್ಷಿತಿವರಗತ ಬಹು ಮತಿಯನು ಕರುಣಿಪ ಹಿತ ಶೇಷಾಚಲಪತಿ ಗೋವಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಯೆ ನಿನ್ನದ್ಭುತ ಚರಿಯವನರಿವುದು ವರಗುರಿಯಿಂದಹರೆ ಕರುಣಿಸೆನ್ನೊಳು ದೊರೆಯೆ ಪ. ನಾನಾ ಯೋನಿಗಳಲ್ಲಿ ಪೋಗುವ ಸೂನುಗಳಿಂತು ಮಾಳ್ಪ ಶಿವ ಭಾನು ನಾಮಗಳಿಂದಲಿ ಸಾನುರಾಗದಿ ಕೊಂಡು ಸಕಲಪಿತರುಗಳಿಗಾನಂದ ಪಾಲಿಸುವಿ 1 ಬುದ್ಧಿಪೂರ್ವಕವಾಗಿ ಮಾಡುವ ಕರ್ಮವ ಶುದ್ಧಭಾವಗಳಿಂದಲಿ ತದ್ದಿನ ಕಾಲದಿ ನಡೆಸುತ ತಾನೆಂಬ ಬದ್ಧಹಂಕೃತಿ ತಾಳದೆ ವಾಸುದೇವ ನೀನುದ್ಧರಿಸೆನ್ನನುತ ತಿದ್ದಿ ಸಮರ್ಪಣೆ ಗೈದವರೆಲ್ಲ ಸರಿ ಶುದ್ಧ ಮಾಡುವ ವಿತತ 2 ಈ ವಿಧದಲಿ ಕರ್ಮಕೋವಿದರಾಡಿದ ಭಾವವೆ ನಿಜವೆನ್ನುತ ಸಾವಧಾನದಿ ನಿನ್ನ ಪಾದಕಂಜವೆ ಭವನಾವೆವೆಂಬೆನು ಸತತ ಶ್ರೀವರ ಶೇಷಾದ್ರಿ ಶಿಖರಾದ್ರಿವಾಸ ಪರಾಪರಗಣ ವಿನುತ ಕಾವಾತ ನೀನೆ ಕರ್ಮಗಳ ಕುಂದುಗಳಿಂದ ಪಾವನಾತ್ಮಕ ಸ್ವರತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಯೇ ನಮ್ಮ ಪರದೈವಾ ಹರಿಯೇ ತ್ರಿಭುವನ ಕಾವಾ ಹರಿಯೇ ಇಹಪರ ನೀವಾ ಜಗದೊಳಗೆ ಪ ಬಿಟ್ಟು ತಾಯ ತಂದೆಗಳ ನೆಟ್ಟನಡವಿಗೆ ಪೋಗಿ | ಮುಟ್ಟಿ ಭಜಿಸಲಾಗಿ ದಯವಿಟ್ಟು ಬಂದನು | ವಿಠಲ ನಚಲ ಪದವಿಯ ಕೊಟ್ಟು ಸಲಹಿದಕ | ಧಿಟ್ಟ ಧ್ರುವರಾಯ ಸಾಕ್ಷಿ ಅಂಬರದಲಿ 1 ಶರಧಿ ದಾಟ ಬಂದು ರಘು | ಪತಿ ಕರಿಸಿದನು | ಧರಿಯದುಳ್ಳನಕಾ ಲಂಕಾಪುರದ ಪದವಿಕೊಟ್ಟು ಕಾಯ್ದಾ | ಮೆರೆವಾ ವಿಭಿಷಣÁ ಸಾಕ್ಷಿ ಮೃತ್ಯುಲೋಕದೀ 2 ಧರೆಯ ನೆಳೆದು ಕೊಟ್ಟರಂಘ್ರಿ ವೆರಡರಿಂದ ಮುಚ್ಚಲಾಗಿ | ಶರಣ ತೃತಿಯ ಪಾದಕ ಶಿರಸವ ನೀಡಲು | ಹೊರೆದನೆಂದು ಬಲಿಸಾಕ್ಷಿ ಪಾತಾಳದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿವಾಸುದೇವನೆ ಬ್ಯಾಸರಿಲ್ಲದೆ ದಾಸನ ಮೊರೆ ಕೇಳು ಜಗದೀಶ ನನ್ನ ಸಮಾನ ಕರುಣಾಭೂಪರುಂಟೆ ಪೇಳು ಪ. ಕಾಲಕಾಲಕೆ ಪೇಳಲಂಜುವೆ ಶ್ರೀಲಲಾಮ ಹರಿಯೆ ಆದರೆ ಬೀಳಗೊಳಿಸುವ ದೇಹಬಾಧೆಯು ತಾಳಲಾಪ ಹೊರೆಯೆ ಎರಡೇಳು ಭಕ್ತಿಯ ಮ್ಯಾಳವರಿಯದೆ ಹಾಳು ಮೋಹ ತೆರೆಯೆ ಮುಳಿಗೇಳಲಾರೆನು ಮಾಧವನೆ ಕರುಣಾಳು ಕಾಯೊ ದೊರೆಯೆ 1 ಯಾರ ಧನವಿನ್ಯಾರ ಭೂಮಿಯು ಯಾರ ವಸ್ತುಗಳಿವು ಕುಂಬಾರ ಭಾಂಡಗಳಂತೆ ನಶ್ವರ ತೋರಲ್ಯಾಕೆ ಫಲವು ಲಘು ನೀರಗುಳ್ಳೆಯ ಪೋಲ್ವ ದೇಹಕೆ ಸೇರಿದ ಸನ್ನಹವು ಬಿಳಿ ಭಾರ ಪೊತ್ತ ಥರವು 2 ಅದರಿಂದ ವೆಂಕಟಮಂದಿರನೆ ನಿನ್ನಿಂದ ಮಾತ್ರ ತಿಳಿಸು ಮೂರ್ತಿ ತಾಪಗಳಿಂದ ಬ್ಯಾರೆಗೊಳಿಸು ದ್ವಿಜ ವೃಂದ ರಕ್ಷಕನೆಂಬ ಬಿರುದನು ಎಂದೆಂದಿಗು ಘಳಿಸು ಭವ ಬಂಧ ಮೋಚಕ ನಿನ್ನ ಸೇವಾನಂದವಾರ್ಧಿಗಿಳಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಹರೀ ಎನ್ನ ದೋಷವಳಿಯೊ ಪ ಕರಿವರದ ಕೃಪೆಮಾಡು ನಿತ್ಯಮಿತ್ರನೆ ಕೃಷ್ಣ ಅ.ಪ. ಬೇಲಿ ಎದ್ದು ಹೊಲವ ಮೆದ್ದರೆ ಬ್ಯಾರಿನ್ನು ಪಾಲಿಪರು ಯಾರೆಯ್ಯ ಶೀಲರೊಡೆಯ ಫಾಲಾಕ್ಷಸಖ ನಿನ್ನ ಅಚುಂಬಿತ ಕಾರುಣ್ಯ ಶ್ರೀಲಕ್ಷ್ಮೀ ಶ್ರುತಿ ರಾಸಿ ವರ್ಣಿಪರೊ ಗುಣನಿಧಿಯೆ 1 ಯಾತನೆಲ್ಹಣ್ಣಾದೆ ಪೂತನಿಯ ಅಸುಹರನೆ ಪಾತಕಕೆ ಕೊನೆಗಾಣೆ ಪಾರ್ಥಸೂತ ಆತ್ಮಬಂಧುವೆ ಇನ್ನು ತಡಮಾಡೆ ತಡಿಲಾರೆ ಪೂತನ ಮಾಡೆನ್ನ ಪ್ರಾಣೇಶ ಪ್ರಿಯಬಂಧು 2 ದೋಷಪುಂಜನು ನಾನು ಶೇಷಶಯನನೆ ಬಲ್ಲ ಪೋಷಕನು ನೀನೆಂದು ವೇದರಾಸಿ ಘೋಷಿಪವು ಅನವರತ ಕಾಪಾಡು ಶ್ರುತಿವಾಕು ದೋಷಕರ ಜಯೇಶವಿಠಲನೆ ಮೈದೋರು 3
--------------
ಜಯೇಶವಿಠಲ
ಹರೇ ಕೃಷ್ಣ ಲೋಕನಾಯಕ ಪಾಲಿಸೆನ್ನ ದೊರೆ ಸರ್ವ ಸೌಖ್ಯದಾಯಕ ಪ. ಮೂಢ ಚಿಂತೆ ಎಂಬುದೋಡಿಸು ಕರುಣವಿರಿಸು ಸದಾ ನಿನ್ನ ಸ್ಮøತಿಯ ನೀಡಿಸು ಉದಾಸೀನಭಾವದೂಡಿಸು ಭೂಪ ನಿನ್ನ ಪದಾಬ್ಜವನು ಶಿರದೋಳಾಡಿಸು 1 ಪರಮನೋವೃತ್ತಿ ತಿಳಿಯದೆ ನಿತ್ಯದಲ್ಲಿ ಕರಗಿ ಕಲ್ಮಶವನು ತಾಳಿದೆ ಮರುಗಿ ಮುಗ್ಗಿ ಮುಂದುಗಾಣದೆ ತತ್ವ ತಿಳಿಯ- ದಿರುವೆ ನಿಂತು ಕಂಪುಗೊಳ್ಳದೆ 2 ಈಶ ನೀನೊಬ್ಬನಲ್ಲದೆ ದಾಸನನ್ನು ಪೋಷಿಸುವರ ಕಾಣೆ ಲೋಕದಲಿ ಬೇರಿನ್ನು ಬೇಡವೆನ್ನಲಿ ವೆಂಕಟಾದ್ರಿ ಭೂಪ ಬೇಗ ಕಾಯೊ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ