ಒಟ್ಟು 8509 ಕಡೆಗಳಲ್ಲಿ , 134 ದಾಸರು , 5107 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ಪ ವಸುದೇವಾತ್ಮಜನಾದ ಕೇಶವ ದೇವಕಿ ಬಸುರೊಳಗುದಿಸಿದ ನಾರಾಯಣನು ಎಸೆದು ನಿಂದನು ಗೋಕುಲದೊಳು ಮಾಧವ ಕುಸುಮನಾಭನು ಗೋವಿಂದ ನಂದ ನಂದನಕಂದ 1 ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು ತೊಟ್ಟಿಲ ಶಿಶುವಾಗಿ ಮಧುಸೂದನ ಮೆಟ್ಟಿ ಕೊಂದನು ತ್ರಿವಿಕ್ರಮ ಶಕಟನ ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ 2 ಬೆಣ್ಣೆಯ ಮೆದ್ದನು ಮಿಣ್ಣನೆ ಶ್ರೀಧರ ಕಣ್ಣಿಯ ಕರುವನು ಹೃಷಿಕೇಶನು ಉಣ್ಣಬಿಟ್ಟನು ತಾಯ ಮೊಲೆಯ ಪದ್ಮನಾಭ ಸಣ್ಣವ ಕ್ಷಣದೊಳು ದಾಮೋದರನಾದ 3 ವಾಸುದೇವನು ದ್ವಾರಾವತಿವಾಸನೆನಿಸಿದ ಸಾಸಿರ ನಾಮನು ಸಂಕರುಷಣನು ಆಸುರವಾಗಿಯೆ ಪ್ರದ್ಯುಮ್ನನೆಸೆದನು ದೋಷರಹಿತನಾದ ಅನಿರುದ್ಧನು 4 ಉತ್ತಮನಾಗಿ ಪುರುಷೋತ್ತಮನೆಸೆದನು ಅಧೋಕ್ಷಜ ನಾಮದಿ ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ ಮುಕ್ತಿದಾಯಕನಾದನಚ್ಯುತ ನಾಮದಿ 5 ಕಡಲ ನಡುವೆ ಜನಾರ್ದನನೆನಿಸಿ ತಾನು ಹಡಗನು ಸೇರಿಯೆ ಬಂದನುಪೇಂದ್ರನು ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ 6 ಇಪ್ಪತ್ತು ನಾಲ್ಕು ನಾಮದ ಸ್ವಾಮಿಯು ತಪ್ಪದೆ ಒಂಬತ್ತು ಪೂಜೆಯಗೊಂಬನು ವರಾಹ ತಿಮ್ಮಪ್ಪರಾಯನು ಒಪ್ಪುಗೊಂಡನು ಮಧ್ವರಾಯನಾಗಮದೊಳು 7
--------------
ವರಹತಿಮ್ಮಪ್ಪ
ದಯಾನಿಧೆ ದಯ ಮಾಡಬೇಕು |ದಯ ಮಾಡಬೇಕು ಎನ್ನಯ ದೋಷಾವೆಣಿಸದೆ |ಹಯಮುಖ ಲೋಕಾತ್ರಯ ವ್ಯಾಪ್ತ ಪರಮಾಪ್ತ ಪ ನಿನ್ನ ನಂಬಿದ ಭುಕುತರನ್ನ ಚೆನ್ನಾಗಿ ಕಾಯ್ದಾ |ಘನ್ನಾ ಕೀರುತಿ ಕೇಳಿ ಮನ್ನಾದಿ ನಮಿಸುವೆ ಬನ್ನಾ ಬಡಿಸದೆ ಸಂಪನ್ನ ಗುಣಾರ್ಣವ 1 ಮುಖ್ಯಪ್ರಾಣ ವಂದಿತಾಂಘ್ರಿ |ನೀನೊಲಿಯದಿರೆ ಸುಜ್ಞಾನ ಮಾರ್ಗವ ಕಾಣೆ 2 ಹರಿಕೋಟಿ ತೇಜಾ ಕಾಮಿತ ಕಲ್ಪಿತರು ಮಹರಾಜಾ |ಸುರ ನದಿ ಜನಕ ಅಸುರ ಶೀಕ್ಷಾ ಕಮಲಾಕ್ಷ |ಕರುಣಿ ಕಪಿಲ ವ್ಯಾಸಾ ಗುರು ಪ್ರಾಣೇಶ ವಿಠಲಾ 3
--------------
ಗುರುಪ್ರಾಣೇಶವಿಠಲರು
ದರುಶನವನು ಕೊಡೆಲೊ ದೇವ ಪ ಸರಸಿಜ ಮಿತ್ರನು ಮೂಡೆ ಪ್ರಾರ್ಥಿಸುವೆನು ಅ.ಪ ತುಂಗಾ ಕೃಷ್ಣ ಕಾವೇರಿ ಗಂಗೆ ಯಮುನೆ ಗೋದಾವರಿ ನರ್ಮದಾ ಮಂಗಳ ನದಿಗಳು ಕಾದುಕೊಂಡಿರುವುವು ರಂಗ ನಿನ್ನ ಚರಣಂಗಳ ಸೇವೆಗೆ 1 ಜಗವನುದ್ಧರಿಸಿದ ಸುಂದರ ನಿನ್ನಯ ಮೊಗವನು ನೋಡುತ ಸಂಭ್ರಮದಿ ಬಗೆ ಬಗೆ ಹೈಮವಸ್ತ್ರಗಳನು ಧರಿಸುತ ನಗವೃಂದವು ಕಾದಿರುವುದು ದೇವ 2 ತರುಲತೆಗಳು ಕಾದಿರುವುದು ಪೂಮಳೆ ಗರೆಯಲು ನಿನ್ನಯ ಶಿರದಲ್ಲಿ ಪರಮಹಂಸರುಗಳು ಕರದಲಿ ಜಪಮಣಿ ಧರಿಸಿ ಜಪಿಸುವರೊ ಕರುಣಾ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ದರ್ಭಶಯನ ಶ್ರೀರಾಮದೇವರ ಸ್ತೋತ್ರ ಪಂಕ ಕಳೆಯೊ ಎನ್ನ | ಕರುಣಾರಸ ಪೂರ್ಣ ಪ ಲಂಕೇಶನನು ಜಗ್ವೊಲಿದ ಹರಿಯೇ | ಆಶ್ರಿತರಿಗೆ ಧೊರೆಯೇ ಅ.ಪ. ಭವ ವಿಮುಕ್ತನಹನೂಕವಿ ಜನ ನುತ ಸತ್ಪ್ರವರ ನಿನ್ನ ಲೀಲಾ | ಲೋಕ ಶಿಕ್ಷೆಗನುಕೂಲ |ತವಕದಿ ಗೈದೆ ವಿವಿಧ ಪೂಜೆಗಳನ್ನ | ನವ ಪಾಪಾಣಗಳನ್ನ 1 ಶರಧಿ ಸಿಂಧು ಪತಿಯ ನೋಡೀ | ದರ್ಭಶಯನ ಮಾಡೀಕಪ್ಪುಗೊರಳ ಸಖ ಕುಪಿತನಾಗೆ ನೀನೂ | ಬೆದರಿ ಬಿನ್ನವಿಸಿದನೂಒಪ್ಪಿ ಬಂಧಿಸಿದೇ ಸೇತುವೆಯನ್ನಾ | ಭಕ್ತರಿಗೆ ಪ್ರಸನ್ನಾ 2 ಸಿರಿ ಮಾಧವ ಶ್ರೀನಲ್ಲಾ | ಗುರು ಗೋವಿಂದ ವಿಠ್ಠಲ |ಮಾತು ಮಾತಿಗೆ ಕೊಡು ತವ ಲೀಲಾ | ಉಚ್ಚರಿಸುವ ಸೊಲ್ಲಾ 3
--------------
ಗುರುಗೋವಿಂದವಿಠಲರು
ದಶವಿಧ ನಾದವು ಭಕ್ತರಿಗೆ ಕೇಳುತಿದೆದಶವಿಧ ನಾದವು ಭಕ್ತರಿಗೆ ಕೇಳುತಿದೆದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲುಯೋಗಿಯ ಕಿವಿ ಎರಡರಲಿ ಪ ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ಕøತಿಯಾಗಿ ಚಿಮ್ಮತಿರೆಝಣಝಣವೆಂಬ ಝಿಲ್ಲಿಯ ನಾದವು ಝೇಂಕಾರದಿ ಝೇಂಕರಿಸುತಿದೆಎಣಿಕೆಯಿಲ್ಲದೆ ನಾಗಸ್ವರದ ಧ್ವನಿ ಎಡೆದೆರೆಪಿಲ್ಲದೆ ಕೂಗುತಿದೆಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಾಟ್ಟಾಗಿಯೆ ನುಡಿಯುತಿದೆತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆಘನಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ2 ಭೇರಿಯ ನಾದವು ಧಮಧಮ ಎನುತಲಿ ಬಹಳಾಗಿಯೆ ಭೋಂಕರಿಸುತಿದೆಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ3
--------------
ಚಿದಾನಂದ ಅವಧೂತರು
ದಶವಿಧ ನೌಬತ್ತಾಗುತದಣ್ಣದಶವಿಧ ಸೌಬತ್ತಾಗುತದೆದುಸುಮಾನರ ಎದೆ ಇಬ್ಬಗೆಯಾಗಲುದೆಸೆ ಬಿರಿಯಲು ಯೋಗಿಯ ಕಿವಿಯೆರಡಲ್ಲಿ ಪ ಚಿಣಿ ಚಿಣಿ ಎಂಬ ಸಿಂಜಿಣಿನಾದವುಚಿತ್ಕøತಿಯಾಗಿ ಚಿಮ್ಮುತಿದೆಝಣಝಣಕೃತವೆಂಬ ಝಿಯಾನಾದವುಝೇಂಕಾರದಿ ಝೇಂಕರಿಸುತಿದೆಎಣಿಕೆಯು ಇಲ್ಲದೆ ನಾಗಸ್ವರ ಧ್ವನಿಎಡದೆರಪಿಲ್ಲದೆ ಕೂಗುತಿದೆಘಣಘಣ ಎನಿಪ ತಾಳದ ನಾದವುದಟ್ಟಣೆಯಲಿ ತಾ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಟ್ಟಾಗಿಯೆ ನುಡಿಯುತಿದೆ ತನನಾ ಎಂಬವೀಣಾ ಸ್ವನವು ತಂಪಾಗೆಲ್ಲವ ಮುಚ್ಚುತಿದೆಘನ ಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ 2 ಭೇರಿಯ ನಾದವು ಧಮಧಮ ಎನುತಲಿಧಾಂಧಮ ಧಾಂಧಮ ನುಡಿಯುತಿದೆಘೋರದಿ ಮೇಘದ ನಾದವು ಗರ್ಜಿಸುತಿದೆಘುಡಿ ಘುಡಿಸುತಿದೆ ನೂರಾರು ಸಿಡಿಲಂತೆನೂಕು ನುಗ್ಗಡಿಸುತಿದೆ ವೀರ ಚಿದಾನಂದವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ 3
--------------
ಚಿದಾನಂದ ಅವಧೂತರು
ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ ಅವಧೂತದಶವಿಧ ಬ್ರಹ್ಮರ ವಿವರವನೀಗಲೆ ಪೇಳುವೆ ಪ್ರಖ್ಯಾತ ಪ ಸತ್ಯವು ಶೌಚವು ಸಮಸ್ತ ಬ್ರಹ್ಮವು ಸರ್ವದಿ ದಯವಿಟ್ಟಿಹನುನಿತ್ಯವು ತತ್ವವು ಈತನು ಬ್ರಾಹ್ಮಣರೊಳಗೆ ಬ್ರಾಹ್ಮಣನು 1 ಮಾಯೆಯು ಇಲ್ಲವು ಸ್ನಾನಕರ್ಮದಲಿ ದೇವಗೋವು ಪ್ರಿಯನುಆಯುಧದಿಂ ರಣ ಜಯಿಸುವನೀತನು ಬ್ರಾಹ್ಮಣ ಕ್ಷತ್ರಿಯನು2 ಸಿದ್ಧವು ಕರ್ಮದಿ ದೇವಗೋವುಗಳ ಪೂಜಿಸುತಿಹನೀತಉದ್ದಿಮೆ ಮಾಡುವ ನಾನಾ ಬ್ರಹ್ಮರೊಳು ವೈಶ್ಯನೆ ಇವನೀತ 3 ಚಲ್ಲಣ ಹಾಕಿಯೆ ಮಿಣಿನೊಗ ಹೊತ್ತಿಹನೀತಎಲ್ಲ ಕೃಷಿಯ ವ್ಯವಹಾರವನು ಮಾಡುವ ಬ್ರಾಹ್ಮಣರೊಳು ಇವ ಶೂದ್ರ 4 ಹಲಬರು ಇಹೆವೆಂದು ಸ್ವಯಂಪಾಕಕೆತ್ತುವ ಮಾಡುತ ಬಹುಜಾಲಆಚಾರದ ಸೋಗಿನಲಿ ಹೊರಗುಂಬುವರು ಬ್ರಾಹ್ಮಣಮಾರ್ಜಾಲ 5 ಎಡಗೈ ಅರಿಯನು ಬಲಗೈ ಅರಿಯನು ನುಡಿವನು ಬಿರುಮಾತಉಡುವನು ಹಬ್ಬಕೆ ಧೋತ್ರವ ಬ್ರಾಹ್ಮಣರೊಳಿವನೀಗ ಕುರುಬ 6 ಚೋರರ ಕೂಡಿಯೆ ಪಾಲನೆಕೊಂಬನು ಮಾಡುತ ಬಲು ಘಾತಆರಾದರನು ಅರಿಯನು ಬ್ರಾಹ್ಮಣರೊಳವ ಕಿರಾತ 7 ಕಾಣನು ಭೇದವ ತಂದೆ-ತಾಯಿಯಲಿ ಜೀವರುಗಳ ನೋಡಪ್ರಾಣವ ಕೊಂಬನು ಬ್ರಹ್ಮೆಂತೆನ್ನದೆ ಬ್ರಾಹ್ಮಣರೊಳಿವ ಕಟುಕಾ 8 ಬಗೆ ಬಗೆ ನಾಮವು ನಿರಿವುಡಿಧೋತ್ರವು ಸಂಧ್ಯಾಧಿಗಳವ ದೃಶ್ಯಸೊಗಸನೆ ಮಾಡಿಯೆ ಕಣ್ಣನೆ ಹಾರಿಪ ಬ್ರಾಹ್ಮಣರೊಳಿವ ವೇಶ್ಯಾ9 ಸಹೋದರಿ ರಜಕೀಪರಿಭಾಳಾಮಾಯಾದಿ ಸ್ವಪಚಳ ಹೋಗುವ ಬ್ರಾಹ್ಮಣರೊಳಿವ ಚಂಡಾಲ10 ಪರಿ ದಶವಿಧ ಬ್ರಹ್ಮರುಗಳಲಿ ಭಿಕ್ಷೆಯ ಬೇಡುತಭೂಪ ಚಿದಾನಂದ ಅವಧೂತ ಸದ್ಗುರು ಮನವೊಪ್ಪಿಯೆ ಉಂಬ 11
--------------
ಚಿದಾನಂದ ಅವಧೂತರು
ದಶಾವತಾರ ಭವ ದೀನಾತ್ಮ ಜನಗಳಿಗೆ ಜ್ಞಾನಾರ್ಥವಾಗಿ ನದಿಯೋಳ್‍ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತ ಪಾಣೀಲಿ ಬಂದು ಭರದೀಮಾನವರಂತೆ ಮೃದು ವಾಣೀಲಿ ತನಗೆ ಭೂಸ್ಥಾನವಾಬೇಡಿ ಬೆಳೆದೂಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿ ರವಿ ಸೂನುನ ಮಾಡಿಹನು 1 ವೃಂದಾರಕಾರು ಬಲ ವೃಂದಾವ ಕೂಡಿ ಗಿರಿಯಿಂದಾಲೆ ಕ್ಷೀರಧಿಯನೂವಂದಾಗಿ ಮಥಿಸುತಿರೆ ಸಿಂಧೂವಿನೋಳ್ ಜರಿದು ಪೊಂದೀತು ತತ್ತಳವನೂಮಂದಾತ್ಮರಾದುಭಯ ಮಂದೀಯ ನೋಡಿ ಬೆನ್ನಿಂದಾಲೆಯೆತ್ತಿ ಸುಧೆಯಾತಂದ್ಯೋರು ರೂಪನಮರಿಂದ್ರಾರಿಗಿತ್ತು ದಿತಿಜೇಂದ್ರಾರಮೋಹಿಸಿದನು 2 ಕ್ಷೋಣೀಶ ಕ್ಷೋಣೀಯನೆತ್ತಿ ಪಥಿ ದಾನಾವತಡಿಯುತಿರಲೂನಾಸವಾತ್ಮನವನ್ಹಾನೀಯ ಮಾಡಿ ನಿಜ ಸೂನೂಗೆಒಪ್ಪಿಸಿದನುಣೇಶ ಜಾತ ನಿಜಮಾನಿನೀ ಸಹಿತ ಸಂಸ್ಥಾನಾದಿ ಕೂತುಸುಖದೀತಾನವರಾನ ಪಡಿಸಿದಾನಂದ ಭೋಗಿಸಲು ತಾ ನೋಡಿಮೋದಿಸಿದನು 3 ಶುಭ ಭರಾತೀಯ ತತ್ಸುತಗೆ ಪ್ರೀತೀಲಿಪಾಲಿಸಿದನೂ 4 ದುಷ್ಟಾತ್ಮರಿಂದ ಬಹು ದುಷ್ಟಾತ್ಮರಾಗಿ ಸುರರಿಷ್ಟಾವ ಸ್ವರ್ಗ ಸುಖವಾಬಿಟ್ಟಾವನಲ್ಲ ನಿಜ ಪೊಟ್ಟೀಯಗೋಸುಗದಿ ಕಷ್ಟಾದಿಸಂಚರಿಸಲೂದೃಷ್ಟಿಂದ ಕಂಡದಿತಿ ತುಷ್ಟೀಸುತಿರಲವಳ ಪೊಟ್ಟೀಯೊಳವತರಿಸಲೂಪುಟ್ಟಾತ್ಮ ಬಲಿಗೆ ಸುತಲಿಷ್ಟಾವ ನೀಡಿ ಸುರರಿಷ್ಟಾವಪಾಲಿಸಿದನೂ 5 ಭೂತೇಶನೊಬ್ಬ ತನ ತಾತಾನ ಕೊಂದುನವ ಮಾತೇಯನಪಹರಿಸಲೂಭೀತೀಲಿ ತಾಯಿಯುರ ಘಾತಕ್ಕ ಸದೃಶ ಭುವಿ ಧಾತ್ರೀಶದುಷ್ಕಲವನೂಘಾತೀಶಿ ಪೂರ್ವಜರ ಪ್ರೀತೀಯ ಪಡೆದು ಮುನಿ ಪೋತಾನ ರಕ್ಷಿಸುತಲೇಪಾಥೋದಿ ತಟದಿ ರಘುನಾಥೇಷ್ಟದಾತ ನಿಜ ಶಾಪಾವಭೋಗಿಸುವನೂ6 ತಾಪ ರಘುನಾಥಾನುನೋಡಿ ವಿಥಿಲಾಜಾತಾಸಮೇತ ಸಹಜಾತಾನ ಕೂಡಿ ವನಜಾತಾದಿಸಂಚರಿಸುತಾಘಾತೀಸಿ ರಾಕ್ಷಸರ ಪ್ರಿಯನಿತ್ತು ಮುನಿಪಾತ್ಮರಿಗೆಲ್ಲ ಪುರದೀಸೀತಾಸಮೇತ ಕಪಿ ಪೋತಾನ ಕೂಡಿ ನಿಜ ಭೂತಿಯಭೋಗಿಸಿದನು 7 ಕಾರಾಳಯಾದಿ ನಿಜ ನಾರೀಯ ಕೂಡುತಲೆಶೂರಾತ್ಮಜಾತನಿರಲೂನಾರಾಯಣಾತ್ಮತನು ತೋರೀಸಿ ಬಾಲವಪುಗೋರಾಜನಾಲಯದಲೀಶೀರೀಯ ಕೂಡಿ ಸುರವೈರಿಗಳಳಿದು ನದಿ ತೀರಾದಿಕೊಳಲನೂದಿನಾರೇರಿಗೆಲ್ಲ ನಿಜ ಜಾರಾಟ ಸೌಖ್ಯವನು ತೋರೀಸಿತೋಷಿಸಿದನು 8 ವೃಷ್ಣೀಯ ಮಧುರೆಯಲಿ ಪುಟ್ಟೂತ ಗಾರ್ಗಸುತನಟ್ಟೂಳಿಗಾಗಿಜಲದೀಪಟ್ಟಣ ನಿರ್ಮಿಸುತಲಿಷ್ಟಾಪ್ತ ಜನರುಗಳ ನಿಟ್ಟಲ್ಲೆ ಪಾಲಿಸಿದನುಸೃಷ್ಟೀಶಮಕ್ಕಳನು ಮುಟ್ಟೂತ ಕರದಿ ತದಭಿಷ್ಟಾರ್ಥಗಳನುಸುರಿದೂತೃಷ್ಣೇಶ ಪಾಂಡವರ ಕಷ್ಟಾವ ಕಳಿದು ಗಜಪಟ್ಟಣವಸಾಧಿಸಿದನು 9 ಪಾರ್ಥಾರ ಶಾಲೆಯೊಳು ಪೂತಾತ್ಮರಿಂದ ಹರಿ ಭೂತೀಶುಕೇಳಿ ಮನದೀಪ್ರಾತಃ ಸಮಾರಭಿಸಿ ರಾತ್ರೀಯತನಕ ಹರಿ ಮೂರ್ತೀಯಪೂಜಿಸುತಿಹಾದೈತ್ಯಾರ ನೋಡಿ ಸುರನಾಥರ ಜಯಿಸಿ ಜಿನ ಪೋತಾತ್ಮ ಮಲಗಿ ತೊಡಿಯೋಳ್‍ಶಾಸ್ತ್ರಾವ ಬೋಧಿಶ್ಚವರಾತ್ಮಾವ ಕೆಡಿಸಿ ಸುರವೈತಾವತೋಷಿಸಿದನೂ10 ಶುಭ ಸತಿ ಮಿಷ್ಟಾತ್ಮಹಯವ ಮಾಡಿಅಷ್ಟಾಷ್ಟ ಖಡ್ಗವನು ಮುಷ್ಟೀಲಿ ಪಿಡಿದು ಬಹು ಶಿಟ್ಟೀಲಿಸುತ್ಲೆ ಚರಿಸೀವಿಪ್ಲವಾತ್ಮಕ ಕಲ್ಕಿ ಖಳರ್ಹೊಟ್ಟೀಯವಡೆದು ಶುಭಪಾಲಿಸಿದನು11 ವೆಂಕಟನಾಥ ಭವಪರಿಕವ ಹರಿಸೂತ ಕಿಂಕರನಾಗಿರುವೆನೂಶಂಬಾಸುರೋದರಜ ಶಂಖಾವಪಿಡಿದು ಮುಖ ಪಂಕೇಜದಿಂದೂದುತಾಹುಂಕಾರ ಮಾಡುತಲೆ ಕಿಂಕಿರನೆಂದು ಭುವಿ ಸಂಕರ್ಷಣದಿಸುರರೂಶಂಕೀತರಾಗುತ ಭಯಂಕಾರವೆಂದು ಮಹಾತಂಕಾದಿಸಂಸ್ಮರಿಪರೂ 12 ದಂಷ್ಟ್ರೇಶ ಬ್ರಹ್ಮಾನಾಸಿ ಪುಟ್ಟೂತವಾರಿನಿಧಿ ಮೆಟ್ಟೂತಘರ್ಘವಿಸಲೂದೃಷ್ಟೀಲಿ ನೋಡಿ ಕಿವಿಗೊಟ್ಟಾಲಿಸೂತ ನಿಜಪೊಟ್ಟೀಯರಾಂತರದಲೀಯಷ್ಟೇನೊ ಸನ್ನಾವಿದು ಪುಟ್ಟೂತಲ್ಹಂದಿ ಮರಿಬೆಟ್ಟೇಶದಂತಿರುವದೂಧಿಷ್ಟ್ಯಾದಿ ಕೂತು ಪರಮೇಷ್ಠೀಯ ಮಹಿಮೆಯನು ತುಷ್ಟಿಸಿ ಪಾಡುತಿಹನು 13 ತರೂನ ಮೂಲದಿ ಕೂತು ಬೋರೆಯಾ ಹರಿಯ ಶಾಸ್ತ್ರವ ಪೇಳೆ ಮುನಿಪನ ಸ್ವರವ ಸ್ಮರಿಸಿರಿ ಮನುಜರೇ ಭವದರವು ಪೋಗುವದು 14 ಚಿಕ್ಕ ಹುಡುಗೆಯು ತನ್ನಾಗತ ಚಕ್ರದಲಿ ಬ್ರಹ್ಮಾಂಡ ಕಟಹವ ಟೊಕ್ಕ ವೆನಿಸುತ ಜೀವ ಸಂಸ್ಕಾರ ಮುಕ್ಕು ಮಾಡುವಳು ಮೋಘ ಸೌಖ್ಯ ನೀಡುವಳು 15 ಧ್ವಾನ ಮಾಡಲುಧರ್ಮರಾಜಗೆಮಾನವಾದಿಗಳೆಲ್ಲ ಮುಖಭವ ಶೋಣಿತಾಗುವದು 16 ತತ್ವ ದಿವಿಜರು ನಮ್ಮ ದೇಹದಿ ನಿತ್ಯದಲಿ ಹರಿಸ್ಮರಿಸಿ ತುತಿಸುತಸತ್ವ ದಿವಿಜರಿಗೆತ್ತುವೆನು ಕರವಾ17 ದುರಿತ ಹರಿಸುವನೂ 18 ಯಲ್ಲಿ ಬ್ರಹ್ಮಾಂಡದಲಿ ಶಿರಿ ವರವಲ್ಲಭವ ಸಂಸ್ಮರಿಸಿ ಹಿಗ್ಗುವಫುಲ್ಲನಾಭನ ಭಕ್ತರನು ಮನದಲ್ಲಿ ಸ್ಮರಿಸುವೆನೂ 19 ಶ್ರೀಶಾನು ಭಕ್ತಜನದಾಶೀಯ ಪೂರೈಸಲು ಕೂಸಾಗಿದೇವಕಿಸುತಾಯೇಷಾದಿಗಳ ದಿಶುಭರಾಶೀಲಿ ಪುಟ್ಟುತವನೀಶಾರ ವಂಶಬೆಳೆಸಿ 20 ದೋಷಾತ್ಮಾ ದೈತ್ಯಕುಲ ಘಾಶೀಶಿ ಭೂದೇವಿ ಕ್ಲೇಶಾವನೆಲ್ಲಕಳೆದೂ ದಾಶೀಜ ನಾಗಿ ನಿಜ ಕೋಶಾದಿ ಮೋಕ್ಷಾ ಪದಮೀರೇಶ ತೋರಿಸಿದನು ಇಂದಿರೇಶನ ಸಾಧಿಸಿದನು 21 ನಾರದರ್ಷಿಯ ಕರುಣದಲಿ ಶನಿವಾರ ಮಾಡೀದ ಪರಮತುತಿಯನುಭೂರಿ ಪಠಿಸಲು ಇಂದಿರೇಶನುದಾರ ನೋಡುವನು 22
--------------
ಇಂದಿರೇಶರು
ದಶಾವತಾರ ಸ್ತೋತ್ರ ನಾರಾಯಣ ಗೋವಿಂದ | ಹರಿ |ನಾರಾಯಣ ಗೋವಿಂದ |ಪಾರಾಶರ ಸುತನಂದ | ಹರಿ |ನಾರಾಯಣ ಗೋವಿಂದ ಪ ವೇದವ ಕದ್ದೊಯ್ಯಲು ಆತಮನಾ |ಬಾಧಿಸಿ ನಿಗಮವ ತಂದ 1 ದಿವಿಜರು ಚ್ಯುತಬಲರಾಗಿರಲಮೃತವ |ದಿವಿಜರಿಗುಣಿಸಿದ ನಂದಾ 2 ಖಳನು ಭೂಮಿಯ ಕದ್ದೊಯ್ಯಲುತಾ |ಪೊಳೆವ ಕೋರಿಯಲಿ ತಂದಾ 3 ತರುಳನ ಪರಿಪರಿ ಬಾಧಿಸುತಿರಲಾ |ದುರುಳ ದೈತ್ಯನ ಕೊಂದ 4 ಬಲಿಯಪರಾಧವ ನೊಂದೆಣಿಸದೆ ತಾ |ವರಿದು ಬಾಗಿಲಲಿ ನಿಂದ 5 ಕ್ಷತ್ರಿಯ ಬಲವನೆಲ್ಲ ಸವರಿ ನಿ |(ಶ್ಚ) ಕ್ಷತ್ರರ ಮಾಡಿದ ನಂದಾ 6 ವರಮುನಿ ಶಾಪದಿ ಶಿಲೆಯಾಗಿರಲು |ದ್ಧರಿಸಿದ ಪರಮಾನಂದಾ 7 ಮಡದಿ ಗೋಪಿಯರ ಒಡನಾಡಿದ |ಪಾಲ್ಗಡಲ ಶಯನ ಮುಕ್ಕುಂದಾ 8 ತ್ರಿಪುರದ ಸ್ತ್ರೀಯರ ವೃತಗೆಡಿಸಿದ | ವಟು |ವಪು ಮೃಡಮುಖ ಸುರವಂದ್ಯಾ 9 ಪುರುಷೋತ್ತಮ ಯವನರ ಸಂಹರಿಸಿ |ತುರಗವನೇರಿ ನಿಂದಾ 10 ಶ್ರೀಶ ಪ್ರಾಣೇಶ ವಿಠಲ ಈ ಸರ್ವರ |ಪೋಷಕ ನಾನಹುದೆಂದಾ 11
--------------
ಶ್ರೀಶಪ್ರಾಣೇಶವಿಠಲರು
ದಶಾವತಾರಗಳು ಕರುಣದಿ ಪಾಲಿಸೆನ್ನ ಶ್ರೀ ಹಯ ವದನ ಪ ಕರುಣದಿ ಪಾಲಿಸೊ ಕರಿವರದನೆ ನಿನ್ನ ಚರಣ ಕಮಲಗಳಿಗೆರಗಿ ಬೇಡಿಕೊಂಬೆ ಅ.ಪ ಅಗಣಿತ ಮಹಿಮನೆ ನಗಪಾಣಿ ಶ್ರೀಶನೆ ವಾಹನ ನಿಗಮ ಗೋಚರನದ ಮೃಗರೂಪ ಮೂರ್ಜಗದೊಡೆಯನೆ ನಿನ್ನ ಮೀಗೆ ಹರುಷದಿಂದ ಪೊಗಳುವ ಸುಖವಿತ್ತು ಹಗಲಿರುಳೆನ್ನದೆ ಅಘು ಕಳೆದು ಕಾಯೊ ಗಗನಾಳಕ ವಂದಿತ ತ್ವರಿತದಿ ಕರ ಮುಗಿದು ಬೇಡುವೆ ಸಂತತ ಮರಿಯದೆಪೊರೆ ಪ ನ್ನಗ ಶಾಯಿ ಶ್ರೀ ಭೂನಾಥ ನಿನ್ನಯ ಪಾದ ಯುಗ ಸೇವೆ ನೀಡಯ್ಯ ನಗವೈರಿ ಮಗ ಸೂತ 1 ಕ್ಷಿತಿಜೆರಮಣ ದ್ರೌಪದಿ ರಕ್ಷಕನೆ ನಿನ್ನ ಸುರ ಸನ್ನುತ ಪತಿತೋದ್ಧಾರಕಮನ್ ಪತಿ ಪಾದ್ಯನೆ ಸಂ ಪಾದ ಶತಪತ್ರ ನಂಬಿದೆ ಹಿತದಿ ಎನ್ನಯ ದುರ್ಮತಿ ಕಳೆದು ಕಾಯೊ ಶತ ಮಖಾನುಜ ಗೋವಿಂದ ಬಾಗುವೆ ಶಿರ ದಿತಿಜಾರಿ ನಿತ್ಯಾನಂದ ಮಾತುಳ ವೈರಿ ವಿತತ ಮಹಿಮ ಮುಕುಂದ ನಿನ್ನನುದಿನ ಕೃತಿ ಪತಿ ಭರದಿಂದ 2 ಇಂದಿರಾಧವ ಶಾಮಸುಂದರ ವಿಠಲನೆ ಮಂದರ ಗಿರಿ ಪೊತ್ತು ಮಂದಜಾಸನಪಿತ ಮಾಧವ ಸುರ ವಿನುತ ದಯಾಸಿಂಧು ದಿನ ಬಂಧು ಪಾದ ಪೊಂದಿದೆ ಸಂತತ ಕಂದನೆಂದರಿದೆನ್ನ ಕುಂದು ಎಣಿಸದೆ ದಯ ದಿಂದ ಪಾಲಿಸು ಹೇದೇವ ನಂಬಿದೆ ದಶ ಕಂಧರಾಂತಕ ರಾಘವ ಬೇಡುವೆ ದಶ ಶ್ಯಂದನ ಸುತ ವರವ ಪಾಲಿಸಿ ಕಾಯೊ ಕಂದರ್ಪ ಪಿತ ಕುಂತಿನಂದನರ ಭಾವಾ 3
--------------
ಶಾಮಸುಂದರ ವಿಠಲ
ದಶಾವತಾರದ ನಿಂದಾಸ್ತುತಿಗಳು ವರನ ಚಂದಮದೇನ ವರ್ಣಿಸುವೆನೆಲೆ ಸಖಿಯೆ ಪರಮಸುಂದರಗಾತ್ರನಿರವ ಕೇಳೆ ಬಿಚ್ಚಿರುವ ಕಣ್ಗಳಂ ಮುಚ್ಚಲಾರದ ವರಗೆ ಪಚ್ಚಕರ್ಪೂರದಾ ಕಪ್ಪಿದೇಕೆ ಕೊಳೆತುನಾರುತಲಿಹಗೆ ಲಲಿತವಸ್ತ್ರಗಳೇಕೆ ಹೊಲಸು ಮಯ್ಯಿಗೆ ಗಂಧ ಬಳಿಯಲೇಕೆ ಜಲಧಿಯಲಿ ವಾಸಿಪಗೆ ಪÀಲವಿಧದ ತೊಡವುಗಳೆ ನೆಲೆಯಿಲ್ಲದಾತಂಗೆ ಲಲನೆ ಸುತರೆ ಅಜ್ಞಾತಪಾದಕ್ಕೆ ಗೆಜೆ ಗೊಲಸೆ ವಿಜ್ಞಾನಮಯಗೆ ವಿವಿಧ ಸಿಂಗರವೆ ಯಜ್ಞಭೋಕ್ತಗೆ ಮತ್ತೆ ಭಕ್ಷ್ಯದೆಡೆಯೆ
--------------
ನಂಜನಗೂಡು ತಿರುಮಲಾಂಬಾ
ದಾತ ತ್ರೈಲೋಕ್ಯಕೀತ ಧ್ರುವ ದೂರ ಸಗುಣ ಸಹಕಾರ ಧೀರ ಪರಮಉದಾರ ದುರಿತ ಸಂಹಾರ ಪರಾತ್ಪರ ಪರಾಕಾರ 1 ಈಶ ಭವಭಯನಾಶ ಶೇಷಶಯನ ಸರ್ವೇಶ ದೋಷಹರ ಕರುಣೀಶ ಕ್ಲೇಶನಾಶ ದೇವೇಶ 2 ಮಾತಾ ವಿಶ್ವನಿರ್ಮಿತ ಪಿತಾಮಹನ ಪಿತ ಈತ ಮಹಿಪತಿ ಹಿತ ನಾಥಾ ಭಕ್ತಪುನೀತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾತ ದೀನನಾಥ ಧ್ಯಾನದಾಯಕ ಜಾನಕೀ ಪ್ರೀತ ಪ ಬಹುಕುಂದುನಿಂದೆ ಸರ್ವ ಅಹುದು ಅಲ್ಲ ನಿನ್ನದಭವ ಅಹಿತಸುಖದ ಪ್ರೇಮಬಿಡಿಸಿ ದಹಿಪ ಭವದ ಬಾಧೆ ಗೆಲಿಸು 1 ಬಂದ ಬಂಧ ಬಯಲುಮಾಡಿ ಕಂದನೆಂದು ಕರಪಿಡಿದು ತಂದೆ ನಿನ್ನ ಪರಮಧ್ಯಾನಾನಂದ ಪಾಲಿಸಿ ಪೋಷಿಸೆನ್ನ 2 ಕಾವದೇವ ನೀನೆ ಪತಿತಪಾವನ ತ್ರಿಜಗಸೂತ್ರಧಾರಿ ಭಾವಜಪಿತ ಶ್ರೀರಾಮ ನಿಮ್ಮ ಸೇವಕನೆನಿಸಿ ಸಲಹು ಸತತ 3
--------------
ರಾಮದಾಸರು
ದಾತ ನೀನೆ ಸ್ವಾಮಿ ಶ್ರೀಗುರುನಾಥ ವರ್ಮ ತೋರಿಕೊಡುವ ನಿಮ್ಮ ಧರ್ಮಗುಣ ಪ್ರಖ್ಯಾತ ಧ್ರುವ ಧರೆಯೊಳು ಸರಿಯಗಾಣೆ ಗುರುಧರ್ಮದಿಂದಧಿಕ ಕರುಣಿಸಿ ಆನಂದದಿಂದ ತೋರುತಿಹ್ಯ ಬ್ರಹ್ಮಸುಖ ವರಮುನಿಗಳ ಪ್ರಿಯ ಶರಣಜನಪಾಲಕ ಪರಮ ಸುಪಥದೋರಿ ಹೊರೆವ ಪೂರ್ಣತಾರಕ 1 ಬಡವನಾಧಾರಿ ನೀನು ಒಡಿಯನಹುದೊ ನಿಶ್ಚಯ ಕೊಡುವ ಭಕ್ತಿ ಮುಕ್ತಿದಾತ ದೃಢಭಕ್ತರಾಶ್ರಯ ಒಡಲ ಹೊಕ್ಕಿಹೆ ನಿಮ್ಮ ಕಡೆಯಗಾಣಿಸೊ ನಮ್ಮಯ್ಯ ಪಿಡಿದು ನೀ ಎನ್ನ ಕೈಯ ಕೊಡು ತೋರಿ ನಿಮ್ಮ ಸೊಹ್ಯ 2 ಪೊಡವಿಯೊಳು ಕ್ಷಮೆ ಎನಗೆ ಕೊಡು ಕರುಣಾಕಟಾಕ್ಷ ನೋಡಿ ನಿಮ್ಮ ದಯದಿಂದ ನೀಡೊ ನಿಜ ಸುಭಿಕ್ಷ ಬಿಡದೆ ಎಂದೆಂದು ನೀನು ಮಾಡೊ ಸಂರಕ್ಷ ಮೂಢ ಮಹಿಪತಿಗಿನ್ನು ಪೂರಿಸೊ ಮನದಪೇಕ್ಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾತ ನೀನಿರಲಾತರ ಬಡತನವೊ ದಾತ ನೀನಿರಲಾತರ ಬಡತನವೊ ಪ ಸೋತು ಮನವನು ವಿಷಯಗಳಲಿ ಬಲು ವಾತ ಕುಮಾರರ ನೀತಿಗಳರಿಯುತ ಧಾತಪಿತನ ಗುಣ ಜಾತಗಳಲಿ ಅತಿ ಪ್ರೀತಿ ಪಡೆಯುವರ ಅ.ಪ ತಾನು ತನ್ನವರೆನ್ನುವ ಮೋಹದಲಿ ಅನುದಿನದಲಿ ಮುಳುಗಿಹ ಮಾನವರಿಗೆ ಧನಾರ್ಜನೆಯು ಕ್ಲೇಶ ಜಾನಕೀಶನೆ ನೀನಲ್ಲದೆ ಎನ ಗೇನು ರುಚಿಸದು ಎಂದರಿಯುತ ನಿನ್ನ ಜ್ಞಾನ ಪಡೆಯಲು ಸತತ ಶ್ರವಣ ಮನನಾದಿಗಳ ಸುಖವರಿತ ಸುಜನರಿಗೆ 1 ಪಾಡುಪಡುತಲಿ ಧನವ ಬಹಳ ಗಳಿಸಿ ನೋಡುತಲದ ಹಿಗ್ಗುತ ಗೂಢತನದಲಿ ದಿನದಿನ ನೇವರಿಸಿ ಕಾಡುವಾ ನರನಂತೆ ಜೀವನ ಮಾಡುವುದು ಕಡು ಬಡತನವಲ್ಲವೆ ತೋಡಿ ಗಿರಿಯನು ಇಲಿಮರಿಗಳ ಹಿಡಿ ದಾಡುವಂತಹ ಮೂಢ ನಾನಲ್ಲವೊ 2 ನಿನ್ನ ಗಾನವೆ ವಿವಿಧ ಸುರಸ ಪಾನ ಅವಿಚಾಲಿತ ಮನದಲಿ ನಿನ್ನ ಧ್ಯಾನವೆ ನವಮಣಿ ಸೋಪಾನ ನಿನ್ನ ಪೂಜೆಯ ಮಂದಿರವೆ ಎನ ಗುನ್ನತದ ಉಪ್ಪರಿಗೆಯ ವಾಸವು ನಿನ್ನ ಸೇವೆಯ ಸುಖತಮ ಭೋಗಗ ಳೆನ್ನುವರಿಗೆ ಪ್ರಸನ್ನನಾಗುವ 3
--------------
ವಿದ್ಯಾಪ್ರಸನ್ನತೀರ್ಥರು