ಒಟ್ಟು 3955 ಕಡೆಗಳಲ್ಲಿ , 115 ದಾಸರು , 2389 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ರಂಗಾ ಮನೆಗೆ ಬಂದ ಪರಮ ಮಂಗಳದಾಯಿ ಹಿಂಗಿತು ದಾರಿದ್ರ್ಯವಿನ್ನು ಶೃಂಗಾರ ಭುಜಂಗ ಶಾಯಿ ಪ. ಪದ್ಮನಾಭ ಸಿರಿನಲ್ಲಕೃಷ್ಣ ತನ್ನ ಪಾದ ಪಲ್ಲವೆ ಶರಣೆಂದು ನಿಲ್ಲೆ ಧೈರ್ಯದಿ ಮೆಲ್ಲ ಮೆಲ್ಲಕಾಗಿ ತನ್ನ ವಲ್ಲಭೆಯ ಕೂಡಿ ಎನ್ನ ಸೊಲ್ಲ ಲಾಲಿಸುತ ಕಂಸದಲ್ಲಣ ತಡವಿಲ್ಲದಂತೆ 1 ಆರುವೆನನೆಂಬ ಹುಣ ಘೋರಭಾವದಿಂದಲುಂಡು ಗಾರುಮಾಳ್ಪ ಸಮಯದಲ್ಲಿ ಚೀರುತಿರುವುದ ಮಾರಜನಕ ಲಾಲಿಸಿ ಕೃಪಾರಸದಿ ಸಲಹಿ ನಿಜ ಪಾ ದಾರವಿಂದ ಯುಗ್ಮವನ್ನು ತೋರಿ ತಿರುಗಿ ಕಳುಹಿದಂಥ 2 ಭಕ್ತಾಭರಣನೆಂಬ ಬಿರುದ ವ್ಯಕ್ತವಾಗಿ ತೋರಿ ಸರ್ವೋ ದ್ವøಕ್ತ ಮಹಿಮ ತನ್ನೊಳ್ಪರಮಾ ಮತಿಯನಿತ್ತು ಮಾಯಾ ಶಕ್ತಿಯರಸ ವೆಂಕಟೇಶ ನಿತ್ಯ ಮುಕ್ತ ರಮೆಯ ಕೂಡಿ ನಗುತ 3
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ ಪ ರಂಗ ಕಲುಷವಿಭಂಗ ಗರುಡ ತು-ರಂಗ ನವಮೋಹನಾಂಗ ಶ್ರೀರಂಗ ಅ.ಪ ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟುಮೆಚ್ಚಿ ಮುದ್ದಾಡುವನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದಎಚ್ಚರಿಕೆಯಲಿ ಲಂಕೆಯನು ಪೊಕ್ಕುಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳಕೊಚ್ಚಿದ ಅಚ್ಯುತಾನಂತ1 ಮುತ್ತಿನ ಹಾರವನು ಕಂಠದೊಳಿಟ್ಟುಎತ್ತಿ ಮುದ್ದಾಡುವೆನುಹತ್ತಿದ ರಥವನು ಮುಂದೊತ್ತಿದಕೌರವರ ಸೇನೆಗೆ ಮುತ್ತಿದಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲಒತ್ತರಿಸಿ ಮುಂದೊತ್ತಿ ನಡೆಯುತಇತ್ತರದಿ ನಿಂತ ವರ ರಥಿಕರಕತ್ತರಿಸಿ ಕಾಳಗವ ಮಾಡಿದ 2 ಉಂಗುರಗಳನು ನಿನ್ನ ಅಂಗುಳಿಗಿಟ್ಟುಕಂಗಳಿಂದಲಿ ನೋಡುವೆಹೆಂಗಳ ಉತ್ತುಂಗದ ಕುಚಂಗಳಆಲಂಗಿಸಿದ ಭುಜಂಗಳಕಮಲಸಮ ಪಾದಂಗಳಹಿಂಗದೆ ಸ್ಮರಿಸಿದ ಮಾತಂಗನಭಂಗವ ಪರಿಹರಿಸಿ ಬ್ಯಾಗದಿಮಂಗಳ ಸ್ವರ್ಗವನಿತ್ತ ಉ-ತ್ತುಂಗ ವಿಕ್ರಮ ರಂಗವಿಠಲನೆ 3
ರಘುರಾಮ ನೀನೆನ್ನ ಪಾಲಿಸೈ ಜಗನ್ನಾಯಕ ಜಾನಕೀಪತೇ ಪ. ಸಾಗರಶಯನ ಸಾರಸನಯನ ನಾಗವೈರಿಗಮನ ಬಾಗಿ ನಮಿಪೆನಾ 1 ಯಾಜ್ಞಸೇನಿಯಂದು ಯಾಚಿಸಲೈನಿಂದು ಅಕ್ಷಯವಸ್ತ್ರದಿಂ ರಕ್ಷಿಸಿದ ಬಂಧು 2 ವಸುದೆಯೊಳು ಬಂದು ಅಸುರರನ್ನೆ ಕೊಂದು ವಾಸುದೇವನೆಂದು ಪೆಸರನಾಂತೆಯಂದು 3 ಪಾಹಿರಾಮರಾಮ ಪಾಹಿಪೂರ್ಣಕಾಮ ತ್ರಾಹಿ ಸತ್ಯ ಪ್ರೇಮ ತ್ರಾಹಿರಂಗಧಾಮ 4 ಶೇಷಶೈಲನಿಲಯವಾಸ ವಾದಿಗೇಯ ವಾಸುದೇವ ಸದಯ ಶ್ರೀಸತೀಪ್ರಿಯ 5
ರತ್ನದೊಳಗಿದು ರತ್ನ ನವರತ್ನಗಳೊಳಗಿದು ರತ್ನ ಪ ಚಿತ್ತಜಪಿತನೆಂಬ ರತ್ನ ನಮ್ಮ ನಿತ್ಯಮುಕ್ತರಂಗರತ್ನ ಅ.ಪ ಭಕ್ತಪಾಲಕನೆಂಬ ರತ್ನ ಸತ್ಯಾಸಕ್ತ ವರದನೆಂಬ ರತ್ನ ಮುಕ್ತಿದಾಯಕ ರಾಮರತ್ನ ನಮ್ಮ ಯುಕ್ತಿಭರಿತ ಕೃಷ್ಣರತ್ನ1 ಗೋಪಾಲಕೃಷ್ಣನೆಂಬ ರತ್ನ ವರತಾಪಸವಿನುತ ಮಾರತ್ನ ಶ್ರೀಪತಿಯೆಂಬ ಜೀವರತ್ನ ನಮ್ಮ ಪಾಪವಿನಾಶಕರತ್ನ 2 ಚಾರು ವೇದದೊಳಿಹ ರತ್ನ ನಮ್ಮಶ್ರೀರಮಣ ಎಂಬರತ್ನ 3 ಕರಿರಾಜವರದ ಸುರತ್ನ ನಮ್ಮ ಕರುಣಾಕರಯೆಂಬ ರತ್ನ ಶರಣ ಜನರ ಹಸ್ತರತ್ನ ನಮ್ಮ ತರಳಧ್ರುವನ ಕಾಯ್ದ ರತ್ನ 4 ಪ್ರೇಮರಸಾನ್ವಿತ ರತ್ನ ಇದು ಶ್ರೀಮಾಂಗಿರಿರಂಗರತ್ನ ನಮ್ಮ ರಾಮದಾಸಾರ್ಚಿತ ರತ್ನ5
ರಮಾನುತ ಪಾದಪಲ್ಲವ ಶ್ರೀಕರ ಚರಣ ಸೇವಕರ ಸಂಗದೊಳಿರಿಸು ವಿಜಯರಾಯ ಪ ನಿಮ್ಹೊರತು ಪೊರೆವರನ್ಯರನು ನಾಕಾಣೆ ನಿಮ್ಮ ಚರಣವ ನಂಬಿದೆ ಕರುಣದಿ ಕಾಯೊ ಅ.ಪ ಪಂಡಿತ ಪಾಮರರನು ಉದ್ಧಾರ ಮಾಡೆ ಕರುಣದಿಂದ ಸಕಲ ವೇದಗಳ ಕ್ರೋಡೀಕೃತವಾದ ನಿರ್ಣಯ ಭಾಷ್ಯಗಳರ್ಥವ ಮಾಡಿದಿ ಪದಗಳ ಸಕಲರೂ ತಿಳಿವಂದದಿ 1 ನಿನ್ನವರಾದ ರಂಗ ಒಲಿದ ರಾಯರ ನೋಡು ನಿನ್ನ ಉಕ್ತಿಯ ನಂಬಿದ ವೆಂಕಟರಾಯರ ನೋಡು ನಿನ್ನವನೆಂದೆನ್ನನು ಅವರಂತೆ ನೋಡದೆ ಎನ್ನ ಕೈ ಸಡಿಲ ಬಿಡುವದೇನೋ 2 ಎಂದಿಗಾದರು ನಿನ್ನ ದಾಸರ ಕರುಣದಿಂದ ಪಾದದ್ವಂದ್ವ ಹೊಂದದೆ ಹೋಗುವೆನೆ ದಾಸರಪ್ರಿಯನೆ ತಂದೆ ವಿಜಯ ರಾಮಚಂದ್ರವಿಠಲರಾಯನ ಹೊಂದುವ ಮಾರ್ಗವ ಬಂದು ತೋರಿಸಬೇಕೊ 3
ರಮಾವಧು ಮನೋಹರ ಪ ಅಂಗಜಪಿತ ಪುಂಗವಾ ವಿಹಂಗಗಮನ ರಂಗಧಾಮ ಅ.ಪ ಮಾಧವ ಸುರ- ಬೃಂದನುತಾ ಪದಾಬ್ಜ ಮಂದಹಾಸದಿಂದ ಬಂದು 1 ಕೋರಿಕೆಗಳನು ನಡೆಸು ನಾರಿರುಹಲೋಚ ಹರಿ ಸುಕು ಮಾರ ಶರೀರೋತ್ತಮ ವರ ಧೀರಶೂರ ನಾರಸಿಂಹ2 ಮಾವರನೆ ನಿನ್ನಡಿಯ ಸೇವಿಸುತ್ತ ಭಾವಿಸುವೆ ಕಾವುದು ರಾಜೀವನೇತ್ರ ದೇವದೇವ ಜಾಜಿಶ್ರೀಶ 3
ರಮಿಸುವೆವೆಂದಿಗೆ ಮುರಳೀಧರನ ಪ ಸುಮನಸವಂದಿತ ವಿಮಲ ಚರಿತನ ಅ.ಪ ಮಂದಮಾರುತ ಸುಮಗಂಧ ಬೀರುತಲಿರೆ ಸುಂದರವದನ ಗೋವಿಂದನ ನೊಸಲಲಿ1 ವನರುಹನೇತ್ರನ ಪರಮ ಪವಿತ್ರನ ವನಜಾಕ್ಷಿಯರೆಲ್ಲ ವನವಿಹಾರದಲಿ 2 ಹೇಮವಸನನ ಕೋಮಲ ರೂಪನ ಕಾಮಿನಿಯರು ನಾವು ಪ್ರೇಮವ ಬೀರುತ 3 ಕಲಭಾಷಣದಿಂದ ಸೆಳೆಯುತ ಮನವನು ಜಲಜಾಕ್ಷಿಯರೆಲ್ಲ ಜಲ ವಿಹಾರದಲಿ 4 ಭಾಸುರಾಂಗನ ಪರಿಹಾಸ ಮಾಡುತಲಿ ಬೇಸರವಿಲ್ಲದೆ ರಾಸಕ್ರೀಡದಿ 5 ಸಂಗೀತವ ಪಾಡಿ ರಂಗನ ಒಡಗೂಡಿ ಅಂಗನೆಯರೆಲ್ಲ ಅನಂಗ ಕೇಳಿಯಲಿ 6 ಬಿನ್ನನೆ ಬಾರೆಂದು ಕೆನ್ನೆಯ ಪಿಡಿಯುತ ಸನ್ನೆಯ ಮಾಡಿ ಪ್ರಸನ್ನಮುಖಿಯರು 7
ರಸನೆಗೆ ರಸವಿದು ತಾರಕನಾಮಾ ಅಸುವಿಗಸುವು ವಾಸುದೇವನ ನಾಮಾ ಪ ರಾವಣಾರಿಯ ನಾಮ ಭಾವದಿವ್ಯಾಮೃತ ಗೋವಳನಾಮವು ಜೀವಜೀವಾಮೃತ1 ಶಬರಿಗೊಲಿದ ನಾಮ ಅಭಯವೀಯುವ ನಾಮ ಕುಬುಜೆಗೊಲಿದ ನಾಮಾ ವಿಭವದ ನಾಮಾ 2 ಅಕ್ಷಯಪದ ನಾಮ ಪಕ್ಷಿವಾಹನ ನಾಮಾರಕ್ಷಕ ಮಾಂಗಿರಿರಂಗನ ನಾಮಾ 3
ರಾಗಿ ಬೆಳೆಯುವಾ ನಿರ್ಮ¯ರಾಗಿ ಬೆಳೆಯುವಾ ಪ ಸೇವಕರಾಗಿ ಬೆಳೆಯುವಾ ಭಾವುಕರಾಗಿ ಬೆಳ ಗೂವರಾಗಿಯಾದ ಮೇಲೆ ರಂಗನಪಾದವ ಪೂಜಿಪರಾಗಿ ಅ.ಪ ಪರರ ಹಳಿಯದಿರುವರಾಗಿ ಪರರಸುಖಕೆ ನಲಿವರಾಗಿ ಪರರ ಸೇವೆಗೈವರಾಗಿ ಪರಮಶಾಂತರಾಗಿ ಹಿರಿಯರೆಡೆಯ ಕಿರಿಯರಾಗಿ ಕಿರಿಯರೆಡೆಯ ಗೆಳೆಯರಾಗಿ ಹರಿಯನೆನೆವ ಮಾನಸರಾಗಿ ಪರಮಭಕ್ತಿಯಿಂದ ಜಾನಿಪರಾಗಿ1 ವಿತ್ತದಾಸೆಯ ಹಳಿವರಾಗಿ ಚಿತ್ತಪಿತ್ತವ ತೊಡೆವರಾಗಿ ನಿತ್ಯ ತೃಪ್ತರಾಗಿ ಹೊತ್ತಿಗೊದಗಿ ಬರುವರಾಗಿ ಮತ್ತು ಭ್ರಮೆಗಳಿಲ್ಲದರಾಗಿ ಪಾದಯುಗಳಕೆರಗುವರಾಗಿ 2
ರಾಘವೇಂದ್ರ ಜಯತು ಗುರುವರಗೌತಮ ಗೋತ್ರಜ ಪ ರಾಗರಹಿತಾಂತರಂಗ ಭಕ್ತಾವಳಿ ಸಂಗ ಶೃಂಗ ಅ.ಪ ಅಂಬಾಸುತ ಪರಿಪೂಜಿತ ಪಾದವ ತೋರೈ ವಂದಿಪೆ 1 ನಿರುತನಿನ್ನ ಪಾದಪದ್ಮವ ನಮಿಸುವಂಥ ಮನವ ಕೊಡೈ ಪರಮವೈದಿಕನ ಅರಿಯುವ ಶಕ್ತಿಯ ನೀಡು ರಾಘವೇಂದ್ರ2 ತರಳ ಸರಳ ಮೃದುವಚನಪೂರಣ ಸಾಧು ಪೂರ್ಣಸದನ ಶರಣಸುಜನ ವಾಂಚಿತಾರ್ಥದಾತ ಮಾಂಗಿರೀಶ ಪ್ರೀತ3
ರಾಘವೇಂದ್ರ ಸ್ವಾಮಿಗಳು ಅಂತರಂಗದಿ ಹರುಷವಾಂತೆವೈ ಗುರುವೆ ಪ ಸಂತಸದಿ ಸೇವೆಗಳ ಸ್ವೀಕರಿಸು ಪ್ರಭುವೆ ಅ.ಪ ಮಂಗಳಾಂಗಿಯರೆಲ್ಲ ಮಿಂದು ಮಡಿಗಳನ್ನುಟ್ಟು | ಮಂಗಳಾತ್ಮಕ ನಿನಗೆ ಮಜ್ಜನವ ಗೈಸೆ || ಅಂಗಳದಿ ದಧಿಕ್ಷೀರ ಘೃತಕುಂಭಗಳಧರಿಸಿ | ಸಿಂಗರದಿ ನಿಂದಿಹರೊ ಗುರುರಾಘವೇಂದ್ರ 1 ಧಾರುಣೀಸುರರೆಲ್ಲ ಧೀರಯತಿವರ ನಿನಗೆ | ಚಾರುವಿಭವದಿ ಕವಚ ಧಾರಣೆಯ ಗೈಸೆ || ಸೇರಿ ನುತಿಸುತೆ ನಿನ್ನ ಸಾರಗುಣ ಸಂಪನ್ನ | ಸಾರಿಹರೊ ನಿನ್ನಡಿಗೆ ಗುರುರಾಘವೇಂದ್ರ 2 ನಿಂದು ಭೂಸುರರೆಲ್ಲಾ ಜಯಜಯ ಜಯವೆನಲು| ಮಂದಹಾಸದಲವರ ಸೇವೆಯನು ಕೊಂಡೆ || ಇಂದು ಬೃಂದಾವನದಿ ನಿಂದು ದರ್ಶನವಿತ್ತೆ | ಕುಂದದಿಷ್ಟವ ಸಲಿಸೊ ಗುರುರಾಘವೇಂದ್ರ 3 ಉಡುರಾಶಿಗಳ ಮಧ್ಯೆ ಉಡುಪ ಮೆರೆಯುವ ತೆರದಿ | ಉಡುಗಣಿಕ್ಷೇತ್ರದೊಳು ನಿಂದು ಮೆರೆದೆ || ಕಡುಮಮತೆಯಲಿ ನಿನ್ನ ಸಡಗರದಿ ಸೇವಿಪರ | ಎಡರುಗಳ ಪರಿಹರಿಸೊ ಗುರುರಾಘವೇಂದ್ರ4 ನರಹರಿಯ ಮೆಚ್ಚಿಸಿದೆ ಪ್ರಹ್ಲಾದನೆನಿಸುತಲೆ | ಸಿರಿಕೃಷ್ಣನೊಲಿಸಿದಿಯೊ ವ್ಯಾಸಮುನಿ || ಸಿರಿರಾಮಚಂದ್ರಪ್ರಿಯ ಗುರುರಾಘವೇಂದ್ರನೆ | ಕರುಣದಲಿ ತೋರೀಗ ಶ್ರೀಶಕೇಶವನ5
ರಾಘವೇಂದ್ರ ಹರಿ ವಿಠಲ | ಕಾಪಾಡೊ ಇವಳಾ ಪ ಭೋಗಿ ಶಯನನೆ ಹರಿಯೆ | ನಾಗಾರಿವಾಹಾ ಅ.ಪ. ಮಂತ್ರಮಂದಿರ ಧೊರೆಯ ಅಂತರಂಗದಿ ಭಜಿಪಸತತದಿ ವಿಜಯಾರ್ಯ | ಚಿಂತೆಯಲ್ಲಿಹಳಾ |ಅಯೆ ಸತ್ಸುಕೃತದಿಂ ಹರಿದಾಸ್ಯ ಕಾಂಕ್ಷಿಪಳಮಾತೆ ಕೈ ಪಿಡಿ ಹರಿಯೇ | ಸಂತರುದ್ಧರಣಾ 1 ಭಾವದಲಿ ತವ ಮಹಿಮೆ | ಸ್ತವನಗೈಯ್ಯುವ ಕಾರ್ಯದಿವಸ ದಿವಸದಿ ವೃದ್ಧಿ | ಭಾವವನೆ ಪೊಂದೀಕವನ ರೂಪದಿ ಪ್ರವಹ | ಭುವಿಯೊಳಗೆ ಹರಿವಂತೆಹವಣಿಸೋ ಶ್ರೀಹರಿಯೇ | ಪವನ ವಂದಿತನೆ 2 ಭವ ಭಂಗ | ಕಾರುಣ್ಯಪಾಂಗ 3 ಭವ ಶರಧಿ | ದಾಟಿಸೋ ಹರಿಯೇ 4 ಕೈವಲ್ಯಪ್ರದ ಪುರುಷ | ದೇವದೇವೇಶ ಹರಿಗೊವತ್ಸನದಿಗಾವು | ಧಾವಿಸುವ ತೆರದೀನೀವೊಲಿಯು ತಿವಳಿಗೆ | ಭಾವದಲಿ ಮೈದೋರೊಭಾವಜನಯ್ಯ ಗುರು | ಗೋವಿಂದ ವಿಠಲಾ 5
ರಾಘವೇಂದ್ರರ ಸ್ತೋತ್ರ ಬಂದರಾ ರಾಘವೇಂದ್ರರಾಯರು ಮಂತ್ರ ಮಂದಿರ ವೆಂಬೀ ಸ್ಥಳಕೆ ವಿಭವದಿ ಪ ಇಂದು ಭಜಕ ದ್ವಿಜ ವೃಂದಕೆ ಪರಮಾ ನಂದ ಗರಿಯಲು ಶ್ಯಂದನವೇರಿ ಅ.ಪ ಶ್ಯಂದನವೇರಿ ಧಣಂ ಧಣ ವಾದ್ಯದಲಿ ಪೌರಜನ ಸಂದಣಿಸಿತು ಆನಂದದಿ ನೋಡುತಲಿ ಪ್ರಾರ್ಥಿಪರು ಮುಗಿಯುತಲಿಕೈಯಾ ಕವಿಗೇಯಾ ಶುಭಕಾಯಾ ಸುಧೀಂದ್ರರ ತನಯಾ ಗುರುವರಮಧ್ವ ಮು- ನೀಂದ್ರರಾ ಸುಮತಾಂಬುಧಿ ಚಂದಿರ ಅತಿ ಸುಂದರ ವೃಂದಾವನದಲಿ ನಿಂದಿಹರೆಂದರಿದೊಂದಿಪರಿಗೆ ಭವ ಬಂಧವ ಬಿಡಿಸಲು 1 ಸಡಗರದಲಿ ಬಿಳಿಗೊಡೆ ಚಾಮರ ವ್ಯಜನಾದಿಗಳನು ಪಿಡಿದು ಸೇವಿಸುವ ಎಡಬಲದಲಿ ಸುಜನಾ ಸಚ್ಛಾಸ್ತ್ರ ವೇದ ಪುರಾಣ ಪ್ರವಚನ ಪಾವನ್ನ ಗುರುಗಳ ಗುಣಸ್ತವನ ಮಾಡುವಾ ವರಗಳ ಬೇಡುವಾ ಕುಣಿಕುಣಿದಾಡುವಾ ಪಾಡುವಾ ಪೊಡವಿ ನಿರ್ಜರರ ಕಡು ವೈಭವದಲಿ 2 ಮಣಿ ಮುಕುಟ ದಿಂದ ದಿ- ಗ್ವಲಯ ಬೆಳಗುತಿಹ ಚಲುವ ಮುಖದ ಮಾಟಾ ಗಳದಲ್ಲಿ ಮೌಕ್ತಿಕದ ಹಾರ ಕೇಯೂರ ನೂಪರ ಸ- ಪೊಳೆಯುತ ಭಜಕರ ಕ- ಲುಷಾಭ್ರಕೆ ಮಾರುvರೆÀನಿಸುತ ಇಳೆಯೊಳು ಪಂಡಿತ ಯಳೆಮೇಲಾರ್ಯಗೊಲಿದು ಭಕುತ ವತ್ಸಲರೆಂದೆ ನಿಸುತ3 ಮಂಗಳ ತುಂಗ ತರಂಗಿಣಿ ತೀರದಲಿ ಭಕುತ ಜ- ನಂಗಳಿಗೆ ನಿಖಿಲಾರ್ಧಂಗಳ ಸಲಿಸುತಲೀ ಪಾಲಿಸುವ ದೇವ ಸ್ವಭಾವ ಶರಣ ಸಂಜೀವ ಕರದಲ್ಲಿಗೆ ಬರುವ ಎನ್ನುತ ತುತಿಪರು ದೃಗ್ಭಾಷ್ಪವ ಸುರಿಸುತ ಮೈಮರೆಯುತ ಬಲು ನಿರ್ಮಲ ಅಂತರಂಗದಿತವ ಪದಂಗಳ ಸ್ಮರಿಪರ ಸಂಘಕೆ ಸತತ ಸುಮಂಗಳವೀಯಲು 4 ಪುರದರಸನು ತನ್ನ ಸಿರಿಪರಿವಾರದಲಿ ಚರಿಸುತ ಬರುತ ಕಾಣುತಲೆ ಗುರುವರ ಚರಣದಲಿ ಕಾಣಕೆಯನ್ನಿತ್ತು ಶಿರಬಾಗಿ ಚನ್ನಾಗಿ ಆರುತಿಯ ಬೆಳಗಿ ಬರುತಿರೆ ರಥಸಾಗಿ ತೋರುವಾ ನೋಳ್ಪರ ನಯನಕ್ಕೆ ಪರಮೋತ್ಸವಾ ಶರಣರ ವಾಂಛಿüತಗಳ ಗರಿಯುವಾ ಪೊರೆಯುವ ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿಯ' ನೊಲಿಸಿರುವ ಗುರು ಪ್ರಹ್ಲಾದರು 5
ರಾಜನೆಂಬೋನಾಮವು ನೆಲಿಗೆ | ತಿಹುದು ಜಗದೊಳಗೆ 1 ಸಾಧನದಳ ಚತುರಂಗಗಳು | ಊದುವ ಬೋಧದ ಕಹಳೆಗಳು 2 ಗಜ ಸೆರೆ ವಿಡಿಯುತ ದುರಿತವ ತರಿದಾ 3 ಕೊನರುವ ದೇಹಾಭಿಮಾನಿಗಳ | ವನನಿಜ ಸ್ಥಳವನು ಬಿಡಿಸಿದನು 4 ಮೆರೆವ ಸಿಂಹಾಸನವೇರಿದನು | ಹರುಷದಿ ಕೀರ್ತಿಯ ಪಾಡಿದನು 5
ರಾಜೀವನಯನ ಸೀತಾರಾಮ ಪಾಹಿ ಮುದಂದೇಹಿ ಪ ರಾಜಾಧಿರಾಜ ಕಲ್ಪಭೂಜಾ ಸೌಜನ್ಯ ನಿಲಯ ರಾಮ ಅ.ಪ ಸಾಕೇತಾಧಿಪರಾಮ, ಲಂಕಾನತ ದನುಜ ಭೀಮ ಕಾಕಾಸುರ ನಮಿತ ನಾಮ, ಶ್ರೀಕರ ಕೀರ್ತಿಕಾಮ ಏಕಾಂತ ರಘುನಾಮ, ಏಕಾಂಬರ ಶಿವಪ್ರೇಮ ಸಾಕೇಶ್ವರ ಸಾರ್ವಭೌಮ, ಶ್ರೀಮಾಂಗಿರಿ ರಂಗಧಾಮ 1